ಒಟ್ಟು 36 ಕಡೆಗಳಲ್ಲಿ , 22 ದಾಸರು , 36 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀಲ ಗಗನ ನಿಭ ನಿರ್ಮಲಗಾತ್ರನೆ ಪ ಬಾಲಶಶಾಂಕನ ಪೋಲ್ವ ಸ್ವಾಮಿ ಬಾಲಶಶಾಂಕನ ಪೋಲ್ವ ನೀಲಕುಂತಳ ಪರಿಶೋಭಿತ ಫಾಲಕೆ ಕುಂಕುಮವ ಹಚ್ಚುವೆನು 1 ನಳಿನ ನಯನ ಕೋಮಲ ಕಮಲಾನನ ಚಲುವ ಕರಂಗಳ ತೋರೋ ಸ್ವಾಮಿ ನಳಿನವ ಪೋಲುವ ಚಲುವ ಕರಕೆ ನಾ ನರಿಸಿನ ಹಚ್ಚುವೆನೀಗ ಸ್ವಾಮಿ 2 ಅಂಬುಜನಾಭನೆ ಅಂಬುಧಿ ಗಂಭೀರ ಶಂಬರಾರಿ ಶತತೇಜ ಸ್ವಾಮಿ ಕಂಬುಕಂಧರ ತೋರು ಸಂಭ್ರಮದಲಿ ನಾ ಗಂಧವ ಹಚ್ಚುವೆನೀಗ ಸ್ವಾಮಿ 3 ಸುಮಶರ ಜನಕನೆ ಸುವಶರ ವೈರಿಯ ಕಾರ್ಮುಕ ಭಂಜಕ ಸ್ವಾಮಿ ಸಮ ವಿರಹಿತ ನಿನ್ನ ಕೊರಳಿಗ್ಹಾಕುವೆನೀಗ ಕುಸುಮ ಮಾಲೆಯ ನಾನು ಸ್ವಾಮಿ 4 ವಾರಿಧಿ ಚಂದ್ರಮನೆ ಧೀರ ವೀರ ದಿತಿಜಾರಿದೇವ ಶ್ರೀರಘುವೀರ ಶ್ರೀ ಕರಿಗಿರೀಶನೇ ನಿಮ ಗಾರತಿ ಎತ್ತುವೆ ಸ್ವಾಮಿ 5
--------------
ವರಾವಾಣಿರಾಮರಾಯದಾಸರು
ಪಂಪಾಪುರದ ನಿವಾಸನೆ ಶಿವನೇ ಇಂಪು ಕೊಡುತ ಮನ | ಕಂಪನ ಕಳೆಯೋ ಪ ಶಂಫಲಿ ಪುರದ ನಿ | ವಾಸನ ಸಖ ಹಸಗಂಪನು ಕೊಡುತಲಿ | ಇಂಪನೆ ತೋರೋಅ.ಪ. ಭವ | ಬಂಧ ವಿಮೋಚಕಕಂದು ಗೊರಳ ಹರ | ಸಂದರುಶನ ವೀಯೋ 1 ಅಂಬರ ಕೇಶಿಯೆ | ಅಂಬೆಯ ರಮಣನೆಶಂಬರಾರಿಯ ಹರ | ನಂಬಿ ವಂದಿಪೆನೊಉಂಬುವುದುಡುವುದು | ಹಂಬಲಿಸುವುದೆಲ್ಲಬಿಂಬನ ಕ್ರಿಯವೆಂಬ | ನಂಬುಗೆ ಈಯೋ 2 ವಾಸವ ಪರಿ 3
--------------
ಗುರುಗೋವಿಂದವಿಠಲರು
ಪಾಲಿಸೇ ಪದ್ಮಾಲಯೇ ಪಾಲಿಸೆ ಪ. ಪಾಲಿಸು ನಿನ್ನನೆ ಓಲೈಸಿತಿರುವೀ ಬಾಲೆಯರಭಿಮತ ಪಾಲಿಸುತೊಲವಿಂಅ.ಪ. ಅಂಬುಜನಾಭನ ರಾಣಿ ನಿನ್ನ ನಂಬಿದೆ ಪಲ್ಲವರಾಣಿ ಚನ್ನೆ ಕಂಬುಕಂಧರೆ ಫಣಿವೇಣಿ ಎನ್ನ ಬೆಂಬಿಡದಿರು ಕಲ್ಯಾಣಿ ಜನನೀ ಜಂಭಾರಿ ಪೂಜಿತೆ ಶಂಬರಾರಿಯಮಾತೆ ಶಂಭುವಂದಿತ ಪಾದಾಂಬುಜಕ್ಕೆರಗುವೆ 1 ಘನ ಸತ್ಯವ್ರತ ಪಿಡಿದರಿಯೆ ತಾಯೇ ಮತ್ತೇಭಗಾಮಿನಿ ಮರೆಹೊಕ್ಕೆ ನಿನ್ನನೇ ನಿತ್ಯಸತ್ಯದಿ ನಿನ್ನ ಭಜಿಸುವೆ ಜನನೀ 2 ಘೋರ ಋಣದ ಭಾದೆ ಕಳೆದು ಎನ್ನ ಪಾರುಗಾಣಿಸು ಮೋದವಡೆದು ಮುನ್ನ ದುರಿತವಿದೆನ್ನನು ಬಿಡದು ತಾಯೆ ವರಶೇಷಗಿರಿ ದೊರೆಯರಸಿ ನಿನ್ನಡಿತಾವರೆಗೆನ್ನನಾರಡಿಯೆನಿಸೆಂದು ಬೇಡುವೆ3
--------------
ನಂಜನಗೂಡು ತಿರುಮಲಾಂಬಾ
ಬಿಟ್ಟು ಬರಲಾರಳಮ್ಮಯ್ಯಪಟ್ಟಮಂಚವ ಭಾವೆಬಿಟ್ಟರೆ ರುಕ್ಮಿಣಿ ಕೃಷ್ಣನ ಬೆರೆದಾಳೆಂಬೊ ಅಂಜಿಕೆಯಿಂದ ಪ. ಪಾದ ಸಿಕ್ಕಿತೋ ಸಿಗದೆಂದುಚಿಕ್ಕ ಚನ್ನಿಗಳ ಕೈವಶಚಿಕ್ಕ ಚನ್ನಿಗಳ ಕೈವಶವಾಗದಂತೆಜಪ್ಪಿಸಿಕೊಂಡು ವಟವಾದಳೆ 1 ಶಂಬರಾರಿ ಪಿತನ ತಂಬುಲಸಿಗದೆಂದು ಚುಂಬನದ ಸಮಯ ಚಿಗಿಳೀತುಚುಂಬನದ ಸಮಯ ಚಿಗಿಳೀತು ಎಂತೆಂಬೊಹಂಬಲದಿ ಒಳಗೆ ಕುಳಿತಳೆ2 ನಲ್ಲೆ ರಂಗಯ್ಯನ ಎಲ್ಲೆಲ್ಲಿ ಬಿಡಲೊಲ್ಲೆಎಲ್ಲ ನಾರಿಯರ ನೆರವಿಕೊಂಡುಎಲ್ಲ ನಾರಿಯರ ನೆರವಿಕೊಂಡು ಮನೆಯೊಳುನಿಲ್ಲಗೊಡರೆಂಬೊ ಭಯದಿಂದ3 ಒಗೆತನ ನಗೆಗೀಡಾಯಿತು ನೋಡೆ ಈ ಬಗೆ ಎಲ್ಲೆ ಕಾಣೆ ಜಗದೊಳು ಈ ಬಗೆ ಎಲ್ಲೆ ಕಾಣೆ ಜಗದೊಳು ರುಕ್ಮಿಣಿ ತಗಿ ನಿನ್ನನಡತೆ ತರವಲ್ಲ4 ಅನಂತ ಮಹಿಮಗೆ ಇನ್ನೆಂಥ ಕಾವಲತನ್ನ ನಿಜರೂಪ ಅವರಲ್ಲಿತನ್ನ ನಿಜರೂಪ ಅವರಲ್ಲಿ ರಮಿಸೋದುತನ್ನ ಮನದಲ್ಲಿ ನಿಜ ಮಾಡಿ5 ಸಾಗರಶಾಯಿ ಮನಕೆ ಹ್ಯಾಂಗೆ ಬಂದೀತುಎಂದು ಹೀಗೆ ಕೈ ಮುಗಿದು ತಲೆಬಾಗಿಹೀಗೆ ಕೈ ಮುಗಿದು ತಲೆಬಾಗಿ ರುಕ್ಮಿಣಿಆಗೊಂದು ಮನದ ಬಯಕೆಲ್ಲ6 ಎಷ್ಟು ಜಪಿಸಿ ನೀನು ಠಕ್ಕಿಸಿ ಕೃಷ್ಣನ ಇಟ್ಟಾನೆ ರಮಿಯ ಎದಿಮ್ಯಾಲೆ ಇಟ್ಟಾನೆ ರಮಿಯ ಎದಿಮ್ಯಾಲೆ ರುಕ್ಮಿಣಿ ಇಷ್ಟರ ಮ್ಯಾಲೆ ತಿಳಕೊಳ್ಳ7
--------------
ಗಲಗಲಿಅವ್ವನವರು
ಭವ ವನಧಿಯ ಪೋತ ಪ ಪಂಕಜ ಪಾಣಿಯೆ ಅ.ಪ. ಅರ | ವಿಂದ ನಯನ ಹೃನ್ಮಂದಿರದಲಿ ಆ | ನಂದವನೀಯೋ 1 ಭವ ಬಂಧನವ ಬಿಡಿಸೊ | ಸ್ಮರಿಸುವರಘ ಹರಿಸೋಶಂಬರಾರಿಯ ಪಿತ ಮನವನೆ ನಿಲಿಸೋ ನಿನ್ನೊಳು ನೆಲೆಗೊಳಿಸೋ ಶಾಂಭವಿ ಧನುವನು ಭಂಜಿಸಿದಾತನೆಶಂಭು ನಿಶುಂಭರ ಸವರಿದ ರಾಮನೆ 2 ಬಿಂಬಾನೆ ಗುರು ಗೋವಿಂದ ವಿಠಲಯ್ಯ | ನೀಯನ್ನ ಸಲಹಯ್ಯ| ತುಂಬೀಹ ಷಡ್ವೈರಿಯ ಕಳೆಯಯ್ಯ | ನಿನ್ನಯ ಮಹಿಮೆಯ ||ಹಂಬಲ ಹೃದಯಾಂಬರದೊಳು ತುಂಬಿಸಿಪೊಂಬರಿಸಯ್ಯನೆ ತವಪದ ತೋರಿಸೊ 3
--------------
ಗುರುಗೋವಿಂದವಿಠಲರು
ಭಾರತೀದೇವಿಯ ಸ್ತೋತ್ರ ಮಾರುತನ್ನ ಜಾಯೆ - ಮೊರೆಯ ಹೊಕ್ಕೆನು ಕಾಯೆ ಪ ಮಾರಾಂತಕ ಶಂಬರಾರಿ ಭಿದುರಧರತಾರೇಶ ಶರವಿನುತೇ ಅಮ್ಮಯ್ಯ ಅ.ಪ. ಭ್ರಮರ ಕುಂತಳೆ ಜಾಣೆ ಅಮರ ವಂದಿತ ಚರಣೆಸುಮನಸೇಶನ ಪದಕಮಲ ಪೂಜಿಪುದಕೆವಿಮಲಮತಿಯನೀಯೇ ಅಮ್ಮಯ್ಯ 1 ಶೃತಿದೇವಿಯಲ್ಲಿ ಸುತೆಯಾಗಿ ಜನಿಸಿದೆಸತತ ಎನ್ನಯ ದುರ್ಮತಿ ಖಂಡಿಸಿ ಸು-ಮತಿವಂತನ ಮಾಡೇ ಅಮ್ಮಯ್ಯ 2 ಎರಡೇಳು ಭುವನ ಜಠರದೊಳಗಿಂಬಿಟ್ಟಪರಿಪೂರ್ಣ ಕಾಮ ಶ್ರೀ ಮೋಹನ ವಿಠ್ಠಲನಚರಣ ಭಕುತಿಯನೀಯೇ ಅಮ್ಮಯ್ಯ 3
--------------
ಮೋಹನದಾಸರು
