ಒಟ್ಟು 55 ಕಡೆಗಳಲ್ಲಿ , 32 ದಾಸರು , 51 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮಿಸುವೆನಾಂ ಶ್ರೀ ಹಯವದನಾ ನಿನ್ನ ನಮಿಸುವೆನಾಂ ಪ. ಕಾಮಜನಕ ಸದಾಶಿವಸನ್ನುತ ಕಾಮಿತ ಶುಭಫಲದಾ ವರದಾ ಅ.ಪ. ಸಾರಸ ಸಖ ನಿಭ ವದನಾ ಸರಸಿಜನಯನಾ ಶ್ರೀನಾರೀಮಣಿ ಸದನ ಸಾರಸಭವನುತ ಚರಣ ಮುರಮದ ಹರಣ ಭೂರಿ ಪೂರಿತ ಲೋಚನ ಶರಣಾಗತ ಜನಾರ್ತಿ ಹರಣ ಚಾರುತರ ಸುಜ್ಞಾನದಾಯಕ ಧೀರ ಗುಣ ಗಂ ಭೀರ ಸುಮನೋಹರ ಶ್ರೀಹಯವದನಾ 1 ಕೌಸ್ತುಭ ಮಣಿಹಾರ ಪುಸ್ತಕಧÀರ ಶ್ರೀಕರ ಶ್ರೀ ವತ್ಸಾಂಕಿತ ವಕ್ಷ ಸುಂದರ ಪಕ್ಷಿಗಮನ ಪುರು ಷೋತ್ತಮ ನಮಪೂರ್ಣಕಾಮ ಭಕ್ತಿವರ್ಧನ ನಿಲಯಾಪ್ರಮೇಯ ಭಕ್ತಿ ಜ್ಞಾನ ಪ್ರದಾಯಕ ಮುಕ್ತಿ ಮಾರ್ಗ ಪ್ರದರ್ಶಕ ನಕ್ತÀಂ ಚರರಾಜತಮೋಮಿಹಿರ ಶ್ರೀಹಯಾಸ್ಯ 2 ಶ್ರೀಶ ಜನಾರ್ದನ ಛಿದ್ವಿಲಾಸ ಕಮನೀಯವೇಷ ಶ್ರೀ ಶೇಷಾದ್ರಿ ನಿವಾಸ ದಾಸಜನ ಹೃತ್ಪದ್ಮ ವಿ ಕವಿ ಮನೋಲ್ಲಾಸ ಭಾಸ್ಕರಕೋಟಿ ದ್ಯುತಿಭಾಸ ಹಯವದನಾ ನಿನ್ನ ನಮಿಸುವೆನಾ 3
--------------
ನಂಜನಗೂಡು ತಿರುಮಲಾಂಬಾ
ನಿದ್ರೆ ಬಂತಿದೆಕೋ ಅನಿ- ಪ ರುದ್ಧನ ಸೇವೆಗೆ ವಿಘ್ನವ ಮಾಡುತ್ತ ಅ ಅಸ್ತಮಾನದಿಂದ ಉದಯವಾಗೋತನಕಸ್ವಸ್ಥದಿ ಪಗಡೆ ಪಂಜಿಯನಾಡುತವಿಸ್ತಾರದಿ ವೇಷನೋಡೆ ನಿದ್ರೆಯಿಲ್ಲಪುಸ್ತಕ ಹಿಡಿಯಲು ಮಸ್ತಕ ಮಣಿಸುತ 1 ಹರಿಕಥಾಶ್ರವಣ ಮಾಡಬೇಕೆನುತಲಿಪರಮ ಭಕುತಿಯಿಂದ ಕುಳ್ಳಿರಲುಕಿರಿಗಣ್ಣ ನೋಟದಿ ಸ್ಮರಣೆ ತಪ್ಪಿಸುತ್ತಗುರುಗುರು ಗುಟ್ಟುತ ಕೊರಳ ತೂಗಿಸುತ 2 ಜಾಗರ ಮಾಳ್ಪಲ್ಲಿ3
--------------
ವ್ಯಾಸರಾಯರು
ನೀನಲ್ಲದಿನ್ನಾರು ಸಲಹುವರೊ ಎನ್ನ ಪ ನಾನು ನನ್ನದು ಎಂಬ ದುರಭಿಮಾನಿಯನ್ನಅ.ಪ. ಶ್ರೀಮದಾಚಾರ್ಯರ ಪುಸ್ತಕ ಭಂಡಾರವನು ಪ್ರೇಮದಿಂ ಧರಿಸುತ ವೃಷಭನಾಗಿರ್ದು ಚರಿಸಿ ಕಾಮಪಿತನೊಲಿಮೆಯಿಂ ಮರಳಿ ಜನಿಸಿ ಗುರುಗಳ ಆ ಮಹಾಭಾಷ್ಯವರುಹಿದ ಜಯತೀರ್ಥ ಗುರುವೆ 1 ಬಾಲತನದಲಿ ಸಕಲ ಲೀಲೆಗಳ ತೊರೆದು ಕಾಲುಂಗುಟಾಗ್ರದಿ ನಿಂದು ತಪವಗೈದು ಶ್ರೀಲೋಲನ ಮೆಚ್ಚಿದಂಥ ಧೀರ ದೈವ ಭೂ- ಪಾಲನಂಶದ ಶ್ರೀಪಾದರಾಜ ಗುರುವೆ2 ಪಿತನ ಮತ ಧಿಕ್ಕರಿಸಿ ಶ್ರೀಪತಿಯೆ ಪರನೆಂಬ ಮತಿಪÉೂಂದಿ ಶಿಶುತನದಲಿ ನರಹರಿಯ ಒಲಿಸಿ ಅತಿಹಿತನಾದ ಪ್ರಹ್ಲಾದದೇವನಂಶದಿಂ ಕ್ಷಿತಿಯೊಳುದ್ಭವಿಸಿದ ವ್ಯಾಸರಾಜ ಗುರುವೆ 3 ಈ ಧರೆಯೊಳೆಸೆಯುತಿಹ ಉಡುಪಿಯೊಳು ನೆಲಸಿರ್ಪ ಯಾದವ ತೀರ್ಥಾಯ ಪದ ಸರಸಿರುಹ ಭೃಂಗ ಮೋದ ತೀರ್ಥಾರ್ಯರ ಪದಕರುಹನಾದಂಥ ಸೋದೆಯೊಳ್ರಾಜಿಸುವ ವಾದಿರಾಜ ಗುರುವೇ 4 ಕಂತುಜನಕನಿಗತ್ಯಂತ ಪ್ರಿಯನಾದ ಮತಿ ವಂತನಾ ವ್ಯಾಸಮುನಿಯೆ ನೀನಾಗಿ ಬಂದು ಸಂತಸದಲಿ ಸಾಧು ಜನರಿಷ್ಟ ಪೂರೈಸುತ ಮಂತ್ರಾಲಯದಿ ಮೆರೆವ ರಾಘವೇಂದ್ರ ಗುರುವೆ 5 ಜಲಜಭವನೂರುಭವನಂಶದಲಿ ಜನಿಸಿ ಕಲಿಯುಗದಿ ಹರಿನಾಮವೆ ಗತಿಯೆಂದು ಸಾರಿ ಹಲವು ಪದ ಸುಳಾದಿಗಳ ರಚಿಸಿ ಸಜ್ಜನರ ಕಲುಷಗಳ ಕಳೆದ ಪುರಂದರದಾಸರಾಯ 6 ಸಕಲ ಋಷಿಗಳ ಸಂಶಯವ ಪರಿಹರಿಸಿ ವೇದ ಉಕುತಿಗಳಿಂದ ಹರಿಯೆ ಪರನೆಂದು ಸ್ಥಾಪಿಸಿ ಭಕುತಿ ವೈರಾಗ್ಯನಿಧಿ ಭೃಗುಮುನಿಯೆಂದೆನಿಸಿದ ಮುಕುತಿಪಥ ತೋರಿಸಿದ ವಿಜಯದಾಸರಾಯ 7 ಸೂತ್ರ ಪುರಾಣಗಳ ರಚಿಸೆ ದಾಸತ್ವವಹಿಸಿ ಸಕಲ ಗ್ರಂಥಗಳ ಬರೆದು ಶ್ರಿಶಗರ್ಪಿಸುತ ಲೇಸು ಜಗಕೆಗೈದಂಥ ಗ ಣೇಶಾವತಾರಿ ಗೋಪಾಲದಾಸರಾಯ 8 ಸಿರಿ ರಂಗೇಶವಿಠಲನ ಕಾಂಬ ತೃಷೆಯಲಿ ಹರಿಗೆ ಹರಿಕಥಾಮೃತಸಾರ ಪಾನಗೈಯಲಿತ್ತ ನರಹರಿಯ ಕೃಪಾಪಾತ್ರ ಸಹ್ಲಾದನಂಶದ ಗುರುವರ ಶ್ರೀ ಜಗನ್ನಾಥದಾಸರಾಯ 9
--------------
ರಂಗೇಶವಿಠಲದಾಸರು
ನೋಡಿ ನೋಡಿನೊ ರಂಗಾ ನಿನ್ನ ನೋಡಿನೊ ಆಡಲೇನಯ್ಯಾ ಪರಸತಿಯರ ಮೋಹಕ್ಕೆ ಸಿಲುಕಿ ಪ ಹೆಣ್ಣ ನಾ ಕಾಣುತ ಮನಸು ದ್ರವಿಸುವದು ದೃಢವಾಗಿ ಮುನ್ನೆ ದಾರಿದ್ರತನ ಯೆಣಿಸಿಕೊಳದೆ ಕಣ್ಣು ಹೋಗುವ ಸುದ್ದಿ ತಿಳಿಯದಲೆ ನೀಕ್ಷಿಸಿ ನಿತ್ಯ 1 ಜಲ್ಪಸಿಲ್ಪಿಗಳಿಂದ ಮಂತ್ರ ಮಾಡುವೆ ಅವಳಾ ಬಲ್ಪು ವಯ್ಯಾರ ಗುಣಗುಣಿಸಿಕೊಳುತಾ ತಲ್ಪಮಿಕ್ಕಾದ ಭೋಗದ್ರವ್ಯ ಬಯಸಿ ವಿ ಕಲ್ಪ ಸಂಕಲ್ಪದಲ್ಲಿ ಬಳುಲುವೆನುಬ್ಬಸವಳಿದು 2 ವ್ಯಾಖ್ಯಾತ ಪಂಡಿತದ್ವ್ಯಾಪಕ ಪಾಠಕ ಮಹಾ ಪ್ರಖ್ಯಾತ ವೇದವೇದಾಂತ ಪ್ರೌಢ ಸೌಖ್ಯ ಪುಸ್ತಕ ಪಾಣಿ ಜ್ಞಾನಿ ಎನಿಸಲು ಅವಳ ಆಖ್ಯಾನ ಕೇಳುತಲೆ ಕಿವಿಗೊಟ್ಟು ಲಾಲಿಸುವೆ 3 ಬೀದಿಯೊಳು ಪೋಗುವವಾಳೊಂದು ಪ್ರಯೋಜನಕೆ ಹಾದಿಯನು ಹಿಡಿದು ಸಮೀಪ ಬರಲು ಪಾದಕಾದರು ಬಿದ್ದು ಮಾತಾಡುವೆನೆಂಬೊ ಮೋದವನು ತಾಳಿ ಏಕಾಂತ ಹುಡುಕುವೆ 4 ಅಂಧಕ ಮೂಕಿ ಬಧಿರೆ ಹೀನಾಂಗ ಅವರೋತ್ತಮ ಜಾತಿ ವಿಧಿ ನಿಷೇಧವನು ಚಿಂತಿಸದೆ ತೀವರದಿಂದ ಅಧೋಗತಿಗೆ ಇಳುವೆನು ಸತ್ಕರ್ಮವನು ತೊರೆದು 5 ನೀರು ಸೀರೆವೊಗಿವಾಗ ಮೈ ತೊಳೆದು ಉಡುವಾಗ ಉರು ಕುಚ ಕಚ ನೋಳ್ಪ ಆಶೆಯಲ್ಲಿ ಮೂರು ಹತ್ತನೆ ತತ್ವ ನೆನೆನೆನೆದು ಯೋಚಿಸಿ ವಾರಿತಿಯ ಕೇಳಿ ತಲೆದೂಗುವೆನೊ ಲೇಸಾಗಿ 6 ಕಣ್ಣುಯಿದ್ದದಕೆ ಸಾರ್ಥಕವಾಗಲಿಲ್ಲ ಪ್ರ ಸನ್ನ ಮೂರುತಿ ಯೆನ್ನ ಸಾಧನವೇನೊ ಘನ್ನ ಏಲ್ಲೆಲ್ಲಿ ನಾ ನೋಡಿದರೆ ಅಲ್ಲಲ್ಲಿ ನಿನ್ನ ರೂಪವ ತೋರೊ ವಿಜಯವಿಠ್ಠಲ ಒಲಿದು 7
--------------
ವಿಜಯದಾಸ
ಪಾಲಿಸು ಶಾರದೆ ಪರಮ ಪಾವನೆಯೆ ಪಾಲಿಸು ಎನ್ನನು ಪರಬ್ರಹ್ಮನ ಸತಿಯೆ ಪ ತವಪಾದ ಕೃಪೆಯಿಂದ ಕನ್ನಡ ನುಡಿಯಲಿ ವಿವರಿಸಿ ಪೇಳುವೆ ಭಾಗ್ಯ ಸನ್ನುತಿಯ ತವಕದಿ ಬಲಿದೀಗ ಕೊಡು ಸರಸ್ವತಿಯೆ ರವಿ ಕೋಟಿ ತೇಜ ವಿರಾಜಿತಾತ್ಮಿಕೆಯ 1 ಜಲಕೆ ಕ್ಷೀರವು ಮುಟ್ಟಿದಂತೆನ್ನ ಮನದಿ ಸುಲಲಿತ ವಾಕ್ಯವ ಪಾಲಿಸು ದಯದಿ ಜಲಜ ಭವನರಾಣಿ ಕರದಿ ಪುಸ್ತಕವೇಣಿ ಕಲಕೀರ ವಾಣಿ ಕಪಿಲೆ ಸುವಾಣಿ 2 ಧರೆಯೊಳಧಿಕವೆಂಬ ಕೊಡಚಾದ್ರಿಯೊಳಗೆ ಸ್ಥಿರವಾಗಿ ನೆಲೆಸಿದ ಮೂಕಾಂಬೆ ಎನಗೆ ಕರುಣಿಸಿದದಾರನು ವರಿಸಿದರೆನಗೆ ಹರುಷದಿ ಪಾಲಿಸೆ ಪರಮ ಪಾವನೆಯೆ 3
--------------
ಕವಿ ಪರಮದೇವದಾಸರು
ಪುರಂದರದಾಸರು ಎಂತು ಪೊಗಳಲಿ ನಾನು ಪ ಕಂತುಪಿತನೇಕಾಂತ ಭಕ್ತನ ಪಂಥವನು ಪದ ಪಂಕ್ತಿಯಲಿ ತುಂಬಿಟ್ಟು ಸಲಹಿದ ದಾಸವರ್ಯರ ಅ.ಪ. ನಿತ್ಯ ನೆನೆಯುತ್ತ ಪಂಡಿತೋತ್ತಮರೊಡನೆ ಸುಖಿಸುತ್ತ ಕಂಡು ಹರಿಯನು ಮುಂದೆ ಕುಣಿಯುತ್ತ ಕುಂಡಲಿಗೆ ನಿಜ ಭೂಷಣವು ಎನಿಸುತ್ತ ಭಂಡಜನರಾ ಪುಂಡುಮಾರ್ಗವ ಕಂಡಕಂಡೆಡೆ ಖಂಡ್ರಿಸುತ ಬ್ರಹ್ಮಾಂಡ ದೊಡೆಯನ ಭಕ್ತಿ ಬಿತ್ತುತ ಹಿಂಡಿ ಮತಿಮತ ರಸವ ಕುಡಿಸಿದ ದಾಸವರ್ಯರ 1 ಮೊದಲು ಗಾಯಕ ದೇವಸಭೆಯಲ್ಲಿ ಮುದದಿ ಕಾಮುಕ ಚೇಷ್ಟೆ ನಡೆಸುತಲಿ ಪದವಿಯಿಂ ಚ್ಯುತನಾಗಿ ದಾಸಿಯಲಿ ಉದಿಸಿ ಬಂದು ಸಾಧು ಸಂಗದಲಿ ಬದಿಗೆ ತಳ್ಳುತ ಭವದ ಕೋಟಲೆ ಮುದದಿ ಜಪಿಸುತ ವಾಸುದೇವನ ಪದವಿ ಸಾಧಿಸಿ ದೇವ ಋಷಿ ತಾ ಪದುಮನಾಭನ ನೆನೆದು ನರಕವ ಬ ರಿದು ಮಾಡ್ಡ ಮಹಾನುಭಾವನ 2 ಕಾಸಿನಾಶಯವು ಮೋಸವೆಂತೆಂದು ಹೇಸಿವಿಷಯದಿ ಲೇಸು ಸಿಗದೆಂದು ಶ್ರೀಶ ಸಿಗುವನು ದಾಸಗೆಂತೆಂದು ಆಶೆಯಿಂದಲಿ ಸಾರಬೇಕೆಂದು ಓಸು ಸಂಪದ ನೂಕಿ ಭರದಿಂ ವ್ಯಾಸರಾಯರ ಶಿಷ್ಯನೆನಿಸುತ ವಾಸುದೇವನ ದಾಸನಾಗುತ ದೋಷಜ್ಞಾನವ ನಾಶಮಾಡಿದ ದೇಶ ತಿರುಗಿದ ದಾಸವರ್ಯರ 3 ಭಕ್ತಿಯಿಲ್ಲದ ಗಾನ ತಾನಿನ್ನು ಕತ್ತೆಕೂಗನುಮಾನವಿಲ್ಲೆಂದು ನಿತ್ಯದೇವನ ಗಾನ ಗೈಯಲು ಗಾತ್ರವಿದು ನಿಜವೀಣೆಯೆಂತೆಂದು ಸಪ್ತಸ್ವರಗಳ ಕ್ಲಪ್ತಮರ್ಮಗ ಳೆತ್ತಿ ತೋರುತ ಶ್ರೇಷ್ಠತರ ಸಂಗೀತ ಸೂತ್ರ ಸಂಮತ ನೀತಿ ನುಡಿದಿಹ ದಾಸವರ್ಯರ 4 ಪೊಂದಿ ಪುಸ್ತಕ ದೀಚೆ ಬರದೆಂದು ಛಂದ ಮರ್ಮವ ತಂದಿಡುವೆ ನಮ್ಮೀ ಅಂದ ಕನ್ನಡ ದೊಳಗೆ ಎಂತೆಂದು ಕಂದ ವೃತ್ತ ಸುಳಾದಿ ಪದಗಳ ಛಂದ ಭೂಷಣವೃಂದ ನೀಡುತ ನಂದದಿಂ ಕರ್ಣಾಟಮಾತೆಯ ಮುಂದೆ ತಾ ನಲಿವಂತೆ ಮಾಡಿದ ದಾಸವರ್ಯರ 5 ನಾರಿ ಮನೆ ಪರಿವಾರ ಹರಿಗೆಂದು ಸಾರವನ್ನೆ ಮುರಾರಿ ಮನೆಯೆಂದು ಚಾರು ಶ್ರುತಿಗತಸಾರ ನಡತೆಯಲಿ ಸೂರಿಯಾದವ ತೊರಬೇಕೆಂದು ನೀರಜಾಕ್ಷನ ಧೀರ ದೂತನ ಸಾರ ಮನವನು ಸಾರಿ ಸಾರುತ ದೂರ ಒಡಿಸಿ ಮೂರು ಮತಗಳ ನೇರ ಸುಖಪಥ ತೋರಿಸಿದ ಮಹರಾಯ ದಾಸರ 6 ಕರ್ಮಕೋಟಲೆಗಿಲ್ಲ ಕೊನೆಯೆಂದು ಮರ್ಮತಿಳಿಯುತ ಬಿಂಬಹೃದಯಗನ ನಿರ್ಮಮತೆಯಿಂದೆಸಗಿ ಕರ್ಮಗಳ ಕರ್ಮಪತಿಗೊಪ್ಪಿಸುತ ಸರ್ವಸ್ವ ಭರ್ಮಗರ್ಭನ ಭಕ್ತಿ ಭಾಗ್ಯದಿ ಪೇರ್ಮೆಯಿಂ ಹರಿದಾಸನೆಸಿಸುತ ಶರ್ಮ ಶಾಶ್ವತವಿತ್ತು ಸಲಹುವ ವರ್ಮ ನೀಡಿದ ವಿಶ್ವಬಾಂಧವ 7 ಇಂದಿರೇಶನು ಮುಂದೆ ಕುಣಿಯುತಿರೆ ಕುಂದುಂಟೆ ಮಹಿಮಾತಿಶಯಗಳಿಗೆ ತಂದೆ ಕೌತಕ ವೃಂದ ಮಳೆಗರೆದು ಕಂದನನು ಪೊರೆದಂದವೇನೆಂಬೆ ಬಂದು ಸತಿಸಹ ಮಂದಿರಕೆ ಗೋ ವಿಂದ ಪಾಕವಗೈದು ಬ್ರಾಹ್ಮಣ ವೃಂದಕಿಕ್ಕುತ ದಾಸರಿಗೆ ಮುದ ಮಾಧವ ಭಾಗ್ಯಕೆಣೆಯುಂಟೆ 8 ದೀನ ಹೊಲೆಯಗೆ ಪ್ರಾಣ ಬರಿಸಿದನು ಏನು ಒಲ್ಲದೆ ಹರಿಯ ಯಜಿಸಿದನು ಜ್ಞಾನ ಭಾಗ್ಯದಿ ಮುಳುಗಿ ತೇಲಿದನು ದೀನ ಜನರುದ್ಧಾರ ಮಾಡಿದನು ದಾನಿ ಜಯಮುನಿ ವಾಯು ಹೃದಯಗ ಚಿನ್ಮಯ ಶ್ರೀ ಕೃಷ್ಣವಿಠಲನ ಗಾನ ಸುಧೆಯನು ಬೀರಿಸುತ ವಿ ಜ್ಞಾನವಿತ್ತ ಮಹೋಪಕಾರಿ ವಿಶೇಷ ಮಹಿಮನ 9
--------------
ಕೃಷ್ಣವಿಠಲದಾಸರು
ಭಾರತಿ ಪೊರೆಯೆಮ್ಮನು ಕಾರುಣ್ಯಮೂರುತಿ ಸಾರಸಭವಸತಿ ತೋರಿಸು ಸನ್ಮತಿ ಪ. ವೀಣಾಪುಸ್ತಕಧಾರಿಣಿ ಪನ್ನಗವೇಣಿ ವಾಣಿ ಗೀರ್ವಾಣಿ ಜನನೀ ಜಾಣೆ ಬ್ರಹ್ಮನ ರಾಣಿ ಸುಶ್ರೋಣಿ ಕಲ್ಯಾಣಿ 1 ನಾರದಮುನಿ ಸನ್ನುತೆ ಸಾರಸನೇತ್ರೇ ಚಾರುಚರಿತೇ ಸುರಸುತೆ ಮಾರನಯ್ಯನ ಚರಿತೆ ಸಾರುವಂತೆಸಗು ಮಾತೆ 2 ನಾಲಿಗೆಯೊಳು ನೆಲಸುತ ನಲಿನಲಿಯುತ ಮೇಲಹಕೃತಿ ನುಡಿಸುತ ಪಾಲಿಸು ಶ್ರೀಗಿರಿಲೋಲನ ಸೊಸೆ ನಿರುತ 3
--------------
ನಂಜನಗೂಡು ತಿರುಮಲಾಂಬಾ
ಮಂಗಳ ಪದ್ಯಗಳು ಜಯ ಜಯ ಶ್ರೀ ಮಹಾಕಾಳಿ ಗೋಕರ್ಣೆ ಮಹಾಬಲ ಪೂಣ್ಯವಧು ಭಯವಿರಹಿತ ಭವನಾಶಿನಿ ಸುಲಲಿತೆÀ ಭಕ್ತ ಜಿಹ್ವಾಗ್ರ ಮಧು ಪ ಪರಮೇಶ್ವರಿ ಪರಿಪೂರ್ಣಾಂಬಿಕ ನಿಜ ಪರಮಾನಂದ ಪರೇ ಪರತರವಸ್ತು ಪರಾತ್ಪರ ಶಾಂಭವಿ ಸುರಮುನಿ ಅಭಯಕರೇ ಜಯಜಯ 1 ವೀಣಾ ಪುಸ್ತಕಧಾರಿಣೆ ಅಗಣಿತ ಪಾನಪಾತ್ರಪ್ರಿಯೇ ವಾಣಿನಿತ್ಯಕಲ್ಯಾಣಿ ವಂದಿತಗುಣ ಶ್ರೇಣಿ ಮುನೀ ಸಾಹ್ಯೇ ಜಯಜಯ 2 ಹರಿಮೋಹಿನಿ ಹರಿವಾಹಿನಿ ಗಿರಿಸುತೆ ಹರಿಣಾಂಕಿಣಿ ಭವ್ಯಮುಖೆ ಹರಿಸಖ ಪ್ರಾಣಸಖೇ ಜಯಜಯ 3 ಸರ್ವಗುಣನಿಲಯೇ ಸರ್ವಾತ್ಮಕಿ ಸರ್ವಯಂತ್ರರೂಪೇ ಶರ್ವಾಣೆ ಸರ್ವೇಶ್ವರಿ ಸದಾಶಿವೇ ಸರ್ವ ಮಂತ್ರರೂಪೇ ಜಯಜಯ 4 ಮೂಲಾಧಾರೇ ಮುಕುಂದಾರ್ಚಿತ ಪದ ಬಾಲಾ ತ್ರಿಪುರಹರೇ ಮಾಲಿನಿ ಮಂತ್ರಾತ್ಮಕಿ ಮಹಾದೇವಿ ತ್ರಿ ಶೂಲಿನಿ ಶಶಿಶಿಖರೇ ಜಯಜಯ 5 ನಿತ್ಯಾರ್ಚನಿ ಸುಖಭೋಗಿನಿ ಸುಲಲಿತೇ ನಿತ್ಯಾನಂದಮಯೇ ನಿತ್ಯಾನಿತ್ಯ ಸ್ವರೂಪಿಣಿ ನಿರ್ಗುಣೆ ಸತ್ಯ ಸಾಧು ಹೃದಯೇ ಜಯಜಯ 6 ಶಂಭಾಸುರಮಹಿಷಾ ಸುರಮೇಕ್ಷಕ ದಂ¨ ಮುಕುಟಧರೇ ಅಂಬಾ ಶ್ರಿ ಮಹಾಕಾಳಿ ವಿಮಲಾನಂದ ಸುಖ ಶರೀರೇ ಜಯ ಜಯ 7 ಇತಿ ಶ್ರೀ ಮಹಾಕಾಳ್ಯಷ್ಟಕ ಸ್ತೋತ್ರಂ ತ್ರಿಕಾಲಪಠತೆ ನಿತ್ಯಂ ನಿತ್ಯಂ ನತಿಸುತಧನ ಪೌತ್ರಾದಿ ಕೃತಾರ್ಥಂ ಭವತಿ ಸತ್ಯಂ ಸತ್ಯಂ ಜಯಜಯ 8
