ಒಟ್ಟು 12527 ಕಡೆಗಳಲ್ಲಿ , 133 ದಾಸರು , 6731 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂಟರಾಗಿ ಬಾಗಿಲ ಕಾಯೋರು ಹರಿಯವೈಕುಂಠದಿ ರಂಗನಾಯಕನರಮನೆಯ ಪ. ಸುತ್ತ ವಿರಜಾನದಿ ಮತ್ತು ನಂದನ ವನಉತ್ತಮೋತ್ತಮ ವೈಕುಂಠಉತ್ತಮೋತ್ತಮ ವೈಕುಂಠದೊಳಗಿನ್ನುಮಿಂಚಿನಂತೆ ಹೊಳೆವೊ ಮುಕ್ತರು1 ಶ್ರೀದೇವಿ ತಾನು ಮುರಹರನ ಪುರದಾಗವಿರಜಾ ತಾನೆಂದು ಕರೆಸುತವಿರಜಾ ತಾನೆಂದು ಕರೆಸುತ ನಾನಾ ಪರಿಗಿಳಿ ಕೋಗಿಲಾಗಿ ಮೆರೆವೋಳು2 ಉತ್ತರ ದಿಕ್ಕಿನಲೆಥಳ ಥಳಿಸುವ ದ್ವಾರ ಮುತ್ತು ಮಾಣಿಕ್ಯ ಅಳವಟ್ಟಮುತ್ತು ಮಾಣಿಕ್ಯ ಅಳವಟ್ಟ ಹರಿಪುರರತ್ನದ ಝಲ್ಲೆ ಬಿಗಿದಾವೆÉ 3 ರಾಜಿ ಮಾಣಿಕ ಗೋಡೆ ಗಾಜಿನ ನೆಲಗಟ್ಟುಈ ಜೋಡು ದ್ರವ್ಯ ಎಲ್ಲಿಲ್ಲ ಈ ಜೋಡು ದ್ರವ್ಯ ಎಲ್ಲಿಲ್ಲ ಇದುನಮ್ಮ ಶ್ರೀದೇವಿಯರಸನ ಅರಮನೆ 4 ಕೇಶರ ಶ್ರೀಗಂಧ ಕಲವೆಲ್ಲ ಪರಿಮಳಬಿಸÀಜನೇತ್ರನರಮನೆಯಬಿಸಜನೇತ್ರೆಯರ ಮನೆಯಿಂದ ಕುಸುಮದ ವೃಷ್ಟಿಗರೆದಾವು5 ಉತ್ತರ ಪಾಲ್ಗಡಲೊಳು ಮುತ್ತು ಮಾಣಿಕರತ್ನಪಚ್ಚ ಕರ್ಪೂರ ಸುಳಿಗಾಳಿಪಚ್ಚ ಕರ್ಪೂರ ಸುಳಿಗಾಳಿ ಇದುನಮ್ಮ ಅಚ್ಯುತಾನಂತನರಮನೆಯ6 ಕೃಷ್ಣ ರಾಮೇಶನ ವಿಶಿಷ್ಠದ ವೈಕುಂಠಸೃಷ್ಟಿ ಮಾಡಿ ರಚಿಸಿದ ಸೃಷ್ಟಿ ಮಾಡಿ ರಚಿಸಿದ ನೋಡಲು ದೃಷ್ಟಿ ಸಾಲದು ಜನರಿಗೆ7
--------------
ಗಲಗಲಿಅವ್ವನವರು
ಬಟ್ಟ ಮುತ್ತಿನ ಸರವ ಕೊರಳೊಳಿಟ್ಟು ನೋಡುತಪುಟ್ಟ ಪುಟ್ಟ ಪಾದದಿಂದ ದಟ್ಟಡಿಯನಿಕ್ಕುತಅಟ್ಟಟ್ಟು ಕರೆದರೆ ಬಾರದೆ ಅಂಬೆಗಾಲನಿಕ್ಕಿ ಕೊಡವುತತಿಗೂಳುಗುಳೆಂದು ಮುಟ್ಟಿ ನಲಿದಾಡುತ ತಟ್ಟೆಗೆ ಮುಚ್ಚಿಗೆಯೆಂದುತಟ್ಟನೆ ಕೈಯನಿಡುತ ಪುಟ್ಟಮಕ್ಕಳೊಡನೆ ಚಂಡಾಡಿನಲಿದಾಡುವ ದಿಟ್ಟರಂಗಯ್ಯ 1 ರನ್ನ ದುಂಗುರ ಪದಕ ತಾಳಿಯನ್ನು ಹಾಕುವೆಸಣ್ಣ ಮಕ್ಕಳ ಕೂಡೆಲ್ಲಾ ಚಿನ್ನಿಕೋಲನಾಡುತಕನ್ನೆವೆಣ್ಣುಗಳ ಕಂಡು ಕಣ್ಣ ಸನ್ನೆ ಮಾಡುತಕಣ್ಣಮುಚ್ಚಾಲೆ ಆಟವ ಆಡಿ ನಲಿದಾಡುತ ತಾಹೊನ್ನ ಹಿಡಿ ಹೊನ್ನಾಟವನಾಡುತ ಶ್ರೀರಂಗಧಾಮ ಪನ್ನಗಶಯನ 2 ಕಾಲಿನಂದುಗೆ ಘಲಿರೆನೆ ನಳಿತೋಳನಾಡುತಬಾಲೆಯರ ಕೂಡೆ ಬಹು ಲೀಲೆಯ ಮಾತಾಡುತಶಾಲೆಗಳ ಸೆಳದು ಮರದ ಮೇಲೆ ಕುಳಿತು ನೋಡುತಹಾಲು ಬೆಣ್ಣೆ ಕಳ್ಳನೆಂಬ ದೂರುಗಳ ಕೇಳುತಲೋಲಾಕ್ಷಿಯರೊಳನಿಂಥಾ ಜಾಲಿಗಳ ಮಾಡುವ ಬಾಲಗೋಪಾಲ3 ಕಂಡು ನಿನ್ನನು ಪ್ರೇಮದೊಳಪ್ಪಿಕೊಂಡು ನೋಡುವೆಹಿಂಡು ಬೊಗರಿಲಿತ್ತಲಿಗ್ಗೆ ಚಂಡ ಕೊಡುವೆ ಬಾರಯ್ಯಭಂಡಿಯನೊದದ ಪಾದಪದುಮವನ್ನೇ ತಾರಯ್ಯಗುಂಡುವಾನಿಟ್ಟ ನಳಿ ತೋಳನೊಮ್ಮೆ ತೋರಯ್ಯಪುಂಡಲೀಕಾಕ್ಷಿಯರು ನಿನ್ನ ಕಂಡರೆ ಸೇರರೂ ಕೃಷ್ಣ4 ಕರದ ಕಂಕಣ ಝಣರೆನಲು ಮುಂಗುರಳ ತಿದ್ದುತಕರದ ಕಂಬಾಲಿನೆಲ್ಲವ ಸುರಿದು ಸೂರೆ ಮಾಡುತತರುಣಿಯರು ನೋಡಲವರ ಪುರುಷರಂತೆ ತೋರುತಸರಸವಾಕಿನಿಂದಲವರ ಮರುಳು ಮಾಡಿ ಕರವುತಸರಿಯ ಮಕ್ಕಳೊಡನೆ ಜೊಲ್ಲು ಸುರಿಸುತ ಮಾತಾಡುವಂಥಾ ಸರಸಗೋಪಾಲ 5 ಮರುಗ ಮಲ್ಲಿಗೆ ಸಂಪಗೆಯ ಪೂಸರವ ಮುಡಿಸುವೆಕೊರಳ ಮುತ್ತಿನ ಸರವ ನಿನಗೆ ಕರದು ಕೊಡುವೆಬಾರಯ್ಯ ಅರಳೆಲೆ ಮಾಗಾಯನಿಟ್ಟ ಸಿರಿಮುಖವತೋರಯ್ಯ ಪರನಾರಿಯರೊಡನಿಂಪಾಸರ ಛಂದವೇನಯ್ಯಪುರದ ನಾರಿಯರ ಕೂಡೆ ಸರಸವನಾಡು ಉಡುಪಿಪುರದ ಶ್ರೀಕೃಷ್ಣ 6 ಅಂದುಗೆ
--------------
ಕೆಳದಿ ವೆಂಕಣ್ಣ ಕವಿ
ಬಟ್ಟೆ ಪ ಕೆಟ್ಟವನೆಂಬಪಕೀರ್ತಿಯ ಪಡಿಯುವ ಅ.ಪ ಒಂದು ಹೊತ್ತಿಲ್ಲದಿರುಲು ತಾಳಲಾರೆ | ನಿನಗಾಗಿ ನೀಚ- ವೃಂದವÀ ಯಾಚಿಸಿ ನಾ ಬಳಲಲಾರೆ ತಂದೆ ತಾಯಿಗಳನ್ನಾದರೂ ವಂಚಿಸಿ ಮುಂದಾಗುವ ಕೇಡರಿಯದಿರುವ ಹಾಳು 1 ಹೆಚ್ಚು ಕೊಟ್ಟರು ಒಲ್ಲೆಯೆಂಬೆ | ಕಡಿಮೆಯಾದರೂ ಬಾಯಿ ತುಚ್ಛರ ಸೇವಿಸಿ ಅನ್ಯಾರ್ಜಿಸಿ ಹುಚ್ಚು ಹಿಡಿಸುವೆಯೇನೊ ನೀ ಕೊನೆಗೆ 2 ನಿನಗಾಗೀ ಸಕಲ ವಿದ್ಯಗಳರಿತು | ಸಭೆಯೊಳು ವಾದಿಸಿ ಮನಸು ಚಪಲ ಮಾಡಿ ತಹ ತಹ ಪಡಿಸುವ 3 ವ್ಯವಸಾಯಯೋಗ್ಯ ವ್ಯಾಪಾರಗಳು | ಯಾಚನೆಕಷ್ಟ ಭಾರವಾಹತ್ವ ಮೊದಲು ದಿವಸ ದಿವಸ ಮಾಡುತ ನಿನ್ನೊಲಿಸಲು ಜವನಾಳ್ಗಳ ಕೈಗೊಪ್ಪಿಸಿಸುವೆ ಕಡೆಗೆ 4 ಜ್ಞಾನ ನಿಷ್ಕಾಮ ಕರ್ಮದಾನ | ಸಂಧ್ಯಾಜಪತಪ ಸ್ನಾನಾನುಷ್ಠಾನ ಸತ್ಸಾಧನಾ ಏನು ನಡೆಯಲೀಸದೆ ದಿನದಿನದಲಿ ನಾನು ನನಗೆ ಎನ್ನಿಸಿ ಬಾಯಿಬಿಡಿಸುವ 5 ಮುಷ್ಕರದಿಂದ ನಿನ್ನ ನೋಯಿಸಲು | ಕರಗಿಯೆಲ್ಲ ನಿಷ್ಕಾರಣವಲ್ಲವು ನೀ ಜಗದೊಳು 6 ಕೊಟ್ಟಷ್ಟರಲ್ಲೆ ತೃಪ್ತಿಯ ಹೊಂದು | ಸಾಲದಿರಲು ಸಿಟ್ಟೇಕೆನ್ನೊಳು ದಯಮಾಡಿಂದು ಮುಟ್ಟಿ ಭಜಿಸೆ ಸಂತುಷ್ಟಿಯ ಪಡೆವೆ 7
--------------
ಗುರುರಾಮವಿಠಲ
ಬಟ್ಟೆಯ ನೆವದಿಂದ ಬಂದು ತಟ್ಟ ಕವನೆ ಕಂಡು ಕಣ್ಣ ತೆರೆದ ಕೃಷ್ಣವೇಣಿ ನಿಮ್ಮ ಕಂಡೆ ದುಷ್ಟ ಮಾನವರ ಬಾಧೆಗೆ ಅಂಜಿ ಇತ್ತ ಬಂದೆ ಕಷ್ಟ ದುರಿತಗಳ ಕಳೆಯೆ ತಾಯೆ ಪ. ಭೋರಿಡುವ ಮಳೆಗೆ ಹಲ್ಲುಗಿಟಗರಿದು ಶೀತತಲೆ- ಗೇರಿ ಕಂಪಿಸಿ ನಡುಗುತ್ತ ಜಾರಿ ಕೆಸರೊಳು ಬಿದ್ದು ಮತ್ತೇಳುತಲಿ ದಾರಿಯನು ಕೇಳಿಕೊಳ್ಳುತ ಕ್ರೂರವಾಗಿದ್ದ ಜಾಲಿಯ ಮುಳ್ಳನೆ ತುಳಿದು ಹರಿ ನಾರಾಯಣ ಎನ್ನುತ ಹಾರೈಸಿ ನಿಮ್ಮ ದರುಶನಕ್ಕೆ ನಾ ಬಂದೆ ಘೋರ ದುರಿತವನು ಕಳೆಯೆ ತಾಯೆ 1 ನಿತ್ಯ ಕಲ್ಯಾಣಿ ನಿರ್ಜರಸ್ತೋತ್ರೆ ಶುಭಗಾತ್ರೆ ಪ್ರತ್ಯಕ್ಷ ವಿಷ್ಣುಜಾತೆ ಮಾತೆ ವಿಸ್ತರಿಸಲಾರೆ ಶ್ರೀ ವಿಷ್ಣು ಸಂಪ್ರೀತೆ ಸತ್ಪಾತ್ರ ಸಂಪೂಜಿತೆ ಪ್ರೀತೆ ಸತ್ತು ಹುಟ್ಟುವ ಜನ್ಮ ಕೋಟಲೆಯ ಖಂಡ್ರಿಸೆ ಪತಿತ ಪಾವನ ಚರಿತೆ ವ್ಯರ್ಥವಾಯಿತು ಜನ್ಮ ಸಾರ್ಥಕವ ಮಾಡಮ್ಮ ಮುಕ್ತಿಸಾಧನದಾತೆ ಮಾತೆ 2 ಸುರಗಂಗೆ ಕೃಷ್ಣಮಲಾಪಹಾರಿ ಮೂವರು ಕೂಡಿ ಬೆರೆದಿದ್ದ ಸಂಗಮದಲ್ಲಿ ಅರಿಸಿಣ ಅಕ್ಷತೆ ಗಂಧ ಕುಂಕುಮ ತಾಂಬೂಲಗಳ ಹರುಷದಿಂದರ್ಪಿಸುತಲಿ ಥರಥರದಿ ನೆರೆದ ಮುತ್ತೈದೆಯರೆಲ್ಲರು ಮರದ ಬಾಗಿನವ ಕೊಡುತಲಿ ಹರುಷದಿಂದಿಪ್ಪುದನು ಕಂಡೆ ಹೆಳವನಕಟ್ಟೆ ಅರಸು ರಂಗನ ಕೃಪೆಯಲ್ಲಿ ತಾಯೆ 3
--------------
ಹೆಳವನಕಟ್ಟೆ ಗಿರಿಯಮ್ಮ
ಬಡತನ ವ್ಯಾತಕೆ ನಮಗೆ ಕಡೆಗಣ್ಣ ನೋಡಿದಿದ್ದರೆ ನಿಮ್ಮ ಭೂಷಣ ಬಿಡುವವ ನಾನಲ್ಲ ನಿಮಗೆ 1 ಪಿಡಿದು ಪಾದವ ನಿಮ್ಮ ಬಡವನೆಂದೆನಿಸಲು ಜಡನುಡಿ ನಿಮಗೆ ನಿಮಗೆ ಭೂಷಣವೆ ಬಿಡುಬಿಡು ಭಕ್ತವತ್ಸಲನೆಂಬ ಬಿರುದವ ಒಡಲ ಹೊರೆವ ದೊಂದಿರದವಗೆ 2 ಬಡವನಾಧಾರವೆಂದು ಕೊಂಡಾಡುತಿರಲಿನ್ನು ಬಡಿವಾರ ವ್ಯಾತಕ್ಕೆ ನಿಮಗೆ ನುಡಿ ಮಾತಿನಂತಲ್ಲ ಪೊಡಿವಿಯೊಳಗಿದು ಬಿಡುವಾಂಗಿಲ್ಲ ನಮ್ಮ ನಿಮಗೆ 3 ಪಿಡಿದ ಪಾದವ ನಿಮ್ಮ ಬಿಡೆನೆಂಬ ದೃಢವಿದು ಒಡೆಯ ಕೇಳಿನ್ನಿ ಮಾತು ಬಿಡಿಸಿಕೊಂಡರೆ ನಿಮ್ಮ ಬಿಡುವರಾರಿನ್ನು ನೋಡು ತಿಳಿದು ಗುರುನಾಥ4 ಅಡಿಗಳ ಕುಡಿಯೊಳುವಿಡಿದು ನಾ ನಿಮ್ಮನು ಬಡುವೆ ಸದ್ಗತಿ ಹರುಷವನು ಮೂಢಮಹಿಪತಿಗಿನ್ನು ಬ್ಯಾರೆ ಗತಿಯ ಕಾಣಿ ಒಡೆಯ ನಿಮ್ಮಪಾದಪದ್ಮದಾಣಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಡನಡುವು ಬಾಲೆಯರ ಕೂಡಿ | ಪಾ | ಲ್ಗಡಲೋಡಿಯನೊಡನೊಡನೆ | ಬಿಡದೆ ಆಡಿದರೊ ವಸಂತ ಪ ಪಾಲ್ಗೆನೆಗಧಿಕ ಮೃದುವಸನಮಂ ಉಟ್ಟ್ಟು ನು | ಣ್ಗೂದಲು ತಿದ್ದಿ ಪಲಪು ಬೈತಲೆ ಸೊಗಸು | ತುಂಬಿ ಕುಂಕುಮ ಮಿಗೆ | ಬಲ್ಕಸ್ತುರಿಯ ತಿಲಕ | ಅರೆರೆ | ಕಾಳ್ಗತ್ತಲೆ ಮೀರಿ ತೋರುತಿರೆ ತಿರ್ತಿತಿರಗಿ | ವಾಲ್ಗಣ್ನು ನೋಟ ವೈಯಾರ ಸೋಲ್ದುರುಬು ವಿ | ಶಾಲ್ಗೊಂಚಲು ಮುತ್ತುಸುತ್ತು ಸೂಸುತಲಿರೆ ಪೇಳ್ಗಾಣೆ ಪೆಂಗಳು ಶೃಂಗರಿಸುವ ಮದವೊ 1 ಸಣ್ಮೊಗ್ಗೆ ಜಗದ ವಿಚಿತ್ರ ಕಂಚುಕವು ಮೋ | ಹನ್ಮಾಲೆ ಪದಕ ನ್ಯಾವಳ ಸರಿಗೆಸರ ಮುತ್ತು | ವಾಲೆ ಪೊಂಪುಷ್ಟ ಬುಗುಡಿ ಥೋ | ರನ್ಮುತ್ತು ನಾಸಾಮಣಿ | ಅರರೆ | ಮನ್ಮನೋಹರವಾದ ಕಡಕ ಕಂಕಣ ಮುದ್ರೆ | ಸನ್ಮೋಹನಾಂಗಿಯರು ಸರ್ವಾಭರಣವಿಟ್ಟು | ಮನ್ಮಥನ ಹಿಡಿದೇಜಿ ಕುಣಿವಂತೆ ಮುಂದೊರಿದು | ಕಣ್ಣಂಚಿನಿಂದ ಜಗವೆಲ್ಲ ಬೆಳಗುತಲಿ 2 ಕರ್ಪುರದ ವೀಳ್ಯೆಯವ ಮೆಲುತ ನಾನಾ ಬಗೆ | ಅಗರು ಶಿರಿಗಂಧ | ಸಾರ್ಪರಿಮಳ ಸಕಲ ದ್ರವ್ಯದಿಂದೋಕುಳಿಯ | ಮಾರ್ಪೆಸರು ಬಾರದಂತೆ | ಅರೆರೆ | ಕರ್ಪಾಣಿಯೊಳಗೆ ದ್ವೀಪಾಂತರದ ತರ ನಿಲುವ | ದರ್ಪಣವ ಪಿಡಿದು ಸರ್ವಾಂಗ ನೋಡಿಕೊಳುತ | ದರ್ಪ ತಗ್ಗಿಸದಲೆ | ಪೊನ್ನುಡೆಗಳ ತುಡುಕಿ ಕಂ | ದರ್ಪನಪ್ಪನ ಮೇಲೆ ಗುಪ್ಪಿರರು ಮುದದೀ 3 ಮೇಲ್ಮೇಲು ಸೊಗಸು ಚನ್ನಿಗರಾಯನಿಲ್ಲ ನಿಲೂ ನೀಲ್ಮೇಘ ವರ್ಣಾನೆ | ಕಾಲ್ದೆಗೆದು ನಮ್ಮಮ್ಮ | ತೋಳ್ಮದವ ತೀರಿಸದೆ ಪೋಗದಿರು ಭಡಭಡಾ | ಕರವ ತೆಕ್ಕೊ | ಅರೆರೆ | ತಾಳ್ಮದತಿಗತಿಯಂತೆ ಹೆಜ್ಜೆಯ ನಿಡುತ | ಸತಿ | ಜಾಲ್ಮೊಗದು ವಾರಿಧಿಯ ಥೆರೆಯಂತೆ ಮೂದಲಿಸಿ | ಆಳ್ಮಾತಿಲಿಂದ ಹೈ ಎನುತ ಚಲ್ಲಿದರೂ4 ಪೆಣ್ಗಳಿರಾ ನಿಮಗೇಕೆ ಪ್ರಬಲತನವೆಂದೆನುತ | ಅಣ್ಗದಾ ಗೋವಳರ ನಡುವೆ ವಪ್ರ್ಪಿರ್ದಸು | ವಣ್ಮಾತ್ರ ಪರಮಾತ್ಮನೀಕ್ಷಿಸಿದ ಅವರವರ | ಕಣ್ಗೊರಳ ಕುಚ ತೊಡೆಗಳ | ಅರೆರೆ | ಹೃತ್ತಾಪ ಹರಿಸುವ | ಸಿರಿ | ಸರ್ರನೆ ಓಕಳಿ ಚಲ್ಲೆ | ಸಣ್ಗೊಲ್ಲತಿಯರು ಬೆರಗಾಗಿ ಮರಳೆÀ ಹರಿಯ | ಬೆಣ್ಗಳ್ಳನೆಂದು ಮುತ್ತಿದರು ಹಾಸ್ಯದಲಿ 6 ತೋರ್ಕೈಯ ಬಚ್ಚಿಡದೆ ಪಳ್ಳಿಗನೆ ಠಕ್ಕಿಸದೆ | ಮಾರ್ಕರೆದುಕೋ ನಿನ್ನ ಗೆಳೆಯರನ ಒಂದಾಗಿ | ಸೂರ್ಕುದೇಗಂತೆ ಸರ್ವೋದ್ಧಾರಗರದ ವೈ | ಜೀರ್ಕೋಳಲಿ ತೆರವಿಲ್ಲದೆ | ಅರೆರೆ | ಅರ್ಕನರ್ಕಕೆ ವಾರಿ ಇಂಗಿ ಪೋಗುವಂತೆ | ನರ್ಕಾಂತಕನ ಕಾಯದೊಳಗೆ ಓಕುಳಿಯಡಗೆ | ಅರ್ಕಾದ್ರಿಯಂತೆ ಶಿರಿ ಕೃಷ್ಣರಾಜಿಸುತಿರೆ | ತರ್ಕೈಪ ಭರದಿಂದ ನಾರಿಯರು ಇರಲು 7 ಹಸ್ತ ಲಾಘವ ನೋಡಿ ತಲೆದೂಗಿ ನಕ್ಕು ಸ | ಮಸ್ತ ನಾರಿಯರಿಟ್ಟು ಉಟ್ಟ ಮಂಗಳವಸನ | ವಸ್ತುಗಳು ಜಿಗಳುವಂತೆ ಓಕುಳಿಯಿಂದ | ವಿಸ್ತಾರವಾಗಿ ಉಗ್ಗೆ | ಅರೆರೆ | ಕಸ್ತೂರಿಮೃಗದಂತೆ ಸುಳಿಸುಳಿಯ ನಿಂದಿರ್ದ| ಹಸ್ತಿಗಮನಿಯರೊಡನೆ ಕ್ರೀಡೆಯನು ಪರಾತ್ಪÀರ | ವಸ್ತು ಲಕುಮಿಯ ರಮಣ ಆಡುತಿರೆ ನಾಲ್ಕೈದು | ಮಸ್ತಕಾದ್ಯರು ವಿಸ್ತರಿಸಲರಿದೆನಲು 8 ಸುಕ್ಕದೆ ಕುಚಗುಳುಬ್ಬಿ ಕಕ್ಕಸವಾಗೆ ಹೆಜ್ಜೆ | ಇಕ್ಕಲಾರದೆ ವಿರಹತಾಪದಿಂದೀಕ್ಷಿಸುತ | ವಖ್ಖಣಿಸುವ ಮಾತು ಹಿಂದಾಗುತಿರೆ ಕಲೆಗ | ಳುಕ್ಕೇರಿ ಬೆವರುತಿರಲು | ಅರೆರೆ | ಅಕ್ಕಕ್ಕೊ ಎಂದು ಅಕ್ಕೋಜಗೆಗೊಳ್ಳುತ್ತ ತಾ | ರಕ್ಕಿಯಂತೆ ಕೃಷ್ಣ ಸುತ್ತ ವಲ್ದರು | ಸಕ್ಕರೆದುಟಿ ಚಲುವ ಉಡುಪನಂತೆ ವಪ್ಪೆ | ದಕ್ಕಿವನಂತೆ ಸಂತರಿಸುತಲಿ ಇಂದೂ 9 ಬೆರ್ದೋಕಳಿಯನಾಡಿ ಸರಿ ಮಿಗಿಲು ಎನಿಸಿ ಕೆಲ | ಸಾರ್ದಿರ್ದ ನಾರಿಯರ ಶಿರವ ತಡವರಿಸಿ ಶತ | ಸಾರ್ದವೆಲೆ ಉಳ್ಳ ಉಡುಗೊರೆನಿತ್ತು ಮನ್ನಿಸಿ | ಮೀರ್ದಾಭರಣವ ತೊಡಿಸಿ | ಅರೆರೆ | ಸಾರ್ದೆಗೆದು ತರ್ಕೈಸಿ ಪ್ರೀತಿಯಿಂ ಬಡಿಸಿ ಮುರ ಮರ್ದನ ವಿಜಯವಿಠ್ಠಲ ಮೆರೆದ ಗೋಕುಲ ದೊರೆ | ಸುಜನ ಜನಸಂಗಾ 10
--------------
ವಿಜಯದಾಸ
ಬಡವನಾಗಿರುವನಕ ಭಯವಿಲ್ಲವಯ್ಯ ಪ ಕೆಡುಕ ವಂಚಕ ಕಳ್ಳ ಬಳಿಬಾರನಯ್ಯ ಅ.ಪ ಬಡವತಾನಡಿಗಡಿಗೆ ಕಡುದೈನ್ಯಭಾವದಲಿ ದೃಢ ಭಕ್ತಿಯೊಳು ಹರಿಗೆ ಪೊಡಮಡುವನು ಕಡವರವನಾಂತವನು ಕಡುನುಡಿಗಳನು ಕಲಿತು ಪೊಡವಿಚನೆಂದೆನಿಸಿ ಕಡುಲೋಭಿಯಹನು 1 ಗುಣ ಶಾಂತಿ ನಯ ವಿನಯ ಹಣವಂತಗಿರದಯ್ಯ ಹಣವು ಕಪಿಯಂತವನ ಕುಣಿಸದಿರದು ಉಣಿಸು ನಿದ್ರಾದಿಗಳು ಕ್ಷಣಮಾತ್ರವಿಲ್ಲವಗೆ ಹಣದಾಸೆ ಎಳ್ಳಷ್ಟು ಬೇಡ ಮಾಂಗಿರಿರಂಗ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಡವರೆಲ್ಲ ಬದುಕಿ ಸುಖದಲಿ ಬಹುಕಾಲ ಪ ಬಡವರೆಲ್ಲ ಸುಖದಲಿ ಜಗ ಕಡುಕರುಣಕೆ ಪಾತ್ರರಾಗಿ ದೃಢದಿ ಬಾಳಿ ಸಡಗರದಲಿ ಅ.ಪ ಕುಕ್ಷಿಗಾಗಿ ಗೈದು ಬಂದುದು ಲಕ್ಷವೆಂದು ತಿಳಿದು ನಮ್ಮ ಲಕ್ಷ್ಮಣಾಗ್ರಜನಾಜ್ಞೆಯೆಂದು 1 ಮಾನರಕ್ಷಣೆಗೆ ವಸ್ತ್ರವುಟ್ಟು ನಾನು ಎಂಬ ಮಮತೆ ಬಿಟ್ಟು ಜ್ಞಾನರತ್ನವ ಸಂಗ್ರಹಿಸುತ 2 ಜಗದ ಜನಗಳಂತೆ ನಡೆಯದೆ 3 ಯೋಗಿಗಳನು ನೋಡಿ ಹಿಗ್ಗಿ ಭೋಗಿಗಳನು ನೋಡಿ ತಗ್ಗಿ ತ್ಯಾಗ ಬುದ್ಧಿಯುಳ್ಳವರಾಗಿ ಭಾಗವತರಾಚರಣ ಪಿಡಿದು 4 ಪರರ ಸ್ವತ್ತಿಗಾಸೆಪಡದೆ ಎರೆಡು ಸುಖವು ಕರಗತವೈ 5
--------------
ಗುರುರಾಮವಿಠಲ
ಬಡಿ ಜಾಗಟೆ ಹೊಡಿ ನಗಾರಿ ಪಿಡಿ ತುತ್ತೂರಿಯನು ನಡಿ ಮುಂದೆ ಅಡಿ ಇಡು ಹೆದರದೆ ನುಡಿ ಹರಿಯನಾಮ ಪ. ಬಿಗಿ ನಡುವನು ಮುಗಿ ಕೈಯ್ಯನು ಒಗಿ ದುರಭಿಮಾನ ಚಿಗಿ ಭಕ್ತಿರಸ ಮುಖದಲಿ ನಗಿ ತೋರು ನಯದಿ 1 ಪರಿ ಪರಿ ಕರಿ ಕುಣಿಸು ಕಾಲ್ಕಿರಿ ಗೆಜ್ಜೆ ಭರ ಧರಿಯಲ್ಲಿ ಮೆಟ್ಟೆ 2 ಗಟ್ಟಿ ಮಾಡಿ ಮನ ತಟ್ಟಿ ಚಪ್ಪಾಳೆ ಮೆಟ್ಟಿ ಖಳರ ಎದÉಯ ಶ್ರೇಷ್ಠ ಮಧ್ವಮತ ಗುಟ್ಟು ದಾಸತ್ವವು ದುಷ್ಟರರಿಯರೆಂದು 3 ಶುದ್ಧ ಗುರುವು ತಂದೆ ಮುದ್ದುಮೋಹನರು ಉದ್ಧಾರವನೆ ಮಾಡಿ ವಿದ್ಯಾನಾಮ ಅನಿರುದ್ಧಾನಂಕಿತಗಳ ಬದ್ಧಾಗೀವರೆಂದು 4 ಕೆಟ್ಟ ಕರ್ಮಗಳ ಕಟ್ಟು ಹರಿದು ಮುಕ್ತಿ ಕೊಟ್ಟು ಪೊರೆವನೆಂದು 5
--------------
ಅಂಬಾಬಾಯಿ
ಬಡಿವಾರ ನಿಮ್ಮ ಕೀರ್ತಿಅರಿಯೆವೊಪಾರ್ಥ ಸಾಕೊ ನಿನಗೆಬಡಿವಾರ ಪ. ಬೀಗನಾಡಿದ ಬಲು ಬಿಂಕದ ಮಾತು ಕೇಳಿ ಸಾಗರಶಯನ ಮುರಿದೆದ್ದಸಾಗರಶಯನ ಮುರಿದೆದ್ದ ಅರ್ಜುನ ಹ್ಯಾಂಗಂದ್ಯೊ ನಿನ್ನ ಮನದಾಗ1 ಏನಲೊ ಅರ್ಜುನ ಈ ನುಡಿ ನಿನಗ್ಯಾಕೊನೀನು ನಿಮ್ಮವಳು ತಿರು ತಿರುಗಿನೀನು ನಿಮ್ಮವಳು ತಿರು ತಿರುಗಿ ಮಾರಿದರೆಕಾಣಿಯ ಬೆಲೆಯ ಹೋಲಲಾರೆ2 ದಶರಥರಾಯನ ಭಾಗ್ಯ ವರ್ಣಿಸಲು ವಶವಲ್ಲಹೊಸದಾಗಿ ಇವಳು ಹೋಗಲಿಕ್ಕೆಹೊಸದಾಗಿ ಇವಳು ಹೋಗಲಿಕ್ಕೆ ಎನಗೆ ಈ ದೆಶೆಗೇಡಿ ಬಂದು ದಣಿಸಲಿಲ್ಲ 3 ಹಿಂದೆ ಇವಳಿಂದಲೆ ನೊಂದೆನೋ ಅನ್ನಕ್ಕೆ ಸಂದೇಹವಾಗಿ ಅಡವಿಯಸಂದೇಹವಾಗಿ ಅಡವಿಯ ತಿರುಗಿಸಿದವಳಿಗೆ ಅಂದಣ ಆನೆ ಬರಲುಂಟೆ 4 ಕಾಲ ಲಕ್ಷಣವೆಲ್ಲಿ ಅಡಗಿತ್ತೆ 5 ಅಕ್ಷ ಮ್ಯಾಲಂತರದಿ ವೃಕ್ಷದಲ್ಲಿದ್ದಾಗ ಲಕ್ಷ ಕಷ್ಟಗಳ ಬಡುವಾಗಲಕ್ಷ ಕಷ್ಟಗಳ ಬಡುವಾಗ ಇವಳ ಕೈಯ ಲಕ್ಷಣವೆಲ್ಲಿ ಅಡಗಿತ್ತೆ 6 ಬಡಿವಾರ ಬಮ್ಮ ವರ್ಣಿಸಲಾರ ಹೆಮ್ಮಿ ನೋಡಿದರೆ ವಿಪರೀತಹೆಮ್ಮಿ ನೋಡಿದರೆ ವಿಪರೀತ ಎಲೊ ಪಾರ್ಥಸುಮ್ಮನೆ ಯಾಕೆ ಮುನಿಸಾಗಿ 7 ಕೇಳಿ ನಿಮ್ಮವರ ಕೀರ್ತಿ ಭಾಳೆ ವಿಸ್ತಾರವಾಗಿ ಹೇಳಲು ಲಜ್ಜೆ ಬರತದೆ ಹೇಳಲು ಲಜ್ಜೆ ಬರ ತದೆ ನಮ್ಮ ಅಮ್ಮನ ತಾಳುವಿಕೆಯಿಂದ ಉಳಿದಾರೊ 8 ನಾರು ವಸ್ತ್ರವನುಟ್ಟು ನಾರಿ ಸಂಚರಿಸುವಾಗವೀರ ರಾಮೇಶ ಜರಿದಾಗ ವೀರ ರಾಮೇಶ ಜರಿದ ಕಾಲಕ್ಕೆ ಇವಳ ಮೋರೆ ಲಕ್ಷಣವು ಅಡಗಿತು9
--------------
ಗಲಗಲಿಅವ್ವನವರು