ಲಕ್ಷ್ಮೀದೇವಿ ನಂಬಿದೆ ನಿನ್ನ ಪಾದಾಂಬುಜಯುಗಳವ- ಶಂಬರಾರಿ ಜನನಿಪ ಬೆಂಬಿಡದೆನ್ನಹೃದಂಬುಜದೊಳಗವಲಂಬಿಸಿ- ಸಲಹುಮದಂಬೆ ಸನಾತನಿ ಅ.ಪ ಅಂಬುಜಮುಖಿ....ಚಿಕುರೆ ಶರ ದಂಬುಜದಳನಯನೆ ಬಿಂಬಫಲಾಧರೆ 1 ಕರ್ಣದೊಳೆಸೆವಸು ವರ್ಣವಿಡಿದ ಪೊಸರನ್ನದೊಡವೆಗಳ ರನ್ನೆ ಗುಣಾರ್ಣವೆ 2 ಮಾಲತಿಮಲ್ಲಿಗೆ ಮಾಲೆಯಿಂದೊಪ್ಪುವ ನೀಲಭುಜಗವೇಣಿ ಗೈದಲಮೇಲಮಂಗಾಮಣಿ 3
--------------
ಸರಗೂರು ವೆಂಕಟವರದಾರ್ಯರು
ವಾರಣವದನ ತ್ರೈಲೋಕ್ಯಸುಮೋಹನ ವಾರಣವದನ ಪ. ವಾರಿಜಾಕ್ಷ ವರಗುಣಾಕರ ವಾರಿಜಾಕ್ಷಿ ವರದಾಯಕ ಸನ್ನುತ ನಾರದಾದಿ ಮುನಿವಂದಿತ ಪದಯುಗ ಅ.ಪ. ಸುಂದರಾಂಗ ಸುಕಲಾನ್ವಿತ ನಿಭಚರಣ ಕಟಿಶೋಭಿತ ವ್ಯಾಳಸ- ಬಂಧನಾಬ್ಧಿ ಶತಕೋಟಿಸದೃಶ ಕಿರಣ ಚಂದನಾಂಗಾರ್ಚಿತ ಸುಮನೋಹರ ಮಂದಹಾಸ ಮಹಿಮಾಂಬುಧಿಚಂದಿರ 1 ಕಂಬುಗ್ರೀವ ಕಮನೀಯ ಕರಾಂಬುರುಹ ಪಾಶಾಂಕುಶಧರ ವರ ಶಂಬರಾರಿಜಿತುತನಯ ಮಧುರಗೇಹ ಜಂಭಭೇದಿವಂದಿತ ಅತ್ರಿವಂದಿತ ಲಂಬೋದರ ವಿಘ್ನಾಂಬುಧಿ ಕುಂಭಜ 2 ಚಾರುಭಾರ ಕನ್ಯಾಪುರವರ ನಿಲಯ ಮೃಕಂಡುಜದ ಮುನಿವರ ಸಾರಮಂತ್ರಸ್ಥಾಪಿತ ಮಂಗಲ ಕೆರೆಯ ವರಕಪಿತ್ಥಫಲೋರಸಭುಂಜಿತ ಧೀರ ಲಕ್ಷ್ಮೀ ನಾರಾಯಣಸಖಸುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶರಣು ಶರಣು ಶ್ರೀ ರಾಮಚಂದ್ರನೆ ಶರಣು ಸುರಮುನಿ ವಂದ್ಯನೆ ಪ. ಶರಣು ಶ್ರೀ ರಘುಕುಲಾಬ್ಧಿಚಂದ್ರನೆ ಶರಣು ಸದ್ಗುಣ ಸಾಂದ್ರನೆ ಅ.ಪ ಕಮಲನಾಭನೆ ಕಮಲನೇತ್ರನೆ ಅಮರವಂದಿತ ವಿಮಲಚರಿತನೆ ಕುಮುದಸಖಸಮಾನ್ಯನೆ 1 ಅಂಬುಜಾಸನ ಶಂಭುವಂದಿತ ಶಂಬರಾರಿಯ ಜನಕನೆ ಕಂಬುಕಂದರ ನಂಬಿ ಭಜಿಸುವೆ ಬೆಂಬಿಡದಲೆ ಪಾಲಿಸೈ 2 ಪಕ್ಷಿವಾಹನ ರಕ್ಕಸಾಂತಕ ಲಕ್ಷ್ಮೀರಮಣ ಶುಭಲಕ್ಷಣ ಲಕ್ಷ್ಮಣಾಗ್ರಜ ಸತ್ಯವಿಕ್ರಮ ರಕ್ಷಿಸೈ ಪುರುಷೋತ್ತಮ 3 ಪರಮಪಾವನ ಶೇಷಗಿರಿಯೊಳು ನಿರುತ ನೆಲೆಸಿಹ ಶ್ರೀಶಗೆ ಶರಣ ಜನರ ಸಚ್ಚರಿತೆಯೋದುವ ವರವ ಪಾಲಿಸು ದೇವನೇ 4
--------------
ನಂಜನಗೂಡು ತಿರುಮಲಾಂಬಾ
ಶರಣು ಶ್ರೀ ಪಾರ್ವತಿದೇವಿಗೆ ಶರಣು ಶಾಂಭವಿಗೌರಿಗೆ | ನಮ್ಮ ಶರ್ವಾಣಿಗೆ ಪ ಲಂಬ ಕರ್ಣನ ಬಿಂಬಛಿದ್ರನ ಸಂಭ್ರಮದಿ ಪಡೆದಮ್ಮಗೆ ಶಂಬರಾರಿಯ ಅಂಬಿಗಾಹರ ನಂಬಿದಾ ಪಟ್ಟದರಸಿಗೆ 1 ಅಮಿತ ಮಹಿಮಳೆ ಜ್ಯೋತಿ ಆದಿಶಕ್ತಿ ದುರ್ಗಾಂಬೆಗೆ ಹೇಮವರ್ಣ ಭವಾನಿಗೆ 2 ಹೊಡೆವ ಮೃಡಾಣಿಗೆ ಸ್ಮರಿಸದವರನ ಕಾಯ್ವಳೆ 3
--------------
ಹೆನ್ನೆರಂಗದಾಸರು
ಶ್ರೀ ಮಹಾದೇವರು ಅಂಬಿಕಾಪತಿ ಶಂಭು ರಕ್ಷಿಸೆನ್ನಶಂಬರಾರಿ ಹರನೆ ನಂಬಿದೆನೊ ನಿನ್ನ ಪ ಭವ ಭ್ರಕುಟ ಭವಹರನೆ ನೀಎನ್ನಅವಗುಣಗಳೆಣಿಸದಿರು ಕವಿಗೇಯನೆ ||ಅವನಿಯೊಳು ಎನಗೀಗ ಸುವಿವೇಕಿಗಳ ಸಂಗಜವದಿ ಪಾಲಿಸು ಮುದದಿ ಜವನಾರಿ ಶಿವನೆ 1 ವಿನುತ ಇಳೆವರೂಥನೆ ನಿರುತತಲೆವಾಗಿ ಬೇಡುವೆನು ಸಲಹೆಂದು ನಾಎಲರುಣಿ ಭೂಷಣೆನೆ ಒಲಿದು ಪಾಲಿಸುದಯದಿಛಳಿಗಿರೀಶನ ಅಳಿಯ ನಳಿನಾರಿ ಧರನೆ 2 ಸಿರಿರಮಣ ಶಾಮಸುಂದರ ವಿಠಲ ಸಖನೆಮೊರೆ ಹೊಕ್ಕೆ ಮರೆಯದಿರು ಗರಗೊರಳನೆಕರುಣದಿಂದಲಿ ನಿನ್ನ ಚರಣ ಸೇವೆಯನಿತ್ತುಕರವಿಡಿದು ಕಾಪಾಡೊ ಕರಿಚರ್ಮಧರನೆ 3
--------------
ಶಾಮಸುಂದರ ವಿಠಲ
ಸಾಂಬಶಿವಾ ಭಕ್ತಿಮಾರ್ಗದಿ ನಡೆಸೋ ಅಂಬುಜಾಕ್ಷನ ದಿವ್ಯನಾಮವ ನುಡಿಸೋ ಪ ನಂಬಿದ ಭಕ್ತನ ಕೊರತೆಯ ಬಿಡಿಸೋ ಶಂಬರಾರಿಯ ಪಿತನ ಚರಣವ ಹಿಡಿಸೋ ಅ.ಪ ಮಾನವರಿಷ್ಟವ ಸಲ್ಲಿಸುವೆಯಂತೆ ದೀನರೊಳನುಕಂಪ ನಿನಗುಂಟಂತೆ ಜ್ಞಾನ ವೈರಾಗ್ಯ ನಿಧಿ ನೀನಂತೆ ದೀನಗೊಲಿದು ವರವೀಯುವೆಯಂತೆ 1 ಕಾಮಿತವೆನ್ನದು ಒಂದೇ ಅಯ್ಯ ಆ ಮಾಂಗಿರಿಪತಿ ಕರುಣೆ ಅದಯ್ಯ ರಾಮತಾರಕನಾಮ ಎನಗಿರಲಯ್ಯ ನೀ ಮನಮಾಡೆ ಕೃತಾರ್ಥ ನಾನಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸುಶೀಲೇಂದ್ರ ಸುಶೀಲೇಂದ್ರ ಅಸುನಾಯಕ ಮತ | ಬಿಸರುಹ ಭಾಸ್ಕರ ಪ ಕದಂಬ ವಿನುತ | ಜಿತ ಶಂಬರಾರಿ ಕರುಣಾಂಬುಧಿ ಗುರುವರ 1 ತುಂಗ ಮಹಿಮಯತಿ ಪುಂಗವರದ | ತ ರಂಗಿಣಿ ನಿಲಯ ಸುಮಂಗಳ ಚರಿತ 2 ಭಾಗವತ ಪ್ರಿಯ ರಾಘವೇಂದ್ರರರಮ ರಾಗಪಾತ್ರ ಮಧ್ವಾಗಮಜ್ಞ ಗುರು 3 ಸಾರಿದೆ ಸಂತತ ಸೊರಿವರ್ಯ | ಗುರು ಸಾರಸ ಮಧಕರ 4 ಶ್ರೀಮನೋವಲ್ಲಭ | ಶಾಮಸುಂದರನ ಪ್ರೇಮಾನ್ವಿತ ನಿಸ್ಸೀಮ ಮಹಿಮ 5
--------------
ಶಾಮಸುಂದರ ವಿಠಲ
ಸುಳಾದಿ ಧ್ರುವತಾಳ ಶ್ರೀನಿವಾಸನೆ ನೀನು ಬ್ಯಾಗನೆ ಬಂದು ಸಾನುರಾಗದಿ ಸಂಸಾರ ಬಿಡಿಸೋ ಭಾನುಕೋಟಿ ಪ್ರಕಾಶಭಾಗ್ಯನಿಧಿಯೆನ್ನ ಮಾನವ ಕಾಯ್ವುದು ಮಂಗಳಾಂಗನೆ ಏನೇನು ಕಾರ್ಯಗಳು ನಿನ್ನಾಧೀನವಾಗಿರಲು ನಾನುನನ್ನದು ಎಂದು ಮಮತೆಯನೆ ಕೊಟ್ಟು ಅನ್ಯಾಯದಿಂದ ಎನ್ನzಣಿಸುವುದು ದಾನವಾಂತಕರಂಗ ಮುದ್ದುಮೋಹನವಿಠಲ ನೀನೆಗತಿಯೆಂದವಗೆ ನಿರ್ಭಯವೊ ಹರಿಯೆ 1 ಮಠ್ಯತಾಳ ಎನ್ನಪರಾಧಗಳು ಅನಂತವಿರುವದನ್ನು ನಿನ್ನಸ್ಮರಣೆ ಒಂದೆ ಸಾಕೊ ಹರಿಯೆ ಬನ್ನ ಬಡಿಸುವದ್ಯಾಕೊ ಮನ್ಮನದಲಿಪೊಳೆದು ಚೆನ್ನಾಗಿ ಸಲಹೋಘನ್ನಮಹಿಮಾ ಮುದ್ದುಮೋಹನವಿಠಲನೇ 2 ತ್ರಿವಿಡಿತಾಳ ಬಿಂಬನೆನೆಸಿಕೊಂಡು ಪ್ರತಿಬಿಂಬಗಳೊಳಗೆಕಾರ್ಯ ಅಂಭ್ರಣಿಸಹಿತವಾಗಿ ನೀಮಾಡಿ ಮಾಡಿ ಸೂವಿ ಅಂಬುಜನಾಭಾನೆ ಎನ್ನಾಡಂಭಕ ಭಕುತಿ ಬಿಡಿಸಿ ಸಂಭ್ರಮದಿಂದ ಕಾಯೊ ಕರುಣಾನಿಧೆ ಶಂಬರಾರಿಯಜನಕ ಮುದ್ದುಮೋಹನವಿಠಲ ಕಂಬದಿಂದಲಿ ಬಂದು ಭಕುತನ್ನಸಲಹಿದ ದೇವ 3 ಅಟ್ಟತಾಳ ಏನೇನುದಾನ ಅನಂತ ಮಾಡಲೇನು ಕಾನನದಲಿ ಪೋಗಿ ತಿರುಗಿತಿರುಗಿದಂತೆ ಜ್ಞಾನದಿಂದಲಿ ತಾರತಮ್ಯಾನುಸಾರ ನಿನ್ನ ಧ್ಯಾನವನ್ನ ಒಂದು ಕ್ಷಣವಾದರೂತೋರಿಸೊ ವಾನರ ವಂದ್ಯ ಮುದ್ದುಮೋಹನವಿಠಲ ನಾನಾವಿಧದಿಂದ ನಂಬಿದೆನೊ ಹರಿಯೇ4 ಆದಿತಾಳ ನೀನೆ ಅನಾಥಬಂಧು ನೀನೆ ಅದ್ಭುತಮಹಿಮ ನೀನೆ ಅಸುರಾಂತಕ ನೀನೆ ಅಮರಾದಿವಂದ್ಯ ನೀನೆ ಭವರೋಗ ವೈದ್ಯ ನೀನೆ ಭಕ್ತವತ್ಸಲ ನೀನೆ ಪರಿಪೂರ್ಣ ಸುಖ ನೀನೆ ಪರಂಜ್ಯೋತಿ ನೀನೆ ಪರಬ್ರಹ್ಮ ನೀನೆ ಪುರುಷೋತ್ತಮ ನೀನೆ ಪುಣ್ಯೈಶ್ವರ್ಯ ನೀನೆ ನಿರ್ಮಲ ಜ್ಞಾನ ನೀನೆ ಶಶಿ ಕೋಟಿಲಾವಣ್ಯ ನೀನೆ ಮುದ್ದುಮೋಹನ ವಿಠಲ ನೀನೆ ವೇಗದಿ ಬಂದು ನೀನೆ ರಕ್ಷಿಸು ಎನ್ನನು 5 ಜೊತೆ ಸ್ವಾಮಿ ಪುಷ್ಕರಣಿವಾಸ ಕಾಮಿತಫಲದಾನೆ ಶ್ರೀಮನೋಹರ ನಮ್ಮ ಮುದ್ದುಮೋಹನ ವಿಠಲ
--------------
ಮುದ್ದುಮೋಹನವಿಠಲದಾಸರು
ಏಳಯ್ಯ ಬೆಳಗಾಯಿತು ಪ.ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆಸುಳಿದೋರೈ ನಿನ್ನ ಹಾರಯ್ಸಿ ನಿಂದಿಹರುತಳುವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯಸೆಳೆಮಂಚದಿಂದಲೇಳು ಅಪವೇದವನು ತರಲೇಳು ಮಂದರವ ಹೊರಲೇಳುಛೇದಿಸುತ ಅಸುರರನು ಭೂಮಿಯ ತರಲೇಳುಕಾದಿ ಹಿರಣ್ಯನ ಕರುಳ ಕೊರಳೊಳಗೆ ಧರಿಸೇಳು ಕಾದುಬಲಿಬಾಗಿಲೊಳಗೆ ||ಭೇದದಲಿ ಭೂಮಿಯ ತ್ರಿಪಾದದಿಂದಳೆಯೇಳುಛೇಧಿಸುತ ಕ್ಷತ್ರಿಯರ ಕೊಡಲಿಯಿಂ ಕಡಿಯೇಳುಸಾಧಿಸುತ ಶರಧಿಯಲಿ ಸೇತುವೆಯ ಕಟ್ಟೇಳುನಂದಗೋಪನ ಉದರದಿ 1ಪುರಮೂರ ಗೆಲಬೇಕು ಅರಿವೆಯನು ಕಳೆದೇಳುದುರುಳರನು ಕೊಲಬೇಕು ತುರಗವಾಹನನಾಗುಪರಿಪರಿಯ ಕೆಲಸಗಳ ಮಾಡಲುದ್ಯೋಗಿಸದೆ ಮರೆತುನಿದ್ರೆಯಗೈವರೆ||ಉರಿಗೈಯನಟ್ಟಿದರೆ ಹರನೋಡಿ ಬಂದಿಹನುಗಿರಿಜೆ ವರವನು ಬೇಡಬೇಕೆಂದು ನಿಂದಿಹಳುಸುರಪಾರಿಜಾತವನು ಕೊಂಡುಸುರರಾಜಬಂದಿರುವನೇಳಯ್ಯ ಹರಿಯೆ 2ಆಲದೆಲೆಯಿಂದೇಳು ಮಾಲಕುಮಿ ಬಂದಿಹಳುಹಾಲುಗಡಲಿಂದೇಳು ಶ್ರೀದೇವಿನಿಂದಿಹಳುಕಾಲಹೆಡೆಯಿಂದೇಳು ಭೂದೇವಿ ಬಂದಿಹಳು ಸಾಲಮಂಚಿಗಳಿಂದಲಿ ||ಕ್ಷಿತಿನಾಥ ನೀನೇಳು ಸತ್ಯಭಾಮೆ ಬಂದಿಹಳುಮತಿವಂತ ನೀನೇಳು ಜಾಂಬವತಿ ಬಂದಿಹಳುಗತಿವಂತ ನೀನೇಳು ಶ್ರೀತುಳಸಿ ಬಂದಿಹಳು ಏಕಾಂತ ಸೇವೆಯಮಾಡಲು 3ಅಂಬುರುಹದಿಂದ ಜನಿಸಿದ ಬ್ರಹ್ಮ ಬಂದಿಹನುಗಂಭೀರ ಗಾಯನದ ನಾರದನು ನಿಂದಿಹನುರಂಭೆ ಮೇನಕೆ ಮೊದಲು ನರ್ತನಕೆಐದಿಹರು ಶಂಬರಾರಿಪಿತನೆ ಏಳು||ರಾಜಸೂಯವಕೊಳಲು ವಾಯುಸುತ ಬಂದಿಹನುತೇಜಿಯಾಟಕೆ ಅರ್ಜುನನು ಕರೆದು ಬಂದಿಹನುಸಾಜಧರ್ಮಜ ಅಗ್ರಪೂಜೆ ಮಾಡುವೆನೆಂದು ಹೂಜೆಯನುಪಿಡಿದುಕೊಂಡು 4ದೇವ ನಿನ್ನಂಘ್ರಿಯನು ಪೂಜೆ ಮಾಡುವೆನೆಂದುಕಾವೇರಿ ಕೃಷ್ಣೆ ಗೌತಮಿ ಗಂಗೆ ಮಲಪಹರಿಸಾವಧಾನದಿ ಯಮುನೆ ತುಂಗಾ ಸರಸ್ವತೀಭೀಮರಥಿ ನೇತ್ರಾವತಿ ||ದುರಿತ ಬಂಧನವನ್ನು ಪರಿಹರಿಸಿದೆಯೊ ಸ್ವಾಮಿದುರಿತ ದುಷ್ಕರ್ಮವನು ದೇವ ಎಂದರೆ ಸುಡುವೆದುರಿತ ತಾಪಕೆ ಚಂದ್ರ ನೀನೆನಿಸಿಕೊಂಡೆಯೊಶ್ರೀ ಪುರಂದರವಿಠಲನೆ 5
--------------
ಪುರಂದರದಾಸರು