--------------
ಭಟಕಳ ಅಪ್ಪಯ್ಯ
ಮೂರ್ತಿ ಧೃತ ಹೇಮವರ್ಣ ಸರ್ವಾಂಗ ಶೋಭಿತೆ ಕಾಮಿತಾರ್ಥ ಉದಾರಿಣಿ ಕುಂಡಲ ಪಾಣಿ ಪಾತ್ರ ಸುಧಾರಿಣಿ ಸೂರ್ಯ ಸುರಮುನಿಸ್ತೋಮ ಹೃದಯ ಸಂಚಾರಿಣಿ ಕಾಲ ಕಠಾರಿ ಪರಶಿವೆ 1 ಅಂಬುಜಾನನೆ ಸಕಲ ಕುಟುಂಬ ರಕ್ಷಕ ಮೋಹಿನಿ ಶಂಭುದಾನವ ಶಿಕ್ಷಿತೆ ಶಿವ ಪ್ರತಿಬಿಂಬೆ ಸಿಂಹ ಸುವಾಹಿನಿ ಕಂಬುಕಂಧರ ರತ್ನ ಭೂಷಿತೆ ತುಂಬರ ಪ್ರಿಯಗಾಯಿನಿ ಕುಮುದ ಲೋಚನೆÀ 2 ವರದ ಅಭಯ ಕರಾಂಬುಜೇಷಣೆ ವೀಣಾ ಪುಸ್ತಕ ಶೋಭಿತೇ ಪರಮ ಪಾವನ ಚರಿತೆ ಪರಮೇಶ್ವರಿ ಪ್ರತಾಪ ವಿರಾಜಿತೆ ಭರಿತ ಬಂಧ ಕಟಾದಿವಾಸಿನಿ ಭಕ್ತ ಸಜ್ಜನ ಪೂಜಿತೆ ಗುರು ವಿಮಲಾನಂದ ದೇವಿ ಶ್ರೀ ಮಹಾಲಕ್ಷ್ಮೀ ಸಂತತ 3
--------------
ಭಟಕಳ ಅಪ್ಪಯ್ಯ
ಮೋಕ್ಷವಿಲ್ಲಾ | ಗುರು ಕೃಪೆ ವಿನಾ ಪ ಮಾನ್ಯ ಸ್ವದೇಶದಿ ಧನ್ಯ ವಿದೇಶದ | ಉನ್ನತ ಕುಲದುತ್ಪನ್ನ ನೋಡಲು | ಸನ್ನುತ ಕರ್ಮಗಳನ್ನಸುವ ಸಂ | ಪನ್ನನು ಗುಣದಲಿ ಮುನ್ನಾಗೇನು 1 ಪುಸ್ತಕ ಹಿಡಿಯಲು ವಸ್ತು ಬೃಹಸ್ಪತಿ | ವಿಸ್ತರಿಸ್ಹೇಳುವ ಶಾಸ್ತ್ರದರ್ಥವ | ದುಸ್ತರ ಯೋಗದ ನಿಸ್ತರಿಸುವ ಘನ | ಪ್ರಸ್ತುತ ತಪಸಭ್ಯಸ್ತ್ರಾಗೇನು 2 ಸುಂದರಿ ಮಾನಿನಿಗೊಂದೇ ಮಂಗಳ | ಹೊಂದದೇ ಆಭರಣೆಂದೇನು ಫಲ | ಇಂದಿರೆ ಪತಿ-ವಲುವಂದದಿ ಭಾವದಿ | ತಂದೆ ಮಹಿಪತಿಗೊಂದಿಸದನಕಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯತಿಗಳು ಇರುವರ್ಯತಿಗಳ್ಹನ್ನೆರಡು ಮಂದಿ ರಘುವ(ರ) ಅಕ್ಷೋಭ್ಯತೀರ್ಥರ ನಡುವೆ ಕುಳಿತಿದ್ದಂಥ ಟೀಕೆ ಬರೆದ ಜಯ ಮಹರಾಯರಿವರು ಪಾಲಿಸೆನ್ನನು ಜಯರಾಯ ಪ ಎತ್ತಿನ ಜನ್ಮದಿ ಬಂದು ಶ್ರೀಮದಾನಂದತೀರ್ಥರಲ್ಲಿದ್ದು ಶಿಷ್ಯತ್ವ ವಹಿಸಿಕೊಂಡು ಬಿಟ್ಟು ಹರಿದಿನ ಮೇವು ನೀರನೆ ಪುಸ್ತಕದ ಗಂಟ್ಹೊತ್ತು ತಿರುಗುತ ತತ್ವಜ್ಞಾನವ ತಿಳಿದು ದ್ವಾದಶ ಸ್ತೋತ್ರ ಹೇ ಳುತ ಪ್ರಕಟವಾದರು 1 ಗೋವುಸುತನ ಜನ್ಮ ನೀಗಿ ಮಂಗಳವೇಡಿ ಸಾಹುಕಾರನ ಸುತನಾಗಿ ತೇಜಿಯನೇರಿ ಮಾ(ಮಹಾ?) ನದಿ ಮಧ್ಯದಲಿ ಮಂಡಿಬಾಗಿ ನೀರನು ಕುಡಿಯ- ಲಾಕ್ಷಣ ನೋಡಿ ಕರೆತರಲವರ ಗುರುಗಳ ಪಾದಕÀ್ವಂದನೆ ಮಾಡಿ ನಿಂತರು 2 ಅಕ್ಷೋಭ್ಯತೀರ್ಥರು ಆ ಮಹಿಮರ ನೋಡಿ ಕೊಟ್ಟು ಕಾಯ್ಕರದಲಿ ಜುಟ್ಟು ಜನಿವಾರವನು ಕಿತ್ತೆ ಕಾವಿಶಾಟಿಗಳನು ಉಟ್ಟು ದಂಡ ಕಾಷ್ಠವ್ಹಿಡಿದು ಶ್ರೇಷ್ಠಯತಿ ಆಶ್ರಮದಿ ಕುಳಿತಿರೆ ಹೆತ್ತವರು ಹುಡುಕುತ್ತ ಬಂದರು 3 ಕಂಡಕಂಡಂತೆ ಮಾತುಗಳಾಡಿ ಗುರುಗಳಿಗೆ ಧೋಂಡು ರಘುನಾಥನ ಕರಕೊಂಡು ಹಿಂದಕೆ ಹೋಗಿ ಹೆಂಡತಿ ಸಹಿತೆರೆದು ಪ್ರಸ್ತ ಮಂಡಿಗಿ ಮೃಷ್ಟಾನ್ನ ಉಣಿಸಿ ಚೆಂದದ್ವಸ್ತ್ರಾಭರಣ ಕೊಟ್ಟುರುಟಣೆಯ ಮಾಡಿಸ್ಯಾರತಿಯ ಬೆಳಗೋರು 4 ಸುಪ್ಪತ್ತಿಗೆಯು ಮಂಚ ಕುತ್ತಣಿ ಹಾಸಿಕೆಯಲ್ಲಿ ಇಟ್ಟು ತಾಂಬೂಲ ಬು- ಕ್ಕಿ ್ಹಟ್ಟು ಪರಿಮಳ ಗಂಧ ಸಕ್ಕರೆ ಕ್ಷೀರಗಳು ಲಡ್ಡಿಗೆ ಅಚ್ಚಮಲ್ಲಿಗೆ ಮಾಲೆ ಫಲಗಳು ರತ್ನ ಜ್ಯೋತಿ ಪ್ರಕಾಶದೊಳಗುತ್ತಮರು ಕುಳಿತಿರಲರ್ಥಿಯಿಂದಲಿ 5 ಮಡದಿ ಮಂಚಕೆ ಬಂದ ಸಡಗರವನು ನೋಡಿ ಹೆಡೆಯ ತೆಗೆದು ಕಣ್ಣು ಬಿಡುತ ವಿಷನಾಲಿಗೆಯ ಚಾಚುತಾರ್ಭಟಿಸಿ ಬರುತಿರಲ- ಸಾಧ್ಯಸರ್ಪವು ಕಡಿವುದೆನುತೆದೆ ಒಡೆದು ಕೂಗಲು ಹಡೆದವರು ಬಾಯ್ಬಿಡುತ ಬಂದರು 6 ಹಾವಾಗ್ಹರಿದು ಹುತ್ತವ ಸೇರಿಕೊಂಬುವೋದೀಗ ನಾವು ಮಾಡಿದಪರಾಧ ಕ್ಷಮಿಸಬೇಕೆನುತಲಿ ಬೇಡಿಕೊಂಡಾಕ್ಷಣದಿ ಮಗನ ನೋಡಿ ಕರೆತಂದಾಗ ಅಕ್ಷೋಭ್ಯರಾಯರಂಘ್ರಿಚರಣಕೊಪ್ಪಿಸಿ ನಾವು ಧನ್ಯರಾದೆವೆಂದರು 7 ಅತಿ ಬ್ಯಾಗದಿಂದವರಿಗ್ಯತಿ ಆಶ್ರಮವಕೊಟ್ಟು ದೇ- ವತಾ ಪೂಜೆಗಧಿಕಾರ ಮಾಡಲು ಗುರುಗಳು ಪಾಂಡಿತ್ಯದಿ (ಇ)ವರಿಗೆ ಪ್ರತಿಯು ಇಲ್ಲ- ವೆಂದೆನಿಸಿ ಮೆರೆವರು ಪತಿತರನೆ ಪಾವನವ ಮಾಡಿ ಸದ್ಗತಿಯ ಕೊಡುವ ಸಜ್ಜನ ಶಿರೋಮಣಿ 8 ಮಧ್ವರಾಯರು ಮಾಡಿದಂಥ ಗ್ರಂಥಗಳಿಗೆ ತಿದ್ದಿ ಟೀಕೆ ಟಿಪ್ಪಣಿ ಮಾಡಿ ಪದ್ಮನಾಭ ಭೀಮೇಶಕೃಷ್ಣಗೆ ಪರಮ ಭಕ್ತರೆನಿಸಿ ಮೆರೆವರು ವಿದ್ಯಾರಣ್ಯನ ಗರುವ ಮುರಿದು ಪ್ರಸಿದ್ಧರೆನಿಸೋರು ಸರುವ ಲೋಕದಿ 9
--------------
ಹರಪನಹಳ್ಳಿಭೀಮವ್ವ
ಯತಿವೃಂದ ಜಯತೀರ್ಥ ಜಯತೀರ್ಥ ಪ ಭವ | ಭಯಹರ ಗುರುವರ ಅ.ಪ ಕಾಗಿಣಿ ತಟ ಸ್ಥಿತ | ಮೇಘನಾಥಪುರ ಆಗರವೆನಿಸಿದ ಯೋಗಿವರೇಣ್ಯ 1 ತತ್ವಗಳರ್ಥವ | ಪುಸ್ತಕ ಭಾರವ ಎತ್ತಿನ ರೂಪದಿ | ಪೊತ್ತ ಮಹಾತ್ಮ 2 ಮರುತ ಸುಶಾಸ್ತ್ರಕೆ | ವಿರಚಿಸಿ ಟೀಕೆಯ ಮುರಿದು ಕುಭಾಷ್ಯವ | ಮೆರೆದ ಮಹಂತ 3 ನೆರೆನಂಬಿದೆ ಶ್ರೀ | ಹರಿನಾಮವ ನಿರುತಗರಿದು ಪೊರಿ | ನರನವತಾರಿ 4 ಭೀಮ ಭವಾಟವಿ | ಧೂಮ ಶ್ರೀ ಶಾಮಸುಂದರ ಪ್ರೇಮದ ದಾಸ 5
--------------
ಶಾಮಸುಂದರ ವಿಠಲ
ಯಾಕೆ ಬರವಲ್ಲಿ ಭಕುತನವಸರಕೆ ಪ ಬೇಕಿಲ್ಲೆ ಭಕ್ತವತ್ಸಲನೆಂಬ ಬಿರುದೀಗ ಅ.ಪ ಸುರಮುನಿ ನುಡಿಕೇಳಿ ನಾರಿ ಸತ್ಯಭಾಮೆ ಹರಿ ನಿನ್ನ ದಾನಮಾಡೆ ವರ ವೀಣ ಪುಸ್ತಕ ಹೊರಿಸಿ ಕರೆದೊಯ್ದನೇನೊ 1 ಮಾತೆಯ ಹಂಗಣೆಯ ಮಾತಿಗೆ ಖತಿಗೊಂಡು ಪೋತ ಧ್ರುವ ಅರಣ್ಯ ಪೋಗೆ ಕಾಯ ಪೋದ್ಯಾ 2 ಕುರುಪ ಧರ್ಮಾದ್ಯರ ಕರೆಸಿ ಪಗಡೆಯಾಡೆ ಸರಸಿಜಾಕ್ಷಿಯ ಸೀರೆಯ ಕಾಯ ಪೋದ್ಯಾ 3 ಹಿರಣ್ಯಾಕ್ಷನನುಜ ತರಳನ ಬಾಧಿಸೆ ಥೋರ ಕಂಬದಿ ಒಡೆದು ನರಮೃಗ ರೂಪನಾಗಿ ಪೋದ್ಯಾ 4 ನೀರಡಿಸಿ ಗಜರಾಜ ಸರೋವರಕೆ ಬರಲು ನಕ್ರ ಪಿಡಿದೆಳೆಯೆ ಕಾಯ ಪೋದ್ಯಾ 5 ವರವೇದ ಶಾಸ್ತ್ರ ತೊರದು ಪರಮ ನೀಚಳ ಕೂಡಿ ಮರಣ ಕಾಲದಲ್ಲಜಮಿಳ ನಾರಗನೆಂದು ಕರೆಯೆ ಪೋದ್ಯಾ 6 ಕರುಣಿ ವಿಜಯ ರಾಮಚಂದ್ರವಿಠಲ ಅವರ ಸರಿ ನಾನಲ್ಲವೊ ತವ ಚರಣ ಸೇವಕರ ಸೇವಕನೊ 7
--------------
ವಿಜಯ ರಾಮಚಂದ್ರವಿಠಲ
ಲಕ್ಷ್ಮೀದೇವಿ ಜನನಿ ಬ್ರಹ್ಮನ ರಾಣಿ | ಪುಸ್ತಕಪಾಣಿ ಪ. ಫಣಿರಾಜನಿಭವೇಣಿ | ವರವೀಣಾಪಾಣಿ || ಘನವಿದ್ಯಾದಾಯಿನಿ | ಪರಮಕಲ್ಯಾಣಿ1 ಶರದಿಂದುನಿಭವಕ್ತ್ರೆ | ಅರವಿಂದದಳನೇತ್ರೆ || ಪರಮಕೋಮಲಗಾತ್ರೆ | ಸುರಮುನಿನುತಿಪಾತ್ರೆ 2 ನೃತ್ಯವಿನೋದಿನಿ | ಸ್ತೋತ್ರ ಸುಪ್ರೀತೆ ನೀ ಭೃತ್ಯೌಘಪಾಲಿನಿ | ನಿತ್ಯಕಲ್ಯಾಣೀ 3
--------------
ವೆಂಕಟ್‍ರಾವ್
ವಾಣಿ ವೀಣಾಪಾಣಿ ಬ್ರಹ್ಮನರಾಣಿ ಪಾಹಿ ಕಿಂಕರ ಪಾಪಕÀೃಪಾಣೀ ಪ ಖ್ಯಾತೇ ವೇದಮಾತೇ ನಾಗಭೂಷಣ ಮಾತೇ ಮಾಲಾಪುಸ್ತಕ ಶೋಭಿತಹಸ್ತೇ 1 ಭವ್ಯೇ ಭವ್ಯಕೃತ್ಯೇ ಭವ ಮುಖ್ಯರಿಗಭಯವನಿತ್ತೇ ಮತ್ತೆ ಗಿರಿಜಾದಿಗಳಿಗೆ ನೀನತ್ತೆ 2 ಶುಕ್ಲೇ ಪರಶುಕ್ಲೇ ಶುಕ್ಲಹಂಸದಿ ಮೆರೆದಿರ್ಪೆ ಶುಕ್ಲ ರಾಜೇಶ ಹಯಮುಖ ಭಕ್ತೇ 3
--------------
ವಿಶ್ವೇಂದ್ರತೀರ್ಥ