ಒಟ್ಟು 17313 ಕಡೆಗಳಲ್ಲಿ , 134 ದಾಸರು , 7747 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀಯೆನ್ನ ಸದ್ಭಾಗ್ಯ ಆನಂದ ನಿಧಿಯೊ ಪ ಮಧುವೈರಿ ತಾಯಿಯಂದದಿ ಕಾಯೊ ಅ.ಪ ಏನಾಗುವ ಪ್ರೀತಿ ನಿನ್ನಿಂದ ಎನಗಯ್ಯ ಜ್ಞಾನಾದಿ ಆನಂದ ಸುಗುಣ ಸಿಂಧು ದೀನ ಬಾಂಧವ ನಿನ್ನಧೀನದವ ನಾನಯ್ಯ ನಿತ್ಯ ಪವಮಾನ ಹೃತ್ಸದನ 1 ವಿದ್ಯ ಬುದ್ಧಿ ಜ್ಞಾನ ಮನಕರಣ ಶಕ್ತಿ ಸದ್ಧೈರ್ಯ ಸುಖನಿಧಿಯು ನಿರ್ಭೀತ ಪದವಿ ಅದ್ವಯನೆ ನೀನೆನಗೆ ಅನಿಮಿತ್ತ ಬಂಧು ಹರಿ ಸಿದ್ಧಿಸೈ ಈ ಜ್ಞಾನ ಸರ್ವಕಾಲದಿ ದೇವ 2 ನಾನು ನನ್ನದು ಎಂಬ ದೋಷದ ಮಕರಿ ಗಾನೆ ಸಿಕ್ಕಿದ ತೆರದಿ ಮೊರೆಯುತಿಹೆನೊ ದಾನವಂತಕನೆ ಶ್ರೀ ಜಯೇಶವಿಠಲ ದೀನ ಕರಿಯನು ಪೊರೆದ ತೆರದಿ ಸಲಹೊ ಎನ್ನ 3
--------------
ಜಯೇಶವಿಠಲ
ನೀರ ತರಂಗಿಣಿ ತೀರ ನಾರಸಿಂಹ ಪ ಸಾರಿದೆನೊ ತವಪಾದ ಪಂಕಜ ತೋರು ಮನದಲಿ ತವಕದಿ ಅ ನಾರದನುತ ಚಿಚ್ಛರೀರವ ಶ್ರೀ ಭೂದು ರ್ಗಾರಮಣ ದುರಿತಾರಿ ಬ್ರಹ್ಮ ಸ ಮೀರ ಮುಖ ವಿಬುಧಾರ್ಚಿತ ಚಾರು ಚರಣಯುಗ ಕ್ಷೀರಾಬ್ಧಿ ಶಯನ ಮ ದ್ಭಾರ ನಿನ್ನದು ಮೂರು ಲೋಕದ ಸೂರಿಗಮ್ಯ ಸುಖಾತ್ಮಕ 1 ವೇದವೇದ್ಯ ಸಂಸಾರೋದಧಿ ತಾರಕ ಛೇದ ಭೇದ ವಿಷಾದವೇ ಮೊದ ಶ್ರೀದ ಶ್ರೀಶ ಅನಂತ ಆಪ್ತಕಾಮ ಬಾದರಾಯಣ ಭಕ್ತವರ ಪ್ರ ಹ್ಲಾದಪೋಷಕ ಪಾಹಿ ಮಾಂ 2 ಹೋತಹೃದ್ಯ ಜಗನ್ನಾಥವಿಠಲ ನಿನ್ನ ಮಾತು ಮಾತಿಗೆ ಸ್ಮರಿಸುತಿಹ ಸ ಚ್ಚೇತನರನು ನೀ ಸರ್ವದಾ ವೀತಶೋಕ ಭವಭೀತಿ ಬಿಡಿಸಿ ತವ ದೂತರೊಳಗಿಡು ಮಾತರಿಶ್ವಗ ಭೂತಭಾವನ ಭವ್ಯದ3