ಬಣ್ಣಿಸಲಳವಲ್ಲ ನಿಮ್ಮ ಪ್ರ ಸನ್ನ ಮೂರುತಿ ಯಲಗೂರ ವಾಸ ಹನುಮಾ ಪ ಅಂಜನಿಯುದರದಲಿ ಜನಿಸೀ ತೇಜ ಪುಂಜ ರಾಮನ ಸೇವೆಯಲಿ ಮನನಿಲಿಸಿ ಕಂಜ ಛವನ ಪಟ್ಟ ಧರಿಸಿ ಬಲು ರಂಜನೆ ಮೆರೆದ ಭಕ್ತಾಗ್ರಣಿಯೆನಿಸಿ 1 ಜ್ಞಾನ ಭಕುತ ವೈರಾಗ್ಯದಲಿ ಸರಿ ಉರಗ ಲೋಕದಲಿ ಮಾನನಿಧಿಯೇ ವಿಕ್ರಮದಲಿ ಚರ ಣಾಗತೆ ರಕ್ಷಕ ನೇಮ ಬರದಿರಲಿ2 ಮೂರವ ತಾರದಿ ಬಂದು ದೀನೋ ದ್ಧಾರಣ ಮಾಡಿದೆ ಸದ್ಬೋಧ ಗರದು ಕಾರುಣಿ ಗುರುವಾಗೆಂದೆಂದು ಸಹ ಕಾರದಿ ಮಹಿಪತಿ ಸುತಗೊಲಿದಿಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಣ್ಣಿಸಲಳವೆ ನಾನು ಬಣ್ಣಿಸಲಳವೆ ನಾ ಬಹುವೇಷವುಳ್ಳ ಲಾ-ವಣ್ಯದ ಕಣಿಯಾದ ಉಡುಪಿನ ಕೃಷ್ಣನ ಪ. ಕರಗುವ ಮಿಸುನಿಯ ಕಾಂತಿಯಿಂ ಗರುಡನಗರಿಗಳ ಇರವ ಧಿಕ್ಕರಿಪ ಪೀತಾಂಬರಎರಡು ಪಾಶ್ರ್ವಗಳಲ್ಲಿ ಶಿರದ ಕಿರೀಟವುಕೊರಳಹಾರದ ಜೋಡು ಇರಲು ಈ ಪರಿಯಿಂದಮರೆಯಲಬ್ಜದ ಕಂಕಣ ಭೂಮಿಗೈದುವವರ ಸೂರ್ಯನಾರಾಯಣ ಬಾಹುಗಳುಳ್ಳಮಕರಕುಂಡಲ ಬಾಹುಪುರಿಗಳಿಂದೆಸೆವನ1 ಪಾದ ಕಂಸೆಯಗಲಿ ಇಂದ್ರ ನೀಲದದಾಳ ದಿಕ್ಕುಗಳನೆಬೆಳಗುತಲೆ ಬಹಳ ಲೀಲೆಯ ತೋರ್ಪಖಳರೆದೆ ಶೂಲನ ಚೆಲುವ ಗೋಪಾಲನ 2 ಜಾತಿಮುತ್ತಿನ ಚುಂಗು ಖ್ಯಾತಿಯಿಂದೊಪ್ಪುವಚಾತುರ್ಯದಿ ವಾರೆಗೊಂಡೆಯ ಕಟ್ಟಿಆ ಜೂತದಿಂದಲಿ ಅತಿ ಮೈಜೋಡು ತೊಟ್ಟು ಈ-ರೀತಿಯಿಂದೆಡಗೈಯ ವಂಕಿ ಮಧ್ಯದೊಳಾನುಚ್ಚುತ ಖಡ್ಗದಿಂದೊಪ್ಪುವ ಭೂತಳದಿವಿಖ್ಯಾತಿ ಪಡೆದು ಮೆರೆವÀ ದುಷ್ಟಮೃಗವಘಾತಿಸಿ ಬಿಡುವ ಕಿರಾತÀ ಸ್ವರೂಪನ್ನ 3 ಮಿಸುನಿಯ ಮುಂಡಾಸು ಪೊಸರವಿಯಂತಿರೆಶಶಿಯ ಪ್ರಭೆಯಂತೆ ಪಸರಿಸಲಂಗಿಯುಹಸನಾದ ನವರಂಜು ವಶದಲ್ಲಿ ತುಂಬಿರೆಕುಸುಮನಂದದಿ ಧೋತ್ರವ ಉಟ್ಟುವೈರ್ವಸನವ ಸುತ್ತಿ ಗಾತ್ರದಿ ಕುಲಾಯಿ ಒಪ್ಪಿನಸುನಗೆಯಿಂದೊಪ್ಪುವ ನವವಿಪ್ರವೇಷನ್ನ 4 ಕಡೆದ ಬೊಗರಿಯಂತೆ ಕಡೆದು ಮಾಡಿದ ಬಾಹುದೃಢವಾದ ಕುಚಗಳು ದುರಿತದುನ್ನತವಾದಬಡನಡು ಬಳುಕಲು ಕಡೆಗಣ್ಣ ನೋಟದಿಮೃಡ ಮುಖ್ಯರ್ಮೋಹಿಸಿ ಒಡಲ ಮಾರದಿರಲುಮುಡಿಯ ನೋಡುತ ನವಿಲು ನಾಚಿ ಮೊಗಗೊಡದಡವಿಯ ಸೇರಲು ಭೂಷಣಗಳುಜಡಿವುತ್ತ ಜಗದೊಳು ಕಡುಮೋಹಿನೀ ಬಲು 5 ಕರ್ಮ ಕಿಂಕರರೊಳಗಾಗಿಟೊಂಕದಿ ಕೈಯಿಟ್ಟು ಶಂಕಿಸಲು ತನ್ನಂಘ್ರಿಪಂಕಜಂಗಳ ಬೇಡಿ ಪುರುಷಾರ್ಥ ಪಡೆಯಿರೊಶಂಕೆ ಬೇಡವೊ ಎಂದು ಲೆಂಕರಿಗೆ ಸೂಸಿಪ್ಪ-ಸಂಖ್ಯಾತ ಕರಯುಗಳದಿಂದೊಪ್ಪುವಶಂಖ ಚಕ್ರ ಆಯುಧಂಗಳ ಪಿಡಿದು ಸರ್ವಾಲಂಕಾರದಿಂ ವೆಂಕಟೇಶನ ರೂಪ6 ಈ ವಿಧ ತಪ್ಪದೆ ಏಳು ವಾರಗಳಲ್ಲಿಪಾವನಮತ ಗುರು ಬಳಿಗೆ ಬಂದವರೆಲ್ಲಶ್ರೀವರ ಹಯವದನನ ಸೇವೆಗೊಳ್ಳಿರೋ ನಿತ್ಯಆವಾವ ನಾಡಿನ ಆಶ್ರಿತ ಜನರನ್ನುಭಾವಶುದ್ಧಗಳರಿತು ಕೋರಿಕೆಗಳಈವ ಭಕ್ತರಿಗೊಲಿದು ಪಾಷಂಡಾದಿಶೈವರ ತರಿದ ಸದ್ವೈಷ್ಣವರ ದೇವÀನ್ನ7
