ಒಟ್ಟು 12747 ಕಡೆಗಳಲ್ಲಿ , 128 ದಾಸರು , 5642 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಗನೆ ಪಾಲಿಸೆ ಸಾಗರಸುತೆ ನಿನ್ನ ಈಗ ಪೂಜಿಸುವೆನೆ ನಾಗಶಯನನ ರಾಣಿ ಪ. ಅಂದುಗೆ ಕಿರುಗೆಜ್ಜೆ ಅಂದದ ಪಿಲ್ಲೆನಿಟ್ಟು ಇಂದು ತೋರಿ ಕಾಯೆ 1 ಜರಿಯು ಪೀತಾಂಬರ ನೆರಿಗೆ ವೈಭವಗಳು ಕಿರುಗೆಜ್ಜೆ ವಡ್ಯಾಣ ಹರಿಯಂತೆ ನಡುವು 2 ಒಪ್ಪದಿಂದಲಿ ಜರಿ ಕುಪ್ಪಸವನೆ ತೊಟ್ಟು ಸರ್ಪಶಯನನಿಗೆ ಒಪ್ಪಿಹ ಸತಿಯೆ 3 ಭಾರ ಕುಚದಲಿ ಮೆರೆಯೆ ನಾರಸಿಂಹನ ರಾಣೀ ತೋರೆ ಕರುಣವ 4 ಮೆರೆವ ಮಂಗಳಸೂತ್ರ ಕರದಿ ಕಂಕಣಗಳು ವರ ವಜ್ರದುಂಗುರ ಧರಿಸಿ ಮೆರೆಯುವಳೆ 5 ನಾಗಮುರಿಗೆಯನಿಟ್ಟು ಭೋಗಿಶಯನನ ರಾಣಿ ಮೂಗುತಿ ಮುರವು ಮುಗುಳು ನಗೆಯವಳೆ 6 ಹೊಳೆವ ದಾಳಿಂಬ್ರದಂತೆ ಒಲಿವ ಬುಲಾಕು ಥಳಥಳಿಪೊ ಗಲ್ಲ ಕರ್ಣಭೂಷಣ 7 ಸುರರ ಪಾಲಿಪ ದೃಷ್ಟಿ ವರ ನಯನಗಳು ಫಣಿ ತಿಲುಕವು 8 ಹೆರಳು ಬಂಗಾರದ ಧರಿಸಿ ಶಿರೋರತ್ನ ವರ ಕುಸುಮಂಗಳ ಧರಿಸಿಹ ಚಲುವೆ 9 ಶಿರದಿ ಕಿರೀಟವು ಸರ್ವಾಂಗ ಸುಂದರಿ ಪರಮಾತ್ಮ ಸಹಿತದಿ ಉರದಲಿ ತೋರೆ 10 ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನೊಳು ಶ್ರೇಷ್ಠ ಭಕ್ತಿಯ ನೀಡೆ ಕೃಷ್ಣನ ಸತಿಯೆ 11
--------------
ಅಂಬಾಬಾಯಿ
ಬೇಟೆಯ ನಾಡಿದನೇ | ಶ್ರೀ ಗುರು | ಬೇಟೆಯ ನಾಡಿದನೇ | ಭವದ ಮ | ಮಹಾಟವಿಯೊಳಗಿದ್ದ ಮನವೆಂಬ ಮೃಗದಾ ಪ ಬೋಧ ಕೊಳಲವ | ಸ್ವಾನಂದದಲಿ ಸುಸ್ವರದಲಿ | ತಾನೂದಿ ನಾದವ ಕಿವಿಯೊಳೂಡಿಸಿ ಸು | ಮ್ಮಾನದೀ ನಿಲುವಂತೆ ಮರುಳು ಮಾಡಿದ ಗುರು 1 ಪರಿ ಸಾಧನದಿಂದಲಿ ನವವಿಧ | ಪರಿಯಾದ ಭಕ್ತಿಯ ಪಾಶವನು | ಕೊರಳಿಗೆ ಸಂದಿಸಿ ದೃಢದಿಂದ ಪುನರಪಿ | ಹರಿದಾಡದಂದದಿ ನೆಲೆಗೊಳಿಸಿ ಗುರು 2 ಭಯದಿಂದ ಬೆದರಿ ಭಜ್ಜರಿಕೆಯ ಹಿಡಿದಿರೆ | ಶ್ರಯ ಸುಖದಾಯಕ ನಿಜ ಕರದೀ | ದಯದಿಂದ ಅಭಯವನಿತ್ತು ಬೋಳೈಸಿ ನಿ| ರ್ಭಯ ಮಾಡಿ ಭ್ರಾಂತಿಯ ಚಿಂತಿ ಹರಿಸಿ ಗುರು3 ಸವಿ ಸವಿ ನಾಮಾಮೃತ ಆಹಾರವನಿಕ್ಕಿ | ಜವದಿಂದ ಹೃದಯ ಭೂ ವನದೊಳಗೆ | ತವಕದಿ ವಿಶ್ರಾಂತಿ ಸ್ಥಳದಲಿ ನಿಲ್ಲಿಸಿ | ಅವನಿಲಿ ಸತ್ವ ಚರನ ಬಳಿಯಲ್ಲಿಟ್ಟು ಗುರು4 ಜನವನ ವಿಜನದೊಳಗ ತಾನೇ ತಾನಾಗಿ | ಅನುಮಾನ ಕಳೆಸಿದಾ ಅಂಜುವನಾ | ಅನುದಿನ ಸುಖದೊಳಿಪ್ಪಂತೆ ಮಾಡಿ | ದನು ನಂದನ ನಿಜ ಸಹಕಾರಿ ಮಹಿಪತಿ ಘನಗುರು5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬೇಡ ಬಂದೆನೊ ನಾನು | ನಿನ್ನಯ ಕರುಣಕೀಡು ಇಲ್ಲವೊ ಇನ್ನೂ | ಪ ಪರಿ ಭವ ಕಳೆ ಶ್ರೀ ಹರೇ ಅ.ಪ. ರುದ್ರಾದಿಸುರ ಸೇವಿತ | ಪಾದಾಬ್ಜಗಳಕದ್ರುಜ ಶಿರ ಘಟ್ಟಿತಭದ್ರ ಮೂರುತಿ ಸ | ಮುದ್ರಜೆ ರಮಣನೆಅದ್ರಿಯುದ್ದರ | ಮುಗ್ಧರಾರ್ತಿಹಕ್ಷುದ್ರ ಸುರಪನ | ವ ಭದ್ರ ಗರ್ವಹರಶುದ್ಧ ನಿಜಾನಂದ ಪೂರ್ಣ | ಶ್ರದ್ಧೆ - ಜನರ ಘ ಚೂರ್ಣನಿರ್ದಯ ನೀನಲ್ಲಘನ | ಸುಪ್ರಬುದ್ಧ ಗುಣಪೂರ್ಣ ||ವೃದ್ದ್ಯಾದಿಗಳೊರ್ಜನೆ ಎನ್ | ಹೃದ್ಗುಹದಲಿ ನಿಂದುದ್ಧರಿಸೊ ದೇವಾ 1 ಕನಕಾಕ್ಷಹನ ಹಯಮುಖ | ಕಪಿಲಕೋಲಾನಕ ದುಂದುಭಿ ಬಾಲಕ ||ಮನುಸು ತೆಗೆ ತತ್ವ | ಖಣಿಬೋಧಕಪಿಲಾತ್ಮಘನಸು ಕಂಬದಿ ಖಣಿಲು ಖಣಿಲೆಗೆಅನಘ ನರಹರಿ | ತನುಭವಾಕ್ಷಣಕನಕ ಕಶಿಪುವಿನ್ಹನನ | ವನಜಾಸನನ ವಚನಭೃತ್ಯ ನುಡಿದುದನ | ಸತ್ಯವ ಗೈದಾಕ್ಷಣಅಣುಗನು ಹರಿ ಅಂಕದಿ ಕುಳ್ಳಿರೆ | ಋಣ ನಿಧಿ ಆದೆಯೊ ಶಾಂತ 2 ಮೂರ್ತಿ ಪರಿ | ಪೂರ್ಣ ಮೋಕ್ಷದನಿರವದ್ಯ ಹರಿ ಅರಿಧರ | ದುರಿತೌಘಗಳ ಪರಿಹರಸಿರಿಭೂಮಿ ಲಕುಮಿಧರ | ವರವೀವ ಶ್ರೀಧರಕರಿವರ ವರದ ಪರೋಕ್ಷವ | ಕರುಣಿಸು ಗುರು ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಬೇಡವೀಗ ಬಾಲೆ ಸಂಗ ಕೆಟ್ಟುಹೋಗುವೆ ಇದುಪಾಡಲ್ಲ ಭಂಗವನು ಅನುಭವಿಸುತಕಾಡ ಹಿಡಿಯುವೇ ಹುಟ್ಟುಗೆಡುವೆಯಲ್ಲೊ ಪ ಸತ್ಯವದು ನಾರಿದೋಷ ಮೃತ್ಯುವಲ್ಲೋ ಯಮನಿತ್ಯದಲಿ ಎತ್ತಿರುವ ಕತ್ತಿಯಲ್ಲೋ ಆತ್ಮ-ಹತ್ಯವಲ್ಲೋ ಅಪಥ್ಯವಲ್ಲೋ 1 ಸರಕು ಎಲ್ಲೋ 2 ಶಿಷ್ಟಾಶಿಷ್ಟರೆಂಬವರು ಕೆಟ್ಟರಲ್ಲೋ ಬಲುಗಟ್ಟಿ ತವಸಿಗಳು ಮತಿಗೆಟ್ಟರಲ್ಲೊ ಕಂ-ಗೆಟ್ಟರಲ್ಲೋ ಘಾಸಿಪಟ್ಟರಲ್ಲೋ 3 ಧಾರಣೆಯು ಧ್ಯಾನಮೌನ ಹಾರಿತೆಲ್ಲೋ ಕಾಮಕೂರ್ಗಣೆಗಳು ಮೊನೆದೋರಿತಲ್ಲೋ ಮನೆಹಾರಿತಲ್ಲೋ ಧೈರ್ಯತೂರಿತೆಲ್ಲೋ 4 ನಾರಿಯವಳು ನಿನ್ನ ಗತಿಗೆ ಮಾರಿಯಲ್ಲೋ ಗುರುವೀರ ಚಿದಾನಂದನನ್ನು ಸೇರು ಎಲ್ಲೋಪರಿಹಾರವೆಲ್ಲೊಲ್ಲೋ ಮುಕ್ತಿ ಸಾರೆ ಎಲ್ಲೋ 5
--------------
ಚಿದಾನಂದ ಅವಧೂತರು
ಬೇಡವೋ ಬ್ರಾಹ್ಮಣ ದ್ರೋಹ ಬೇಡವೋ ಪ ಮಾಡಬೇಡವೋ ನಿನಗೆ | ಕೇಡು ತಪ್ಪದು ಕೊನೆಗೆನಾಡೊಳಗಪಕೀರ್ತಿ | ಗೀಡಾಗಿ ನೀ ಕೆಡ ಅ.