ಒಟ್ಟು 253 ಕಡೆಗಳಲ್ಲಿ , 58 ದಾಸರು , 224 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುಭಾವದ ನಿಗೂಢ ಮುಂಡಿಗೆಗಳು ಎರಡು ಸಾವಿರದ ಜಿಹ್ವೆಯುರಗ ಪೊಗಳಿದ ಹರಿಯೆ ಪ ಪರಂಜ್ಯೋತಿ ಪರಬ್ರಹ್ಮ ಪರಮಪುರುಷ ಓಂ ಎಂದುಅ ಹುಟ್ಟು ಬಣ್ಣ ಒಂದರೊಳಗೆ ಕಟ್ಟು ಬಣ್ಣ ಒಂದು ಮಾಡಿಕಟ್ಟಿ ಕುಟ್ಟಿ ಕಾಸಿ ಕರಗಿ ಮೂರು ಬಣ್ಣವಮುಟ್ಟಿ ಮಾಡಿ ನಾಲ್ಕು ಬಣ್ಣ ಒಪ್ಪವಿಕ್ಕಿ ಅದರ ಮೇಲೆಗಟ್ಟಿಯಾಗಿ ನೆಲೆಗೆ ನಿಂತವೈದು ಬಣ್ಣವುಸೃಷ್ಟಿಯಾರೇಳು ಬಣ್ಣ ಎಂಟು ಒಂಬತ್ತರೊಳಗೆ ನೆಟ್ಟನೆ ಹತ್ತು ಹನ್ನೊಂದು ಹನ್ನೆರಡು ತೋರುವಘಟ್ಟಿ ಹದಿಮೂರು ಹದಿನಾಲ್ಕು ಹದಿನೈದರಿಂದಕಟ್ಟಕಡೆಗೆ ನಿಂದ ಹದಿನಾರು ಬಣ್ಣ ಓಂ ಎಂದು 1 ಭದ್ರಕಂಬ ಒಂದರೊಳಗೆ ಉದ್ದವಾದ ಕೊನೆಯ ಮೇಲೆಸಿದ್ಧಿಯಾದ ಚಿಗುರು ಹೂವು ಕಾಯಿ ಹಣ್ಣನುಮೆದ್ದು ಹೋದ ಪಕ್ಷಿ ಬಂದು ಹದ್ದು ಹಿಡಿದು ಉದ್ದಕೆತ್ತಿಬುದ್ಧೀ ಹೀನನಾಗಿ ಬೆಳೆದು ಧರೆಗೆ ಬಿದ್ದುದಕದ್ದು ಮತ್ತೊಬ್ದ ತರುತಿದ್ದ ದಾರಿಯನ್ನು ಕಟ್ಟಿಒದ್ದು ಹಿಡಿದು ಗುದ್ದಿ ನೂಕಿ ಸೆಳೆದುಕೊಂಡುದ ಸಾಧ್ಯವಾಯಿತೆಂದು ತನ್ನ ಮನೆಗೆ ತಂದು ಸತಿಗೆ ಕೊಡಲುಶುದ್ಧವಾಗಿ ಸುಟ್ಟು ಮಡಗಲೆದ್ದು ಹಾರಿ ಹೋಯಿತೆಂದು 2 ತಿಳಿಯುತಿಹುದು ತಿಳಿಯದಿಹುದು ಬೆಳೆಯುತಿಹುದು ಬೆಳೆಯದಿಹುದುಹೊಳೆಯುತಿಹುದು ಹೊಳೆಯದಿಹುದು ಸುಳಿಯದಿಹುದುತಿಳಿದು ನಾಲ್ಕು ದಿಕ್ಕಿನಲ್ಲಿ ಹೊಳೆದು ಎಂಟು ದಿಕ್ಕ ತೋರಿಬಳಸಿ ಸುತ್ತ ತಿರುಗುತಿಹುದು ಬಳಲಿ ಬಳಲದೆಒಳಗೆ ಹೊರಗೆ ತೋರುತಿಹುದು ಅಳಿದ ವಸ್ತು ಮುಟ್ಟದಿಹುದುಕಳವಳಂಗೆ ಎರಡು ಗುಣವ ತೋರಿ ಮೆರೆವುದುತಿಳಿದು ನೋಡೆ ಕೈಗೆ ಸಿಕ್ಕಿ ಒಳಗೆ ಬಯಲ ತೋರುತಿಹುದುಪ್ರಣವ ಒಂದು ಕೋಟಿ ನುಂಗಿ ಉಗುಳಿತಿಪ್ಪುದೋಂ ಎಂದು 3 ತತ್ತಿಯಾದ ಬ್ರಹ್ಮನೀಗೆ ದಿಕ್ಕು ಅಖಿಲಾಂಡವೆಲ್ಲಹೆತ್ತ ತಂದೆಗಾದವನೆ ನಿತ್ಯವುಳ್ಳವ ಸತ್ತು ಹುಟ್ಟಲಿಲ್ಲವೆಂದು ಅತ್ತ ನೋಡಿ ಇತ್ತ ತಿರುಗೆ ತತ್ತಿಯೊಳಗೆ ಬೆಳೆದವೆಲ್ಲ ಸತ್ತವೆನ್ನುತಸತ್ತು ಹೋದ ದೀಪದಂತೆ ಉತ್ಪತ್ತಿಯಾದವಗೆಸತ್ತು ಸತ್ತು ಹುಟ್ಟುವುದು ತಪ್ಪದೆನ್ನುತಎತ್ತಿ ಜಗವ ನುಂಗಿ ತನ್ನ ಹೊಟ್ಟೆಯೊಳಿಂಬಿಟ್ಠುಕೊಂಡುಕತ್ತಲೆಗೆ ಕರ್ತೃವೆಂಬ ಜಗವಸತ್ಯ ಕೇಳಿರೋ ಎಂದು | 4 ಪಂಕಜನ ತಾಯಿ ಸುತನ ಅಂಕದಲ್ಲಿ ಹುಟ್ಟಿ ಜಗವಮಂಕು ಮಾಡುತಿಪ್ಪ ಮಾಯೆ ಹತ್ತು ಶಂಕೆಯಶಂಕೆಕಾರ ಶತ್ರುಮಿತ್ರರಿಬ್ಬರಿಗಾಧಾರವೆಂದುಕುಂಕರದಿಪ್ಪತ್ತೊಂದು ಕೋಟಿ ಪಾಶವುಓಂಕಾರದೊಳಗೆ ಪುಟ್ಟಿ ಓಂಕಾರದೊಳಗೆ ಬೆಳೆದುಓಂಕಾರದೀ ಜಗವ ಎತ್ತಿ ಮೆರೆವುದೋ ಎಂದು 5 ಪ್ರಣವ ಒಂದರೊಳಗೆ ಒಂದು ಕೋಟಿಯನ್ನು ತೋರಿ ಪಡೆಯ (ಕಡೆಯ ?)ಕುಣಿಕೆಯೊಳಗೆ ಎಂಟು ಕೋಟಿಯನ್ನು ತೋರುತತೃಣವ ಹಿಡಿದು ಬರೆಯುತಿಪ್ಪ ಒಂದು ರೋಮ ಕೂಪದಲ್ಲಿಕುಣಿಕೆಯೊಳಗೆ ಜಗದ ಜೀವರಾಶಿ ಎಲ್ಲವಸುಳಿದ ವಿಷ್ಣು ಬ್ರಹ್ಮನೆಂಬ ಹಣೆಯ ಕಣ್ಣ ರುದ್ರನೆಂಬ ಮಣೆಯಗಾರರೆಪ್ಪತ್ತೇಳು ಕೋಟಿ ಸಂಖ್ಯೆಯುಹಣೆಯ ಕಾಣದವರ ಕೀಲಿನೆಣಿಕೆಯಲ್ಲಿ ಹೊಲಬುದಪ್ಪಿಪ್ರಣವ ಒಂದು ಕೇಳುತಿಪ್ಪ ಪರಬ್ರಹ್ಮ ಓಂ ಎಂದು 6 ಸುಳಿ ಕಮಲ ಪಾದ ಮೇಲೆ ಮಸ್ತಕವುತೊಳಲಿ ಕಾಣೆ ವೇದವೆಂದು ಬಳಲಿ ಬಳಲದೆಪ್ರಳಯ ಕೋಟಿ ಪ್ರಾಣಿಗಳಿಗೆ ಹೊಳವುಗಾಣಲೀಸದಂತೆಬೆಳೆದು ಹೋಗುವ ಗತಿಯೆಂಬುದಿತ್ತಲರಿಸುತಕಳವಿನವರು ಬಂದು ಇಳೆಯ ಮೇಲೆ ನಿಂದುಬಿಳಿಗಿರಿವಾಸ ತಿರುಮಲೇಶ ಆದಿಕೇಶವ ತಾನೆಯೆಂದು 7
--------------
ಕನಕದಾಸ
ಅಪ್ಪ ಕೇಳೋ ಬೇಡಿಕೊಂಬೆ ನಿನ್ನ ತಿಳಿಯಪ್ಪಒಪ್ಪಿ ಮಾತನ್ನಾಡಿಸಿದರೆ ನೀನೆ ಜಗದಪ್ಪ ಪ ನಾನದಾರು ಬಂದೆನೆಲ್ಲಿಗೆ ಎನ್ನುತ ನೀನಪ್ಪನಾನು ಹೋಗುವೆ ಎಲ್ಲಿಗೆ ಎಂದು ಚಿಂತಿಸು ನೀನಪ್ಪನೀನು ಸುಳಿಗಾಳಿಯ ಶಾವದ ತೆರದಂದದಿ ಇಹೆಯಪ್ಪನಾನಾ ಭವವಾಚರಿಸುತಿಹೆ ಆದಿ ಅಂತ್ಯವಿಲ್ಲಪ್ಪತನುವ ನೆಚ್ಚಬೇಡ ಮೊದಲಿನ ತನುವದೇನಾಯಿತಪ್ಪತನಯ ಸತಿಯರನೆಲ್ಲ ಬಿಟ್ಟುಬಂದೆ ನೀನುಮನೆ ಕಟ್ಟುವೆ ನೀನು ಮೊದಲಿನ ಮನೆ ಏನಾಯಿತಪ್ಪಾನಿನಗೆ ಕುಲವು ಎಷ್ಟಾದವು ಎಣಿಸಿಕೊಳ್ಳಪ್ಪ2 ಹಿಂದೆ ಮುಂದೆ ಕಾಣದಂತೆ ತಿರುಗಿ ತಿರುಗಿ ಅಪ್ಪಬೆಂದು ಬೆಂದು ಓಡಾಡುತಿಹೆ ಸ್ವರ್ಗ ನರಕಕಪ್ಪಎಂದೆಂದಿಗೂ ಅರಿವಾಗದ ಮರೆವು ಮುಚ್ಚಿ ಅಪ್ಪಅಂಧಕಾರ ಸಂಸಾರದಿ ಕಳವಳಿಸುತ ಅಪ್ಪ3 ಕಣ್ಣುಯಿದ್ದು ಕಣ್ಣಿಗೀಗ ಬೀಳಬೇಡವಪ್ಪನಿನ್ನ ನರಿವುದಕ್ಕೆ ಮನುಜ ಜನ್ಮ ಸಾಧನವಪ್ಪಹೊನ್ನು ಹೆಣ್ಣು ಮಣ್ಣು ಎನಗೆ ಬೇಡ ಬೇಡಪ್ಪಎನ್ನ ಬೋಧೆ ಕೇಳದಿರಲು ಕೆಟ್ಟುಹೋದೆಯಪ್ಪ 4 ವಾಸನದಿಂದ ತಿರುಗುವೆ ರಾಟಾಳರಂತಪ್ಪದೇಶಿಕ ಸದ್ಗುರು ಹೊಂದು ದೇವನಹೆಯಪ್ಪನಾಶವಹವು ನಾನಾ ಗುಣಗಳು ಜೀವನ ತನುವು ಅಪ್ಪಈಶ ಚಿದಾನಂದನಹೆ ಜನ್ಮವಳಿದು ಅಪ್ಪ 5
--------------
ಚಿದಾನಂದ ಅವಧೂತರು
ಅಮ್ಮ ನೀ ಕರೆತಾರೆ ಅರವಿಂದನಯನ ಒಮ್ಯಾದರು ಬಾರ ನಮ್ಮನೆಗೆ ಬ್ರಹ್ಮನ ಪಡೆದನಗಮ್ಯಮಹಿಮನೆ ತಾ ಕಾಮ್ಯಾರ್ಥ ಕರೆವ ಶ್ರೀ ರಮ್ಮೆರಮಣನ ಪ ಘನ ಉದಕದಿ ನೋಡೆ ಗ್ರಂಥಚೋರನ ಕೊಂದು ವೇದವ ತಂದಜಗಿತ್ತು ಬರುವೊನೊ ಪಯಾಬ್ಧಿಯೊಳು ಸುಧೆ ಸುರಜನರಿಗೆ ನೀಡಿ ಮೇರುಮಂದರದಲಡಗಿಕೊಂಡಿಹನೊ 1 ಭೂಮಿ ಬಗಿದು ನೋಡ್ಹೇಮಾಕ್ಷನಂತಕನಾಗಿ ಕೋಡಿಂದಲಾ ಧರೆನೆತ್ತಿ ಬರುವೊನೊ ಉಗುರಿನಿಂದಲಿ ಉರಬಗಿದು ಕರುಳನ್ಹಾಕಿ ಮೃಗರೂಪ ಧರಿಸಿ ಕಂಬದಲಿ ಬರುವೊನೊ 2 ಗೊತ್ತನ್ಹೇಳುವೆ ಈ ಜಗತ್ತು ಸಾಲದಲ್ಹೋಗಿ ಒತ್ತಿ ಬಲಿಯ ಬಾಗಿಲ್ಹತ್ತಿಲಿರುವೊನೊ ಹೈಹಯ ಮೊದಲಾದ ಸರುವ ರಾಜರನೆಲ್ಲ ಗೆಲಿದು ಕಾಮಧೇನು ಕೊಂಡು ಬರುವನೊ3 ಒಬ್ಬ ಸತಿಯನಾಳಲಾರದೆ ಗರ್ಭಿಣಿಯ ದಬ್ಬಿ ಕಾನಡಿಗೊಬ್ಬೆ (ಕಾಡಿನಲ್ಲೊಬ್ಬೆ?) ಲ್ಲಿರುವೊನೊ ತೋಷ್ಟಪುತ್ರಿಯರು ಮೇಲಷ್ಟಭಾರ್ಯರು ಶತಪತ್ನೇರನಾಳದಿನ್ನೆತ್ತÀ ಪೋಗಿಹನೊ 4 ಬತ್ತಲೆ ತಿರುಗುವನಿತ್ತ ಬರುವನ್ಹ್ಯಾಗೆ ವಸ್ತ್ರವ ಕೊಟ್ಟು ನಮ್ಮ್ಹತ್ತಿಲೆ ಹರಿಯ ಖಡ್ಗ ಪಿಡಿದು ಕಲಿಗಳ ಕೊಲ್ಲಲ್ಹೋಗುವ ಬಿದ್ದು ಪಾದಾರವಿಂದಕ್ಕೆರಗಿ ಭೀಮೇಶಕೃಷ್ಣ(ನ) 5
--------------
ಹರಪನಹಳ್ಳಿಭೀಮವ್ವ
ಅರಿತ ಗುರುಗಳನೀಗ ಹುಡುಕಿ ಹೊಂದು ಎಚ್ಚರಿಂದುಮರುಳ ಗುರುಗಳನೀಗ ಸೇರೆ ನರಕ ತಪ್ಪದೋ ಪ ಒಳ್ಳೆ ನಾವೆಯೊಳು ಕಲ್ಲು ಹಾಕಿ ನದಿಯನು ದಾಟಿಪುದುಕಲ್ಲಿಗೆ ಕಲ್ಲು ಕಟ್ಟಿ ಮುಂದೆ ನಡೆಯದು ಮುಳುಗಿಹೋಗುವುದೋ1 ಜಾರುವವನ ಕಾಲು ಹಿಡಿಯೆ ಜಾರುತ ನೀನು ಬೀಳುವೆಪೋರ ಗುರುವ ನಿಂತು ಸೇರೆ ಕೆಟ್ಟುಹೋಗುವೆ ಭವಕೆ ಸೇರುವೆ2 ತಾನು ಮೂರ್ಖ ಮೂರ್ಖನ ಕೂಡಲು ಇಹುದು ಕೇಡು ಮುಂದೆಜ್ಞಾನಿ ಚಿದಾನಂದ ಬಗಳೆ ಚರಣ ಹೊಂದೆ ಮುಕ್ತಿಯ ಅಂದೇ3
--------------
ಚಿದಾನಂದ ಅವಧೂತರು
ಆ ಬಾಲಗೋಪಾಲ ವರ್ಣನೆ ಆಡ ಹೋಗುವಾ ಬಾರೊ ರಂಗಾ ಪ ಆಡ ಹೋಗುವಾ ಬಾರೊ ರಂಗಾ ಕೂಡಿ ಕಾಳಿಂದೀ ತೀರದಲ್ಲಿ ನಾಡ ಗೊಲ್ಲರ ಹೆಂಗಳಿಗೆಲ್ಲ ಬೇಡಿದಿಷ್ಟಾರ್ಥಗಳ ಕೊಡುವಾ ಅ.ಪ. ಆಣಿಕಲ್ಲು ಗೋಲಿ ಗಜ್ಜುಗ ಚಿಣ್ಣಿಕೋಲು ಚಂಡು ಬುಗುರಿ ಕಣ್ಣುಮುಚ್ಚಾಲೆ ಕುಂಟಹಲಿಪೆ ಬಣ್ಣ ಬಣ್ಣದಾಟಗಳನು 1 ಸೋಲುಗೆಲವಿಗೆಲ್ಲ ನೀನೆ ಪಾಲುಗಾರನಾಗಿ ನಮ್ಮ ಮೇಲೆ ಮಮತೆ ಇಟ್ಟು ಸಾನು - ಕೂಲನಾಗಿ ಕೈಯ್ಯ ಪಿಡಿಯೋ2 ಮೆಟ್ಟು ಮೆಟ್ಟು ಕೋಲು ಕೈಲಿ ಕಟ್ಟು ಬುತ್ತಿ ಕೊಳಲು ಕಂಬಳಿ ಧಿಟ್ಟ ಗೋವಳರಾಮ ಶ್ರೀದ - ವಿಠಲಯ್ಯ ಯಾಕೆ ತಡವೋ3
--------------
ಶ್ರೀದವಿಠಲರು
ಆನಂದ ಲಹರಿ (ಪಾರಮಾರ್ಥ ಮುಯ್ಯದ ಹಾಡು ) ಗಿರಿಜೇಶ ಮನೋಜಾತಾ ಸುರಮುನಿಜನಪ್ರೀತಾ ಕರುಣಾ ಸಾಗರ ಗಣನಾಥಾ ಜಗವದನಾ ಚರಣಕೆ ಶರಣೆಂದು ಬಲಗೊಂಬೆ ಕೋಲೆ 1 ಸಕಲಾ ಮುಖದೊಳು ಯುಕುತಿಯ ನುಡಿಗಳಾ ಪ್ರಕಟದಿ ನುಡಿಸುವೆ ಜನನಿ ಸರಸ್ವತಿ ಭಕುತಿಲಿ ಶರಣೆಂಬೆ ಕಲ್ಯಾಣಿ 2 ಆಚ್ಯುತಾನಂತನೆ ಸಚ್ಚಿದಾನಂದನೆ ನೆಚ್ಚಿದ ಶರಣರ ಸುರಧೇನುವೆ ಅವಧೂತಾ ಎಚ್ಚರ ಕೊಟ್ಟು ಸಲಹಯ್ಯ 3 ಕರಿಯಾ ಮೊರೆಯ ಕೇಳಿ ಭರದಿಂದೊದಗಿ ಬಂದು ಕರದಿಂದಲೆತ್ತಿ ಸಲಹಿದೆ ಶ್ರೀಶಾ ಚರಣವದೋರಿ ಕಾಯಯ್ಯ 4 ಶರೀರ ಒಂದರಲಿದ್ದು ನರನಾರೀರೂಪದಲಿ ಚರಿತವ ದೋರದೆ ಅನುಪಮ ಶಂಕರ ಕರುಣಿಸು ಫಣಿಗಣ ಭೂಷಣಾ 5 ಅಂಜನೀಸುತನಾಗಿ ಕಂಜನಾಭವ ಸೇವೆ ರಂಜಿಸುವಂತೆ ಮಾಡಿದ ದೈತ್ಯರ ಭಂಜನ ಹನುಮಂತ ಕರುಣಿಸು6 ಚಾರು ಚರಿತಗಳ ತೋರಿದೆ ಜಗದೊಳು ಮುನಿರಾಯಾ ಸುಖತೀರ್ಥ ತಾರಕ ಶರಣರ ನಿಜಗುರು7 ಮೇದನಿಯೊಳಗುಳ್ಳ ಸಾಧು ಸಂತರ ನಿಜ ಅನುದಿನ ಜಗದೊಳು ಸಾದರದಿಂದ ನೆನೆಯುತ 8 ಶರಣವ ಹೊಕ್ಕರ ಕರುಣದಿಂದಲಿ ನೋಡಿ ತರುಣೋಪಾಯವ ತೋರುವಾ ಮಹಿಪತಿ ಗುರುರಾಯ ನಿನ್ನ ಬಲಗೊಂಬೆ9 ಕರುಣವಾಗಲು ಅವರ ಪರಮ ಮೂಕನಜ್ಜಿಹ್ವಾ ಸುರಸ ಮಾತುಗಳ ಆಡೋದು ಹುಸಿಯಲ್ಲ ಧರೆಯೊಳು ಅನುಭವವಿದು10 ಅವರಾಮಹಿಮೆಗಳ ವಿವರಿಸಿ ಹೇಳಲು ಹವಣವೆಲ್ಲಿಹುದು ಮನುಜಗ ಭಕುತರು ಅವನಿಲಿಬಲ್ಲರು ನಿಜಸುಖ 11 ಏನೆದು ಅರಿಯದಾ ಹೀನ ಅಜ್ಞಾನಿಯು ನ್ಯೂನಾರಿಸದೇ ಸಲಹಯ್ಯಾ ಮಹಿಪತಿ ದೀನೋದ್ಧಾರಕಾ ಕರುಣಿಸು 12 ಪದುಮನಾಭನ ಭಕ್ತಿ ಚದುರಾ ಮುತ್ತೈದೇರು ಒದಗಿನ್ನು ಬನ್ನಿ ಹರುಷದಿ ಮುಪ್ಪದಾ ಉದಿತಾ ನುಡಿಗಳ ಕೇಳಲು 13 ವಿವೇಕಬೋಧಿಯಂತ ನಾವಕ್ಕತಂಗೇರು ದೇವಗುರುರಾಯನ ಮಕ್ಕಳು ನಿಜಶಕ್ತಿ ಭುವನದಿ ನಮ್ಮಾ ಹಡೆದಳು 14 ಸುಜ್ಞಾನ ವೈರಾಗ್ಯ ಸಂಜ್ಞದಿ ಮೆರೆವರು ಪ್ರಾಜ್ಞರು ನಮ್ಮಣ್ಣಾ ತಮ್ಮರು ಹರಿಭಕ್ತಿ ಮಜ್ಞರು ಅವರಿಗೆ ಸರಿ ಇಲ್ಲಾ 15 ಭಕ್ತಿಯ ತೌರಮನಿ ಶಕ್ತಿಯ ಬಲದಿಂದ ಯುಕ್ತೀಲಿ ನಾವು ಬರುತೇವು ಹರಿಭಕ್ತಿ ಭೋಕ್ತರು ನೀವು ಬರಬೇಕು 16 ದಿವ್ಯಾಂಬರವನುಟ್ಟು ಸುವಿದ್ಯಾ ಇಡಗಿಯು ತೀವಿದರ ಅರಹು ಅಂಜನಾ ವನೆ ಇಟ್ಟು ಸುವಾಸನೆಯ ಪುಷ್ಪ ಮುಡಿದಿನ್ನು 17 ಈರೆರಡು ಭೇರಿಯ ಸಾರಿಸಿ ಎಡಬಲಕ ಆರು ವಂದಣಾ ನಡಸೂತ ಕಹಳೆಗಳು ಮೂರಾರು ಊದಿಸುತೆ ಬರುತೇವು 18 ಸಾಧನ ನಾಲ್ಕರ ಕುದುರೆಯ ಕುಣಿಸುತ ಒದಗಿದ ಪ್ರೇಮದ ಮದ್ದಾನಿ ಯೊಡಗೂಡಿ ಚದುರೇರು ಮುಯ್ಯ ತರುತೇವು 19 ಭಾವದ ಬಯಲಾಟ ಆವಾಗ ಆಡುತ ಸಾವಧ ಮುಯ್ಯಾ ತರುತೇವು ನುಡಿಗಳ ನೀವಾತ ಕೇಳಿ ಜನವೆಲ್ಲಾ 20 ಮೆರೆವಾಭಿಮಾನಿಯು ಇರುವ ಸೋದರ ಮಾವ ಅರಸಿ ವಿಷಯಯೆಂಬತ್ತೆರಯರ ಮನಿಗೀಗ ಭರದಿಂದ ಮುಯ್ಯ ತರುತೇವು 21 ರಾಯ ಅಭಿಮಾನಿ ಸಿರಿಯದ ಸಡಗರ ನಾ ಏನ ಹೇಳಲಿ ಜಗದೊಳು ಪಸರಿಸಿ ತಾ ಎಡ ಬಲವನು ನೋಡನು 22 ಏಳು ಸುತ್ತಿನ ಗೋಡಿ ಮೇಲಾದ ಮನಿಗಿನ್ನು ಸಾಲಾದ ಒಂಭತ್ತು ಬಾಗಿಲು ಚಲುವಾದ ಮ್ಯಾಲಿಹ ಒಂದೊಂದು ಗಿಳಿಗಳು 23 ಅಂಗಳ ಹೋಗಲಿಕ್ಕೆ ಕಂಗಳ ಲೇಸಕಂಡೆ ಮಂಗಳವಾದ ಉಪ್ಪರಿಗೆ ಥರಥರ ರಂಗ ಮಂಟಪ ನಡುವಂದು24 ಬಿಡದೆಂಟು ಕಂಬದಿ ಸಡಗರ ರಚಿಸಿದ ಒಡನಿಹ ಚಾವಡಿರಾಯನ ಸೌಖ್ಯಕ ಪೊಡವಿಲಿ ಸರಿಯಾ ಕಾಣೆನು 25 ಎಂಟು ದಿಕ್ಕಿಗೆ ನೋಡೀ ಘಂಡೆಯ ಕಟ್ಟಿದ ಎಂಟು ಆನೆಯಾ ಘಡಘಾಡಿ ತಲಿಯಲಿ ಉಂಟಾದ ಗುರುತರದ ಅಂಕೂಶಾ 26 ಬಿಡದೆಂಟು ಕಂಬದಿ ಸಡಗರ ರಚಿಸಿದ ಒಡನಿಹ ಆನೆಯಾ ಘಡಘೂಢೀ ಥಳೀಐಳೀ ಊಂಠಾಧ ಘೂಋಊಥೃಧ ಆಂಖೂಶಾ 26 ಐದೈದು ಸಾಲಕ ಐದೈದು ಕುದುರೆಯು ಐದೈದು ಭಂಟರು ಅದಕಿನ್ನು ಅನುದಿನ ಮೈದಡುವುತಾ ಏರುವರು27 ಹತ್ತು ಮಂದಿಯಾ ಆಪ್ತರು ಮನರಾಯಾ ಒತ್ತಿ ಆಳುವ ಪ್ರಧಾನಿ 28 ಅನುವಾದ ಗುಣತ್ರಯಾ ಅನುಜರು ಈತಗೆ ಅನುಭವಿ ಒಬ್ಬ ಇದರೊಳು ಹರಿನಾಮಾ ನೆನೆವನು ಅನ್ಯ ಹಂಬಲವಿಲ್ಲಾ 29 ನಾಕಾವಸ್ಥೆಗಳೆಂಬಾ ನಾಕು ಒಳ ಮನೆಗಳು ಇಕ್ಕಿಹದೊಂದು ಅದರೊಳು ಭಂಡಾರ ಬೇಕಾದವರೆ ತೆರೆವರು 30 ಈರಾಯ ನೈಶ್ವರ್ಯ ಆರು ಬಣ್ಣಿಸುವರು ಆರೊಂದು ಮಂದಿ ಮಕ್ಕಳು ಹೆಸರಾದ ಪರಿಯಾಯ ಕೇಳಿ ಹೇಳುವೆ 31 ಮೊದಲು ಕಾಮ ಕ್ರೋಧವೊದಗಿ ಲೋಭಮೋಹ ಮದಮತ್ಸರೆಂಬ ಬಾಂಧವರು ನಿಜ ತಂಗಿ ವಿದಿತ ಅಜ್ಞಾನಿ ಶಕ್ತಿಯು 32 ಬಂದು ಹೊರಗನಿಂತು ಒಂದು ಜಾವಾಯಿತು ಮುಂದಕ ನಮ್ಮ ಕರಿಯಾರು ನಾವರಸಿ ಕಂದಿದ ಮಾರೀ ತೋರಳು 33 ಪಶ್ಚಾತಾಪವೆಂಬ ಬಿಚ್ಚಿ ಹಾಸಿಗೆ ಹಾಸಿ ತುಚ್ಚರ ದೂರ ಝಾಡಿಸೀ ಬರುತೇವು ಎಚ್ಚರ ಲೋಡಾ ತಂದಿರಿಸಿ 34 ಈ ಕಲ್ಲ ಮ್ಯಾಲದ್ದು ಈ ಕಲ್ಲಿಗ್ಹಾರುವಾ ತಾ ಕೋಡಗನಾ ಗುಣದಂತೆ ಭಾವಯ್ಯ ಆ ಕಾಮಣ್ಣನ ಕರಿಯಾರೆ35 ಎಷ್ಟು ಉಂಡರ ದಣಿಯಾ ಎಷ್ಟು ಇಟ್ಟರ ದಣಿಯಾ ಎಷ್ಟು ಉಟ್ಟರ ದಣಿಯಾನು ಕಾಮಣ್ಣ ಎಷ್ಟು ಕೊಟ್ಟರ ದಣಿಯಾ 36 ಒಳ್ಳೆವರರಿಯನು ಹೊಲ್ಲವರರಿಯನು ಕೊಳ್ಳಿಕಾರನಾ ಮತಿಯಂತೆ ಭಾವಯ್ಯ ನಿಲ್ಲರು ಈತನ ಇದರೀಗೆ 37 ಈತನ ತಮ್ಮನು ಮಾತು ಮಾತಿಗೆ ಬಹಳಾ ಖ್ಯಾತಿಯ ತಾನು ಪಡೆದಾನು ಕೋಪಣ್ಣ ಆತನ ಮುಂದಕ ಕರಿಯಾರೆ 38 ನೆಂಟರ ಅರಿಯನು ಇಷ್ಟರ ಅರಿಯನು ಬಂಟರಾ ಮೊದಲೇ ಅರಿಯನು ತಪಸಿಗೆ ಕಂಟರನಾದಾ ಈತನೇ 39 ಥರ ಥರ ಕುಣಿವುತ ಘರ ಘರ ಹಲ್ಲು ತಿಂದು ನೆರೆಮೋರೆ ಕೆಂಪು ಮಾಡುವಾ ಕೋಪಣ್ಣಾ ಸ್ಮರಣೆಯಾ ತನ್ನ ಮರೆವನು 40 ಕಂಡವರಿಗೆ ತಾನು ಕೆಂಡದ ನುಡಿಯಾಡಿ ಖಂಡಿಸಿ ಬಿಡುವಾ ಗೆಳತನಾ ಕೋಪಣ್ಣ ಹಿಂಡುವ ಹಿಡಿದು ಪ್ರಾಣವ41 ತಾನಾರೆ ಉಣ್ಣನು ಜನರಿಗೆ ಇಕ್ಕನು ಜೇನಿನನೊಣದಾ ಗುಣದಂತೆ ಲೋಭೇಶಾ ದೀನನ ಮುಂದಕ ಕರಿಯಾರೆ42 ಬಿಚ್ಚಾರುವಿಯನು ವೆಚ್ಚಮಾಡೆಂದಿಗೆ ಬಚ್ಚಿಟ್ಟು ಹೂಳಿನೆಲದೊಳು ಲೋಭೇಶಾ ಹುಚ್ಚಾಗಿ ಕಾಯ್ದಾ ಫಣಿಯಂತೆ43 ಕಾಸು ಹೋದಾವೆಂದು ಅಸುವ ಹೋಗುವವರಿ ಕಾಸಾವೀಸಿಯಾ ಬಡವನು ಲೋಭೇಶಾ ಹೇಸನು ಎಂದು ಮತಿಗೇಡಿ 44 ಇಳೆಯೊಳೀ ಪರಿಯಲೀ ಗಳಿಸಿದ ಧನವನು ಕಳೆದುಕೊಂಬರು ಅರಸರು ಕಡಿಯಲಿ ಶೆಳೆದು ಕೊಂಡನು ಪುಗಸಾಟೆ 45 ಇವರಿಂದ ಕಿರಿಯನಾ ಹವಣವ ನೋಡೀರೆ ಅವಗುಣದ ರಾಶಿ ಜಗದೊಳು ಮೋಹಾಂಗಾ ಅವನಾ ಮುಂದಕ ಕರಿಯಾರೇ 46 ತಾಯಿ ತಂದೆಗಳ ನ್ಯಾಯನೀತಿಗಳಿಂದ ಸಾಯಾಸದಿಂದ ಭಕ್ತಿಯ ಮಾಡದೆ ಮಾಯದಾ ಬಲಿಗೊಳಗಾದಾ 47 ಏನು ಬೇಡಿದುದೆಲ್ಲಾ ಪ್ರಾಣವವೆಚ್ಚಿಸಿ ಮಾನಿನೀಯರಿಗೆ ಕುಡುವನು ಮೋಹಾಂಗಾ ಮನವಿಡ ಒಳ್ಳೆವರ ಸೇವೆಗೆ 48 ಲೆಕ್ಕ ವ್ಯವಹಾರವಾ ಲೆಕ್ಕದಿ ಮಾಡದೇ ಮಕ್ಕಳಾಟಕಿಯ ಮಾಡುವಾ ಕ್ರೀಡೆಯಾ ನಕ್ಕಾರೆಂಬ ಸ್ಮರಣಿಲ್ಲಾ 49 ಕಮಲದ ವಾಸನೆಗೆ ಭ್ರಮರವು ಸಿಕ್ಕಿದ ಕ್ರಮದಿಂದ ನೋಡಿ ಸೆರೆಯಾದಾ ಶ್ರೀವಧು ರಮಣನ ನಾಮಾ ನೆನಿಯನು 50 ತರುವಾಯದವನೀತಾ ದುರುಳನ ನೋಡಿರೆ ಮರಳು ಬುದ್ಧಿಯಾ ಮದರಾಯಾ ಆತನಾ ಸರಕು ಮಾಡುವಾ ಕರಿಯಾರೆ 51 ಹೊರಸು ತೊಯ್ಯದಂತೆ ಭರ್ರನೆ ಬಿಗಿವನು ಶರಣರ ಕಂಡು ಬಾಗನು ತಲೆಯನು ಅರಿತವರಿಗೇನಾ ಹೇಳಲಿ 52 ಬಗೆಯಾದೆ ಹಿತವನು ಪಗಡಿಪಂಚಿಗಳಾಡಿ ಹಗಲಿನಾ ಹೊತ್ತುಗಳೆವನು ರಾತ್ರೀಲಿ ಮುಗುಧೇಯರೊಡನೆ ಒಡನಾಟಾ 53 ಕಣ್ಣಿಲ್ಲದಾನೆಯು ಚನ್ನಾಗಿ ತಿರುಗುತ ಮುನ್ನ ಬತ್ತಿದಾ ಬಾವಿಯ ಬೀಳ್ವಂತೆ ಕಣ್ಣೆದ್ದು ಕುರುಡನಾದನು&
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆನಂದಮಯನಾದೆ ನಾನು ದಿವ್ಯ ಜ್ಞಾನಾಮೃತವನುಂಡು ಪೇಳಲಿನ್ನೇನು ಪ ಶರೀರ ಭ್ರಾಂತಿಗಳನೆಲ್ಲ ಕಳೆದು ಕರ್ಮ ದುರಿತ ಸಂಸಾರ ಆಶಾಪಾಶವಳಿದು ನರನೊಳಗೆ ನರನಾಗಿ ಸುಳಿದು ಸರ್ವ ಪರಿಪೂರ್ಣ ಭರಿತ ತಾನೆಂಬುದು ತಿಳಿದು 1 ಗುರುಕಟಾಕ್ಷದ ನೆಲೆ ನೋಡಿ ತಿರುಗಿ ಬರುವ ಹೋಗುವ ಭ್ರಮೆಗಳನೀಡಾಡಿ ಶರಣರ ಸ್ತೋಮದಿ ಕೂಡಿ ಭವ ಶರಧಿಯ ದಾಟಿ ಹಂಸಾತ್ಮಕನೊಳಾಡಿ ಆನಂದ 2 ಗುರುಚರಣಗಳ ಧ್ಯಾನಿಸುತಾ ಒಡನೆ ಎರಕವಾದಂತೆ ಬೇರೂರಿತು ಚಿತ್ತಾ ವರವಿಮಲಾನಂದ ಗುರುದತ್ತಾತ್ತೇಯನ ಕರುಣಾಸಮುದ್ರದೊಳ್ಬೆರೆದು ನಲಿವುತ್ತಾ ಆನಂದ 3
--------------
ಭಟಕಳ ಅಪ್ಪಯ್ಯ
ಆವುದು ಖರೆಯೆಲೊ ಜೀವನೆ ಆವುದು ನಿಜವೆಲೊ ಪ ಆವುದು ಖರೆಯಲೋ ಜೀವ ಜಗದ ಸುಖ ಮಾಯದೆಲ್ಲನು ಭಾವಿಸಿ ನೋಡೋಅ.ಪ ಬಡತನ ನಿಜವೇನೋ ನಿನಗೀ ಕಡುಸಿರಿ ಸ್ಥಿರವೇನು ಮಡದಿ ಮಕ್ಕಳು ನಿನ್ನ ಸಂಗಡ ಕಡೆತನಕಿಹ್ಯರೇನೊ ಹೆಡತಲೆ ಮೃತ್ಯು ಬಂದು ಪಿಡಿದು ಎಳೆಯುವಾಗ ಅಡರಿಕೊಂಡು ನಿನ್ನ ಬಿಡಿಸಿಕೊಂಬುರೇನು 1 ರಾಜ್ಯ ಭಂಡಾರವೆಲ್ಲ ನಿನಗೆ ಸಹಜವಾದದ್ದಲ್ಲ ಗೋಜುಪ್ರಪಂಚ ನಿಖಿಲವಂ ದಿನಮಾಜಿಹೋಗುವುದೆಲೊ ಸೋಜಿಗವಾಗಿ ಮಿಂಚು ತೇಜದಡಗುವಂತೆ ಈ ಜಗ ಸಮಾಜ ನಿಜವಿನಿತಿಲ್ಲೆಲೊ 2 ಕತ್ತೆಯಂತೆ ಕೂಗಿ ಜನ್ಮವ್ಯರ್ಥ ಕಳೆಯಬೇಡೊ ಉತ್ತಮರಿಗೆ ಬಾಗಿ ಸತ್ಯಪಥಕೆ ಹೊಂದು ಪಾಡೊ ನಿತ್ಯ ನಿರ್ಮಲ ಸರ್ವೋತ್ತಮ ಶ್ರೀರಾಮಪಾದ ಭಕ್ತಿಯಿಂ ಪಾಡಿ ಮುಕ್ತಿಯ ಪಡೆಯೊ3
--------------
ರಾಮದಾಸರು
ಇದು ಈಗ ಸಮಯ ಸೀತಾರಾಮ ಪ ಇದು ಈಗ ಸಮಯವು ಪದುಮದಳಾಕ್ಷನೆ ಸದಯದಿ ನಿಂದೆನ್ನ ಒದಗಿ ಕಾಯ್ವ ಶ್ರೀರಾಮ ಅ.ಪ. ಖಾಸವು ತುಂಬೆ ಕಂಠದಿ ಶ್ವಾಸವು ನಿಲ್ಲೆ ಘಾಸಿಯಾಗಲು ಘುರುಘುರುಕೆಂದು ಬÉೂೀರಿಡೆ ಸಾಸಿರ ಚೇಳು ಕಡಿದಂತಾಗುವಾಗ 1 ಕಾಲವು ಸಲ್ಲೆ ಪಂಚೇಂದ್ರಿಯಂಗಳು ಸಡಿಲೆ ಈ ದೇಹದಿ ಲಾಲಾ ಮೂತ್ರವು ಮಲ ಜೋಲಿ ಬೀಳುತಲಿರೆ ಕಾಲನ ದೂತರು ಬಂದು ಬಿಡದೆಳೆಯುತಿರುವಾಗ 2 ನಂದನಾದಿಗಳು ನಿಂದು ಗೋಳಿಡುತಿರೆ ಬಂಧು ಬಳಗಗಳು ಒಂದನು ನೋಡಿದೆ ಕುಂದುತ್ತ ಚಿತ್ತದಿ ನಿಂದಿರಲು ತಂದೆ ಧೇನುಪುರಿನಾಥ ಬಂದೆನ್ನ ಕಾಯೊ ಹೋಗುವಾಗ 3
--------------
ಬೇಟೆರಾಯ ದೀಕ್ಷಿತರು
ಇದ್ದಿದ್ದೊಮ್ಮೆ ಇಂಥಾ ಕಷ್ಟ ಏನು ತಂದ್ಯೋ ಹರಿಯೆ ಪೊರೆಯಬೇಕೆಂದು ನುತಿಸುವವಗೆ ಪ ಮಧ್ಯಾಹ್ನಕ್ಕೆ ಮನೆಯ ಒಳಗೆ ಮುದ್ದಿಗೆ ಗತಿಯಿಲ್ಲಾ ವಿದ್ಯಾರ್ಥಿಗಳು ಇಷ್ಟರು ಬಂದರೆ ಇಷ್ಟೂ ಅನ್ನವಿಲ್ಲಾ ಎಂದು ಹೋಗುವೆನು ಎಲ್ಲಿಗೇನೆಂದರೆ ಎಲ್ಲಿ ಏನಿಲ್ಲಾ ಬದ್ಧ ಕಂಕಣವ ಕಟ್ಟಿಕೊಂಡು ನಿನ್ನ ಪಾದವೆ ಗತಿ ಯೆಂದಿರುವೆ ಇಷ್ಟು 1 ಭಿಕ್ಷಕೆ ಬಂದವರಿಗೆ ನೀಡಲು ಹಿಡಿ ಭತ್ತಕೆ ನೆಲೆಯಿಲ್ಲಾ ಕುಕ್ಷುಂಬರರಾಗಿ ಗೃಹಕೆ ಬಂದವರಿಗೆ ಕೂಳಿಗೆ ಗತಿಯಿಲ್ಲಾ ತುಚ್ಛ ಕುಬುದ್ಧಿ ತುಂಟರ ಕೂಡ ಉಪೇಕ್ಷೆ ಮಾಡ್ವರಲ್ಲಾ ಲಕ್ಷ್ಮೀರಮಣ ಶ್ರೀ ರಘುಕುಲ ತಿಲಕ ನೀ ರಕ್ಷಕನೆಂದಾ ಪೇಕ್ಷೆಯಲಿರುವನಿಗೆ 2 ಅತಿಥಿ ಆಭ್ಯಾಗತರು ಬಂದರೆ ಪೂಜಿಸೊ ಅಧಿಕಾರವು ಇಲ್ಲ ಸುತರು ಹಿತರು ಕೂಡುಂಬುವ ಸಂತತ ಸುಖವು ಕಾಣಲಿಲ್ಲ ಹಿತವರುದಾರಿಲ್ಲ ಪತಿ 'ಹೊನ್ನೆ ವಿಠ್ಠಲ’ ಪರಮ ಪುರುಷ ಕೃಷ್ಣಾ 3
--------------
ಹೆನ್ನೆರಂಗದಾಸರು
ಈ ತನುವಿನೊಳಗೆ ಅನುದಿನವಿದ್ದು ಎನಗೊಂದು ಮಾತ ಹೇಳದೆ ಹೋದಿ ಹಂಸ ಪ. ಜಾಳಂಧರಯೆಂಬೊ ಮಾಳಿಗೆ ಮನೆಯಲ್ಲಿ ನೋಳ್ಪರೆ ಒಂಬತ್ತು ಬಾಗಿಲು ಬೇರಿಗೆ ಹೇಳಿ ಹೋಯಿತೆ ಒಂದು ಮಾತ 1 ಏರಿಯು ನೀರನು ತೆಗೆದುಕೊಂಡಿದ್ದೇನೊ ಭೋರೆಂಬೋ ಮಳೆ ಹೊಯ್ದು ಭೋರೆಂಬೊ ಮಳೆ ಹೊಯ್ದು ಬಣವೆದ್ದು ಹೋಗುವಾಗ ಈ ಏರಿಗೆ ಹೇಳಿಹೋಯಿತೆ ಒಂದು ಮಾತ 2 ಗಟ್ಟಿ ಬೆಟ್ಟಗಳಲ್ಲಿ ಅಟ್ಟಡವಿಯಲ್ಲಿ ಇಕ್ಕಿತ್ತು ಇಟ್ಟಿತ್ತು ಜೇನು ತನ್ನ ಸುಖಕಾಗಿ [ಇಟ್ಟ]ತುಪ್ಪವನುಂಡು ನೊಣ ಹಾರಿಹೋಗುವಾಗ ಈ ಬೆಟ್ಟಿಗೆ ಹೇಳಿ ಹೋಯಿತೆ ಒಂದು ಮಾತ 3 ಹೆಸರು ಹೇಳುವೆ ನಾನನುದಿನವು ರಸಭೋಜನವವುಂಡು ಜೋತಿತಾಹೋಗುವಾಗ ಪ್ರಣತಿಗೆ ಹೇಳಿ ಹೋಯಿತೆ ಒಂದು ಮಾತ 4 ಸಪರ್Àಶಯನ ಹಯವದನನಾಡಿದ ಮಾತು ಪಣೆ ಲಕ್ಷ್ಯವ ತೊಡೆದು ಮ್ಯಾಲಿರಲಾಗಿ ಸುಪ್ಪಾಣಿಮುತ್ತು ಬಾಯ್ಬಿಟ್ಟು ಹೋಗುವಾಗ ಈ ಚಿಪ್ಪಿಗೆÀ ಹೇಳಿ ಹೋಯಿತೆ ಒಂದು ಮಾತ 5
--------------
ವಾದಿರಾಜ
ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನುದೋಷ ರಾಶಿ ನಾಶ ಮಾಡು ಶ್ರೀಶ ಕೇಶವ ಪ ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನಚರಣ ಸ್ಮರಣೆ ಕರುಣಿಸಯ್ಯ ನಾರಾಯಣ1 ಕಲುಷ ಮಾಧವ 2 ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನುಇಂದು ಭವದ ಬಂಧ ಬಿಡಿಸು ತಂದೆ ಗೋವಿಂದನೆ 3 ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ 4 ಪಾದ ಪೂಜೆ ಮುದದಿ ಗೈವೆನಯ್ಯ ನಾನುಹೃದಯದೊಳಗೆ ಒದಗಿಸಯ್ಯ ಮಧುಸೂದನ 5 ಕವಿದುಕೊಂಡು ಇರುವ ಪಾಪ ಸವೆದು ಹೋಗುವಂತೆ ಮಾಡಿಜವನ ಬಾಧೆಯನ್ನು ಬಿಡಿಸೊ ಘನ ತ್ರಿವಿಕ್ರಮ 6 ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ 7 ಸದನ ಮಾಡು ಮುದದಿ ಶ್ರೀಧರ 8 ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದುಹುಸಿಗೆ ನನ್ನ ಹಾಕದಿರೋ ಹೃಷಿಕೇಶನೆ 9 ಅಬ್ಧಿಯೊಳಗೆ ಬಿದ್ದು ನಾನು ಒದ್ದುಕೊಂಬೆನಯ್ಯ ಭವದಿಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ10 ಕಾಮಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸುಶ್ರೀಮಹಾನುಭಾವನಾದ ದಾಮೋದರ 11 ಪಂಕಜಾಕ್ಷ ನೀನು ಎನ್ನ ಮಂಕುಬುದ್ಧಿ ಬಿಡಿಸಿ ನಿನ್ನಕಿಂಕರನ್ನ ಮಾಡಿಕೊಳ್ಳೊ ಸಂಕರುಷಣ12 ಏಸು ಜನ್ಮ ಬಂದರೇನು ದಾಸನಲ್ಲವೇನೊ ನಿನ್ನಘಾಸಿ ಮಾಡದಿರೋ ಎನ್ನ ವಾಸುದೇವನೆ 13 ಬುದ್ಧಿ ಶೂನ್ಯನಾಗಿ ನಾನು ಕದ್ದ ಕಳ್ಳನಾದೆನಯ್ಯತಿದ್ದಿ ಹೃದಯ ಶುದ್ಧಿ ಮಾಡೊ ಪ್ರದ್ಯುಮ್ನನೆ 14 ಜನನಿ ಜನಕ ನೀನೆ ಎಂದು ಎನುವೆನಯ್ಯ ದೀನಬಂಧುಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ 15 ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ನೇಮಇರಿಸು ಚರಣದಲ್ಲಿ ಕ್ಷೇಮ ಪುರುಷೋತ್ತಮ 16 ಅಧೋಕ್ಷಜ 17 ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆಭಾರ ಹಾಕಿ ಇರುವೆ ನಿನಗೆ ನಾರಸಿಂಹನೆ 18 ಸಂಚಿತಾರ್ಥ ಪಾಪಗಳನು ಕಿಂಚಿತಾದರುಳಿಯದಂತೆಮುಂಚಿತಾಗಿ ಕಳೆದು ಪೊರೆಯೊ ಸ್ವಾಮಿ ಅಚ್ಯುತ19 ಜ್ಞಾನ ಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನಹೀನ ಬುದ್ಧಿ ಬಿಡಿಸೊ ಮುನ್ನ ಜನಾರ್ದನ 20 ಜಪತಪಾನುಷ್ಠಾನ ನೀನು ಒಪ್ಪುವಂತೆ ಮಾಡಲಿಲ್ಲತಪ್ಪ ಕೋಟಿ ಕ್ಷಮಿಸಬೇಕು ಉಪೇಂದ್ರನೆ 21 ಮೊರೆಯನಿಡುವೆನಯ್ಯ ನಿನಗೆ ಸೆರೆಯ ಬಿಡಿಸು ಭವದ ಎನಗೆಇರಿಸು ಭಕ್ತರೊಳಗೆ ಪರಮಪುರುಷ ಶ್ರೀಹರೇ22 ಪುಟ್ಟಿಸಲೇ ಬೇಡವಿನ್ನು ಪುಟ್ಟಿಸಿದಕೆ ಪಾಲಿಸಿನ್ನುಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣನೆ23 ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವರಅರ್ತಿಯಿಂದ ಕಾಯದಿರನು ಕರ್ತೃ ಕೇಶವ 24 ಮರೆತು ಬಿಡದೆ ಹರಿಯ ನಾಮ ಬರೆದು ಓದಿ ಕೇಳುವರಿಗೆಕರೆದು ಮುಕ್ತಿ ಕೊಡುವ ಬಾಡದಾದಿಕೇಶವ 25
--------------
ಕನಕದಾಸ
ಎಚ್ಚರ ಹೇಳುವೆ ನಾನೀಗ ನಿನಗೆ ಎಚ್ಚರಿಕೆಚ್ಚರಿಕೆಸಚ್ಚಿದಾನಂದನೆ ನೀನೆಂದು ತಿಳಿ ನಿನ್ನ ಎಚ್ಚರಿಕೆಚ್ಚರಿಕೆ ಪ ಈಷಣವೆಂದೆಂಬ ಕಾಡಿನೊಳಗೆ ಹೊಕ್ಕಿ ಎಚ್ಚರಿಕೆಚ್ಚರಿಕೆದೋಷಕಾರಿಗಳು ಇಂದ್ರಿಯನಾಯ್ಗಳು ಎಳೆದಾವು ಎಚ್ಚರಿಕೆಚ್ಚರಿಕೆ 1 ಅಷ್ಟಮದವೆಂಬ ಆನೆ ಕೈಗೆ ಸಿಕ್ಕಿ ಎಚ್ಚರಿಕೆಚ್ಚರಿಕೆದುಷ್ಟ ಪಂಚಕ್ಲೇಶದ ಪೊದೆಗೆ ಸಿಲುಕೀಯೆ ಎಚ್ಚರಿಕೆಚ್ಚರಿಕೆ2 ವ್ಯಸನಗಳೆಂಬ ಕುದುರೆಯ ಕಾಲೊಳಾದೀಯೆ ಎಚ್ಚರಿಕೆಚ್ಚರಿಕೆದುಶ್ಮನರಾರ್ವರ ಕಣ್ಣಿಗೆ ಬಿದ್ದೀಯೆ ಎಚ್ಚರಿಕೆಚ್ಚರಿಕೆ 3 ತಾಪತ್ರಯದ ಹಳ್ಳದಿ ಹರಿದುಹೋದೀಯೆ ಎಚ್ಚರಿಕೆಚ್ಚರಿಕೆಪಾಪವೆಂಟು ಪಾಶವೆಂಬ ಉರುಲಿಗೆ ತಗುಲೀಯೆ ಎಚ್ಚರಿಕೆಚ್ಚರಿಕೆ 4 ಸಂಸಾರ ನಂಬಲು ಕೆಟ್ಟುಹೋಗುವೆ ಎಚ್ಚರಿಕೆಚ್ಚರಿಕೆಹಂಸ ಚಿದಾನಂದ ಗುರುಹೊಂದೆ ಕಡೆಹಾಯುವೆ ಎಚ್ಚರಿಕೆಚ್ಚರಿಕೆ5
