ಗುರು ಮುಖ್ಯಪ್ರಾಣದರಸನೆ ನೀ ಎನ್ನ
ಕರುಣಿಸು ಕೃಪೆಯಿರಿಸು ಪ.
ನಿತ್ಯ ಪರಿಪೂರ್ಣನಾಗುತ
ಪರಮಾತ್ಮನ ಮತಕನುಸರಿಸಿ
ಧರೆಗೆ ಭಾರವಾದ ದುರುಳರ ವಧೆಗೈದ
ಮರುತಾತ್ಮಜ ಮನೋಹರ ಮೂರುತಿಯಾದ 1
ರಾಮನಪ್ಪಣೆಯಿಂದ ಆ ಮಹಾಂಬೋಧಿಯ
ಭೀಮ ವಿಕ್ರಮನುರೆ ದಾಂಟಿ ಬಂದು
ರಾಮಣೀಯಕರವಾದ ರಾಮಮುದ್ರಿಕೆಯನ್ನು
ತಾ ಮಣಿಯುತ ಸೀತಾ ಮಾನಿನಿಗಿತ್ತ 2
ಆ ಮಹಾಲಕ್ಷ್ಮಿಯ ನೇಮವ ಕೈಗೊಂಡು
ತಾಮಸಿಚರರ ನಿರ್ನಾಮಗೈದು
ಹೇಮಲಂಕೆಯನುರೆ ಹೋಮವಗೈಯುತ
ಚೂಡಾಮಣಿ ತಂದಿತ್ತ 3
ಕ್ರೂರ ಕೌರವಕುಲ ಘೋರ ಕಾನನಕೆ ಕು-
ಠಾರನಾಗುತಲಿ ಸಂಹಾರಗೈದು
ವಾರಿಜಾಕ್ಷನ ಕೃಪೆಯಿಂದ ಮಾಗಧನನ್ನು
ಚೀರಿದ ಕುಂತಿಕುಮಾರ ಮೂರ್ಲೋಕದ 4
ಹರಿ ಸರ್ವೋತ್ತಮನೆಂದು ಧರೆಗೆ ಸಾರುತ ಬಂದು
ವರ ವೈಷ್ಣವಮತ ಸ್ಥಿರವ ಮಾಡಿ
ಧರಣಿಯೊಳಗೆ ತಾತ್ವರ್ಯನಿರ್ಣಯವೆಂಬ
ಪರಮ ಗ್ರಂಥವಗೈದ ಗುರು ಮಧ್ವಾಚಾರ್ಯನೆ 5
ಇಂತೀ ಮೂರವತಾರವಾಂತು ದಾನವರಿಂಗೆ
ಸಂತಾಪಗೈದ ಮಹಾತುಮನೆ
ಚಿಂತಿತಾರ್ಥವನೀವ ಚಿಂತಾಮಣಿ ಎಂದು
ಸಂತತ ಭಜಿಪೆನು ಶಾಂತ ಹುನುಮಂತನೆ 6
ಶ್ರೀ ರಾಘವ ಲಕ್ಷ್ಮೀನಾರಾಯಣನ ಪಾದ-
ಚಾರಕನಾದ ಗಂಭೀರನಿಗೆ
ನೀರಜಾಂಡದೊಳಾರು ಸಮಾನರು
ಕ್ಷಿರಸಾಗರಶಯನ ನೀನೊಬ್ಬನಲ್ಲದೆ 7