--------------
ಜಗನ್ನಾಥದಾಸರು
ನೀರಜ ನೇತ್ರ ನಿನ್ನ ಪಾದಂಗಳ ನಂಬಿದೆ ಕೊನೆಗೆ ಪ ಶ್ರುತಿಹಿತ ಧರ್ಮವಿಶ್ರುತ ನಾನಲ್ಲ ಸತತವು ಜ್ಞಾನಿಯ ಜೊತೆ ಸೇರಲಿಲ್ಲ 1 ಭಕ್ತಿಪಥದಿ ಮನವರ್ತಿಸಲಿಲ್ಲ ಯುಕ್ತಿಯಿಂ ವಿಷಯ ವಿರಕ್ತನಾನಲ್ಲ 2 ಗುರುಕುಲವಾಸದ ಗುರುತೆನಗಿಲ್ಲ ಪರಮ ಭಾಗವತರ ಪರಿಚರ್ಯವಿಲ್ಲ 3 ಮಂತ್ರಾರ್ಥದ ಬೋಧೆ ಮನದೊಳಗಿಲ್ಲ ತಂತ್ರದೊಳಗೆ ಜಾಣ್ಮೆ ಎನಗಿನಿತಿಲ್ಲ 4 ಸಜ್ಜನ ಸಹವಾಸದುಜ್ಜುಗವಿಲ್ಲ ದುರ್ಜನರ ಸಂಗತಿ ವರ್ಜಿಸಲಿಲ್ಲ 5 ಹರಿಕಥೆ ಮಾಡುವ ಪ್ರಜ್ಞೆ ನನಗಿಲ್ಲ ದುರುಳ ಕಾಮುಕಸಂಗ ಕಿರಿದಾಗಿಲ್ಲ 6 ಪರಿಪರಿ ಕಷ್ಟವ ಪರಿಹರಿಸುವನೆ ಪರಮಶ್ರೀಪುಲಿಗಿರಿ ವರದವಿಠಲನೆ 7
--------------
ವೆಂಕಟವರದಾರ್ಯರು
ನೀರಜ ಯುಗ ಮನೋ - ವಾರಿಜದಲಿ ನಾ ಭಜಿಸುವೆನು ಪ ಸಾರಿದ ಜನರ‌ಘದೂರದಿ ಓಡಿಸಿ ಧಾರುಣಿಯೊಳು ಸುರಸೌರಭಿ ಎನಿಸಿಹ ಅ.ಪ ಅವರ ಪದಜಲ ಈ ಭುವನತ್ರಯ ಪಾವನ ತರವೆಂದೆನಿಸುವದೋ ಅವರ ಪದಯುಗ ಕೋವಿದಜನರು ಭಾವದಿ ದಿನದಿನ ಸೇವಿಪರೋ ಅವರ ಹೃದಯದಿ ನಾರಾಯಣ ಚ - ಕ್ರಾವತಾರವ ಧರಿಸಿಹನೊ ಶ್ರೀವರ ಹರಿ ಕರುಣಾವಲೋಕನದಿ ದೇವಸ್ವಭಾವವ ನೈದಿಹರೋ 1 ಆವ ಮಾನವನಿವರಚರಣ ಸೇವಕತೆರನೆಂದೆನಿಸುವನ್ನೋ ಕೋವಿದ ಜನರೆಲ್ಲರು ಆವನ ದೇವೋತ್ತುಮನೆಂದೆನಿಸುವನು ಪಾವನಿ ಮುಖ ದೇವೋತ್ತುಮರೆಲ್ಲರು ಈ ವಿಧ ಮಹಿಮೆಯ ತೀವ್ರದಿ ತೋರುವ 2 ಅವರು ಅವನೀ ದೇವತೆಗಳಿಗೆ ಜೀವನವಿತ್ತು ಪೊರೆದಿಹರೋ ಪಾವಕಘಾಕಿದ ಹಾರವ ಮತ್ತೆ ಭೂವರನಿಗೆ ತಂದಿತ್ತಿಹರೋ ಮಾವಿನ ರಸದಲಿ ಬಿದ್ದಿಹ ಶಿಶುವಿಗೆ ಜೀವನವಿತ್ತು ಕಾಯ್ದಿಹರೋ ಶೈವನ ನಿಜಶೈವವ ಬಿಡಿಸೀ ತಮ್ಮ ಸೇವೆಯನಿತ್ತು ಕಾಯ್ದಿಹರೋ 3 ಸಲಿಲವ ತಂದಿರುತಿಹ ನರನಿಗೆ ಸುಲಲಿತ ಮುಕ್ತಿಯನಿತ್ತಿಹರೋ ಚಲುವ ತನಯನಾ ಪುಲಿನದಿ ಪಡೆದಿಹ ಲಲನೆಯ ಚೈಲದಿ ಕಾದಿಹರೋ ಸಲಿಲವು ಇಲ್ಲದೆ ಬಳಲಿದ ಜನಕೆ ಸಲಿಲವನಿತ್ತು ಸಲಹಿದರೋ ಇಳೆಯೊಳು ಯತಿಕುಲತಿಲಕರೆಂದೆನಿಸಿ ಸಲಿದಂಥದು ತಾವು ಸಲಿಸಿಹರೋ 4 ಅನುದಿನದಲಿ ತಮ್ಮ ಪದಕಮಲವನು ಮನದಲಿ ಬಿಡದೆ ಭಜಿಸುವರಾ ಜನರಿಗೆ ನಿಜಘನಸುಖವನು ಕೊಟ್ಟವ - ರನುಸರಿಸೀ ಇರುತಿಹರಾ ಮನೋ ವಾಕ್ಕಾಯದಿ ನಂಬಿದ ಜನಕೆ ಜನುಮವನ್ನುನೀಡರು ಇವರ ಘನಗುಣ ನಿಧಿ ಗುರುಜಗನ್ನಾಥ ವಿಠಲ - ನಣುಗಾಗ್ರೇಸರೆರೆನಿಸಿಹರಾ 5
--------------
ಗುರುಜಗನ್ನಾಥದಾಸರು
ನೀರಜದಳ ನೇತ್ರ ರಂಗಾ ಪುನ್ನಾಗೋತ್ತುಂಗ ಪ ಕ್ಷೀರವಾರಿಧಿ ನಿಲಯ ಶುಭಾಂಗ ಶ್ರೀರಮಾಲಿಂಗ ಅ.ಪ ವಿನುತ ಕರುಣಾ | ಪಾರ ಭಕ್ತ ವಿಹಾರ ಕಂಕಣ 1 ಸಂಸಾರಾಂಬುಧಿ ತರಣ ಶೌರೀ | ಹಂಸಗಮನನುತ ಮುರಾರಿ ಕಂಸವೈರಿ ಚಕ್ರಧಾರಿ | ಹಿಂಸೆ ಬಿಡಿಸೊ ಸೂತ್ರಧಾರಿ2 ಕರಿರಾಜವರದಾ ಸುಧಾಂಗ ತರಳ ವಾಮನಾಂಗ ಶುಭಾಂಗ ಕರುಣಾಪಾಂಗ ಮಾಂಗಿರಿರಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀರಜದಳನಯನಾ ಅನ್ಯನಲ್ಲ ನಾ ನಿನ್ನ ದಾಸನುಯಂದು ಚಿನ್ಮಯ ಮೂರುತಿ ಶ್ರೀನಿವಾಸಹರೆ ಪ ಪಂಕಜೋದ್ಭವನಾ ಪಡೆದಂಥಾ ವೆಂಕಟಗಿರಿನಿಲಯ ವೇಣುನಾದಪ್ರೀಯಾ ಬಿಂಕಾದಿ ಶರಣರ ಪೊರೆದಂಥಾ ಚಕ್ರಧರ ಶೌರಿ ಮಹಾನುಭಾವ ಬಿಂಕದಾನವರಳಿದ ಬಲವಂತಾ ಶಂಕೆಯಿಲ್ಲದೆ ನಿಮ್ಮ ಸ್ಮರಿಸುವ ದಾಸರ ಕಿಂಕರ ಕಿಂಕರ ಕಿಂಕರನೆಂದು ಇನ್ನು 1 ವಾಸುಕಿಶಯನ ಶ್ರೀ ವಸುದೇವನಂದನ ಭೂಸರವಂದ್ಯ ಪುರಾಣ ಪುರುಷ ಈಶ ಜಗತ್ರಯ -----ರಾಜವರದಾ ಭೂಸುತೋನಾಯಕ ಭೂರಮಣಾ ಸಾಸಿರನಾಮದ ಸರ್ವೇಶನೆ ಕೃಷ್ಣಾ ಭೂಸೂರ ಕೀರ್ತಿ ಪ್ರಕಾಶನಾದ ಕೇಶವ ಗೋವಿಂದ ಕರುಣಿಸಿ ಕಾಯೋ ಎನ್ನ ಪಾದ ವೈಕುಂಠಾಧೀಶ 2 ಅಂಡಜಗಮನ ಭೂಮಂಡಲ ನಾಯಕ ಪುಂಡರೀಕಾ ವರದ ಪರಮಾತ್ಮನೆ ಚಂಡ ಪ್ರಚಂಡ ವೇದಾಂತ ರಹಸ್ಯನಾದ ಉದ್ದಂಡ ದೇವಾ ಕೊಂಡಾಡುವರ ನಿಮ್ಮ ಕರುಣಿಸಿ ಕೈಹಿಡಿದು ಕಾಯ್ವ ಭಾರವುಳ್ಳ ಘನನು ನೀನೂ ಪತಿ ` ಹೆನ್ನ ವಿಠ್ಠಲ' ನಿನ್ನಂದು ಸೇರಿದ ಅವರ ಹರುಷದಿ ಸಲಹೋ ಇನ್ನೂ 3
--------------
ಹೆನ್ನೆರಂಗದಾಸರು
ನೀರಜಾಕ್ಷ ನಿರ್ದಯವ್ಯಾಕೊ ಕರುಣದಿ ಎನ್ನಾ ಪ ಒಡಲಿಗನ್ನಾ ತೊಡಲು ಅರಿವೆ ಕೊಡುವವರನು ನಾ ಕಾಣೆ ಹರಿಯೇ ಬಡತನ ಕಂಗೆಡಿಸಿತೋ ಕಡೆಗ್ಹಾಯಿಸಯ್ಯ ತ್ವರದಿ ಗುಣಮಣಿಯೇ 1 ಖೂಳ ಜನರ ಆಳಾಗಿ ನಾ ಹಾಳು ಒಡಲನ್ನು ಹೊರೆಯಲಾರೇ ಕೂಳಿಗೋಸುಗ ಬಾಳಾಯ್ತೀಪರಿ ತಾಳಲಾರೆ ಕಾಯೋ ಮುರಾರೇ2 ನೀ ಕೈಬಿಡಬ್ಯಾಡೋ ಶ್ರೀ ಹನುಮೇಶವಿಠಲನೆ ಎನ್ನಾ ಇಷ್ಟದಂದರಿ ಥಟ್ಟನೆ ಮಾಡೋ 3
--------------
ಹನುಮೇಶವಿಠಲ
ನೀರಜಾಕ್ಷೇರೆಲ್ಲ ಬಂದು ಮಾರಜನಕಗೆ ಆರತಿ ಎತ್ತಿರೇ ನಾರಿಮಣಿ ಶ್ರೀ ರುಕ್ಮಿಣಿಮಣಿಗೆ ಪ ವೇದವನು ಕದ್ದ ಖಳನ ಬೇಧಿಸಿದವಗೆ ಆದರದಿಂದ ಮಂದರವೆಂಬೋ ಭೂಧರ ತಂದವಗೆ 1 ಕುಂಭಣಿಯನ್ನು ಬಿಡದೆ ತಂದ ಕುಂಭಿಣಿರಮಣಗೆ ಕಂಭದಿ ಬಂದು ದನುಜ ಡಿಂಭನ ಕಾಯ್ದ ನೃಹರಿಗೆ 2 ಭೂಮಿ ಬೇಡಿದವನಿಗೆ ದುಷ್ಟ ಭೂಮಿಪ ಹರನಿಗೆ ಕಾಮಿನಿಚೋರನ ಶಿರವ ತರಿದ ಸ್ವಾಮಿ ರಾಮಗೆ 3 ಪಾಂಡುಸುತರ ಸಲಹಿ ಖಳರ ದಂಡಿಸಿದವಗೆ ಚಂಡತ್ರಿಪುರರ ಹೆಂಡರ ವ್ರತವ ಖಂಡನೆ ಮಾಳ್ಪಗೆ 4 ದುರುಳ ನೃಪರ ತರಿದ ಕಲ್ಕಿಗೆ ವರದ ನಾಮಗಿರಿ ಶ್ರೀಹರಿಯ ಚರಣಕಮಲಕೆ 5
--------------
ವಿದ್ಯಾರತ್ನಾಕರತೀರ್ಥರು
ನೀರಧಿಶಯನ ಮುಕುಂದ ಹರಿನಾರಾಯಣ ಗೋವಿಂದ ಪ ಪ್ರಚಲಿತ ಲಯ ಜಲ ವಿಹರಣ ಶಾಶ್ವತ ಅಚಲೋದ್ಧರಣ ಸಮರ್ಥ ಸದಾಶ್ರಿತ ಪಂಚಾನನ ಪ್ರಖ್ಯಾತ 1 ಮಂದಾಕಿನಿ ಪಿತ ದೇವ ತ್ರಿವಿಕ್ರಮ ನಂದಿತ ಗೋಕುಲ ವೃಂದ ಪರಾಕ್ರಮ ಸಿಂಧುನಿಬಂಧನ ರಾಮಾನಂದದ ಸುಂದರ ಶ್ಯಾಮ 2 ಬುದ್ಧ ಸುವೇಶ ಶ್ರೀಕರ ಕಲ್ಕಿ ಪಾಹಿ ನಿರ್ದೋಷ ಕಾಕೋದರ ಗಿರಿವಾಸ ಜಯ ಶ್ರೀಕಾಂತ ಶ್ರೀ ಶ್ರೀನಿವಾಸ 3
--------------
ಲಕ್ಷ್ಮೀನಾರಯಣರಾಯರು
ನೀರಿನಿಂದಲೆ ಸರ್ವಫಲ ಬಾಹೋದು ನೀರಜಾಕ್ಷನ ಸೇವೆ ಮಾಳ್ಪ ಸುಜನರಿಗೆ ಪ ನೀರಿಲ್ಲದಲೆ ಯಾವ ಸಾಧನವು ನಡೆಯದು ನೀರಿಲ್ಲದಲÉ ಯಾಗ ತಪಸ್ಸು ನಿಲ್ಲುವದು ನೀರಿಲ್ಲದಲೆ ಸ್ನಾನ ಆಚಾರಹೀನವು ನೀರಿಲ್ಲದಲೆ ದೇವತಾರ್ಚನೆಯು ಇಲ್ಲವು 1 ನೀರೆಂದರೆ ಬರಿಯ ಜಡವಾದ ನೀರಲ್ಲ ನೀರಜಾಕ್ಷನು ಜಲದಿ ವಾಸವಾಗಿಹನು ವಾರಿಜಾಸನ ಮುಖ್ಯ ಸುರರೆಲ್ಲ ಹರುಷದಲಿ ನೀರಮಧ್ಯದೊಳಿರುವ ಹರಿಯಧ್ಯಾನಿಪರೆಲ್ಲ2 ಉದಯಕಾಲದಿ ಮುಖವ ತೊಳೆಯೆ ಜಲವಿರಬೇಕು ಮಧುಸೂದನನ ಮನೆಯ ಸಾರಿಸಲು ಜಲಬೇಕು ಹೃದಯ ಶುದ್ಧದಿ ಸ್ನಾನ ಮಾಡೆ ಜಲವಿರಬೇಕು ಮುದದಿ ಮಡಿಯುಡುವುದಕೆ ಉದಕವಿರಬೇಕು3 ಮೃತ್ತಿಕಾಶೌಚಕ್ಕೆ ಅಗತ್ಯಜಲವಿರಬೇಕು ನಿತ್ಯ ಗೋಸೇವೆಗೆ ಉದಕಬೇಕು ಮತ್ತೆ ಶ್ರೀ ತುಳಸಿಗೆರೆಯಲು ಉದಕವಿರಬೇಕು ಮತ್ತೆ ಹರಿಪೂಜೆಗಗ್ರೋದಕವು ಬೇಕು4 ಸಚ್ಚಿದಾನಂದನ ಅಭಿಷೇಕಕ್ಕೆ ಜಲಬೇಕು ಮತ್ತೆ ಪಾಕವು ಮಾಡೆ ಜಲವುಬೇಕು ನಿತ್ಯ ತೃಪ್ತನ ನೈವೇದ್ಯಕ್ಕೆ ಜಲವು ಬೇಕು ಅರ್ತಿಯಿಂದ ಅತಿಥಿ ಪೂಜೆಗೆ ಉದಕಬೇಕು 5 ಪಾದ ತೊಳಿಬೇಕು ಮತ್ತೆ ಅವರಿಗೆ ಸ್ನಾನಕಣಿ ಮಾಡಬೇಕು ಸುತ್ತ ಬೆಳೆÀಗಳಿಗೆಲ್ಲ ಮತ್ತೆ ನೀರಿರಬೇಕು ಸತ್ಯ ಮೂರುತಿ ಪಾದದಂಗುಷ್ಟದಲಿ ಜನಿಸಿದ6 ನಿತ್ಯ ಎರೆಯೆ ನೀರಿರಬೇಕು ಕುಸುಮ ಪುಷ್ಪದ ಗಿಡಕೆ ನೀರುಬೇಕು ವಸುದೇವಸುತನ ತೆಪ್ಪೋತ್ಸವಕೆ ಜಲಬೇಕು ಎಸೆವ ಕದಲಾರತಿಗೆ ಉದಕಬೇಕು 7 ನೀರಿನೊಳು ಹಾವಿನ ಮೇಲೆ ಮಲಗಿದ ಹರಿಯ ನಾಭಿನಾಳದ ತುದಿಯಲಿರುವ ಕಮಲದಲಿ ನೀರಜಾಸನನ ಪಡೆದಿರುವ ಮಹಿಮೆಯ ಕೇಳಿ ನೀರಿನಲಿ ಹರಿಯ ಅವತಾರ ರೂಪಗಳುಂಟು8 ನೀರಿನೊಳು ವಾರುಣಿಯಪತಿಯ ಶಯ್ಯದೊಳಿಹನು ನೀರಿನೊಳು ಮುಳುಗಿ ವೇದವ ತಂದನು ನೀರಿನೊಳು ಮುಳುಗಿ ಭಾರವ ಪೊತ್ತು ನಿಂತನು ನೀರಜಾಕ್ಷನು ನಾರಬೇರ ಮೆದ್ದಿಹನು 9 ನೀರಜೋದ್ಭವಪಿತನು ಕ್ರೂರರೂಪವ ತಾಳ್ದ ನೀರೆ ಅದಿತಿಯ ಪುತ್ರನಾಗಿ ನಿಂತ ನೀರಜಾಕ್ಷನು ಪರಶುವಿಡಿದು ಸಂಚರಿಸಿದನು ನೀರೆಗೋಸುಗ ಸಾಗರಕÉ ಸೇತುವೆಯ ಕಟ್ಟಿದನು10 ನೀರಿನೊಳು ಗಜದ ಶಾಪವ ಕಳೆದು ಪೊರೆದನು ನೀರೆ ದ್ರೌಪದಿಯ ಅಭಿಮಾನವನು ಕಾಯ್ದ ನೀರ ಮಧ್ಯದಿ ದ್ವಾರಕಾಪುರವ ರಚಿಸಿದನು ನೀರಜಾಕ್ಷಿಯರ ಕೂಡಿ ನೀರೊಳಗೆ ಆಡಿದನು 11 ಕಮಲ ಜಲದಲ್ಲಿಹುದು ಕಮಲನಾಭ ವಿಠ್ಠಲ ಜಲದೊಳೋಲ್ಯಾಡುವ ಶ್ರಮವ ಪರಿಹರಿಪ ಚಂದ್ರನು ಜಲದಿ ಪುಟ್ಟಿಹನು ಕಾಮಧೇನು ಐರಾವತವು ಪುಟ್ಟಿದ ಜಲವಯ್ಯ 12
--------------
ನಿಡಗುರುಕಿ ಜೀವೂಬಾಯಿ
ನೀರೆ ತೋರೆಲೆ ಜಗಪಾಲ ಮುಕುಂದನಾ| ಶೂಲಧರನ ಮಿತ್ರನಾ ಪ ಪಾಂಡವರಕ್ಷಕನಾ|ಪುಂಡಲೀಕಾಕ್ಷನಾ| ಚಂಡಕೋಟಿ ಪ್ರಕಾಶನಾ|| ಕುಂಡಲ ವಿಭೂಷಿತ ಗಂಡಸತ್ಕಪೋಲನಾ| ಪುಂಡಲೀಕಗತಿವರದನ ನಂದಕಿಶೋರನ1 ಪರಮ ವರಪುರಾಣ ಪುರುಷೋತ್ತಮನಾ| ಕಂಸಾಸುರ ಮರ್ದನ ಗೋಪಾಲನಾ|| ಉರಗಾರಿ ಗಮನನಾ ನಿರುಪಮ ಚರಿತನಾ| ವಾಸುದೇವ ಮುಕುಂದನಾ2 ಸನಕ ಸನಂದನಮುನಿ ಮಾನಸ ಹಂಸನಾ| ಅನುಪಮ್ಯನಂತ ಮಹಿಮಾ|| ವನರುಹ ಯೋನಿವಂದ್ಯನ ಮಧು ಸೂಧನ| ಘನಗುರು ಮಹಿಪತಿ ಸುತಪ್ರಭು ಶ್ರೀ ಕೃಷ್ಣನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೆಯರು ಸಾರುತ್ತ ಮುದದಿ ನೀರಜದಾರತಿ ಬೆಳಗಿದರು ಪ ಸೇರಿ ಸೀತಾ ನಾರೀಮಣಿಯಿಂ ರಾರಾಜಿಪ ಶ್ರೀರಾಮಗೆ ಅ.ಪ. ಕಂದರ್ಪಸತಿ ಸುಂದರಾಂಗಿಗೆ ಇಂದುವಂಶ ನಂದಿನಿ ಸೀತೆಗೆ 1 ಕರಾಂಬಕಿ ಲೋಕ ವಂದ್ಯೆಗೆ ಮಾತೃ ಮಾತೆಗೆ ಸೀತೆಗೆ 2 ಚಿತ್ತ ಮಿತ್ರೆ ಮೀನನೇತ್ರೆಗೆ ಧೇನುನಗರ ನಾಥೆಗೆ ಸೀತೆಗೆ 3
--------------
ಬೇಟೆರಾಯ ದೀಕ್ಷಿತರು
ನೀರೇರುಹಾನಯನ | ವಾರನಿಧಿ ನಡುಶಯನತೋರೆನಗೆ ತವ ಚರಣ | ಸುಗುಣ ಗಣ ಪೂರ್ಣ ಪ ಅಮಿತ ಕ್ಲೇಶ ಗೊಳಿಸದಂತೆನೀ ಸಲಹೋ ಎನ್ನ | ಶೇಷಾದ್ರಿ ವಾಸಾ ಪರೇಶಾ1 ಭವ | ಸಂಗದೊಳಗಿರಿಸೀಭಂಗ ಪಡಿಸುವಿ ದೊರೆಯೆ | ಶೃಂಗಾರ ನಿಧಿಯೇ |ಸಂಗ ವಿಷಯದಿ ಹರಿಸಿ ನಿ | ಸ್ಸಂಗನೆಂದೆನಿಸಿಲಿಂಗಾಂಗ ಕಳೆಯೊ ಹರಿ | ರಂಗ ಭವಹಾರಿ2 ಸಾಮಸನ್ನುತ ಚರಣ | ಭೂಮಗುಣಿ ಸುಸ್ತವನಪ್ರೇಮದಲಿ ಗೈವ ಮನ | ನೇಮವೀಯೆಲೊ ವಾಮನ |ಈ ಮಹಾ ಕಲಿಯುಗದಿ | ನಾಮ ನಿಸನ್ನದೆ ಗತಿಯೆಶ್ರೀಮಹೀ ಸೇವಿತನೆ | ರಾಮ ಗುಣಧಾಮ 3 ಭವ | ರೋಗ ವೈದ್ಯನೆ ಎನ್ನರೋಗ ಹರಿಸುವುದರಿದೆ | ಇದು ನಿನ್ನ ಬಿರುದೇ4 ನಿರವದ್ಯ ಆದ್ಯಾಅರುಹಲೇನಿಹುದಿನ್ನು | ಸರ್ವಜ್ಞ ನೀನಿನ್ನು ಒರೆವೆನೆಂಬಪರಾಧ | ಮರೆದು ಪಾಲಿಸು ಶ್ರೀಶ 5
--------------
ಗುರುಗೋವಿಂದವಿಠಲರು
ನೀರೊಳು ಮುಳುಗಿದಡೇನು ಫಲ ಪ (ಸಾರವ)ನೋದಿದಡೇನು ಫಲ ಅ.ಪ ಧರ್ಮದಾನದಿಂದೇನು ಫಲ 1 ಹರಿ ಹರಿಯೆಂದರದೇನು ಫಲ 2 ಸ್ತುತಿ ಪೂಜೆಗಳಿಂದೇನು ಫಲ 3 ವ್ರತಗಳ ಮಾಡಲದೇನು ಫಲ 4 ತನುವನು ಪೊರೆದರದೇನು ಫಲ || ಶ್ರೀನಿವಾಸನ ಪಾದವ ಸ್ಮರಿಸದೆ ದಿನವನು ಕಳೆದರದೇನು ಫಲ 5
--------------
ಸದಾನಂದರು
ನೀಲ ಸುಂದರ ಲೀಲವಿಗ್ರಹನೆ ಪ ಭಂಜನ ಬಾರೈ ಉರುಟಣೆಗೆ ಅ.ಪ. ಸಾರಸ ರೇಖರಂಜಿತ ಪಾದಪಂಕಜಕೆ ನವ್ಯಮಾದ ಸುಗಂಧ ಚೂರ್ಣವ ನಿಂದು ಲೇಪಿಸುವೆ 1 ಫಾಲ ಫಾಲ ದೇಶದಿ ನಾಂ ಇಂದು ತಿಲಕವ ತಿದ್ದಿ ನಿಲವೆನು ಪ್ರಾಣ ನಾಯಕನೆ 2 ಸಾಧು ರಕ್ಷಣ ದಕ್ಷ ರಾಕ್ಷಸ ಶಿಕ್ಷ ಭುಜಯುಗಕೆ ಶ್ರೀಧರಿತ್ರೀಫಾಲ ಲೋಲನೆ ಗಂಧವ ಲೇಪಿಸುವೆ 3 ಕಂಬುಕಂಠ ಶ್ರೀಕಂಠ ಮಿತ್ರನೆ ನಿನ್ನಯ ಕಂಠಕೆ ನಾಂ ಅಂಬುಜೋಪಮ ಹಸ್ತದಿ ಗಂಧವ ನಿಂದು ಲೇಪಿಸುವೆ 4 ಚಕೋರ ಚಂದ್ರನೆ ಮಾಲೆಯನರ್ಪಿಸುವೆ ಧೇನುನಗರ ಶ್ರೀರಾಮಚಂದ್ರನೆ ವೀಟಿಯ ಸ್ವೀಕರಿಸೈ 5
--------------
ಬೇಟೆರಾಯ ದೀಕ್ಷಿತರು