ಪ. ಭಾರ ನೀನು - ಅಂಥಅತ್ಯಂತವಲ್ಲವಿದೇನು - ನಿನ್ನ ||ಚಿತ್ತ ದೃಢ ಮಾಡು ಉತ್ತಮ ವಿಪ್ರರವೃತ್ತಿಯ ಸೆಳದು ಉನ್ಮತ್ತನಾಗಿ ಕೆಡ 1 ಸೂಸುವ ನದಿಯೊಳು ಬಿದ್ದು - ಇನ್ನುಈಸಲಾರದೆ ಮುಳುಗೆದ್ದು - ಅಂಜಿ ||ಈಸು ಬುರುಡೆ ಬಿಟ್ಟು ಬೀಸೋ ಕಲ್ಲನೆ ಕಟ್ಟಿಈಸುವ ತೆರನಂತೆ ಭೂಸುರ ದ್ರವ್ಯವು 2 ನೃಗರಾಯನೆಂಬ ಭೂಪತಿಯು - ವಿಪ್ರ-ರಿಗೆ ಗೋದಾನವನಿತ್ತ ಬಗೆಯ ಕೇಳಿ ||ಅಗಲಿ ತಮ್ಮೊಳು ತಾವೆ ಜಗಳ ಪುಟ್ಟಿ ಆ ನೃ-ಪಗೆ ತೊಣ್ಣೆಯಾಗೆಂದ್ಹಗರಣವನೆ ಕೇಳು 3 ರಾವಣನೆಂಬುವ ದುಷ್ಟ - ಅವ-ದೇವತೆಗಳ ಸೆರೆಯಿಟ್ಟ ||ದೇವನರಸಿ ಸೀತಾದೇವಿಯ ನೆಪದಿಂದರಾವಣನ ಕೊಂದು ದೇವತೆಗಳ ಕಾಯ್ದನೊ 4 ಇನ್ನೆಷ್ಟು ಹೇಳಲೊ ಸಾಕ್ಷಿ - ಬ್ರಾಹ್ಮ -ರನ್ನವ ತೆಗೆದರೆ ಶಿಕ್ಷಿ ಮೋ-ಹನ್ನ ವಿಠ್ಠಲರಾಯ ತನ್ನಯ ಭಜಕರಬೆನ್ನ ಬಿಡದಲೆ ಕಾಯ್ವ ಇನ್ನಾದರು ಕೆಡ 5
--------------
ಮೋಹನದಾಸರು
ಬೇಡವೋ ಸ್ತ್ರೀಯರ ವಶದಲಿಬಿದ್ದು ಭವಕೆ ಬೀಳಲಿ ಬೇಡ ಪ ಒನಪುಗಳ ಸುಳ್ಳು ವಾಲಿಗಲು ಸಟೆವೈಯ್ಯಾರ ನಚ್ಚಲಿ ಬೇಡ 1 ಮೋರೆ ಮುರುಕಿ ಪದಮೂಗನೇರಿಸುವುದು ಮುಸುಕನು ನೀ ನಚ್ಚಬೇಡಸೀರೆಯನೊಲೆಯುವುದು ಸೆರಗನು ಸಡಿಲಿಪನಾರಿಯ ನಂಬಲು ಬೇಡ 2 ನರಕದ ಕುಂಡವು ನಾರಿಯೆಂಬವಳು ಸತ್ಯ ನೋಡುತ ನೀ ಬೀಳಬೇಡಕರುಣಿ ಚಿದಾನಂದ ಕಟಾಕ್ಷವನು ಪಡೆ ಕಾಲಗೆ ನೀ ಸಿಕ್ಕಬೇಡ 3
--------------
ಚಿದಾನಂದ ಅವಧೂತರು
ಬೇಡವೋರಂಗ ಹೆಂಗಳ ತಳ್ಳಿ ಹೋಗ ಬೇಡವೋನಾ ಬೇಡಿ ಕೊಂಬೆನುದಮ್ಯಯ್ಯ ಪ ಊರೊಳಗೆಲ್ಲ ನಿನ್ನಯ ದೂರೇ ರಂಗ ಬಾರೋ ನಿನ್ನನು ಕಾಣದಿರಲಾರೆ ಯಾರಿಗೆಂಬೆನು ಗೋಕುಲದೊಳಗಿರ್ದ ನಾರಿಯರೆಲ್ಲರು ಕಿವಿಗೆಡಸಿದರೆನ್ನ 1 ಚಿಕ್ಕವನಾಗಿ ನೀನಿರುತಿರೆ ಹೆಣ್ಣು ಮಕ್ಕಳ ಮೇಲÉ ಕಣ್ಣಿಡುವರೆ ಪೊಕ್ಕು ಪಾಲ್‍ಬೆಣ್ಣೆಯ ಕದ್ದರೆ ಗೋಪರ ಮಕ್ಕಳು ಕಂಡರೆ ಪ್ರಾಣವ ತೆಗೆವರು 2 ಎಲ್ಲ ಜೀವರಿಗೂ ನೀಹಿತನಾಗಿ ಪ್ರೀತಿಯಲ್ಲಿರು ಭಾರಿ ಪುರುಷನಾಗಿ ಹಲ್ಲ ಕಡಿದಿಹರಂತೆ ಗೋಪರು ಮಾನಕೊಳ್ಳಲು ಯತ್ನವ ಮಾಡಿ ಕೊಂಡಿಹರಂತೆ 3 ಕಂಡರೆ ಹಿಡಿದು ಕಟ್ಟುವರಾಗಿ ಪುಂಡ ನಿಲ್ಲಿಸ ಬೇಕೆನುತ್ತೆಲ್ಲಿ ಗೋಪರು ಕಂಡಿ ಕಣೆವೆ ಕಟ್ಟಿಕೊಂಡು ಸಾಧಿಪರಂತೆ 4 ಪಾಲು ಬೆಣ್ಣೆಯ ಕದ್ದು ಮೆಲುವರೆ ಕೃಷ್ಣ ಬಾಲೆಯರನು ಗೋಳು ಹೊಯ್ವರೆ ನಿ ನ್ನಾಲಯದೊಳಗೇನು ಕಡಿಮೆಯಾಗಿದೆ ಲಕ್ಷ್ಮೀಲೋಲನ ದಯದಿಂದ ಸಕಲ ಸಂಪತ್ತಿದೆ 5
--------------
ಕವಿ ಪರಮದೇವದಾಸರು
ಬೇಡಿಕೋತೆ ಕೇಳಿ ನೋಡಿ ನಿಜಬಾಳಿ ಗೂಢಗುರುತವ ಮನಗಂಡು ನೆಲೆಗೊಳ್ಳಿ 1 ಒಂದಕೊಂದು ಮಾಡಿ ಒಂದು ಪಥಗೂಡಿ ಹಿಂದ ಮುಂದೆ ನೋಡುವ ಸಂದೇಹವೀಡಾಡಿ 2 ಅರ್ತುಕೊಳ್ಳಿ ಖೂನ ತ್ವರಿತ ಗುರುಜ್ಞಾನ ಕರ್ತು ಮಹಿಪತಿಸ್ವಾಮಿದೋರುವ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೇಡಿದೆನು ಕೊಡುಕಂಡ್ಯ ಬೇಡಿದೆನು ಕೊಡುಕಂಡ್ಯಬೇಡಿದೆನು ನೀ ನೀಡು ಕಂಡ್ಯಾ ಪ ನಿನ್ನ ಹಾಡನು ಹಾಡಿ ನಿನ್ನ ನಿಜದೊಳಗಾಡಿನಿನ್ನನೇ ಕಾಡಿ ನಿನ್ನನೇ ಬೇಡಿನಿನ್ನ ಓಲಗವ ಮಾಡಿ ನಿನ್ನ ನಿಟ್ಟಿಸಿ ನೋಡಿನಿನ್ನ ಲೀಲೆಯೊಳು ನಾನಿರುತಿಹುದದನಾ 1 ನೋಟದೊಳಗಿನ ನೋಟ ಕೂಟದೊಳಗಿನ ಕೂಟಆಟದೊಳಗಿನ ಆಟ ಇಂಥ ಆಟನೀಟದೊಳಗಿನ ನೀಟ ನಿನ್ನಲ್ಲಿ ಬೆರೆದಾಟಪಾಟ ಮಾಡಿಯೆ ಎನಗೆ ಪಾಲಿಸುವುದನ2 ಶರೀರದಿಚ್ಚೆಯನುಳಿದು ಶರೀರ ವಾಸನೆ ಕಳೆದುಶರೀರ ವಿಷಯದ ಹೊಲಬೆಲ್ಲ ಬಳಿದುಶರೀರದ ನೆಲೆಯು ತಿಳಿದು ಶರೀರದೊಳೊಬ್ಬನನುಳಿದುಶರೀರದ ಸಂಗ ದೊರಕದಿಹದದನಾ 3 ನಾದಲಕ್ಷಿಸಿ ಹಿಡಿದು ನಾದ ಸಂಗವ ಪಡೆದುನಾದಾಮೃತವ ಕಿವಿತುಂಬ ಕುಡಿದುನಾದ ದಾರಿಯ ನಡೆದು ನಾದ ದೊಳ್ವೆಳ ಗೊಡದುನಾದವನೆ ಮರೆತು ಸುಖಿಸುತಿಹದದನ 4 ನಿನ್ನ ನೀನುಳಿದಿಲ್ಲ ನೀ ದೈವ ಜಗಕೆಲ್ಲನಿನ್ನಂತೆ ಆಪ್ತರಿಲ್ಲ ನಿನ್ನ ನಂಬಿದೆನಲ್ಲನೀ ಕಾಯಬೇಕಲ್ಲ ಚೆನ್ನ ಚಿದಾನಂದನೆನೆಹಂಬತಾತ್ವಿಕ ಹಿನ್ನೆಲೆಯ ಕೀರ್ತನೆಗಳುದದನಾ 5
--------------
ಚಿದಾನಂದ ಅವಧೂತರು
ಬೇಡುವರೊ ಸುಖ ಬೇಡರೊ ದುಃಖವ | ಮಾಡಾರೋ ಅವರ ಉಪಾಯವ | ಜನ | ಬೇಡುವರೋ ಪ ಇಟ್ಟಿಕಲ್ಲನು ತಂದು ಕಿಟ್ಟಿ ಬೀಸುವರೊ | ಕುಟ್ಯಾರೋ ರಂಗವಲ್ಲಿಯಾ | ಜನ 1 ಸಾಲು ಸಾಲೆಮ್ಮೆಯ | ಸೋಲದೆ ತೊಳೆವರು | ಸಾಲಿಗ್ರಾಮಕ್ಕ ಹಾಲೆರೆಯರೊ | ಜನ | 2 ತ್ರಿಜಗವಂದಿತ ನಮ್ಮ ವಿಜಯವಿಠ್ಠಲನ | ಭಜನೆಯಾ ಮಾಡದೆ ಸೋಲ್ವರೋ | ಜನ | 3
--------------
ವಿಜಯದಾಸ
ಬೇಡುವುದಿಲ್ಲನ್ಯ ನಾನೇನು ನಿನ್ನ ನೋಡಿ ಕರುಣದಿ ಬಾರೋ ಭಜಕನ ತ್ರಾಣ ಪ ಬೇಡುತಕ್ಕುದನೆ ನಾ ಬೇಡುವೆನೆಲೆ ಸ್ವಾಮಿ ನೀಡುತಕ್ಕುದನೆ ನೀ ನೀಡಿ ಕಾಪಾಡಯ್ಯ ಮೃಡಮಿತ್ರ ಜಡಜಾಕ್ಷ ಒಡೆಯ ವೈಕುಂಠ ಅ.ಪ ಎನ್ನಮನೆ ಬಾಗಿಲವ ಕಾಯೆನ್ನದಿಲ್ಲ ಎನ್ನುಳಿಸು ತಂದೆಯನು ತರಿದೆನ್ನದಿಲ್ಲ ಅಣ್ಣನ್ನ ಕೊಲ್ಲಿರಾಜ್ಯಕೊಡು ಎನ್ನದಿಲ್ಲ ಎನ್ನ ಮನೆಯಾಳಾಗಿ ದುಡಿಯೆನ್ನದಿಲ್ಲ ನಿನ್ನ ದಾಸರ ಸಂಗವನ್ನು ಕರುಣಿಸಿ ಎನ್ನನನ್ಯರಿಗೆ ಬಾಗಿಸೆ ಮನ್ನಿಸಿ ಸಲಹೆಂಬೆ ಭಿನ್ನವೇನಿದರೊಳು ಉನ್ನತಮಹಿಮ 1 ಲಲನೆಯಳ ಕೊಡಿಸಣ್ಣನ್ಹೊಡಿದೆನ್ನದಿಲ್ಲ ಬಲವಾಗೆನ್ನಯ್ಯ ಬಂಧುಗಳ ನಾಶಕೆನ್ನೊದಿಲ್ಲ ಬಲಿದೆನ್ನಿಂ ತವ ಭಕ್ತ ನೋಡಿಸೆನ್ನದಿಲ್ಲ ಸುಲಭದೆನ್ನಿಂದ್ಹೆಡಮುರಿ ಕಟ್ಟಿಸಿಕ್ಕೆನ್ನದಿಲ್ಲ ಎಲೆದೇವ ತವಪಾದನಳಿನ ನಿರ್ಮಲಧ್ಯಾನ ನಿಲಿಸು ಸ್ಥಿರವಾಗೆನ್ನ ನಾಲಗೆಯೊಳನುದಿನ ಇಳೆಭೋಗದಳಸದೆ ಸಲೆ ಸುಖದಿ ಸಲಹೆಂಬೆ 2 ಭಿನ್ನವಿಲ್ಲದೆ ಬಾ ನೀ ಕರೆದಲ್ಲಿಗೆನೆನು ಎನ್ನ ಹೊಡೆತದ ಪೆಟ್ಟು ಸೈರಿಸೆಂದೆನೆನು ಉನ್ನತ ಕುಲಗೆಡು ಎನ್ನೊಳುಂಡೆನೆನು ಅನ್ಯಮಾತೊಂದು ನಿನ್ನ ಬಯಸಿ ಬೇಡೆನು ನಾನು ಅನ್ಯರನು ಬೇಡದಂತುನ್ನತ ಪದ ನೀಡಿ ನಿನ್ನ ಮೂರುತಿಯೆನ್ನ ಕಣ್ಣೊಳು ನಿಲ್ಲಿಸಿ ಬನ್ನಬಡಿಸದೆ ಕಾಯೊ ಎನ್ನಯ ಶ್ರೀರಾಮ 3
--------------
ರಾಮದಾಸರು
ಬೇಡುವೆ ನಾ ಯಾದವಾ ಬÉೂೀತಿ ಮನದ ಮೋಹವಾ ಓಡಿಸುತಲಿ ಮಾಧವಾ ನಿನ್ನ ಸೇರಿಕೊಂಬುವಾ ನೀಡು ಇನಿತು ಭಾಗ್ಯವಾ ನಾನು ಇದುವೆ ನನ್ನದು ಮಾನವಗಿದು ಪಾಶವು ದೀನಬಂಧು ಇವನು ನೀ ಮಾಣದೆ ಬಿತಿಸೈ ಪ್ರಭೋ ಬೇಡಿಕೊಂಬೆ ಹೇ ವಿಭೋ ನೀನೆ ಪರಮಸದ್ಗುರು ಹೃದಯದಲ್ಲಿ ನೆಲೆಸಿದಾ ಆತ್ಮರೂಪವನು ಸದಾ ಮುದದಿ ತಿಳಿಯುವಂತೆ ನೀ ಸನ್ಮತಿ ದಯಪಾಲಿಸೈ ಸದಮಲಾತ್ಮಶಂಕರಾ ಬೇಡುವೆ ನಿನಗೀಶ್ವರಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಬೇಡುವೆನು ಇದನೊಂದ ಕರುಣಿಸೋ ಹರಿಯೇ ಬೇಡವೆಂಬುದನೆಲ್ಲ ಏಕೀವೆ ಹರಿಯೇ ಪ ಒಪ್ಪಿಡಿಯ ಅವಲಕ್ಕಿಗೊಲಿದವನು ನೀನಂತೆ ಒಪ್ಪದಿಂದೆಲೆಯ ತಿಂದು ತೇಗಿದೆಯಂತೆ ತಪ್ಪುನೂರೆಂಟುಗಳು ಮನ್ನಿಸಿದೆ ನೀನಲ್ತೇ ಸರ್ಪಶಯನನೆ ನಿನ್ನ ನಾಮಭಜನೆಯ ಮಾತ್ರ 1 ಘೋರ ಪಾಪಿಯು ಮಗನ ಕರೆದಾಗ ಕರುಣಿಸಿದೆ ನಾರಿ ಹೊರದೂಡಿದ ತರಳನನು ಕಾಯ್ದೆ ಭಾರಿ ಮಕರಿಯ ಸೀಳಿ ಕರಿಯನೊಂದನು ಕಾಯ್ದೆ ನೀರಜಾಸನಪಿತನೆ ನಿನ್ನ ಸ್ಮರಣೆಯ ಮಾತ್ರ 2 ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲು ಇನ್ನಾವ ಭಾಗ್ಯಗಳ ಬೇಡಲಾರೆನೋ ದೇವ ಪನ್ನಗೇಂದ್ರ ವಿಭೂಷಣ ಪರಿಪಾಲಿಸೈ ಶ್ರೀಶಾ ನಿನ್ನ ಧ್ಯಾನವ ಮಾತ್ರ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡೆಲೊ ಜೀವಾ ಜನಿಸಲೆ ಬೇಡೋ ಪ ಬೇಡ ನಿಜಸುಖ ದೊರೆಯದು ನೋಡೋ ಅ.ಪ ಹೆಣ್ಣೋ ಗಂಡೋ ಆಗಿ ಮೆರೆಯುವೆಮಣ್ಣು ಹೊನ್ನಿಗೆ ನೀ ಹಾತೊರೆಯುವೆಉಣ್ಣುತ ಪ್ರಾರಬ್ಧವ ಬಾಯ್ದೆರೆಯುವೆಹಣ್ಣಾಗುವೆ ನೀ ಪರೀಕ್ಷೆ ಮಾಡೊ 1 ಆರು ಹಗೆಗಳು ಗಡ ಮುತ್ತುವವೊಮೂರು ತಾಪಗಳು ಕಡು ಹೊತ್ತುವವೊನೂರೊಂದೊಗಟಗಳಿರದೊತ್ತುವವೊಪಾರಾಗಲು ಬಿಡವೆಂದಿಗು ಕೇಡೋ 2 ಹುಟ್ಟು ಸಾವುಗಳ ಸುಳಿಯಲಿ ಸುತ್ತುವೆಒಟ್ಟು ಮರಳಿ ಸಂಚಿತವನು ಬಿತ್ತುವೆ ಗಟ್ಟಿಸಿ ಗದುಗಿನ ವೀರನಾರಾಯಣನೆಹುಟ್ಟಿಸಬೇಡೆಂದಿಚ್ಛಿಸಿ ಬೇಡೋ 3
--------------
ವೀರನಾರಾಯಣ
ಬೇರ್ಯದ ಭಾವ ಮುಕುತಿ ಸುವರ್ಮ ತೋರುವದೊಂದೇ ಸದ್ಗುರು ದಯಾಧರ್ಮ ಧ್ರುವ ನೆನವಿಗೆ ನೆಲೆಗೊಳದೆ ನಿಜಧ್ಯಾನ ಅನಕಾ ದೋರುವಾದ ಸದ್ವಸ್ತುದಾ ಖೂನಾ 1 ಮನದಿಂದಲಿ ಮನವಾಗದೆ ಉನ್ಮನ ತಾನಾಗುವದೆ ಸದ್ಗುರು ಕೃಪೆಜ್ಞಾನ 2 ದೀನ ಮಹಿಪತಿಗೆ ತೋರಿ ನಿಜಗುಟ್ಟು ಭಾನುಕೋಟಿ ತೇಜ ತಾನಾದ ಉಂಟು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು