ಒಟ್ಟು 1478 ಕಡೆಗಳಲ್ಲಿ , 84 ದಾಸರು , 921 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗರ್ವಿಸುವದು ತರವೆ ಗರ್ವಿಸುವದು ತರವಲ್ಲ ನೀವಿದ ಕೇಳಿ ಸರ್ವೇಶನೊಪ್ಪನೀ ನಡತೆಯ ಕಂಡರೆ ಪತೊಗರಿ :ಬೆಲ್ಲವೆ ಬಾ ನಾನು ತೊಗುರಿಬೇಳೆಯು ನನಗುಲ್ಲಾಸದಿಂದೊಂದು ಯೋಚನೆ ತೋರಿತುಎಲ್ಲರು ಒಬ್ಬಟ್ಟು ಒಳ್ಳಿತೆಂದೆಂಬರುಬಲ್ಲವರಾದರೆ ವಿವರಿಸದಿರುವರೆಸಲ್ಲದ ಮಾತನಾಡಲಿಬೇಡ ಸತ್ಯವನಿಲ್ಲಿ ನನ್ನೊಳು ಪೇಳು ಮತ್ತೆ ನಾಲುವರಿರುವಲ್ಲಿ ನ್ಯಾಯವ ತಿದ್ದಿಕೊಂಬ ನಾವಿಬ್ಬರುಇಲ್ಲದ ಬಳಿಕ ಗೋಧಿಯ ದೆಸೆುಂದೇನುಸಲ್ಲದ ತುಪ್ಪವನೇನ ಮಾಡಲಿಬೇಕುಒಳ್ಳೆಯತನ ನಿನ್ನೊಳು ಇರುವುದಿದನೆಲ್ಲವನೆನಗೆ ಪೇಳು ಸಟೆಯ ಪೇಳಬಲ್ಲೆನೆ ನಾ ನಿನ್ನೊಳು ನಿಮ್ಮೊಳು ನಾನೆಬಲ್ಲಿದನಲ್ಲವೆ ಕೇಳು ನನ್ನನೆ ಯೆಲ್ಲಾಕೊಳ್ಳುವರವನಿಯೊಳು ನೀನೂ ಸ್ವಲ್ಪವಲ್ಲವೆ ನಿಜ ನಮ್ಮೊಳು ಕೋಪಿಸಬೇಡಸಲ್ಲದ ವಸ್ತುಗಳು ಗೋಧಿಯು ಎಣ್ಣೆಯಲ್ಲವೆ ನಿತ್ಯದಲ್ಲೂ ತುಪ್ಪವ ಬಿಡುಪೊಳ್ಳುನುಡಿದರೆನ್ನ ಮಾತೆಲ್ಲ ಪಾಳು 1ಬೆಲ್ಲ :ಏನೆಲೆ ತೊಗುರಿಬೇಳೆಯೆ ನನ್ನ ಸ್ವಲ್ಪವೆಂದೇನು ಕಾರಣವನು ಕಂಡು ನನ್ನೊಡನೀಗನೀನುಸುರಿದೆ ಮಾತು ಹೆಚ್ಚಿ ಬರುತಲಿದೆುೀ ನಡೆ ನಿನ್ನಯ ಶ್ರೇಷ್ಠವದೆನಿಟಷ್ಟೂನಾನಿಲ್ಲದಿರಲು ಸೀಯಾಗುವದೆಂತುರೆನೀನು ಸುಮ್ಮನೆ ಹೇಳಿಕೊಂಬೆ ತನ್ನಯ ಸ್ತುತಿತಾನೆ ಮಾಡಿಕೊಂಬ ಮನುಜಗೆ ನರಕವೆಂಬೀನಿಗದಿಯನರಿತರೆ ಪರನಿಂದೆಯನೀನೆಚ್ಚರಂಗೆಟ್ಟು ಮಾಳ್ಪೆಯ ಇನ್ನಭಿಮಾನವನೀಗ ುರುಯೆನ್ನೆಡೆಯೊಳುನೀನಿರಬೇಡ ಸಾರು ಹೆಚ್ಚುಗೆ ನಿನ್ನದೇನದನೆನಗೆ ತೋರು ದುರ್ಜನರು ತಾವೀನುಡಿ ನಿಜವೆಂಬರು ಸತ್ಪುರುಷರುಮಾನಸದಲಿ ಒಪ್ಪರು ನಿನಗೆ ಅಭಿಮಾನ ಮೊದಲು ಇದ್ದರೂ ಹಾರು ಮುಂದುಜಾಣತನವೆಯಾದರೂ ಹೆದರದಿಪ್ಪೆಹೀನಾಯವೆ ಬಂದರೂ ನಾಲುವರೆನ್ನದೀನಡೆಯೆನ್ನುವರು ಎಂಬುದನೀಗನೀನರಿಯದೆ ಬಂದೆುದು ಪಾಪ ಬೇರು 2ಗೋಧಿ :ಹೋಗಲೆ ತೊಗುರಿ ಬೆಲ್ಲಗಳಿರ ನನ್ನನುಕೂಗಿ ಬೈವಿರಿ ಗೋಧಿ ಯೋಗ್ಯದ ವಸ್ತು ತಾನಾಗದು ಎಂದು ಕೊಬ್ಬಿದ ಮಾತನಾಡುತ ನೀಗಿಕೊಂಬಿರೆ ನಿಮ್ಮ ಮಾನವ ಸದರ ನಿಮಗಾಗಿದೆ ಕೊರಗಿಪರೆ ಮಾತಿನ ಪರಿಯೇಗುವುದೆನಿಸದಿರೆ ನಿಮ್ಮನು ತೃಣಕಾಗಿ ನಾ ಕಾಣುವರೆ ಕಾಣೆನು ಮಾನಹೇಗೆ ನಿಮ್ಮೊಳು ಹೋಗೆ ಯೆನಗೆ ಸಮನಾಗಲು ನೀವು ಬಲ್ಲಿರೆ ುೀ ಯಾಳೆಗೆಹೋಗಿ ನೀವು ಕೊಬ್ಬಿದರೆ ಈಶ್ವರ ಕೃಪೆಯಾಗುವದೆಂತೆನ್ನು ಮರೆಯೊಗಲೊಲ್ಲಿರೆ 3ಎಣ್ಣೆ :ಹರಟಿಕೊಂಬಿರೆ ನೀವೆ ನಿಮ್ಮೊಳು ನನ್ನನುಜರೆಯುತಲೆಣ್ಣೆುಂದೇನೆಂದು ನಾನಿಲ್ಲದಿರಲು ನೀವೆಂತೊಂದು ಗೂಡಿ ಬಾಳುವಿರಿದನರಿಯದೆ ಮುಂಗೆಟ್ಟು ನುಡಿದರೇನಾುತೀಪರಿಯಹಂಕಾರ ಲೇಸಲ್ಲ ಹೀನಾಯವುಬರುವದು ಪರರ ನಿಂದಿಸಿ ಜೀವಿಸುವುದುತರವಲ್ಲ ಸದ್ಗತಿಗೆಟ್ಟು ಕೊನೆಗೆ ಬರದಿರದು ನರಕ ಬೆಂಕಿುಂ ಮೂರುವೇಳೆ ನೀಕೊರಗುವೆ ಬೆಲ್ಲವೆ ಕೇಳು ತೊಗುರಿಯೆ ನೀನಿರದೆ ಸಾರಿಯೊಳು ಬೇಯುವೆ ಗೋಧಿಕೊರಗುವೆ ಕಲ್ಲಿನೊಳು ಚಚ್ಚಿಸಿಕೊಂಡುಇರುವದೆ ನಿಮ್ಮವೊಲು ಕಷ್ಟವದೆಂಬದರಿುರೆ ನೀವು ನನ್ನೊಳು ುಂಥಾ ನಡೆಬರುವುದೆ ಬಹು ಕೇಳಾ ಹೀನಾಯವುಬರದಿರದೀ ಬಾಳು ಯಾತಕೆ ಸುಖಕರ ಮಾರ್ಗ ತಾ ನಿಮ್ಮೊಳು ುಲ್ಲವು ುದನರಿಯದೆ ನಿಮ್ಮಳಲು ಬಿಡದು ನನ್ನಮರೆಯೊಕ್ಕು ಬದುಕುವದಿದು ಬಹುಮೇಲೂ 4ತುಪ್ಪ :ಜಗದೊಳು ನೀವೆ ಬಲ್ಲಿದರೆಂದು ನಿಮ್ಮೊಳುನಿಗದಿಯ ಮಾಡಿಕೊಂಬಿರಿ ಗರ್ವ ಹೆಚ್ಚಿತೆಸುಗುಣವಂತರು ನೀವಾದರೀಪರಿಯಲ್ಲಿಬಗುಳಿಕೊಂಬಿರೆ ತುಪ್ಪವಂ ಬಿಡುಯೆನ್ನುತಮಿಗೆ ಸುರತತಿ ಮೊದಲಾಗಿ ನನ್ನಿಂದಲಿಸೊಗಸಾಗಿ ಕೃಪೆವಡೆವರು ನಾನಿಲ್ಲದೆಮಿಗೆ ಶುದ್ಧರಾಗುವಿರೆಂತು ಬರಿದೆ ನಿಮ್ಮನಿಗದಿಯ ಪೇಳಿಸಿಶಾನಿಗೆ ನನ್ನ ನೀವಗಲಲು ರುಚಿಕರವೆಂತು ನಾನೊಪ್ಪೆನುನಿಗಮದ ಮಾತಿದುವೆ ಸಟೆಯ ಮಾಡಿಸೊಗಸಾಗಿ ಬಾಳಿ ನೀವೆ ಅನ್ಯಾಯಗಳಗಣಿತವಾಗಿುವೆ ನನ್ನಯ ನ್ಯಾಯನಿಗದಿಯಾದರೆ ಹೋಗುವೆ ತಪ್ಪಿದರೆ ಈಜಗದೊಳಗ್ನಿಯ ಪೊಗುವೆ ನಿಮಗೆ ಆಣೆಯಗಲಿದರಿಲ್ಲಿಂದವೆ ಪೋಟಾಟವೆಜಗದೊಳುತ್ತಮ ವಸ್ತುವೆ ನಾನೆಂಬರುಬಗೆುರೆನ್ನನು ನೀವೆ ಮೊಂಡರುಯೆಂದುಖಗವಾಹನಗೆ ಪೇಳುವೆ ಚಿಕ್ಕನಾಗನಗರಕೆ ನಡೆುರಿ ನ್ಯಾಯವ ತಿದ್ದುವೆ 5ಒಟ್ಟಾಗಿ :ದೇವ ಭಕ್ತಾವನ ಪಾವನ ಚರಿತ ಸುರಾವಳಿನುತಪಾದಭಾವಜ ಜನಕ ರಮಾವಲ್ಲಭಾನಂತ ಗೋವಿಂದ ಮಾಧವನೀವರಿಯದೆ ಪೋಗಲಾವಗತಿ ನಮಗೀ ವಸುಧೆಯೊಳ್ಮುನಿಭಾವಿತ ಚರಣನೆಸಾವಧಾನದೊಳು ಪರಾಮರಿಸಿುಂತಪ್ಪದಾವಲ್ಲಿುದ್ದಡಲ್ಲಿಗೆ ತಕ್ಕ ಶಿಕ್ಷೆಯನೇ ವಿರಚಿಸಿ ಗುಣವಿದ್ದಲ್ಲಿ ರಕ್ಷಿಪುದಾವ ಪರಿಯಲಾದರು ಜಗನ್ನಾಥನೆುೀವ್ಯವಹಾರವನು ನಿಗದಿಗೈದುನೀವೊಲಿದೆಮ್ಮುವನು ರಕ್ಷಿಸಬೇಕು ದೇವಾದಿದೇವ ನೀನು ಅನಾಥರ ಕಾವಲ್ಲಿ ದಯಾವಂತನುಸುಜನಪತಿ ಭಾವಿತ ಪಾದಪದ್ಮನು ನೀನೆ ಗತಿನಾವರಿದನ್ಯರನು ಬಾಳುವೆವೆಂತುರಾವಣಾರಿಯೆ ನೀನು ಕೈಪಿಡಿ ಗತಿುವರೆದಿಕ್ಕು ನೀನು ಮಾಡಿನ್ನೇನುಭಾವಿಸೆವನ್ಯರನು ನಮ್ಮಿಂದಲಿಸೇವೆಗೊಳುವ ನೀನಿರಲು ಭಜಿಸದೆ ನಾವು 6ಬರಿದೆ ಜಗಳವಾಡಬೇಡವೀಚೆಗೆ ಬನ್ನಿಒರೆಯುವೆ ಬುದ್ಧಿಯ ಕೇಳಲಿಚ್ಛಿಸಿದರೆತರುಣನಾಗಾಖ್ಯಪುರದ ವೆಂಕಟೇಶನುಗುರುವಾಸುದೇವಾವತಾರವ ತಾಳಿಯೆಕರುಣದಿಂ ತಿಮ್ಮದಾಸನ ಬಹುದೋಷವ ಪರಿದಾಳ್ದನೆಂಬ ಬಿರುದಪೊತ್ತು ನಾನೀಗಮೆರೆಯುವೆನೀವೆಲ್ಲ ಬರಿ ಮಾತ ಮಾಡದೆಶಿರದಲಿ ಹೊತ್ತು ನನ್ನಯ ನುಡಿಗೇಳಲುಬರುವುದು ಕೀರ್ತಿ ಮೂಜಗದೊಳಗದರಿಂದನೆರೆುೀಗ ನೀವೆಲ್ಲರೂ ಒಂದಾಗಿಯೆುರಲು ಸೌಖ್ಯವದೆಂಬರು ವಿಂಗಡದಿ ನೀವಿರಲು ಜನರು ಬೈವರು ಕೂಡಲು ನನ್ನಗುರುದಯ ಬಹುದೆಲ್ಲರು ಹಿಗ್ಗುವರು ಮತ್ತರಿತು ಸಾರವ ಕೊಂಬರು ಬಹಳ ಶ್ರೇಷ್ಠರುವದರಿಯದಿದ್ದರೂ ಹೊಣೆಯ ನೀವೆನೆರೆ ನಿಮ್ಮನೀ ಜನರು ಬೈಯದ ಹಾಗೆಉರು ಶಿಕ್ಷೆಯನೆ ಮಾಳ್ಪರು ಯಾರೆಂಬಿರೆಅರಿುರಿ ಗಂಗಪ್ಪ ಹೊಣೆ ಹೋಗಿನ್ನಾದರು7
--------------
ತಿಮ್ಮಪ್ಪದಾಸರು
ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ ಗಳಿಗಿಯೊಳು ದೋರಿಕೊಡುವರು ಅಂತರಂಗವ ಧ್ರುವ ಹೊಟ್ಟಿಗೆ ಮೊಟ್ಟಿಗೆ ಕಟ್ಟು ಹೋಗಬ್ಯಾಡಿರೊ ಹುಟ್ಟಿಬಂದ ಮ್ಯಾಲೆ ಹರಿನಾಮ ಘಟ್ಟಗೊಳ್ಳಿರೊ ಗುಟ್ಟಲಿದ್ದ ವಸ್ತು ನೀವು ಮುಟ್ಟಿ ಮನಗಾಣಿರೊ ಕೆಟ್ಟ ಗುಣಕಾಗಿ ಬಿದ್ದು ಸಿಟ್ಟು ಹಿಡಿಯಬ್ಯಾಡಿರೊ 1 ಹೊನ್ನಿಗೆ ಹೆಣ್ಣಿಗೆ ಬಾಯಿ ತೆರಿಯಬ್ಯಾಡಿರೊ ಕಣ್ಣಗೆಟ್ಟು ಹೋಗಿ ನೀವು ದಣ್ಣನೆ ದಣಿಯಬ್ಯಾಡಿರೊ ಹೆಣ್ಣಿಗಾಗಿ ರಾವಣೇನು ಪಡೆದುಕೊಂಡ ಕಾಣಿರೊ ಹೊನ್ನಿಗಾಗಿ ವಾಲಿ ಏನು ಸುಖವ ಪಡೆದ ನೋಡಿರೊ 2 ಉರ್ವಿಯೊಳು ಬಂದು ನೀವು ಗರ್ವಹಿಡಿಯ ಬ್ಯಾಡಿರೊ ಕೌರವೇಶ ಮಣ್ಣಿಗೆ ಗರ್ವಹಿಡಿದು ಕೆಟ್ಟ ನೋಡಿರೊ ಅರ್ವಪಥವ ಬಿಟ್ಟು ಮರ್ವಿಗ್ಹೋಗಬ್ಯಾಡಿರೊ ಸರ್ವಸಾರಾಯ ಸುಖ ಹರಿಯ ಭಕ್ತಿ ಮಾಡಿರೊ 3 ಕಾಮ ಕಳವಳಿಗಿನ್ನು ಕುಣಿದು ಕೆಡಬ್ಯಾಡಿರೊ ನೇಮದಿಂದ ಸ್ವಾಮಿ ಶ್ರೀಪಾದ ಬೆರೆದು ಕೂಡಿರೊ ನಾಮರೂಪಕವಗಿ ಬಿದ್ದು ಹಮ್ಮು ಹಿಡಿಯಬ್ಯಾಡಿರೊ ತಾಮಸೆಂಬ ದೈತ್ಯನ ಸುಟ್ಟು ಹೋಮಮಾಡಿರೊ 4 ಭವ ಬಂಧವಾದ ದುಸ್ತರ ಹೋಳಿಯಾಡಬೇಕು ಒಂದೆ ಸೀಳಿ ಮದಮತ್ಸರ ಹೇಳಿಕೊಟ್ಟ ಗುರುವಿನ ಕೊಂಡಾಡಬೇಕು ಎಚ್ಚರ ಬೋಧ ಶ್ಯಾಸ್ತರ 5 ಲೋಕವೆಲ್ಲ ಬಂದು ಹೊನ್ನ ಹೆಣ್ಣು ಮಣ್ಣಿಗಾಯಿತು ಬೇಕಾದ ವಸ್ತು ಬಿಟ್ಟು ಪೋಕುಬುದ್ಧಿಗ್ಹೋಯಿತು ಸುಖ ಸೂರೆಗೊಳ್ಳದೆ ತೇಕಿ ದಣಿದುಹೋಯಿತು ಏಕವಾಗಿ ನೋಡಲು ದೈಥಯ್ಯಗೊಟ್ಟಿತು 6 ಮಹಿಪತಿಯ ಸ್ವಾಮಿಯ ನೆನೆದು ಒಮ್ಮೆ ನೋಡಿರೊ ಇಹಪರಸುಖ ಸೂರ್ಯಾಡಿ ನಲಿದಾಡಿರೊ ಮಹಾಮಹಿಮೆದೋರುತದೆ ಮಯ್ಯ ಮರಿಯಬ್ಯಾಡಿರೊತ್ರಾಹಿತ್ರಾಹಿ ಎಂದು ಮನಗಂಡು ಕುಣಿದಾಡಿರೊ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರು ಎಂಥಾ ಗಾರುಡಿಗಗುರುವಿನ ನಂಬಿ ಗುಣವೆಲ್ಲ ಕಳಕೊಂಡೆ ಪ ಶರಣು ಮಾಡೆಂದರೆ ಶರಣು ಮಾಡುತ್ತಲಿರ್ದೆಕರದಲ್ಲಿ ಏನಿತ್ತೋ ಜವೆಯ ಬೂದಿಶಿರದ ಮೇಲೆನ್ನ ಮೈಮೇಲೆ ಎಳೆಯಲು ಶರೀರವಮರೆತೆನೆ ಇದಕೆ ಸಾಕ್ಷಿಯಾದನೆ ಗುರು 1 ಆರು ಇಲ್ಲದುದ ನೋಡಿ ಬೇರೆನ್ನ ಕರೆದೊಯ್ದುಮೋರೆಯನು ಕಿವಿಯೊಳಗಿಟ್ಟು ಮಂತ್ರಿಸಿದನಾರಿ ಬದುಕು ಮನಮಕ್ಕಳನೆಲ್ಲವಸೇರಿ ಸೇರದಂತೆ ಮಾಡಿದನೆ ಗುರು2 ಭವಗೇಡಿ ಕುಲಗೇಡಿ ಸಂಗಗೇಡಿಯಾದೆಇವನ ವಿಶ್ವಾಸದ ಫಲದಲಿಂದಇವನ ಮೇಲೆ ಎನ್ನ ವ್ಯಾಕುಲ ಹತ್ತಿದೆವ್ಯವಹಾರವೆಂಬುದು ಎಡವಟ್ಟಾಯಿತು3 ಮಂತ್ರಿಸಿದ ಕ್ರಿಯೆ ಮರಳಲೀಯದೆ ಎನ್ನಮಂತ್ರ ತಂತ್ರಕ್ಕದು ಬಗ್ಗಲಿಲ್ಲಮಂತ್ರದ ಮಹಿಮೆಯು ಮಹಾಮಹಿಮೆಯುಮಾಂತ್ರಿಕರೊಳಗೆ ದೊಡ್ಡವನಹುದೋ ಗುರು 4 ಇವನ ನಂಬಿದ ಮೇಲೆ ಇವನಂತಲ್ಲದೆಭುವನಕ್ಕೆ ತಿರುಗಿ ತಾ ತಾರೆನೆವಿವರಿಸೆ ಹುರುಳಿಲ್ಲ ಹೇಳಿ ಕೇಳೋದೇನುಭುವನ ರಕ್ಷಕ ಚಿದಾನಂದನೆ ಗುರು 5
--------------
ಚಿದಾನಂದ ಅವಧೂತರು
ಗುರು ಸದ್ಗುರು ಆರೆಂದು ನೋಡೊ ಗುರುತಿಟ್ಟು ಮನವೆ ಸೇವೆ ಮಾಡೊ ಧ್ರುವ ಗುರುಗಳುಂಟು ಮನೆಮನೆ ಬಹಳ ಬ್ಯಾರೆ ಬ್ಯಾರೆ ಮಾಡುತ ತಮ್ಮ ಮ್ಯಾಳ ದೋರುತಿಹರು ಮೋಹಿಸುವ ವಾಗ್ಜಾಲ ಸರಿ ತಮಗಾರಿಲ್ಲೆಂದೆನ್ನು ತಲಾ ತೋಳ 1 ಎಲ್ಲ ಬಲ್ಲತನದಭಿಮಾನ ಅಲ್ಲೆ ಕೊಂಬುದೇನುಪದೇಶ ಜ್ಞಾನ ಸೊಲ್ಲಿಲ್ಹೇಳಿ ಕೇಳಿದರಾಹುದೇನ ಸಲ್ಲದರಲಿಹುದೆನೊಡೆತನ 2 ಸರ್ವಸಮ್ಮ ತಾಗುವ ಸುಜ್ಞಾನ ಗರ್ವಾಭಿಮಾನಗೆಲ್ಲಿಹುದು ಖೂನ ಪೂರ್ವಾಪರ ಸದ್ಗುರು ನಿಜಧ್ಯಾನ ದೋರ್ವದು ತಾಂ ಪಡೆದವಗ ಪೂರ್ಣ3 ವಿರಳಾಗತ ಎಲ್ಲಿಗೊಬ್ಬ ಮಹಿಮ ಶರಣ ಹೊಕ್ಕವಗೆ ಪೂಜ್ಯಪರಮ ಕರತಳಾಮಲಕವಾಗುವ ನಿಜವರ್ಮ ಗುರುಮಾರ್ಗದಾಗೆನಬೇಕು ನೇಮ 4 ಗುರುವರ ಶಿರೋಮಣಿ ಭಾನುಕೋಟಿ ಗುರುತಾದ್ಯೆನ್ನ ಮನದೊಳು ನಾಟಿ ಪರಬ್ರಹ್ಮನಹುದೊ ಜಗಜೇಟಿ ತರಳ ಮಹಿಪತಿ ಮನವಸೋಘಟಿ(?) 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರು ಹೊಂದಿದವನೀಗ ಎಂದಿಗೂ ಕೆಡನುಮರಳಿ ಹುಟ್ಟಿದರೇನು ಗುರುವು ಕಾಯುವನು ಪ ಗುರು ಹೇಳಿದಂತಿರದೆ ಗುರು ಆಜ್ಞೆಯಂತಿರದೆಬರಿಯ ಪ್ರಾಪಂಚದ ನಡೆಯನೆ ನಡೆದುಮರೆತೆಯಾದರೇನು ಗುರು ಕರುಣ ತಾನದುವೆನರಕಕ್ಕೆ ಕಳುಹದೋ ಯಮನ ಸೇರಿಸದೋ 1 ತನ್ನ ಅವಗುಣದಿ ಜನ್ಮಗಳ ಸೇರಿದರೇನುಅನ್ಯಕೆ ಎಳಸದದು ಸೋಂಕಿನಲಿ ಮನವುಚೆನ್ನಾಗಿಯೇ ಗುರುದ್ವಾರವನು ಕಾದಿಹನುಭಿನ್ನಿಸದೆ ಪರತತ್ವ ಬೋಧೆ ಹೇಳುವನು 2 ಭ್ರಷ್ಟತ್ವದಿಂ ತನ್ನ ಪಾಪವನು ಉಣುತಲಿಹುಟ್ಟುತಿಹ ಹಂದಿ ಪಶುವಾಗಿ ತಾನುಘಟ್ಯಾಗಿ ನರಜನ್ಮ ಧರಿಸುತ್ತ ಕಡೆಯಲಿಶಿಷ್ಟ ಚಿದಾನಂದ ಬಗಳೆಯನು ಕೂಡುವನು 3
--------------
ಚಿದಾನಂದ ಅವಧೂತರು
ಗುರುಗಳೆಂಬರೆ ಇವರು ಸತ್ಯವುಗುರುಗಳೆಂಬರೆ ಇವರು ಸತ್ಯವು ಪ ಅಣುರೇಣು ತೃಣಕಾಷ್ಠ ಬ್ರಹ್ಮ ಹೇಳುವರುಗುಣಗಳ ಹುಡುಕರು ಪ್ರಕೃತಿಯ 1 ಜನನ ಮರಣಗಳ ಕಡಿದು ಹಾಕುವರುಜನನಕ್ಕೆ ಬರಗೊಡರು ಜನಗಳ 2 ನರನನು ವೈದು ಹರನ ಮಾಡುವರುಗುರು ಚಿದಾನಂದರಹರು ನಿಜದಲಿ3
--------------
ಚಿದಾನಂದ ಅವಧೂತರು
ಗುರುತ ಕೇಳುವ ಬನ್ನಿ ಗುರುವಿನ ಕೈಯ ಅರವ್ಹಿಸಿ ಕೊಡುವ ಸದ್ಗುರು ನಮ್ಮಯ್ಯ ದ್ರುವ ಕೇಳದೆ ಹೇಳುವ ಕೇಳದ ಮಾತು ತಿಳಿದುಕೊಳ್ಳಿರೊ ನಿಜ ಗೂಢವರಿತು 1 ತಿಳಿದೇನಂದರ ತಿಳಿಯದು ಯೋಗ ಹೂಳೆಯುತಲ್ಯದ ಮನದೊಳು ಅತಿಬ್ಯಾಗ 2 ಗುರ್ತು ಹೇಳಿದ ಮಹಿಪತಿ ಗುರುಮೂರ್ತಿ ಆರ್ಥಿಯಾಗದ ಯೋಗದ ಮನಮೂರ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುನಾಥ ಗುರುನಾಥ ಹೇಳಿದ ಮಾತು ಮಾತೆನ್ನ ಬಹುದು ಮಾತುವೊಂದೇಪ ವೇದಕ್ಕೆ ನಿಲ್ಲದು ವಿವರಕ್ಕೆ ತೋರದುಆದಿ ಪುರಾಣದ ಅರ್ಥ ಅರ್ಥ ಅದುವಾದಕ್ಕೆ ದೂರದು ಕರವಶವಾಗದುಸಾಧಿಸಿ ತನಗೆ ತಿಳಿದು ಹೇಳಿದ ಮಾತು ಮಾತು ವೊಂದೇ 1 ಮೂರರ ನಡುವದು ಮೂಲವೆ ತಾನದುಧೀರ ಧೀರರೆಲ್ಲ ದಿಟ್ಟಿಪುದುಬೇರೆ ಮತ್ತಿಲ್ಲದು ಬೆಗಡಾಗಿ ಇಹುದು 2 ಸಾರಾಯದಿಂದೆನಗೊಲಿದು ಹೇಳಿದ ಮಾತು ಮಾತುವೊಂದೇಮಾತಿನ ಮಹಿಮೆಯ ಮತ್ತೇನ ಹೇಳಲಿಪ್ರೀತಿ ಎಂಬವೆಲ್ಲ ಪೀಡೆಯಾದವುಭೂತನಾಥ ಚಿದಾನಂದ ಭೂಪತಿಯಾದಈ ತೆರದಲಿ ತಾನಿಂತು ಹೇಳಿದ ಮಾತು ಮಾತುವೊಂದೇ3
--------------
ಚಿದಾನಂದ ಅವಧೂತರು
ಗುರುಭಕ್ತನೆವೆ ಧನ್ಯನು ಬಲು ಮಾನ್ಯನು ಪ ಗುರುದಯ ಸಂಗಡಿಯನು ಹಿಡಿದಿಹನು | ತರಣೋಪಾಯವ ಕೂಡಿದಾ ನಲಿದಾಡಿದಾ 1 ಅನ್ಯ ಮಾರ್ಗವ ನೋಡನು ತಾ ಕೂಡನು | ತನ್ನ ನಿಷ್ಠೆಯೊಳಾಡುವಾ ಗತಿ ಬೇಡುವಾ 2 ಗುರು ಮಾತೇ ಮಂತ್ರ ವೆಂಬನು | ಸವಿ ದುಂಬನು | ಗುರು ಸೇವೆಯಲಿ ಬಾಳುವಾ ಅದೇ ಕೇಳುವಾ 3 ಪುಂಡಲೀಕನ ಭಕ್ತಿಯಾ | ಆಸಕ್ತಿಯಾ | ಕಂಡು ತಾನೆವೆ ಬಂದನು ಮುಕುಂದನು 4 ಸಾರಥಿ | ನೆರೆ ಭಕ್ತಿ ಕೀಲ ಬೋಧನಾ ಹೇಳಿದನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುರಾಯನಂಥ ಕರುಣಾಳು ಕಾಣೆನು ಜಗದೊಳಗೆ ಪ ಏನೆಂದರಿಯದ ಪಾಮರ ನಾನು | ತಾನೊಲಿದೀಗೆನ್ನ ನುದ್ಧರಿಸಿದನು1 ತನ್ನನುಭವ ನಿಜ ಮಾತಿನ ಗುಟ್ಟು | ಎನ್ನೊಳುಸುರಿ ಘನ ತೋರಿಸಿ ಕೊಟ್ಟು | ಧನ್ಯನ ಮಾಡಿದಸೇವೆಯಲಿಟ್ಟು 2 ಮಾಡುವ ಘನ ತುಸು ತಪ್ಪನೆ ಹಿಡಿಯಾ | ಬೇಡಿಸಿಕೊಳ್ಳದೆ ನೀಡುತ ಪಡಿಯಾ | ರೂಢಿಗಾದನು ಇಹಪರದೊಡೆಯಾ3 ತನ್ನವನೆನಿಸಿದ ಮಾತಿಗೆ ಕೂಡಿ | ಮನ್ನಣೆಯಿತ್ತನು ಅಭಯವ ನೀಡಿ | ಇನ್ನೇನ ಹೇಳಲಿ ಸುಖ ನೋಡಿ4 ತಂದೆ ತಾಯಿ ಬಂಧು ಬಳಗೆನಗಾಗಿ | ನಿಂದೆ ಸದ್ಗುರು ಮಹೀಪತಿ ಮಹಾಯೋಗಿ | ಕಂದನ ಸಲಹುವ ಲೇಸಾಗಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವಿನ ಕರುಣವ ನಾನೇನ ಹೇಳಲಿಗುರುವಿನ ಕರುಣವ ಪ ಇಟ್ಟನು ಕೊಟ್ಟನು ಉಪದೇಶಸೃಷ್ಟಿಯೆ ನೀನೆಂದ ನಾನೇನ ಹೇಳಲಿ1 ಮೂಗಿನ ಕೊನೆಯಲ್ಲಿ ಮಾಡಿದ ಮನೆಯನ್ನುಕೂಗಿಸಿದನು ನಾದ ನಾನೇನು ಹೇಳಲಿ 2 ಶರೀರನ ಮರೆಯಿಸಿ ದೊರೆಯು ಚಿದಾನಂದಗುರುವನೆ ಮಾಡಿದ ನಾನೇನ ಹೇಳಲಿ 3
--------------
ಚಿದಾನಂದ ಅವಧೂತರು
ಗುರುವಿನರಿಯದೆ ಮರುಳಲೋಕ ಒಂದೊಂದು ಪರಿ ಗುರುಮಾಡಿಕೊಂಡುದರ ಹೊರವುತಿದೆ ಧರೆಯೊಳು ಬರಿದೆ ಭ್ರಮೆಗೊಂಡಿಹ್ಯದು ಪರಗತಿಯ ಜರೆದು ಶ್ರೀ ಗುರುಪಾದವನ್ನರಿಯದೆ 1 ಸತ್ವಧಾತುದ ನೆಲೆಯು ತತ್ವ ಮೋಹಲಾದನು ಮತ್ತೈದು ಮುದ್ರೆಗಳ ವ್ಯಾಪಿಸಿಹ ಪ್ರಾಣವನು ಮುದ್ರಿಸಿದಾತ ಪರಮಗುರುವು 2 ಸತ್ವ ರಜ ತಮವು ಮೊದಲಾದ ಗು- ಣತ್ವಗಳು ಪಂಚಭೂತಾತ್ಮದ ವಸ್ತಿ ವಿವರಣಗಳು ವಿಸ್ತಾರಗತಿಗಳನು ವಿಸ್ತರಿಸಿ ತೋರಿಸಿದಾತ ಸಾಕ್ಷಾತ ಗುರುವು 3 ಸ್ವಪ್ನ ಸುಷುಪ್ತಿ ಜಾಗ್ರತಿ ತ್ರಯವಸ್ಥಿತಿಗಳು ಪ್ರಾಣಪ್ರಣಮ್ಯ ಪ್ರವೃತ್ತಿ ನಿವೃತ್ತಿಗಳು ಶಕ್ತಿ ಉನ್ಮನಿಯ ಉದ್ಬವ ಗತಿಯು ತೋರಿಸಿದಾತ ಸಾಕ್ಷಾತ ಗುರುವು 4 ಹತ್ತು ಮತ್ತೆರಡು ಧ್ವನಿ ವತ್ತಿಗ್ಹೇಳೆನಿಸುವದ ರತ್ನ ಮೂರರ ಪ್ರಭೆಯ ದಾಟಿ ಸಂಜೀವನಿಯ ಸತ್ರಾವಿ ಜೀವನ ಕಳಾ ಮೃತವದೋರಿಸಿದಾತ ಸಾಕ್ಷಾತ ಗುರುವು 5 ಒತ್ತಿ ಆಧಾರ ಬಲದೆತ್ತಿ ಕುಂಡಲಣಿಯ ಕೆತ್ತಿ ಸರ್ಪೆತ್ತಿ ಮುಖ ಮಾಡಿ ಊಧ್ರ್ವ ಗತಿಯು ಮತ್ತೆ ಷಡಚಕ್ರಗಳ ಗತಿಗಳನು ದೋರಿದಾತ ಸಾಕ್ಷಾತ ಗುರುವು6 ಪತಿತ ಮಹಿಪತಿಯ ಪಾವನ್ನಗೈಸುತ್ತಮದಿ ಉತ್ಪತ್ತಿ ಸ್ಥಿತಿ ಲಯವು ತಾರಿಸಿ ಸ- ದ್ಗತಿಯು ನಿತ್ತಿಹ್ಯಾನಂದ ಘನ ಸತ್ಯ ಸದ್ಗುರು ಮೂರ್ತಿ ಸಾಕ್ಷಾತ ಪರಮಗುರುವು | 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗೊಲ್ಲರಾ ಮನೆಯ ಪೊಕ್ಕುಗುಲ್ಲು ಮಾಡುವುದೇನಲ - ಬಲುಲಲ್ಲೆ ಮಾಡುವುದೇನಲ ಪ ಹಾಲು ಮೊಸರು ಘೃತವು ನೆಲುವಿನಮೇಲೆ ಇಟ್ಟ ಬೆಣ್ಣೆಯಬಾಲಕರಿಗಿಲ್ಲದಲೆ ಸುರಿದುಹಾಲುಗಡಿಗೆಯನೊಡೆದಲ 1 ಸಣ್ಣ ಮಕ್ಕಳ ಕಣ್ಣ ಮುಚ್ಚಿಹುಣ್ಣಿಮೆ ಬೆಳುದಿಂಗಳಲಿಬಣ್ಣ ಬಣ್ಣದ ಮಾತನಾಡಿಸಣ್ಣ ಕೆಲಸಕ್ಕೆಳೆದಲ 2 ಸುದತಿಯೊಬ್ಬಳು ದಧಿಯ ಮಥಿಸುತಒದಗಿದ ಬೆಣ್ಣೆಯ ತೆಗೆಯಲುಮದನ ಕದನಕೆ ಕೆಡಹಿ ಮಾನಿನಿಒದರಿದರು ನೀ ಬಿಡೆಯಲ 3 ಕಿಟ್ಟ ನಾ ನಿನಗೆಷ್ಟು ಹೇಳಲಿದುಷ್ಟ ಬುದ್ಧಿಯ ಬಿಡೆಯಲಇಷ್ಟು ಹರಳಿಸಿ ರಟ್ಟು ಯಾತಕೆಬಿಟ್ಟು ಮಧುರೆಗೆ ಪೋಗೆಲ4 ಕೇಶವ ವಿಠ್ಠಲ ನಿನ್ನನುಕೂಸು ಅಂದವರ್ಯಾರಲೊ - ಹಸುಗೂಸು ಅಂದವರ್ಯಾರಲೊದೇಶದೊಳಗೆ ವಾಸವಾಗಿಹ ಬೇಲೂರು ಚೆನ್ನಕೇಶವ 5
--------------
ಕನಕದಾಸ
ಗೋಪಗೋಪನೆಂಬಾ ಕೋಗಿಲೆ ನಮ್ಮಶ್ರೀಪತಿಯ ಕಂಡರೆ ಬರಹೇಳೆ ಕೋಗಿಲೆ ಪ . ಕೆಂಗಾವಳೆಯಾಲೆದಲಿ (?) ಪಾಂಡುರಂಗಮಂಗಳ ಮೂರುತಿಪ್ಪಶೃಂಗಾರವಾದ ಸುರತರುವಿನ ನೆರಳೊಳುರಂಗನಾಥನ ಕಂಡರೆ ಬರಹೇಳೆ ಕೋಗಿಲೆ 1 ಮಧುಮಾಸದಲಿ ಮಾಧವನಿರಲುಚದುರೆ ಗೋಪಿಯರಸ ಮೇಳದಲ್ಲಿಮುದದಿ ವನಂತರನಾಡುವ ಭರದಿಂದಪದುಮನಾಭನ ಕಂಡರೆ ನೀ ಬರಹೇಳೆ 2 ಅಟ್ಟಿ ಅರಸುವ ಶ್ರ್ರುತಿಗಳಿಂದ ಸುಖಬಿಟ್ಟೆವೆಂದರವ ಪರಬ್ರಹ್ಮಸೃಷ್ಟಿಯೊಳು ಉಡುಪಿನ ಹಯವದನ ಸ್ವಾಮಿಯದೃಷ್ಟಿಲಿ ಕಂಡರೆ ಬರಹೇಳೆ ಕೋಗಿಲೆ3
--------------
ವಾದಿರಾಜ
ಗೋಪಿ ಎನ್ನ ಕೊಲ್ಲಬೇಕೆಂಬ ಬಗೆಯ ಪ ಹರವಿಯ ಹಾಲು ಕುಡಿಯಲು ಎನ್ನ ಹೊಟ್ಟೆಕೆರೆಯೇನೆ ಹೇಳಮ್ಮಯ್ಯಕರೆದು ಅಣ್ಣನ ಕೇಳಮ್ಮ ಉಂಟಾದರೆಒರಳಿಗೆ ಕಟ್ಟಮ್ಮಯ್ಯ 1 ಮೀಸಲು ಬೆಣ್ಣೆಯನು ಮೆಲುವುದು ಎನಗೆದೋಷವಲ್ಲವೇನಮ್ಮಯ್ಯಆಸೆ ಮಾಡಿದರೆ ದೇವರು ಕಣ್ಣಮೋಸದಿ ಕುಕ್ಕೋನಮ್ಮಯ್ಯ 2 ಅಟ್ಟವನ್ನೇರಿ ಹಿಡಿವುದು ಅದು ಎನಗೆಕಷ್ಟವಲ್ಲವೆ ಹೇಳಮ್ಮಯ್ಯ ನೀಕೊಟ್ಟ ಹಾಲು ಕುಡಿಯಲಾರದೆ ನಾನುಬಟ್ಟಲೊಳಗಿಟ್ಟು ಪೋದೆನೆ 3 ಪುಂಡುತನವ ಮಾಡಲು ನಾನು ದೊಡ್ಡಗಂಡಸೇನೆ ಪೇಳಮ್ಮಯ್ಯ ಎನ್ನಕಂಡವರು ದೂರುತಾರೆ ಗೋಪಮ್ಮ ನಾ ನಿನ್ನಕಂದನಲ್ಲವೇನೆ ಅಮ್ಮಯ್ಯ 4 ಉಂಗುರದ ಕರದಿಂದ ಗೋಪಮ್ಮ ತನ್ನಶೃಂಗಾರದ ಮಗನೆತ್ತಿರಂಗವಿಠಲನ ಪಾಡಿ ಉಡುಪಿಯ ಉ-ತ್ತುಂಗ ಕೃಷ್ಣನ ತೂಗಿದಳು 5
--------------
ಶ್ರೀಪಾದರಾಜರು