ಒಟ್ಟು 370 ಕಡೆಗಳಲ್ಲಿ , 65 ದಾಸರು , 319 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಟ್ಟು ಇಕ್ಕದವರ ಮನೆಯ ಪ ಅಟ್ಟು ಇಕ್ಕದವರ ಮನೆ ಪಾಯಸ ಕಜ್ಜಾಯವಅಟ್ಟರೇನು ಅಡದಿದ್ದರೇನು ಅ ನಿಚ್ಚಣಿಗೆ ದೋಟಿಗೆ ನಿಲುಕದ ಹಣ್ಣಿನ ವೃಕ್ಷನಿಚ್ಚ ನಿಚ್ಚವು ಬಾಗಿ ಫಲವಾದರೇನುಔಚಿತ್ಯ ವಿದ್ಯೆಯನರಿಯದ ದೊರೆ ತಾನುಮೆಚ್ಚಿದರೇನು ಮೆಚ್ಚದಿದ್ದರೇನು 1 ದಾರಿದ್ರ್ಯಕ್ಕೊದಗದ ದ್ರವ್ಯ ಪದಾರ್ಥದಏರಿ ಇದ್ದರೇನು ಪರ್ವತವಿದ್ದರೇನುಶರೀರ ಸೌಖ್ಯ ಶಮನಕ್ಕಾಗದ ಹೆಣ್ಣುಊರಲಿದ್ದರೇನು ತೌರೂರಲಿದ್ದರೇನು 2 ಬಣಗು ದೈವಗಳಿಗೆಶರಣೆಂದರೇನು ಶರಣೆನದಿದ್ದರೇನು 3
--------------
ಕನಕದಾಸ
ಅಧ್ಯಾಯ ಒಂದು ಜಯ ವಿಬುಧನುತರ ಚರಣ ಜಯತು ನಾಗಾಭರಣ ಜಯ ಭಕ್ತ ಜನ ಶರಣ ಜಯ ದುಃಖಹರಣ 1 ಜಯತು ಖಳಕೃತಕದನ ಜಯಜಯತು ಜಿತಮದನ ಜಯ ಜಯತು ಸುಖಸದನ ಜಯ ಪಂಚವದನ2 ಜಯತು ಶ್ರೀಶಕೈಲಾಸ ಜಯ ಭಜಕವಿಶ್ವಾಸ ಜಯ ಅನಂತಾದ್ರೀಶ ಪ್ರಿಯಪಾರ್ವತೀಶ 3 ಪದ ಮುಂಚೆ ನುತಿಸುವೆ ಭಕುತಿಯಿಂದಲಿ ಪಂಚವದನನ ಪಾದಪಂಕಜ ಚಂಚಲಾಗದಲಿರಲಿ ಮನ ಮತಿ ಮುಂಚೆ ಕೊಡುಯೆಂದು ಹಿಂಚೆ ಕುಲ ದೇವಾದಿ ಪದಯುಗ ವಂಚನೆಯು ಇಲ್ಲದಲೆ ನುತಿಸುವೆ ಹಂಚಿಕಿಂದಲಿ ಕುಶಲಬುದ್ಧಿ ಪ್ರಪಂಚ ಕೊಡುಯೆಂದು 1 ಮನಸಿಜನ ಗೆದ್ದವರು ಮೇದಿನಿಯ ಹುಡಿಕಿದರಿಲ್ಲಾ ಮತ್ತೀಮನಸು ಗೆದ್ದವರುಂಟೆಯೆಲ್ಲರಿ ಗನುಭವಾಗಿಹುದು ಮನಸಿಜನ ಗೆದ್ದಂಥ ರುದ್ರನು ಮನಕೆ ತಾ ಅಭಿಮಾನಯಾಗಿಹ ನೆನುತ ಮೊದಲಾತನನ ನುತಿಸಿದೆ ಮನಸಿನೊಳಗಿಟ್ಟು 2 ಸಾರಲಿಂಗ ಪುರಾಣದರ್ಥದ ಸಾರಿ ತಿಳುವುತ ಮತ್ತೆ ಗ್ರಂಥ ವಿ ಚಾರ ಮಾಡುತ ಅದರ ಅರ್ಥವ ಪೂರ್ಣ ತಿಳಕೊಂಡು 'ಶ್ರೀರತಾನಂತಾದ್ರಿ' ರಮಣನ ಸಾರ ಕೃಪೆಯಿಂದಲೆಯೆ ಪೇಳುವೆ ಪಾರ್ವತೀಶಗೆ ಪ್ರೀತಿಕರ ಶಿವ ಪಾರಿಜಾತವನು 3 ಪದ ಪೂರ್ವದಲ್ಲಿ ಪಾರ್ವತಿಯು ಪರ್ವತಶ್ರೇಷ್ಠ ಹಿಮ ಪರ್ವತದ ಮಧ್ಯದಲ್ಲಿ ಸರ್ವಗುರು ಕೈಲಾಸ ಪಾರ್ವತೀಶನ ಮನ:ಪೂರ್ವಕದಿ ಬಯಸುತಲ ಪೂರ್ವ ತಪ ಮಾಡುತಿರುವಳಲ್ಲೆ ಪಾರ್ವತಿಯ ಕಷ್ಟ ಹಿಮಪರ್ವತನು ತಾ ನೋಡಿ ಸರ್ವ ಕಾರ್ಯವ ಬಿಟ್ಟು ಇರುವ ಬಲು ಚಿಂತೆಯಲಿ ಸರ್ವಸಂಪನ್ನಳಾಗಿರುವಳೆನ್ನ ಮಗಳು ಈ ಪಾರ್ವತಿಗೆ ತಕ್ಕ ವರನಿರುವನಾರೆಂದು 1 ಬಂದನಾಗಲ್ಲವನ ಮಂದಿರಕೆ ನಾರದನು ಮುಂದೆ ಗಿರಿರಾಜ ಅಲ್ಲಿಂದ ಆತನಕಂಡು ಇಂದು ಇಲ್ಲಿಗೆ ನೀವು ಬಂದು ಕಾರಣವೇನುಯೆಂದು ಕೇಳಿದನು ಅಂದ ಮಾತನ್ನು ಕೇಳಿ ಮುಂದೆ ಮುನಿರಾಜ ತಾ ಮಂದಹಾಸದಿ ನಗುತವೊಂದೊಂದು ಕಥೆ ಪೇಳಿ ಛಂದದಲಿ ಮನಸಿಗಾನಂದ ಬಡಿಸುತ ನುಡಿದ ಬಂದ ಕಾರ್ಯವ ಅವನ ಮುಂದೆ ವಿಸ್ತರದಿ 2 ಪದ ತಿಳಿಯೋ ನೀ ಗಿರಿರಾಜ ನಾ ಬಂದ ಕಾರ್ಯವ ತಿಳಿಯೋ ನೀ ಗಿರಿರಾಜ ಭೋರಾಜರಾಜಾ ತಿಳಿಯೋ ನಿನಗೊಬ್ಬಳಿಯ ಬಂದಿಹ ನಳಿಯನಾಗಿ ಮುಖಕಳೆಯು ಉಳ್ಳವ ಇಳೆಯೊಳಿಂಥಾ ಅಳಿಯನ ಸಮ ಅಳಿಯನಿಲ್ಲ ಕಾಲ್ಗಳೆಯುದಲೆ ಇರು ಪ ಹರಿಯಿರುವ ಪ್ರಖ್ಯಾತಾ ಸರ್ವರಿಗೆ ಆತನೆ ದೊರೆಯೆನಿಸಿಕೊಂಬಾತಾ ಕರಿರಾಜ ಕೂಗುತ ಕರೆಯಲೊದಗಿದನಾತಾ ತನ್ನ ಸ್ಮರಿಸಿದವರನು ಮರೆಯದಲೆ ಪೊರೆವಾತಾ ಅನಾಥಾನಾಥ ಧರೆಯೊಳಗೆ ಶ್ರೀಹರಿಯ ಮೂರ್ತಿಯ ಸರಿಯುಯಿಲ್ಲವು ಮರೆಯದಲೆ ಆ ಸಿರಿಯ ರಮಣನ ಕರೆಯ ಕಳಿಸುತ ಹಿರಿಯ ಮಗಳನು ಹರಿಗೆ ಅರ್ಪಿಸು1 ಬಡವನಲ್ಲವು ಆತಾ ಬಹುಬಡವ ಭಕ್ತರ ದೃಢವ ನೋಡುವನಾತಾ ತಾ ಬಿಡದೆ ಕರವನು ಪಿಡಿವ ಸ್ನೇಹ ಸಮೇತಾ ಬೇಡಿದ್ದು ತ್ವರದಲಿ ಕೊಡುವನವ ಬಹು ದಾತಾ ಲಕ್ಷ್ಮಿಯಸತ್ತಾ ದೃಢವಿರಲಿ ಮನ ಪೊಡವಿರಲಿ ಉಂಬುಡುವ ಮಗಳನು ತಡವು ಮಾಡದೆ2 ಕೊಡುವದುಚಿತವು ಒಡವೆಗಳು ಬಹಳಿಡುವುತಲೆ ಸುಖಪಡುವಳಾಕೆಯು ಎಂಥವನು ಅವ ತಾನು ಎಂಬಂಥ ಮನಸಿನ ಭ್ರಾಂತಿ ಬಿಡು ಎಲೋ ನೀನು ಅತ್ಯಂತವಾಗಿಹ ಶಾಂತ ಮೂರುತಿ ತಾನು ಎಂತೆಂಥವರಿಗವ ನಂತ ತಿಳಿಯದು ಇನ್ನು ಮತ್ಹೇಳಲೇನು ಇಂಥ ಶ್ರೀಮದನಂತಾದ್ರೀಶನು ಕಾಂತಿಯಿಂದಿರುವಂಥ ಮಗಳಿಗೆ ನಿಶ್ಚಿಂತೆಯಿಂದಿರು 3 ಪದ ಮುನಿಯ ಮಾತನು ಕೇಳಿ ಮನಸಿನೊಳು ಹಿಗ್ಗುತಲೆ ಮನದ ಚಿಂತೆಯ ಬಿಟ್ಟು ಮನಸಿಜಪಿತನು ಎನ್ನ ಮನಿ ಅಳಿಯನಾದ ಎನ್ನ ಜನುಮ ಸಾರ್ಥಕವಾಯಿ ತೆನುತ ತಿಳಿದನು ತಾನು ಘನ ಹಿಮಾಚಲನು ಅನುದಿನವು ತನ್ನಲ್ಲಿ ಅನು ಕೂಲವಾಗುತಲೆ ತನಗೆ ಹಿತಮಾಡುತಿಹ ಜನರೊಳಗೆ ಮ- ತ್ತಾಪ್ತ ಜನರನ್ನು ಕೇಳದಲೆ ಅನುಮಾನ ಬಿಟ್ಟು ಹೀಗೆನುತ ಮಾತಾಡಿದನು ಮುನಿಯ ಮುಂದೆ ಪದ ಕೊಡುವೆನು ಆ ವಿಷ್ಣುವಿಗೆ ಮಗಳನ್ನು ಕೊಡುವೆನು ಕೊಡುವೆನು ಸಂತೋಷ ಬಡುವೆನಾತನ ಪಾದಾ ಹಿಡಿವೆನು ಚಿಂತೆಯ ಬಿಡುವೆನು ಮಗಳನ್ನು ಪ ನಾರದ ನಿನಮಾತು ಇನ್ನು ಸರಿ ಬಾರದು ಆರಿಗೆ ಮುನ್ನ ನೀರದ ವರ್ಣನ ತೋರಿದ ಬುದ್ಧಿ ವಿ ಶಾರದ ನಿನ್ನ ಮಾತು ಮೀರದೆ ಮಗಳನ್ನು ಕೊ....1 ನಿನ್ನ ಮಹಿಮೆ ಬಲ್ಲೆ ನಾಲ್ಕುಲೋಕ ಮಾನ್ಯರಿಗತಿಮಾನ್ಯ ನೀನು ನಿನ್ನ ಚಿತ್ತಕೆ ಬಂದರಿನ್ನೇಕೆ ತಡಬಹು ಚೆನ್ನಾತ ಆತಗೆ ಮನ್ನಿಸಿ ಮಗಳನ್ನು ಕೊ....... 2 ಭಾಷೆಯು ಅದು ಸುಳ್ಳಲ್ಲ ಲೇಸಾಗಿ ನಾನಿನ್ನ ಭಾಷೆಗೆ ಮೆಚ್ಚಿ ಉಲ್ಲಾಸದಿ `ಅನಂತಾದ್ರೀಶಗೆ ' ಮಗಳನ್ನು ಕೊಡುವೆನು3 ಪದ ಬ್ರಹ್ಮಪುತ್ರ ಕೇಳಿ ಸಂಭ್ರಮ ಬಡವುತ ನಮ್ಮ ಕಾರ್ಯ ಆಯಿತೆಂದು ಸುಮ್ಮನಿರುವುತ 1 ಒಮ್ಮಿಂದೊಮ್ಮೆಲೆದ್ದು ಮತ್ತೊಮ್ಮೆ ಹೇಳುತ ರಮಿಸದಲೆ ನಡೆದ ತನ್ನ ಜಿವ್ಹೆ ತೋರುತ 2 ಹೋಳು ತಂಬೂರಿ ತಂತಿಗಳನು ಮೀಟುತ ಚೆಲುವ ಮುನಿಯ ನಡೆದ ಬಾಗಿಲವ ದಾಟುತ 3 ಚೆಂದವಾಗಾನಂದ ಭಾರದಿಂದ ಮಣಿವುತ ಮುದೆ ಪಾರ್ವತಿಯ ಬಳಿಗೆ ಬಂದು ಕುಣಿಯುತ 4 ಮುನ್ನ ನುಡಿದ ಮದುವೆಯ ಸುದ್ದಿಯನು ನಗವುತ ಚೆನ್ನಿಗ`ನಂತಾದ್ರೀಶ'ನನ್ನು ಸ್ಮರಿಸುತ 5 ಪದ ಕೇಳಮ್ಮ ಹೊಸಸುದ್ದಿ ಪಾರ್ವತಿ ನಿನಗೆ ಹೇಳಬಂದೆನು ಎನಗಿದು ಪ್ರೀತಿಪ ಪಂಕಜನಾಭ ಬರುವನಂತೆ ನಿನ್ನ ಕಂಕಣಕಯ್ಯ ಪಿಡಿವನಂತೆ ಪಂಕಜಮುಖಿಯೆ ನಿಶ್ಚಯವಂತೆ ನಿ ಶ್ಯಂಕೆಯಿಂದಿರು ಯಾತಕೆ ಚಿಂತೆ 1 ನಕ್ಕು ಆಡುವನಲ್ಲವು ನಾನು ಎ ನ್ನಕ್ಕಯ್ಯ ನಿನಗೆ ಹಿತ ಪೇಳುವೆನು ಮಿಕ್ಕ ಮಾತುಗಳಿಂದ ಫಲವೇನು ನಿನ್ನ ತಕ್ಕ ಪುರುಷ ಅವ ತಿಳಿ ನೀನು 2 ಶ್ರೀಮದನಾಂತಾದ್ರಿವಾಸಗೆ ನಿನ್ನ ನೇಮಿಸಿದ ಹಿಮವಂತನು ಈಗ ಕೋಮಲಾಂಗಿಯೇ ಎನ್ನ ಮನಸಿಗೆ ಬಂತು ಈ ಮಾತು ಸತ್ಯವಾಗಲಿ ಬೇಗ 3 ಪದ ಪರಿ ಸುದ್ದಿಯುಂಟೆಂದು ಪೇಳುತಲೆ ಟಣ್‍ಟಣನೆ ಜಿಗಿವುತು ತ್ಕಂಠzಲ್ಲಿ ಅಲ್ಲಿಂದ ಹೊರಟು ಮುನಿಬಂದು ವೈ ಕುಂಠದಲಿ ತಾ ನುಡಿದ ಉಂಟಾದ ಸುದ್ದಿ ವೈಕುಂಠಪತಿಗೆ ಎಂಟೆಂಟು ಕಳೆಯಿಂದ ಉಂಟಾದ ಪಾರ್ವತಿಯ ಗಂಟು ಹಾಕಿದೆಯೆನಲು ತಂಟಕನೋ ನೀ ಕಲಹಗಂಟಕನೋ ಸರಿಯಿನ್ನು ಭಂಟನಹುದೆಂದು ವೈಕುಂಠಪತಿನಕ್ಕ 1 ನಾರದನ ಮಾತು ಸರಿಬಾರದೆ ಪಾರ್ವತಿಯು ತೀರದಂಥಾ ದು:ಖವಾರಿಧಿಯಲಿ ಮುಳುಗಿ ಸಾರಿದಳು ತನ್ನೊಳಗೆ ಘೋರಾದ ಚಿಂತೆ ಬಂತಾರಿದನು ಬಿಡಿಸುವರು ತೋರದೆನಗೆ ತೋರದಿರಬೇಕು ನಾ ದೂರದಲಿ ಇಲ್ಲೆ ಇರಬಾರದೆಂತೆಂದು ಸುಖ ತೋರದಲೆ ತನ್ನ ಮಾತು ಮೀರದಲೆ ಇರುವ ಸುವಿ ಶಾರದಳು ಸಖಿಯೊಡನೆ ಘೋರಾದರಣ್ಯವನು ಸೇರಿದಳು ತಾನು ಮುಂದೆ ಮತ್ತಾಕೆಯ ಮುಂದೆ ಮಾತಾಡದಲೆ ನೊಂದು ತನ್ನೊಳಗೆ ತಾ ತಂದು ಆ ವನದಲ್ಲಿ ಮುಂದೇನು ಮಾಡಲೆಂತೆಂದು ತಿಳಿಯದೆ ಮರುಗಿ ಮಂದಗಮನೆಯು ಚಿಂತೆಯಿಂದ ಮಲಗಿದಳು ಮುಂದೆ ಆ ಸಖಿ ನೋಡಿ ಸಂದೇಹ ಬಡುತ ತ್ವರ ದಿಂದ ಬದಿಯಲಿ ತಾನು ಬಂದು ಹಾ ಇದುಯೇನು ಇಂದು ಮುಖಿ ಹೀಗೆಯೆಂದೆಂದು ಮಲಗುವಳಲ್ಲ ಇಂದೇನು ಬಂತು ಇಂತೆಂದು ಚಿಂತಿಸುತ ಹೀಗೆಂದಳಾಗ 2 ಪದ ಇಲ್ಲೇಕೆ ಮಲಗಿದೆ ಹೇಳಮ್ಮ ನೀ ಇಲ್ಲೇಕೆ ಎಲ್ಲಾನು ಬಿಟ್ಟು ವನದಲ್ಲಿಯೆ ಪಾರ್ವತಿ ಮಂದಿರ ಪ ಬಿಟ್ಟು ಇಲ್ಲಿ ಮಲಗುವರೆ ನಿನಗೆ ಬಂದಿಹದೇನು ಹೇಳದಿರುವರೆ ನಿನ್ನ ತಂದೆ ತಾಯಿಗಳೆಷ್ಟು ಮರಗುವರೆ ಇಂದು ಮುಖಿಯಳೆ ಯಾರೇನಂದರೇನೆ ಗೆಳತಿ ನಿನಗೆ 1 ನಿನ್ನ ಪ್ರಾಣದ ಸಖಿನಾನಲ್ಲೆ ನಿನ ಗಿನ್ನಾರಿರುವರು ಹಿತವರು ಇಲ್ಲೆ ನಾ ನಿನ್ನ ಕಾರ್ಯವ ಮಾಡುವಳಲ್ಲೆ ಚಿನ್ನದಂಥವಳೆ ನೀ ಘನ್ನಾರಣ್ಯಕೆ ಬಂದು 2 ನಿದ್ರೆ ಬಂದಿಹುದೇನೆ ನಿನಗಿಂದು ಅಥವಾ ಬುದ್ಧಿ ಹೋಯಿತೆ ಮತ್ತೆ ನಿನ್ನದು ಇಂದು ತಿಳಿಯದು ಬುದ್ಧಿವಂತಿಯೆ ಅನಂತಾದ್ರೀಶನಾಣೆ ನಿನಗೆ 3 ಪದ ಇಂದು ಮುಖಿ ಪಾರ್ವ ತಿಯು ಹಿತದಿಂದ ಆಡಿದ ಮಾತು ಒಂದೊಂದು ಸ್ಮರಿಸುತಲೆ ಛಂದಾಗಿ ಮನಸಿಗೆ ತಂದು ನೋಡಿದಳು ಇಂದು ಯೆನ್ನ ಭಾಗ್ಯಕ್ಕೆ ತಂದೆ ತಾಯಿಗಳಿಲ್ಲ ಬಂಧು ಬಾಂಧವರಿನ್ನು ಮುಂದೆಲ್ಲಿ ಬರುವವರು ಸಂದೇಹವೇಕೆ ಸಖಿ ಯಿಂದಧಿಕ ಮತ್ತಿಲ್ಲ ವೆಂದು ದು:ಖವ ಸಖಿಯ ಮುಂದ ಹೇಳಿದಳು 1 ಪದ ಏನು ಹೇಳಲಿಸಖಿ ಇನ್ನೇನು ಹೇಳಲಿ ನಾನು ಖೂನದಿ ತಂದೆಯು ಹರಿಗೆಯೆನ್ನನು ನೇಮಿಸಿದಾ ಪ ಮೃತ್ಯುಂಜಯ ಮೃಡನೆ ಎನ್ನ ಚಿತ್ತಕೊಪ್ಪುವ ಪತಿಯು ಸತ್ಯದಿ ಆಗಲಿಯೆಂದು ಚಿತ್ತದಿ ಬಯಸುತಲೆ ನಿತ್ಯದಿ ಬಹುದಿನ ಬಿಡದಲೆ ಅರ್ಥಿಲೆ ಮಾಡಿರುವಂಥ ಪಾರ್ಥೇಶ್ವರನಾ ಪೂಜೆಯು ವ್ಯರ್ಥಾಯಿತಲ್ಲೆ 1 ನಾರದ ಮುನಿಯಿ ಮಾತು ಸಾರಿದ ನನ್ನಲಿ ಬರಿದು ಬಾರದೆನ್ನ ಮನಸಿಗೆ ಅದು ತಾರದೆ ನಾ ಬಂದೆ ಮೀರಿದ ಕೆಲಸವು ತೀರಲಾರದು ಅದು ಎಂದು ಸೇರಿದೆ ವನವನು ನಾಕಾಲೂರದೆ ಮನೆಯಲ್ಲೆ2 ಹೃದ್ರೋಗದಿ ಬಳಲುವಳಿಗೆ ನಿದ್ರೆಯೆಂಬುವದೆಲ್ಲೆ ಭದ್ರಾಂಗಿಯು ಸತಿ ನಾನು ಉದ್ರೇಕದಿ ಮೈಮರೆತು, ಹಿಮಾದ್ರಿಯು ಎನ್ನನು ಕೈಲಾ ಸಾದ್ರೀಶನ ಬಿಟ್ಟು ಅನಂತಾದ್ರೀಶಗೆ ಕೊಡುವ3 ಪದ ಪರಿ ಮಾತುನು ಕೇಳಿ ಆ ಪ್ರಾಣದ ಸಖಿ ತಾನು ಪರಿ ಮಾತಾಡಿದಳು ಆ ಪಾರ್ವತಿಯ ಮುಂದೆ ಏ ಪಾರ್ವತಿಯೇ ಬಿಡುಸಂತಾಪವ ನಿನಗೊಂದು ಹೇಳುವೆ ಆ ಪಿತಗರಿಯದೆ ನಡೆ ನೀ ತಾಪಸವನದಲ್ಲೆ 1 ಈ ರೀತಿಯ ನುಡಿ ಕೇಳಿ ಹಾರೈಸುತ ಸಖಿಕೂಡಿ ಪಾರ್ವತಿ ತಾ ನಡೆದಳು ಘೋರಾರಣ್ಯದಲಿ ಇರ್ವಳು ಆಳುPದೆÀಲಿಂಗಾಕಾರವು ಪೂಜಿಸುತಲ್ಲೆ ಚಾರ್ವಾಂಗಿಯು ತಾ ನಿದ್ರಾಹಾರವು ಇಲ್ಲದಲೆ2 ದೀನೋದ್ಧಾರಕ ಶಿವನು ತಾನೆ ಅಲ್ಲಿಗೆ ಬಂದು ಏನು ಬೇಡುವೆ ಪಾರ್ವತಿ ನೀನು ಬೇಡೆಂದ ಏನು ಧೇನಿಸುವೇ ಬಿಡು ಮಾನಿನಿಯೆ ಭಕ್ತಾ ಧೀ ನಾನಂತಾದ್ರೀಶನ ಆಣೆ ನಿನಗುಂಟು 3 ಪದ ಹರನ ಮಾತನು ಕೇಳಿ ಹರಿಣಾಕ್ಷಿ ಪಾರ್ವತಿಯು ತ್ವರದಿಂದ ಎದ್ದು ಪರಮ ನಾಚಿಕೆಯಿಂದ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ನಾಲ್ಕು ಮೃಗಯಾಯೈ ಹಯಾರೂಢಂ ಗಹನೆ ಹಸ್ತಿನಾಹೃತಂ ಪದ್ಮಾವತೀ ಕಟಾಕ್ಷೇಷು ತಾಡಿತಂ ನËಮಿ ಶ್ರೀಪತಂ ವಚನ ಅಂದಿಗಾವೇಂಕಟನು ಇಂದು ಪೋಗಲಿಬೇಕೆಂದು ಸ್ಮರಿಸಿದ ಆ ಕ್ಷಣದಿ ಚೆಂದಾದ ಮೈ ಬಣ್ಣದಿಂದ ಇರುವುದು ಸ್ವರ್ಣ ಬಿಂದುಗಳು ಅಲ್ಲಲ್ಲೆ ಮೇಲ್ಗರಿಯಂ ಒಂದೊಂದು ಚಂದದರÀಳಲೆಯು ದೂರದಿಂದ ಹೊಳೆಯುವುದು 1 ಮತ್ತೆ ಸರಗಳನೆಲ್ಲ ಮತ್ತೆ ಪರಿಮಿತಿಯಿಲ್ಲ ಉತ್ತಮಾಶ್ವವ ತಾನು ಮತ್ತೆ ಮೇಲೆ ಸುತ್ತಿದನು ಕೌಸ್ತುಭ ಶಕ್ತವಸ್ತ್ರಾ2 ಊಧ್ರ್ವಪುಂಡ್ರಾಂಕಿತನು ಆಗಿ ಅಕಳಂಕಕೇಸರ ಕುಂಕುಮಾಂಕಿತ ಶ್ರೀಗಂಧ ಪೊಂಕದಲ್ಲಿ ಪಂಕಜಗಳಿಗೆ ಟೊಂಕದಲಿ ಏಲೆ ಅಡಿಕೆಸಣ್ಣ ಕೊಂಕು ಇಲ್ಲದ ಕನ್ನಡಿ ಕಟ್ಟಿದನು ವಸ್ತ್ರಾದಿಂದÀ 3 ಕಂಠದಲಿ ಇಟ್ಟು ಜರತಾರಿ ಒಂಟಿ ಚಾದರವನ್ನು ಕಂಠದಲಿ ಚಲ್ಲರಿಪುಕಂಟ- ಕಾಗಿರುವಂಥ ಒಂಟಿ ಬಂಟನಾಗಿ ಅಂಟರಾ ಬಿಗಿದು ನೂರೆಂಟು ವೈಕುಂಠನಾಥನು ಎಂಬ ಬಂಟನ ಕುದುರೆ ಹೊರಗ್ಹೊಂಟಿತಾಗ 4 ವೇಂಕಟನು ವನದಲ್ಲಿ ಘನವಾದ ಮದ್ದಾನೆಯನು ಹತ್ತಿ ನಡೆದ ವನಜ ಓಡುತ್ತ ಮುಂದೆ ಸಮ್ಮುಖವಾಗಿ ವಿನಯದಿಂದಲಿ ಸೊಂಡೆಯನು ಮೇಲೆತ್ತಿ ಗರ್ಜನವ ಮಾಡುತಲೆ 5 ಕಂಡು ಗಡಬಡಿಸಿದರು ಮುಗ್ಗುತಲೆ ಒಡಗೂಡಿ ಅಡಗಿದರು ಬೇಗ ದೃಢಭಕ್ತಿ ನಡೆದು ಅಲ್ಲಿಂದ ಹಣಹಣಿಕೆ ನೋಡ್ಯಡಗಿದರು ನಡೆಸಿದನು ಕುದರೆ 6 ಒದರಿದಳು ಅಮ್ಮಯ್ಯ ಏರಿ ನಮ್ಮೆದುರಿಗೆ ಚದುರನಾಗಿ ಮಧುರ ಹೆದರೆ ಬೇಡಿರಿ ನೀವು ಚದುರ ವೃತ್ತಾಂತವನು ಕೆದರಿ ಕೇಳಿರಿ ಅವನ ಇದರಿಗ್ಹೋಗಿ 7 ಬಂದು ಪುರುಷನ ನೋಡಿ ಇಂದು ಇಲ್ಲಿಗೆ ನೀನು ಬಂದ ಗಮನ ತಂದೆತಾಯಿಗಳ್ಯಾರು ಬಂಧು ಮಂದಿ ಎಲ್ಲರು ಏನೆಂದು ಕರೆವರು ನಿನಗೆ ಚಂದಾಗಿ ಕುಲಗೋತ್ರ ಒಂದು ಬಿಡದಲೆ ನಮ್ಮ ಮುಂದೆ ನೀಪೇಳು 8 ಇಂದು ನಮ್ಮ ಮುಂದೆ ಕೇಳಿರಿ ನಮ್ಮ ಕ್ರಮದಿಂದ ಹೇಳುವೆನು ಬಂಧು ತಾ ಬಲರಾಮ ಇಂದು ಸುಭದ್ರೆಯೆಂದೆನಿಸುವಳು ತಂಗಿ ಸುಂದರಾರ್ಜುನ ನಮ್ಮ ಹೊಂದಿರ್ದ ಬೀಗ 9 ಕೃಷ್ಣ ಪಕ್ಷದಲ್ಲಿ ನಾ ಕರೆವರು ಯೆನಗೆ ಕಿವಿಯಲ್ಲಿ ಇಟ್ಟು ಬಹುಸಂತೋಷ ಪೇಳಿರಿ ಎನಲು ಥಟ್ಟನೆ ನುಡಿದಳು ದಿಟ್ಟಪದ್ಮಾವತಿಯು ಸ್ಪಷ್ಟತಾನೆ 10 ಸುವಿವೇಕದ ವೃತ್ತಾಂತ ಶ್ರೀಕರಾತ್ರಿಯ ಗೋತ್ರ ಧರಣೀ ದೇವಿ ವಸುಧಾನ ತಾ ಖೂನ ಪದ್ಮಾವತಿಯು ನೀ ಕೇಳಿ ಆಕೆಯಮೇಲೆ ಸ್ವಲ್ಪ ಪುತ್ರಿ ತಾ ಕೋಪವನು ಎಂದಳಾ ಕಾಲದಲಿ ಹರಿ ವಿವೇಕದಲಿನುಡಿದ11 ಧ್ವನಿ ರಾಗ :ಶಂಕರಾಭರಣ ಭಿಲಂದಿತಾಳ ಇಷ್ಟು ಎನ್ನ ಮೇಲೆ ಏಕೆ ಸಿಟ್ಟು ಮಾಡುವಿ ಬಟ್ಟ ಕುಚದ ಬಾಲೆ ಬಹಳ ನಿಷ್ಠುರಾಡುವಿ 1 ಧಿಟ್ಟ ಪುರುಷ ನೀನು ನಡತೆಗೆಟ್ಟು ಇರುವರೆ ಖೊಟ್ಟಿ ಕುದುರೆಯೇರಿ ಮೈಯ ಮುಟ್ಟ ಬರುವರೆ 2 ಮೆಚ್ಚಿ ಬಂದೆ ನಿನಗೆ ನಾನು ಹೆಚ್ಚಿನ್ಹೆಂಗಳೆ ಇಚ್ಛೆ ಪೂರ್ಣಮಾಡು ನೀನು ಮಚ್ಚಕಂಗಳೆ 3 ಹೆಚ್ಚು ಕಡಿಮೆ ಆಡದೀರು ಹೆಚ್ಚಿನಾತನೆ ಎಚ್ಚರಿಲ್ಲ ಮೈಯ ಮೇಲೆ ಹುಚ್ಚು ಪುರಷನೆ4 ಏನು ಹೆಚ್ಚು ಕಡಿಮೆ ಆಡಿದೇನು ಅನುಚಿತ ನೀನು ಕನ್ಯಾ ನಾನು ವರನು ಏನು ಅನುಚಿತ 5 ಮೂಢನೀನು ಇಂಥ ಮಾತು ಆಡೋದುಚಿತವೆ ಬೇಡ ಅರಸಗ್ಹೇಳಿ ನಿನಗೆ ಬೇಡಿ ಬಿಗಿಸುವೆ 6 ಮಡದಿ ನಿನ್ನ ಕಡೆಯುಗಣ್ಣು ಕುಡಿಯ ಹುಬ್ಬುಗಳ್ ಕಡಿಯದಂಥ ಬೇಡಿ ಎನಗೆ ಕಡೆಗೆ ಅಲ್ಲವೆ 7 ಇಂದು ಪ್ರಾಣವ ತಂದೆ ಕಂಡರೀಗ ನಿನ್ನ ಕೊಂದು ಹಾಕುವ 8 ಜಾಣೆ ನಿನ್ನ ಬಿಡೆನು ಎನ್ನ ಪ್ರಾಣ ಹೋದರೂ ಪ್ರಾಣದರಸಿ ಎನಿಸು ಪಟ್ಟರಾಣಿಯಾಗಿರು 9 ಇಂದು ವ್ಯರ್ಥವು ಹಂದಿನಾಯಿ ಹದ್ದು ಕಾಗೆ ತಿಂದು ಬಿಡುವವು 10 ಎನ್ನ ಫಣಿಯಲ್ಲಿದ್ದ ಲಿಖಿತ ಮುನ್ನ ತಪ್ಪದು ಚನ್ನವಾಗಿ ನಿನ್ನಕೂಡಿ ಇನ್ನು ಇರುವುದು11 ಸೊಲ್ಲ ಕೇಳಿ ಸಿಟ್ಟಿನಿಂದ ನಿಲ್ಲೋ ಎಂದಳು ಎಲ್ಲ ಗೆಳತೆರಿಂದ ಕೂಡಿಕಲ್ಲು ಒಗೆದಳು 12 ಕಲ್ಲು ತಾಗಿ ಕುದುರೆ ಭೂಮಿಯಲ್ಲಿ ಬಿದ್ದಿತು ಬಲ್ಲಿ ದಾನಂತಾದ್ರೀಶನಲ್ಲಿ ಸ್ಮರಿಸಿತು 13 ವಚನ ಆ ಕುದುರೆಯನು ಆಗುತ ವಿವೇಕದಲಿ ಪರಿ ಆಯಿತೀಕಾಲದಲ್ಲೀ ಲೋಕದಲಿ ಕಾಲಬೀಳದಲೆ ಆಕಾಲ ದಲಿ ಹೊರಟೆ ಆ ಕಾರಣದಿಂದೆನಗೆ ಸಂಕಟವು ಸೋಕಿತಿ ಮಾಡಿದ ಕರ್ಮಫಲ ದೊರೆಯದಿರದು 1 ಗಿರಿಯೇರುತಲೆ ತಾನು ಮೂಕತನದಲಿ ಶೇಷಾಯಿಯಂತೆ ಮುಂದಕೆ ಅನೇಕ ಕರೆದು ಕೊಡುವವನ ಶ್ರೀ ಕರುಣದಿ ಆಯಿತು ನಾಲ್ಕು ಅಧ್ಯಾಯ 2
--------------
ಅನಂತಾದ್ರೀಶ - ಕಥನಕಾವ್ಯಗಳು
ಅನುದಿನ ವಿಷಯ ಸುಖವು ಎಂದು ಕನಸಿಲಾದರು ಸ್ಮರಿಸಲಾಗದು ಮನವೆ ಪ ಘನ ಸಂತೋಷವಿಲ್ಲವಿದು ನಿತ್ಯಾನಿತ್ಯ ಸುಖ ಬಯಸಿ ಮನದಲ್ಲಿ ನೀ ಸ್ಮರಿಸೆ ಹರಿಯೆ | ತೊರೆಯ ಅ.ಪ ಅಶನ ವಸನ ಪಶುವ್ರಾತ ವಶವಿರುವಾಭರಣ ಹಸನಾದ ರಥ ಪದಾತಿಗಳು ಸ್ವಸ್ವರೂಪವಲ್ಲ ಭಿನ್ನ ತಿಳಿಯೊ | ಮಮತೆ ಅಳಿಯೊ 1 ಬುದ್ಧಿ ವಿದ್ಯಾಕುಶಲ ಗತಿ ಅಧ್ವರ್ಯ ಪ್ರಭು ಮನ್ನಣೆ ಶುದ್ಧ ರೂಪ ಲಾವಣ್ಯ ಯೌವನ ಸಿರಿ ಶೌರ್ಯ ಪರಾಕ್ರಮ ವದ್ಯವಾಗಿ ಪೋಪುದು ಸ್ಥಿರವಲ್ಲ | ಸುಳ್ಳಲ್ಲ 2 ಇಚ್ಛೆಯಿಲ್ಲದೆ ನೀನು ಜನರ ಮೆಚ್ಚಿಗಾಗಿ ಮಾಡಿದ ದಾನ ವೆಚ್ಚವಾಗಿ ಪೋಪವೊ ಧನವಲ್ಲದೆ ನಿಚ್ಚಳ ಪುಣ್ಯಬಾರದು ಮನವೆ ಹೆಚ್ಚಿನ ಸ್ತೋತ್ರಕೆ ಮರುಳಾಗಿ ನೆಚ್ಚದಿರು ವಿಹಿತೋಕ್ತಿಯ | ಬಿಡದಿರು ಸನ್ಮತಿಯ 3 ಆರ್ತನಾಗದಲೆ ನೀನು ಕೀರ್ತಿಗೋಸುಗ ಕಥಾಶ್ರವಣ ಕರ್ತಭಾವದಿ ಸತತ ಮಾಡೆ ವರ್ತಿಸುವ ಪುಣ್ಯಪ್ರಾಪ್ತಿ ವೈಷಿಕ ಸುಖವಲ್ಲದೆ ಶಾಸ್ತ್ರಮರ್ಮ ತಿಳಿಯದೊ | ಅಹಂ ಮಮವಳಿಯದೊ 4 ಮಾನಿತನು ನಾನೆಂದು ನಾನಾ ಮತವಾಶ್ರಯಿಸಿ ಜ್ಞಾನಿಗಳಿಗೆ ಶಿರಬಾಗಲೊಲ್ಲಿ ಏನು ಇದರಿಂದೆಂಬ ತ್ರಿಕರಣ ಶುದ್ಧಿಕಾರಣ ದ್ಯುನದಿ ಸ್ನಾನವಾಹವಲ್ಲಾ | ಇದು ಬಿಡಸಲ್ಲಾ 5 ಕೈಗೊಳುವುದೇ ಮಾನ ಅನ್ಯಾಧೀನವೆನ್ನದೆಂಬುದೇ ಲಜ್ಜಾ ಅನುಭವ ಜ್ಞಾನಿಗಳ ಸಹವಾಸ ಸ್ನಾನ ಸಚ್ಛಾಸ್ತ್ರಾಲಾಪ ನಾನು ನನ್ನದು ಬಿಡುವುದೇ ತ್ಯಾಗ | ಇದೇ ಯೋಗ 6 ಕರಣ ವಿಷಯಗಳಲ್ಲಿ ಹರಿಯ ಚಿಂತಿಸುತ ನಿತ್ಯ ವರ ಯೋಗ ಭೋಗದಲ್ಲಿ ವರ ರಾಮಚಂದ್ರವಿಠಲರಾಯನು ನಿನ್ನ ದುರಿತ ಕಳೆದು ಪಾಲಿಸುವ7
--------------
ವಿಜಯ ರಾಮಚಂದ್ರವಿಠಲ
ಅರಿ ನೀನೆ ವೇಲಾಪುರಿ ಶ್ರೀ ಚನ್ನರಾಯಾ ಪ ಪೊಳೆವ ನಂದನವನದಲಲರ್ದ ಮಾವಿನ ನೆಳಲ ಲಲರುವಾ ಸಿರಿತೋಳ ತಲೆಗಿಂಬನೊರಗೀ ಅಳಿಯ ಮೃದುಗಾನಕ್ಕೆ ತಲೆದೂಗುತಲೆ ನುಡಿದ ವಿಲಸಿತದ ಸರಸ ವಚನವ ಚೆನ್ನರಾಯಾ 1 ಬೆಳದಿಂಗಳೆರಕದಂದದ ಸಾರದ್ಹಂದರದಿ ಪೊಳೆವಿಂದುಕಾಂತದ ಜಗುಲಿಯೊಳೆನ್ನ ತಲೆಯ ಮಗ್ಗಲನೊರಗಿ ಸುಳಿವೆಲರಗಾಳಿಗಂಜಿಸುತ ಕಲೆಯರಿತು ಮೈಮರಸಿದುದ ಚನ್ನರಾಯಾ 2 ತನುಮಿಸುಕೆ ಬಹುವಿಧದಿ ಧ್ವನಿಗೈವ ಶಕುನಿ ಪೆಸ- ರಿನ ಮಂಚದಲಿ ಹಂಸತೂಲ ತಲ್ಪದಲಿ ಮನಸಿಜಾಗಮವರಿತು ಮನವ ಮೆಚ್ಚಿಸಿದೆ ಎ- ನ್ನಿನಿಯ ಶ್ರೀ ವೈಕುಂಠಪತಿ ಚೆನ್ನರಾಯಾ 3
--------------
ಬೇಲೂರು ವೈಕುಂಠದಾಸರು
ಆತ್ಮನಿವೇದನೆ ಆತನೇ ದಾತನು ಯೆತ್ತಿಕೊಡುವವನು ಭೂತದಯೆಯುಳ್ಳಂಥ ಪುಣ್ಯಾತ್ಮನು ಪ ನಿಂದು ಕೀರ್ತಿಯೆ ಪಾಡೆ ದೇಹಿಯನ್ನುತ ಬೇಡೆ ಸಿಂಧು ಜಲದಲಿ ಮಿಂದು ಭಜಿಸಲಾಗ ಬಂಧನವ ಪರಿಹರಿಸಿ ಬಹು ಪ್ರೀತಿಯಿಂದೆನಗೆ ಬಂದಿರುವ ಕಷ್ಟಗಳ ನೀಗುವರು ಯಾರೋ 1 ನಿತ್ತು ಶ್ರೀ ಹರಿಭಜಿಸೆ ಕೂತು ಶ್ರೀ ಹರಿಸ್ಮರಿಸೆ ತಾತನೇ ಗತಿಯೆಂದು ಪಾದದಲಿ ಬೀಳೇ ಹೊತ್ತು ನೋಡದೆ ಮುದದಿ ಭಿನ್ನವೆಣಿಸದೆಯನಗೆ ಯೆತ್ತಿ ಮೋಕ್ಷವ ಬೇಗನೀವ ನಾರೋ 2 ನಾನು ಬಡವನು ಜಗದಿ ದೀನಹೀನನು ಹರಿಯೆ ಏನು ಗತಿಯೆಂದೆನುತ ಚರಣ ಮರೆ ಹೊಕ್ಕೇ ಪಾನ ಮಾಡುತಲೆನ್ನ ಅವಗುಣವ ನೀಗೆನಗೆ ತಾನೆ ಭಿಕ್ಷವು ಬೇಗನೀವ ನಾರೋ 3 ಭಜನೆ ಸ್ತೋತ್ರಗಳರಿಯೆ ಪೂಜೆ ವಿಧಿಯನು ತಿಳಿಯೇ ಅಜನ ಪಿತ ಶ್ರೀಹರಿಯ ಮೆಚ್ಚಿಸಲು ಅರಿಯೇ ಸುಜನರನು ಪೊರೆವಂತೆ ಸಲಹುವನು ಯಾರೋ 4 ನಾನು ಪಾಪಿಯು ಋಣಿಯು ಕ್ಲೇಶವನು ತೊರೆದೀಗ ಇನ್ನು ಮರೆಯದೆ ನಿನ್ನ ದಾಸನಾಗುವೆನು ಚನ್ನಕೇಶವ ಸ್ವಾಮಿ ರಕ್ಷಿಸೆಂದೊದರುತಿರೆ ಪ್ರಾಣವನು ಯತ್ತೆನ್ನ ಸಲಹುವನು ಯಾರೋ 5
--------------
ಕರ್ಕಿ ಕೇಶವದಾಸ
ಆತ್ಮನಿವೇದನೆ ಯಾವಾಗಲೂ ನಿನ್ನ ಸೇವೆಯೊಳಿರುವಂತೆ ಕಾವುದೆನ್ನಯ ನಿಜದೀ ಕೃಪಾನಿಧೇ ಈ ಪರಿಯಿಂದನಾ ಭಾರಿ ಭವದಿ ನೊಂದೆ ತೋರೋ ನಿನ್ನಯ ಚರಣಾ ನಾರಾಯಣ ಪ ಆಶಾಪಾಶದಲಿ ನಾ ಘಾಸಿಯಾದೆನು ದೇವಾ ವಾಸನೆಯೊಳು ತೊಳಲಿ ಬಹು ಬಳಲಿ ವಾಸುದೇವನೆ ನಿನ್ನ ಪಾದದೊಳಗೆನ್ನಯ ಬೇಸರದಲೆ ರಕ್ಷಿಸೋ ನಿಜಪಾಲಿಸೋ 1 ನೀರಮೇಲಿನ ಗುಳ್ಳೆಯಂತೆ ತೋರುವ ಕಾಯ ಸೇರಿ ನಂಬಿದೆ ಭರದಿ ಬಹು ವಿಧದಿ ದೂರನಾದೆನು ನಿಜದರಿವುನಾನರಿಯದೇ ಸೇರಿಸೊ ನಿಜ ಸುಖದಿ ಪ್ರಬೋಧದಿ 2 ನಂಬಿದವರ ಕಾಯ್ವ ಸಂಭ್ರಮ ಪೊತ್ತವ ಶಂಭು ಶಂಕರ ಪ್ರಿಯನೇ ಸರ್ವೇಶನೇ ಇಂಬು ದೋರೆನ್ನಾ ಚಿದಂಬರ ನಿಜಪದ ನಂಬಿ ನಿಲ್ಲುವ ತೆರದಿ ಸದೃಢದೀ 3 ತತ್ವಮಸಿ ಮಹಾ ವಾಕ್ಯವ ಶೋಧಿಸಿ ನಿಸ್ತರಿಸುವ ಭವವಾ ಉಪಾಯವಾ ಚಿತ್ತಚೈತನ್ಯವಾಗಿ ನಿತ್ಯಶಾಂತಿಸ್ವಸುಖ ಸತ್ಯ ಸದ್ಗುರು ಸ್ವಾನಂದಾ ಸಹಜಾನಂದಾ4 ಕಡಹದಾ ಮರನೇರಿ ಮಡುವಾ ಧುಮ್ಮಿಕೃಇದ್ಯೋ ಪಿಡಿದು ಕಾಳಿಂಗನಾ ಹೆಡೆ ಕುಳಿದು ಕುಣಿದ್ಯೋ ಸಡಗರದಿಂದಲಿ ಮಾತೆಯ ತೊಡೆಯ ಮೇಲೆ ಬಂದು ಕುಳಿತೆ5 ದುರುಳ ದುಷ್ಟರ ಶಿರವ ಶರದಿಂದಾ ಕಡಿದೆಯೊ ಶರಣ ಬಂದ ದೀನರನು ಸಲಹಿದೆಯೊ ಪರಮ ಪುರುಷನೇ ನಿನ್ನ ಸ್ಮರಣೆಯೊಳಿರಿಸೆನ್ನಾ 6 ಅನ್ಯಾಯದಲಿ ಕುರುಪತಿಯ ಮಡುಹಿದೆಯೊ ಕರ್ಣನ ಕಂಠವ ಕತ್ತರಿಸಿದೆಯೊ ಧನ್ಯಧರ್ಮಾರ್ಜುನರ ಶಿರವಾ ಸನ್ಮತದಿಂದಲಿ ಕಾಯ್ದೆ 7 ಪುಂಡಲೀಕನ ಭಕ್ತಿಗೆ ಮೆಚ್ಚಿ ಪಂಡರಪುರದಲ್ಲಿ ನಿಂತೆನಿ ಹೆಚ್ಚಿ ತಂಡತಂಡದಲ್ಲಿ ಬರುವ ಹಿಂಡುಭಕ್ತರುಗಳ ಕೂಡುವ 8 ಕಂತು ನಾರಾಯಣ ಶಾಂತಿ ಪದದಲಿ ವಿಶ್ರಾಂತಿಯ ಕೊಟ್ಟಿನ್ನಾ ಭ್ರಾಂತಿಗಳನೆಲ್ಲ ತೋರಿಸಿ ಸಂತ ಸಂಗದೊಳಿರಿಸೆನ್ನಾ 9
--------------
ಶಾಂತಿಬಾಯಿ
ಆರಿಲ್ಲಿಲ್ಲೋ ಮನುಜಾ | ಅರಿಲ್ಲಿಲ್ಲೋ | ಹರಿಭಕ್ತರಿಗೆ ಸರಿ ಉಂಟೇನಣ್ಣಾ | ಆರಿಲ್ಲಿಲ್ಲೋ ತಮ್ಮಾ | ಬಿರದಿನ ಘಲಗಳ ನಡೆಸುವರಯ್ಯಾ ಪ ಕಂಭದೊಳಗ ಹರಿ ಬಿಂಬವ ತೋರಿಸಿ | ಹಿರಣ್ಯ ಕನಾ | ವೆಂಬ ಶಾರ್ದೂಲ ಕರಳವ ಹಾರಿಸಿದ | ನಂಬಿದ ಪ್ರಲ್ಹಾದ ಮಾಸಾಳ ನಮಾ 1 ಕಂಡು ಸೀತಾಪತಿ ನೊಯ್ದು ರಾವಣ ನೆಂಬಾ | ಖಂಡಿಸಿ ಮದ ಸೊಕ್ಕಿದಾನಿಯನು | ತುಂಡ ಮುಂಡ ಮಾಡಿ ಪದವಿಯ ಪಡದಾ | ಚಂಡ ವಿಭೀಷಣ ಮಾಸಾಳ ನಮಾ 2 ಖಂಡ ದಾಸನಬೇಡಿ ಹೊಂದಿದ್ದ ಕಾಯನ | ಸಂದ ಬಿಡಿಸಿ ಮಲ್ಲಯುದ್ಧದಲಿ | ಮಂದರ ಧರನತಿ ಮೆಚ್ಚಿಸಿ ಮೆರೆದಾ | ನಂದ ಭೀಮಶೇನ ಮಾ-ಸಾಳ ನಮಾ 3 ಬೊಮ್ಮ ಸಾರಥಿ | ಉರಗಸ ಹದಿ ಮೇರು ಗಿರಿ ಪಾಪವು | ಹರಿಶರದಿಂದಲಿ ತ್ರಿಪುರವ ಕೆಡಹಿದ | ಸುರ ರಕ್ಷ ಮಹೇಶ ಮಾಸಾಳನಮಾ 4 ಹಿಂದಿನ ಮಾತಿಂದು ಇಂದಿಲ್ಲ ವೆನಬ್ಯಾಡಿ | ಎಂದೆಂದು ಸ್ವರ್ಗದ ಸುಖಗಳಿಗೆ | ಕುಂದವ ನಿಡುವರು ಮಹಿಪತಿ ಸುತ ಪ್ರಭು | ಹೊಂದಿದ್ದ ದಾಸರು ಮಾಸಾಳರೈಯ್ಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರು ಬಲ್ಲರು ಹರಿಹರಾದಿಗಳ ಮಹಿಮೆಯನು ಪ ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲಅ ಶೌರಿ 1 ಬಲಿಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ-ಗಿಲ ಕಾಯ್ದನಚ್ಯುತನು ಅನುಗಾಲದಿಬಲು ಭುಜನು ಬಾಣಾಸುರನ ಗೃಹ ದ್ವಾರವನುಬಳಸಿ ಕಾಯ್ದನು ಹರನು ವರವ ತಾನಿತ್ತು 2 ಭೋಗಿಶಯನನು ಆಗಿ ಭೋಗಿಭೂಷಣನಾಗಿವಾಗೀಶನಾಗಿ ಸೃಷ್ಟಿಸ್ಥಿತಿಲಯಕ್ಕಾಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆಕಾಗಿನೆಲೆಯಾದಿಕೇಶವನ ಮಹಿಮೆಯನು 3
--------------
ಕನಕದಾಸ
ಆವ ಪರಿಯಲಿ ನಿಮ್ಮನೊಲಿಸಿ ಮೆಚ್ಚಿಪ ವಿಧವುರವೆಯಷ್ಟು ತೋರದಲ್ಲ ಪ ದೇವ ದೇವೇಶ ನೀನೆಂದು ನಂಬಿರಲು ಕೃ-ಪಾವಲೋಕನದಿ ಸಲಹೊ ದೇವಅ ಫಣಿರಾಜನಾಸನದಿ ಕುಳಿತಿಹಗೆ ಅರಿವೆಯಾಸನವ ನಾನೆಂತ್ಹಾಸಲಿಘನವಾದ ಗಂಗೆಯನು ಪಡೆದವಗೆ ಕಲಶ ನೀರನದೆಂತು ಮೈಗೆರೆಯಲಿತನುವಿನ ಪರಿಮಳವು ಘಮಘಮಿಪನಿಗೆ ಸುಚಂದನವದೆಂತು ನಾ ಪೂಸಲಿಅನವರತ ನಾಭಿಯೊಳು ಶತಪತ್ರವಿಹಗೆ ಮಿಕ್ಕಿನ ಪೂವ ಮುಡಿಸಲೆಂತೈ ದೇವ 1 ಸುರುಚಿರೋಜ್ವಲ ಪೀತವಾಸನಿಗೆ ಉಡುಗೊರೆಯಅರಿವೆಯೇನನು ಪೊದಿಸಲಿವರ ಕೌಸ್ತುಭವು ಕೊರಳೊಳಗೆ ಇಪ್ಪವಗೆ ಆ-ಭರಣವಾವುದ ತೊಡಿಸಲಿತರಣಿ ಶತಕೋಟಿತೇಜನ ಮುಂದೆ ಹ್ಯಾಗೆ ನಾ-ಪೆರತೊಂದು ದೀಪವಿಡಲಿನೆರಹಿದ ಫಣಿಪತಿಯ ಸ್ತೋತ್ರದೂರನ ನಾನುಸ್ಮರಿಪೆನೆಂತಯ್ಯ ದೇವ ದೇವ 2 ವನಜಜಾಂಡ ಕೋಟಿಯುದರಂಗೆ ಆವುದನುಉಣಿಸಿ ತೃಪ್ತಿಯ ಮಾಡಲಿಅನಿಮಿಷರಿಗಮೃತವನ್ನೆರೆದವನ ತೃಷೆಯ ನೀ-ರಿನೊಳೆಂತು ಸಂತವಿಡಲಿವಿನತೆಯಾತ್ಮಜ ಪಕ್ಷದನಿಲನಿರೆ ಬೇರೆ ಬೀ-ಸಣಿಗೆಯನ್ನೇಂ ಬೀಸಲಿಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದ-ಕ್ಷಿಣೆಯೆಂತು ಸುತ್ತಿಬರಲಿ ದೇವ 3 ಮಿಗೆ ಫಣಿಯ ಫಣದಾತಪತ್ರವಿರುವಂಗೆ ನೆರ-ಳಿಗೆ ಕೊಡೆಯನೇಂ ಪಿಡಿಯಲಿಪಗಲಿರುಳು ಸಾಮಗಾನ ಪ್ರಿಯನ ಮುಂದೆ ಗೀ-ತಗಳ ನಾನೇಂ ಪಾಡಲಿಜಗವರಿಯೆ ಲಕ್ಷ್ಮೀದೇವಿಪತಿಗೆ ಎಷ್ಟು ಹೊ-ನ್ನುಗಳ ದಕ್ಷಿಣೆಯ ಕೊಡಲಿನಿಗಮತತಿ ಕಾಣದಿಹ ಮಹಿಮನಿಗೆ ನಮಿಸುವಬಗೆಯ ನಾನರಿವೆನೆಂತೈ ದೇವ 4 ಒಲಿಸುವುದನರಿಯೆ ಮೆಚ್ಚಿಸುವ ಬಗೆಯರಿಯೆ ಹೊ-ಗಳುವ ಹೊಲಬ ನಾನರಿಯೆನುತಿಳಿದುದಿಲ್ಲವು ಷೋಡಶೋಪಚಾರದ ಪೂಜೆ-ಗಳಲೊಂದು ಪರಿಯಾದರೂನೆಲೆಯ ಕಾಣೆನು ನಿಗಮಶಾಸ್ತ್ರ ನವವಿಧ ಭಕ್ತಿ-ಯೊಳಗೊಂದು ಬಗೆಯಾದರೂಅಳಿಲಸೇವೆಯನೊಪ್ಪಿಸಿಕೊಂಡು ಶರಣನ ಸಲಹೊನೆಲೆಯಾದಿ ಕೇಶವನೆ ಸ್ವಾಮಿ - ಪ್ರೇಮಿ5
--------------
ಕನಕದಾಸ
ಇದು ಎಂಥ ಸವಿ ಇಹ್ಯದು ಶ್ರೀಹರಿ ನಾಮ ಮಧುಗಿಂತ ಮಧುವಿಹ್ಯದು ಪ ಅಧಮ ಮನಸೇ ನೀನು ಸ್ವಾದ ಸವಿದುನೋಡೋ ಅಧಿಕ ಅಮೃತಕಿಂತ ಮಾಧುರ್ಯ ತುಂಬಿಹ್ಯದು ಅ.ಪ ಸುಧೆಗಿಂತ ಸುಧೆಯಿಹ್ಯದು ಮೃಷ್ಟಾನ್ನದ ಮೃದುಗಿಂತ ಮೃದುವಿಹ್ಯದು ವದನದೊಳಿಟ್ಟರೆ ವಿಧವಿಧದ್ಹಸುತೃಷೆ ಸದೆದು ಸದಮಲಸುಖ ಒದಗಿಸಿ ಕೊಡುವುದು 1 ಶುಚಿಗಿಂತ ಶುಚಿಯಿಹ್ಯದು ಹೆಚ್ಚಿಗೆ ಹೆಚ್ಚು ರುಚಿಗಿಂತ ರುಚಿಯಿದ್ಯದೋ ಉಚ್ಚಿಷ್ಟರಾಗದೆ ಬಚ್ಚಿಟ್ಟು ಸುರಿವರ್ಗೆ ನಿಶ್ಚಲಸುಖಪದ ಮೆಚ್ಚಿ ತಾ ಕೊಡುವುದು 2 ಶಾಶ್ವತಸುಖವೀಯ್ವುದೋ ಭವರೋಗ ಕೌಷಧ ಮಾಗಿಹ್ಯದೋ ದಾಸಜನರಿಗನುಮೇಷ ಸವಿಯುದೋರಿ ಪೋಷಿಸುತಿರುವುದು ಶ್ರೀಶ ಶ್ರೀರಾಮನಾಮ 3
--------------
ರಾಮದಾಸರು
ಇಂದು ನೋಡಿದೆ ಗೋವಿಂದನಾ ಸರ್ವ ಸುಂದರಸಾರ ವೆಂಕಟ ರಮಣನಾ ಪ ಭಾಗೀರಥಿಯ ಪೆತ್ತವನಾ ಭವ ರೋಗವ ಕಳೆವ ರಾಜೀವನೇತ್ರನಾ ಸಾಗರದೊಳಗೆ ಒಪ್ಪುವನಾ ಭಕ್ತ ಕೂಗಲು ನಿಲ್ಲದೆ ಒದಗಿ ಬರುವನಾ1 ನಿಲ್ಲದೆಳಿಪಿಗೆ ಪೊಳೆದನಾ ಗೋ ಪಾಲಕರಿಗೆ ವೈಕುಂಠ ತೋರಿದನಾ ನೀಲಾದೇವಿಗೆ ಬಲಿದವನಾ ಭೂ ಪಾಲಗೆ ಮೆಚ್ಚಿ ಸತ್ವರವನಿತ್ತವನಾ2 ವಿಶ್ವ ಮಂಗಳದಾಯಕನಾ ಅಹಿ ವಿಷ್ಟಕಸೇನರಿಂದ ಪೂಜೆಗೊಂಬುವನಾ ವಿಶ್ವರೂಪ ವಿಲಕ್ಷಣನಾ ಸರ್ವ ವಿಶ್ವ ಪರಿಪಾಲ ಪ್ರಣತಾರ್ತಿ ಹÀರನ3 ಸುರ ಶಿರೋಮಣಿ ಸದ್ಗುಣನಾ ಸು ದರಶನ ಶಂಖ ಭಜಕರಿಗೆ ಕೊಟ್ಟವನಾ ನಿರುತ ಆನಂದ ಭರಿತನಾ ದಿವ್ಯ ಮಿರುಗುವಾಭರಣದಿಂದಲಿ ನಿಂದಿಹನಾ 4 ಶಾಮವರ್ಣ ಚತುರ್ಭುಜನಾ ನಿಜ ಕಾಮಿನಿ ಸಂಗಡ ನಲಿದಾಡುವನಾ ಹೇಮ ಗಿರಿಯಲಿದ್ದವನಾ ದೇವ ಸ್ವಾಮಿ ತೀರ್ಥವಾಸ ವಿಜಯವಿಠ್ಠಲನಾ5
--------------
ವಿಜಯದಾಸ
ಇದ್ದರೇನು ಇಲ್ಲದಿದ್ದರೇನು ಬುದ್ಧಿಯಿಲ್ಲದವನು ಬಾಳಿದ್ದರೇನು ಪ ಮಕ್ಕಳಿಲ್ಲದ ಮನೆಯು ಅರಮನೆ ಆದರೇನು ತಕ್ಕ ದಾನವ ಕೊಡದ ಧನವಿದ್ದರೇನು ದುಃಖ ಸುಖಗಳನು ಕೇಳದ ನೆಂಟರಿದ್ದರೇನು ಅಕ್ಕರದಿ ತಾನೊಬ್ಬ ಉಂಡರಾಗುವುದೇನು 1 ನರಜನ್ಮ ದೊರೆತಾಗ ಹರಿಯ ನೆನೆಯದಿರೇನು ಪಾತಕಿ ಆಗಿ ಬಾಳಿದ್ದರೇನು ದುರಿತ ಕಾರ್ಯದೊಳಿದ್ದ ಬುದ್ಧಿಹಾಕಿದರೇನು ಕರುಣರಹಿತನು ತಾನು ಅರಸಾದರೇನು 2 ಮಾತು ಕೇಳದ ಮಗನು ಮನೆಯಲ್ಲಿ ಇದ್ದರೇನು ಸೋತು ನಡೆಯದ ಬಂಟತನವಿದ್ದರೇನು ನೀತಿ ತಿಳಿಯದೆ ಹರಿಯ ಕಥೆಯ ಕೇಳಿದರೇನು ಹೋತಿನ ಕೊರಳೊಳಗೆ ಮೊಲೆ ಇದ್ದರೇನು 3 ವೇದವನೋದದಾ ವಿಪ್ರನಾದರು ತಾನು ದ್ವಾದಶಿ ನಾಮವನು ಬಡಕೊಂಡರೇನು ಹಾದರಕೆ ಮೆಚ್ಚಿದಾ ಚಲ್ವೆ ಆದರೇನು ಆದಿ ತಿಳಿಯದೆ ಬೂದಿ ಬಡಕೊಂಡರೇನು 4 ಶರಣು ಬಂದವರ ಅನ್ಯರಿಗೊಪ್ಪಿಸದೇ ತಾನು ಕೊರಳ ಕೊಯಿದವನ ಧನ ಸೆಳೆದರೇನು ವರದ ಹನುಮೇಶ ವಿಠಲನಂಘ್ರಿಗಳ ನುತಾ ಸ್ಮರಿಸದಲೇ ನೂರೊರುಷ ಬಾಳಿದರೇನು 5
--------------
ಹನುಮೇಶವಿಠಲ
ಇಹಸುಖ ಮೊದಲೇಯಿಲ್ಲ | ಕೃಷ್ಣ ಅಹಹ ಪರಸುಖವಾಗುವುದ್ಹ್ಯಾಗೊ ಪ ಸಾಹಸಿನಾನೆನುತ ಜನರ ಮೆಚ್ಚಿಸುವೊಡೆ ಕುಹಕ ಮಾತುಗಳ ಕೂಗಿ ಬಾಯಾರಿದೆ ಅ.ಪ ಶ್ರವಣ ಮನನ ನಿಧಿ ಧ್ಯಾಸನ ವೊಂ- ದೆವೆ ಮಾತ್ರವು ನಿಜವಾಗಿ ಕಾಣೆನುನಾ ಬವನಾಶಿ ಧರಿಸಿ ದಾಸನೆಂದು ನಾ ಬರಿದೆ ದೇಶಗಳ ತಿರುಗಿ ಬೆಂಡಾದೆನು 1 ಯಮನಿಯಮಾಸನ ಯೋಗ | ಗಳ ಭ್ರಮೆಯ ಪಡುತ ಬಳಲುವೆಯಾವಾಗ ಮಮಯೆಂಬುದರಿಂ ಬಂದಿತು ರೋಗ 2 ಶಂಕರ ಮುಖ ಸುರವಂದ್ಯ | ಅರಿ ಶಂಖ ಗದಾಧರ ಶ್ರೀಶ ಮುಕುಂದ ಸಂಕಟ ಬಂದಾಗ ವೆಂಕಟರಮಣೆಂದು ಮಂಕುಜನರು ಪೇಳ್ವಗಾದೆಯಂತಾಯಿತು 3 ಕಾಸಿಗೆ ತಿರುಗಿದೆನಲ್ಲದೆ | ದಿವ್ಯ ಕಾಶಿಗಯಾಯಾತ್ರೆಯ ಮಾಡಿದೆನೇ ಘಾಶಿಪಟ್ಟಿ ಸಾಕು ಸಾಕಿದರ ಗೊಡವೇ 4 ಕೊಟ್ಟದ್ದರೆ ಹರಿಕೊಡುವ | ಯಂ ಕೊಟ್ಟರುವದಕು ಕೊಡದಿರುವದಕೂ ಕೃಷ್ಣ ನೀನರಿಯದೆ ನಾನು ಸ್ವತಂತ್ರನೇ 5 ಕಣ್ಣಿಲ್ಲದ ಚಿಂತೆವಂದು | ಸದಾ ಬನ್ನ ಬಡುವದು ಯೋಚನೆಯೆರಡು ನಿನ್ನವನೆನಿಸೀ ಕಷ್ಟ ಬಿಡಿಸಿ ಒಳ- ಕಣ್ಣು ಕೊಟ್ಟು ನಿನ್ನ ಸೇವೆಯ ಪಾಲಿಸೋ 6 ಛಳಿ ಜ್ವರದ ಯಾತನೆ ಪಡುವೆ | ನಿನ್ನ ಕರೆಕರೆ ಪಡಿಸುವುದು ನಿನಗೆ ತರವೇ 7 ಆರು ಜನರ ಸೇವೆ ಕೊಡಿಸೋ | ಯೀ ಆರು ಜನರ ಸಂಘವ ಪರಿಹರಿಸೋ ಮೂರು ಜನದ ಕೂಟ ಮೊದಲೇ ಬಿಡಿಸೋ ತಾಳಲಾರೆಯಿವರು ಬಲು ಕ್ರೂರಾತ್ಮರು 8 ಆಸೆಯ ಪರಿಹರಿಸಯ್ಯಾ | ನಿಜ ದಾಸನೆನಿಸಿ ನೀ ಪಿಡಿಯೆನ್ನ ಕೈಯ್ಯಾ ಈಸಲಾರೆ ಗುರುರಾಮ ವಿಠ್ಠಲ ಜೀಯಾ 9
--------------
ಗುರುರಾಮವಿಠಲ
ಈ) ರುದ್ರದೇವರು ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ ಪ ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದಜಟಾಮಂಡಲಧಾರಿ ಕಾಣಮ್ಮ ಅ.ಪ. ಕೈಲಾಸಗಿರಿಯ ದೊರೆಯಿವನಮ್ಮ-ಅದು ಅಲ್ಲದೆ ಕೇಳೆಬೈಲು ಸ್ಮಶಾನದಿ ಮನೆಯಿವಗಮ್ಮ-ಸಂಕರ್ಷಣನೆಂದುಕೇಳೆ ಮಹಿಯೊಳು ಜನ ಪೊಗಳುವರಮ್ಮ-ಇದು ನಿಜವಮ್ಮನಾಲಿಗೆ ಸಾಸಿರ ಫಣಿಭೂಷಣ ನಮ್ಮರಮೆಯರಸಗೆ ಇವ ಮೊಮ್ಮಗನಮ್ಮ 1 ಪತಿ ಇವನಮ್ಮ-ಮಾವನ ಯಾಗದಲಿಬ್ಹಾಳ ಕೃತ್ಯಗಳನು ನಡೆಸಿದನಮ್ಮ-ಸಾಗರದಲಿ ಹುಟ್ಟಿದಕಾಳಕೂಟವ ಭಕ್ಷಿಸಿದನಮ್ಮ-ರಾಮನ ದಯವಮ್ಮಮೇಲೆ ಉಳಿಯಲು ಶೇಷಗರಳವುನೀಲಕಂಠನೆಂದೆನಿಸಿದನಮ್ಮ2 ಹರನೊಂದಿಗೆ ವೈಕುಂಠಕೆ ಬರಲು-ತಾತಗೆ ವಂದಿಸುತತರುಣೀರೂಪವ ನೋಡ್ವೆನೆನಲು-ಹರಿ ತಾ ನಸುನಗುತಕರೆದು ಸೈರಿಸಲಾರೆ ನೀ ಎನಲು-ಹಠದಿ ಕುಳ್ಳಿರಲುಕರುಣೆಗಳರಸನು ಹರನ ಮೊಗವ ನೋಡಿಅರುಣೋದಯಕೆ ಬಾರೆಂದು ಕಳುಹಿದ 3 ಅರುಣೋದಯಕೆ ಗಂಗಾಧರ ಬರಲು-ಹದಿನಾರು ವರುಷದ ತರುಣೀರೂಪದಿ ಹರಿ ವನದೊಳಗಿರಲು-ಚರಣನಖಾಗ್ರದಿಧರಣೀ ಬರೆಯುತ್ತ ನಿಂತಿರಲು-ಸೆರಗ ಪಿಡಿಯೆ ಬರಲುಕರದಿ ಶಂಖ ಗದೆ ಚಕ್ರವ ತೋರಲುಹರನು ನಾಚಿ ತಲೆತಗ್ಗಿಸಿ ನಿಂತ4 ಮಂಗಳಾಂಗನೆ ಮಾರಜನಕ-ನಾ ಮಾಡಿದ ತಪ್ಪಹಿಂಗದೆ ಕ್ಷಮಿಸೊ ಯದುಕುಲ ತಿಲಕ-ವಕ್ಷದಲೊಪ್ಪುವ ನಿನ್ನಂಗನೆ ಅರಿಯಳು ನಖಮಹಿಮಾಂಕ-ಹೀಗೆನುತಲಿ ತವಕರಂಗವಿಠಲನ ಪದಂಗಳ ಪಿಡಿದು ಸಾಷ್ಟಾಂಗವೆರಗಿ ಕೈಲಾಸಕೆ ನಡೆದ 5
--------------
ಶ್ರೀಪಾದರಾಜರು