ಒಟ್ಟು 11370 ಕಡೆಗಳಲ್ಲಿ , 137 ದಾಸರು , 5713 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳ ಜಯ ಜಯ ಮಂಗಳ ತುಳಸಿಗೆ ಮಂಗಳ ಜಯ ಜಯ ರಂಗನಾಯಕಗೆ ಪ ವಾರಿಧಿ ಮಥÀನದಿ ವಾರಿಜನಾಭನ ವಾರಿಜನೇತ್ರನ ವಾರಿಗಳಿಂದ ತೋರಿದ ತುಳಸಿಯು ಸೇರಿದಳೆಲ್ಲ ಶ- ರೀರವ ಪಾವನ ಮಾಡಬೇಕೆನುತ 1 ತುಳಸಿಯ ನಾಮವ ಬೆಳೆಸಿಯೆ ಲೋಕವ ಬಳಸಿಕೊಂಡಿರುವೆನು ಎನುತಲೆ ಬಂದು ಕಳಸಿದ ಮನುಜರ ಉಳಿಸಬೇಕೆನುತಲೆ ಕಳಸದ ತೆರನಂತೆ ಉದಿಸಿದಳು ತುಳಸಿ 2 ಸಾಲಿಗ್ರಾಮವು ಇಲ್ಲದಾತನ ಮನೆಯೊಳು ಕಾಲೂರಿ ನಿಲ್ಲಳು ಹರುಷದೊಳಿವಳು ಪಾಲಿಪ ಹರಿಶಿಲೆಯಿರುವಂಥ ಸ್ಥಳದೊಳು ಓಲಗವಾಗಿಯೆ ತೋರುತ್ತಲಿಹಳು3 ಎಲ್ಲಿಯು ತುಳಸಿಯು ಅಲ್ಲಿಯೆ ಶ್ರೀಹರಿ ವಲ್ಲಭೆ ಸಹವಾಗಿ ಇರುತಿಪ್ಪ ಬಿಡದೆ ಫುಲ್ಲನಾಭನು ಕೃಷ್ಣ ಆಡಿದ ಪರಿಯನು ಗೊಲ್ಲತಿಯರು ಕಂಡು ನಾಚಿ ಹಿಗ್ಗಿದರು 4 ಬಂದಳು ಭಕ್ತರ ಮಂದಿರದೆಡಗೆ ಗೋ- ವಿಂದನ ಕಂಡಿರೆ ಎಂದು ಕೇಳಿದಳು ವೃಂದಾವನದೊಳು ನಿಂದಳು ತುಳಸಿಯು ಚಂದವು ನಿಮ್ಮಯ ಭವನದೊಳೆನುತ 5 ಗೋವಿನ ತುಪ್ಪದಿ ದೀವಿಗೆಯಿರಿಸಿಯೆ ಭಾವ ಶುದ್ಧತ್ವದಿ ಬಲವಂದರವಳು ಕಾವಲು ಪೋಗಿಯೆ ಕರ್ಣದ ಒಳಗಿದ್ದು ಜೀವಿತ ಮುಕ್ತಿಯ ತೋರುವೆನೆನುತ 6 ಸರ್ವತೀರ್ಥಗಳನ್ನು ಮೂಲದಿ ಧರಿಸಿಯೆ ಸರ್ವ ದೇವರ್ಕಳ ಮಧ್ಯದೊಳಿರಿಸಿ ಸರ್ವ ವೇದಂಗಳ ಶಿರದೊಳು ಧರಿಸಿಯೆ ಸರ್ವವ ಕಾಲಗೆ ನಿರ್ವಹಿಸುತಿಹಳು 7 ಅಂಗಳದೊಳಗಿಹ ಮಂಗಳ ಮಹಿಮಗೆ ರಂಗುವಲ್ಲಿಯನಿಕ್ಕಿ ಶೃಂಗಾರವಾಗಿ ಸಾಂಗ್ಯದೊಳಿಹ ಒಂದು ಮಂಗಳ ಬರೆದರೆ ಬಂಗಾರ ಮನೆಯನ್ನು ತೋರುವಳಿವಳು 8 ಮೂಲದ ಮೃತ್ತಿಕೆ ಮೂಲ ಪಣೆಯೊಳಿಟ್ಟು ಕಾಲದಿ ಸ್ನಾನವ ಮಾಡಿದ ನರರು ಭಾಳವಾಗಿಹ ಅಘರಾಶಿಯನೆಲ್ಲವ ಚಾಳಿಸಿ ಕಳೆವರು ಕಾಲನ ಗೆಲಿದು 9 ತನ್ನ ಕಾಷ್ಟವ ತಂದು ಚಿನ್ನದಿ ಸುತ್ತಿಸಿ ಕರ್ಣದಿ ಧರಿಸಿದ ಮನುಜರಿಗೆಲ್ಲ ಉನ್ನತ ಪದವಿಯ ತೋರುವೆನೆನುತಲೆ ಪನ್ನಗಶಯನಗೆ ಪ್ರೀತಿಯಾಗಿಹಳು 10 ಉತ್ತಮವಾಗಿಹ ಕಾರ್ತಿಕ ಮಾಸದಿ ಅರ್ತಿಯಿಂದಲೆ ನಲಿನಲಿಯುತ್ತ ದೇವಿಯ ಕರ್ತನ ಕೀರ್ತನೆ ರಚಿಸುವ ಮನದಿ 11 ಬ್ರಾಹ್ಮಿ ಮುಹೂರ್ತದಿ ಸ್ನಾನ ತರ್ಪಣವನ್ನು ನಿರ್ಮಲ ತೀರದಿ ತಿದ್ದಿಯೆ ಕೊಂಡು ಧರ್ಮಕ್ಕೆ ಯೋಗ್ಯಳ ಪೂಜೆಯ ಮಾಡಲು ಕರ್ಮ ಬಂಧಗಳೆಲ್ಲ ಕಡಿದುಕೊಳುವುದು 12 ಸಾಯಂಕಾಲದಿ ದೀವಿಗೆ ಹಚ್ಚಲು ಮಾಯಗಳೆಲ್ಲವು ಮರುಗಿ ಪೋಗವುವು ದಾಯವಾಗಿಯೆ ಸುರರಾಯನೊಳರ್ಥವ ಬೇವಿನವರು ಕಂಡು ಹೊರಸಾರುತಿಹರು 13 ಸರ್ವದಾನಗಳನ್ನು ಸರ್ವಪೂಜೆಗಳನ್ನು ಸರ್ವರು ಋಷಿ ಪಿತೃ ತರ್ಪಣಗಳನು ಸರ್ವಥಾ ತುಳಸಿಯ ತಪ್ಪಿಸಬೇಡೆಂದು ನಿರ್ವಾಹವಾಗಿಯೆ ಶ್ರುತಿಯು ಪೇಳಿದುದು 14 ಅಂಗದೊಳಗಿಹ ಮಂಗಳ ಮಹಿಮಗೆ ಸಾಂಗ್ಯದೊಳಿದನು ಪಠಿಸಿ ಪೇಳಿದರೆ ಗಂಗೆ ಗೋದಾವರಿ ತುಂಗಭದ್ರೆಯ ಮಿಂದು ರಂಗನ ಕ್ಷೇತ್ರವ ನೋಡಿದ ಫಲವು 15 ಅಂಗಳ ತುಳಸಿಯ ದಿನ ದಿನದಿ ತಾವೆದ್ದು ಹಿಂಗದೆ ನೋಳ್ಸ ಶ್ರೀರಂಗನ ಭಕ್ತರಿಗೆ ಬಂಗಾರಗಿರಿವಾಸ ವರಾಹತಿಮ್ಮಪ್ಪನ ಮಂಗಳಮೂರ್ತಿಯ ನೋಡಿದ ಫಲವು 16
--------------
ವರಹತಿಮ್ಮಪ್ಪ
ಮಂಗಳಂ ಜಯ ಮಂಗಳಂ ಲಿಂಗಾಕಾರದ ಪರಶಿವಗೆ ಪ ರಜತಾದ್ರಿಪುರದೊಳು ನಿಂದವಗೆ ಭಜಕರ ಸಲುಹಲು ಬಂದವಗೆ ನಿಜಸುರ ಸೇವಿತ ಗಜಚರ್ಮಾಂಬರ ತ್ರಿಜಗ ವಂದಿತನಾದ ಪರಶಿವಗೆ1 ಬಾಣನ ಬಾಗಿಲ ಕಾಯ್ದವಗೆ ತ್ರಾಣದಿ ತ್ರಿಪುರವ ಗೆಲಿದವಗೆ ಕಾಣದ ಅಸುರಗೆ ಪ್ರಾಣಲಿಂಗವನಿತ್ತು ಮಾಣದೆ ಭಕ್ತರ ಸಲುಹುವಗೆ 2 ಗಂಗೆಯ ಜಡೆಯೊಳು ಧರಿಸಿದಗೆ ಸಿಂಗಿಯ ಕೊರಳೊಳು ನುಂಗಿದಗೆ ತಿಂಗಳ ಸೂಡಿಯೆ ಅಂಗ ಭಸ್ಮಾಂಗದಿ ಕಂಗಳು ಮೂರುಳ್ಳ ಕೃಪಾಂಗನಿಗೆ 3 ಅಸ್ಥಿಯ ಮಾಲೆಯ ಧರಿಸಿದU É ಹಸ್ತದಿ ಶೂಲವ ಪಿಡಿದವಗೆ ವಿಸ್ತರವಾಗಿಯೆ ಭಸ್ಮಸುವಾಸಿಗೆ ಸತ್ಯದಿ ವರಗಳನಿತ್ತವಗೆ 4 ಅಂಬಿಕಪತಿಯೆಂದೆನಿಸಿದಗೆ ತ್ರಿ- ಯಂಬಕ ಮಂತ್ರದಿ ನೆಲೆಸಿದಗೆ ನಂಬಿದ ಸುರರಿಗೆ ಬೆಂಬಲವಾಗಿಯೆ ಇಂಬಾದ ಪದವಿಯ ತೋರ್ಪವಗೆ 5 ಪಂಚಾಕ್ಷರದೊಳು ಒಲಿದವಗೆ ಪಂಚಮ ಶಿರದೊಳು ಮೆರೆವವಗೆ ಪಾತಕ ಸಂಚಿತ ಕರ್ಮವ ವಂಚಿಸಿ ಭಕ್ತರ ವಾಂಛಿತವೀವಗೆ 6 ಪಾಶುಪತವ ನರಗಿತ್ತವಗೆ ಶೇಷಾಭರಣವ ಹೊತ್ತವಗೆ ಕಾಶಿಗಧಿಕವಾಗಿ ಕೈವಲ್ಯವಿತ್ತು ವಿ- ಶೇಷದಿ ಜನರನು ಸಲುಹುವಗೆ7 ಯಕ್ಷ ಸುರಾಸುರ ವಂದಿತಗೆ ದಕ್ಷನ ಮಖವನು ಕೆಡಿಸಿದಗೆ ಕುಕ್ಷಿಯೊಳೀರೇಳು ಜಗವನುದ್ಧರಿಸಿಯೆ ರಕ್ಷಿಸಿಕೊಂಬಂಥ ದೀಕ್ಷಿತಗೆ 8 ಕಾಮಿತ ಫಲಗಳ ಕೊಡುವವಗೆ ಪ್ರೇಮದಿ ಭಕ್ತರ ಸಲಹುವಗೆ ಭೂಮಿಗೆ ವರಾಹತಿಮ್ಮಪ್ಪನ ದಾಸರ ಸ್ವಾಮಿಯೆಂದೆನಿಸುವ ಈಶನಿಗೆ 9
--------------
ವರಹತಿಮ್ಮಪ್ಪ
ಮಂಗಳಂ ಜಯ ಮಂಗಳಂ ಪ ಆದಿನಾರಾಯಣನೆನಿಸಿದಗೆ ಪಾದದಿ ಗಂಗೆಯ ಪಡೆದವಗೆ ಸಾಧುಸಜ್ಜನರನ್ನು ಸಲುಹುವ ದೇವಗೆ ವಿ ನೋದ ಮೂರುತಿಯಾದ ವೆಂಕಟಗೆ 1 ಶಂಖ ಚಕ್ರಧರಿಸಿಪ್ಪವU ಪಂಕಜ ಹಸ್ತವ ತೋರ್ಪವಗೆ ಬಿಂಕದೊಳಸುರರ ಕೆಡಹಿದ ಧೀರಗೆ ಮೀ ನಾಂಕನ ಪಿತನಾದ ವೆಂಕಟಗೆ 2 ಪೀತಾಂಬರಧರನೆನಿಸಿದಗೆ ನೂತನ ನಾಮದಿ ಮೆರೆವವಗೆ ಪಾತಕನಾಶನ ಪರಮಪಾವನಗೆ ಅ ತೀತ ಮಹಿಮನಾದ ವೆಂಕಟಗೆ 3 ಖಗವಾಹನನೆಂದೆನಿಸಿದಗೆ ನಗಧರನಾಗಿಹ ಅಘಹರಗೆ ಮೃಗಧರರೂಪಗೆ ಮುಂಚಕಲಾಪಗೆ ಜಗದಾಧಾರಕ ವೆಂಕಟಗೆ 4 ಲೋಕನಾಯಕನಾದ ಕೇಶವಗೆ ಶೋಕಭಂಜನನಾದ ಮಾಧವಗೆ ಸಾಕಾರ ರೂಪಗೆ ಸರ್ವಾತ್ಮಕನಿಗೆ ಶ್ರೀಕರನೆನಿಸುವ ವೆಂಕಟಗೆ 5 ಆಲದ ಎಲೆಯೊಳ್ವೊರಗಿದಗೆ ಆ ಕಾಲದಿ ಅಜನನು ಪೆತ್ತವಗೆ ನಿಗಮ ವಿದೂರಗೆ ಕಾಲಕಾಲಾಂತಕ ವೆಂಕಟಗೆ 6 ಸ್ವಾಮಿ ಪುಷ್ಕರಣಿಯ ವಾಸನಿಗೆ ಭೂಮಿ ವರಾಹತಿಮ್ಮಪ್ಪನಿಗೆ ಪ್ರೇಮದಿ ಜಗವನು ಸಲುಹುವ ನಾಮದ ಸೋಮ ಸನ್ನಿಭನಾದ ವೆಂಕಟಗೆ 7
--------------
ವರಹತಿಮ್ಮಪ್ಪ
