ಒಟ್ಟು 82 ಕಡೆಗಳಲ್ಲಿ , 20 ದಾಸರು , 73 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚೂಡನಾಥೇಶ ನೋಡು ಕರುಣದಿ ಎನ್ನ ಪ ಮಾಡಿ ಸಲಹೊ ಮನ್ಮಥ ಸಂಹರನೆ ಅ.ಪ ಸೀತಾಪತಿನಾಮಾತಿಶಯವನತಿ ಪ್ರೀತಿಲಿ ಗೌರಿಗೆ ನೀ ತಿಳುಹಿಸಿದೆ 1 ಕುಪಥಗಳ ಬಿಡಿಸಿ ಸುಪಥವ ತೋರೊ 2 ಧರೆಯೊಳು ನೂತನಪುರದಿ ನೆಲೆಸಿರುವ ಗುರುರಾಮವಿಠಲಗೆ ಪರಮಮಿತ್ರನೆ 3
--------------
ಗುರುರಾಮವಿಠಲ
ಛೀ ನಿನ್ನ ಮೋರೆ ಮೇಲೆ - ಠೊಣ್ಯಛೀ ನಿನ್ನ ಮೋರೆ ಮೇಲೆ ಪ ನಿತ್ಯ ಪರಿ ಆಯುಷ್ಯವ ವ್ಯರ್ಥ ಕಳೆಯುತಿದ್ದೆ ಠೊಣ್ಯ 1 ಕಂಡ ಕಂಡಲ್ಲಿಗೆ ಪೋಗಿ ಧನಂಗಳ ಕೊಂಡು ಬರುತ್ತಲಿದ್ದೆಹೆಂಡಿರು ಮಕ್ಕಳು ಹಿತದವರೆಂದು ಕೊಂಡಾಡುತಲಿದ್ದೆಖೋಡಿ ಮಾತುಗಳನು ಹೇಳಿ ಮಂದಿಯ ಕುಂಡೆ ಚಿವುಟುತಿದ್ದೆಭಂಡ ಬಾಳು ಇದು ರಂಡೆ ಗಂಡ ಕಂಡ್ಯ ಯಮನ ಬಾಧೆ ಠೊಣ್ಯ2 ಮಾನವ ಜನ್ಮಕೆ ಬಂದು ಪುಣ್ಯ ಮತ್ತೇನೂ ಮಾಡದೆ ಹೋದೆದಾನವಾಂತ ಸತ್ಪಾತ್ರರಿಗೆ ನೀ ದೀನತ್ವವ ಪಡೆದೆಜ್ಞಾನಶೂನ್ಯ ಮದವೇರಿದ ಸೊಕ್ಕಿದ ಕೋಣಕೆ ಹುಟ್ಟಿದ್ದೆದೀನರಕ್ಷಕಾದಿಕೇಶವ ವಿಠಲಂಗೆ ನೀನತಿ ದೂರಾದೆ ಠೊಣ್ಯ 3
--------------
ಕನಕದಾಸ
ದುರ್ಯೋಧನ ಮಹರಾಜನೆ | ಅ ನಾರ್ಯ ಜನರ ಕಲ್ಪಭೂಜನೆ ಪ ನಿರ್ಹೇತುಕ ದ್ವೇಷ ಮಾಡುವೆ | ಹಾ ಹಾ ಅ.ಪ ಹರಿಭಕ್ತಿಗೆ ಮಾನಭಂಗ ಮಾಡಲಾಪೆಯ ದುರುಳ ಘೋಷಯಾತ್ರೆಯ ಜ್ಞಾಪಿಸಿಕೊ ದುಷ್ಟ 1 ಜಲದೊಳು ಮುಳುಗಿ ಸ್ವಬಲವನೆಬ್ಬಿಸುವೆನೆಂ ದೆಲೆ ಭೀಮಗೇಕಿದಿರಾದÀಯ್ಯ ನೀನು 2 ಶ್ರೀಪ ಗುರುರಾಮ ವಿಠಲಗೆ ದೂರನೆ | ಹಾ ಹಾ 3
