ಒಟ್ಟು 16362 ಕಡೆಗಳಲ್ಲಿ , 134 ದಾಸರು , 7361 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡು ನಿನ್ನೊಳು ನೀ ನೋಡು | ಸಾಕು ಸಾಕು ಈ ಲೋಕದ ನಡವಳಿ | ಯಾಕಬೇಕು ಪಿನಾಕಿಯ ಭಜಿಸೋ ಪ ಅಗಣಿತ ಸಂಪದ ಕೈಗೂಡುವದೋ ಅದ | ಬೇಡದೆ ಬೇಗನೆ 1 ಘಾಸಿ ಕ್ಲೇಶ ಬಡುವಿ ಜಗದೀಶನು ಒಲಿವನೆ ? 2 ಹಿಂದೆ ಜನ್ಮ ನೊಂದೆ ಸದ್ಗತಿ ಪಡೆಯದೆ | ಮುಂದೆ ಸಾಧಿಸು ಶಿವ ತತ್ತ್ವವ ಒಂದೇ | ತಂದೆ ಸದ್ಗುರು ಭವತಾರಕನಂಘ್ರಿಯ |ಹೊಂದಿ ನಿಜಾನಂದ ಬೋಧದಲಿರು ನೀ3
--------------
ಭಾವತರಕರು
ನೋಡು ನೋಡಮ್ಮ ಭಾರತಿದೇವಿ ಪ ನೋಡಿ ನೋಡಮ್ಮ ಜೋಡುಕರಗಳ ಜೋಡಿಸಿ ಎದುರಿಲಿ ಮೂಢನು ನಿಂತಿಹೆಅ.ಪ. ಕಾಳಿ ದ್ರೌಪದಿ ನೀಲಲೋಹಿತೆಬಾಲೇ ಮಂಗಳೇ ಶೀಲೆ ಸುಂದರಿ 1 ಇಂದ್ರಸತಿ ಮುಖ ಸುಂದರಿಯರುಬಂದು ಸೇವಿಸೆ ಪೊಂದಿಪುಟ್ಟಿದೆ 2 ವಾಸುದೇವನ ನೀ ಸ್ಮರಿಸೆ ವಸ್ತ್ರರಾಶಿ ಪಡೆದೆ ಇಂದಿರೇಶನ ಸುಪ್ರಿಯೆ 3
--------------
ಇಂದಿರೇಶರು
ನೋಡು ನೋಡು ಗರುಡಗಮನನೆ ಮಾಡು ದಯವನು ವೇಗದಿ ಪ ಪಾಡುವೆ ಆನಂದದಲಿ ನಿನ್ನನು ಕೊಂಡಾಡುವೆನು ನಿನ್ನ ಮೂರ್ತಿಯಾ ಅಪ ಮಂಗಳಾಂಗನೆ ಮನ್ಮಥನ ಪಿತ ಸಂಗೀತ ಸುರಲೋಲನೆ ಕಂಗಳಬ್ಬರ ತೀರುವಂತೆ ಚರಣಂಗಳನೆ ತೋರೋ ವಿನಯದಿ1 ಪರಮ ಪುರುಷನೆ ಪುಣ್ಯ ಶ್ಲೋಕನೆ ದುರುಳ ದೈತ್ಯರ ದಲ್ಲಣ ಮರಿಯಲೀಸದೆ ನಿನ್ನ ಚರಣ ಸ್ಮರಣೆ ಒದಗಿಸೊ ವದನಕೆ 2 ವಂದನೆಯು ಗೋವಿಂದ ಗೋಪಾಲಾ ಮಂದರಧರ ಮಾಧವಾ ಇಂದು ವಿಜಯವಿಠ್ಠಲ ನಿನ್ನ ಸಂದರ್ಶನವ ಕೋರುತಾ 3
--------------
ವಿಜಯದಾಸ
ನೋಡು ನೋಡು ಜೀವನೆ ನೀ ನಿನ್ನಯ ನಿಜರೂಪವಾ ತಿಳಿದು ನಲಿದು ಜ್ಞಾನಪಥದಿ ಆನಂದವ ಹೊಂದು ನೀ ಪ ಅಮರನಾದ ಆತ್ಮ ನೀನು ಆನಂದದ ನಿಧಿಯೇ ನೀ ಅರಿತು ಇದನು ನಿನ್ನ ಮನದಿ ಶಾಂತರೂಪನಾಗು ನೀ 1 ನಾನೆನ್ನುವ ಅನಿಸಿಕೆಯದು ಅಡಗಲು ತಾನುಳಿಯುವಾ ತೋರಿಕೆಯನು ಮೀರಿದಾ ನಿರ್ವಿಕಲ್ಪ ನೋಡು ನೀ ಶ್ರವಣ ಮನನ ನಿದಿಧ್ಯಾಸ ಸಾಧನೆಗಳ ಮಾಡುತಾ ತಿಳಿವುದಾತ್ಮರೂಪ ನಾನೆ ಎಂದು ನಿನ್ನ ಮನದಲಿ 2 ಮನದೊಳಗೀಪರಿಯಾ ದೃಢತರದಲಿ ನಿಶ್ಚಿತಮಾಡೀ ದೇಹ ಮನಸು ಬುದ್ಧಿಗಳಿವು ನಾನಲ್ಲೆಂದರಿಯುತ ತೋರಿ ಅಡಗುತಿರುವ ಜಗವು ಕನಸೇ ಎಂದರಿತು ನೀ ಪರಮಸತ್ಯ ಆತ್ಮರೂಪ ನಾನಿಹೆನೆಂದರಿತುಕೋ 3 ಪ್ರೇಮರೂಪ ನೀನೆ ಎಂದು ಸಾರಿ ಪೇಳ್ದ ಜ್ಞಾನವ ಆ ಮಹಾತ್ಮಶಂಕರಗುರುರಾಜನ ನುಡಿ ತಿಳಿಯೋ ನೀ 4
--------------
ಶಂಕರಭಟ್ಟ ಅಗ್ನಿಹೋತ್ರಿ
ನೋಡು ನೋಡು ನಿನ್ನ ಹಿತವಾ ಪ ಇಂದು ನರದೇಹದಲ್ಲಿ ಬಂದುದೇನೋ | ಒಂದು ಪಥವರಿಯದಾ ಛಂದವೇನೋ ಅ.ಪ ಗುರುವಿನಂಘ್ರಿಯ ಕಂಡ ಗುರುತ ಅನುಭವನುಂಡ ಸೈಸ್ಯೆ | ಕರುವೇ ಬಾರೆನ್ನುತಾ ಸೈಸ್ಯೆ | ಶರಣ ಬಾರೆನ್ನುತಾ ಸೈಸ್ಯೆ | ಹರಿಯ ಭಕ್ತ ನೆನ್ನುತಾ ಧರಿಯೊಳ್ಹೀಂಗ ಹಿರಿಯರಿಂದ | ಕರಿಸ ಕೊಳ್ಳಲಾಗದೇ | ಬರಿದೆ ಭ್ರಾಂತಿಗೆ ಬಿದ್ದು | ಬರಡ ಜನ್ಮ ಮಾಡ ಬ್ಯಾಡಾ 1 ನೀಗಿ ಕೇಳು ಕೇಳು | ಆದಿ ಸನ್ಮಾರ್ಗವ ಕೇಳು ಕೇಳು | ಸಾಧನವ ಬಲಿಯೋ ನೀ | ಕಂದ ಭೂಮಿಯ ಮೇಲೆ ಹನಿ ಮಾಡದೇ 2 ಗುರುಮಹಿಪತಿಸ್ವಾಮಿ ಅರ್ಹವಿನೊಳಗೆರಕವಾದ ಧೀರ ಧೀರ| ನೀರು ಪದ್ಮ ಹೋಲುವಾ ಎರಡು ಸಮನಿನಿಸಿ ಸುಖ | ಭರಿತರಾದ ಪರಿಯಲಿ ಹರಿಯ ಧ್ಯಾನ ಬಲಿಯೋ ಮೈಯ್ಯ | ಮರೆಯಬೇಡಾ ಮನವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡು ನೋಡು ಬ್ರಹ್ಮವ ಮುಕ್ತನೆನೋಡು ನೋಡು ಬ್ರಹ್ಮವನೋಡು ನೋಡು ಬ್ರಹ್ಮವನ್ನುಗೂಢವಲ್ಲ ಎದುರಿಲ್ಲದೆಆಡಲಿಕ್ಕೆ ನಾಲಗಿಲ್ಲ ಸರ್ವರೂಪದಲ್ಲಿದೆ ಪ ಸ್ತ್ರೀಯ ರೂಪಾಗಿದೆ ಪುರುಷ ರೂಪಾಗಿ ಇದೆಸ್ತ್ರೀಯು ಅಲ್ಲ ಪುರುಷನಲ್ಲ ಅಹುದು ಅಹುದು ಅಹುದು ಅಲ್ಲ 1 ಸತಿಯು ಪತಿಯು ಆಗಿ ಇದೆಸುತರು ಸೊಸೆಯು ಆಗಿ ಇದೆಅತಿ ಬಳಗವಾಗಿ ಇದೆ ಎಲ್ಲ ವೇಷ ಹಾಕಿ ಇದೆ2 ಎಲ್ಲವಾಗಿ ಆಡುತಿದೆಎಲ್ಲವಾಗಿ ಪಾಡುತಿದೆಎಲ್ಲವಾಗಿ ಚಿದಾನಂದ ಬ್ರಹ್ಮವೀ ಪರಿಯಲಿದೆ 3
--------------
ಚಿದಾನಂದ ಅವಧೂತರು
ನೋಡುವ ಬನ್ನಿ ಪೂಜೆ ಮಾಡುವ ಬನ್ನಿ | ಪಾಡಿ ನಲಿದಾಡುತಲಿ ಎನ್ನೊಡೆಯಾ ಲಿಂಗಗ ಪ ದೇಹ ದೇವಾಲಯದಲ್ಲಿ ಹೃದಯ ಜಲ ಹರಿಯಲಿ | ಊಹಿಸಿ ನೆಲೆಯಾಗಿ ಹೊಳೆವ ಆತ್ಮಲಿಂಗಗ 1 ಜ್ಞಾನದಭಿಷೇಕ ಸಮ್ಯಕ್ ಜ್ಞಾನದಾ ವಸ್ತ್ರ ನೀಡಿ | ಧ್ಯಾನದೀಪಾ ಸಂಚಿತದ ಧೂಪಾರತಿಯಾ ಲಿಂಗಗ 2 ಭಾವಭಕ್ತಿ ಗಂಧಾಕ್ಷತೆ ಸುಮನ ಪುಪ್ಪದಲಿಂದು ಅವಗು ಸುವಾಸನೆಯು ಪರಿಮಳ ಲಿಂಗಗ 3 ಘನ ಗುರು ಮಹಿಪತಿ ಸುತ ಪ್ರಭುಲಿಂಗಗ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡುವರೆ ಬನ್ನಿ ಶೇಷಾಧರ ಕೂರ್ಮನಿಗೆ ಪ. ಇಂದ್ರಾದಿ ಶರದಿಂದ ನೊಂದ ಕಪಿಗಳನ್ನು ತಂದ ಸಂಜೀವನ ಗಿರಿಯಿಂದಲೀ ಮಂದ ಭಾವವ ಕಳದಂದು ಪರ್ವತವನ್ನು ನಿಂದಲ್ಲಿಂದಲೆ ಹಿಂದಕ್ಕೆ ಬಿಸುಟಂಥ1 ವೈಷ್ಣವರಿಗಳೊಳು ಶ್ರೇಷ್ಠನೆನಿಸಿದಂಥ ದುಷ್ಟ ಜರಾಸಂಧ ಕಷ್ಟ ವೃತ್ತಿ ಬಡಿಸಿದಂಥ ಪರಮೇಷ್ಠಿ ಯಾಗವ ಮಾಡಿ ಕೃಷ್ಣಗೆ ಪರಮ ಸಂತುಷ್ಟಿ ಬಡಿಸಿದಂಥ 2 ಮೂರೇಳು ದುರ್ಭಾಷ್ಯ ಖಂಡಿಸಿ ಕೃಷ್ಣನ ದ್ವಾರಕಪುರದಿಂದಿಲ್ಲಿಗೆ ಕರಿಸಿ ಧಾರುಣೀಶ ವೆಂಕಟಾಚಲಪತಿಯೆಂದು ತೋರಿದ ಸಜ್ಜನಾಧಾರ ಯತೀಂದ್ರಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ನೋಡುವರೇ ಅಂತವಾ|ನೋಡುವರೇ| ಮೂಢ ಪಾಮರನೆಂದುದ್ದರಿಸದೇ ಸುಮ್ಮನೇ ತಾಕೂಡುವುದೇ ಪ ಜ್ಞಾನ ಧ್ಯಾನ ಮೌನವರಿಯೆ|ಪೂಜೆಯ ನಾ ಮಾಡುವರೇ| ಗಾನ ಮಾನ ಏನೂ ಅರಿಯೆ|ಸ್ತುತಿ ಸ್ತವನ ಪಾಡುವರೇ?1 ಚತುರ ಉತ್ತರ ಮಾತುಗಳರಿಯೆ|ಸತ್ಸಂಗದಿ ಕೂಡುವರೇ| ಇತರ ಯಾತರ ಆತುರನರಿಯೆ|ವರಗಳನಾ ಬೇಡುವರೇ 2 ಹಾವ ಭಾವ ಭಕ್ತಿಗಳರಿಯೇ|ಛಲ ಬಿಂಕವ ಹಿಡಿವರೇ| ದೇವಕಾವುದು ಮಹಿಪತಿ ಸುತ ಪ್ರಭುತವ ದಾಸನ ಮಾಡುವರೇ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡೆ ಕಣ್‍ದಣಿಯಾ ಪ ಪಾಡುವೆ ಪೊಗಳುವೆ ನೋಡುತ ನಲಿಯುವೆ ನೋಡೆ ಕಣ್‍ದಣಿಯಾ ಅ.ಪ ನೋಡೆ ಕಣ್‍ದಣಿಯಾ ನೋಡೆ ಕಣ್‍ದಣಿಯಾ 1 ನೋಡೆ ಕಣ್ ದಣಿಯಾ ನೋಡೆ ಕಣ್ ದಣಿಯಾ 2 ನೋಡೆ ಕಣ್ ದಣಿಯಾ ನೋಡೇ ಕಣ್ ದಣಿಯಾ 3 ನೋಡೆ ಕಣ್‍ದಣಿಯಾ ನೋಡೇ ಕಣ್ ದಣಿಯಾ 4 ನಾರದವಂದ್ಯನ ನೀರಜಪಾದಕೆ ಮಾಡೆ ವಂದನೆಯ ನೀರಜನೇತ್ರ ಮಾಂಗಿರಿಯ ರಂಗಯ್ಯನ ಪಾಡೆ | ಮನದಣಿಯಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೋಡೆ ದಯದಿ ಶಿರಿ ನಿನ್ನ ಮಡದಿ ಪ ನೋಡಿ ನೀ ದಯದಿ ನೀಡು ಕರುಣ ದಯ- ಮಾಡು ತ್ವರಿತದಿ ಬೇಡುವೆ ಮುದದಿ ಅ.ಪ. ಮಾಮನೋಹರ ನೀ ಪ್ರೇಮದಿಂದಲಿ ಬಂದ- ಜಾಮೀಳನ ಪೊರದಾ ಶಾಮಸುಂದರನೇ1 ಭಾರಿ ಭಾರಿಗೆ ಎನ್ನ ದಾರಿದ್ರ್ಯವನಧಿಯ ತಾರಿಸಬೇಕೆಂದು ಶೇರಿದೆ ನಿನ್ನನ್ನು 2 ಮರೆಯುವುದುಚಿತವೆ ಶಿರಿಯ ರಮಣ ನೀನು ತರಳ ಧ್ರುವನನ್ನ ಪೊರೆದಂಥ ದೇವ ನೀ 3 ಆರ್ತರಕ್ಷಕ ನೀನು ಪಾರ್ಥನಾ ಸೂತನು ಸಾರ್ಥಕ ಮಾಡು ಲೋಕ ಕರ್ತೃ ದಯಾಪರನೆ 4 ಸರಸಿಜನಾಭನಾದ ಸಿರಿವತ್ಸಾಂಕಿತ ನೀನು ಮರೆಯಬ್ಯಾಡೆನ್ನಯ ಮೊರೆಯನು 5
--------------
ಸಿರಿವತ್ಸಾಂಕಿತರು
ನೋಡೊ ನೋಡೋ ನಿನ್ನೊಳು ನಿಜಾ ಪ ಮೂಢತನವ ಬಿಟ್ಟು ಕೂಡಿ ಭಾವ ಭಕ್ತಿಯಾ | ಪಾಡಿ ಕೊಂಡಾಡಿ ಸೂರ್ಯಾಡೆಲೋ ಹರಿನಾಮಾ ಅ.ಪ ನಾನು ನನ್ನದು ಯಂದು ಹೀನ ವೃತ್ತಿಗೆ ಬಿದ್ದು | ನಾನಾ ಬವಣೆಯಲ್ಲಿ ತೊಳಲುತ ತೊಳಲುತ | ಗಳೆವರೇ ದಿನವನು 1 ಸನ್ನುತ ಗುರುಪಾದ ಮನ್ನಿಸಿ ಪಡೆಯಲೋ ಬೋಧಾ | ಬನ್ನ ಬಡುವದೇನು ಕಣ್ಣದೆರೆನ್ನಾರೆ ತನ್ನತಾ ಮರೆವರೆ 2 ಗುರುಮಹಿಪತಿ ಸ್ವಾಮಿ ಸುರಮುನಿಜನ ಪ್ರೇಮಿ | ಮೊರೆ ಹೊಕ್ಕವರ ಕೈಯ್ಯಾ ಜರಿಯೂತಾ ಮರಿಯಾ | ನೀ ನರಿಯದೆ ಕೆಡಬ್ಯಾಡಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡೊ ಮನ ಕೊಂಡಾಡೊ ಮರೆಯದಲೆ ಮನ ಚಿಂತÀ ಲ್ರೇವ ಲೇಶನ ? ಪಾಡುತಿರೆ ಕೃಷ್ಣಾತೀರದ್ವಾಸನ ಮಾಡೊ ಮಹಾತ್ಮರೆಂದೆನಿಸೊ ದಾಸರ ಜೋಡು ಪಾದಂಗಳಿಗೆ ವಂದನೆ ಪ ಅಂಜನೆಯಲ್ಲುದಿಸಿ ಕೌಸಲ್ಯಾ- ಕಂದನಂಘ್ರಿಕಮಲ ಸೇವೆಗೆ ಅಂಗದ ಮೊದಲಾದ ಕಪಿಗಳ ಸಂಗ ಬಿಟ್ವಾರಿಧಿಯನ್ಹಾರುತ ಭಂಗ ಬಡಿಸುತ ರಾವಣನ ಪುರ ಮಂಗಳಾರತಿ ಮಾಡಿ ಜಾನಕಿ ಗುಂಗುರವನಿಟ್ಟೆರಗಿ ರಾಮರಿ ಗಂಗನೆಯ ವಾರ್ತೆಗಳನರುಹಿದೆ1 ಕುಂತಿಸುತನಾಗ್ಯುದಿಸಿ ಬ್ಯಾಗನೆ ಪಂಥಮಾಡುತ ಕೌರವರ ಕುಲ- ಕಂತಕನು ನಾನೆಂದು ರಣದೊಳು ನಿಂತು ಗದೆ ಹಾಕವರ ಸವರುತ ಅಂತರಂಗದಿ ಹರಿಯ ದಿವ್ಯಾ- ನಂತ ಗುಣಗಳ ತಿಳಿದು ದ್ರೌಪದೀ- ಕಾಂತನೆನಿಸಿ ತಾ ಕರುಣನಿಧಿಗೇ- ಕಾಂತ ಭಕ್ತನೆಂದಿನಿಸಿದಾತನು 2 ಮಧ್ಯಗೇಹಭಟ್ಟರಲ್ಲಿ ಮಗನಾ- ಗಿದ್ದ ಸುಜನರಭೀಷ್ಟದಾಯಕ ಗೆದ್ದು ಮಾಯಾವಾದಿಗಳನೆ ಪ್ರ ಸಿದ್ಧಿನೆನಿಸಿದೆ ಸರ್ವಲೋಕದಿ ಶುದ್ಧ ಜ್ಞಾನಾನಂದತೀರ್ಥರು ಮಧ್ವಮತದ ಬಿರುದನೆತ್ತಿದ ಪದ್ಮಪತಿ ಭೀಮೇಶಕೃಷ್ಣಗೆ ಪರಮಭಕ್ತನೆಂದೆನಿಸಿದಾತನು 3
--------------
ಹರಪನಹಳ್ಳಿಭೀಮವ್ವ
ನ್ನಿಂತಾವಳೀ ಜಗದೊಳುಂಟೇನೆ ರಮಣೀ ಪ ನಿಂತಾಗೆ ನುಂಗಿದಳು ಕಂತೆ ಕಬ್ಬಾ ಅ.ಪ ಗರತಿಯು ತಾನಲ್ಲ ಗೌಡಿಯ ತಾನಲ್ಲ ಗುರುತೇಳುತದೆ ನೀವೆದ್ದರೆ ಕೇಳಿರೈ ಸರಿತಾಯಿ ಪರಿಯುತ್ತೆ ವರಗಂಡನಿಗೆ ಮೋಸ ಕರಿಯುತ್ತಳಿಹ ಪ್ರಖ್ಯಾತ ನಳ್ಳಿಯೊಳು 1 ಆದಿಲಿ ಹೊಗ ಪರಬೀದಿಯೊಳು ತಾನೆಂತೂ ವಾದಿಸಿ ಅವರೊಳು ಭೇದವಿಡಿದೆ ಕಾದಿರುವೆ ನಿನಗಾಗಿ ಕಾಮನಯ್ಯನೆ ಬಾರೊ ವೇದಗೋಚರ ಗುರು ಶ್ರೀತುಲಸೀರಾಮಾ2
--------------
ಚನ್ನಪಟ್ಟಣದ ಅಹೋಬಲದಾಸರು
ನ್ಯಾಯವಾಕೊ ನ್ಯಾಯವಾಕೊ ತೋಯಜಾಕ್ಷನಲ್ಲದಿಲ್ಲ ಪ ಸಾವÀಧಾನ ಚಿತ್ತನಾಗಿ ಮಾಯನೀಗಿ ಜ್ಞಾನಗೂಡಿ ಸೇವೆ ಮಾಡೆಲೊ ದಾಸಜನರ ದಿವ್ಯತತ್ವವು ತೋರುತದೆ 1 ವೃತ್ತಿಬಲಿಸಿ ನಿತ್ಯದಿ ಹರಿ ಕೀರ್ತನದಿ ನಿನ್ನ ಚಿತ್ತನಿಲಿಸಿ ಸತ್ಯದಿಂದರಿಯುತ್ತಲಿರ್ದರೆ ಸತ್ಯವಸ್ತುವು ಅರ್ಥವಾಗ್ವುದು 2 ಮಹಾತ್ಮರ ನಿಜವಾಕ್ಯ ನಂಬಿ ದುರಾತ್ಮತನವಂ ದೂರಮಾಡಿ ಮಹಾತ್ಮೆ ಕಾಂಬುದು 3
--------------
ರಾಮದಾಸರು