--------------
ಚಿದಾನಂದ ಅವಧೂತರು
ಎಂತು ಮರುಳಾದೆ ನೀ ಯದಿಯ ಬಿಗುವಿನಲಿ ತಿರುಗಿ | ಪಂಥದಲ್ಲಿ ಕೆಡಲಿಬೇಡ ಎರಡು ದಿನ | ಸಂತೆ ನೆರೆದಂತೆ ಮೂಢ ಇಪ್ಪದಿದು | ಸಂತತ ತೊರೆದು ಬಾಡೊ ಪ್ರಾಣಿ ಪ್ರಾಣಿ ಪ ವಿಂಚುಗೂಳನು ತಿಂದು ಮನೆ ಮನೆಗಳು ತಿರುಗಿ | ಸಂಚಿತಾರ್ಥವ ತಿಳಿಯದೆ ಮರುಳಾದ | ಪರ | ಪಂಚವನು ನೀ ಕಳಿಯದೆ ವ್ಯರ್ಥಾಯ | ವಂಚನಿಂದಲಿ ನಡೆದು ಬಾಯಿ ತೆರೆದು | ಹಲ್ಲನು | ಹಂಚಿಕೆ ತೋರಿದಂತೆ ಮೃತ್ಯುವಿನ | ಪಂಚದಲಿ ಸೇರಿದಂತೆ | ಆಗುವುದು | ಕಂಚು ಕೆಳಗೆ ಬಿದ್ದಂತೆ ಪ್ರಾಣಿ 1 ನುಗ್ಗು ನುಸಿಯಾಗದಿರು | ನೂಕು ನಿನ್ನಹಂಕಾರ | ಮುಗ್ಗದಿರು ಈ ಬಲಕಿಗೆ ಸ್ಥಿರವಾಗಿ | ಬಗ್ಗು ನಡೆವಳಿ ನಡೆದು | ವೆಗ್ಗಳದ ನಡೆವಳಿ ನಡೆದು | ವೆಗ್ಗಳದ ಧರ್ಮದಾ ಸುಗ್ಗಿಯಲಿ ದಿನವ ಹಾಕೊ | ಬಿಡು ಬಿಡು ಅಗ್ಗಳಿಕೆತನವೆ | ಸಾಕು ಆವಾಗ ತೆಗ್ಗಿಕೊಂಡಿರಲಿ ಬೇಕು | ಪ್ರಾಣಿ 2 ಇನ್ನಾದರೂ ಕೇಳು | ಪುಣ್ಯವಂತರ ಕೂಡು | ನಿನ್ನವರು ನಿನಗೆ ದಾರೊ | ಕಣ್ಣಾಗೆ ಎಣ್ಣೆ ಬಿದ್ದಂತೆ ಸಾರೊ ಬಾಯಿಂದ | ಬೆನ್ನಿಗೆ ಬಂದ ವಿಚಾರೊ ತುದಿಯಲಿ | ಮಣ್ಣು ಮಣ್ಣನೆ ಕಲಿತು ಹೋಗುವುದು ನಿಶ್ಚಯವು | ಚೆನ್ನಾಗಿ ಎಚ್ಚೆತ್ತುಕೋ ಈ ಮಾತಿಗೆ | ಖಿನ್ನನಾಗುವದೇತಕೊ ಸಾವಿರಕು | ಮುನ್ನಿಲ್ಲವೊ ಮನಸಿತೊ ಪ್ರಾಣಿ 3 ವೇದಶಾಸ್ತ್ರವನರಿಯೆ ಆದಿಪುರಾಣಗಳು | ಅದ್ವೈತ | ವಾದವರ ಕೂಡದಿರು ಇದೆ ಮಿಗಿ ಲಾದರು ಮರಿಯದಿರು ಉತ್ತಮ | ಸಿರಿ ವಿಜಯವಿಠ್ಠಲನ ಶ್ರೀ | ಪಾದವನು ಒಂದೇ ಭಕ್ತಿಯಿಂದಲಾ | ರಾಧಿಸು ಇದಕೆ ಯುಕ್ತಿ ಕಡಿಯದಲೆ | ಮಾಧವನು ಕೊಡುವ ಮುಕ್ತಿ ಪ್ರಾಣಿ4
--------------
ವಿಜಯದಾಸ
ಎತ್ತಿಕೊಂಡ್ಹೋಗುವೆನೆ ಈ ಕೂಸಿನ್ನ ಎತ್ತಿಕೊಂಡ್ಹೋಗುವೆನೆ ಪ ಎತ್ತಿಕೊಂಡ್ಹೋಗುವೆ ಮುತ್ತಿನಂಥಾ ಕೂಸುಹತ್ತಲಿ ಬರುವುದು ಚಿತ್ತಬಿಟ್ಟಗಲದು ಅ.ಪ. ಗುಂಡು ಬಿಂದಲಿ ಕೈಯೊಳು ಮುತ್ತಿನ ದಿವ್ಯ ಚೆಂಡುಪಿಡಿದ ಬಿಡನುಹಿಂಡು ಬಾಲರ ಕೂಡಿಕೊಂಡು ಆಡುವ ಕೂಸುಇಂಥ ಕಂದನ್ನ ಪಡೆದಿಯೇನೇ ಗೋಪಮ್ಮ ನೀ 1 ನೀಲ ಮಾಣಿಕ ಗೆಜ್ಜೆಯುಭಾಳ ಕಡೆಗೆ ಪೋಗಿ ಲೋಲಾಡುವ ದೃಷ್ಟಿಮಾಲೆಯನ್ಹಾಕಿ ತಾರೆ ಗೋಪಮ್ಮ 2 ಅರಳೆಲೆನಿಟ್ಟಿಹದು ಮುಂದಲೆಯಲ್ಲಿ ಜರದ ಕುಂಚಿಗೆ ಇಹುದುತೆರದ ಕಣ್ಣು ಮುಚ್ಚಿ ತೆರೆದು ನೋಡುತಲಿದ್ದಎರೆದು ಮಲಗಿಸಿದೆಯೇನೆ ಗೋಪಮ್ಮ ನೀ 3 ಎಷ್ಟು ಜನ್ಮದ ಪುಣ್ಯವು ಬಂದೊದಗೀತ ಪುಟ್ಟಿದೆ ಇಂಥ ಕೂಸುಪುಟ್ಟ ಬಾಲಗೆ ಉಮ್ಮಕೊಟ್ಟು ಬಟ್ಟಲಿ ನಾನುದೃಷ್ಟಿಯು ಮುರಿಯುವೆನೇ ಗೋಪಮ್ಮ ನಾ 4 ಮಂದಿ ಕೈಯಲಿ ಕೊಡೆನೆ ಈ ಕೂಸಿನ್ನ ತಂದು ಕೊಡುವೆನೆ ನಾನುಇಂದಿರೇಶನ ಬಿಟ್ಟು ನಿಂದಲಾರದ ಮನಇಂಥ ಕಂದನ್ನ ಪಡೆದಿಹೆನೆ ಗೋಪಮ್ಮ ನೀ 5
--------------
ಇಂದಿರೇಶರು