--------------
ಗುರುರಾಮವಿಠಲ
ನಾನೊಬ್ಬಳ್ಭಾರತದಲ್ಲಿದ್ದೆ ಬಂದೆ ಪೂರ್ವದ ಹಿಂದೆ ಪ ಹೊಂದಿ ಐವರಿಗಾನಂದ ಸುಂದರಿ 1 ಮಾರಿ ಕೌರವರಿಗೆ ಹಾರ ಪಾಂಡವರಿಗೆ ಭಾರತಿ ಧಾತ್ರಿಗೆ ಕ್ಷೀರ ಮಾರಪಿತಗೆ 2 ನರಸಿಂºವಿಠಲಗೆ ಕರುಣದ ಕರಡಿಗೆ ಉರಿ ದುರುಳರಿಗೆ ಮರೆ ಶರಣರಿಗೆ 3
--------------
ನರಸಿಂಹವಿಠಲರು
ನಿತ್ಯ ಪ ಭಾರತಿ ಭಾಸ್ವರಕಾಂತೆ ನಿನ್ನ ಸಾರುವೆ ಸತತ ನಿಶ್ಚಿಂತೆ ಆಹಾ ವಾರಿಜಸಮಪಾದ ತೋರಿಸು ಮಮ ಸುಹೃ - ನಿತ್ಯ ಗಾರುಮಾಡದೆ ಜನನಿ ಅ.ಪ ಹರಿಯ ಪಟ್ಟದ ನಿಜರಾಣಿ ಎನಗೆ ಹರಿಯ ತೋರಿಸೆ ಹೇ ಕಲ್ಯಾಣಿ ನಿನಗೆ ಕರುಣಿಯೆ ಕೋಕಿಲವಾಣಿ ಆಹಾ ಹರಿಹರಾದ್ಯನಿಮಿಷ ಕರಕಮಲಪೂಜಿತೆ ವರಭಾಗವತರಗ್ರೇಸಳೆಂದು ನಮಿಸುವೆ 1 ಮೂರೇಳು ತತ್ತ್ವಾಭಿಮಾನಿ ಎನಿಸಿ ಮೂರಾರು ಭಕುತಿಯಿಂದಲಿ ನೀ ಸತತ ಮೂರು ಜೀವರೊಳು ಪ್ರೇರಣಿಯಾಗಿ ಮೂರೊಂದು ಮೊಗನ ಕಲ್ಯಾಣಿ ಆಹಾ ಮೂರು ಬಗೆಯ ಜನಕೆ ಮೂರು ವಿಧದಿ ಗತಿ ಮೂರು ಕಾಲಕೆ ಇತ್ತು ಮೂರುಮಾಡುವಿ ದೇವಿ 2 ಮಾತರಿಶ್ವನ ಪಾದಕಮಲ ಯುಗಕೆ ನೀತಷಟ್ಟದಳೆ ನಿರ್ಮಲ ಮನಸು ಆತುರದಲಿ ಮಾಡು ವಿಮಲೆ ನಮಿಪೆ ಕಾತರಭವಶ್ರಮಶಮಲಾ ಆಹಾ ಜಾತರೂಪೋದರತಾತ ಶ್ರೀ ಗುರುಜಗ - ನ್ನಾಥವಿಠಲಗೆ ನೀ ದೂತನೆನಿಸು ಎನ್ನ 3
--------------
ಗುರುಜಗನ್ನಾಥದಾಸರು
ನೋಡಿದೆನು ವಿಠ್ಠಲನ ದಣಿಯ ಪ. ನೋಡಿದೆನು ವಿಠ್ಠಲನ ರೂಪವ ಪಾಡಿದೆನು ಮನದಣಿಯ ಹರುಷವು ಮೂಡಿತಂಗದಿ ಮುಗಿದು ಕೈ ನಾ ಮಾಡಿ ಸಾಷ್ಟಾಂಗ ಬೇಡಿ ಮನಸಿನಭೀಷ್ಟ ಸಂತತ ನೀಡು ನಿನ್ನಯ ಚರಣ ಸ್ಮರಣಿಯ ಪಾಡಿಪೊಗಳುವ ಭಾಗ್ಯಬೇಕೆಂದು ಕಾಡಿದೆನು ಹರಿಯಾ 1 ಪಂಚ ಪಂಚ ಉಷಃ ಕಾಲದೀ ಪಂಚ ಬಾಣನ ಪಿತಗೆ ಆರುತಿ ಮುಂಚಿನೊಸನಗಳೆಲ್ಲ ತೆಗೆಯುತ ತೈಲವೆರೆಯುವರೂ ಪಂಚರೂಪಗೆ ಚಂದ್ರಭಾಗೆಯ ಪಂಚ ಗಂಗೋದಕಗಳೆರೆಯುತ ಅಮೃತ ಸ್ನಾನಗೈಸುವ ಸೊಬಗ ನೋಡಿದೆನು 2 ಬೆಣÉ್ಣ ಬಿಸಿನೀರೆರೆದು ಕೃಷ್ಣಗೆ ಸಣ್ಣ ವಸ್ತ್ರದಿ ವರಸಿ ಮೈಯ್ಯನು ಘನ್ನ ಪೀತಾಂಬರವನುಡಿಸುತ ಜರಿಯ ಶಾಲ್ಹೊದಿಸಿ ಬಣ್ಣದೊಸ್ತ್ರದ ಪಾಗು ಸುತ್ತುತ ಬೆಣ್ಣೆ ಕಳ್ಳಗೆ ಅಂಗಿ ತೊಡಿಸುತ ಸಣ್ಣ್ಣ ಮಲ್ಲಿಗೆ ಹಾರ ಉಪವೀತ ಸಡಗರವ ಕಂಡೆ 3. ಗಂಧ ಅಕ್ಷತೆ ಪುನುಗು ಜವ್ಜಾಜಿ ಛಂದದಾ ಕಸ್ತೂರಿ ತಿಲಕವು ಸುಂದರಾಂಗದ ಮುಖಕೆ ಕನ್ನಡಿ ತೋರಿಸುವರಿಂತೂ ಅಂದದಾ ಪಕ್ವಾನ್ನ ತರುತಲಿ ಇಂದಿರೇಶಗೆ ಅರ್ಪಿಸುತ್ತಲಿ ಒಂದು ಧೂಪಾರತಿಯ ಬೆಳಗಿ ಒಂದು ಏಕಾರ್ತಿ 4 ಮಾಡಿ ಪಂಚಾರ್ತಿಗಳ ವಿಠಲಗೆ ಪಾಡುವರು ಮನದಣಿಯ ಭಕ್ತರು ನೀಡುವರು ಪಂಚಾಮೃತಂಗಳ ಬೇಡುವರು ಹರಿಯ ರೂಢಿಯೊಳು ಪಂಡರಿಯ ಕ್ಷೇತ್ರವ ಬೇಡಿದವರನು ಪೊರೆವ ಗೋಪಾಲಕೃಷ್ಣವಿಠ್ಠಲನು 5
--------------
ಅಂಬಾಬಾಯಿ
ಪದ್ಮಾಕ್ಷಿ - ಪದ್ಮಾಕ್ಷಿ ಪ ಪದ್ಮಜ ಜನನಿಯೆ | ಪದ್ಮಾನನೆ ಶಿರಿಪದ್ಮ ಭವೆಯೆ ಹೃ | ತ್ಪದ್ಮದಿ ನೆಲೆಸೈ ಅ.ಪ. ಗುಣಕಾರ್ಯಗಳನು | ಕ್ಷಣ ಬಿಡದಲೆ ನೀವಿನಿಮಯ ಗೈಧರಿ | ಗನುಕೂಲೆನಿಸಿದೆ 1 ನೀ ವೊಲಿಯಲು ತವ | ಭ್ರೂ ವಿಲಾಸದಲಿಆ ವಿಪ ಮುಖರಿಗೆ | ತೀವ್ರ ಪದಪ್ರದೆ 2 ನಂದ ನಂದನೇ ಆ | ಬೃಂದಾರಕ ಮುನಿವಂದಿತ ಪದಯುಗೆ | ವಂದಿಪೆ ಪಾಲಿಸು 3 ಸಿಂಧು ಶಯನ ಹರಿ | ವಕ್ಷೊನಿವಾಸಳೆಕುಂದನು ಎಣಿಸದೆ | ನಂದವ ನೀವುದು 4 ಅಸಮನೆನಿಪ ಗುರು | ಗೋವಿಂದ ವಿಠಲಗೆಬಿಸರು ಹಾಂಬಕೆ ಸ | ಮಾಸಮಳೆನಿಪಳೆ 5
--------------
ಗುರುಗೋವಿಂದವಿಠಲರು
ಪಾದ ನಂಬೋ ಸಿದ್ಧಾಂತ ಸಾರವ ಹೃದಯದಿ ತುಂಬೋಪ ಶತಕೋಟಿ ಜನ್ಮ ಸುಕೃತದಿ ಅತುಳ ವೈಷ್ಣವಜನ್ಮ ದೊರಕಿತು ನಿಜದಿ ಪಾದ ರಜದಿ ಮುಣುಗುತ ದುರ್ವಿಷಯಗಳನು ನಿಗ್ರಹಿಸೊ ನೀ ತ್ವರದಿ 1 ಈತನ ವಾಕ್ಯವೆ ವೇದವಾಕ್ಯಗಳೆಂದರಿಯೊ ಜಿಷ್ಣು ಸರ್ವೇಶ ಧಾತೃಗಳೊಂದೆಂಬ ದು ರ್ವಾದಿ ದುರ್ಗಜಕೆ ಕೇಸರಿಯಾಗಿರುವ 2 ವಟು ವೃಷ್ಟಿವಂಶ ಲಲಾಮ ತಟಿತಾಭ ಜಗನ್ನಾಥ ವಿಠಲಗೆ ಪ್ರೇಮಾ ಸ್ಫುಟರೂಪತ್ರಯನೆ ನಿಷ್ಕಾಮಾ ನಿ ಷ್ಕುಟಿಲ ಭಾರತಿರಮಣ ಹನುಮಂತ ಭೀಮ 3
--------------
ಜಗನ್ನಾಥದಾಸರು
ಪಾಲಸಾಗರ ಸಂಭೂತೆ ಕೈವಲ್ಯದಾತೆ ಪಾಲಿಸೆನ್ನನು ನಿಜಮಾತೆ ಪ ಆಲಿಸು ನಿನ್ನಯ ಬಾಲನ ನುಡಿ ಈ ಕಾಲದಿ ಮನ್ಮನ ಆಲಯದೊಳು ನಿಂದು ಅ.ಪ ನಿತ್ಯ ನಿರ್ಮಲೆ ಈ ಮಹಾಮಹಿಮ ವಿಶಾಲೆ ಕಾಮನ ಜನನಿ ಸುಲೀಲೆ ಜಲಜಸುಮಾಲೇ ತಾಮರಸಾಂಬಕೆ ಸಾಮಜಭವ ಸು - ತ್ರಾಮ ಪ್ರಮುಖ ಸುರಸ್ತೋಮ ನಮಿತಗುಣ - ಪಾದ ಯಾಮ ಯಾಮಕೆ ನಿತ್ಯ ನೇಮದಿ ಭಜಿಪೆ ಶ್ರೀರಾಮನ ತೋರೆ 1 ವೇದಾಭಿಮಾನಿ ಅಂಬ್ರಾಣಿ ಸುಗಣಸನ್ಮಣಿ ವೇದವತಿಯೆ ರುಕ್ಮಿಣಿ ವೇದವಂದ್ಯಳೆ ಗುಣಪೂರ್ಣೇ ನಿತ್ಯಕಲ್ಯಾಣಿ ಖೇದಗೊಳಿಸುವ ಭವೋದಧಿ ದಾಟಿಸಿ ಮೋದ ಕೊಡುವ ಪಂಚಭೇದಮತಿಯನಿತ್ತು ಯಾದವಗುಣವನುವಾದ ಮಾಡಿಸಿ ನಿತ್ಯ ಮೋದಬಡಿಸು ಶ್ರೀ ಮಾಧವರಾಣಿ 2 ಜಾತರೂಪಾಭಾಶುಭಗಾತ್ರಿ ಈ ಜಗಕೆ ಧಾತ್ರಿ ಸೀತೆ ನೀನೆ ಲೋಕಪವಿತ್ರೆ ಧಾತಾಪ್ರಮುಖಸುರಸ್ತೋತ್ರೇ ನೀರಜನೇತ್ರೆ ವೀತಭಯಳೆ ತ್ರಿನೇತ್ರೇ ಪಾತಕವನಕುಲವಿತಿಹೋತ್ರ ಸುರ - ವಿನುತ ಸುಖವ್ರಾತ ಕೊಡುವ ನಮ್ಮ ದಾತ ಗುರುಜಗನ್ನಾಥವಿಠಲಗೆ ನೀ ನೀತಸತಿಯೆ ಎನ್ನ ಮಾತೆ ವಿಖ್ಯಾತೆ3
--------------
ಗುರುಜಗನ್ನಾಥದಾಸರು
ಪೋಷಿಸೆನ್ನ ದಾಸಶ್ರೇಷ್ಠನೆ ವಸುಧಿದೇವ ನಿಕರಪಾಲ ವ್ಯಾಸರಾಯನ ಪ್ರೇಮಪಾತ್ರನೆ ಪ ವೇದಸಾರವಾದ ಕವನಗೈದು ಪ್ರಾಕೃತದಿ ಜಗದಿ ಭೇದಜ್ಷಾನ ತಾರತಮ್ಯ ಬೋಧಿಸಿದ ಸಾಧುಶೀಲ 1 ಜ್ಞಾನಿ ವೀಣಾಪಾಣೆ ದೇವ ಮೌನಿ ದಾನಿ | ಸ ನ್ಮಾನಿ ಗಾನಲೋಲ ದೀನಪಾಲನ 2 ನಂದಗೋಪಕಂದ ಶಾಮಸುಂದರವಿಠಲಗೆ ಪರಮ ಯೆಂದು ಸಾರಿ ಸುಪಥ ತೋರಿ ಮಂದÀರನ್ನು ಪೊರೆದ 3
--------------
ಶಾಮಸುಂದರ ವಿಠಲ
ಬೆಳಗಿರಿ ಶ್ರೀಹರಿಗೆ ಆರುತಿಯಾ ನಾರಿಯರು ಪ ಇಂದುಬಿಂಬ ಮುಖಿಯರು | ಮದನಾರಿ ಸಖಗೆ ವೇದವೇದ್ಯ ಯದುಕುಲನಾಥಗೆ1 ಜಗದಾದಿ ಪತಿಗೆ ನಗಪಾಣಿಗೆ ಜಗದಾದಿ ಗಜವರ ಪಾಲಿಗೆ 2 ಶಾಮಸುಂದರ ವಿಠಲಗೆ ಬೇಗ ಕೋಮಲಾಂಗರಘುರಾಮ ಚಂದ್ರಗೆ 3
--------------
ಶಾಮಸುಂದರ ವಿಠಲ
ಬೆಳಗೆ ಬೇಗ ಭ್ರಮರವೇಣಿ ನಳಿನನಾಭನಿಗಾರುತಿಯ ಪ ಪಾಲಿಸಿದ ಶ್ರೀಲೋಲನಾದ ವಾಲಿ ಮದವ ಭಂಜಗೆ 1 ಇಂದು ಮುಖದ ಸುರೇಂದ್ರವರದ ನವನೀತ ಚೋರ ನಂದಸುತ ಗೋವಿಂದಗೆ 2 ತಟಿತ ನಿಭ ವೆಂಕಟ ಗಿರೀಶ ಮೂರ್ತಿ ಶಾಮಸುಂದರ ವಿಠಲಗೆ 3
--------------
ಶಾಮಸುಂದರ ವಿಠಲ
ಮಂಗಳಂ ಶ್ರೀ ರಂಗನಿಗೆ ಗಂಗೆಯ ಜನಕಗೆ ಪ ಶರಧಿ ಪೊಕ್ಕವನಿಗೆ ಗಿರಿಯ ಪೊತ್ತವನಿಗೆ ಧರೆಯ ನೆಗಹಿದವಗೆ ನರಹರಿ ರೂಪಗೆ 1 ಬಲಿಯನು ತುಳಿದಗೆ ಕಲಿಭೃಗು ತನುಜಗೆ ಶಿಲೆಯ ಪೆಣ್ಮಾಡಿದವಗೇ ಹಲಧರನನುಜಗೆ 2 ಚಾರು ಬೌದ್ಧನಿಗೆ ವೀರರಾಹುತನಿಗೆ ಕಾರುಣ್ಯ ಸಾಗರಗೆ ಶ್ರೀ ರಂಗೇಶವಿಠಲಗೆ 3
--------------
ರಂಗೇಶವಿಠಲದಾಸರು
ಮಂಗಳಂ ಶ್ರೀ ರಘುಪುಂಗವನಿಗೆ ಜಯ ಶುಭ 1 ಶಿಷ್ಟ ಜನಗಳಿಗೆ ಇಷ್ಟಾರ್ಥಗಳೀವ ವೃಷ್ಟಿವರೇಣ್ಯ ಶ್ರೀ ಕೃಷ್ಣ ಮೂರುತಿಗೆ 2 ಸಚ್ಚಿದಾನಂದ ಸ್ವರೂಪಗೆ ಮಂಗಳಂ ಸತ್ಯವತಿ ಸುಕುಮಾರಗೆ ಮಂಗಳಂ3 ಹೇಮಕಶಿಪುವಿನ ತನಯನಿಗೊಲಿದ ನಾಮಗಿರೀಶ ಶ್ರೀ ಸ್ವಾಮಿನೃಸಿಂಹಗೆ 4 ತನ್ನ ಭಕುತರಿಗೆ ಹೊನ್ನು ಮಳೆಗರೆವ ಪನ್ನಗಶಯನ ಪ್ರಸನ್ನವಿಠಲಗೆ 5
--------------
ವಿದ್ಯಾಪ್ರಸನ್ನತೀರ್ಥರು
ಮಂಗಳಾರತಿಎತ್ತಿ ಮಾಮನೋಹರನಿಗೆ ಪ ಅಂಗನೆಯರೆಲ್ಲ ಬಂಗಾರದ ತಟ್ಟೆಯಲ್ಲಿ ಅ.ಪ ವೇದಚೋರನ ಕೊಂದು ಭೂಧರವನು ಪೊತ್ತು ಮೇದಿನಿಯನು ಎತ್ತಿ ಕಂಬದಿ ಬಂದವಗೇ 1 ಭೂಮಿದಾನವ ಕೇಳಿ ಭೂಮಿಪರನು ಸೀಳಿ ಭೂಮಿಜಾತೆಯನಾಳಿ ಭೂ ಭಾರವಳಿದವಗೆ 2 ಮುದ್ದುಕುದುರೆಯ ಏರಿದ ಗುರುರಾಮ ವಿಠಲಗೆ 3
--------------
ಗುರುರಾಮವಿಠಲ