ಮಂಗಳಂ ಜಯ ಮಂಗಳಂ ಜಯರುಕ್ಮ ಕಿರೀಟಿಗೆ ಮಂಗಳಂ ಪ ಮುರಹರ ರಾಣಿಗೆ | ಸುಖಕರ ವಾಣಿಗೆ |ಮುಖರಿತ ವೇಣಿಗೆ ಮಂಗಳಂ 1 ಕಿಸಲಯ ಪಾಣಿಗೆ | ರಸಲಯ ಜಾಣೆಗೆ |ಬಿಸರುಹ ಬಾಣಿಗೆ ಮಂಗಳಂ 2 ಮಂದರ ಸದನಿಗೆ | ಕುಂದರ ರದನಿಗೆ |ಚಂದಿರ ವದನಿಗೆ ಮಂಗಳಂ 3 ಸುರದರಶ ಮುನಿಗೆ | ಹರಗಿರ ಮುನಿಗೆ |ಕರಿವರ ಗಮನಿಗೆ ಮಂಗಳಂ4 ಕೃತಮತಿವಶಳಿಗೆ | ಶ್ರುತಿನುತಿ ಯಶಳಿಗೆ |ದ್ಯುತಿ ತತಿ ದಿಶಗಳಿಗೆ ಮಂಗಳಂ 5
--------------
ರುಕ್ಮಾಂಗದರು
ಮಂಗಳಂ ಜಯ ಮಂಗಳಂ ರಾಮ ಸಜ್ಜನರ ಪ್ರೇಮ ಮಂಗಳಂ ಲೋಕಾಭಿರಘುರಾಮ ಪಟ್ಟಾಭಿರಾಮ ಪ ಮಂಗಳಂ ಶ್ರೀ ದಶರಥಾತ್ಮಜಗೆ ಮಂಗಳಂ ಅಯೋಧ್ಯವಾಸಿಗೆ ಮಂಗಳಂ ಜನಕಜಾಮಾತೆಗೆ ಮಂಗಳಂ ಶ್ರೀ ರಾಮಚಂದ್ರಗೆ ಅ.ಪ ದೇವದೇವೋತ್ತಮ ವೈಕುಂಠದೊಳಗೆ ಶ್ರೀ ಭೂಮೇರಿಂದ ಸೇವೆಗಳ ಕೈಗೊಳ್ಳುತ ಮಲಗಿರಲು ದೇವಋಷಿ ಬ್ರಹ್ಮೇಂದ್ರಾದಿಗಳು ಸಹಿತ ಶ್ರೀಧರನ ಸ್ತುತಿಸುತ ರಾವಣಾಸುರನುಪಟಳ ವರ್ಣಿಸಲು ಸಂತೈಸಿ ಅವರನು ಭೂಮಿಪತಿ ದಶರಥನ ಪ್ರೇಮ ಕುಮಾರನಾಗುದಿಸುತಲಯೋಧ್ಯದಿ ಪ್ರೇಮ ತೋರುತ ಮೆರೆದವಗೆ ಜಯ1 ದಶರಥನ ಸುತರಾಗಿ ಬೆಳೆಯುತಲಿ ಕೌಶಿಕನÀಯಜ್ಞವ ಕುಶಲದಲಿ ರಕ್ಷಿಸುತ ಹರುಷದಲಿ ಶಶಿಮುಖಿಯ ಕೂಡುತ ಕುಶಲದಲಿ ವನವಾಸ ಚರಿಸುತಲಿ ದಶಶಿರನು ಜಾನಕಿಯ ಕದಿಯಲು ಶಶಿಮುಖಿಯನರಸುತಲಿ ವನವನ ವಸುಧಿಪತಿ ಕಪಿಗಳ ಕಳುಹಿ ಸತಿ ಕುಶಲ ತಿಳಿಯುತ ನಲಿದವಗೆ ಜಯ 2 ಬಂದ ಕಪಿ ಕಟಕವನೆ ನೋಡುತ್ತ ಸಾಗರಕೆ ಸೇತುವೆ ಒಂದೇ ನಿಮಿಷದಿ ರಚಿಸಿ ಶೀಘ್ರದಲಿ ಮಂದಮತಿ ರಾಕ್ಷಸರ ವಧಿಸುತಲಿ ಅಂದಣವ ಕಳುಹಿ ಮಂದಗಮನೆಯ ಕರೆಸಿ ಬೇಗದಲಿ ಬಂದ ರಾಮನು ಎಂದು ಮಾರುತಿ ಮುಂದೆ ಭರತಗೆ ಕುಶಲ ತಿಳಿಸಲು ತಂದೆ ಕಮಲನಾಥ ವಿಠಲ ಮುಂದೆ ಪ್ರಜೆಗಳ ಪೊರೆದವಗೆ ಜಯ 3
--------------
ನಿಡಗುರುಕಿ ಜೀವೂಬಾಯಿ
ಮಂಗಳಂ ನರಹರಿಗೆ ಜಯ ಜಯ ಮಂಗಳ ಮುರಹರಗೆ ಪ ಮಂಗಳ ಮದನಗೋಪಾಲ ಶ್ರೀಕೃಷ್ಣಗೆ ಮಂಗಳ ಮಾಧವಗೆ ಅ.ಪ ವಸುದೇವ ಸುತನಾಗಿ ಗೋಕುಲದೊಳು ಮೊಸರು ಬೆಣ್ಣೆಯ ಕದ್ದು ಶಶಿಮುಖಿಯರ ಕೂಡಿ ನಿಶಿರಾತ್ರಿಯಲಿ ರಾಸ ಕ್ರೀಡೆಯಾಡಿದ ಹರಿಗೆ 1 ನಳಿನಮುಖಿಯರೆಲ್ಲ ನೀರೊಳಗಾಡಿ ಬಳಲಿ ಮೇಲಕೆ ಬರಲು ಲಲನೆಯರ ಕಂಡು ಪರಿಹಾಸ್ಯ ಮಾಡಿದ ಚೆಲುವ ಗೋಪಾಲಕೃಷ್ಣಗೆ2 ಬೆಟ್ಟವ ಬೆರಳಿನಲಿ ಎತ್ತಿದ ಭಕ್ತವತ್ಸಲ ಹರಿಗೆ ಮಿತ್ರೆಯರಿಗೆ ಮೊಸರು ಬುತ್ತಿಯ ಭುಕ್ತಿಯನೆವದಲಿ ಮುಕ್ತಿ ತೋರಿದ ದೊರೆಗೆ 3 ಪುಟ್ಟಬಾಲಕನಾಗಿ ಗೋವ್ಗಳನೆಲ್ಲ ಅಟ್ಟಿಯ ಮನೆಗೆ ಪೋಗಿ ದುಷ್ಟ ಕಾಳಿಂಗನ ಮೆಟ್ಟಿ ತುಳಿದ ಹರಿಗೆ ರತ್ನದಾರತಿ ಎತ್ತಿರೆ 4 ಕೊಂದು ಕಂಸನÀ ಬೇಗ ಮಧುರೆಲಿ ನಿಂತ ಮಹಾನುಭಾವಗೆ ತಂದೆ ಶ್ರೀ ಕಮಲನಾಭವಿಠ್ಠಲಗೆ ಕುಂದಣದಾರತಿಯ 5
--------------
ನಿಡಗುರುಕಿ ಜೀವೂಬಾಯಿ
ಮಂಗಳಂ ನಿಜಭಕ್ತ ಪರಿಪಾಲಗೆ ಪ ಕೇಸರಿ ತನಯಗೆ ಮಂಗಳ ಕಂಜಾಪ್ತಜನ ಕಾಯ್ದಗೆ ಮಂಗಳ ಅಂಜನಾದ್ರಿ ತಂದಾತಗೆ ಮಂಗಳ ಸಂಜಯವಂತ ಶ್ರೀ ಹನುಮಂತಗೆ 1 ಕುಂತಿ ಪಾಂಡವಜನಾಗಿ ಕುವಲಯದೊಳು ಬಲ ವಂತ ರಾಯರಾ ತರಿದಗೆ ದಂತಿಪುರವ ಬೇಡಿ ಕೊಡದಿರೆ ಕೌರವರ ಸಂತತಿ ಸವರಿದ ಸುಖ ಪೂರ್ಣಗೆ 2 ಮೂರವತಾರ ಮಾಡಿದಗೆ ಮಂಗಳ ಮೂರೇಳು ಮತಗಳ ಮುರಿದವಗೆ ಮಂಗಳ ಸಿಂಧು ಜಗನ್ನಾಥ ವಿಠಲನ ಆರಾಧಿಸಿದ ಮಧ್ವ ಮುನಿರಾಯಗೆ 3
--------------
ಜಗನ್ನಾಥದಾಸರು
ಮಂಗಳ ಪದ್ಯಗಳು ಜಯ ಜಯ ಶ್ರೀ ಮಹಾಕಾಳಿ ಗೋಕರ್ಣೆ ಮಹಾಬಲ ಪೂಣ್ಯವಧು ಭಯವಿರಹಿತ ಭವನಾಶಿನಿ ಸುಲಲಿತೆÀ ಭಕ್ತ ಜಿಹ್ವಾಗ್ರ ಮಧು ಪ ಪರಮೇಶ್ವರಿ ಪರಿಪೂರ್ಣಾಂಬಿಕ ನಿಜ ಪರಮಾನಂದ ಪರೇ ಪರತರವಸ್ತು ಪರಾತ್ಪರ ಶಾಂಭವಿ ಸುರಮುನಿ ಅಭಯಕರೇ ಜಯಜಯ 1 ವೀಣಾ ಪುಸ್ತಕಧಾರಿಣೆ ಅಗಣಿತ ಪಾನಪಾತ್ರಪ್ರಿಯೇ ವಾಣಿನಿತ್ಯಕಲ್ಯಾಣಿ ವಂದಿತಗುಣ ಶ್ರೇಣಿ ಮುನೀ ಸಾಹ್ಯೇ ಜಯಜಯ 2 ಹರಿಮೋಹಿನಿ ಹರಿವಾಹಿನಿ ಗಿರಿಸುತೆ ಹರಿಣಾಂಕಿಣಿ ಭವ್ಯಮುಖೆ ಹರಿಸಖ ಪ್ರಾಣಸಖೇ ಜಯಜಯ 3 ಸರ್ವಗುಣನಿಲಯೇ ಸರ್ವಾತ್ಮಕಿ ಸರ್ವಯಂತ್ರರೂಪೇ ಶರ್ವಾಣೆ ಸರ್ವೇಶ್ವರಿ ಸದಾಶಿವೇ ಸರ್ವ ಮಂತ್ರರೂಪೇ ಜಯಜಯ 4 ಮೂಲಾಧಾರೇ ಮುಕುಂದಾರ್ಚಿತ ಪದ ಬಾಲಾ ತ್ರಿಪುರಹರೇ ಮಾಲಿನಿ ಮಂತ್ರಾತ್ಮಕಿ ಮಹಾದೇವಿ ತ್ರಿ ಶೂಲಿನಿ ಶಶಿಶಿಖರೇ ಜಯಜಯ 5 ನಿತ್ಯಾರ್ಚನಿ ಸುಖಭೋಗಿನಿ ಸುಲಲಿತೇ ನಿತ್ಯಾನಂದಮಯೇ ನಿತ್ಯಾನಿತ್ಯ ಸ್ವರೂಪಿಣಿ ನಿರ್ಗುಣೆ ಸತ್ಯ ಸಾಧು ಹೃದಯೇ ಜಯಜಯ 6 ಶಂಭಾಸುರಮಹಿಷಾ ಸುರಮೇಕ್ಷಕ ದಂ¨ ಮುಕುಟಧರೇ ಅಂಬಾ ಶ್ರಿ ಮಹಾಕಾಳಿ ವಿಮಲಾನಂದ ಸುಖ ಶರೀರೇ ಜಯ ಜಯ 7 ಇತಿ ಶ್ರೀ ಮಹಾಕಾಳ್ಯಷ್ಟಕ ಸ್ತೋತ್ರಂ ತ್ರಿಕಾಲಪಠತೆ ನಿತ್ಯಂ ನಿತ್ಯಂ ನತಿಸುತಧನ ಪೌತ್ರಾದಿ ಕೃತಾರ್ಥಂ ಭವತಿ ಸತ್ಯಂ ಸತ್ಯಂ ಜಯಜಯ 8
--------------
ಭಟಕಳ ಅಪ್ಪಯ್ಯ
ಮಂಗಳ ಪದ್ಯಗಳು ಜಯತು ಕರಿಕಾನೇಶ್ವರಿ ಜಯತು ನೀಲ್ಕೋಡೇಶ್ವರಿ ಪ ಜಯತು ಪರಮೇಶ್ವರಿ ಜಯತು ಶ್ರೀ ಮಹೇಶ್ವರಿ ಜಯತು ಶ್ರೀ ಭುವನೇಶ್ವರಿ ಜಯತು ಶ್ರೀ ವಜ್ರೇಶ್ವರಿ 1 ಜಯತು ಶ್ರೀ ಕಮಲಾಕ್ಷಿದೇವಿ ಜಯತು ಶ್ರೀ ಮಹಾಲಕ್ಷಿದೇವಿ ಜಯತು ಶ್ರೀ ಗಾಯಿತ್ರಿ ದೇವಿ ಜಯತು ತ್ರೈಪುರ ಭೈರವಿ 2 ಜಯತು ತಾರಾ ಕಾಳಿದೇವಿ ಜಯತು ಶ್ರೀ ಮಹಾಕಾಳಿದೇವಿ ಜಯತು ಛಿನ್ನಮಸ್ತದೇವಿ ಜಯತು ಶ್ರೀ ಮಾತಂಗಿದೇವಿ 3 ಜಯತು ಷೋಡಶಿ ಶಕ್ತಿದೇವಿ ಜಯತು ಬಹುಚರಾ ಶಾಂಭವಿ ಜಯತು ಪೀತಾಂಬರ ಸುದೇವಿ ಜಯತು ಮಹಾಮಾಯಿ ದೇವಿ 4 ಜಯತು ಶ್ರೀ ಲಲಿತಾಂಬಿಕಾ ಜಯತು ಶ್ರೀ ದುರ್ಗಾಂಬಿಕಾ ಜಯತು ಶ್ರೀ ಮೂಕಾಂಬಿಕಾ ಜಯತು ಶ್ರೀ ಜಗದಾಂಬಿಕಾ 5 ಜಯತು ಶ್ರೀ ಧೂಮಾವತಿ ಜಯತು ಮಹಾಸರಸ್ವತಿ ನಿತ್ಯ ಕಲಾವತಿ ಜಯತು ಮಾತಾ ಪಾರ್ವತಿ 6
--------------
ಕರ್ಕಿ ಕೇಶವದಾಸ
ಮಂಗಳಂ ಮಂಗಳಂ ತುಲಸಿದೇವಿಗೆ ಪ ಮಂಗಳಂ ರಂಗನ ಅರ್ಧಾಂಗಿಗೆ ಮಾಧವ ಮಂಗಳ ಭಕ್ತರ ಸಲಹುವ ತಾಯಿಗೆ ಮಂಗಳ ಮಹಿಷಾಸುರಮರ್ದಿನಿಗೆ 1 ಮಂಗಳ ಮಂದಾರ ವನವಾಸಿಗೆ ಶರಧಿ ಉದ್ಭವಳಿಗೆ ಮಂಗಳ ರಾಮದಾಸಗಭಯವಿತ್ತವಳಿಗೆ ಮಂಗಳ ಸಂಜೆಯೊಳ್ ಪೂಜೆಗೊಂಬುವಳಿಗೆ 2 ಮಂಗಳ ನಾರದನುತ ಅಂಬೆಗೆ ಮಂಗಳ ಸೇವಿತ ಸುರ ಸಮುದಾಯಗಳಿಗೆ ಮಂಗಳ ಮನೋಭೀಷ್ಟದಾಯಕಳಿಗೆ ಮಂಗಳ ಹರಿದ್ರಾ ಕುಂಕುಮನಿಡುವಳಿಗೆ 3 ಮಂಗಳ ಕೃಷ್ಣನ ಅಂತಸ್ಥಿತಳಿಗೆ ಮಂಗಳ ಜಗನ್ಮೋಹನ ದೇವಿಗೆ ಮಂಗಳ ಹಾಟಕ ಸಮಕಾಂತ್ಯಾವಳಿಗೆ ಮಂಗಳ ಬೃಂದಾವನ ದೇವಿಗೆ 4 ಕಮಲ ಲೋಚನದೇವಿಗೆ ಮಂಗಳ ಪೀತಾಂಬರಧಾರಿ ಸುಂದರಿಗೆ ಮಂಗಳ ಸರ್ವಾಭರಣ ಭೂಷಿತಳಿಗೆ ಮಂಗಳ ವಿಜಯ ರಾಮಚಂದ್ರವಿಠಲನ ರಾಣಿಗೆ 5
--------------
ವಿಜಯ ರಾಮಚಂದ್ರವಿಠಲ
ಮಂಗಳಂ ಮಂಗಳಂ ಮಾರಮಣಗೆ ಪ ಕುಂಡಲಿ ಶಯನಗೆ ಗುಣನಿಧಿಗೆ ಪುಂಡರೀಕಾಕ್ಷ ಶ್ರೀ ಪುರುಷೋತ್ತಮಗೆ 1 ಸರ್ವಪ್ರಾಣಿಗಳ ಹೃತ್ಕಮಲನಿವಾಸಗೆ ಉರ್ವಿಭಾರವ ಪರಿಹರಿಸಿ ಭಕ್ತರ ಕಾಯ್ವ ಸಾರ್ವಭೌಮ ಹರಿಸರ್ವೋತ್ತಮಗೆ 2 ಭಾಗ್ಯವಲ್ಲಿ ಹನುಮನೊಡೆಯನಮ್ಮ ಗುರುರಾಮ ವಿಠಲ ಶ್ರೀ ಕೃಷ್ಣಮೂರುತಿಗೆ3
--------------
ಗುರುರಾಮವಿಠಲ
ಮಂಗಳಂ ಮಂಗಳಂ ರಂಗನಿಗೇ | ಜಯಮಂಗಳವೆನ್ನಿ ಶ್ರೀ ವೆಂಕಟಗೇ ಪ ಪತಿ ಮಾಧವ ಹರಿಗೇ 1 ನೀರಜಜ ಗೋರೂಪಿ | ಸಾರಿ ಪುತ್ತಾಶ್ರಿತಗೆಕ್ಷೀರಾಭಿಷೇಚಿಸಿ | ಸಾರುತಿರೆ ನೃಪ ಗೃಹ |ಮಾರನೆ ದಿನ ಗೋ | ಚಾರ ಕೊಡಲಿ ಹತಿಗೆದೂರ ಸರಿಸಿ ಗೋವ | ಶಿರವನೊಡ್ಡಿದಗೇ 2 ನಗ ವೆಂಕಟಾದ್ರೀಲಿಅಘಹರ ಲೀಲೆಗಳ್ | ಸೊಗಸಾಗಿ ತೋರ್ವಗೇ 3 ಆವಾವ ಬಗೆಯಿಂದ | ಜೀವನಧ್ಯಾತ್ಮದಿಓಧಿ ಸಾಧನೆಗೈದು | ದೇವನ ಪದ ಸಾರುವಭಾವವನರುಹುಲು | ಊರ್ವಿಯೊಳವತರಿಸಿಮಾವಾರಿ ನಟಿಸುತ್ತ | ಜೀವರ ಪೊರೆವಗೇ 4 ದೇವ ದೇವ ನಮ್ಮ | ಗೋವ ಪರಿಪಾಲಕಮಾವಿನೋದಿಯು ಗುರು | ಗೋವಿಂದ ವಿಠಲಭೂವೈಕುಂಠಸ್ಥನು | ಕಾವ ಭಕ್ತರನೆಲ್ಲ ಈ ವಿದಧಿ ತುತಿಪರ್ಗೆ | ಭಾವದಿ ಒದಗುವಗೇ5
--------------
ಗುರುಗೋವಿಂದವಿಠಲರು
ಮಂಗಳಂ ಮಂಗಳಂ ಲಕ್ಷ್ಮೀಶಗೆ ಮಂಗಳಂ ಮಾಕಮಲಾಸನ ವಂದಿತ ಶೃಂಗಾರಶೇಖರ ತುಂಗಗಿರೀಶ ಪ. ಶ್ರೀಲೋಲ ಶುಭಗುಣಜಾಲಪಾಲಿತ ಸತ್ವ ಶೀಲ ಸುಂದರ ವನಮಾಲ ನೀಲಕುಂತಲ ನಿರ್ಜಿತಾಳಿ ಕುಲಾನನ ಕಪೋಲ ಗೋಪಾಲ 1 ಶರಣಾಗತ ರಕ್ಷಕರಣ ಧುರೀಮ ಮ- ದ್ಫರಣ ತ್ರಿಲೋಕೀ ಧಾರಣ ಕರುಣಾಮೃತ ಹರ ತರುಣಾರ್ಕ ಕೋಟಿಭಾ ಭರಣ ರಮಾಧೃತ ಚರಣಾರವಿಂದ 2 ನಿತ್ಯ ಪದ್ಮ ಸರೋವರ ಪದ್ಮ ನಿರಂತರ ಸಂಚಾರ ಪದ್ಮನಾಭ ಹೃತ್ಪದ್ಮ ಸುಸಂಸ್ಥಿತ ಪದ್ಮ ಪತ್ರ ನೇತ್ರ ಪದ್ಮಜ ಜನಕ 3 ಇಂದಿರಾವರ ಪೂರ್ಣೇಂದು ನಿಭಾನನ ವಂದನೀಯ ವಾಸುದೇವ ಮಂದಿರೆ ಮಮ ನಿತ್ಯಾನಂದದಾಯಿ ನಿಜ ಬಂಧುತಯಾಸ್ಥಿತ ಮಂದಹಸಿತೆ 4 ದಾಸೀಕೃತ ಕಂಜಜೇಶಾಹೀಶ ವಿ- ವೇಶಾಮರೇಶ ರಮೇಶಾ ಶೇಷ ಭೂಧರ ನಿಜ ವಾಸ ದಯಾರಸ ಮಾಶುಪ್ರವರ್ಷಯ ಹೇ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳಂ ಮಧುಕೈಟ ಭಾರಿಗೇ - ಜಯಮಂಗಳ ಯದುಕುಲಾಂಬುಧಿ ಚಂದ್ರಗೇ ಪ ಗೋಕುಲದೊಳು ಪುಟ್ಟಿ ಗೋಗಣಂಗಳ ಕಾಯ್ದುರಾಕೇಂದು ವದನೇರ ಕೂಡಿದ ಸರಸಿಗೇ 1 ಪಾಲನ ಲಯ | ಒಟ್ಟಾಗಿ ಮಾಳ್ಪಂಥಕೃಷ್ಣೆ ಗಕ್ಷಯಫಲ ಕೊಟ್ಟಂಥ ಹರಿಗೇ2 ಬೃಹತೀ ಸಹಸ್ರನ್ನ ಬಹುವಾಗಿ ಉಂಡಗೇಮಹ ಋಷಿಗ್ವರವಿತ್ತ | ಶ್ರೀ ಉಪೇಂದ್ರಗೆ 3 ಲಕ್ಕುಮಿಯನು ತಾನು | ಲೆಕ್ಕಿಸದಲೆ ವೇಗಪೊಕ್ಕುಳಿಂದಲಿ ಅಜನ | ಪಡೆದ ಶ್ರೀಹರಿಗೇ 4 ಗರುಡ ಗಮನನಾಗಿ | ಕರಿಯ ಕಾಯಲಿ ಬಂದುಹರುಷವ ಪಡಿಸೀದ | ಗುರು ಗೋವಿಂದ ವಿಠಲಗೇ 5
--------------
ಗುರುಗೋವಿಂದವಿಠಲರು
ಮಂಗಳಂ ಮಹಾಗಂಗೆ | ಭಕುತ ಮನೋಹಾರಿಗೆ | ಮಂಗಳಂ ಬಲುದುರಿತ ಸಂಹಾರಿಗೆ | ಮಂಗಳಂ ಪ್ರಯೋಗ ಕ್ಷೇತ್ರ ವಿಹಾರಿಗೆ ಕುಸುಮ ಚಿತ್ರಹಾರಿಗೆ ಪ ವೇಣಿಗೆ ನಿತ್ಯಕಲ್ಯಾಣಿಗೆ ಪಲ್ಲವ | ಪಾಣಿಗೆ ಗಂಭೀರ ಗುಣಶ್ರೇಣಿಗೆ | ತ್ರಾಣಿಗೆ ಕೋಕಿಲವಾಣಿಗೆ ಯಾದವನ | ರಾಣಿಗೆ ಮಣಿಹೇಮ ಭೂಷಣೆಗೆ 1 ಖ್ಯಾತಿಗೆ ತ್ರಿಲೋಕ ಮಾತೆಗೆ ಯ | ಮುನೆ ಸಂಘಾತಿಗೆ ಸರ್ವದಾ ಬಲುನೀತಿಗೆ | ಜಾತಿಗೆ ತುಹಿನಗಿರಿದಾತೆಗೆ ಲಕುಮಿಯ | ಅಮಿತ ಗುಣ ಪ್ರತಾಪಿಗೆ || 2 ಚನ್ನಿಗೆ ನಾರಿಕುಲರನ್ನಿಗೆ ಭಾಗ್ಯ ಸಂ | ಪನ್ನಿಗೆ ಸಗರಕುಲ ಪಾವನ್ನಿಗೆ | ಕಣ್ಣಿಗೆ ಪೊಳೆವ ಪ್ರಸನ್ನಿಗೆ ಸೀತಾ ಸು | ವರ್ನಿಗೆ ವಿಜಯವಿಠ್ಠಲ ಕನ್ನಿಗೆ 3
--------------
ವಿಜಯದಾಸ