ವಾರಿಜಾಸನ ವಂದ್ಯ ಚರಣಾ ಲಕ್ಷ್ಮೀ-
ನಾರಾಯಣ ಎನ್ನೊಳಿರಿಸು ಸತ್ಕರುಣಾ ಪ.
ಶ್ರೀರಮಣಿಯ ಕೂಡಿ ನೀನು ದಯ
ದೋರಲನ್ಯರಿಗೆಂದರಂಜೆ ನಾನು
ದಾರಿದ್ರ್ಯ ಭಯ ದೋಷಗಳನು
ದೂರ ಹಾರಿಸಿ ಪೊರೆವ ಸಕಲ ಸುರಧೇನು1
ನಿನ್ನಂಥ ದಾತರಿನ್ನಿಲ್ಲ ಪರ-
ಮೋನ್ನತ ಪದವ ಧ್ರುವನಿಗಿತ್ತಿಯಲ್ಲ
ಮುನ್ನ ಕುಚೇಲನ ಸೊಲ್ಲ ಕೇಳಿ
ಅನ್ಯರಿಗೊಲಿಯದ ಸಿರಿಯಿತ್ತಿಯಲ್ಲ 2
ಇಂದಿರಾವರ ವೆಂಕಟೇಶ ನೀ
ಬಂದುದರಿಂದಾದುದೆನಗೆ ಸಂತೋಷ
ಹೊಂದಿದೆ ನಿನ್ನನು ಶ್ರೀಶ ಪೂ-
ರ್ಣೇಂದು ವದನ ಕರುಣಾರಸ ಭೂಷಾ 3