ಒಟ್ಟು 25 ಕಡೆಗಳಲ್ಲಿ , 18 ದಾಸರು , 25 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆರಗದಿರು ಮನವೇ ನೀ ತತ್ವವನು ತಿಳಿಯದೆ ಮರುಗಬೇಕಾಗುವುದು ಅವಿವೇಕಕೆ ಪ ಸಿರಿಯರಸ ನರಹರಿಯ ಮರೆತು ಬಾಳುವ ನರನು ನರಕಕ್ಕೆ ಗುರಿಯಾಗಿ ಸೊರಗುವನು ನಿಜದಿ ಅ.ಪ ಸುಲಭವಲ್ಲವೊ ನಿನಗೆ ಮನುಜ ಜನ್ಮದ ಲಾಭ ತನುಭೋಗವಲ್ಲವೊ ಅದರ ಫಲವು ವನಜನಾಭನ ಮನದಿ ನೆನೆನೆನೆದು ದಿವ್ಯ ಸ ನ್ಮಾನವ ಪಡೆಯುವತನಕ ಶುನಕಕ್ಕೆ ಸಮನೋ 1 ಭವಮೋಹದಿಂದ ನೀ ಘನ ಪಾಪಗಳ ಮಾಡಿ ಧನಿಕನೆಂದೆನಿಸಿದರೆ ಎಣಿಕೆ ಬಾರದೋ ದಿನದಲ್ಲಿ ಧನದಿಂದ ಪಡುವ ಭೋಗಗಳು ಬಂ ಧನದಲ್ಲಿ ಕೆಡಹುವುವು ನಿನ್ನನು ನಿಜದಿ 2 ಪ್ರೇಮಪಾಶಕೆ ಸಿಲುಕಿ ವಾಮಲೋಚನೆಯರ ಕಾಮಿತಕೆ ಬಿದ್ದು ನಿರ್ನಾಮವಾಗದಿರೊ ಹೇಮದಾಸೆಗೆ ನಿನ್ನ ಕಾಮನೆಂದ್ಹೊಗಳುವರೋ ರೋಮ ರೋಮದಿ ಸುಲಿದು ಕೊನೆಗೆ ಬಿಸುಡುವರೋ 3 ಮುನ್ನ ಏಸೇಸು ಜನ್ಮಗಳ ಪೊಂದಿದೆಯೊ ನೀ ನಿನ್ನವರು ಯಾರೆಂದು ಪೇಳಲಳವೇ ಘನ್ನ ಮಹಿಮನಲಿ ಸಂಪನ್ನಮತಿಯನೆ ಪೊಂದು ಪನ್ನಗಶಯನ ಪ್ರಸನ್ನನಾಗುವನು 4
--------------
ವಿದ್ಯಾಪ್ರಸನ್ನತೀರ್ಥರು
ಭವ ತಾರಿಸೊ ಸುಜ್ಞಾನ ಪ್ರೇರಿಸೊ ಪ ಮಾಯದ ಮೃಗದ ಬಾಯಿಗೀಡಾದೆ ಕಾಯುವದಾತರ ಕಾಣೆ ಹರಿಯೆ ನಾಯಿಯ ತೆರದಲಿ ಮಬ್ಬಿಲಿ ಮೆರೆದೆ ದೋಷ ನೋಡದೆ ಕಾಯೋ 1 ಬಂದೆನು ಭೂಸುರನಾಗುತ ಜಗದಿ | ಪೊಂದಿದೆ ತವ ಪದ ಹರಿಯೆ ನಂದನಸುತ ನೀ ಬಂಧನ ಬಿಡಿಸೋ ಕಂದನ ಮರೆಯುವರೇನೋ 2 ಮನ್ನಿಸೋ ಶಾಮಸುಂದರವಿಠಲ ಭಾರ ನಿನಗೊಪ್ಪಿಸಿದೆ | ಹರಿಯೆ ಇನ್ನು ತೋರಿಸೈ ನಿನ್ನಯ ಚರಣ ಕರುಣಾಭರಣ ದೇವ 3
--------------
ಶಾಮಸುಂದರ ವಿಠಲ
ಮಾರುತನ ನಿಜ ಜಾಯೆ ಪ ಬಾರಿ ಬಾರಿಗೆ ನಿನ್ನ ಚರಣವ ಸ್ಮರಿಸುವೆ ಚಾರುಮತಿಯನೀಯೆ ಅ.ಪ. ಮೂರನೆ ಯುಗದಲಿ ಧೀರ ದ್ರುಪದನಧ್ವರದೊಳುದಿಸಿ ಶೂರ ಪಾಂಡವರೈವರ ವೀರಪತ್ನಿಯು ನೀನೆನಿಸಿ ಕೌರವನ ಸಭೆಯಲಿ ಸೀರೆಯನು ಸೆಳೆಯಲು ನೀ ಮಾರಪಿತನ ಭಜಿಸಿ ಭೂರಿವಸನ ಪೊಂದಿದೆ ಧೀರೆ 1 ವೀರ ಮಾರುತಿಯ ಗದೆ ಕುರುಪನ ಊರು ಮುರಿಯಲೆಂದು ವಾರಿಧಿ ಮಿತಿ ಮೀರುತಿರೆ ನೀ ಸಾರಿದೆ ಪತಿಗಳ ಗಂಭೀರೆ 2 ಆ ರಣಾಗ್ರದಿ ಕ್ರೂರ ದುಶ್ಶಾಸನ ಸಾರಿ ಬರುವುದ ನೋಡಿ ದಾರಿ ಹಿಡಿದಪ್ಪಳಿಸವನ ದೋರೆ ಕರುಳ ಹಿರಿದೀಡ್ಯಾಡಿ ಮೋರೆಯಿರಿದು ಪಲ್ಮುರಿದು ಹಂಗಿಸಿದಂಥ- ಸತಿ 3
--------------
ರಂಗೇಶವಿಠಲದಾಸರು
ಮುದ್ದು ಮೋಹನರಾಯಾ | ಅಸ್ಮದ್ಗುರೋರ್ಗುರುಶುದ್ಧ ಜನ ಸಂಪ್ರೀಯ | ನಿಮಗೊಂದಿಸುವೆ ಭವಬಂಧ ಪರಿಹರಿಸಯ್ಯಾ | ಬುಧರಿಂದಗೇಯಾ ಪ ಪಂಕಜ ಮೋದ ಪಾದ ನಂಬಿದೆ ಅ.ಪ. ದೇವಮುನಿನುತ ಪೀಠಾ | ವರ ಚಿಪ್ಪಿಗಿರಿಯಲಿ ದಿವ್ಯ ಭವಹರ ಮಂತ್ರಾ | ಅಂಕಿತ ಸುತಾರಕಪ್ರವರ ಪೊಂದಿದೆ ಪೋತ | ಜಪಿಸುತ್ತ ಮನದೀಶರ್ವವಂದ್ಯ ವಿಧಾತಾ | ಪಾದಾಬ್ಜ ಭಕುತಾ ||ಶ್ರೀ ವರರ ಕರಕಮಲಜಾತನೆ ಭುವಿಯ ಸತ್ತೀರ್ಥಗಳ ಚರಿಸುತ ಪಾವಮಾನಿ ಮತಾಬ್ಧಿಜಾತರ | ಪಾವನವ ಮಾಡ್ಯವನಿಯಲಿಮೆರೆದೆ 1 ಭೃಂಗ ಮುದ್ದು ಮೋಹನಾರ್ಯ ಗುರುರೂಪದೇಶವ ವಿಹಿತ ಮಾರ್ಗದಿಗೈದು ತಂದೆ ಮುದ್ದು ಮೋಹನಾಭಿಧನೆಂದು ಕರೆದೆಯೊ 2 ಗುರುವಿನಾಣತಿಯನ್ನಾ | ಪೊಂದುತಲಿಸ್ವಪ್ನದಿಸಿರಿವಿಜಯ ವಿಠಲನ್ನಾ | ನಿಜಪುರದಿ ನಿಲಿಸಿನಿರುತ ಅರ್ಚನೆಯನ್ನಾ | ಸ್ಥಿರಪಡಿಸಿ ಮುನ್ನಅರಿತು ಮನದಲಿ ನಿನ್ನ | ಉತ್ಕ್ರಮಣವನ್ನಾ ||ಶೌರಿ ದಾಮೋದರನ ಮಾಸದಿ | ವರದತುರ್ದಶಿ ಅಸಿತಪಕ್ಷದಿಸಿರಿ ಗುರೂ ಗೋವಿಂದ ವಿಠಲನ | ಚರಣ ಸರಸಿಜ ಸೇರಿ ಮೆರೆದೆ 3
--------------
ಗುರುಗೋವಿಂದವಿಠಲರು
ಮೂರ್ತಿ ಚಿನ್ಮಯಾತ್ಮಕ ರೂಪ ಸಂತತದಿ ನೆನೆವವರ ಸಲಹೊ ಕರುಣಿ ಪ. ತುಂಬಿ ಇರುತಿಹುದು ಎಂತು ನಿನ್ನಾಟ ಪೇಳ್ ನಿಗಮವೇದ್ಯ ಚಿಂತೆ ಎನಗೊಂದಿಲ್ಲ ಅಂತರಂಗದಿ ನೆಲೆಸಿ ಸಂತತದಿ ನಿನ ಧ್ಯಾನ ನೀಡೆಂಬೆನೊ 1 ದೇಶಾಧಿಪತಿಗಳಿಗೆ ಕೋಶ ತುಂಬದ ಚಿಂತೆ ದೇಶ ತಿರುಗುವನಿಗೆ ಹಣದ ಚಿಂತೆ ದೇಶಸ್ಥನಾದವಗೆ ರಾಜಭಟರಾ ಚಿಂತೆ ಕಾಶಿಯಲ್ಲಿರುವವಗೆ ಮನೆಯ ಚಿಂತೆ 2 ಜಾರಿಣಿಗೆ ವಿಟನೊಬ್ಬ ಬಾರದಿರುವ ಚಿಂತೆ ಚೋರನಿಗೆ ರವಿ ಮುಳುಗದಿರುವ ಚಿಂತೆ ಮಾರನಿಗೆ ಯೋಗಿಗಳ ಹೃದಯ ಭೇದಿಪ ಚಿಂತೆ ಪತಿ ಒಲುಮೆ ಪಡೆವ ಚಿಂತೆ 3 ಕರ್ಮತತ್ಪರರಿಗೆ ಹರಿಮರ್ಮವರಿಯದ ಚಿಂತೆ ಧರ್ಮಪುರುಷಗೆ ಕಲಿಬಾಧೆಯ ಚಿಂತೆ ವೇದಶಾಸ್ತ್ರಜ್ಞನಿಗೆ ವಾದಿಯ ಭಯ ಚಿಂತೆ ಹಾದಿ ನಡೆವಗೆ ದುಷ್ಟ ಜನರ ಚಿಂತೆ 4 ಸಾಧು ಸಜ್ಜನರಿಗೆ ಬಾಧೆ ಕೊಡುವರ ಚಿಂತೆ ಹಾದಿ ತಪ್ಪಿದ ಪಾಪಿಗೆ ಯಮನ ಚಿಂತೆ ವಾಣಿಜ್ಯತನದವಗೆ ಹಣವು ಗಳಿಸುವ ಚಿಂತೆ ಮಾನವಂತರಿಗೂನ ನುಡಿಯ ಚಿಂತೆ 5 ಇಂತೆಲ್ಲರಾ ಚಿಂತೆ ಇರಲಿ ಕೇಳ್ ಹರಿಯೆ ಚಿಂತೆ ಬಿಡಿಸೆನಗೆ ನೀನೊಲಿದು ದೊರೆಯೆ ಚಿಂತನೆಗೆ ಸಿಗದಿಹುದು ನಿನಗೆ ಸರಿಯೆ ಚಿಂತಿಪರಿಗೊಲಿವಂಥ ಸಿರಿಕಾಂತ ಹರಿಯೆ6 ಶಾಂತ ಮೂರುತಿ ಪರಮ ಕರುಣಾಳುವೆನ್ನುತಲಿ ಎಂತೆಂತೂ ಸಜ್ಜನರು ಸ್ತುತಿಪುದನು ಕೇಳುತಲಿ ಇಂತು ನಿನ ಪದವನಾನ್ಹಾರೈಸಿ ಬಂದರೂ ನಿಂತರೂ ಎದುರಲ್ಲಿ ನೀನೊಲಿಯಲಿಲ್ಲ 7 ಕರಮುಗಿದು ಎರಗಿದರೂ ಶಿರಬಾಗಿ ನಮಿಸಿದರೂ ಚರಣದಲಿ ತನುಮನ ಒಪ್ಪಿಸಿದರೂ ಕರಗಲಿಲವು ಮನಸು ಕರುಣಪುಟ್ಟಲು ಕಾಣೆ ಭರವಸೆಯು ನಿನ್ನಲ್ಲಿ ಮೂಡಲಿಲ್ಲ 8 ಶಿರದಿ ಕರವಿಡಲಿಲ್ಲ ತೊರೆದೆಯೊ ಜರಿದೆಯೊ ವರಭಕ್ತಿ ಸಾಲದೊ ಗುರುವಿಕೆಯೊ ದೊರೆತನವೊ ಅರಹೊಟ್ಟೆ ಜೀವಿಸುತ ಅರಿಯದೆ ಮತ್ತೊಂದು ಇರುಳು ಹಗಲಾಲ್ಪರಿವ ತೆರವು ತೋರದೊ ಮನಕೆ 9 ಸರಿಯಲ್ಲ ಸರಿಯಲ್ಲ ಕರುಣಾಳುವೆಂಬುವೋ ಬಿರುದುಳಿವ ತೆರವಿಲ್ಲ ಬಿಂಕಪಟ್ಟರೆ ಈಗ ಕರೆದು ಮನ್ನಿಸೊ ಪಾಂಡುರಂಗವಿಠ್ಠಲ ದೇವ ವರ ಪುಂಡಲೀಕಗೆ ಒಲಿದದ್ದು ನಿಜವಾಗೆ 10 ಪರಿಪರಿಯ ಭಕ್ತರನು ಪೊರೆದದ್ದು ನಿಜವಾಗೆ ಹರಿದಾಸ ಸಂತತಿಗೆ ಮನೆದೈವ ನಿಜವಾಗೆ ಸರಿಯಿಲ್ಲದಾ ದೈವ ನೀನೆಂದು ನಿಜವಾಗೆ ಹೊರವೊಳಗೆ ಒಂದಾಗಿ ಕರಪಿಡಿದು ಸಲಹಿನ್ನು 11 ಗುರುಕೊಟ್ಟ ವರಬಲದಿ ಶರಣು ಪೊಂದಿದೆ ನಿನಗೆ ಚರಣದಲಿ ಬಿದ್ದಿರುವೆ ಪರಮ ಪುರುಷನೆ ದೇವ ಸ್ಮರಪಿತನೆ ಗೋಪಾಲಕೃಷ್ಣವಿಠ್ಠಲ ನಿನ್ನ ಸ್ಮರಣೆ ಮಾಡಿದ ಮೇಲೆ ಭವದ ಭಯ ಉಂಟೆ 12
--------------
ಅಂಬಾಬಾಯಿ
ಯಜ್ಞೋಪವೀತವೀವೆನೊ ನಿನಗೆ ಸ್ವಾಮಿ ಪ ಯಜ್ಞಪುರಷ ಮುನಿ ಯಜ್ಞಪಾಲಕನಿಗೆ ಅ.ಪ ಅಜ್ಞ್ಯಮನೋರಥನು ನಾನು | ಕಿಂ ಚಿಜ್ಞನೆಂದಿಗು ನಿನ್ನ ಪೊಂದಿದೆನು ಸುಜ್ಞಾನವೆಂಬುದು ಸ್ವಪ್ನದೊಳರಿಯೆ | ಸ ರ್ವಜ್ಞ ನಿನ್ನವನೆಂದು ವಿಜ್ಞಾನ ಪಾಲಿಸು 1 ಸಾಧು ಜನಪ್ರಿಯ ಸರೋಜಾಕ್ಷ ಪೂರ್ಣ ಬೊಧಾಮೃತ ಮಯದಿವಿಜ ಪಕ್ಷಾ ಕಾದುಕೊಂಡಿರುವೆ ಅನಾದಿಯಿಂದಲಿ ನಮ್ಮ ನಿ- ರಾದರಣೆ ಮಾಡದೆ ನೀ ದಯದಿಂದ ಸಲಹೊ 2 ಮುಕುತಿದಾಯಕ ದೇವಾಧಿದೇವಾ ನಿಜ ಭಕುತ ಜನರಿಗೆ ನೀನೇ ಸಂಜೀವಾ | ಆ ಯುಕುತ ಮಾತುಗಳಿದಲ್ಲ ವೇದಾಂತ ರಹಸ್ಯ ಸಕಲಾಧಾರನೆ ಶ್ರೀ ಗುರುರಾಮವಿಠಲ 3
--------------
ಗುರುರಾಮವಿಠಲ
ಶ್ರೀ ಹರಿವ್ಯಾಪಾರ ಅಪಾರ ಪ ಶ್ರೀ ಸರಸಿಜಭವ ಸುರವರ ಪ್ರಮುಖರ ಭಾವನೆಗೊ ಅತಿ ದೂರ ಅ.ಪ. ಪೊಂದಿದೆ ಭಕುತರಿಗೆ ಕದಾಚಿತು ಬಂದೊಡಹಂ ಮಮತೆ ಕುಂದಿಸಿ ಗರ್ವವ ಬಂದತಿ ಲೀಲೆಯೊಳ್ ಚಂದದಿ ಪೊರೆವ ಗಜೇಂದ್ರವರದನು 1 ಕಷ್ಟದಿ ತೊಳಲಿಸುವ ನಿಜಭಕ್ತರ ಶ್ರೇಷ್ಠಗತಿಯ ಕೊಡುವ ದುಷ್ಟರಿಗೆ ಸಿರಿಕೊಟ್ಟು ಕೆಡಿಸುವನು ಶಿಷ್ಠ ಪಾಂಡವಪ್ರಿಯನ ಗುಟ್ಟಿದು ಕಾಣಿರೊ 2 ದೇವದಾನವರ ಸ್ವಭಾವವ ಕಲುಷ ವಿದೂರನುದೇವವರೇಣ್ಯ ಶ್ರೀ ಕರಿಗಿರೀಶನು 3
--------------
ವರಾವಾಣಿರಾಮರಾಯದಾಸರು
ಶ್ರೀನಿವಾಸ ಗುರು ಗುಣಾಧೀಶ | ಪಾಲಿಸೊ ಭಕ್ತರ ತೋಷ ನಾ ನಿನ್ನ ದಾಸ ಪ ಏನಾದರು ಎನ್ನ ಹೀನತೆ ಎಣಿಸದೇಸಾನುರಾಗದಿ ನಿನ್ನ ಅಧೀನದೊಳಗಿರುವುದು ಅ.ಪ. ನಿತ್ಯ 1 ಅಗ್ನಿಹೋತ್ರವ ನಡೆಸುವ ತೆರದಿ | ಆಗ್ಯನ್ನನು ಮುದದಿಸುಜ್ಞಾನಿ ನೀನೇ ಕರಗಳ ಪಿಡಿದೀ | ಅಜ್ಞಾನವ ಬಿಡಿಸೀವಿಘ್ನವಗೊಳಿಸದೆ ಸರ್ವಜ್ಞ ಪಾದದೀಮಗ್ನನ ಮಾಡು ಪ್ರಾಜ್ಞ ಶಿರೋಮಣಿ2 ನಿನ್ನ ನಂಬಿದ ಪಾಮರ ನಾನು | ಪಾವನ್ನ ನೀನುಎನ್ನ ಗುಣ ದೋಷಗಳನ್ನು | ಮನ್ನಿಸುವಾದೇನು ಅನ್ನಂತ ಪಾಪಿ ನಾನು ನೀನಾದರೊ ದಯವನ್ನು ಮಾಡುನಿನ್ನ ಪೊಂದಿದೆ ಮಹಾನುಭಾವ 3 ಪಾತಕಿ ನಾನಾದರೂ ನಿನ್ನಚರಣಕ್ಕೆ ಸುತ್ತಿದ ಬಿರಿದು ಬಿಡುವುದುಂಟೇ4 ಅನ್ಯರಿಗಾನು ಎರಗುವನಲ್ಲ | ನೀ ಬಲ್ಲಿ ಎಲ್ಲಮನ್ನಿಸಿ ದಯದಿ ಎನ್ನಯ ಸೊಲ್ಲ ಶಿರಿ ಲ-ಕ್ಷ್ಮೀ ನಲ್ಲ ಎನ್ನ ಪಿಡಿಯೊ ಮೋ-ಹನ್ನ ವಿಠಲನ್ನ ತೋರಿ ಪಾವನನೆನಿಸುವುದು 5
--------------
ಮೋಹನದಾಸರು
ಹನುಮಂತ ಪಾಹಿ ಗುರು ಮನುಮಂತ ಪ ಹನುಮಂತ ಅನಿಮಿತ್ತ ಬಂಧು | ಶಿರ ಸಿಂಧು ಆಹಾ ಅನುದಿನ ಎನ್ನವಗುಣ ಎಣಿಸದೆ ಕಾಯೊ ಪತಿ ಸುರಮುನಿಗಣ ಸೇವಿಪ ಅ.ಪ ಸಂಜೀವನ ಗಿರಿಧಾರ | ಹೇ ಧ ನಂಜಯ ನಾಗ್ರಜ ಧೀರ | ಖಳ ಭಂಜನ ಕರುಣ ಸಾಗರ ಭಾವಿ ಕಂಜಜ ಭಕ್ತ ಮಂದಾರ ಆಹಾ ಅಂಜನೆಯಳ ತನು ಸಂಜಾತ ಸಲಹಯ್ಯ ಸಂಜೆ ಚರಾರಿ ಪ್ರಭಂಜನ ಮೂರುತಿ 1 ಕಾಳಿವಲ್ಲಭ ಕಪಿವರನೆ | ಕರು ಣಾಳು ನಂಬಿದೆ ಯತಿವರನೆ | ಖಳ ಕಾಲ ಪಾಲಿಸು ವೃಕೋದರನೆ | ಛಳಿ ಶೈಲಜೆ ಕಾಂತ ವಂದಿತನೆ | ಆಹಾ ಕೇಳಿ ಮಡದಿ ಮೊರೆ ತಾಳಿ ಸ್ತ್ರೀವೇಷರೂಪ ಖೂಳ ಕೀಚಕನುದರ ಸೀಳಿದ ಗುರುವೆರ 2 ಪೊಂದಿದೆ ಪಾಲಿಸು ಸತತ | ಕುಂತಿ ವಿನುತ | ಶಾಮ ಸುಂದರ ವಿಠಲನ ದೂತ | ಆಹಾ ಇಂದು ಕುಲಜವಿಲ್ಲ | ಒಂದೆಂಬವರ ಜೈಸಿ ಪತಿ ಪರನೆಂದು ಸ್ಥಾಪಿಸಿದೆ 3
--------------
ಶಾಮಸುಂದರ ವಿಠಲ
(ಮಂಗಳೂರಿನ ಪ್ರಾಣದೇವರನ್ನು ನೆನೆದು)ಪಾಲಿಸೆನ್ನಪಾವಮಾನಿಪಾವನಾತ್ಮ ಸುಜ್ಞಾನಿಪ.ಮೂರ್ಲೋಕದ ಸಚರಾಚರಜಾಲದಂತರಂಗ ಕರುಣಿ ಅ.ಪ.ಮೂರವತಾರವ ಗೈದು ಮುರಾರಿಯ ಪೂಜಿಸಿದೆಪಾರಮೇಷ್ಠಿಪದ ಪೊಂದಿದೆ ಭಾರತಿಮನೋಹರ 1ಪಾರಗಾಣರು ನಿನ್ನ ಮಹಿಮೆ ಫಾಲನಯನಾದಿಗಳುಕ್ರೂರಕರ್ಮಿಗಳೇನರಿವರು ಶ್ರೀರಾಮಶರಣ್ಯ 2ಪುರಹೂತಾದ್ಯಮರಾರ್ಚಿತ ಪೂರ್ವಮಧ್ವಂಸಅರಿವರ್ಗಗಳತಿಕ್ರಮವ ಧಿಕ್ಕರಿಸೈ ಸುಜ್ಞಾನವಿತ್ತು 3ಸರ್ವಾಪರಾಧಗಳನು ಸಾಧುವರದ ಕ್ಷಮಿಸುಗರ್ವಹಂಕಾರವೀಯದೆ ಗಜವರದನ ಭಕ್ತಿಯಿತ್ತು 4ಕರಣೀಕಾಗ್ರಣಿ ಮಂಗಲಪುರವರ ಪ್ರಾಣೇಶವರಲಕ್ಷ್ಮೀನಾರಾಯಣ ಶರಣಾಗತರೀಶ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