--------------
ವಾದಿರಾಜ
ಬಣ್ಣಿಸುತ ಮಕ್ಕಳನು ಹರಸುವಳು ತಾುಎಣ್ಣೆ ಉಣಿಸುತ ತನ್ನ ಚಿನ್ನ ಚಿಕ್ಕರುಗಳಿಗೆ ಪಆಯುಷ್ಯವಂತನಾಗು ಆಸ್ತಿಕನು ನೀನಾಗುಭಕ್ತವತ್ಸಲ ಹರಿಯಭಕ್ತನಾಗುನಿತ್ಯನಿರ್ಮಲನಾಗು ನೀತಿವಂತನು ಆಗುಸತ್ಯನಿಷ್ಠನಾಗು ಸಿರವಂತನಾಗೆಂದು 1ಶೂರನೀನಾಗು ಬಲುಧೀರ ನೀನಾಗಯ್ಯಾಧೈರ್ಯದಿಂದ ಸತ್ಕಾರ್ಯ ನಿರತನಾಗುದುರುಳರನು ದೂರಿರಿಸು ಪರರ ಪೀಡಿಸದಿರುಕಾರುಣ್ಯ ನಿಧಿಯಾಗಿ ಸುಜನರನು ಪೊರೆಯೆಂದು2ದೇಶವನು ಪ್ರೀತಿಸು ದುರಾಶೆಗೊಳಗಾಗದಿರುಕರ್ಯಠನು ಆಗದಿರು ಧರ್ಮ ಬಿಡಬೇಡಾಉದ್ಯೋಗಪತಿಯಾಗು ಜಿಪುಣ ನೀನಾಗದಿರುಭೂಪತಿ'ಠ್ಠಲನ ಭಕ್ತ ನೀನಾಗೆಂದು 3
--------------
ಭೂಪತಿ ವಿಠಲರು
ಬಂದ ಜನ್ಮ ಬರಲಂಜಲ್ಯಾತ ಕಗೋ ವಿಂದ ನಿನ್ನೆಚ್ಚೆರ ವೆನಗಿದ್ದರ ಸಾಕು ಗೋವಿಂದ ಗೋವಿಂದ ಪ ಒಂದೆರಡಲ್ಲಾ ಶತ ಸಹಸ್ರವಾಗಲಿ ಛಂದದಿನಿನ್ನ ನಾಮಾ ಜಿವ್ಹೆಯ ಲಿರಲಿ1 ಹರಿಪರಂದೈವೆಂದು ಅರುಹಿನಾ ಮನೆಲಿದ್ದು ಹರಿಯದಿರಲಿ ಮನ ವಿಷಯಕ ಬಿದ್ದು 2 ಮುಕುತಿಗಿ ಕುತಿಯಂಬಾ ಹಂಗಿನ ನೆಲೆಯಾಕ ಭಕುತಿ-ಯನಿ ಪನಿಜ ಸುಖವಿರಲಿಕ್ಕೆ 3 ಗುರುಮಹಿಪತಿ ಸ್ವಾಮಿ ನಿನ್ನ ಶರಣರಾ ಮೃಗ ಪಶುವಾ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದ ದುರಿತಗಳ ಪರಿಹಾರ ಮಾಡಯ್ಯಾ | ತಂದೆ ಶ್ರೀ ಗುರು ಮಹೀಪತಿರಾಯಾ ಪ ಕಾಲತುಂಬಿದ್ದರೆ ಆಲಸ್ಯವೇಕಯ್ಯಾ | ಕಾಲ ಕರ್ಮಗಳಿಂದ ಶ್ರಮಿಸುತಿಹನು | ಬಾಲಕನ ಕೈಯ ಸೇವೆ ಬೇಕಾದರೆ | ದುರಿತ ಛೇದಿಸು 1 ಮುನ್ನಿನ ಕರ್ಮಗಳ ಬಹಳ ಭೋಗಿಸಿದೆನು | ಇನ್ನು ನಿನ್ನ ಕೃಪೆ ಅವಿಚ್ಛಿನ್ನ ಮಾಡಯ್ಯ | ನಿನ್ನ ಕರದಿಂದಲಿ ಚನ್ನ ಚಕ್ರವಪಿಡಿದು | ಮುನ್ನೆ ದಾಸರ ಶ್ರಮ ಹರಿಗಡದಂತೆ 2 ಪರವಸ್ತು ದತ್ತಾತ್ರೇಯ ಸೂರ್ಯಕೋಟಿ ಪ್ರಕಾಶ | ಗುರು ಮಹೀಪತಿಯಾಗಿ ಜನಿಸಿದೈಯ್ಯ | ತರಳ ದೇವಗಿನ್ನಾರುಗತಿಯು ಇಲ್ಲ | ಪೂರ್ಣಾಯುಷ್ಯವ ಕೊಟ್ಟು ರಕ್ಷಿಸಯ್ಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು