ಒಟ್ಟು 57 ಕಡೆಗಳಲ್ಲಿ , 26 ದಾಸರು , 52 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾಮೃತವ ಸಿರದಿ ಸುರಿಯೊ ವರದ ಧನ್ವಂತರಿಯೆ ಚರಣಯುಗಳ ಕಮಲವನ್ನು ಕರುಣಿಸೆನಗೆ ದೊರೆಯೆ ಪ. ಶ್ರವಣ ನಯನ ಚಿತ್ತ ಜಿಹ್ವೆಗನುಕೂಲವಾಗಿರುವ ಲೀಲಾ ಪ್ರವರ ಕಾಂತಿ ಸ್ಮರಣ ನಾಮಗಳನು ಪಾಲಿಸಿ ಭವಜನೀತ ಭ್ರಮಣ ನಿಲಿಸಿ ಕುವರನಂತೆ ರಕ್ಷಿಸೆನ್ನ ಕವಿಭಿರೀಡ್ಯ ಕಂಜಜಾತಶಿವರ ಸೌಖ್ಯಗೊಳಿಸದವನೆ 1 ಕಲಿಕೃತ ಕಲ್ಮಶಗಳಿಂದ ಬಳಲುವಂಥ ಬಾಧೆಯನ್ನು ನಿಲಿಸಿಕೊಳ್ಳಲು ಅನ್ಯಮಾರ್ಗಂಗಳನು ಕಾಣೆನು ನಳಿನನಾಭ ನಿನ್ನ ಪಾದಗಳನೆ ನಂಬಿಕೊಂಡಿರುವೆನು ಬಲಿಯ ಕಾಯ್ವ ಭೂಮಿಜೇಶ ಘಳಿರನೆ ಬಂದೊದಗಿ ಬೇಗ 2 ನಿಖಿಳ ಭೋಗಗಳನನುಭವಿಸುತ ಶ್ರೀಗುರು ಮಧ್ವಾಂತರಾತ್ಮ ನಾಗಗಿರಿನಾಥ ರಾಗ ರೋಗ ದೋಷಗಳನು ನೀಗಿ ನಿನ್ನ ನಂಬಿ ಸ್ತುತಿಪ ಭಾಗವತರ ಭಕ್ತನೆನಿಪ ಭಾಗ್ಯವಿರಿಸೋ ಭೀಮವರದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಲ ಬಂದಿತೋ ಬಂದ ಭವದೊಳು ಚಿಂತೆಯೊಳಗೆ ದಿನ ಸಂದಿತು ಪ ತುಪ್ಪ ಪಣಕೆ ಸೇರು ಉಪ್ಪೆಂಟು ಸಿದ್ದೆಯು ಮುಪ್ಪಾಗ ಕೊಂದೆ ಕೊಳಗಬತ್ತ ಸೊಪ್ಪ ಪಣಕೆ ಮಾರುವುದು ಅಚ್ಚೇರು 1 ವ್ಯಾಪಾರ ಸಾಪಾರ ತುಟ್ಟಿಸಿದರು ಕೊಳ್ಳ ಲಾಪರೆ ಫಣವೊಂದೆ ಕಟ್ಟಿಲ್ಲ ರೂಪಾಯಿ ಕೊಡೆ ಪುಲಿಚರಮ ಪಾಪವು ಸುಲತಾಗಿ ಪಣವ ಕೊಡೆಂಬರು 2 ದುಡ್ಡು ಕೊಡಲು ಬೇಡ ಬೈಯುತ ಆನೆ ಗೂಡಿನ (ಆನೆಗೊಂದಿ) ದುಡ್ಡತಾರೆಂಬರು ದೊಡ್ಡ ಮೊಳೆ ಪಣವಿದು ಸಣ್ಣ ಮೊಳೆಯಿಂಗಿ ? ಹೆಡ್ಡ ಹೋಗೆಂದದ್ದ ಬಿಸುಟರು ಫಣವ 3 ತಪ್ಪಿ ಹೇಳುವೆನೆ ನಮ್ಮಪ್ಪ ದುರ್ಭಿಕ್ಷವು ಎಪ್ಪತ್ತು ವರುಷ ಕೊದಗಿ ಬಂತು ಇಪ್ಪತ್ತು ವರುಷಕೀಕಾಲ ಬಂದಿದ್ದರೆ ಕನಿಷ್ಟಕ್ಕೆ ಗಣಿಸಿ ಸುಕ್ಷಾಮವ ಮರೆವೆನು 4 ಧಾರಣೆ ಪಾರಣೆ ಶಿವರಾತ್ರಿ ಹರಿದಿನ ಓರಂತೆ ಬಡವಗೆ ನೆಲೆಯಾಯಿತು ಕ್ಷೀರಾಬ್ದಿ ಶಯನ ಲಕ್ಷ್ಮೀನಾರಾಯಣನು ತನ್ನ ಸೇರಿದ ಜನರ ಕಣ್ಣಲಿ ನೋಡುತೊಲಿದ 5
--------------
ಕವಿ ಪರಮದೇವದಾಸರು
ಕಾಲು ತೊಳೆದವನೊಬ್ಬ ತೊಳೆಸಿಕೊಂಡವನೊಬ್ಬ ಮೌಳಿ ಮೇಲಾಜಲವ ಸತತ ಧರಿಸಿದನೊಬ್ಬ ಪಾಲಿಸುವ ಪ್ರಭುವೊಬ್ಬ ಕೊಲುವ ತಳವಾರನೊಬ್ಬ ಮೂರ್ಲೋಕವರಿಯೆ ಪುಟ್ಟಿಸಿದ ಪಿತನೊಬ್ಬ ಆಲೋಚನೆಯ ಬಲ್ಲವಗೆ ಸಂಶಯ ಸಲ್ಲ ಮಾಲೆಯನು ಮಹಲಕ್ಷುಮಿ ಹಯವದನಗಿತ್ತಳಾಗಿ 1 ರಾವಣನ ಕೊಂದ ಪಾಪವ ಕಳೆಯಬೇಕೆಂದು ದೇವ ರಘುಪತಿ ಸದಾಶಿವನ ಪೂಜಿಸಿದ ಗಡಾ ಆ ವಿಧಿಯ ಒಂದು ತಲೆಯನು ಕಡಿದ ಮಾತ್ರದಿಂದ ಆವಾಗ ಕರದಲ್ಲಿ ಇಹ ಕಪಾಲವ ಕಾಣನೆ ದಾವಘದೊಳು ಪೊರಳುವನ ದಾವಾತ ಭಜಿಸುವನು ಜೀವರಿಗೆ ಉಳ್ಳಷ್ಟು ವಿವೇಕ ಹಯವದನಗಿಲ್ಲವೆ 2 ರಾಮಾಯಣದ ಕತೆಯು ಮಹಾಪುಣ್ಯ ಕಥೆಯು ಗಡಾ ರಾಮ ರಾವಣನ ಕೊಂದದ್ದು ಮಹಾಪಾಪ ಗಡಾ ಆ ಮನುಮುನಿಗಳೆಲ್ಲ ಪಾಪಕಂಗೀಕರಿಸಿದರೆ ಸ್ವಾಮಿಯು ಲಯದಿ ಬೊಮ್ಮನ ಮೊದಲು ಕೊಲಿಸದೆ ಧೀಮಂತ ಹಯವದನ ಕೊಂದ ಹಿರಣ್ಯಕ ಮುಖ್ಯ ತಾಮಸ ದಿತಿಜರು ಕಶ್ಯಪ ಋಷಿ ಸುತರಲ್ಲವೆ3 ಶ್ರುತಿಯಿವ ಕರ್ಮಣಾನೋಕನೀಯ ಎಂದು ತುತಿಸುತಿರೆ ನಿಮ್ಮ ನಿರ್ಗುಣ ಬೊಮ್ಮಗೆ ಕರ್ಮವುಂಟೆ ಕ್ಷಿತಿಯೊಳಗೆ ರಾವಣನ ವಧೆಯ ಮಾಡಿದ ಸೇತುಪತಿಯ ಪಾವನನೆನಲು ಅವನ ಕೊಂದವನ ಪತಿತಪಾವನನೆಂಬುದೆ ಕುಚಿತ್ತಯುಕುತಿಯು ಸತತ ಹಯವದನನೊಬ್ಬನೆ ಶುದ್ಧ ಕಾಣಿರೊ 4 ಒಂದು ಕಡೆಯಲಿ ವಿಭೀಷಣನ ಪ್ರತಿಷ್ಠಿಸಿದನು ಮ- ತ್ತೊಂದು ಕಡೆಯಲಿ ಸದಾಶಿವನ ಪೂಜಿಸಿದ ಇಂ- ತೆಂದು ಪುರಾಣಗಳು ಕೂಗುತಿವೆ ತ್ರಾಸಿನೊಳು ಹೊಂದಿಸಿ ಸಮನೆಂದು ತೂಗಿ ತೋರು ಮದದಲಿ ಸಂದೇಹ ಸಲ್ಲ ಹಯವದನ ರಘುಪತಿಗಿಬ್ಬರು ಸಂದ ಭಕುತರೆಂಬುದು ಸಲೆ ಸುಪ್ರಸಿದ್ಧ 5 ಸೇತುವೆಯ ಕಂಡ ನರರಿಗೆ ಬ್ರಹ್ಮಹತ್ಯಾದಿ ಪಾತಕವು ಬಿಡುವುದೆಂಬ ಶ್ರುತಿಯ ಮನ್ನಿಸಲು ಖ್ಯಾತ ಬೊಮ್ಮನ ತಲೆಯ ಕಡಿಯೆ ಕರದಲಿಕೊಟ್ಟ ತಾ- ಸುಕೃತ ಸೇತುಮುಖದಿಂದ ಸೀತೆಯರಸನು ಶಿವನ ನಿಲ್ಲಿಸಿ ಪ್ರತಿಷ್ಠಾಪಿಸಿದ ಜಗನ್ನಾಥ ಹಯವದನ ಭಕ್ತರಬಂಧು ಕಾಣಿರೊ 6 ರಾಮ ಶ್ರೀರಾಮರಾಮೇತಿ ರಮೆಯೆಂಬ ಆ ಮಹಾದೇವ ಭಗವದ್ಭಕ್ತನಲ್ಲವೆ ಸ್ವಾಮಿ ತನ್ನ ಭಕ್ತರÀನು ಪ್ರತಿಷ್ಠಿಸಿದ ನಿ- ಸ್ಸೀಮ ಕರುಣಾಂಬುಧಿ ಮಹಾಮಹಿಮನೆಂಬರು ಭ್ರಾಮಕದ ನುಡಿಗೆ ಮರುಳಾಗದಿರು ಹಯವದನ ರಾಮಚಂದ್ರನೆ ಕಾಶಿಯ ತಾರಕಬೊಮ್ಮ ಕಾಣಿರೊ 7 ಕಾಶಿಯಲಿ ರಾಮಮಂತ್ರೋಪದೇಶವ ಮಾಳ್ಪ ಈಶ ಜಾಣರ ಮತದಿ ಜಗಕೆ ಗುರುವೆಂತೆಂಬ ಆ ಶಿವನ ಮಂತ್ರದೇವತೆ ತಾರಕಬೊಮ್ಮಯೆನಿಪ ವಾಸುದೇವನೆ ಜಗಕೆ ಪರದೈವ ಕಾಣಿರೊ ಈ ಸುತತ್ವÀವ ಪೇಳ್ವ ಹರಗೆ ನಮ್ಮ ಹಯವದನ ಏಸುಮನ್ನಣೆ ಮಾಡಿದರುಚಿತ ಕಾಣಿರೊ 8 ಕರವ ಶಿರದ ಮೇಲೆ ಇರಿಸಬಂದ ಖಳಗಂಜಿ ಹರ ಸಕಲ ಸುರೇಶ್ವರರ ಅರಮನೆಗಳಿಗೆ ಪೋಗಿ ಪರಿಹರವ ಕಾಣದೆ ನಮ್ಮ ಸಿರಿವರನ ಮರೆಹೊಗಲು ಪÀರಿಣಾಮವನು ಪೊರೆದ ಗಡಾ ಶರಣರಕ್ಷಕನೆಂಬ ಬಿರುದುಳ್ಳ ಹಯವದನ ಹರಿಯಲ್ಲದೆ ಪಿರಿದೊಂದು ಪರದೈವವಿಲ್ಲವಯ್ಯ 9 ರೋಮಕೋಟಿಲಿಂಗನೆನಿಸಿದ ಹನುಮನೊಂದು ರೋಮಕೆ ಕೋಟಿ ಶಿವರ ಮಾಡುವ ಶಕ್ತ ಕಾಣಿರೊ ಆ ಮಹಾತ್ಮನ ತನ್ನ ಆಳುಮಾಡಿ ನಡೆಸಿಕೊಂಡ ರಾಮಚಂದ್ರನೆ ಜಗಕ್ಕೆ ಪರದೈವ ಕಾಣಿರೊ ಸ್ವಾಮಿ ಹಯವದನ ವೇದವ ತಂದು ಕಮಲಜನ ಕಾಮಿತವನಿತ್ತನಾಗಿ ಅವನೆ ಜಗದೊಡೆಯ 10 ನೂರು ರುದ್ರರು ಪೇಳೆ ಕಾರ್ಯವಾದರೇನವರು ಈರೇಳು ಜಗವ ಸಂಹರಿಸಲರಿಯರು ಗಡಾ ಕಾರ್ಯವಿಲ್ಲದ ಶಿವರ ಪೇಳಲದ್ವೈತಮತ ಹಾರಿಹೋಗದೆ ಬರಿದೆ ಹಲವು ಹಂಬಲಿಸದೆ ಶ್ರೀರಮಣ ಹಯವದನನೊಡಂಬಟ್ಟನಿ ಬರನು ದೂರ ಕಳಚಿದನೆಂದು ಪೂರ್ವದವರನೆ ನಂಬು 11 ಯಾತ್ರೆಯ ಮಾಡಿಸಿಕೊಂಡು ಹರ ಹಿರಿಯ ತಾನಾಗಿ ಯುಕ್ತಿ ಬಾಧಕವಾಯಿತ್ತು ಹರಿಹರರೊಳೈಕ್ಯ ಚಿತ್ರ ನಿನ್ನ ಮತಕೆ ನೀನೆ ಶತ್ರುವಾದೆ ಪ್ರತ್ಯುತ್ತರವ ಪೇಳೆ ಪರಾಜಯ ಬಾರದಿಹುದೆ ಮತ್ತೆ ನೆನೆಯೊ ಶ್ರೀಹಯವದನಗಿದು ಲೀಲೆಯಾದರೆ ಸತ್ವ ಹೆಚ್ಚಿತು ಸರ್ವೋತ್ತಮನೆಂಬ ಶ್ರುತಿಗೆ 12 ವಂದ್ಯಮಾನಂ ಪಿತಾನಾಂ ಪ್ರತಿ ಪ್ರಮಾಣಂ ಎಂದು ರುದ್ರನ ಕೂಡೆ ಶ್ರುತಿ ಪೇಳಿತಾಗಿ ತಂದೆ ಮಕ್ಕಳ ಮನೆಗೆ ಪೋದಂತೆ ಪೋಗಿ ಮು- ಕುಂದ ಮೊಮ್ಮಗನಿಗೆ ಹಿರಿತನವ ಕೊಡಲೆಂದು ಮುಂದೆ ಜನಿಸುವ ಕಿರಿಯ ಕುವರರೊಳು ತನ್ನ ಕಂದನ ಸೃಜಿಸಿದ ಹಯವದನ ಚತುರನಲ್ಲವೆ 13 ಸುರರು ದ್ವಾರಕಾಪುರ ಯಾತ್ರೆಯಲಿ ಪಾಲಸಾಗರಯಾತ್ರೆ ಗರ್ಭಯಾತ್ರೆ ಕಳೆಯೆ ಶೂಲಧರ ಖಳಗಂಜಿ ಭುವನವೆಲ್ಲವ ಸುತ್ತಿ ಶ್ರೀ- ಲೋಲನಿಹ ವೈಕುಂಠಯಾತ್ರೆಯಿಂದ ಬದುಕನೆ ಭೂಲೋಕದಲಿ ಪುಟ್ಟಿ ಹಯವದನ ಕೃಷ್ಣ ಮಾಡಿದ ಕೈಲಾಸಯಾತ್ರೆ ಕೈವಲ್ಯಪತಿಗೆ ಲೀಲೆ 14 ಹರನಾರು ಪುರಾಣಗಳು ವಿರಿಂಚನಾರು ಪುರಾಣಗಳು ಹರ ವಿರಿಂಚರವಲ್ಲವೆಂದು ಹಿರಿಯರೆ ಮನ್ನಿಸಲಾಗಿ ಪರಮ ಸಿದ್ಧಾಂತಕೋವಿದರೆನಿಪ ಬುಧರಿಗೆ ಪುರಾಣಗಳ ಮ್ಯಾಲೆ ಮಾಡುವ ಪರಮಾದÀರ ಸಲ್ಲದಯ್ಯ ದುರಾಗ್ರಹವ ಮಾಡಬ್ಯಾಡ ಗುರುಮತವ ಬಿಡಬ್ಯಾಡ ಸಿರಿ ಹಯವದನನಾರುಪುರಾಣಗಳ ನೋಡಿರೊ 15 ಒಂದು ಬೊಮ್ಮಚಿತ್ತು ಒಂದು ಜೀವಚಿತ್ತು ಇಂ- ತೆಂದು ಶ್ರುತಿಸ್ಕಂಧÀ ಚೇತವೆಲ್ಲ ಗ್ರಂಥ[ಆ]ಸ್ಯ ದಿಂದ [ಒರೆಯೆ] ಹರಿಜಡನೋ ಹರಜಡನೋ ಮಂದಹಾಸದಿಂದ ಜಡರು ಮನುಮುನಿಗಳೆಲ್ಲ ಇಂಥ ಶಿವನ ವಹಿಸಿಕೊಂಡು ವಾದಿಸುವರು ಹಿಂದು ಮುಂದರಿಯರೆಂದು ಹಯವದನ ನಗನೆ 16 ಯಂ ಬ್ರಹ್ಮವೇದಾಹಂ ಬ್ರಹ್ಮ ವೇದಶ್ರುತಿಶಬ್ದ ಬ್ರಹ್ಮ- ವೆಂಬ ವೇದ ಬೋಧಿಸಿತಾಗಿ ಇಂಥ ಮನುಜರಿಗೆಲ್ಲ ಭಾವಾಭಾವ ಪೇಳ್ವ ಹೊಂದಿಬದುಕು ಹಯವದನನ ಚರಣವ ಹೊಂದಿಬದುಕೊ ಜೀವ ಹರಿಯೆ ನಾನೆನ್ನಬ್ಯಾಡ 17
--------------
ವಾದಿರಾಜ
ಕಾವೇರಿ ಕಲುಪಾಪಹಾರಿ ಪಾವನ ಶರೀರೆ ಶುಭತೋಷಕಾರಿ ಪ ವಾಸುದೇವ ರಂಗೇಶನಾಲಯಕೆ ನೀ ನಾವರಣಳಾಗಿಪ್ಪೆ ವಿರಜೆಯಂತೇ ದೇವ ಋಷಿ ಗಂಧರ್ವ ಪಿತೃಪ ನರವರರಿಂದ ಸೇವನೀಯಳಾಗಿ ಸರ್ವಾರ್ಥ ಪೂರೈಪೆ 1 ಜಲಚರಾನ್ವೇಷಣ ಲುಬ್ಧ ಸಾಲಿಗ್ರಾಮ ತುಲಸಿ ವೃಕ್ಷವನೆ ಕೊಡಿಸಿದ ಮಾತ್ರದೀ ಕಲುಷರಾಶಿಗಳೆಲ್ಲ ಕಳೆದು ಮುಕ್ತಿಯನಿತ್ತೆ ಸಲಿಲಮಂದಿರೆ ನಿನ್ನ ಕರುಣಕೇನೆಂಬೆ 2 ರವಿ ತುಲಾರಾಶಿಗೈದಿದ ಸಮಯದೊಳಗೊಂದು ಮಜ್ಜನ ಗೈವ ಮಾನವರಿಗೆ ಪವನಾಂತರಾತ್ಮಕನ ಪಾದಕಮಲವ ತೋರಿ ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ 3 ಶ್ರೀ ಪವನ ಶಿವರಿಂದ ತಾ ಪೂಜೆಗೊಳುತ ಬಹು ಪರ ಮನು ವ್ಯಾಪಿಸಿಹ ನಿನ್ನೊಳದ್ಯಾಪಿ ಸ್ವರ್ಗಸ್ಥ ಜನ ರೀ ಪೊಡವಿಯೊಳು ತವ ಸಮೀಪದಲಿ ಜನಿಸುವರು 4 ಮೂಢಮತಿ ನಾನು ಕೊಂಡಾಡ ಬಲ್ಲೆನೆ ನಿನ್ನ ಬೇಡಿಕೊಂಡೆನು ಹೃದಯ ನೀಡದೊಳಗೇ ಗೂಡ ಪದ ಶಯನ ಜಗನ್ನಾಥ ವಿಠ್ಠಲನಂಘ್ರಿ ನೋಡುವ ಸೌಭಾಗ್ಯ ದಯ ಮಾಡು ಪ್ರತಿದಿನದಲ್ಲಿ ಬ 5
--------------
ಜಗನ್ನಾಥದಾಸರು
ಕೋಲೋ ಕೋಲೆನ್ನ ಕೋಲೆ ಕೋಲು ಮುತ್ತಿನ ಕೋಲುಶ್ರೀ ಗುರು ನಿನ್ನ ಬಲಗೊಂಬೆ ಕೋಲ ಪ ಪಾದ ಏಕಚಿತ್ತಾದಲ್ಲಿ ಬಲಗೊಂಬೆ ಕೋಲಅ.ಪ. ಪಾದ ಭೃಂಗಾನೆಂದೆಸುತಾ ಪಂಚರೂಪಾದಿ ಮೆರೆವೋನು ಕೋಲಪಂಚರೂಪಾದಿ ಮೆರೆವೋನು ಭಾವೀಪಂಚಪ್ರಾಣಾನಾ ಬಲಗೊಂಬೆ ಕೋಲ 1 ಮಂದಜಾಸನ ಪದ ಪೊಂದುವನಾಕಂಡವಾದೀರಾಜಾಖ್ಯನ ಬಲಗೊಂಬೆ ಕೋಲವಾದೀರಾಜಾಖ್ಯನ ಭೂತಾ ಪತಿಯೆಂದು ಆರ್ಯನ್ನ ಮೊದಲೇ ಬಲಗೊಂಬೆ ಕೋಲ 2 ಕಂದುಕಂಠನ ಕೊರಳಿಗ್ಹಾರ ಪದಕವ ಹಾಕಿ ಪರಿಪರಿಯಿಂದ ಮೆರೆಸೋಣ ಕೋಲ ಪರಿಪರಿಯಿಂದ ಹಾರ ಪದಕವ ಹಾಕಿ ಧೀರನ್ನ ಮೊದಲೇ ಬಲಗೊಂಬೆ ಕೋಲ 3 ಕೆಂಡಗಂಣನ ಕಂಡು ರುಂಡ ಹಾರವ ಹಾಕಿ ಪರಿಪರಿಯಿಂದಾ ಭಜಿಸೋಣ ಕೋಲಪರಿಪರಿಯಿಂದಾ ರುಂಡಹಾರವ ಹಾಕಿ ಮಂಡೇ ನದೀ ಧರನ ಬಲಗೊಂಬೆ ಕೋಲ 4 ಅಮರೇಂದ್ರ ಲೋಕದಿ ಶಿವರಾಜ ಧೊರಿಗೆ ಪರಿಪರಿಯಿಂದ ಸೇವಿಪರು ಕೋಲಪರಿಪರಿಯಿಂದ ಸೇವೆಯಾಗೊಂಬಂಥ ವಾದಿರಾಜರ ದಾಸ ವಾದಿರಾಜಾಖ್ಯನ ಬಲಗೊಂಬೆ ಕೋಲ 5 ಚಾರು ಚರಣವ ಬಲಗೊಂಬೆಕೋಲ 6 ಮೂರು ಮಂದಿ ಮಧ್ಯೆ ಮಾತಾಡುತಿಪ್ಪದಿಟ್ಟತನದಿ ತಂದೆವರದಗೋಪಾಲವಿಠ್ಠಲನದಿಟ್ಟಾತನದಿ ಬಲಗೊಂಬೆ ಕೋಲ 7
--------------
ತಂದೆವರದಗೋಪಾಲವಿಠಲರು
ಗಣೇಶ ಪ್ರಾರ್ಥನೆ ಗಜವದನಾ ಗಣೇಶಾ ಪ ನೀ ಮೊದಲು ಸಕಲ ವಿಘ್ನಗಳ ಕಳಿಯೊ ಅ.ಪ ಗಿರಿಜಾಮಲ ಸಂಭೂತ ನಮೋ ನಮೋ ಹರಿಬ್ರಹ್ಮ ಶಿವರಿಗತಿ ಪ್ರಿಯನೆ 1 ಕಂಬುಕಂಠ ಶುಕ್ಲಾಂಬರಧರ 2 ಸ್ಮರಿಸುವ ಸುಜನರಿಗೆ ಅಭಯವ ಕೊಡು ನೀ 3
--------------
ಗುರುರಾಮವಿಠಲ
ಗುರುವೇ ಸುರತರುವೇ ಹರಿಭಕ್ತಾಗ್ರೇಸರ ವಿಜಯರಾಯ ಪ ಪುರಂದರದಾಸರ ಕರುಣಕೆ ಪಾತ್ರನೆ ಮರುತ ಮತಾಬ್ಧಿಗೆ ಚಂದ್ರ ವಿಜಯರಾಯ ಅ.ಪ ವಿಷ್ಣು ಬ್ರಹ್ಮ ಶಿವರನುಪರೀಕ್ಷಿಸುತು ತ್ಕøಷ್ಟ ಹರಿಯೆನುತ ಶಿಷ್ಟರಿಗರುಹಿದ 1 ಜನುಮ ಜನುಮದಿಂದನುಸರಿಸುತಿಹ ಘನದುರಿತವ ದರುಶನ ಮಾತ್ರ ಕಳೆವ2 ಗುರುರಾಮ ವಿಠಲನ ಚರಣವ ತೋರಿಸು 3
--------------
ಗುರುರಾಮವಿಠಲ
ಜ್ಞಾನಾಮೃತ ಭುಜಿಸು ಜೀವ ಮಾನವಜನುಮದ ಗುರಿಯಿದು ಪ ಶುದ್ಧಮನದ ಪಾತ್ರೆಯಲ್ಲಿ ಸದ್ಗುರುವಿನ ಬೋಧದನ್ನ ಶುದ್ಧ ಚೈತನ್ಯಾತ್ಮ ನೀನೆ ಬದ್ಧಜೀವನಲ್ಲವೆಂಬ 1 ಶಿವರೂಪನು ಸಚ್ಚಿದಾತ್ಮ ಭವಬಂಧನವೆನ್ನೊಳಿಲ್ಲ ಆವಿನಾಶಿಯೆ ನಾನು ಎಂಬ ಸುವಿಚಾರದ ಬಾಯಿಯಿಂದ 2 ಸದ್ ರೂಪದ ಆರೋಗ್ಯ ಚಿದ್ ರೂಪದ ಪರಮ ಭಾಗ್ಯ ಆನಂದದ ನಿಧಿಯಾಗುವಿ ಬೋಧ 3
--------------
ಶಂಕರಭಟ್ಟ ಅಗ್ನಿಹೋತ್ರಿ
ತನ್ನ ತಾನು ಕಂಡರೆ ಜೀವಶಿವರೆಂಬ ಭೇದವೆಲ್ಲಿಹುದೋ ಪ ಶ್ರವಣ ಮನನ ನಿದಿಧ್ಯಾಸವು ಬಲಿದರೆ | ಭುವನದ ಜನಪದ ಪುಸಿಯಹುದೊ 1 ರೂಪನಾಮಕ್ರಿಯಾ ವರ್ಣಗಳು | ಕಾಯದಿ ತೋರಲು ನಿಜವಲ್ಲಾ 2 `ತತ್ತ್ವಮಸಿ’ ಮಹಾ ವಾಕ್ಯವು ಬಂದರೆ | ಮಿಥ್ಯೆಗಳೆಲ್ಲಾ ನೀಗುವವು 3 ಆಗಮದಲಿ ಶಿವಯೋಗವ ಮಾಡಲು | ಈಗಲೆ ಜೀವನ್ಮುಕುತಿಯು ಸಿಗುವದೊ 4 ಭವತಾರಕನ ಕರುಣವ ಪಡೆದರೆ | ಜನನ ಮರಣ ಭಯ ಹಿಂಗುವದೊ 5
--------------
ಭಾವತರಕರು
ತುತಿಸಬಲ್ಲೆನೆ ನಾ ನಿನ್ನೆ ವೆಂಕಟರನ್ನ ಪ ಪತಿ ನಿನ್ನ ಬ್ರಹ್ಮ ಪಾ ರ್ವತಿ ಪತ್ಯಾದ್ಯಳವಡದುತುಳ ಮಹಿಮೆಗಳ ಅ.ಪ. ನಮಿಪ ಜನರ ಕಲ್ಪದ್ರುಮ ದುಷ್ಟದಾನವ ದಮನ ದಿವಿಜಕುಲೋತ್ತಮ ಲಕ್ಷ್ಮೀ ಪವನಾದಿ ಸುಮನಸಾರ್ಚಿತ ಪಾದಕಮಲ ಯುಗ್ಮನೆ ಅನು ಕಾಯ ಹೃ ತ್ತಿಮಿರ ಭಾಸ್ಕರ ಶ್ರೀ ಭೂರಮಣ ಸರ್ವಗ ಸದಾ ಗಮವೇದ್ಯ ವೇದವ್ಯಾಸ ಕಪಿಲ ದತ್ತ ಕುಮುದಾಪ್ತ ಕೋಟಿ ಭಾಸಾ ತದ್ಭಕ್ತರ ಸಮುದಾಯಕೀಯೋ ಲೇಸಾ ಆನತ ಬಂಧು ಸುಮುಖ ಸುಲಭನೆಂದಾ ನಮಿಪೆ ಎನ್ನರಸಾ 1 ಘನಮಹಿಮನೆ ವೃಂದಾವನವಾಸಿ ಸ್ವಪ್ರಯೋ ಜನವಿವರ್ಜಿತ ಗೋವರ್ಧನಧಾರಿ ಗೋ ಗೋಪೀ ಜನ ಮನೋರಂಜನ ಜನಕಜಾರಮಣ ಪೂ ತನಿ ಪ್ರಾಣಾಂತಕ ವೇದವಿನುತ ಶ್ರೀ ವತ್ಸಲಾಂ ಕೌಸ್ತುಭ ಮಣಿ ವೈಜಯಂತೀ ಸ ದ್ವನ ಮಾಲಾಂಚಿತ ಕಂಧರಾ ಸತ್ಕಲ್ಯಾಣ ಗುಣ ಜ್ಞಾನಾತ್ಮಕ ಶರೀರಾ ಸಂತತ ನಿಷ್ಕಿಂ ಚನ ಭಕ್ತಜನಮಂದಾರಾ ವಂದಿಸುವೆ ಮ ನ್ಮನದಲಿ ನಿಲಿಸೋ ಕರುಣಾ ಪಾರಾವಾರಾ 2 ಕವಿಭಿರೀಡಿತ ಪುಣ್ಯ ಶ್ರವಣ ಕೀರ್ತನ ಮತ್ಸ್ಯಾ ದ್ಯವತಾರಂತರ್ಯಾಮಿ ಪ್ರವಿವಿಕ್ತ ಭುಗ್ವಿಭು ಭುವನ ನಿಧಿಯ ಪೆತ್ತ ಸವನ ತ್ರಯಾಹ್ವಯ ಶಿವರೂಪಿ ಶಿವದ ಭೂರ್ಭೂವಸ್ವಸ್ಥ ಸ್ವಶ ಭಾ ರ್ಗವ ನಿನ್ನೊಳಿಪ್ಪ ದಾನವನ ಸಂಹರಿಸುವ ನೆವದಿಂದ ದಾಶರಥೀ ಸಂಗಡ ಯುದ್ಧ ತವಕದಿ ಮಾಡಿ ಭೀತಿ ಬಟ್ಟವನಂತೆ ಅವನಿಗೆ ತೋರ್ದ ರೀತಿ ವರ್ಣಿಸಲಿನ್ನು ಪವನಮುಖಾದ್ಯರಿಗವಶ ನಿನ್ನಯ ಖ್ಯಾತಿ3 ಗತಶೋಕ ಗಾಯಿತ್ರಿ ಪ್ರತಿಪಾದ್ಯ ತತ್ವಾಧಿ ಪತಿಗಳೆನಿಸುವ ದೇವತೆಗಳೊಳಗಿದ್ದು ಮಾ ರುತನಿಂದ ಒಡಗೂಡಿ ಪ್ರತಿದೇಹಗಳಲಿ ಯೋ ಗ್ಯತೆಯನರಿತು ಕರ್ಮಗತಿಗಳನೀವೆ ಸಾಂ ಪ್ರತ ಬೇಡಿಕೊಂಬೆ ಆನತರ ಸಂತೈಸೆಂದು ಪ್ರಥಮಾಂಗ ಪ್ರಿಯ ಸತ್ತಮ ಸೌಭಾಗ್ಯ ಸಂ ಭೃತಸಾರ ಸರ್ವೋತ್ತಮ ನೀನೆ ಪಾಂಡು ಸುತರಾದ ಧರ್ಮ ಭೀಮಾ ಪಾರ್ಥರ ಕಾಯ್ದೆ ಪ್ರತಿಗಾಣೆ ನಿನಗೆ ಸಂತತ ಪರಂಧಾಮಾ 4 ಕಲಿ ಮುಖ್ಯ ದೈತ್ಯ ಗಂಟಲಗಾಣ ಗುರುತಮ ಬಲಿಬಂಧಮೋಚಕ ಸುಲಭ ಚೆತ್ಸುಖದಾಯಿ ಫಲ ಚತುಷ್ಟಯನಾಮ ಫಲಸಾರ ಭೋಕ್ತø ಶಂ ಬಲನಾಗಿ ಭಕತರ ಸಲಹುವ ಕರುಣಿ ಶಂ ಫಲಿಪುರವಾಸಿ ಬಾಂಬೊಳೆಯ ಜನಕ ಲಕ್ಷ್ಮೀ ನಿಲಯ ನಿರ್ಗತ ದುರಿತಾ ಮನ್ಮನದ ಚಂ ಚಲವ ಬಿಡಿಸೋ ನಿರುತಾ ಬೇಡಿಕೊಂಬೆ ತಲೆ ಬಾಗಿ ಸರ್ವಗತಾ ನೀನಹುದೆಂದು ತಿಳಿಸೋ ತೀವ್ರದಿ ಮುಪ್ಪೊಳಲುರಿಗನ ತಾತಾ 5 ಉದಿತ ಭಾಸ್ಕರನಂತೆ ಸುದತೇರಿಂದೊಡಗೂಡಿ ಉದರ ನಾಮಕ ನೀನು ಉದರದೊಳಿದ್ದೆನ್ನ ಉದಕಗಳಿಗೆ ನಿತ್ಯಾಸ್ಪದನಾಗಿ ಜೀವರ ಹೃದಯದೊಳಿರುತಿಪ್ಪೆ ಸದಸದ್ವಿಲಕ್ಷಣಾ ವಿಧಿಭವ ಶಕ್ರಾದಿ ತ್ರ್ರಿದಶರೊಂದಿತ ಪಾದ ಬದಿಗನಾಗಿರಲು ಪಾಪ ಕರ್ಮಗಳು ಬಂ ದೊದಗುವುವೇನೋ ಶ್ರೀ ಪಾ ಬಿನ್ನೈಸುವೆ ಬುಧ ಜನರಂತಸ್ತಾಪಾ ಕಳೆದು ನಿತ್ಯ ಬೆದರದಂದದಲಿ ಮಾಳ್ಪುದು ದೋಷ ನಿರ್ಲೇಪಾ 6 ಪಣಿಗಣ್ಣ ಸ್ವರದಿಂದಾಗ್ರಣಿಯಾದ ದುಷ್ಟ ರಾ ವಣನ ಬಾಹುಬಲ ಗಣಿಸಿದೆ ನಿಶಿತ ಮಾ ರ್ಗಣದಿ ಸದೆದು ವಿಭೀಷಣಗೆ ನೀ ಲಂಕಾಪ ಟ್ಟಣ ಭೋಗ ತತ್ಕಾಲ ಉಣಲಿತ್ತು ಭಕ್ತಗೆ ಪ್ರಣತ ಕಾಮದನೆಂಬೋ ಗುಣ ನಿನ್ನಲ್ಲಿದ್ದ ಕಾ ರÀಣದಿ ಪ್ರಾರ್ಥಿಸುವೆ ನಿನ್ನಾ ದಾಸರೊಳು ಗಣಿಸು ನೀ ದಯದಿ ಎನ್ನಾ ತಪ್ಪುಗಳ ನೀ ನೆಣಿಸಲಾಗದು ಪ್ರಸಾನ್ನಾ ಪಾಲಕನೆ ಕುಂ ಭಿಣಿಸುರರನು ಕಾಯೊ ಕ್ಷಣಾ ಲಕ್ಷ್ಮನಣ್ಣಾ 7 ಬಿಸಜ ಸಂಭವನ ನಿರ್ಮಿಸಿ ನಾಭಿಕಮಲದಿ ಸಶರೀರದೊಳು ಸುಮನಸರ ಪಡೆದು ನಿನ್ನಾ ಪೆಸರಿಟ್ಟು ಅವರವರೊಶನಾದೋಪಾದಿ ತೋ ರಿಸಿದಿ ನೀ ಸ್ವಾತಂತ್ಯ ಅಸಮನೆಸಿಕೊಂಡು ಬಸಿರೊಳಗಿಟ್ಟು ಪೊಂಬಸರಾದಿ ಸುರರ ಪಾ ಲಿಸುವಿ ನೀ ಪ್ರತಿ ಕಲ್ಪದಿ ನರಕ ಸ್ವರ್ಗ ವಸುಮತಿ ಯಮ ಲೋಕದಿ ನರಕ ಸ್ವರ್ಗ ವಸುಮತಿ ಯಮ ಲೋಕದಿ ವಾಸಿಸುತ ರ ಕ್ಕಸರನಂಧಂತಮದಿ ದಣಿಸುತಿಪ್ಪ ಪ್ರಸವಿತ್ತ ನಾಮ ವಂದಿಸುವೆ ಪ್ರಮೋದೀ 8 ಆಪದ್ಭಾಂಧವ ಬಹುರೂಪಾ ರುಕ್ಮಿಣೀಶಾ ತಾಪಸ ಜನರ ಹೃತ್ತಾಪದರ ಧರ್ಮ ಸುಜನ ಲೋ ಕೋಪಕಾರಕ ಧರ್ಮ ವ್ಯೂಪ ಊಧ್ರ್ವಗ ನಿರ್ಗು ಣೋಪಾಸಕರ ಸಲಹಲೋಸುಗದಿ ಸ ಲ್ಲಾಪದಿ ಬಹ ಕಲಹಾ ಮನ್ನಿಸೋ ಭವಾ ಕೂಪಾರ ನಾವಿಕ ಭೂಪತಿ ವರಹಾ 9 ಕೂರ್ಮ ಕ್ರೋಡ ವಪುಷ ಹಿರಣ್ಯಕ ಶಿಪುವಿನ ಸೀಳ್ದ ಕಾಶ್ಯಪಿಯಾಚಿಕನೆ ದುಷ್ಟ ನೃಪರ ಸಂಹರಿಸಿದ ಕಪಿವರ ಪೂಜಿತ ದ್ರುಪದಾತ್ಮಜೆಯ ಕಾಯ್ದ ತ್ರಿಪುರಾರಿ ಕಲಿಮುಖ್ಯ ರುಪಟಳ ಬಿಡಿಸಿದ ಕೃಪಣವತ್ಸಲ ಕಲ್ಕಿ ಅಮಿತ ರೂಪಾತ್ಮಕ ಸುಫಲ ಚಿತ್ಸುಖ ಭರಿತಾ ತ್ರೈ ಲೋಕಕ್ಕೆ ಪ್ರಪಿತಾಮಹನೆ ನಿರುತಾ ಪ್ರಾರ್ಥಿಸುವೆ ನಿ ನ್ನಪರೋಕ್ಷವಿತ್ತು ಪಾಲಿಪುದೆಮ್ಮ ಸ್ವರತಾ 10 ವಟಪತ್ರಶಯನ ವೆಂಕಟಗಿರಿ ನಿಲಯ ನಿ ಷ್ಕುಟಿಲ ದುರ್ವಿಷಯ ಲಂಪಟವ ಸದೆದು ನಿನ್ನ ಭಟಜನರಿಗೆ ಧರ್ಮ ಘಟಕನಾಗುವೆ ನಿತ್ಯ ವಟುರೂಪಿ ಎಡಪಾದಂಗುಟದಿ ಅಬ್ಬಜಾಂಡ ಕಟಾಹ ಭೇದಿಸಿ ದೇವ ತಟನೀಯ ಪಡಿಯೋ ಧೂ ರ್ಜಟಿ ತಲೆಯೊಳು ಧರಿಸಿ ನಿನ್ನ ನಾಮ ಪರಿಸುತ್ತ ಸತಿಗೆರಸಿ ಕುಣಿದನೆಂದು ತ್ಕಟದಿ ಕೈಗಳ ಬಾರಿಸಿ ಜಗನ್ನಾಥ ವಿಠಲ ಸರ್ವೋತ್ತಮ ದಿಟನೆಂದುದ್ಫಟಸೀ11
--------------
ಜಗನ್ನಾಥದಾಸರು
ನಂಬಿದ್ಯಾ ಮನವೇ ನಂಬಿದ್ಯಾ ಪ ನಂಬಿದ್ಯ ಮನವೆ ಕೊಂಡಾಡಿದ್ಯ ಆನಂದ ತೀರ್ಥರ ಮತವೆಸತ್ಯವೆಂದು ಅ.ಪ ಇಂದಿರೆ ರಮಣನೆ ಪರದೈವವೆಂದು ಬಂಧನಾದಿ ಅಷ್ಟಕರ್ತೃತ್ವ ಆತನದೆಂದು ಕುಂದುಕೊರತೆಗಳಿಲ್ಲದ ಸರ್ವೇಶ ಶಾಶ್ವತನೆಂದು ನಂದ ಕಂದನು ಸಾನಂದ ಗುಣ ಪೂರ್ಣ ಸ್ವರತನೆಂದು 1 ನಾರಾಯಣನೆ ಸರ್ವೋತ್ತುಮನು ಎಂದು ಸಿರಿ ಅಜಶಿವರೆಲ್ಲ ಹರಿಯಕಿಂಕರರೆಂದು ಮುರವೈರಿ ಅಂತಃ ಬಹಿರ್ವ್ಯಾಪ್ತನು ಎಂದು ಶಾರಂಗ ಪಾಣಿಯೆ ಸರ್ವಾಂತರ್ಯಾಮಿಯೆಂದು 2 ಸಾಕಾರಸರ್ವೇಶ ನಿರ್ವಿಕಾರ ನೆಂದು ಓಂಕಾರ ವಾಚ್ಯನೆ ಸರ್ವಾಧಾರ ಸರ್ವಗನೆಂದು ಅಕಾರಾದಿ ಸರ್ವವರ್ಣಸ್ವರ ಶಬ್ದ ವಾಚ್ಯನುಎಂದು ಅಜ ಅಪ್ರಮೇಯನೆಂದೂ3 ವೇದಗೋಚರ ತಾವೇದಾತೀತನೆಂದು ವಿಧಿಸಿರಿ ವಂದಿತ ಸಾಕಲ್ಯದಿ ಅವಾಚ್ಯನೆಂದು ಮಧುಸೂಧನನು ಚಿನ್ಮಯ ವಪುಷನೆಂದು ಭೇದವಿಲ್ಲದ ರೂಪ ಗುಣಕ್ರಿಯ ಅವಯವನೆಂದು4 ನಾಶರಹಿತ ಕೇಶವನೊಬ್ಬ ಆರ್ತಿವರ್ಜಿತ ನೆಂದು ಕ್ಲೇಶರಹಿತ ವಾಸುದೇವನು ವಿಧಿನಿಷೇಧ ವರ್ಜಿತನೆಂದು ವಿಶ್ವೇಶ ಸರ್ವತಂತ್ರ ಸ್ವತಂತ್ರನು ಸಾರ್ವಭೌಮನು ಎಂದೂ ವಾಸುಕಿ ಶಯನನು ಲೀಲೆ ಗೋಸುಗ ವಿಹಾರಮಾಳ್ಪಾನೆಂದು5 ಪುರುಷ ಸೂಕ್ತ ಪ್ರತಿಪಾದ್ಯ ಅಪ್ರಾಕೃತನೆಂದು ವರಗಾಯತ್ರ್ಯಾದಿ ಸರ್ವಮಂತ್ರ ಪ್ರತಿಪಾದ್ಯನೆಂದು ಅಪವರ್ಗ ಗತಿದಾಯಕನೆಂದೂ ಪಾದ ಭಜನೆಯೆ ಸಾರವೆಂದೂ 6 ವಿರಂಚಿ ಜನಕನೆ ಸರ್ವತ್ರ ಸರ್ವರಲಿದ್ದು ಸರ್ವಕಾರ್ಯ ಕಾರ್ಯಗಳನು ಮಾಡಿ ಮಾಡಿಸುವನೆಂದು ಸರ್ವಜೀವರಿಗೆ ಕರ್ಮಗಳುಣಿಸಿ ತಾ ನಿರ್ಲೇಪನೆಂದೂ ಖರಾರಿರೂಪಗಳೆಲ್ಲ ಅನಾದಿ ಶುಕ್ಲಶೋಣಿತವರ್ಜಿತವೆಂದು7 ಲಕ್ಷ್ಮಿರಮಣನು ಪಕ್ಷಪಾತ ರಹಿತನೆಂದು ಪಕ್ಷಿವಾಹನನು ಕ್ಷರಾಕ್ಷರ ವಿಲಕ್ಷಣನೆಂದು ಲಕ್ಷ್ಮಣಾಗ್ರಜನು ಕುಕ್ಷಿಯೊಳಗೆ ಬ್ರಹ್ಮಾಂಡ ರಕ್ಷಿಪನೆಂದು ಇಕ್ಷು ಚಾಪನ ಪಿತನಚಿಂತಾದ್ಭುತನೆಂದು 8 ಹಂಸಾದಿ ಹದಿನೆಂಟು ರೂಪಗಳ ಧರಿಸಿ ಹೊರಗೆ ವ್ಯಾಪಿಸಿ ಕಂಸಾರಿಸಕಲವ ನಡಿಸೀನಡಿಸುತ ಸುಖದುಃಖಗಳ ಲೇಶಯೋಗ್ಯತೆ ಮೀರಗೊಡದಲೆ ಉಣಿಸುವನೆಂದು 9 ಪತಿತ ಪಾವನ ಪರಾವರೇಶ ತ್ರಿಗುಣವರ್ಜಿತನೆಂದು ಸತತ ಸ್ವಪ್ನ ಸುಷಪ್ತಿ ಜಾಗ್ರತೆ ಮೋಕ್ಷಾ ವಸ್ಥೆಗಳಲಿ ವಿಶ್ವ ತ್ವೆಜಸ ಪ್ರಾಜ್ಞ ತುರ್ಯರೂಪಾದಿಂದ ಮತಿ ಪ್ರೇರಕನಾಗಿ ಕಾದುಕೊಂಡು ಪೊರೆಯುವ ನೆಂದು10 ಸತ್ಯವತಿ ಸುತನು ಸತ್ಯ ಸಂಕಲ್ಪನೆಂದು ಆತನೆ ನಿತ್ಯಾನಿತ್ಯ ಜಗದೀಶನಂತರ್ಯಾಮೀಯೆಂದು ಮುಕ್ತಾ ಮುಕ್ತರ ನಾಥ ಮುಖ್ಯ ಬಿಂಬನು ಚತುರಾನನಾದಿಗಳಿಗೆಲ್ಲಾ ಎಂದು11 ಅನಿಲ ಜೀವೋತ್ತಮ ಹರಿಯ ಪ್ರಥಮಾಂಗ ಅಪರೋಕ್ಷ ಪ್ರಭುವು ಅಣು ಮಹದ್ಘನ ರೂಪ ಚರಿತ ಭಾರತೀಶ ವಾಣೀ ಪತಿಯ ಪದಾರ್ಹ ವಾತದೇವನು ಎಂದು 12 ಹನುಮ ಭೀಮ ಮಧ್ವ ಮೂರಾವತಾರದ ದೇವ ಅನುಪಮ ಬಲನಿಸ್ಸೀಮ ಪುರುಷತೇಜ ತೃಣ ಮೊದಲಾದ ಸರ್ವಜೀವರಲ್ಲಿದ್ದು ಅವರ ಹರಿಯಾಜ್ಞೆಯಂತೀವನೆಂದೂ 13 ದ್ವಾತ್ರಿಂಶಲ್ಲಕ್ಷಣ ಸಂಪನ್ನ ಗುರು ಮಧ್ವನೆಂದು ಆತನೇಲೋಕಕ್ಕೆಲ್ಲ ಗುರವು ಎಂದು ಈತ ಸಕಲಪೇಳಿದ ಮಾತಿಗೆ ಸರಿಯಿಲ್ಲವು ಎಂದು ಪ್ರೀತಿಯಿಂದಲಿ ಭಜಿಪ ಭಕ್ತಗೇನೆ ಮುಕ್ತಿಯೆಂದು 14 ಹರಿಯ ಮತವೆ ಹನುಮನ ಮತವು ಎಂದು ಸಿರಿ, ವಿರಂಚಿ ಪವನ ವಾಣಿ ಭಾರತೀಯರಲ್ಲಿ ಗರುಡ ಶೇಷ ಶಿವ ಶಕ್ರಾದಿಸರ್ವರೊಳಗೆ ತಾರತಮ್ಯ ಪಂಚ ಭೇದವು ಸತ್ಯವೆಂದು 15 ಭಾರತಿ ಪತಿಯದ್ವಾರವೆ ಹರಿಯು ಸ್ವೀಕರಿಪ ನೆಂದು ಮುರಾರಿಯ ಒಲುಮೆಗೆ ಜ್ಞಾನಯುತಭಕ್ತಿಯೆ ಸಾಧನವೆಂದು ಧರೆಯೊಳಗೆ ಹರಿನಾಮ ಸ್ಮರಣೆಗೆ ಸರಿಯಿಲ್ಲವು ಎಂದು ಮಾರಮಣನ ಅನುಗ್ರಹವೆ ಮೋಕ್ಷದಾಯಕ ವೆಂದು 16 ಅರಿಷಡ್ವರ್ಗಗಳಳಿಯುವುದೆ ವೈರಾಗ್ಯ ಮಾರ್ಗವೆಂದು ಗುರುವಿನ ಕರುಣವೆ ಜ್ಞಾನಕ್ಕೆ ಕಾರಣವೆಂದು ಸಾರಮಾರ್ಗಕ್ಕೆ ಸಾಧುಗಳ ಸಂಗವೆ ಮುಖ್ಯವೆಂದು ನೀರಜಾಕ್ಷಗೆ ಸರಿ ಮಿಗಿಲು ಇಲ್ಲವೆಂದು 17 ಜೀವ ಈಶಗೆ ಭೇದ ಈಶ ಜಡಕೆ ಭೇದ ವೆಂದು ಜೀವ ಜೀವಕೆ ಭೇದ ಜಡ ಜಡಕೆ ಭೇದವೆಂದು ಪರಿ ಪಂಚ ಭೇದವೆಂದು ಸಾವಧಾನದಿ ತಿಳಿದು ಜಗತ್ಸತ್ಯವೆಂದು ಧೃಡದಿ 18 ಸುರರೊಳುನರರೊಳು ಅಸುರರೊಳು ಎಲ್ಲೆಲ್ಲು ತಾರತಮ್ಯವು ಅನಾದಿಯಿಂದಲಿ ಇರುತಿಹುದೆಂದು ಸ್ವರೂಪಾನಂದಾವಿರ್ಭಾವವೆ ಮುಕ್ತಿಯೆಂದು ಅರವಿಂದನಾಭಗೆ ಸರ್ವರು ಸದಾದಾಸರೆಂದು 19 ಧನಕನಕ ವನಿತಾದಿಗಳೆಲ್ಲ ಹರಿಗೆ ಅರ್ಪಿತ ವೆಂದು ಏನೇನು ಮಾಡುವುದೆಲ್ಲ ಶ್ರೀ ಕೃಷ್ಣನ ಸೇವೆಯೆಂದು ದೀನ ಜನ ಮಂದಾರನಾಧೀನ ಸುಖದುಃಖಾಗಳೆಂದು ಏನು ಬೇಡದೆ ಹರಿಯ ಸತತನೆನೆವೋದೆ ಸಾಧನ ವೆಂದು20 ನಾಕೇಶ ಜಯತೀರ್ಥ ವಾಯ್ವೂಂತರ್ಗತನಾದ ಶ್ರೀಕೃಷ್ಣ ವಿಠಲಾನೆ ಮಮಸ್ವಾಮಿ ಸರ್ವಸ್ವವೆಂದು ಸಕಲ ಕರ್ಮಗಳರ್ಪಿಸುತ ತ್ರಿಕರಣ ಶುದ್ಧಿಯಿಂದಲಿ ಮಾಕಳತ್ರನ ಸತತ ಭಜಿಸುತ್ತಿರಬೇಕು ಎಂದು 21
--------------
ಕೃಷ್ಣವಿಠಲದಾಸರು
ನಮೋ ನಮೋ ನಾರಾಯಣ ನಮೋ ಶ್ರುತಿ ನಾರಾಯಣ ನಮೋ ಬಾದರಾಯಣ ನರನ ಪ್ರಾಣ ಪ ಶಿವನ ಮೋದದಲಿ ಪಡೆದೆ ಶಿವರೂಪದಲಿ ನಿಂದೆ ಶಿವನೊಳಗೆ ಏರಿದೆ ಶಿವನಿಗೊಲಿದೆ ಶಿವಗೆ ನೀ ಮಗನಾದೆ ಶಿವ ತಾತನೆನೆಸಿದೆ ಶಿವನ ಮಗನಾ ಪಡೆದೆ ಶಿವನ ಕಾಯ್ದೆ1 ಶಿವಗೆ ಸಹಾಯಕನಾದೆ ಶಿವನ ಕಂಗಡಿಸಿದೆ ಶಿವನ ಧನುವನು ಮುರಿದೆ ಶಿವನೊಲಿಸಿದೆ ಶಿವನ ಜಡ ಮಾಡಿದೆ ಶಿವನ ಒಡನೆ ಬಂದೆ ಶಿವಮುನಿಗೆ ಉಣಿಸಿದೇ ಕೇಶವನೆನಿಸಿದೇ 2 ಶಿವನ ಜಡೆಯೊಳಗಿದ್ದ ಶಿವಗಂಗೆಯ ಪೆತ್ತೆ ಶಿವನ ಕೂಡಲಿ ಕಾದಿದವನ ಭಾವ ಶಿವ ಭಕ್ತನ್ನ ನಿನ್ನವನಿಂದ ಕೊಲ್ಲಿಸಿದೆ ಶಿವನ ಶೈಲವನೆತ್ತಿದವನ ವೈರಿ3 ಶಿವ ನುಂಗಿದದ ನುಂಗಿದವನ ಒಡನಾಡುವ ಶಿವ ಪರಾಶಿವ ನಿನ್ನ ಶಿವ ಬಲ್ಲನೇ ಯವೆ ಇಡುವನಿತರೊಳಗೆ ಧವಳ ಹಾಸಾ4 ಶಿವನ ಮೇಲಿದ್ದ ಸಹಭವೆ ರಮಣ ಸರ್ವದಾ ಶಿವನೊಳಗಿಳಿದ ಶಿಷ್ಯನಿವ ಹರಾತೀ ತಲ್ಪ ಶಿವ ಸಮಾನಿಕ ರೂಢ ಶಿವನ ಮನೆ ತೊಲಗಿಸುವ ಶಿವ ಬಾಂಧವಾ 5 ಶಿವನ ಧೊರಿಯೆ ಜ್ಞಾನ ಶಿವ ಹಚ್ಚುವದೆ ಕೊಡು ಶಿವಮಣಿ ಎನಿಸುವ ಸ್ತವ ಪ್ರಿಯನೇ ವಾಹನ ವೈರ ಶಿರವ ತರಿಸಿದೆ ದೇವ ಶಿವ ಪ್ರತಿಷ್ಠಿಸಿದೆ ಶಿವಗೆ ಕಾಣಿಸದಿಪ್ಪೆ6 ಶಿವನ ಸೋಲಿಸಿದವನ ಜವಗೆಡಿಸಿದೆ ಶಿವನು ಕುದರಿಯ ಹೆರವ ಅವನು ಕಾಯಿದ ಗೋವ ಶಿವನವತಾರ ಶಸ್ತ್ರವನು ಹಳಿದೆ 7 ಶಿವನಧರ್Àನಾಗಿ ದಾನವನು ಕೊಂದ ಮಹಿಮಾ ಶಿವಋಷಿ ಪೇಳಿದ ಯುವತಿ ರಮಣಾ ಶಿವನ ವೀರ್ಯವ ಧರಿಸಿದವನ ಮುಖದಲಿ ಉಂಬ ಅವರ ಬೆಂಬಲವೇ ಯಾದವಕುಲೇಶಾ 8 ಶಿವಗೆ ತ್ವಂಚ ಬಾಹುಯೆಂದು ಪೇಳಿ ಮೋಹ ದಿವಿಚಾರಿಗಳ ತಮಸಿಗೆ ಹಾಕುವೆ ಶಿವಮೂರುತಿ ನಮ್ಮ ವಿಜಯವಿಠ್ಠಲರೇಯ ಶಿವನಾಳು ಮಾಡಿ ಆಳುವ ದೈವವೇ9
--------------
ವಿಜಯದಾಸ
ನಿನ್ನ ಸೇರಿದೆ ಮಹಾಲಿಂಗ ಎನ- ಗಿನ್ಯಾರು ಗತಿ ಕಾಣೆ ಕರುಣಾಂತರಂಗ ಪಾರ್ವತಿ ಮೋಹನಾಂಗ ಪ. ನಿನ್ನಂತೆ ಕೊಡುವ ಉದಾರ ತ್ರಿಭು- ವನ್ನದೊಳಿಲ್ಲದಕ್ಯಾವ ವಿಚಾರ ಮುನ್ನ ಮಾರ್ಕಾಂಡೇಯ ಮುನಿಯ ಭಯ ವನ್ನು ಪರಿಹರಿಸಿದೆಯೊ ಸದುಪಾಯ ನಮೋ ಶಿವರಾಯ 1 ಸರ್ವಾಪರಾಧವ ಕ್ಷಮಿಸು ಮಹಾ- ಗರ್ವಿತರಾಶ್ರಯಕ್ಕೊಲ್ಲದು ಮನಸು ಶರ್ವರೀಶಭೂಷ ನಿನ್ನ ಹೊರ- ತೋರ್ವರಿಲ್ಲ ರಣಮಲ್ಲ ಮುಕ್ಕಣ್ಣ ಕಾಯೊ ಸುಪ್ರಸನ್ನ 2 ಅಂತರಂಗದ ದಯದಿಂದ ಯುದ್ಧ- ಮಂ ತೊಡಗಿದೆ ಪಾರ್ಥನೊಳತಿಚಂದ ಪಂಥದ ನೆಲೆಯನ್ನು ತಿಳಿದು ಸರ್ವ- ದೊಡ್ಡದು ನಿನ್ನ ಬಿರುದು 3 ಸಿದ್ಧಿಸು ಸರ್ವಸಂಕಲ್ಪ ಅಡ್ಡ- ಬಿದ್ದು ಬೇಡುವೆ ನಿನಗ್ಯಾವದನಲ್ಪ ಹೊದ್ದಿದವರಿಗಿಲ್ಲೆಂದಿಗು ಕೇಡು ದುಷ್ಟರದ್ಯಾವ ಪಾಡು4 ಅಂಜಿಕೆ ಬಿಡಿಸಯ್ಯ ಹರನೆ ಪಾ- ವಂಜಾಖ್ಯವರಸುಕ್ಷೇತ್ರಮಂದಿರನೆ ಸಂಜೀವನ ತ್ರಿಯಂಬಕನೆ ನವ- ಸಲಹೊ ಪಂಚಮುಖನೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ನೀ ಕಾಯೊ ಎನ್ನ ಎನಗೆ ನೀ ಬಂಧುಎಂದೆಂದೂ ದಯಾಸಿಂಧುಪ. ತಮನ ಕೊಂದೆ ಶೃತಿತತಿಯ ನೀ ತಂದೆಕೂರ್ಮನಾಗಿ ಗಿರಿಯನೆತ್ತಿದೆಕ್ಷಮೆಯ ಪೊತ್ತೆ ಹಿರಣ್ಯಕನ ಕಿತ್ತೆ ತ್ರಿ-ವಿಕ್ರಮನಾಗಿ ಬೆಳೆದೆ ತ್ರೈಲೋಕವನಳೆದೆ 1 ರಾಯರಾಯರ ಗೆಲಿದೆ ರಾವಣ ಬಲವನು ಮುರಿದು-ಪಾಯದಿ ಗೋವಳನಾದೆಸ್ತ್ರೀಯರ ಕೆಡಿಸಿದೆ ಕಲಿಯಾಗಿ ಕೊಲಿಸಿದೆಕಾಯಜನ ತಾತ ಕಾಮಿತಫಲದಾತ 2 ಸುರರ ಶಿರೋರನ್ನ ಕರುಣಾಸಂಪನ್ನಸರುವ ಮಾನವರ ಮಾನ್ಯಸಿರಿಹಯವದನ್ನ ಪರಮಪಾವನ್ನಪರಿಪೂರ್ಣ ಶಶಿವರ್ಣ ನಿರುತ ನೀಲವರ್ಣ 3
--------------
ವಾದಿರಾಜ
ನೋಡಿರಯ್ಯ ಈ ರೂಢಿಯ ಜನರೆಲ್ಲಾ ಮೂಡಲಗಿರಿವಾಸನಾ ವೆಂಕಟೇಶನಾ ಪ ಬೇಡಿದ ವರಗಳ ಭಕ್ತ ಸಮೂಹಕೆ ನೀಡುತಲಿ ಕೊನೆಗೆ ನಿಜಪದವೀವನಾ ಅ.ಪ ಹರಿಬ್ರಹ್ಮರೊಳಾವನುತ್ತಮನೆಂದು ಪರೀಕ್ಷಿಸೆ ಭೃಗುಮುನಿಯು ತೆರಳಿಬಂದು ಅಜಹರನೊಪ್ಪದೆತಾ- ಪರಮಪದಕೆ ಬರಲು ಪರಿ ಸಿರಿಯ ತೊಡೆಯ ಮೇಲೆ ಹರಿಮಲಗಿರೆ ಕಂಡು ಚರಣದಿಂದ ಹೃದಯಕೆ ತಾಡನೆ ಮಾಡಲು ಪರಮ ಭಕುತಿಯಿಂದ ಋಷಿಯ ಪೂಜಿಸಿದ 1 ಸಿರಿಕರವೀರಪುರವನೈದಲು ಧರೆಯೊಳು ವೆಂಕಟಗಿರಿಯ ಸಾರುತ- ಲ್ಲಿರೆ ವಲ್ಮೀಕದಲಿ ಸರಸಿಜಭವ ಶಿವರು ತುರುಕರುವಾಗಿ ಪಾ ಲ್ಗರೆಯೆ ವಲ್ಮೀಕದಲಿ ದೊರೆ ಚೋಳನ ಭೃತ್ಯಗೋವನು ಭಾದಿಸೆ ಶಿರದೊಳಾಂತು ನೃಪಗೆ ಶಾಪವನಿತ್ತ 2 ಮನುಜನೋಲ್ ನಟಿಸುತಲಂಬರರಾಜನ ತನುಜೆಯ ಕೈಪಿಡಿದು ನೆನೆವರಿಗೆ ತಿರುಪತಿಯೆ ವೈಕುಂಠ- ವೆನುತ ಸಾರಿ ಒಲಿದು ಘನಮಹಿಮೆಗಳನು ತೋರಿ ಸಕಲರಿಂ ಗುಣನಿಧಿ ಶ್ರೀಗುರುರಾಮವಿಠಲ ಈ ಘಣಿಗಿರಿಯೊಳಗಿರುತಿಪ್ಪ ತಿಮ್ಮಪ್ಪ 3
--------------
ಗುರುರಾಮವಿಠಲ