ಒಟ್ಟು 21 ಕಡೆಗಳಲ್ಲಿ , 14 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣೆನ್ನಿ ಸಾಧುರಿಂಗೆ | ಹರಿ ಮೆಚ್ಚುಪರಮ ಭಾಗವತರಿಂಗೆ ಪ ತೀರ್ಥ ಕ್ಷೇತ್ರಂಗಳಲ್ಲಿ ಮಿಂದು ಘನ | ಯಾತ್ರೆಯನು ಮಾಡಿ ಬರಲಿ | ಧಾತ್ರಿಯಲಿ ಕೆಲವು ದಿನಕೆ ಆ ಪುಣ್ಯ | ವರ್ಥಿ ಬಹುದಯ್ಯ ಜನಕ | ಅರ್ತು ಸದ್ಭಾವದಿಂದ್ಹೋಗಿ ಸಂತರ ಕಂಡ | ಮಾತ್ರದಲಿ ಸರ್ವ ಸುಖ ಇದಿರಿಡುವದೆಂದು 1 ಮೆರೆವ ಭಾಗವತದಲ್ಲಿ ಉದ್ಭವಗೆ | ಹರಿತಾನೆ ಬೋಧಿಸುತಲಿ | ನೆರೆಯೋಗ ಯಾಗ ವೃತವು ಯನ್ನಹಿಡಿ | ಲರಿಯದಿದು ಸಾಂಖ್ಯ ತಪವು | ನಿರುತೆನ್ನ ಸತ್ಸಂಗ ತೋರಿ ಕೊಡುವಂತನ್ಯ | ಧರಿಯೊಳಗ ಸಾಧನಗಳಿಲ್ಲ ಕೇಳೆಂದಾ 2 ಚಲಮೂರ್ತಿ ಸಂತರುಗಳು ನೋಡಲಾ | ಚಲಮೂರ್ತಿ ಪ್ರತಿಮೆಯಗಳು | ನಲಿದವರ ಪೂಜೆಯಿಂದಾ ಪ್ರೀಯನಾಗಿ | ಸಲಹುವನು ಶ್ರೀ ಮುಕುಂದಾ | ತಿಳಿಯ ದೆಂದಿಗೆ ಅಭಾವಿಕ ವರ ಮಹಿಮೆಗಳು | ವಲಿದು ಗುರುಮಹಿಪತಿ ಸುತಗೆಚ್ಚರಿಸಿದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ನರಸಿಂಹದೇವ ಶರಣ ರಕ್ಷಕನೆ ದಾನವಾರಿ ಸುಭಕ್ತಾಧೀನ ಮೂರುತಿಯೆ ಪ. ಹರಿ ತನ್ನ ದೈವವೆಂದು ಸ್ಮರಿಸುತಿರಲು ಬಾಲ ನಿರವ ಕಾಣದೆ ದುಷ್ಟಹಿರಣ್ಯಕಾಸುರನು ಪರಿ ಹಿಂಸಿಸೆ ಮೊರೆದು ಕೋಪದೊಳೆದ್ದು ತರಳಗೊಲಿದೆ ಬಹು ಕರುಣಾನಿಧಿಯೆ 1 ಛಿಟಿ ಛಿಟಿಲೆಂದಾರ್ಭಟಿಸಿ ಕಂಬವು ಸಿಡಿಯೆ ಕಟಿ ಮಸಿದಗ್ನಿ ನಿಟ್ಟುಸಿರಿನಿಂ ಹಲ್ಗಳ ಕಟಿ ಕಡಿವುತುಬ್ಬಸ ತೋರಿ ನಿಂದ ಕಠಿಣ ಮೂರುತಿಯೆ 2 ಕೊಬ್ಬಿದ ಹಿರಣ್ಯಕನುಬ್ಬ ಮುರಿವೆನೆಂದು ಹೆಬ್ಬಾಗಿಲೊಳು ಸಂಜೆ ಮಬ್ಬಿನಲಿ ಧನುಜನ ಗರ್ಭವ ನಖದಿಂದ ಇಬ್ಭಾಗವನು ಮಾಡಿ ಹಬ್ಬಿದ ಕರುಳನು ಹರುಷದಿ ಧರಿಸಿದೆ 3 ಭೀತರಾದ ಸುರವ್ರಾತ ಪ್ರಾರ್ಥಿಸೆ ಬಹು ಶಾಂತನಾಗಿ ಸಂತೋಷಪಡಿಸಿದ ಅ- ನಾಥ ರಕ್ಷಕನೆ ಕಾತರವಳಿದೆ 4 ಖಳನ ಮರ್ದಿಸಿ ಬಹು ಇಳೆಯ ಪಾಲಿಸಿದೆ ನಳಿನ ಸಂಭವಗೆ ಬಲು ಹರುಷವನಿತ್ತೆ ಹೆಳವನಕಟ್ಟೆ ಶ್ರೀ ರಂಗ ದಾಗಿನಕಟ್ಟೆನೆಲೆವಾಸ ಕಂಬದ ನರಸಿಂಹದೇವ 5
--------------
ಹೆಳವನಕಟ್ಟೆ ಗಿರಿಯಮ್ಮ
ಶ್ರೀ ಮಧ್ವಾಚಾರ್ಯರ ಸ್ತೋತ್ರ ಪದ ನಮೋ ನಮೋ ಹರಿಪ್ರೀಯ ನಮೋ ನಮೋ ಸುರಗೇಯನಮೋ ನಮೋ ಗುರುರಾಯ ಮಧ್ವ ಮುನಿ ಜೀಯಾ ಪ ಧರೆಗೆ ಭಾರವಾಗಿ ಚರಿಸುತಿರೆ ಮಾಯಿಗಳುಧರಿಸಲಾರದೆ ಧರಣಿ ಸರಸಿಜೋದ್ಭವಗೆಮೊರೆಯಿಡಲು ಅಜನಾಗ ಹರಸುರರ ಸಹವಾಗಿಹರಿಯ ಸದನವ ಸಾರಿ ಅರುಹಿದನು ಇದನೆಲ್ಲ 1 ಕಾವನಯ್ಯನು ವಸುಧೆ ಭಾವವನು ತಿಳಿದನಿಲದೇವನೇ ನಿನಗೆ ಆಜ್ಞೆಯನೀಯಲುದೇವ ನೀ ನವತರಿಸಿ ಪಾವನವ ಮಾಡಿ ಸ-ಜ್ಜೀವಿಗಳ ಪೊರೆದರ ದುರ್ಜೀವಿಗಳ ನೀ ಮುರಿದೆ 2 ಕಾಮವನು ಕಡಿದು ಸನ್ನೇಮವನೆ ಹಿಡಿದು ಬಹುಸೀಮೆಯೊಳು ವಾದಿಗಳ ಸ್ತೋಮ ತರಿದುಹೇಮಕಚ್ಚುಲ ವೇಣುಗೋಪಾಲ ವಿಠಲನನಾಮಸುಧೆ ಸುಜನರಿಗೆ ಪ್ರೇಮದಲಿ ಸಮಿಯಿತ್ತೆ 3
--------------
ವೇಣುಗೋಪಾಲದಾಸರು
ನಿನ್ನದೋ ನಿಖಿಲ ನಿನ್ನದೋಕುನ್ನಿ ಮನುಜರಾಧೀನೇನಿಲ್ಲ ಶ್ರೀಹರಿ ಪನೀನಿಟ್ಟ ರವಿಶಶಿಗಳುಹರಿನೀನಿಟ್ಟ ದಶದಿಕ್ಕುಗಳುಹರಿನೀನಿಟ್ಟ ಅಗ್ನಿಜ್ಯೋತಿಗಳುಹರಿನೀನಿಟ್ಟ ನದಿತಟಗಳು ಅಹನೀನಿಟ್ಟ ಚಳಿಗಾಳಿ ನೀಕೊಟ್ಟ ಮಳೆಬೆಳೆನೀನಿಟ್ಟ ಉತ್ಪತ್ತಿ ಸ್ಥಿತಿಲಯ ಸಕಲವು 1ನಿನ್ನ ಅಡಿಯೆ ಮಹಾಕ್ಷೇತ್ರಹರಿನಿನ್ನ ನುಡಿಯೆ ವೇದಮಂತ್ರಹರಿನಿನ್ನ ದೃಢವೆ ಸತ್ಯಯಾತ್ರೆಹರಿನಿನ್ನ ಬೆಡಗು ಸ್ಮ್ರತಿಶಾಸ್ತ್ರ ಅಹನಿನ್ನ ಅರಿವೆನಿತ್ಯನಿನ್ನ ಮರವೆಮಿಥ್ಯನಿನ್ನ ಕರುಣ ಎಲ್ಲ ಪ್ರಾರಬ್ಧಗಳ ಗೆಲವು 2ನಿನ್ನ ನಾಮವೆ ಕ್ಷೇಮಕವುಹರಿನಿನ್ನ ನಾಮವೆ ಭವಗೆಲವುಹರಿನಿನ್ನ ನಾಮವೆ ಚಾರುಪದವುಹರಿನಿನ್ನ ನಾಮದ ಬಲವೆ ಬಲವುಹರಿನಿನ್ನ ನಾಮ ಗಾಯತ್ರಿ ನಿನ್ನ ನಾಮತಾರಕನಿನ್ನ ನಾಮ ಭಕ್ತಿ ಯುಕ್ತಿ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು
ಮರೆಯದಿರು ಮನವೆ ಮಾಧವನ ನಮ್ಮದುರಿತದಾರಿದ್ರ್ರ್ಯವನು ಹರಿಸಿ ಹೊರೆವವನಪ.ಆಳರಿತು ಊಳಿಗವ ಕೊಂಡುಂಡು ದಣಿವಂತೆಮೇಲಾಗಿ ಜೀವವನು ಕೊಡುವ ದೇವನಕಾಲಕಾಲಕೆ ಮಾಳ್ಪ ನಡೆತಪ್ಪು ನುಡಿತಪ್ಪುಆಲೋಚಿಸದೆ ಕರುಣಿಸುವ ಕರುಣನ 1ಮೂಢನಾಗಲಿ ಮತಿಯುಳ್ಳ ನರನಾಗಲಿಪಾಡಿದಾಕ್ಷಣ ಭೃತ್ಯನೆಂದು ಒಲಿದುಕೂಡಿಕೊಂಬುವ ದೊರೆಗಳಿಲ್ಲ ಹರಿಯಲ್ಲದಾನಾಡಾಡಿಬಣಗುಕಲ್ಲುಗಳ ಬೇಡಿ2ಮುನ್ನಾರು ಅನ್ಯದೇವರ ಭಜಿಸಿ ಭವಗೆದ್ದರಿನ್ನಾರು ಹರಿಯೊಲುಮೆಯಲಿ ದಣಿದರುನಿನ್ನ ಗುರುಗಳಿಂದರಿತು ನೆರೆನಂಬು ಪ್ರಸನ್ನ ವೆಂಕಟಪತಿಯ ಪಾದವನಜವ 3
--------------
ಪ್ರಸನ್ನವೆಂಕಟದಾಸರು
ಯಾಕೆ ಬೆಟ್ಟವನೇರಿ ನಿಂದೆಅವನಿವೈಕುಂಠವೆಂದೆ ಆವಿಧಿಸ್ಮರರ ತಂದೆಪ.ತಮನೆಂಬರಿಯ ತರಿದು ತರಿದು ನಿಗಮವ ತಂದುಕ್ರಮದಿ ಕಮಲೋದ್ಭವಗೆ ಕೊಡುವೆನೆಂದೇರಿದೆಯೊಕಮಲವ್ವೆ ಬರೆ ಕಂಡು ಕಲ್ಲ ಭಾರವನಿಳುಹಿಭ್ರಮಿಸಿರುವಭಾವತೋರಿದೆಯೊ ಖಳೋತ್ತಮನ ದಾಡೆಯಲರಿದು ಈ ತಾಣವೇರಿದೆಯೊ 1ಧೀರ ಶಿಶುವಿನಹಗೆವಿದಾರಿಸುತ ದಶದಿಶದಿಸಾರಿದ ನಿಜರ ನೋಡಿ ಸಲಹಲಿಲ್ಲೇರಿದೆಯೊಮೀರಿ ಮೆರೆವನ ತಲೆಯ ಮೆಟ್ಟಿ ಪಾತಾಳಕಿಳುಹಿತೋರಿದೆಯೊ ತ್ವತ್ಪಾದದಿರವ ಧರೆಯಪಾರುವರಿಗೊಲಿದಿತ್ತ ಪರಿಯಲೇರಿದೆಯೊ 2ಅಸುರ ನೊಯಿದರಸಿಯಳ ಅರಸ ತಂದೇರಿದೆಯೊಪಶುಗಾವಿ ಯೋಗಗಳ ಪುರವ ಪೊಗಲೇರಿದೆಯೊಹೊಸಧರ್ಮಹೊಲಬುತೋರಿದೆಯೊ ಇದರಪೆಸರರುಹಿ ಪೊರೆಯೆನ್ನ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು