ಒಟ್ಟು 67 ಕಡೆಗಳಲ್ಲಿ , 31 ದಾಸರು , 66 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಥನಾತ್ಮಕ ಹಾಡುಗಳು ನೋಡಬನ್ನಿರಿ ಕಾರ್ಪರೇಶನ ಪಾಡಿರೈ ಸರ್ವೇಶನಾ ರೂಢಿಯೊಳು ಶೇಷಾದ್ರಿನಿಲಯನ ಕೂಡಿಕೊಂಡಿಲ್ಲಿರುವನ ಪ ಚಿಪ್ಪಗಿರಿ ದಾಸಾರ್ಯರೀತರು ಪಿಪ್ಪಲವ ಕಂಡಾಗಲೇ ಕಾರ್ಪರಾರಣ್ಯೆಂಬ ಪದದಿ ಸಂಕ್ಷಿಪ್ತ ಮಹಿಮೆಯ ಪೇಳ್ದರು 1 ಅಪರದಿಗ್ಭಾಗದಲಿ ನೋಡಲು ಸಪತ ಋಷಿಗಳ ಸ್ಥಾನವು ತ್ರಿಪಥಗಾಮಿನಿ ವ್ಯಕ್ತಳಾದಳು ತಪಕೆ ವಿಶ್ವಾಮಿತ್ರರ 2 ಯತ್ರಶ್ವೇತ ಶೃಂಗ ಕೃಷ್ಣಾಚೋತ್ತರ ವಾಹಿನಿಯೊಳು ತತ್ತದಾನ ಸ್ನಾನ ಕಾಸಿಗೆ ಉತ್ತಮವು ಫಲವೀಯಲು 3 ಚಾರುಕೃಷ್ಣಾತೀರವಿದರೊಳು ಕಾರ್ಪರಾಖ್ಯ ಮುನೀಂದ್ರನಾ ಘೋರತಪ ಕೊಲಿದರಳೆ ಮರದಾಗಾರನೆನಿಸಿದ ಧೀರನ 4 ನೀರಜಾಸನ ಮುಖ್ಯ ಸುರ ಪರಿಹಾರ ಸೇವಿತ ಚರಣನ ಸೇರಿದವರಘ ದೂರ ಮಾಡುವ ಘೋರನರಹರಿ ರೂಪನ 5 ಇಂತು ಅಶ್ವತ್ಥಾಂತರದಿ ಸಿರಿಕಾಂತನರಿಯನೆ ವಿಪ್ರರೊಳ್ ಶಾಂತ ನಾರಪ್ಪಯ್ಯನೆಂಬ ಮಹಾಂತರಿಲ್ಲಿರುತಿಪ್ಪರು 6 ದೊಡ್ಡವರ ಗುರುತರಿಯದಿವರನು ದಡ್ಡರೆನ್ನುತ ಭ್ರಾತ್ರರು ದೊಡ್ಡ ಕೃಷ್ಣಾನದಿಯೊಳಿವರನು ಕಟ್ಟಿ ಹಾಕಲು ಕೋಪದಿ 7 ಕಡಲಶಯನನ ಕರುಣದಿಂದಲಿ ದಡಕೆ ಸೇರಿದನಂತರ ದೃಢ ವಿರಾಗದಿ ವೆಂಕಟಾದ್ರಿಗೆ ನಡೆದರಾಗಲೆ ಹರುಷದಿ 8 ಶುಭ ಪಂಕಜ ಷಟ್ವದಾಯಿತ ಚಿತ್ತರು ಕೃಷ್ಣನಿರುತಿಹ ಬೆಟ್ಟದಡಿಯನು ಮುಟ್ಟಿಮಲಗಲು ಸ್ವಪ್ನದಿ9 ಇಲ್ಲಿ ದರ್ಶನವಿಲ್ಲ ನೀವಿರುವಲ್ಲಿ ಪುಣ್ಯಸ್ಥಾನವು ಪೋಗಿರೋ ಭೂಸುರ 10 ಧೇನು ರೂಪದಿ ಬರುವೆ ಕಾರ್ಪರ ಕಾನನದ ಅಶ್ವತ್ಥದಿ ಕಾಣುವುದು ಕ್ಷೀರಾಭಿಷೇಚನ ಧ್ಯಾನಿಸೆನ್ನನು ದ್ವಿಜವರ 11 ಇಂತುಸ್ವಪ್ನದಿ ಸೂಚಿಸಿದ ವೃತ್ತಾಂತವನು ಸಂಚಿಂತಿಸಿ ಕಂತು ಜನಕನ ಇಚ್ಛೆಯಿಂದಲೆ ಸಂತಸದಿ ಗಿರಿಗೊಂದಿಸಿ 12 ಮುಂದೆ ನಡೆದರು ಹಿಂದೆ ಗೆಜ್ಜೆಗಳಿಂದ ಬರುತಿಹ ಗೋಗಳ ಗೋವಿಂದನಂಘ್ರಿಯ ಸ್ಮರಿಸುತ 13 ಕುರುಕಿ ಹಳ್ಳಿಯ ಗ್ರಾಮದಿ ತಿರುಮಲೇಶನ ಕಂಡರು 14 ಗುರುತನು ಕಾಣುತ ಬಂದನು ಎನ್ನುತ 15 ಮುನಿವರನು ಸುಖದಿಂದಿರುತಿರೆ ತಿರೆ 16 ಬಂದರಲ್ಲಿಗೆ ತಮ್ಮ ಗ್ರಾಮದ ಬಂಧು ಬಾಲಕರೆಲ್ಲರು ಕಾಯುವದೆನುತಲಿ 17 ಚಾರು ಶಿಲೆಯೊಳಗೊಂದುದಿನ ಅಂಗಾರದಲಿ ಪ್ರಾಣೇಶನ ಪರಿಹಾರನುನಿಮಗೆಂದರು 18 ಪಾದ ನಿಷ್ಠೆಯಿಂದಲಿ ಸೇವಿಸೆ ಸಿದ್ಧಿಗಳಾಗ್ವವು 19 ನಾರಪ್ಪಯ್ಯರೆಂಬ ಮಹಾತ್ಮರು ಹರಿ ಸಂತತ 20 ಧರಣಿಯನು ಸಂಚರಿಸುತ ಚೆನ್ನೂರ ಗ್ರಾಮದಿ 21 ತೋರಿತಂದಿನ ರಾತ್ರಿಯೋಳ್ ಮಹಿಮೆಯಾ 22 ಭೂಪನ ಸ್ಪಪ್ನದಿ ತರುವನು ತೋರಿಸಿ 23 ಕಟ್ಟಿಸೆಲೊ ಭೂಪತಿಯೆ ಮಂದಿರ ಕೃಷ್ಣವೇಣಿಯ ಗರ್ಭದಿ ಶ್ರೇಷ್ಠನೆನ್ನಯ ಕರುಣದಿ 24 ಸುಪ್ರಭಾತದಲೆದ್ದು ನೃಪತಿಯು ಸ್ವಪ್ನಸೂಚಿತ ಸ್ಥಾನವ ಕ್ಷಿಪ್ರ ನೋಡುವೆನೆನುತ ಸೈನ್ಯದಿ ಕಾರ್ಪರಕೆ ಬಂದಿಳಿದನು25 ಆನೆಗಳು ಕಟ್ಟಿರುವ ಶಿಲೆಗಳು ಕಾಣಿಸುವ ವೀಗಾದರು ನನಸೇವಿಸಿದನು 26 ಮಂದಿರವಮೇಲ್ ನಿರ್ಮಿಸಿ ಇಂದಿರೇಶನ ಪದಕೆ ಭೂಸಂಬಂಧ ವೃತ್ತಿಯನೊಪ್ಪಿಸಿ27 ಹಿಂದೆ ನೋಡಲು ಚಂದ್ರಶೇಖರ ನಂದಿಪತಿ ಮಂದಿರಗಳು ವಂದೇ ವತ್ಸರದೊಳಗೆ ಶಿಲ್ಪಿಗಳಿಂದ ಕಟ್ಟಿದ ಶಿಲೆಗಳು 28 ವೃಷ್ಟಿಯ ಮಹಿಮೆಯ ಕಾಮಿತಾರ್ಥವನೀವುದು 29 ಮಾಸ ದೊ ಶರಧಿ ಸೇರುವ ಸಮಯದಿ 30 ಷೋಡಶ ಕರಗಳಿಂ ಹೊರಟನು ವೃಕ್ಷದಿ31 ತೀರ್ಥ ಸ್ನಾನದ ನರಹರಿ ದರ್ಶನ 32 ದಕ್ಷಿಣಾಯನ ಪರ್ವದಲಿ ಈ ವೃಕ್ಷದೆಡೆಯಲಿ ಸ್ನಾನವು ಮೋಕ್ಷ ಮಾರ್ಗಕೆ ಸಾಧನವು ಪ್ರದಕ್ಷಿಣಾದಿಕಮೆಲ್ಲವು33 ಮಂದಿರವ ಕಾಣುತಲೆ ಶ್ರೀಗೋವಿಂದ ಗೋವಿಂದೆನುತಲಿ ಬಂಧು ವರ್ಗ ಸಮೇತ ಭಕುತರ ವೃಂದ ಬರುವದು ನೋಡಿರೈ34 ಪಾಲಿನಭಿಷೇಕದಿ ಅರ್ಚನ ಪಾಲಕಿಯ ಸೇವಾವಧಿ ವಾಲಗವ ಕೈಕೊಳುತ ಭಕುತರ ಪಾಲಿಸುವ ನರಸಿಂಹನ 35 ವಾರವಾರಕೆ ಭಕ್ತಜನ ಪರಿವಾರ ಸೇವೆಯಕೊಳ್ಳುತ ಘೋರತರ ಸಂಸಾರ ಭಯಪರಿಹಾರ ಮಾಡುವ ದೇವನ 36 ತಪ್ಪದಲೆ ಪ್ರತಿವರ್ಷ ದ್ವಿಜ ಸಂತರ್ಪಣಾದಿಗಳಿಂದಲಿ ಕೊಪ್ಪರದಿ ನವರಾತ್ರ ಮೊದಲಾದುತ್ಸವಾದಿಗಳಾಗ್ವವು 37 ಹಿಂದೆ ಚಾತುರ್ಮಾಸ್ಯ ಕಾಲವು ಬಂದಿರಲು ವಿಭುದೇಂದ್ರರು ಬಂದರಿಲ್ಲಿಗೆ ಶಿಷ್ಯರಾದ ಯತೀಂದ್ರ ನಾರಾಯಣಾರ್ಯರು38 ಆ ಸಮಯದಿ ರಘುನಾಥ ತೀರ್ಥ ಯತೀಶರಿಲ್ಲಿಗೆ ಬಂದರು ತೋಷದಲಿ ವಿಭುದೇಂದ್ರ ತೀರ್ಥಮುನೀಶರವರಿಗೆ ಪೇಳ್ದರು39 ವೃಕ್ಷದಲಿ ಸನಿÀ್ನಹಿತ ನರಹರಿಯಕ್ಷನೆದುರಿಗೆ ನಮ್ಮಯ ಶಿಷ್ಯರೋದುವ ಗ್ರಂಥದರ್ಥ ಪರೀಕ್ಷೆ ಮಾಡಿರಿ ಎಂದರು40 ಮೌನಿರಘುನಾಥಖ್ಯರವರನು ಏನು ಓದುತಿರೆನ್ನಲು ಆನುಪೂರ್ವಿ ಸುಧಾಖ್ಯ ಗ್ರಂಥಾರ್ಥಾನುವಾದವ ಮಾಡಲು41 ಮೇದಿನಿಯಲಿ ವಾದಿಜಯ ಸಂಪಾದಿಸಿರಿ ನೀವೆಂದರೂ ಸಾದರದಿ ನಿಮಗೆಲ್ಲ ಜನ ಶ್ರೀಪಾದರಾಜರು ಎನ್ನಲಿ42 ಸೇವೆಯ ಮಾಡಲು ಒಂದು ವತ್ಸರದೊಳಗೆ ಸತ್ಯಾನಂದ ಯತಿಗಳ ಜನನವು43 ಸತ್ಯಧರ್ಮರು ಬಂದರೀ ಸುಕ್ಷೇತ್ರದರ್ಶನ ಮಾಡಲು ಮುತ್ತಿನ್ಹಾರವ ಪದಕ ಸಹಿತಾಗಿತ್ತರೀ ನರಸಿಂಹಗೆ 44 ಇದ್ದರಿಲ್ಲಿ ಜ್ಞಾನವೃದ್ಧ ಜನಾರ್ದನಾಭಿದ ಒಡೆಯರು ಶುದ್ಧ ಮನದಲಿ ನರಹರಿಯ ಪದಪದ್ಮ ಸೇವೆಯ ಮಾಡುತ45 ಬಿಡದೆ ತಪವಾಚರಿಸಿ ಕಾರ್ಪರದೊಡೆಯನನುಪಮ ಕರುಣವ ನಿತ್ಯದಲಿ ಪರಿಶುದ್ಧ ಮಧುಕರ ವೃತ್ತಿಯಿಂ ತಂದನ್ನವ ಎತ್ತಿ ವೃಕ್ಷಕೆ ಕಟ್ಟುವರು ಇದು ಬುತ್ತಿ ನಾಳೆಗೆ ಎನ್ನುತ47 ಪನ್ನಗಾರಿ ಧ್ವಜನಿಗರ್ಪಿಸಿ ಉಣ್ಣುತಿಹರಾನಂದದಿ48 ಮಂದಮತಿ ಭೂದೇವನೊಬ್ಬನು ನಿಂದೆ ಮಾಡಿದನಿವರನು ತಂದು ಕಟ್ಟಿದ ಅನ್ನ ತಂಗಳೆಂದು ತಿಳಿಯದೆ ಉಂಬರು 49 ನಿಂದೆ ಮಾಡಿದ ವಿಪ್ರನನು ಕರೆಸೆಂದರರ್ಚನ ಸಮಯದಿ ತಂದು ವೃಕ್ಷದಿ ಕಟ್ಟಿದನ್ನವ ತಂದು ಕೆಳಗಿಡಿರೆಂದರು 50 ಪೋಗಲು ವಿಪ್ರನು ಕೆಳಗಿಂತೆಂದರು
--------------
ಕಾರ್ಪರ ನರಹರಿದಾಸರು
ಕೈಕೊಂಡ - ನೃಹರಿ ಕೈಕೊಂಡ ಪ ಕೈಕೊಂಡ ಪೂಜೆಯ ನೃಹರಿ | ತ್ರೈಲೋಕ್ಯಕನಾಥನು ಅಸುರಾರಿ | ಆಹತೋಕನ ಸಲಹಲು | ಏಕಮೇವನ ಲೀಲೆಕೈಕೊಂಡ ಅವತಾರ | ಆ ಕಂಬೋದ್ಭವನಾಗಿಅ.ಪ. ಭಕ್ತಿ ಭಾವದಿ ಪರಾಶರ | ಬಹುತಪ್ತ ಭಾವದಿ ಕೃಷ್ಣೇ ತೀರ | ದಲ್ಲಿಸಕ್ತನಿರೆ ಧ್ಯಾನ ಗೋಚರ | ನಾಗಿವ್ಯಕ್ತನು ಷೋಡಶಕರ | ಆಹದೃಪ್ತ ದಾನವ ಧ್ವಂಸಿ | ದೀಪ್ತಾನಂತ ತೇಜಮೂರ್ತಿ ಕಾಣಿಸಿದನ | ವ್ಯಕ್ತನಾಗಿದ್ದಂಥ 1 ಕಟಿಸೂತ್ರ ಸ್ಮರ ಕೋಟಿ ಲಾವಣ್ಯಕರ ಪಾಶ ಅಸಿಕುಂತ | ವರದಾ ಭಯವು ಹಸ್ತ 2 ಕಂಬು ಚಕ್ರ ಚರ್ಮಕರ | ಮತ್ತೆಅಂಬುಜ ಶಾಂಙÁ್ರ್ಞದಿಧರ | ಗದಸಂಭೃತ ತುಳಸಿಯ ಹಾರ | ಮತ್ತೆಇಂಬಿನ್ವ್ಯೊ ಜಯಂತಿ ಹಾರ | ಆಹಅಂಬುಜದಳ ನೇತ್ರ | ಇಂಬಾಗಿ ಕರಪಾತ್ರತುಂಬ ಪೀಯುಷಧಿ | ಪೊಂಬಸಿರ ವಂದ್ಯನು 3 ಶ್ರೀವತ್ಸ ಲಾಂಛನ ಭೂಷ | ತನ್ನಭ್ರೂವಿಲಾಸದಿ ಬ್ರಹ್ಮ ಈಶ | ರಿಗೆತಾವೊಲಿದೀವ ಆವಾಸ | ಯೆನುತವ ವೇದಂಗಳು ಅನಿಶ | ಆಹಮಾವಿನೋದಿಯ ಗುಣ | ಸಾವಕಾಶಿಲ್ಲದೆಸಾರ್ವದ ಪೊಗಳುತ್ತ | ಭಾವದೊಳ್ಹಿಗ್ಗುವವು 4 ಪೊತ್ತು ರೂಪವ ಬಲಪಾದ | ಚಾಚುತ್ತ ರಕ್ಕಸನೊಡಲಗಾಧ | ಇಟ್ಟುವತ್ತುತ ತೊಡೆಯಲ್ವಿನೋದ | ದ್ವಯಹಸ್ತ ನಖದಿ ಉದರ ಬಗೆದ | ಆಹಕಿತ್ತುತ ಕರುಳನ್ನ | ಕತ್ತಿನೊಳ್ಹಾಕುತಭಕ್ತನ ಸಂಬಂಧ | ಎತ್ತಿ ತೋರ್ದ ಜಗಕೆ 4 ಪಂಚ ಮೋಕ್ಷಪ್ರದ ಹರಿ | ಆಯ್ತುಪಂಚಾಮೃತಭಿಷೇಕ ಅವಗೆ | ಮತ್ತೆಪಂಚಕಲಶಾರ್ಚನವು ಆವಗೆ | ಆಯ್ತುಪಂಚ ಕುಂಭಾಭಿಷೇಕವಗೆ | ಆಹಸಂಚಿಂತಿಸುತ ಹೃ | ತ್ಪಂಕಜದೊಳು ನೋಡೆಸಂಚಿಂತಾಗಮ ನಾಶ | ಕೊಂಚವು ಪ್ರಾರಬ್ಧ 6 ಶಾಲಿಗ್ರಾಮದ ಶಿಲ ಏಕ | ಪೊತ್ತುಪೋದಕ ಬಾಹು ಅಲೀಕ | ಶತಶಾಲೀವಾಹನವೆಂಬ ಶಕ | ದೊಳುಜ್ವಾಲಾ ನರಹರಿ ನಾಮಕ | ಆಹಯೇಳು ಐದೊರ್ಷದ | ಭಾಳ ತಪಕೆ ಮೆಚ್ಚಿಶೀಲ ದ್ವಿಜ ದಂಪತಿ | ಗೊಲಿದು ಪೇಳಿದ ಹೀಗೆ 7 ಭೀಮಕ ರಾಜಗೆ ಪೇಳು | ತೃಣಜಾಲವ ಹಾಕೆ ನೀರೊಳು | ಅಲ್ಲಿಜ್ವಾಲೆ ಉದ್ಭವಿಸಲು ಬಲು | ನೀರಮೇಲಕ್ಕೆ ಒಳಗಿಂದ ಬರಲು | ಆಹತೋಳೆರಡಲಿ ರಾಜ | ಮೇಲೆತ್ತೆ ಬರುವನುತಾಳ ಮೇಳ್ವೈಭವ | ದೊಳಗೆ ಸ್ಥಾಪಿಸಲೆಂದು 8 ಅಂಗಹೀನರೆ ಕೇಳಿ ಆವ | ನಿಮ್ಮಭಂಗಿಪ ಮೂಕಾಂಧ ಭಾವ | ನೀಗಿಶೃಂಗಾರ ರೂಪ ಸ್ವಭಾವ | ನರಸಿಂಗ ಕೊಡುವೆನು ಸೇವ | ಆಹ ಹಿಂಗದೆ ಕೊಡುವೆನು | ಅಂಗಜ ಪಿತ ನರಸಿಂಗಪುರವೆಂದು | ಸಂಗೀತವಾಗಲಿ 9 ವತ್ಸರ ಸೌಮ್ಯವು ಪುಷ್ಯ | ದಿನದರ್ಶ ವ್ಯಾಸತೀರ್ಥ ಶಿಷ್ಯ | ಆದರ್ಶ ದಾಸರ ದಿನ ಭವ್ಯ | ಭಕ್ತವತ್ಸಲ ಸ್ವೀಕಾರ ಆಲ್ಪ್ಯ | ಆಹಉತ್ಸವ ಕೊಳ್ಳುತ | ಉತ್ಸಾಹವೆನಗಿತ್ತುಮತ್ಸ್ಯಾದಿ ದಶರೂಪಿ | ಕೃತ್ಸ್ನ ಕಾರುಣ್ಯನು 10 ಪರಾಶರಗೊಲಿದ ಸುಶೀಲ | ಖಗವರನು ಭೂದೇವಿಯು ಬಲ | ಎಡವರಲಕ್ಷ್ಮೀ ಪ್ರಹ್ಲಾದ ಬಾಲ | ಸುರವರರಿಂದ ಸ್ತುತ್ಯ ವಿಶಾಲ | ಆಹಗುರು ಗೋವಿಂದ ವಿಠ್ಠಲ | ಗುರು ಬಿಂಬ ನರಸಿಂಗಶರಣರ ಅಪಮೃತ್ಯು | ಹರಿಸಿ ಸಂತತ ಕಾಯ್ವ11
--------------
ಗುರುಗೋವಿಂದವಿಠಲರು
ಗುರು ಹಿರಿಯರ ಸೇವಿಸಿಹರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿಕೊಳ್ಳಿರೊ ಪ ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದೆರಕ್ಕಸಾರಿಯ ಭಕ್ತರೊಳು ಸೇರಿ ನೀವು ಸೆರೆಯಿಕ್ಕದಂಥವನ ಮೊರೆ ಹೋಗಿರೊ 1 ಕಂಬಳಿಯ ಬುತ್ತಿಯಂತೀ ದೇಹದೊಳಗೆಲ್ಲತುಂಬಿರುವ ಸುಖವೆಲ್ಲ ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವನುಂಬ ಭ್ರಮರಕೆ ಸರಿಗಾಣೆನೊ 2 ಮಕ್ಕಳುಗಳಳುವಾಗ ಮಡದಿಯರು ಜರಿವಾಗಬಿಕ್ಕುಗಳು ಬಂದು ಬೈವಾಗಇಕ್ಕಿ ಪೊರೆವುದಕೆ ಗತಿಯಿಲ್ಲದಾ ದರಿದ್ರರಿಗೆಸೌಖ್ಯವೆತ್ತಣದೊ ಮನುಜರಿಗೆ 3 ತಾಯ ಮಾರಿ ತೊತ್ತನು ಕೊಂಬ ಪಾಮರರಂತೆಹೇಯ ಕುಜನರಾ ಚರಣಕೆರಗಿಮಾಯಾಪತಿಯಂಘ್ರಿಗಳ ನೆನೆಯಲೊಲ್ಲದ ನರನಆಯುಷ್ಯ ಬರಿದೆ ಹೋಯಿತಲ್ಲ 4 ಅಯಿವರಿತ್ತೊಡವೆಯ ಅವರವರೊಯ್ಯುವರು ಮ-ತ್ತಯಿವರೆಂಬುವರು ತೊಲಗುವರುಮೈಯ ನೆತ್ತರು ಕೂಡ ಹರಿದು ಹೋಹುದು ನಿಮ್ಮಕೈಯ ಪಿಡಿದೆತ್ತುವರ ನಾನು ಕಾಣೆ 5 ಬಲಗುಂದಿ ನೆಲ ಹಿಡಿಯೆ ರೋಗರುಜಿನಗಳೆಂಬಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖ ಗಂಟಲೊಳಗಣನಾಲಗೆಯ ನಾದ ಎಲ್ಲಿಹುದೊ 6 ಆಗಲೇ ಹರಿನಾಮ ನಾದದಿಂದೆಚ್ಚತ್ತುನಾಗಶಯನನ ಪುರದ ಪಥವಆಗಮಜ್ಞರ ಕೇಳಿ ತಿಳಿದುಕೊಳ್ಳಿರೊ ನಿಮಗೆಈ ಗಾಳಿ ದೀಪ ಸ್ಥಿರವಲ್ಲ 7 ಜರೆಯೆಂದು ಕಡೆಯಲ್ಲಿ ಗೊರಗೊರನೆ ಉಸಿರಾಡೆಶರೀರದ ಸಂಬಂಧಗಳಕಟಾತರುಣಿಯರ ಮ್ಯಾಲಾಸೆ ತಮ್ಮ ಹಿತವನರಿಯದೆಬರಿದೆ ಭವದಲ್ಲಿ ಬಳಲುವಿರಿ 8 ಸರಕು ಇಲ್ಲಮಾಧವನ ಪೂಜೆ ಒಮ್ಮೆಯೂ ಮಾಡಿಲ್ಲ ಹರಿಪಾದ ತೀರ್ಥದಾ ವ್ರತಗಳಿಲ್ಲ 9 ಊಧ್ರ್ವಪುಂಡ್ರಗಳಿಲ್ಲ ಹರಿಯ ಲಾಂಛನವಿಲ್ಲಪದ್ಮ ತುಳಸಿಯಾ ಸರಗಳಿಲ್ಲಸದ್ಧರ್ಮ ಪಥವೆತ್ತ ವಿಷಯಾಂಧ ಕೂಪದೊಳುಬಿದ್ದು ಪೊರಳುವ ಮರುಳಿದೆತ್ತ 10 ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕ ವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ11 ಸಕ್ತಿಯಿಂ ಹರಿಯ ಪೊಗಳಿ ಅಡಿಯಲುರುಳಿ ಶುಷ್ಕಭುಕ್ತಿಗಳ ಮೇಲುಗುಳಿ ದೂರ ನಿಲ್ಲಿಭಕ್ತಿ ಜ್ಞಾನಗಳಿರಲಿ ಮತ್ರ್ಯ ಪಥದಿಂ ಮರಳಿಮುಕ್ತಿ ಮಾರ್ಗದಲಿನ್ನು ತೆರಳಿ 12 ಕೊಳ್ಳೆನಾಯಕ ಬಂದು ಕೋಟೆ ಕೆಡಹುವ ಮುನ್ನಕಳ್ಳರೈವರ ಕಾರಣದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭನ ಅಡಿಗೆ ಮೊರೆ ಹೋಗಿರೊ13 ಪಾದ ಸೇರಿರೋ 14 ಒಂಬತ್ತು ರಂಧ್ರಗಳ ತನುವೆಂಬ ಮನೆಯಲ್ಲಿತುಂಬಿರುವ ವಾಯು ಸ್ಥಿರವಲ್ಲನಂಬಿದರ ಪೊರೆವ ನೆಲೆಯಾದಿಕೇಶವನ ಪಾದಾಂಬುಜವನು ಸೇರಿ ಬದುಕಿರೊ 15
--------------
ಕನಕದಾಸ
ಗುರುಹಿರಿಯರನುಸರಿಸಿ ಹÀರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿರೊ ಪ. ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದಿರಿರಕ್ಕಸಾರಿಯ ಭಕ್ತರೊಳು ಸೇರಿ ಮುಂದೆ ಸೆರೆ-ಯಿಕ್ಕದಂತವನ ಮರೆಹೋಗಿರೊ 1 ಕಂಬಳಿಯ ಬುತ್ತಿಯಂತೀ ದೇಹದೊಳಗೆ ಸುಖವೆಂಬುದಿಲ್ಲವು ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವ-ನುಂಬ ಸಂಭ್ರಮಕೆ ಸರಿಗಾಣೆನು 2 ಮಕ್ಕಳುಗಳಳುವಾಗ ಮಡದಿಯರು ಜರಿವಾಗಭಿಕ್ಷುಕರು ಬಂದು ಬೈದ್ಹೋಗುವಾಗಇಕ್ಕಿ ಪೊರೆವುದಕೆ ಬಗೆಯಿಲ್ಲದ ದರಿದ್ರಂಗೆಸೌಖ್ಯವೆತ್ತಣದು ಮನುಜರಿಗೆ 3 ತಾಯ ಮಾರಿ ತೊತ್ತಕೊಂಬ ಪಾಮರನಂತೆಹೇಯಕುಜನರ ಚರಣಕೆರಗಿಶ್ರೀಯರಸನಂಘ್ರಿಗಳ ನೆನೆಯಲೊಲ್ಲದ ಮನುಜರಿಗೆಆಯುಷ್ಯ ಬರಿದೆ ಹೋಯಿತಲ್ಲ 4 ಐವರಿತ್ತೊಡವೆಯನು ಅವರವರು ಒಯ್ವರು ಮ-ತ್ತೈವರೆಂಬುವರು ತೊಲಗುವರುಮೈಯ ಹತ್ತರಕೂಟ ಹರಿದು ಹೋಗುವ ಮುನ್ನಕೈಯ ಪಿಡಿದೆತ್ತುವರ ಕಾಣೆ 5 ಕಾಲು ಜವಗುಂದಿದವು ರೋಗರುಜಿನಗಳಿಂದಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖಘಂಟೆಯೊಳಗಿನನಾಲಿಗೆಗೆ ನಾದವೆಲ್ಲಿಹುದೊ 6 ಈಗಲೆ ಹರಿನಾಮನಾದದಿಂದೆಚ್ಚೆತ್ತುನಾಗಶಯನನ ಪುರದ ಪಥವಆಗಮಜ್ಞರ ಕೈಯ ಕೇಳಿಕೊಳ್ಳಿರೊ ನೀವುಈ ಗಾಳಿದೀಪ ಸ್ಥಿರವಲ್ಲ7 ಜರೆ ಬಂದು ಕಡೆಯಲ್ಲಿ ಗುರುಗುರುಟ್ಟುವಾಗಶರೀರಸಂಬಂಧಿಗಳ ಕಾಟತರುಣಿಯರ ಮೇಲಾಸೆ ತಮ್ಮ ಹಿತವರಿಯದೆಬರಿದೆ ಭವದೊಳಗೆ ಬಳಲದಿರಿ 8 ವೇದಶಾಸ್ತ್ರವನೋದಲಿಲ್ಲ ಜಪತಪಸಾಧು ಸತ್ಕರ್ಮಗಳ ಸರಕಿಲ್ಲಮಾಧವನ ಪೂಜೆಯನು ಮಾಡಿದವನಲ್ಲ ಹರಿಪಾದತೀರ್ಥ ವ್ರತಗಳಿಲ್ಲ 9 ಊಧ್ರ್ವಪುಂಢ್ರsÀಗಳೆಲ್ಲಿ ಹರಿಯ ಲಾಂಛನವೆಲ್ಲಿಪದ್ಮಾಕ್ಷಿ ಶ್ರೀತುಲಸಿ ಸರಗಳೆಲ್ಲಿಸದ್ಧರ್ಮಪಥವೆಲ್ಲಿ ವಿಷಯಾಂಧಕೂಪದೊಳುಬಿದ್ದು ಹೋರಳುವ ಮನುಜರೆಲ್ಲಿ 10 ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ 11 ಉಕ್ಕಿ ಹರಿಯನೆ ಪೊಗಳಿ ಅವನಂಗಣದಿ ಹೊರಳಿಶುಷ್ಕ ತರ್ಕಗಳ ಮೇಲೆ ಉಗುಳಿಭಕ್ತಿಜ್ಞಾನಗಳಿರಲಿ ಮಿಕ್ಕ ಪಥದಿಂ ಮರಳಿಮುಕ್ತಿಮಾರ್ಗದಲಿನ್ನು ತೆರಳಿ 12 ಕೊಳ್ಳೆನಾಯಕ ಬಂದು ಕೋಟೆಗಡರದ ಮುನ್ನಕಳ್ಳರೈವರ ಕಾಟದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭದಲಿ ಬಚ್ಚಿಡಿರೊ 13 ಮಲಮೂತ್ರರಕ್ತಮಾಂಸದ ರಾಸಿಗಳು ಕೂಡಿಎಲುವಿನ ಬಿಲದಲ್ಲಿ ಗೂಡಮಾಡಿಬೆಳೆಸಿದೀ ತನುವೆಂಬ ನರಕದಾಸೆಯ ಬಿಟ್ಟುಜಲಜನಾಭನ ಸೇರಿಕೊಳ್ಳಿರೊ14 ಒಂಬತ್ತು ಛಿದ್ರವುಳ್ಳ ದೇಹವೆಂಬ ಮಡಕೆಯಲ್ಲಿತುಂಬಿದ ವಾಯು ಸ್ಥಿರವೆಂದುನಂಬಿಕೊಂಡಿರಬೇಡಿ ಹಯವದನ ಹರಿಯ ಪಾ-ದಾಂಬುಜವ ಸೇರಿ ಬದುಕಿರೊ 15
--------------
ವಾದಿರಾಜ
ಜಯತೀರ್ಥ ಗುರುರಾಯ ಕವಿಗೇಯಾ ಪಾದ ದ್ವಯಕಭಿನಮಿಸುವೆ ಶುಭಕಾಯ ಪ ಪಾದ ಪಾದ ದ್ವಂದ್ವಾರಾಧಕರ ಸಂಬಂಧಿಗ ನರ ನೆಂದು ಪಾಲಿಪುದು ಕಾರುಣ್ಯ ಸಾಗರ ಮಂದ ನಾನು ಕರ್ಮಂದಿಗಳರಸ ಮು ಕುಂದನ ತೋರೋ ಮನಮಂದಿರದಲ್ಲಿ 1 ಹರಿಪಾದಾಂಬುಜಾಸಕ್ತ ನಿಜ ಭಕ್ತ ಜನರಾ ಪರಿಪಾಲಿಪ ಸಮರ್ಥ ಅಕ್ಷೋಭ್ಯ ತೀರ್ಥ ಕರಕಮಲ ಸಂಜಾತಾನಂದ ದಾತಾ ಪರÀಮಹಂಸ ಕುಲವರನೆ ವಂದಿಸುವೆ ಕರುಣದಿಂದಲೆನಗರುಪು ಸುತತ್ವವ 2 ಕಾಮಿತ ಫಲದಾತಾ ಜಗನ್ನಾಥ ವಿಠ್ಠಲ ಸ್ವಾಮಿ ಪರಮ ದೂತಾ ಸುವಿಖ್ಯಾತಾ ಶ್ರೀ ಮಧ್ವ ಮತಾಂಬರುಹ ಪ್ರದ್ಯೋತಾ ತಾಮಸಗಳೆದೀ ಮಹೀಸುರರ ಮ ಹಾಮಹಿತರ ಮಾಡ್ದೆ ಮುನಿವರ್ಯಾ 3
--------------
ಜಗನ್ನಾಥದಾಸರು
ತತ್ವಚಿಂತನೆ ಅತಿಭಯಪುಟ್ಟುವುದಡವಿಯ ನೋಡಲ್ ಪ ಮತಿ ಮಂದವಾಗಿಯೆ ಮಾರ್ಗತಪ್ಪುವುದು ಅ.ಪ ಹುಲಿಸಿಂಹಶಾರ್ದೂಲ ಗಂಡಭೇರುಂಡ ಬಲುದುಪ್ಪೆ ಆನೆ ಕಾಡ್ಗೋಣದ ತಂಡ 1 ಝಿಲ್ಲಿಕದಿಂದೆದೆ ತಲ್ಲಣಿಸುವದು ಎಲ್ಲೆಲ್ಲಿಗಿಡಮರ ಮುಳ್ಳುಕಲ್ಲುಗಳು 2 ನಿಲ್ಲಗೊಡದ ದುಷ್ಟಕೀಟಕ ವೃಂದ 3 ಸಂಸಾರಟವಿಯನ್ನು ಸೇರಿ ನಾ ಕೆಟ್ಟೆ ಬಟ್ಟೆ 4 ದೇಹ ಸಂಬಂಧ ಮೋಹ ಕಾಡ್ಗಿಚ್ಚು ದಾಹಗೊಳಿಸಿ ಕೊಲ್ಲುತಿರುವುದು ಹೆಚ್ಚು 5 ಹಗಲು ಇರುಳು ಇದರೊಳಗಿದೆಚಿಂತೆ 6 ದಾರಿಯ ತೋರುವ ಗುರುರಾಮ ವಿಠಲಾ ಕಾರಣ ಕರ್ತನ ನಾ ನೋಡಲಿಲ್ಲ 7
--------------
ಗುರುರಾಮವಿಠಲ
ತಾತ್ವಿಕವಿವೇಚನೆ ಏರಿಸಿ ಏರಿಸಿ ಮಾರುತ ಮ್ವತಧ್ವಜ ಸಾರ ಸುಖಂಗಳ ನಿತ್ಯದಲುಂಬುವ ಯೋಗ್ಯತೆ ಯುಳ್ಳವರೂ ಪ ಈರನ ಮತವೇ ಸಾರವು ಶ್ರುತಿಗಳ ಶೌರಿಯ ಮತವೇ ಈರನ ಮತ ಖರೆ ದೂಡಿರಿ ಸಂದೇಹ ಅ.ಪ ಇಲ್ಲವು ಜಗವಿದು ಭ್ರಾಂತಿಯ ಕಲ್ಪನೆ ಸುಳ್ಳೇ ಎಲ್ಲವು ಬ್ರಹ್ಮನ ಬಿಟ್ಟರೆ ಬ್ರಹ್ಮನೆ ಸತ್ಯವೆನೆ ಅಲ್ಲವು ನುಡಿಯಿದು ಬ್ರಹ್ಮನು ಕಾರಣ ಸುಳ್ಳಾಯಿತು ನುಡಿ ಅಲ್ಲವೆ ಯೋಚಿಸಿ ಕೊಡದು ಈ ಮನವು 1 ಉಂಬುದು ಉಡುವುದು ಕಾಂತೆಯ ಸಂಗವು ನಂಬಲು ಬೇಡಿರಿ ಸುಳ್ಳೇಯೆಂತೆಂನೆ ಸಾಕ್ಷಿಯು ಒಪ್ಪುವುದೇ ನಂಬಲನರ್ಹವೆ ಕಾರ್ಯಸುಕಾರಿಯ ಖರೆ 2 ಒಂದೇ ತೆರವಿಹ ವಸ್ತು ದ್ವಯವಿರೆ ಒಂದನು ಮತ್ತೊಂದೆಂಬುವ ಭ್ರಾಂತಿಯು ಕೊಡುವದೂ ಪೊಂದಿಹ ಹೇಗೆನೆ ಉತ್ತರ ಸಿಕ್ಕದು ಯೋಚಿಸಿ ಕೋವಿದರೆ 3 ಭ್ರಾಂತಿಯ ಪೆಣ್ಣನು ಕೊಡುತ ತಾಸ್ವಾ ತಂತ್ರ ವಿಹೀನನು ಆಗುತ ಮಿಡುಕುವ ದೇವನು ಎನಿಸುವನೆ ಮಂತ್ರಿಸೆ ಬ್ರಹ್ಮನ ನಾನಿಹೆ ನೆಂಬುದ ಭ್ರಾಂತಿಯ ತೊಲಗುತ ಬ್ರಹ್ಮನು ಆಹನೆ ಮನವ ವಿಚಾರಿಸಿರಿ4 ನಾನೇ ಬ್ರಹ್ಮನು ಎಂಬೀ ಜ್ಞಾನವು ತಾನೇ ಬಾರದು ಸಹಜ ವಿದಲವು ಅನುಭವ ವಿರುದ್ಧಾ ತಾನೇ ಬ್ರಹ್ಮನು ಆಗಿರೆ ಭವದೊಳು ನಾನಾ ದುಃಖವ ನುಣ್ಣಲು ಬಂದರೆ ಹುಚ್ಚನೆ ಅವಸರಿಯು5 ಬ್ರಹ್ಮ ದ್ವಯವಿದೆ ಸತ್ಯ ದ್ವಯವಿದೆ ಬ್ರಹ್ಮನು ಆಹುದು ಕೊನೆ ಮಾತೆಂದರೆ ಬ್ರಹ್ಮನು ಶೂನ್ಯನಿಹ ಬ್ರಹ್ಮನು ನಿರ್ಗುಣ ನಂದವಿಹೀನನು ಬ್ರಹ್ಮನ ಗತಿಯೆನೆ ಸರ್ವವಿನಾಶವೆ ಯಾರಿದ ಬಯಸುವರೂ6 ವ್ಯಕ್ತಿತ್ವವು ತಾನಾಶವು ಆಹುದೆ ಮುಕ್ತಿಯು ಯೆಂತೆನೆ ಸರ್ವವಿನಾಶಕೆ ಸಾಧನೆಯೇ ಬತವು ಮುಕ್ತಿಯು ದುಃಖವಿವರ್ಜಿತ ಬರಿಸುಖ ರಿಕ್ತವು ಬರಿಯೆನೆ ಭವವಿದು ವರವೈ ಬೇಡವು ಆ ಮುಕ್ತಿ7 ಸತ್ಯವ ನುಡಿವುದು ವೇದವು ಒಂದೆಡೆ ಮಿಥ್ಯವ ನುಡಿವುದು ಮತ್ತೊಂದೆಡೆಯೆನೆ ಯಾವುದು ಸಿದ್ಧಾಂತ ಮೊತ್ತವ ನೂಕುತ ಕಿಚ್ಚಡಿ ವೇದಕೆ ಮೊತ್ತವ ಕೊಳ್ಳುತ ಒಂದೇ ಅರ್ಥವ ಜೋಡಿಸಿ ಇದು ನೀತಿ8 ಬೌದ್ಧರು ಒಪ್ಪನು ಶ್ರುತಿಗಳ ದೇವನ ವೇದವ ಒಪ್ಪುವ ಮಾಯಾವಾದಿಯ ಬ್ರಹ್ಮನು ಸೊನ್ನೆಯಿಹ ವೈದಿಕ ವೇಷದ ಬೌದ್ಧನ ವಾದವೆ ಶೋಧಿಸಿ ನೋಡಲು ಮತ್ತೇನಿಲ್ಲವು ಚಿಂತಿಸೆ ಸರಿಯಿಷ್ಠೆ9 ತರತಮ ಬಹುವಿಧ ಭೋಗವ ಮುಕ್ತಿಲಿ ಇರುವುದು ಸಿದ್ಧವು ಶೃತಿಗಳ ನಂಬಲು ಜೀವರ ಭಿನ್ನತೆಯು ಸ್ಥಿರವೇ ಆಯಿತು ಇದರಿಂ ಮುಕ್ತಲಿ ಪರಿ ಬಗೆತಾ ವಿದಿತವೆ ಜಗದಲಿ ಭೇದವೆ ಸರ್ವತ್ರ10 ನಾಸ್ತಿಕ ವಾದವ ತಳ್ಳಿರಿ ಆಚೆಗೆ ನಾಸ್ತಿಕ ಬಂದನೆ ತಂದೆಯು ಇಲ್ಲದೆ ಕಾರ್ಯವು ಜಗವಿರಲು ಆತನು ನೊಡಿಹ ಜ್ಞಾನಿಗಳಿಲ್ಲವೆ ಪೊಗಳವೆ ಗೋತತಿಯು11 ಪ್ರಕೃತಿ ವಿಕಾರದ ಜಗವಿದು ವಿದಿತವೆ ವಿಕಲ ವಿಶೇಷದ ಜೀವನು ಹಾಗೆಯೆ ಉಭಯರ ಆಳುವನು ವಿಕಲ ವಿವರ್ಜಿತ ಸಕಲ ಗುಣಾರ್ಣವ ಸಕಲ ನಿಯಾಮಕ ಸರ್ವ ಸಮರ್ಥನು ಇರಲೇ ಬೇಕಷ್ಟೆ12 ನಿತ್ಯವು ಈತ್ರಯ ಸಿದ್ಧವು ಆದರೆ ನಿತ್ಯ ಪರಸ್ಪರ ಸಂಬಂಧ ತ್ರಯ ಜ್ಞಾನವೆ ಪುರುಷಾರ್ಥ ಉತ್ತಮ ನೊಬ್ಬನು ಅಧಮರು ಇಬ್ಬರು ಮತ್ತಿವರಲಿ ಹಾಗಧಮನು ಜೀವನು ಚೇತನ ಪ್ರಕೃತಿ ವರ13 ಸರ್ವ ಸ್ವತಂತನು ಒಬ್ಬನೆ ಇರದಿರೆ ಸರ್ವಾ ಭಾಸವೆ ಜಗವಿದು ಆಹುದು ಪ್ರಭು ದ್ವಯ ಕೂಡುವುದೆ ಸರ್ವಗ ಶಾಶ್ವತ ಪೂರ್ಣಾ ನಂದನು ಸರ್ವ ವಿಚಿತ್ರನು ಮುಕ್ತಿದನಿರದಿರೆ ಪ್ರಭು ಅವನೆಂತಾಹ14 ಶುರುಕೊನೆ ಮಧ್ಯವು ಇದ್ದ ದೇವಗೆ ಬರುವನೆ ಹೊಸ ಹೊಸ ದೇವನು ಪ್ರತಿಪ್ರತಿ ಕಲ್ಪದಿ ಯೋಚಿಸಿರಿ ಇರದಿರೆ ಸಕಲೈಶ್ವರ್ಯವು ಆತಗೆ ತರುವನು ನಂದದ ಸೃಷ್ಠಿಯ ಹೇಗವ ವರಸಮರಿಲ್ಲವಗೆ15 ಸುಳ್ಳಿರೆ ಜಗವಿದು ಪಾಲಿಪ ದೊರೆಯದ ಕಳ್ಳನೆ ಅಲ್ಲವೆ ಅಷ್ಠಕರ್ತುತ್ವವು ಕೂಡುವ ದ್ಹೇಗಿನ್ನು ಎಲ್ಲಾ ಜಗವಿದು ನಿತ್ಯಾ ನಿತ್ಯವು ಎಲ್ಲಾ ಸತ್ಯವೆ ಶ್ರುತಿಗಳ ನುಡಿಗಳು ಭೃತ್ಯರು ಜೀವಗಣ16 ನಿತ್ಯವು ಪ್ರಕೃತಿಯು ಜೀವರು ಈಶನು ಸತ್ಯವು ಇದುಯೆನೆ ಪಂಚಸುಭೇದವು ನಿತ್ಯವೆ ಎಲ್ಲೆಲ್ಲು ನಿತ್ಯ ಸುಖಂಗಳ ಬಯಸುವ ನಮಗವು ಹತ್ತವು ಕಾರಣ ಸರ್ವಸ್ವತಂತ್ರನು ದೇವನೆ ಸತ್ಯವಿದು17 ಚೇತನ ಪ್ರಕೃತಿಯೆ ಲಕ್ಷ್ಮಿಯು ತಿಳಿವುದು ಆತನ ರಾಣಿಯು ನಿತ್ಯಸುಮುಕ್ತಳು ನಿತ್ಯಾವಿಯೋಗಿನಿಯು ಚೇತನ ನಿಚಯದ ಚೇತನ ಹರಿ ಇಹ ಆತನೆ ದೊರೆ ಜಗ ಜಂಗಮ ಸ್ಥಾವರ ಸತ್ತಾದಾಯಕನು 18 ದೋಷ ವಿದೂರ ಅಶೇಷ ಗುಣಾರ್ಣವ ದಾಸ ಪೋಷನಿಜ ಮುಕ್ತಿದ ನಿರದಿರೆ ಭಜಿಸುವದೇಕವನ ಶ್ರೀಶನು ಬಿಡೆ ಜಡ ಚೇತನ ಚೇಷ್ಠೆಯು ನಿಹ ಉಲ್ಲಾಸದಿ ಭಜಿಸುವುದು 19 ಪರಿಮಿತ ಶಕ್ತನು ದೇವನು ಇದ್ದರೆ ಪರಿಮಿತ ಜೀವರ ತೆರವೇ ಆಹನು ಕಾರಣ ನಿಸ್ಸೀಮ ಹರಿಗುಣವಗಣಿತ ಸಿಗ ಸಾಕಲ್ಯದಿ ನಿರುಪಮ ಸುಖಜ್ಞಾನಾತ್ಮಕ ವಿಭುವರ ಅನಾದಿ ಸಿದ್ಧವಿದು 20 ಪ್ರಾಕೃತ ಗುಣಗಣ ವರ್ಜಿತ ದೇವನ ಜ್ಞಾನ ಸುದೃಷ್ಠಿಗೆ ಗೋಚರನು ಸ್ವೀಕೃತ ನಾದರೆ ಜೀವನು ಹರಿಯಿಂ ತಾಕಿಸಿ ದೃಷ್ಠಿಗೆ ತನ್ನನೆ ತೋರುವ ಭಕ್ತರ ಬಾಂಧವನು 21 ತರತಮ ಜ್ಞಾನದಿ ಗುಣ ಉತ್ಕರ್ಷವು ಬರುವುದು ಕಾರಣ ತಿಳಿಯುತ ಹರಿಪರ ಮೋಚ್ಛನು ಹೌದೆನ್ನಿ ಅರಿವುದು ಅತಿಪರಿ ಪಕ್ವದ ಭಕ್ತಿಯ ಮಾಧವ ಮೆಚ್ಚುವನು22 ವೇದಗಳಿಂದಲೆ ದೇವನು ವ್ಯಕ್ತನು ವೇದಗಳಿಂದಲೆ ಧರ್ಮಾಧರ್ಮವಿ ವೇಕವು ಸರಿಯಷÉ್ಠ ವೇದ ನಿಜಾರ್ಥವೆ ಸಚ್ಛಾಸ್ತ್ರಂಗಳು ಮೋದವೆ ದೊರಕದು ಬಿಟ್ಟರೆ ಇವುಗಳ ಸಾದರ ಭಜಿಸುವುದು23 ಬಿಂಬನು ಹರಿ ಪ್ರತಿ ಬಿಂಬನು ಜೀವನು ಬಿಂಬಾಧೀನವು ಪ್ರತಿ ಬಿಂಬನ ಚೇಷ್ಠೆಗಳೆಂತರಿತು ಉಂಬುತ ಮುದದಿಂ ಸುಖದುಃಖಂಗಳ ಬಿಂಬಕ್ರಿಯೆಯೆನುಸಂಧಾನವ ಗುರುವಿಂದರಿತು ಸಮರ್ಪಿಸಿ24 ಮೆಚ್ಚುಲು ಮಾಧವದಾವುದಸಾಧ್ಯವು ಅಚ್ಚುತನೊಲಿಮೆಗೆ ಹೆಚ್ಚಿದುದೇನಿದೆ ಕೊಚ್ಚುತಕಲಿ ಸೊಂಕು ತಚ್ಛಭಿಮಾನ ಫಲೇಚ್ಛೆಯ ತ್ಯಜಿಸುತ ಕಚ್ಛಪ ನೊಲಿಮೆಗೆ ವಿಧಿಯ ನಿಷೇಧವ ಮರೆಯದೆ ಗೈಯುತಲಿ25 ಪರ ಮೋಚ್ಚನು ವರಸಮರಿಲ್ಲವು ಸಿರಿ ವರ ವಿಧಿಪಿತ ಸೃಷ್ಠ್ಯಾದ್ಯಷ್ಠಸು ಕರ್ತನು ವಿಭುವೆಂದು ನಿರುಪಮ ನಿಖಿಳಾಗಮ ಪ್ರತಿ ಪಾದ್ಯನು ಸ್ವರತ ಸ್ವತಂತ್ರನು ಪೂರ್ಣಾನಂದನು ಎನ್ನುತ ಸಾರುತಲಿ26 ಸಾಮನು ಸರ್ವರ ಬಿಂಬನು ಸರ್ವಸು ನಾಮನು ಸರ್ವಾಧಾರನು ಜಡಜಂಗಮ ವಿಲಕ್ಷಣನು ಭೂಮನು ಭಕ್ತ ಪ್ರೇಮಿಯು ಸದ್ಗುಣ ಧಾಮನು ಪೂರ್ಣನು ನಿಜ ಸುಖ ಮುಕ್ತಿದನೆನ್ನುತ ಸಾರುತಲಿ27 ವಿಧಿ ಪರಿಸರ ವಿಪಶಿವ ಪ್ರಮುಖರು ಪರಿವಾರವು ನಿರವದ್ಯನು ಮುಕ್ತಾ ಮುಕ್ತರ ನಾಯಕನು ಉರುಗಾಯನ ಜಗದೊಳ ಹೊರವ್ಯಾಪ್ತನು ಪರಿಮರ ಸ್ವಗತ ಭೇದ ವಿವರ್ಜಿತನೆಂಬುದ ಸಾರುತಲಿ28 ತರತಮ ಪಂಚಸುಭೇದವು ನಿತ್ಯವು ನಿರುತದಲುಂಬುವ ಸಾರವೆ ದುಃಖ ನಿರ್ಲೇಪನು ಅದ್ಭುತನು ಅರಿಯರು ಯಾರೂ ಇವನೇ ವಲಿಯದೆ ಪುರುಷೋತ್ತುಮ ಸಾಕಲ್ಯದವಾಚ್ಯನು ಎಂದು ಡಂಗುರ ಹೊಡೆಯುತ 29 ಗುರುವಿನ ದ್ವಾರವೆ ಹರಿತಾ ವಲಿಯುವ ಗುರುವೆನೆ ಮುಖ್ಯದಿ ಮುಖ್ಯ ಪ್ರಾಣನೆ ಸರಿಸಿರಿ ಯೆಂತೆಂದು ಗುರುಗಳು ಹಿರಿಯರು ಎಲ್ಲಾ ಕ್ರಮದಲಿ ಮಧ್ವರಿಗೊಂದಿಸಿ ಮುದದಿ 30 ಅನುಭವವಿಲ್ಲದ ಜ್ಞಾನವು ವಣವಣ ಸಾಧನೆ ಇದು ಖರೆಯ ಚಿನುಮಯ ನೊಲಿಸಲ್ ಮನೆಧನ ಬೇಡವು ತನುಮನೆ ವಿಷಯಗಳಿಂದಲೆ ಪೂಜಿಪ ಕ್ರಮದಿಂಯಜಿಸುತ 31 ಕಲಿಯುಗವಿದು ವರ ಸುಲಭದಿ ಸಾಧನೆ ವಲಿಯುವ ಬೇಗನೆ ನಾಮ ಸ್ಮರಣೆಗೆ ಭಜಿಸಿರಿ ಹರಿನಾಮ ವಳದಾರಿಯು ಸರಿ ಕ್ರಮದಿಂ ಪಾಡಲು ಮುಳುಗುತ ಭಕ್ತಿಯ ಕಡಲೊಳ್ ನಿಜಹರಿ ದಾಸರು ದೀಕ್ಷೆಯಲಿ32 ಕವಿಗುರು ರಾಜರ ಚರಣದಿ ಬಾಗುತ ಪವನ ಮತಾಂಬುಧಿ ಸೋಮನು ಜಯಮುನಿ ಹೃದಯಗ ವಾಯುವಲಿ ಅವಿರತ ನಲಿಯುವ ಶ್ರೀ ಕೃಷ್ಣವಿಠಲನು ತವಕದಿ ವಲಿಯುವ ಗ್ರಹಿಸಲ್ ಈ ಪದ ಜಯ ಜಯವೆನ್ನುತ33
--------------
ಕೃಷ್ಣವಿಠಲದಾಸರು
ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ ವಾರಿಯನು ಧರಿಸುವ ನಾರಿ ಗೌರಿ ಕೌಮಾರಿಪ ಬಾಣ ಕುಂಭನೆಂಬೊ ದಾನವರೀರ್ವರು ಕ್ಷೋಣಿಯೊಳು ಬಂದಲ್ಲಿ ತಪವ ಮಾಡಿ ಕಮಲ ಗರ್ಭನವೊಲಿಸಿ ವೇಗದಲಿ ಏನು ವರ ಬೇಡೆನಲು ನಗುತಲವನು ಸುರಿದನು 1 ಸಂಬಂಧಿಗಳೆಮ್ಮ ಕೊಲ್ಲಲ್ಲಿ ಉಳಿದವರ ಬಗಿಯದಂತೆ ವರವನು ಪಾಲಿಸೆನಲು ನಗುತ ಲೋಕೇಶ ದುರುಳರಿಗೆ ಸಲೆ ಇತ್ತಾ 2 ಚತುರ್ದಶ ಲೋಕವನು ಗೆದ್ದು ತ್ರಿದಶರಾ ಮಿತಿಯಿಲ್ಲದೆ ಮಾನಭಂಗ ಮಾಡಿ ಪತಿತರು ಈ ತೆರದಲಿರುತಿರಲು ವಿಬುಧರು ಚತುರ ಮುಖಗೆ ಮೊರೆಯಿಡಲು ಹರಿಗೆ ಬಿನ್ನೈಸಿ3 ತಿಳಿದು ಕುಂಡಲನೊಲಿದು ದ್ವಾಪಾರಾಂತ್ಯದಲಿ ಖಳ ಕಂಸನೆಂಬುವನು ಪುಟ್ಟಿ ತನ್ನ ಬಲದಲಿ ತನ್ನ ಅನುಜೆಯರ ಶರೆಯುಯಿಟ್ಟು ಬಳಲಿಸುವವಳಿಗೊಲಿದು ಅವತಾರ ಮಾಳ್ಪ ಯುದಕುಲದಲಿ 4 ಎನ್ನ ಕೂಡಲೀ ದುರ್ಗಿ ಜನಿಸಿ ಬರಲು ಅವ ಳನ್ನ ಕೊಲ್ಲುವೆನೆಂದು ಕಂಸ ಮುನಿಯೆ ತನ್ನ ಶಕ್ತಿಯಿಂದಾ ಗಗನಕ್ಕೆ ಪಾರಿ ಬರಲು ಘನ್ನ ಘಾತುಕರನ್ನ ಮಡುಹಿ ಬಿಡುವಳೆನಲು 5 ಇಂತು ಪೇಳಲಿ ಅಜನು ಸಂತೋಷದಿರಲಿತ್ತ ದಂತಿ ಗಮನಳು ಉದುಭವಿಸಿ ಬಂದು ಪಿಂತೆ ಮಾಡಿದ ತಪಸು ಸಿದ್ಧಿಸಿತು ಎನಗೆನುತ ಅಂತಕರಾಗಿದ್ದ ಖೂಳರ ಸದೆ ಬಡಿದು 6 ಹರಿಕೃಪೆಯಿಂದ ದಕ್ಷಿಣ ಶರಧಿಯಲಿ ನಿಲ್ಲಲು ಪರಮ ಮುನಿ ಅಗಸ್ತ್ಯ ಪೂಜಿಸಿದನು ಶರರಾಜ ಬಂದು ಮದುವೆನೈದಲು ಪರಮೇಷ್ಠಿ ಹರನ ಸಹಿತಲಿ ನಡೆತಂದಾ 7 ಬರಲಾಕ್ಷಣದಲ್ಲಿ ಕಲಿಯುಗ ಪ್ರಾಪುತವಾಗೆ ಮರಳೆನಿಂದರು ವರ ಸುಧೇಂದ್ರವೆಂಬೊ ಪುರದಲ್ಲಿ ಪೂಜೆಗೊಳ್ಳುತಲ್ಲಿರಲು ಇತ್ತ ಸುಂ ದರ ಕನ್ಯಾಮಣಿಯಾಗಿ ದಶದಿಶಿಗೆ ಪೊಳೆಯುತಿರೆ8 ಅಂದಾರಭ್ಯನಾಗಿ ಕನ್ಯಾಕುಮಾರಿ ಎನಿಸಿ ಬಂದು ನವತೀರ್ಥದಲಿ ಯಾತ್ರೆ ಜನರು ಮಿಂದಾಗಲೆ ಮನದಂತೆ ಭಕುತಿಯನಿತ್ತು ಪೊಂದಿಸುವೆ ವಿಜಯವಿಠ್ಠಲನ ಪಾದದಲ್ಲಿ9
--------------
ವಿಜಯದಾಸ
ನಿನ್ನ ಪೂಜೆ ಮಾಡುವುದಕನಾನುಕೂಲವು ಪ ಎನ್ನದೇಹ ಪೋಷಣೆಗೆ ಎಲ್ಲ ಇರುವದು ಅ.ಪ ತಾನು ಉಡುವುದಕ್ಕೆ ಹೆಚ್ಚುಧನದ ವಸ್ತ್ರವು ದಾನ ಮಾಡುವುದಕೆ ನೀಚÀತರದ ಅರುವೆಯೂ 1 ಘನ್ನಲೋಕ ಮಾತೆಗೆ ಗಿಲೀಟು ನಗಗಳು 2 ಯಜಮಾನಗೆ ಘೃತದ ಪಕ್ವ ಭಕ್ಷ್ಯ ಭೋಜ್ಯವು ಇತರ ಜನರಿಗೆಲ್ಲ ಎಣ್ಣೆಕರಿದ ಭಕ್ಷ್ಯವು 3 ದೇಹ ಸಂಬಂಧಿಗಳಿಗೋಸುಗ ಸಾಲಗೈವುದು ಶ್ರೀಹರಿ ನಿನ್ನವರು ಕೇಳೆ ಇದ್ದರು ಇಲ್ಲವೂ 4 ಅನ್ಯಜನರೊಳಿದ್ದಗುಣವು ದೋಷವೆಣಿಪುದು 5 ಪರಿ ತಿಳಿದು ಕೊನೆಗೆ ನರಕ ಹೊಂದುತ 6 ಘನಮಹಿಮೆ ಗುರುರಾಮವಿಠಲ ನಿನ್ನ ಮರೆವರು 7
--------------
ಗುರುರಾಮವಿಠಲ
ನಿನ್ನವರ ಧರ್ಮ ವಿಹಿತವಾಗುವುದು ಮ ತ್ತನ್ಯರಾಚರಿಸಿದ ಧರ್ಮ ಅಧರ್ಮ ಪ ಕಡಲ ಮಥನದಲಿ ಕಪರ್ದಿ ಕಾಳಕೂಟ ಕುಡಿಯಲು ಕಂಠಭೂಷಣವಾಯಿತು ಒಡನೆ ರಾಹು ಕೇತು ಸುಧೆಯ ಪಾನದಿಂದ ಮಡಿದರೆಂದು ಮೂರ್ಲೋಕವೇ ಅರಿಯೆ 1 ಬಲಿನಿನ್ನ ಮುಕುಟ ಕದ್ದೊಯ್ಯ ಪಾತಾಳಕೆ ಸಲೆ ಭಕ್ತನೆಂದು ಬಾಗಿಲ ಕಾಯ್ದೆ ಇಳೆಯೊಳು ಸುರರಿಗೆ ಗೋ ಭೂ ಹಿರಣ್ಯವಿತ್ತಾ ಖಳ ಜರಾಸಂಧನ ಕೊಲಿಸಿದೆ ಹೋಗಿ 2 ಪತಿವ್ರತ ಧರ್ಮದಿ ಮೃತರಾದ ತ್ರಿಪುರರ ಸತಿಯರು ಶಿವನಿಂದ ಹತರಾದರು ಸತಿ ಉಡುಪ ಪತಿಯಿಂದಲಿ ನಿತ್ಯ ಸೇವೆಯೊಳಿರುವಳು 3 ಮೇದಿನಿಯೊಳು ಪ್ರಾಣಿ ಹಿಂಸಕನೆನಿಸಿದಾ ವ್ಯಾಧನ ಯಮಿಕುಲೇಶನ ಮಾಡಿದೆ ವೇದೋಕ್ತ ಕರ್ಮವಾಚರಿಸಿದ ಜಿನನೊಳ್ ಪ್ರಾದುರ್ಭೂತನಾಗಿ ಕೆಡಹಿದೆ ತಮಕೆ 4 ಪರಾಶರನು ಸತ್ಯವತಿಯ ಸಂಬಂಧಿಸೆ ಶ್ರೀರಮಣ ನೀನವತರಿಸಿದಲ್ಲಿ ಭವ ಸರೋಜ ಕನ್ನಿಕೆಯಸಾರಲು ಬಿಡುವ ಜಗನ್ನಾಥ ವಿಠಲ 5
--------------
ಜಗನ್ನಾಥದಾಸರು
ನೀರಜಾಕ್ಷ ನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ ದಾರಿಯ ಕಾಣದೆ ಅ.ಪ ಜನ್ಮಾಂತರ ಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು ಧರ್ಮನಿರೋಧ ವಿಕರ್ಮದ ಬಳ್ಳಿಯು ಬಿಮ್ಮನೆ ಬಿಗಿವಡೆದು ಕಂಟಕ ವೆಮ್ಮನು ಕಾಲಿಡಲಮ್ಮಗೊಡವು ಹರಿ1 ದಾರಿಯೊಳಡಸಿಹುದು ರಾರು ಮಂದಿ ಮುಳಿದು ಸಾರಿ ಸಾರಿ ಬಾಯಾರಿಸುತಿರ್ಪವು 2 ಯನು ದಾಂಟುವೊಡರಿದು ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು ತನು ಸಂಬಂಧದ ಜನಗಳು ದುರ್ಮೃಗ ವನು ಪೋಲುತ ನಮ್ಮನು ಬಾಧಿಸುತಿರುವರು 3 ಕ್ಷುದ್ರವಿಷಯಗಳುಛಿದ್ರವಹುಡುಕುವ ವಧ್ರುವದೇಹದೊಳು ಕದ್ರುಸುತರವೊಲುಪದ್ರವ ಗೈವ ಭದ್ರದ ಭೀತಿಗಳೂ ಪದ್ರವ ಜರೆಯೆಂಬುದ್ರಿಕ್ತಾಂಗನೆ 4 ಸುರನರವರರೊಳು ಶರಣೋಪಾಯವರ ವರದವಿಠಲ ನಿಜ ಚರಣವ ನಂಬಿದೆ 5
--------------
ವೆಂಕಟವರದಾರ್ಯರು
ನೋಡಿದ್ರ್ಯಾ ಕಂಡಿದ್ರ್ಯಾ ಶ್ರೀಸುಬ್ಬರಾಯ ದಾಸರ್ಯರಾ ಪ ಕಾಡೂವ ಭವದ ದೂರೋಡಿಪ ಮಾರ್ಗದಜಾಡನೆ ತಿಳಿಸುವಾಗಾಢ ಮಹಿಮರ ಅ.ಪ. ಪುರಂದರ | ದಾಸರ ಪೀಳಿಗೆ ಶರಧಿಗಾಶಶಿಗೊಪ್ಪುವ ದಾಸವರ್ಯರನ 1 ಮುದ್ದು ಮೋಹನ ಗುರು | ಮುದ್ದು ಶಿಷ್ಯರು ತಂದೆಮುದ್ದು ಮೋಹನರು | ಪ್ರಸಿದ್ಧರಾಗಿಹರಾ 2 ಪರ | ಮಾರ್ಥ ಚಂದಿರ ಹರಿಕೀರ್ತನೆ ಗೈವ ಸ | ತ್ಪಂಥ ಬೀರಿದರಾ 3 ಅಂಕಿತರಹಿತ ನಿ | ಷಿದ್ಧ ದೇಹವು ಎಂದುಅಂಕನಗೈಧರಿ | ಲೆಂಕತನವ ಬೀರ್ದರ 4 ಸಹಸ್ರಾರು ಅಂಕಿತ | ವಿಹಿತೋಪದೇಶ ಸ-ನ್ನಿಹಿತರ ಗೈದೂ | ದ್ಧರಿಸಿದ ಗುರುಗಳ5 | ದಾಸಕೂಟಾಬ್ಧಿ ತಾ | ರೇಶನ ಪರಿಯಲಿಭಾಸಿಸಿ ಶರಣರ | ಪೋಷಿಸಿದವರನು 6 ಸಾರ ಶಾಸ್ತ್ರದ ಸವಿ | ಆರು ಮೊಗನ ಪರಿಆರು ಬಗೇಯಲಿ | ಬೀರಿದ ವರನ 7 ಸುಂದರೇಶ ಪ್ರಾಣ | ಅಂದ ಪ್ರತೀಕವಅಂದೇಭ ಗಿರಿಯಲ್ಲಿ | ಚಂದದಿ ನಿಲಿಸಿದರ 8 ಪ್ರಥಮ ಮಾಸವು ವರ | ಸಿತ ನವಮಿ ಮಧ್ಯಾಹ್ನಪೃಥುವಿ ಸಂಬಂಧವ | ಮತಿಯಿಂದ ತ್ಯಜಿಸಿದರ 9 ಇಂದು ಕರಿಗಿರಿಲಿಹರ 10 ಗೋವಿದಾಂಪತಿ ಗುರು ಗೋವಿಂದ ವಿಠಲ ಪರಾವರೇಶನು ಎಂದು | ಓವಿ ತುತಿಸುತ್ತಿಹರ11
--------------
ಗುರುಗೋವಿಂದವಿಠಲರು
ಪತಿ ಪೋದನೆಂದು ಶೋಕಿಸುವುದ್ಯಾಕೆ ಶ್ರೀ - ಪತಿಯು ಇರಲಾಗಿ ಮರುಳೆ ಪ ಪ್ರತಿ ಪ್ರತಿ ಜನ್ಮದಿ ಜತೆ ಮಾಡಿದ ಪಂಚ - ಕಾಯ ಸತ್ಯ ಸ್ಥಿರವಲ್ಲವೇ ಮರುಳೆ ಅ.ಪ ನೋತ ಪುಣ್ಯಾಪುಣ್ಯದ ಫಲ ವ್ರಾತ ಸುಖ ಸುಖವಿತ್ತು ಬರಿದಾಗುವುದು ನಿತ್ಯವಾಗಿ ಸುಖವೆ ಇರಲೆಂದು ಬೇಡಿದರೆ ವ್ಯರ್ಥಧಾವತೆ ಅಲ್ಲದೆ ಸಾರ್ಥಕೆಲ್ಲಿ ಮರುಳೆ 1 ಸೃಷ್ಟಿಯಲಿ ಎಲ್ಲರೂ ನಷ್ಟವಾಗುವರಲ್ಲದೆ ಶ್ರೇಷ್ಠರಾಗಿ ಬಾಳುವರೊಬ್ಬರಿಲ್ಲ ಎಷ್ಟು ಶೋಕಿಸಿದರು ಪೋದ ಕಾಷ್ಠ ಬರಲರಿಯದು ಎ- ಳ್ಳಷ್ಟು ಲಾಭ ಇದರಿಂದ ಇಲ್ಲ ಮರುಳೆ2 ಮುಟ್ಟಿ ಕಟ್ಟಿದ ತಾಳಿಯ ಸಂಬಂಧ ಕೊಟ್ಟ ಹರಿ ತಾ ತಟ್ಟನೆ ಒಯ್ದ ಮೇಲೆ ದುಷ್ಟವೆನ್ನದಲೆ ಇಷ್ಟವೆಂದೆಣಿಸಲು ಸೃಷ್ಟಿಪತಿಯು ತುಷ್ಟನಾಗುವ ಮರುಳೆ 3 ಸರಿಯಲ್ಲಾ ಬರಿದೆ ಚಿಂತಿಸುವುದು ನಿನಗೆ ಕರೆಕರೆಯು ಹೆಚ್ಚುವುದು ಮುಂದೆ ಬಹಳ ಹರಿಕಥೆಯ ಕೇಳು ಹರಿದಾಸರೊಳ್ ಬೀಳು ಹರಿಗೆ ಪೇಳು ನಿನ್ನಯ ಗೋಳು 4 ಇನ್ನಾದರೂ ನೀನು ಹರಿಯ ಸಂಕಲ್ಪವಿದೆಂದು ನಿನ್ನ ಮನದೊಳು ತಿಳಿದುಕೊಂಡು ಘನ್ನ ಮಹಿಮಾ ವಿಜಯ ರಾಮಚಂದ್ರವಿಠಲನ್ನ ಸನ್ನುತಿಸಲು ಮುನ್ನೆ ಹತಿಯಾಗುವುದು ಮರುಳೆ 5
--------------
ವಿಜಯ ರಾಮಚಂದ್ರವಿಠಲ
ಪಾಲಿಸೆನ್ನ ಶ್ರೀಲೋಲ ಕೃಪಾಳು ಪ ಬಾಲಕನುಕ್ತಿಯ ಲಾಲಿಸಿ ಕೇಳೀ ಅ.ಪ ಕಾರಾಗಾರ ಶರೀರದಾಯಗಳ ದಾರಾ[ಧಿ]ಪತ್ಯದ ದಾರಿಯನಿ[ತು]ಗಳ1 ಆರುಮಂದಿ ಬಲುಶೂರರು ಖಳರು ಚೋರರು ಚಿತ್ತವ ಹಾರಿಸುತಿಹರು 2 ತನುಸಂಬಂಧದ ಜನರರ್ಥಿಯಲಿ ಕೊನೆವರು ದುರ್ಮೃಗವನು ಪೋಲುತಲಿ 3 ತಾಪತ್ರಯ ಪರಿತಾಪದ ಬೇಗೆ ಈ ಪರಿಮೋಚನ ಶ್ರೀಪತಿ ಹೇಗೆ 4 ಕರುಣದಿ ಶ್ರೀಪುಲಗಿರಿಯೊಳಿರುವನೆ ಶರಣರಪೊರೆಯುವ ವರದ ವಿಠಲನೆ 5
--------------
ವೆಂಕಟವರದಾರ್ಯರು
ಪಾಲಿಸೊ ಪತಿತಪಾವನ್ನಾ ನಿನ್ನ ಪಾಲಿಗೆ ಬಂದೆ ಮೋಹನ್ನಾ -ಆಹಾ ಪಾಲಾಬ್ಧಿಶಾಯಿ ಗೋಪಾಲರೊಡೆಯಾ ಲೋಕ ಪಾಲಕ ವಿನುತಾ ಗೋಪಾಲ ಫಾಲಾಕ್ಷನೆ ಪ ಬಂದೆನೊ ನಿನ್ನ ಹಂಬಲಿಸಿ ನಾನು ನೊಂದು ಸಂಸ್ಕøತಿಯಲ್ಲಿ ಸೂಸಿ ಈಸಿ ಮುಂದಣ ನೆಲೆಗಾಣೆ ಗುಣಿಸಿ ಏನೇ ನೆಂದು ಪೇಳಲೊ ವಿಸ್ತರಿಸಿ -ಆಹಾ ಮಂದರಧರ ನಿನ್ನ ಮಂದಿರದ ದಾಸಿ ಕಂದನು ನಾನೆಲೊ ಕಣ್ತೆರೆದು ನೋಡೊ 1 ಪೊಂದಿದೆ ಭಾರವವೊಹಿಸು ಪ್ರತಿ ಬಂಧಕವ ಪರಿಹರಿಸು ನಿನ ಗೊಂದಿಸುವೆ ಕೊಡು ಲೇಸು ಅತ್ಯಾ ನಂದದಲ್ಲಿ ಚಿತ್ತವಿಡಿಸು -ಆಹಾ ಇಂದಿರಾ ಮಂದಿರಾ ಸುಂದರ ಯೋಜನ ಗಂಧಿಯ ಬಸುರಿಲಿ ಬಂದ ಭವದೂರಾ 2 ನಿಂದ್ಯ ಕರ್ಮವು ಮಾಡಿದವನ ದೂತ ರಿಂದ ತರಿಸಿದೆ ತ್ರಿಭುವನಾ ಜಯ ವೆಂದು ಕೊಂಡಾಡಲು ಜವನಾ ಭೀತಿ ಯಿಂದ ಮಾಡಿದ ನಿನ್ನ ಸ್ತವನಾ -ಆಹ ಒಂದಾನಂತವಾಗಿ ದ್ವಂದ್ವಪಾಪಗಳಿಗೆ ನಿಂದಿರಬಲ್ಲವೆ ಸಂದರುಶನವಾಗೆ 3 ಕಂದುಕ ಪುಟಿ ಸೂತ ಬಳುಕಿ ದೈತ್ಯ ವೃಂದ ಮೋಹಕವಾಗಿ ಸಿಲುಕಿ ಸುರ ಸಂದೋಹಕೆ ನೀನೆ ಘಳಿಕಿ ನಿಜ ವೆಂದು ಮಾನವರಿಗೆ ಬಳಿಕಿ -ಆಹಾ ಎಂದೆಂದಿಗೆ ಸಿದ್ಧ್ದಾಗಂಧಮಾತುರ ಕಳೆ ಗುಂದದೆ ಮತಿ ಕೊಡು ನಂದಕಾನಂದ ಹಸ್ತನೆ 4 ಹಂದಿ ನಾಯಿ ನರಿ ರಾಸಾ ಜನ್ಮ ಬಂದರೆ ಎನಗದು ಹರುಷಾ ಬಹು ಮುಂದುಂಟು ರಹಸ್ಯಾ ಮನಸಾಪೇಕ್ಷಾ ಸಂದೇಹ ಮಾಡಿಸೊ ಶ್ರೀಶಾ -ಆಹಾ ಯೋನಿ ಸಂದೀದ ಕಾಲಕ್ಕು ಒಂದು ವಿಂಶತಿ ಮತ ಹೊಂದಿಸದಿರು ಹರಿ5 ಅಂಧಃಕಾರದೊಳೆನ್ನ ತಂದೆ ಇದ ರಿಂದ ನಿನಗೇನೊ ಮುಂದೆ ಲಾಭ ಬಂದಾದರೂ ಇಲ್ಲಾ ಇಂದೆ ಸುಖ ಸಾಂದ್ರ ಕಡಿಮೆನೊ ಮುಂದೆ -ಆಹಾ 6 ಇಂದಿರಾವರ ರಾಮ ಶಾಮಾ ರಾಮ ಚಂದ್ರ ಚತುರ ಸಾರ್ವಭೌಮಾ ದಿವ್ಯ ಸಿರಿ ಉರಪ್ರೇಮಾ ಮುಚ ಕುಂದ ಪಾಲಕ ನಿಸ್ಸೀಮಾ -ಆಹಾ ಇಂದ್ರಿಯಂಗಳು ತನು ಸಂಬಂಧದೆಡೆಗೆ ಪೋಪಾ ತೊಂದರೆ ಬಿಡಿಸೊ ಗೋವಿಂದ ಗೋವಳರಾಯಾ 7 ದುಂದುಭಿ ಭೇರಿಯ ರಭಸಾ ಮಹಾ ಬಂಧುರಾ ನೆರೆದ ವಿಶೇಷಾ ಮಂತ್ರಿ ಮಂದಿ ಪರಿವಾರ ಭೂಷಾ -ಆಹಾ ಬಿಂದು ಮಾತುರ ಇವು ಮುಂದಿನೈಶ್ವರ್ಯ ಸಿದ್ಧಾ ಕುಂದಗೊಡದೆ ಬೊಮ್ಮನಂದದಿ ಪಥತೋರಿ8 ಹಿಂದಣ ಬಲವನ್ನು ಕಾಣೆ ನಾನು ಅಂದು ನುಡಿದದ್ದು ಮಾಣೆ ಅನು ಬಂಧಗಳಿಗೆ ಕಾಮಧೇನೆ ಸತ್ಯ ಪತಿ ನೀನೆ -ಆಹಾ ನಂದನ ಮನೋಹಂಸಾ 9 ಸಂದಣೆ ತೊಲಗದೆಂಬಿಯಾ ಆಹಾ ಬಂದರೆ ಬರಲಿ ಎಂಬಿಯಾ ಇದೇ ಸಂದಲಿ ಅನುಗಾಲ ನ್ಯಾಯಾ ಅನು ಸಂಧಾನ ನಿನ್ನಲಿ ಪ್ರೀಯಾ -ಆಹಾ ಇಂಧನದೊಳು ವಾಯು ವ್ಯಾಪಿಸಿದದ ರಂದದಿ ಸರ್ವಾಂಗಾ ನಿಂದಿಹ ನಿರ್ದೋಷಾ 10 ಕಂದರ್ಪ ಕೋಟಿ ಲಾವಣ್ಯ ಅರ ವಿಂದ ನಯನ ಗುಣ ಗಣ್ಯ ದೀನ ಮಂದಾರ ಸತತ ತಾರುಣ್ಯ ಸರಿ ಬಂದಂತೆ ಮಾಡೊ ಕಾರುಣ್ಯ -ಆಹಾ ವಂದೆದೈವವು ನಾನೆಂದ ಮುರಾರಿಯ ಕೊಂದು ಬಿಸುಟಾಧೀರ ನಂದಕುಮಾರಕ11 ಇಂದ್ರಿಯಂಗಳ ಗಾತ್ರಾ ಪ್ರಾಣಾ ಸರ್ವ ಕುಂದಣ ಪುಟದಂತೆ ವರಣಾ ಕಂಬು ಕಂಧರ ಪೊಳಿಯಲಿ ವಚನಾ -ಆಹಾ ಸಂದರ್ಭವಾಗಿ ಏನೆಂದದೆ ಸಚ್ಛಾಸ್ತ್ರ ವೊಂದಿಬರಲಿ ಮುಕುಂದಾ ಮುದ್ದುರಂಗಾ12 ಅಂದಿಗೆ ಪೊಂಗೆಜ್ಜೆ ಮೆರೆಯೆ ತಂದೆ ಯೆಂದು ಕುಣಿಯೊ ಎನ್ನ ಧೊರಿಯೆ ವಾದ್ಯಾ ಧಿಂ ಧಿಂ ಧಿಮಿಕೆಂದು ಮೊರೆಯೆ ಮೇಲೆ ವೃಂದಾರಕ ಪುಷ್ಪಗರಿಯೆ -ಆಹಾ ಇಂದಿನ ಉತ್ಸಾಹ ಇಂದ್ರಾದ್ಯರು ಪೂತು ರೆಂದು ಪೊಗಳೆ ನಗೆಯಿಂದ ನೋಡುವದೆ 13 ಮಧ್ವರಮಣ ಪಾಪಿ ಭಕ್ತಿ ಜ್ಞಾನ ಸದ್ಧರ್ಮ ವೈರಾಗ್ಯಯುಕ್ತಿ ಕೊಡು ಭುಕ್ತಿ ಇತ್ತು ಮುದ್ರಧಾರನಾ ಮಾಡಿ ಮುಕ್ತಿ -ಆಹಾ ನಿರ್ಧಾರಮಾರ್ಗವ ಬದ್ಧದಿ ತೋರಯ್ಯಾ ಪತಿ 14 ಬಂಧೂರ ಕೀರ್ತಿ ಸಂಪನ್ನಾ ಕರಿ ಬಂಧ ವಿಮೋಚನ್ನ ನಾ ರಂದ ವರದ ಸುಪ್ರಸನ್ನಾ ಶತಾ ನಂದ ಕಾನನವಾಸಾ ಘನ್ನಾ -ಆಹಾ ಸಿಂಧುಜನಕನೆ ಪರಂಧಾಮತ್ರಯ ಸತ್ಯ ಸಂಧ ವಿಜಯವಿಠ್ಠಲೆಂದು ವದನ ಎನ್ನಾ15
--------------
ವಿಜಯದಾಸ