ಒಟ್ಟು 1347 ಕಡೆಗಳಲ್ಲಿ , 97 ದಾಸರು , 1063 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚೆಲ್ವೇರಾರತಿಯ ತಂದೆತ್ತಿರೆ ಪ ಹುಟ್ಟಿದಳಾ ಕ್ಷೀರಸಾಗರದಲಿ ಸ- ಮಸ್ತ ಜನರಿಗೆ ಸುಖವ ನೀಡುತ ಶ್ರೇಷ್ಠರೊಳಗೆ ಜೇಷ್ಠಾದೇವಿ ಶ್ರೀನಾಥನ ಪಟ್ಟದರಸಿ ಮುದ್ದು ಮಾಲಕ್ಷ್ಮಿಗೆ 1 ಮುದ್ದು ಮೋರೆಗೆ ತಕ್ಕ ಮುಖುರ್ಯ ಬುಲಾಕ- ನಿಟ್ಟ ್ವಜ್ರದ ಬುಗುಡಿ ವೈಯಾರದಿಂದ ತಿದ್ದಿ ಬೈತಲು ಜಡೆಬಂಗಾರ ರಾಗಟೆ ಪದ್ಮನಾಭನ ರಾಣಿ ಮಾಲಕ್ಷ್ಮಿಗೆ 2 ವಾಲೆ ಸರಪಳಿ ಚಳತುಂಬು ಚಿನ್ನದ ಸರಿಗೆ ಮೋಹನ್ನಮಾಲೆ ಕಣ್ಣಕಾಡಿಗೆ ಹಚ್ಚಿ ಕಸ್ತೂರಿ ಕುಂಕುಮ ಚೆನ್ನಾರ ಚೆಲುವೆ ಶ್ರೀ ಮಾಲಕ್ಷ್ಮಿಗೆ 3 ಸೆಳೆನಡುವಿಗೆ ತಕ್ಕ ಬಿಳಿಯ ಪೀತಾಂಬರ ನಳಿತೋಳಿನಲಿ ನಾಗಮುರಿಗೆ ವಂಕಿ ಕಮಲ ದ್ವಾರ್ಯ ಹರಡಿ ಕಂಕಣನಿಟ್ಟು ಕಳೆಯ ಸುರಿವ ಚೆಲ್ವೆ ಮಾಲಕ್ಷ್ಮಿಗೆ 4 ಗರುಡವಾಹನನ್ಹೆಗಲಿಳಿದು ಶ್ರೀನಾಥನ ಹರಡಿ ಕಂಕಣ ಕರವ್ಹಿಡಿದುಕೊಂಡು ಮುಡಿದ ಮಲ್ಲಿಗೆ ಪಾರಿಜಾತಗಳುದುರುತ ನಡೆದು ಬರುವೊ ಮುದ್ದು ಮಾಲಕ್ಷ್ಮಿಗೆ 5 ಪಾದದಿ ರುಳಿ ಗೆಜ್ಜೆ ನಾದ ಝೇಂಕರಿಸುತ ಆದರದಿಂದೆನ್ನ ಮನೆಗೆ ಬಂದು ಶ್ರೀಧರ ಭೀಮೇಶಕೃಷ್ಣನೆದೆಯ ಮ್ಯಾಲ್ವಿ- ನೋದದಿ ಕುಳಿತಿದ್ದ ಮಾಲಕ್ಷ್ಮಿಗೆ 6
--------------
ಹರಪನಹಳ್ಳಿಭೀಮವ್ವ
ಚ್ಚಂದಿರವದನೆ ಶಾರದೆ ಪ ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ ಕುಂದು ನೋಡದೆ ಶ್ರುತಿವಂದೆ ಜ್ಞಾನವ ನೀಡೆ ಅ.ಪ. ಸಿತಾಬ್ಜಾಸನೆ ಸುಖದಾಯಕಿ ಸುರ ನಾಥಾರಾಧಿತೆ ವಿಶ್ವನಾಯಕೀ ವೀತದುರಿತೆ ಶಿವ ಮಾತೆ ಸದ್ಗುಣಮಣಿ ವಾಗ್ದೇವಿ ಮಾತೆ 1 ಕೋಕಿಲವಾಣಿ ಕವಿಸೇವಿತೆ ಎನ್ನ ವಾಕು ಲಾಲಿಸೆ ಮನಿವಂದಿತೆ ತೋಕನೆಂದು ಸುವಿವೇಕ ಬುದ್ಧಿಯನಿತ್ತು ವಾಕು ಮನ್ನಿಸು ತಾಯೆ 2 ಪಾತಕಿಗಳೊಡನಾಡಿ ನಾ ನಿನ್ನ ಪೋತಾಬ್ಜಪದ ಭಜಿಸದ್ಹೋದೆ ನಾ ಪಾತಕವೆಣಿಸದೆ ಸೀತಾರಮಣ ಜಗ ನ್ನಾಥವಿಠ್ಠಲನಘ್ರಿ ಗೀತಾಮೃತವನುಣಿಸು 3
--------------
ಜಗನ್ನಾಥದಾಸರು
ಛಂದದಿಂದ ಬಂದು ಸಲಹೊ ಫಂಡರೀಶ ನಿನ್ನ ನಂಬಿದೆ ಪ ತಂದೆ ನೀನೆ ಸರ್ವರಿಗೆ ಅನಿಮಿತ್ತ ಬಂಧುವಲ್ಲವೆ ಅ.ಪ ದೋಷಿನಾನು ಮೂಢನಾನು ವಲಿಯೆನೆಂದು ಏಕೆ ಹೇಳು ದೋಷದೂರ ಜ್ಞಾನರೂಪ ಬಿಂಬ ನಿನ್ನ ದಾಸನಲ್ಲವೆ 1 ಎಲ್ಲಾ ಸತ್ತಾದಾತ ನೀನು ಇಲ್ಲ ನಿನಗೆ ಭೇದವೇನು ನಲ್ಲ ಶರಣು ಎಂದಮೇಲೆ ವಲ್ಲೆ ಎನ್ನೆ ಬಿರುದು ಪೋಗದೆ 2 ಕಾಕುಮಾಡಿ ಎನ್ನ ಜಗದಿ ನೂಕಿ ಬಿಟ್ಟು ಭಂಟರಲ್ಲಿ ಸಾಕದೇನೆ ಬಿಟ್ಟರೀಗ ಲೋಕನಗದೆ ಭಕ್ತರಾಣೆ 3 ಮುಂದುಮಾಡಿ ಹಿಂದೆ ಎನ್ನ ಹಿಂದು ಮಾಡಿ ಈಗ ನಗುವೆ ಇಂದಿರೇಶ ನಿನ್ನ ನ್ಯಾಯ ಮಂದನಾನು ಅರಿಯೆ ಶರಣು 4 ಲಕುಮಿ ಮೊದಲು ಎಲ್ಲಾ ಜಗಕೆ ಶಕುತ ನೀನೆ ಒಬ್ಬ ಆಶ್ರಯ ನೀಡಿಕಾಯೋ ಬೇಗನೆ 5
--------------
ಕೃಷ್ಣವಿಠಲದಾಸರು
ಛಲಾವ್ಯಾಕೊ ನಿನಗೆ ಎನ್ನಲಿ ಪ ಛಲಾವ್ಯಾಕೊ ಕೋಲಾಚಲವೇಂಕಟ ಫಲಾ ನೀಡಿ ನೀ ಭಲಾನೆನಿಸೊ ದೇವಾ ಅ.ಪ ಧರಾತಳದಿ ಭೂಧರಾಗ್ರಮಂದಿರ ಪರಾವರೇಶನೆ ದರಾರಿಕರಶೂರ 1 ರಮಾವರನೆ ತವ ಸಮಾನರಾಗಿಹ ಸುಮಾನಸಾರ್ಕರ ಕ್ಷಮಾತಳದಿ ಕಾಣೆ 2 ಕುಲಾಲಕೃತ ಮೃತ್ ಕಲಾಪಧರಮಹಾ ಉಲಾಯುಗಾತ್ಮಜ ಬಲಾರಿಸುತಸುಖ 3 ಶತ್ರುಬವರದೊಳು ವೃತ್ರಾರಿತನಯನ ಮಿತ್ರಾನ ತೋರಿ ಪೊರೆದ್ಯೊ ಶತ್ರುಹನನದೇವ 4 ತಕ್ಷಣದಲಿ ಸಾಸಿರಾಕ್ಷ ತನಯನ ಪೊರೆದಿ 5 ಭರ್ಮಾನಸ್ತ್ರದ ನಿಜ ಮರ್ಮವರಿತು ನೀ ಧರ್ಮಾಪೌತ್ರನ ಕಾಯ್ದಿ ಸುಧರ್ಮನಾಮಕ ನಿನಗೆ 6 ದಶಾಸ್ಯ ಮುಖಮಹನಿಶಾಚರೇಶರ ದಶಾಕಳದ ಮಹಾ ದಶಾವತಾರನೆ 7 ವಟಾದ ಎಲೆಸಂಪುಟಾದಲೊರಗುಂ - ಗುಟಾವ ನುಂಬುವ ದಿಟಾ ವಿಶ್ವೋದರ 8 ದಾತಾ ಗುರುಜಗನ್ನಾಥ ವಿಠಲ ನಿಜ ದೂತಾಪಾಲಕನೆಂದು ಖ್ಯಾತಾನಾಗಿಹ ನಿನಗೆ 9
--------------
ಗುರುಜಗನ್ನಾಥದಾಸರು
ಛಳಿಸದಿರು ಚಂಡಿ ತನುವೆ ನೀನುಒಳಗಾಗದೊರಟುತನವೆ ತರವೆ ಪಗರ್ಭವಾಸವಗಳಿಸಿದೆ ಹಾಗೆ ನೀನರ್ಭಕತ್ವದಲಾಡಿದೆ ಬಿಡದೆನಿರ್ಭಯದಿ ನೀ ಬದುಕಿದೆ ಭೋಗದಲಿದುರ್ಭಗರ ದಾರಿಗೊಲಿದೆ ನಲಿದೆ 1ಕಾಮಾಂಧಕಾರಕೆಳೆದೆ ನನ್ನ ನಿಷ್ಕಾಮದಲಿ ನಿಲಿಲೀಸದೆ ಕಳದೆನೇಮಕ್ಕೆ ನೀನಲಸಿದೆ ಶೀತೋಷ್ಣಭೀಮಕ್ಕೆ ನೀ ಬೆದರಿದೆ ಬರಿದೆ 2ಕಾಲಗಳ ಬಹು ಕಳಸಿದೆ ವ್ಯರ್ಥದಲಿಶ್ರೀಲೋಲನನುಸರಿಸದೇ ಹೋದೆಮೂಲವನೆವರೆ ಮಾಡಿದೆ ದೋಷಗಳಕೀಲುಗಳಿಗಳಿಕಾಲ್ನೀಡಿದೆ ಜಡಿದೆ 3ಮನವೀಗ ಮಾಡಿತಿನಿತಾ ನಾನಿದಕೆಮನೆ ಮಾತ್ರವಾಗೆ ಮಾತನಿಡುತಾತನುವಿನಲಿ ತಪ್ಪಿಡಿಯುತಾ ಯಾಕೆ ನೀನೆನುವೆಯನೆ ನೀನೆ ಚಿತ್ತವ್ರಾತಾ 4ಮನ ನೀನೆ ನೀನೆ ಮನವೂ ಕ್ರಿಯೆಯಮನ ಮಾಡೆ ಮೂಡ್ದೆತನುವೂ ಘನವೂನೆನೆಯಲೆರಡಿಲ್ಲ ನೀವು ಏಕತ್ವವೆನುತೆಂದೆನಿರೆ ಬಂಧವೂ ದಿಟವೂ 5ಕಾರಣವೆ ಮನವಾದರೆ ಅದರೊಡನೆಹೋರುವೆನು ನಾನು ಹೆದರೆನದರೆತೋರೆ ನೀ ಮುಂದೆ ಬೇರೆ ಬಂಧನವೂಬೀರಿತಿದು ನೀ ಕಯ್ಯಾರೆ ತಾರೆ 6ನೀ ಬಾರದಿರುವೆಯಲ್ಲ ುೀಮಾತನಾ ಬಾಯಲೆನ್ನೆನಲ್ಲಾ ಸೊಲ್ಲಾಆ ಬಗೆಯ ಮೂಡಿತಿಲ್ಲ ಇದಿರಾಗಿನೀ ಬಂದು ನಿಲಲು ಸಲ್ಲಾ ಹೊಲ್ಲಾ 7ನನಗುಂಟು ಮನಸಿಗುಂಟು ವ್ಯವಹಾರನಿನಗಾಗಬಾರದಂಟೂ ನಂಟುಜನಿಸಿಬರೆ ಬಂತುಗಂಟು ಆವರಣವೆನಗಾುತು ಪದರವೆಂಟೂ ಬಂಟೂ 8ಅನುಮಾನವಿಲ್ಲವಿಸಿದಕೆ ಪ್ರತ್ಯಕ್ಷವನುಭವಿಸಿ ಪೇಳ್ದೆನದಕೆ ಅಳುಕೆಜಿನುಗದಿರು ಮುಂದೆ ಜೋಕೆ ಹರಿಯಂಘಿü್ರಯನುಸರಿಸದಂದವೇಕೆ ಬೇಕೆ 9ಹರಿಪಾದಪದ್ಮವನ್ನು ನಾನುಬೆರೆವೆ ನೀ ಬಳಲಿಕೆಯನೂ ುನ್ನೂತರಬೇಡ ತಥ್ಯವನ್ನು ಪಡೆವದಕೆಬರೆ ಮುಂದೆ ಬಹುಮಿತ್ರನೂ ನೀನು 10ಶರೀರವಿರೆ ಶ್ರಮವು ನಿನಗೆ ಜನ್ಮಗಳಧರಿಸುತ್ತ ದಣಿವು ನಿನಗೆ ಹೀಗೆಸರಿಯಾಯ್ತು ದುಃಖ ನಮಗೆ ಇದಕಂಡುಇರುವ ಬಗೆ ವಿಶ್ವದೊಳಗೆ ಹೇಗೆ 11ಅದರಿಂದ ನೀನು ನಾನು ಒಂದಾಗಿಹುದುಗಲಾದಿಯನೀಶನೂ ತಾನುಪದವಿಯನು ಪಾಲಿಸುವನು ಬಳಿಕಲಿನ್ನುದುಸುವಕಷ್ಟಗಳನೂ ಕೊಡನೂ 12ಬರುವದಾನಂದ ನಮಗೆ ತಿರುಪತಿಯವರದ ವೆಂಕಟರಮಣಗೆ ಎರಗೆಭರಿತಾತ್ಮಗಾವು ಹೊರಗೆ ಹೀಗೆ ನಾವಿರಲುಂಟು ದೇವನೊಳಗೆ ಸಲುಗೆ 13ಕಂ||ಛಂದಾನುವೃತ್ತಿ ಮೂರ್ಖರಿಗೆಂದಾಡಿದ ನುಡಿಯು ಸತ್ಯವಾುತೀ ದೇಹವುಮುಂದೊರದೆ ಪೇಳಲುತ್ತರನೀಂದೊಡಬಡಿಸುತ್ತ ಕೇಳಿಕೊಳುತಿಹದೊಲವಿಂ
--------------
ತಿಮ್ಮಪ್ಪದಾಸರು
ಛೀ ಹಳಿ ಥೂ ಖೋಡಿ ಪಾಪಿ ಮನವೆ, ನಿನ್ನ ಪ ಕುಹಕ ಬುದ್ಧಿಗಳೆಲ್ಲ ಬಿಡು ಕಂಡ್ಯ ಮನವೆಅ.ಪ ಬಣ್ಣದ ಬೀಸಣೆಗ್ಯಂತೆ ಹೆಣ್ಣು ತಿರುಗೋದ ಕಂಡು ಕಣ್ಣು ಸನ್ನೆಯಮಾಡಿ ಕೈ ಹೊನ್ನು ತೋರಿ ತಣ್ಣೀರು ಹೊಯಿದ ಹೊಸ ಸುಣ್ಣದಂತೆ ಕುದಿದು ನಿನ್ನ ಕಣ್ಣಿಗೆ ಮಣ್ಣು ಚೆಲ್ಲಿಕೊಂಬರೆ ಮನವೆ 1 ನೆರೆಹೊರೆ ಮನೆಗಳಲಿ ಪ್ರಸ್ಥವನ್ನು ಮಾಡಿದರೆ ಕರೆಯದೆಲೆ ಮೊದಲ್ಹೋಗಿ ಹಾಳು ಹರಟೆ ಬಡಿಗಂಟು ಸುದ್ದಿ ನೂರಾರು ಹೇಳಿ ಅವರ ಹಿರಿಯ ಮಗನಂತೆ ಉದರವ ಪೊರೆವೆ ಮನವೆ 2 ಉತ್ತಮಾನ್ನವ ನೀಡೆ ಮುಸುರೆ ಬಯಸುವಂತೆ ಚಿತ್ತದೊಲ್ಲಭನ ಸಂಗಡದಿ ನಲಿದು ಮತ್ತೆ ಉಪರತಿಗೆ ಪರಪುರುಷನ ಬಯಸುವ ತೊತ್ತು ಬುದ್ಧಿಯನೆಲ್ಲ ಬಿಡು ಕಂಡ್ಯ ಮನವೆ 3 ಪಗಡೆ ಚದುರಂಗ ಕವಡೆಯನಾಡÀ ಕರೆದರೆ ನಿಗುರುವುವು ಕರ್ಣಗಳು ಮೊಚ್ಚೆಯಂತೆ ಜಗದೀಶನ ದಿನದಿ ಜಾಗರಕೆ ಕರೆದರೆ ಮುಗಿಲ್ಹರಿದು ಬಿದ್ದಂತೆ ಧರೆಗಿಳಿವೆ ಮನವೆ 4 ವಾಸುದೇವನ ಪೂಜೆಯೊಮ್ಮೆ ಮಾಡೆಂದರೆ ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ ಆ ಸಮಯದೊಳಗೊಬ್ಬ ಕಾಸು ಕೊಟ್ಟೇನೆನಲು ದಾಸಿ ಮಗನಂತೆ ಬೆನ್ನಟ್ಟಿ ಪೋದೆ ಮನವೆ 5 ಕುಳ್ಳಿರುವ ಸ್ಥಳವೆಷ್ಟು ಕೂಳು ತಿಂಬುವುದೆಷ್ಟು ಉಳ್ಳನಕ ಕೀರ್ತಿಯಪಕೀರ್ತಿಯೆಷ್ಟು ಗುಳ್ಳೆಯಂದದ ದೇಹನೆಚ್ಚಿ ನೀ ಕೆಡಬೇಡ ಉಳ್ಳಿಪÀರೆ ಸುಲಿದರೆ ಹುರುಳಿಲ್ಲ ಮನವೆ 6 ಬಿಂದು ಮಾತ್ರವೊ ಸುಖವು ದು:ಖ ಪರ್ವತದಷ್ಟು ಸಂದೇಹವಿಲ್ಲವಿದು ಶಾಸ್ತ್ರಸಿದ್ಧ ಎಂದೆಂದು ಸಿರಿಯರಸ ವಿಜಯವಿಠ್ಠಲನಂಘ್ರಿ ಕುಂದದೆ ಹೃದಯದೊಳು ನೆನೆಕಂಡ್ಯ ಮನವೆ 7
--------------
ವಿಜಯದಾಸ
ಜಗಕೆ ಶಾಂತಿಯನೀವ ಜಗನ್ನಾಥನೇ | ನಿನ್ನ ಬಗೆಯರಿತ ಸುಜನರಿಗೆ ಕ್ಲೇಶವಿನ್ನುಂಟೇ ಪ. ನಾನಾ ಇಂದ್ರಿಯಗಳಿಗೆÀ ನೀನೇ ಪ್ರೇರಕನಾಗಿ ನಾನಾ ವಿಧ ಸುಖದುಃಖ ತಗಲಿಸುತ ಮನಕೇ ಜ್ಞಾನವಂತರ ಹೃದಯ ವಾಸನಾಗಿರುತಿರ್ದು ಮಾನಿತರ ಬಳಲಿಸುವ ಕಾರಣವದೇನೈ 1 ಭೂಸುರÀರ ಮನಕ್ಲೇಶ ನಾಶಗೈಸುತ ಸತತ ಪೋಷಿಸೆಲೊ ಸ್ವಾಮಿ ಸಂತೋಷವಿತ್ತು ನಾಶರಹಿತನೆ ಭಕ್ತರಾಶೆ ಪೂರೈಪ ಗುಣ ರಾಶಿ ನಿನ್ಹೊರತಿಲ್ಲ ಅಬುಜಜಾಂಡದೊಳೂ2 ಮನಕೆ ಶಾಂತಿಯ ನೀಡೋ ಮಾಧವನೆ ಮಮತೆಯಲಿ ಮನದ ಅಭಿಮಾನಿಗಂತರ್ಯಾಮಿ ಸ್ವಾಮಿ ಚಿನುಮಯನೆ ಗೋಪಾಲಕೃಷ್ಣವಿಠ್ಠಲ ಪ್ರೇಮಿ ಘನ ಗುರುಗಳಂತರ್ಯಾಮಿಯೆ ಮಧ್ವನಾಥಾ3
--------------
ಅಂಬಾಬಾಯಿ
ಜಗದ ಜೀವರನುದರದಲಿಟ್ಟು ಕರುಣಾಮೃತದಿ | ಬಗೆಬಗೆಲಿ ಸಲಹುಲೇಹ ತಾಯಿ ನೀನೇ | ಮಗುಳೆ ಮೂಲ ಪ್ರಕೃತಿಯಲಿ ಬೀಜವಿಟ್ಟು ಮೂ | ಜಗವ ಪುಟ್ಟಸುತಿಹ ತಂದೆ ನೀನೇ | ಮಿಗಿಲಾಗಿ ಬಂದ ದುರಿತಂಗಳ ನಿವಾರಿಸುವ | ಭಾಗವತರಿಗೆ ಅನಿಮಿತ್ತ ಬಂಧು ನೀನೇ 1 ಸುಗಮದಧಿ ದೈವತಾ ರೂಪದಲ್ಲಿ ಕರಣೇಂದ್ರಿ- ನಿಗಮಾಗ ಮಗಳಿಂದ ಸ್ತುತಿಸುತ ಸುಜ್ಞಾನ | ದುಗಮದಿರುವ ಗುರುರೂಪ ನೀನೇ | ಭಕುತಿಯಲಿ ವಿಧಿಮರುತ ಶಿವಗರುಡ ಫಣಿಪೇಂದ್ರಾ | ದಿಗಳು ಪೂಜಿಪ ಕುಲದೈವ ನೀನೇ 2 ಹಲವು ಜನುಮದಿ ಸಂಗಡಿಗನಾಗಿ ಸಮತೆಯಲಿ | ಸಲಿಸಿ ಬಯಕೆಯ ಕಾವ ಗೆಳೆಯ ನೀನೇ | ಒಲಿದನ್ನ ವಸ್ತ್ರ ಸಂಪದ ಸಕಲವರ ಪುಣ್ಯ | ಫಲದಂತೆ ನೀಡುತಿಹ ಸ್ವಾಮಿನೀನೇ | ಜಲಜಾಕ್ಷ ಅದುಕಾರಣ ಎನಗೆ ಸಕಲವು ನೀನೇ | ಸಲಹು ಭಕುತಿಯನಿತ್ತು ಗುರು ಮಹಿಪತಿ ಪ್ರಭು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಗದಯ್ಯಾ ಜಗದಯ್ಯಾ ಜಗತ್ರಾಣ ಜಗಜೀವನ ಪಾವನ ಪ ಸಾವು ಹುಟ್ಟುಯೆಂಬ ಹೇಯಕುಣಿಯೊಳು ಬಿದ್ದು ನೋಯಲಾರದೆ ಬಲು ಬಾಯಬಿಡುತ ನಿಮ್ಮ ಪಾವನ ಪಾದಕ್ಕೆ ಮರೆಯಬಿದ್ದೆನಯ್ಯ ಸೇವಕಜನರಯ್ಯಾ ಕಾಯೋ ಎನ್ನಾರ್ಯ 1 ಪರಿಭವಶರಧೆಂಬ ಉರಿವಕಿಚ್ಚಿನೊಳು ಪರಿಪರಿಮರುಗುತ ಕರುಣಾಂಬುಧಿ ನಿನ್ನ ಅರಿವಿಟ್ಟರಿದೆ ವರ ಪರಮ ಬಿರುದುಗಳು ಶರಣಾಗತರ ಪ್ರಿಯಕರ ಪಿಡಿದೆತ್ತಯ್ಯ 2 ವಿಷಯಲಂಪಟವೆಂಬ ವ್ಯಸನಕೂಪದಿ ಬಿದ್ದು ಬಸವಳಿದನುಪಮ ದೆಸೆಗೆಟ್ಟೆ ಕುಸುಮಾಕ್ಷ ಶಿಶುವಿನ ತವಪಾದ ಅಸಮದಾಸಜನ ರೊಶದಿ ಇಟ್ಟು ಪೊರೆ ಕುಶಲಮತಿಯ ನೀಡಿ3 ಭವಭವದಲಿ ಬೇಡುವೆನಭವನೆ ಬಾಗಿ ದಯಪಾಲಿಸಿ ಸ್ಥಿರಜ್ಞಾನಸುಪದವ ಭವಗುಣಹಿಂಗಿಸಿ ದಿವನಿಶೆನ್ನುವುದಕೆ ಸವಿನಾಮವಿತ್ತು ಕಾಯೋ ಭವರೋಗವೈದ್ಯನೆ 4 ಮೂರರಿಂ ಗೆಲುವಿತ್ತು ಮೂರರಿಂದಾಂಟಿಸಿ ಮೂರರ ಮೋಹನಿವಾರಿಸು ದೇವ ಮೂರು ನಿನಗರ್ಪಿಸಿ ಸಾರಿಬೇಡುವೆ ನೀಡ ಪಾರಮೋಕ್ಷಪದ ಧೀರ ಶ್ರೀರಾಮಯ್ಯ 5
--------------
ರಾಮದಾಸರು
ಜಗದಾಖ್ಯ ವೃಕ್ಷ ಚಿಂತಿಪುದು ಬುಧರು ಪ ಭಗವಂತನೆಂಬ ಆಗಸದಲಿ ಪಸರಿಸಿದಅ.ಪ. ಚತುರಾಸ್ಯ ವಾಣಿ ಈರ್ವರು ಬೀಜ ಚಿತ್ಪ್ರ ಕೃತಿ ಪೃಥವಿ ಕರ್ಮವು ಬೇರು ತ್ರಿಗುಣತ್ವ - ವು ಕ್ಷಿತಿ ಜಲಾನಲ ವಾಯು ಗಗನ ಶಾಖೆಗಳಿಂದಕೆ ಶತಕಿರಣ ಉಪಕೊಂಬೆಯೆನಿಸಿ ಕೊಂಬವು ಇದಕೆ 1 ಅಹಂಕಾರ ಬಲದಿಂದ ಅಭಿವೃದ್ಧಿ ಐದುವುದು ಕುಸುಮ ತನ್ಮಾತ್ರ ರಸದಿ ಸಹಿತವಾರ ಪ್ರವೃತ್ತಿ ನಿವೃತ್ತಿ ಕರ್ಮಫಲ ಅಹರಹರ್ ಭುಂಜಿಪವು ತನ್ನಾಮ ಜೀವಖಗ 2 ನಾನು ನನ್ನದು ಎಂಬ ನೀಡ ದ್ವಯಗಳಿದಕೆ ಹೀನ ವಿದ್ಯಾದಿ ಪಂಚಕವೆ ಸರ್ಪಗಳಲ್ಲಿ ಶ್ರೀನಿಧಿ ಜಗನ್ನಾಥವಿಠಲ ಸಂರಕ್ಷಕನು 3
--------------
ಜಗನ್ನಾಥದಾಸರು
ಜಗದೊಳಗ | ಸಾಧುರ ಮಹಿಮೆಯ ನೋಡಿ | ಸಾದರದಿಂದಲಿದೇ ಸಾಧನವೇ ಮಾಡಿ ಪ ಸಾಧುರ ನೋಡಿ | ಬಾರದ ಬಯಸುವರಲ್ಲಾ | ತಾನಾಗಿ ಬಂದ | ದಾರಿಯ ತ್ಯಜಿಸಲಿಕ್ಕಿಲ್ಲಾ ಬರುದೆ ಕಂಡಾ | ದುರಾಶೆ ಸೇರುವರಲ್ಲೆ | ದೊರಕಿದನಿತೆ ಲಾಭ | ಸಂತುಷ್ಟರಾಗಿಹರೆಲ್ಲಾ 1 ಸಾಧುರ ನೋಡಿ | ಬ್ರಹ್ಮಭಾವನೆ ಸಮತಾಳಿ | ಸಕಳಿಲ್ಲಿ | ಹಮ್ಮಿನ ಮೊಳಿಕೆಯ ಕೇಳಿ | ಸಿದ್ಧಾಂತದಿಂದ ತಮ್ಮನು ಭವದಲಿ ಬಾಳಿ | ಮುಮ್ಮುಳಿ | ಬಿಡಿಸುವರೊಂದೊಂದೇ ನುಡಿಹೇಳಿ 2 ಸಾಧುರ ನೋಡಿ | ಭಕ್ತಿಯ ಆಶ್ರಯ ಮಾಡೀ | ಬಂದವರಿಗೆ | ಮುಕ್ತಿಯ ಅನ್ನ ಸತ್ರ ನೀಡೀ | ಸದ್ಭೋಧದ | ಯುಕ್ತಿಯಾನಂದದೊಳಗಾಡೀ | ಉಕ್ತವಾದ ಗುರು ಮಹಿಪತಿಸ್ವಾಮಿ ಕೂಡೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಗನ್ನಾಥದಾಸರ ಸ್ತೋತ್ರ ಅಂಬುಜಾಕ್ಷಿ ಸ್ತಂಭದಿಹನ್ಯಾರೇ - ಸಾರೇ ಪ ನಂಬಿ ಭಜಿಸುವ ಭಕುತರ ಮನದಹಂಬಲ ನೀಡುವರೆ - ನೀರೇ ಅ.ಪ ಸುರರೊಡೆಯನೋಲ್ ಪರಿಪರಿಯಲೈ- ಶ್ವರ್ಯದಿಂ ರಾಜಿಸುವರ್ಯಾರೇಹರಿಕಥಾಮೃತ ಗ್ರಂಥ ವಿರಚಿಸಿಧರಣಿ ಸುರರುದ್ಧರಿಸಿದವರೆ 1 ಫುಲ್ಲಲೋಚನೆ ಬಲ್ಲೆಯಾ ಇವ -ರಿಲ್ಲಿರುವ ಕಾರಣವಿದೇನೆಫುಲ್ಲನಾಭನ ಪುಡುಕುತಲೀಪ್ರಹ್ಲಾದನನುಜ ಸಹ್ಲಾದರಿವರೆ 2 ಜಲಜ ತುಳಸಿಮಣಿ ಸುಮಾಲಿಕೆಗಳದಿ ಧರಿಸಿಹನ್ಯಾರೆ - ನೀರೇಕಲಿಯುಗದಿ ಕಮಲಾಪತಿ ವಿ- ಠಲನ ಒಲಿಸಿದಿಳೆಯೊಳಗೆ ಮೆರೆವರೆ 3
--------------
ಕಮಲಪತಿವಿಠ್ಠಲರು
ಜಂಜಾಟ ತೊಲಗಿಸೈ ದುಷ್ಟಸಂಸಾರದ ಪ ಜಂಜಾಟ ತೊಲಗಿಸೈ ಕಂಜನಾಭನೆ ಕರಿರಾಜವರದ ಹರಿ ಅ.ಪ ಚಲಿಸುವ ಎನ್ನ ಮನದ್ಹಲುಬಾಟ ಕಡೆಹಾಯ್ಸಿ ನಿಲಿಸು ತವಚರಣದಿ ಚಲಿಸದಂತನುದಿನ 1 ಐಹಿಕಸುಖ ಮೋಹಿಸಿ ಬಹುಭ್ರಾಂತಿಯಿಂ ಬಳಲು ತಿಹ್ಯ ಎನ್ನ ಚಿತ್ತಕ್ಕೆ ಸಹನಶೀಲತೆ ನೀಡಿ2 ನೀನೆಗತಿ ಎನಗಿನ್ನು ನಾನಾದೈವನರಿಯೆ ಜ್ಞಾನದಿಂ ಪಾಲಿಸೆನ್ನ ಪ್ರಾಣಪತಿ ಶ್ರೀರಾಮ 3
--------------
ರಾಮದಾಸರು
ಜಯ ಕಮಲಾಲಯ ರಮಣ ಜಯಪಾದಾಶ್ರಿತಭರಣ ಜಯಪೂರ್ಣಾಮೃತ ಕರುಣ ಜಯರತ್ನಾಭರಣ ಪ. ನಳಿನನಾಭನು ಪದ್ಮಲಲನೆಯರೊಡಗೂಡಿ ನಲಿವ ಕಾಲದೊಳೊಂದ ನುಡಿದ ಗೋವಿಂದ ಕಲಿಯೊಳಗವತಾರಗೊಳೆನೆಂದ ಮೊದಲಾಗಿ ಚೆಲುವೆ ದಾಸರಿಗೆನ್ನ ನೆಲೆ ತೋರ್ಪದೆಂದು 1 ಇಂದಿರೆ ತೋಷವ ತಾಳಿ ಮಂದಹಾಸದಿ ಪೇಳ್ದಳೊಂದುಪಾಯವನು ಹಿಂದೆ ಲಂಕಾಪುರದಿ ನೊಂದ ವೇದಾವತಿಯ ತಂದು ಲಗ್ನವ ಗಯ್ಯಲೆಂದು ಪೋಗುವುದು 2 ಹೀಗಾದರವತಾರವಾಗದ ಮರ್ಮವು ಸತ್ಯ ಸಾಗುವುದಖಿಳಾರ್ಥ ಭೋಗವ ನೀಡುವುದು ಈಗ ಮುನಿವ ನೆವದಿ ಸಾಗಿ ಕೊಲ್ಲಾಪುರದಿ ನಾಗಶಯನನೆ ನಿನ್ನ ನೆಲೆಯ ನಂಬಿರುವೆ 3 ವಿಕಸಿತ ಪದ್ಮಾನನೆಯ ಯುಕುತಿಯ ಮಾತಿಗೆ ಮೆಚ್ಚಿ ಸಕಲಾವತಾರ ಸಂಭೃತ ಶಕ್ತಿ ಹೆಚ್ಚಿ ಭಕುತ ವತ್ಸಲ ಭೂವರಾಹ ಮೂರ್ತಿಯ ಕಂಡು ಬಕುಳ ದೇವಿಯ ಸಹಾಯವನೆ ಕೈಗೊಂಡು 4 ರಮಾದೇವಿಯ ಕರಸಿ ಬ್ರಹ್ಮಾದಿಗಳ ಬೆರಸಿ ಬ್ರಹ್ಮ ಘೋಷವ ಬೆಳೆಸಿ ಬಹು ಸಂತೋಷಗೊಳಿಸಿ ಅಮರ ಸಭೆಯಲಿ ಭರ್ಮಪೀಠದಿ ಕುಳಿತ ನಿರ್ಮಲಾತ್ಮನ ನೋಡಿ ನಗುತೆಂದಳೊಧುವು 5 ಶುದ್ಧ ಪೂರ್ಣಾನಂದ ಶುಭಗುಣ ಗಣ ಸಾಂದ್ರ ಮುದ್ದು ಮುಖಾಂಬುಜವ ತೋರೊ ಗೋವಿಂದ ಮುದ್ದೆ ಕಸ್ತೂರಿ ಗಂಧಾ ಮೃಗಮದಾದಿಗಳಿಂದ ಮರ್ದಿಸೀದರಶಿನವ ಕೊಳ್ಳೊ ಮುಕುಂದ 6 ಹೂವ ತರುವೆನೆಂದು ಭಾಮೆಯರೊಡಗೊಂಡು ನಾವಂದು ವನದಲ್ಲಿ ನಿಂತಿರುವಲ್ಲಿ ಕಾವಿದಟ್ಟಿಯನುಟ್ಟು ಕುದುರೆ ಮೇಲಳವಟ್ಟು ಕೋವಿದ ಬಂದ್ಯಲ್ಲಿ ಕೋಪವ್ಯಾಕಿಲ್ಲಿ 7 ಮಾನಸವಾಗ ವಿಷಯದ ಮಾತುಗಳಾಡಿದ ಬಗೆಯ ನೀನಿಂದ ಮರೆತೆಯಾ ನಿನ್ನ ಸಂಸ್ಥಿತಿಯ ನಾನಾ ಚಿತ್ರದ ಗತಿಯ ನಿಜ ತುರಂಗದ ಗತಿಯ ಹೀನವಾದರೆ ಹೀಗೆ ತಾಳುವರೆ ಖತಿಯ 8 ಹಳತಾದದೊಂದಶ್ವ ಕಳದ ಚಿಂತೆಯ ತ್ಯಜಿಸು ಪೊಳೆವ ಸಾಸಿರ ಸಂಖ್ಯಗಳಲಿ ಕಣ್ಣಿರಿಸು ಬಳಲಿಸಿದವಳೆಂಬೊ ಛಲವತಾರದೆ ಮನಕೆ ನಲಿನಾಕ್ಷ ಮುಖವೆತ್ತಿ ತೋರೊ ಮಜ್ಜನಕೆ 9 ಹದಿನಾರು ಸಾವಿರ ಚದುರೆಯರನು ರಮಿಸಿ ಮೂರ್ತಿ ಸಾಕೆನಗೆ ಮದನಜನಕ ನಿನ್ನ ಮಹಾತ್ಮ್ಯಯನು ಬಲ್ಲೆ ಪದ ಪದ ಪಾಲಿಸಿದರರಸಿನ ಹಚ್ಚುವೆನು 10 ಕರಿವರ್ಣ ಸಂಕೋಚ ತರದಿರೊ ಮನದಲ್ಲಿ ಕರಿಯಾದ ಕಸ್ತೂರಿ ಪರಿಮಳವಿರದೆ ಸರಸಿಜಾತನ ಶಿರದ ಮೇಲಿರಿಸಿರುವ ಕರಕಂಜವನು ತೋರಲರಿಸಿನ ಹಚ್ಚುವೆನು 11 ಹಿಂಡು ಕೂಡಿದ ದೇವ ಮಂಡಲದೊಳಗಿಂಥ ಪುಂಡು ಮಾತುಗಳೆಂಬ ದಿಂಡೆಯಾತನವು ಗಂಡರಿದಿರು ಚಿಕ್ಕ ಹೆಂಡಿರಾಡುವ ಪರಿಯು ಪುಂಡರೀಕಾಕ್ಷ ಪಾಲಿಸು ತಪ್ಪಿದರೆಯು12 ಈ ನಿಂದಾಸ್ತುತಿಗಳನು ಧ್ಯಾನಿಸಿ ವೆಂಕಟವರನು ಮಾನಿನಿ ಪದ್ಮಾವತಿಗೆ ಮುಖವ ತೋರಿದನು ಸಾನುರಾಗದಿ ಶ್ರೀಭೂಮಾನಿನಿಯರೊಡಗೂಡಿ ತಾನಾಗಿ ದಯಮಾಡಿಲ್ಲಿಗೆ ಬಂದ ನೋಡಿ 13
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಜಯ ಗುರುನಾಥ ದಯ ಗುಣದಲಿ ಅಖಂಡಿತ ಧ್ರುವ ಅನುಗ್ರಹದಲಿ ಸಮರ್ಥ ಜನವನದೋರುವೆ ಪರಮಾರ್ಥ ನೀನೆ ಸಕಲಾರ್ಥ ಅಣು ರೇಣುಕ ಸುಹಿತಾರ್ಥ 1 ಬಡವರಿಗಾಧಾರಿ ನೀಡುವುದರಲಿ ಘನ ಉದಾರಿ ಕುಡುವೆ ನಿಜದೋರಿ ಕಡೆಗಾಣಿಸುವೆ ಸಹಕಾರಿ 2 ಪಿಡಿದವರ ಕೈಯ ಬಿಡ ಎಂದೆಂದಿಗೆ ನಿಶ್ಚಯ ಒಡೆಯನಹುದಯ್ಯ ಮೂಢ ಮಹಿಪತಿ ಮಹದಾಶ್ರಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು