ಒಟ್ಟು 42 ಕಡೆಗಳಲ್ಲಿ , 23 ದಾಸರು , 39 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾವನೀ ಆವಹಿ ಮಾಂ ಪ ಪಾವನಿ ಪಾತಕಾರಣ್ಯ ಮಹಾ ಪಾವಕÀ ನೀನಾದ್ಯೊ ಘನ್ನ ಆಹಾ ಆವಕಾಲದಲ್ಲಿ ಭಾವಜಜನಕನ ಸೇವೆಯೊಳಿರುವಂಥ ಭಾವ ಪಾಲಿಸೊ ದೇವ ಅ.ಪ ಪ್ರಾಣಾದಿ ಪಂಚರೂಪಕನೆ ಸುರ ಗಣ ಕರಾರ್ಚಿತ ಪಾದಯುಗನೆ ಗುಣ ಗಣನಿಧಿ ಬಾರತೀಧವನೇ ಜಗ ತ್ರಾಣ ಕಾರಣನೆ ಮಾರುತನೇ ಆಹಾ ಚಾರು ಚ ರಣ ವಂದಿಪೆ ಜಗತ್ಕಾರಣಕರ್ತನೇ 1 ಖದ್ಯೋತ ಶತ ನಿಭ ಚರಣಾ ಅನಾದ್ಯ ಹರಣ ಸದ್ಯ ವಿದ್ಯೋತ ವೇದಾಂತಾಭರಣಾ ಅನ ವಧ್ಯ ಸ್ವಭಕ್ತಾಂತಃ ಕರಣಾ ಆಹಾ ವಿದ್ಯಾರಮಣ ನೀನೆ ಸದ್ಯೋಜಾತಗೆ ಸು ವಿದ್ಯಾ ಪೇಳಿದ್ಯೋ ಪ್ರದ್ಯುಮ್ನನ ತೋರಿಸೋ 2 ಶ್ರೀನಾಥನಿಗೆ ಪ್ರತೀಕಾ ಬಾಲ ಭಾನುಕೋಟಿ ಪ್ರಕಾಶಾ ಏನು ಕರುಣಾಳೊ ಭಕ್ತಾಭಿsಲಾಷಾ ಅನು ಸಾರದಿ ಪೂರ್ತಿಪ ಈಶಾ ಆಹಾ ಹನುಮದಾದಿರೂಪ ಘನವಾಗಿ ಧರಿಸಿ ನೀ ವನಧಿ ಲಂಘಿಸಿ ಹರಿ ವನಿತೆಯ ತಂದಿತೆÀ್ತ 3 ಸೂತ್ರನಾಮಕ ಶುಭಗಾತ್ರಾ ಚಿತ್ರ ಚಂiÀರ್i ಪಿತಾಮಹಪುತ್ರಾ ಗೋತ್ರ ಧರಮುಖ ದ್ಯು ಸ್ವಕÀಲತ್ರಾ ಮಿತ್ರ ತಾಡನ ಹರ್ತ ಅರ್ಥಗಾತ್ರಾ ಆಹಾ ಸುತ್ರಾಮ ಮುಖ ತ್ರಿನೇತ್ರಾಂತ ಸುರಕೃತ ಸ್ತೋತ್ರ ಪದಾಂಬುಜ ಮದಂತ್ರದಿ ನಿಲಿಸಯ್ಯಾ 4 ಘೋಟ ಖೇಟ ಕಂಠೀರವ ವದನಾ ಭವ ಕಾಟ ತಪ್ಪಿಸಿ ಪೊರಿ ಎನ್ನಾ ಕಿಟ ಮ ರ್ಕಟ ರೂಪನೆ ನಿನ್ನಾ ಭಕ್ತ ಕೋಟಿಯೊಳಗೆ ಸೇರಿಸೆನ್ನಾ ಆಹಾ ದಿಟ್ಟ ಮಹಿಮ ಗುರು ಜಗನ್ನಾಥ ವಿಠಲನ್ನ ಮುಟ್ಟ ಭಜಿಪ ದಿವ್ಯ ದÀೃಷ್ಟಿಯ ಪಾಲಿಸೋ 5
--------------
ಗುರುಜಗನ್ನಾಥದಾಸರು
ಬಂದೆ ಭಗವತ್ಪಾದಯುಗಾರ ವಿಂದಕೆ ಮಿಳಿಂದನಾಗಿ ವಂದನೀಯರೆ ಯತಿಕುಲಾಬ್ಧಿ ಚಂದ್ರರ ಭುವನೇಂದ್ರತೀರ್ಥರೆ1 ಪರಮ ಪಾವನ ಭುವನೇಂದ್ರರ ಕರಸಂಜಾತ ವರದೇಂದ್ರರ ಕರಸರೋರುಹಭವರೆ ಮಹಾ ಕರುಣಾಂತಃಕರಣ ಧೀರರೆ2 ಸುಮತೀಂದ್ರಾದಿ ಯತೀಂದ್ರರ ವಿಮಲ ಹೃದಯಕಮಲಭಾಸ್ಕರ ಅಮಮ ನಿಮ್ಮ ಕಾಂಬ ಯೋಗ ಸುಕೃತ ಭೋಗಪೂಗ3 ಪೂರ್ಣಪ್ರಜ್ಞಾಚಾರ್ಯವರ್ಯ ಸನ್ನುತ ಮತಧೈರ್ಯ ಧುರ್ಯ ಧನ್ಯನಾದೆನು ನಾನಿಂದು ಸನ್ನಿಧಾನವನು ಕಂಡೆನು4 ಶ್ರೀಶ ಲಕ್ಷ್ಮೀನಾರಾಯಣ ವ್ಯಾಸ ರಘುಪತಿಯ ಚರಣೋ- ಪಾಸಕರೆ ಪಾವನರೆ ಕಾಶೀವiಠಾಧೀಶ್ವರರೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಬಾರೊ ಶ್ರೀವೆಂಕಟರಮಣ ತವಪಾ- ದಾರಾಧಕರನು ಪೊರೆಯಲು ಕರುಣಾಪೂರ್ಣ ಪ ಬಾರೋ ನಮಿಸುವೆ ಪೂರ್ಣ ಕೃಷ್ಣಾ ತೀರದಲಿ ಮಾಂಡವ್ಯ ಋಷಿಗಳ ಘೋರ ತಪಸಿಗೆ ಒಲಿದು ಗುಡೆಬಲ್ಲೂರು ಮಂದಿರನೆಂದು ಕರೆಸುತ ಅ.ಪ ಎಲ್ಲ ಕಡೆಗೆ ನೆಲೆಸಿರುವ ಸಿರಿ ನಲ್ಲನೊಲಿಸಲು ತಪವನು ಗೈವ ಬಲ್ಲಿದ ಮಾಂಡವ್ಯರಿರವ ಕಂಡು ಗೊಲ್ಲರು ಮಾಡಿದರನು ದಿನ ಶೇವಾ ಪುಲ್ಲನಾಭನು ದರುಶನವ ಮುನಿ ವಲ್ಲಭಗೆ ತೋರಿಸಲು ಬೇಡಿದ ಗೊಲ್ಲರೆನ್ನಯ ಭಕುತರವರಿಂದಲ್ಲಿ ಪೂಜೆಯಗೊಳ್ವದೆಂದನು 1 ಬಾರೊ ಬೇಗನೆ ದ್ವಿಜರಾಜ ಧ್ವಜ ವೇರಿ ಪೊರೆದೆಯೊ ಬಂದು ಕರಿಯೆ ಕರಿ ರಾಜ ತೋರೋ ಚವತರಣ ಸರೋಜಯುಗ್ಮ ಸಾರಿ ಭಜಿಸುವ ಭಕುತರ ಕಲ್ಪ ಭೂಜ ಮಾರಜನಕನೆ ಚಾರುಕನಕ ಕಿ ರೀಟ ಕುಂಡಲಹಾರಪದಕ ಕೇಯೂರ ಸಾಲಂ- ಕಾರ ವಪು ಶೃಂಗಾರದಲಿ ರಥವೇರಿ ಮೆರೆಯುತ 2 ವೇದವೇದ್ಯನೆ ನಿನ್ನ ಪ್ರೇಮಾ ಪಡೆದ ಪಾದ ಮಹಿಮೆಯ ವರ್ಣಿಸಿದ ದೇವ ಶರ್ಮಾ ಬೋಧಾದಿ ಸದ್ಗುಣಧಾಮ ಪಾಹಿ ಮೇದಿನಿ ವಿಬುಧ ಪೂಜಿತ ಪೂರ್ಣಕಾಮ ಮೇದಿನಿಯೊಳು ಶ್ರೀದ ನಿನ್ನಯ ಪಾದಯುಗಳವ ಕಂಡು ಹರುಷದಿ ಪಾದುಕೆಯ ರಚಿಸಿದಗೆ ಒಲಿದ ಅಗಾಧ ಮಹಿಮನೆ ಮೋದಗರೆಯಲು 3 ಒಂದಿನ ನಿಶಿಯೊಳುತ್ಸವದಿ ದಣಿ ದಂದು ಮಲಗಿರಲರ್ಚಕರು ದೇವಾಲಯದಿ ಬಂದು ಚೋರರು ಅತಿಜವದಿ ನಿನಗೆ ಪೊಂದಿಸಿದೊಡವೆ ಗಳನು ಚೌರ್ಯತನದಿ ಮಂದ ಮತಿಗಳು ಒಯ್ಯುತಿರೆ ಖಳ ವೃಂದಕಂಗಳು ಪೋಗೆ ತುತಿಸಲು ಚಂದದಿಂ ಬರೆ ಹೇಮನಾಮವ ಕುಂದದಲೆ ಮಾಡಿಸಿದರಾಕ್ಷಣ 4 ನೀರಜಾಸನ ಮುಖ್ಯ ತ್ರಿದಶ ಗಣದಿಂ- ಪಂಕಜ ಭಕ್ತಪೋಷ ಸೂರಿಜನರ ಸಹವಾಸ ಕೊಡು ಧಾರುಣಿಯೊಳು ಕೃಷ್ಣ ತೀರನಿವಾಸ ಬಾರೊ ನಿನ್ನನು ಶೇರಿದವರW ವಾರಿವಾಹ ಸಮೀರ ಕಾರ್ಪರ ನಾರ ಶಿಂಹಾತ್ಮಕನೆ ಯನ್ನಯ ಭವ ಭಯ ದೂರಮಾಡಲು 5
--------------
ಕಾರ್ಪರ ನರಹರಿದಾಸರು
ಬ್ರಹ್ಮಾದಿದೇವಗಣ ನಮಿತ ಪಾದಯುಗಳನೆ ನಿನಗೆ ರಂಗಧಾಮನೆ ಪ ಸುಮನಸರೊಡೆಯನೆ ಕಮಲಾಪತಿಯೆ ಅ.ಪ. ಗೋಪಾಲ ಬಾಲಕಿಯರ ಮನಕುಮುದ ಚಂದ್ರನೆ ನಿನಗೆ ರಂಗಧಾಮನೆ ಕಪಟ ರಕ್ಕಸರನು ಮಡುಹಿದನೆ 1 ಕಾವೇರಿ ತೀರದಲ್ಲಿ ನಿಂದ ಪಾವನರೂಪನೆ ಹಾವಿನಹÉಡೆಯೊಳ್ಕುಣಿದವನೆ ಸನ್ಮಂಗಳಂ ನಿನಗೆ ರಂಗಧಾಮನೆ ನಮ ತೋಹನಾಂಗೀಯ ರಾಮನಾಪಹಾರಿಯೆ 2 ಮಾನಿನಿ ದ್ರೌಪದಿಯ ಮಾನವನ್ನು ಕಾಯ್ದನೆ ನಿನಗೆ ರಂಗಧಾಮನೆ ದಿನಕರ ಕೋಟಿತೇಜನೆ ರಂಗೇಶವಿಠಲನೆ 3
--------------
ರಂಗೇಶವಿಠಲದಾಸರು
ಮಂಗಳ ಪಂಡರಿವಾಸನಿಗೆ ಜಯ ಮಂಗಳ ಇಟ್ಟಿಗೆ ನಿಲಯನಿಗೆ ಪ. ಗೋಕುಲವಾಸಗೆ ಆಕಳ ಪಾಲಗೆ ಲೋಕ ಲೋಕಗಳನ್ನು ಪೊರೆವನಿಗೆ ಪಾಕಶಾಸನ ವಂದ್ಯ ರುಕ್ಮಿಣಿ ರಮಣಗೆ ಲೋಕಮೋಹನ ಪಾಂಡುರಂಗನಿಗೆ 1 ಪಾಂಡವ ಪಾಲಕ ಪುಂಡಲೀಕನಿಗೊಲಿದು ಪಂಡರಿಕ್ಷೇತ್ರದಿ ನೆಲಸಿದಗೆ ಮಂಡೆ ಸೋಕಿಸಿಕೊಂಬ ಪುಂಡರೀಕ ಪಾದಯುಗಳನಿಗೆ 2 ಕಟಿಯಲ್ಲಿ ಕರವಿಟ್ಟು ಕೈಲಿ ಶಂಖವ ಪಿಡಿದು ನಟನೆಗೈಯ್ಯುವ ವೇಷಧಾರಕಗೆ ತಟಿನಿ ಚಂದ್ರಭಾಗೆ ತೀರದಿ ಮೆರೆಯುವ ವಟುರೂಪಿ ಗೋಪಾಲಕೃಷ್ಣವಿಠ್ಠಲಗೆ 3
--------------
ಅಂಬಾಬಾಯಿ
ಮಿಗೆ ಧನ್ಯ ನಾನಾದೆ ಜಗದ ವಳಗೆ ಅಘ ಕಳಿವ ಗುರುಪಾದಯುಗಳ ಕಣ್ಣಲ್ಲಿ ಕಂಡು ಪ ಮುಕುಟ ಮಂಡಿತ ದಿನಪ ಪ್ರಕರ ಸನ್ನಿಭ ಶಿರದಿ ಮಕರಂದ ಮಯವಾದ ಶಿಖದ ಸೊಬಗು ಅಕಳಂಕಮಾದ ಫಾಲಕೆ ವಪ್ಪುವ ತಿಲಕ ಭ್ರುಕುಟಿ ಮಧ್ಯದಿ ಪುಂಡ್ರ ಸುಖದ ದ್ವಯದ್ರಿಕ ಕಂಡು 1 ಹರಿನಾಮ ರವಿಯ ಕಂಡರಳುವೊ ಕರ್ಣಾಖ್ಯ ಸರಸಿರುಗ್ವಗಳು ಚಂದ್ರ ತೆರ ಶೋಭಿಪಾ ವರಕದಪಯುತ ವದನ ಕೊರಳು ಉರುಬಲದ ಭುಜ ಕರ ಹೃದಯ ಎರಡು ಘನ ಗೆರೆಯು ಉದರವ ಕಂಡು 2 ಧಿಟ ಕಟಿತ ಪಟರೋಮ ದಟಿತವಾಗಿಹ ಜಾನು ಚಟುಲಶಿರಿ ಗೋವಿಂದ ವಿಠಲ ನಾಮ ಪಠಿಸಿದಾಕ್ಷಣ ನಟಿಸುವ ಪಾದದ ಕಠಿಣ ಸಂಸಾರ ಸಂಕಟ ಕಳೆವ ರಜಕಂಡು 3
--------------
ಅಸ್ಕಿಹಾಳ ಗೋವಿಂದ
ಮುಕ್ತನಾವನೋ ಜೀವನ್ಮುಕ್ತನಾವನೋ ಪ ಮುಕ್ತನಾವನಿವರ ಪಾದಾಸಕ್ತನಾಗಿ ಸರ್ವಕರ್ಮ ಭಕ್ತಿಯಿಂದ ನೀಡಿ ವಿಷಯಾಸಕ್ತನಾಗದವನಿಗಿನ್ನ ಅ.ಪ ಉದಯಕಾಲದಲ್ಲಿ ಎದ್ದು ನದಿಯಸ್ನಾನಮಾಡಿ ಇವರ ಪದುಮಸಮಪಾದಯುಗಳ ಹೃದಯದಲ್ಲಿ ಭಜಿಪಗಿನ್ನ 1 ವನಿತೆ ಧಾನ್ಯ ಧನುವು ತನಯ ಪ್ರಾಣ ಇವರ ಪಾದವನಜಕರ್ಪಿಸಿರುವಗಿನ್ನ 2 ಊಟ ಕೂಟ ನೋಟಮಾಟ ಪಾಠ ಆಟ ಕಾಟ ಇವರ ಉದಧಿ ದಾಟುವಾವಗಿನ್ನಮತ್ತೆ 3 ಉಕ್ತ ಕರ್ಮದಲ್ಲಿ ಮನ ಸಕ್ತನಾಗಿ ಹರಿಯ ಪಾದ ಭಕ್ತಿಯಿಂದ ಭಜಿಸಿ ಪಾಪಮುಕ್ತನಾಗುವವಗಿನ್ನ 4 ಶಕ್ತಿ ಇದ್ದರೊಳಗೆ ಹರಿಯ ಭಕ್ತಜನರ ಭಜಿಸಿ ಸರ್ವೋ ವಿಭೂತಿ ಮನದಿ ವ್ಯಕ್ತಮಾಡಿದವಗಿನ್ನ 5 ಮೋದತೀರ್ಥ ಶಾಸ್ತ್ರಸಾರ ಸ್ವಾದ ಮನದಿ ತಿಳಿದು ಅವರ ಹಾದಿಹಿಡಿದು ಬುಧರ ದಿವ್ಯ ಪಾದಯುಗಳ ಭಜಿಪಗಿನ್ನ 6 ಶಿರದಿ ಇದ್ದ ಹರಿಯ ರೂಪ ಅರಿದು ಮನಸಿನಿಂದ ನಿತ್ಯ ಶಿರದಿ ಕಾರ್ಯಮಾಡಿ ತಾನು ಹಿರಿದು ಹಿಗ್ಗುವಗಿನ್ನ 7 ನೇತ್ರಮೊದಲಾದ ಸರ್ವಗಾತ್ರದಲ್ಲಿ ಇರುವ ತೀರ್ಥ ಕ್ಷೇತ್ರಮೂರ್ತಿ ತಿಳಿದು ತನ್ನ ಗಾತ್ರನಿರ್ಮಲ ಮಾಳ್ಪಗಿನ್ನ 8 ಈಶ ಹರಿಯು ಸರ್ವ ಜೀವ ದಾಸರೆಂದು ತನ್ನ ಹೃದಯೋ ಪಾಸನಾವ ಮಾಡಿ ವಿಷಯ ಆಶೆಬಿಟ್ಟು ಇರುವಗಿನ್ನ 9 ಎನು ಮಾಳ್ಪ ಕರ್ಮವೆಲ್ಲ ಶ್ರೀನಿವಾಸ ಮಾಳ್ಪನೆಂದು ಜ್ಞಾನದಿಂದ ಸರ್ವರಲ್ಲಿ ಧ್ಯಾನಮಾಳ್ಪ ಮನುಜಗಿನ್ನ 10 ಶ್ವಾನ ಗೋವು ದ್ವಿಜ ಮತ್ತೆ ಅನಿ ಮೊದಲು ಸರ್ವರಲ್ಲಿ ಜ್ಞಾನಗಮ್ಯ ತಾನು (ತಾನೆ) ಸಮಾನನೆಂದವಗಿನ್ನ 11 ಅಮೃತ ವಿಷವು ಎಲ್ಲ ಸ್ವಾದು ಸಮವೆಂದು ಅಲ್ಲಿ ಇಚ್ಚೇ ಮಾಡದವಗಿನ್ನ 12 ವೃತ್ರಸೂದನನುಜ ಸರ್ವಕರ್ತೃ ಎಂಬವಗಿನ್ನ 13 ಪಾದ ದೂತ ನಾನು ಎಂದು ನಿತ್ಯ ಪಾತಕಾರ್ಯ ಮಾಡಿದಾಗ್ಯು ಪೂತನೆನಿಪನವನಗಿನ್ನ 14 ಸಿಟ್ಟು ಶೋಕ ಹರ್ಷ ಮೋಹ ಸುಟ್ಟು ಗುರುಜಗನ್ನಾಥ ವಿಠಲನ್ನ ಭಜಿಸಿ ಜಗದಿ ಶಿಷ್ಟ ನಾಗಿರುವಗಿನ್ನ 15
--------------
ಗುರುಜಗನ್ನಾಥದಾಸರು
ರಾಗಿ ಬೆಳೆಯುವಾ ನಿರ್ಮ¯ರಾಗಿ ಬೆಳೆಯುವಾ ಪ ಸೇವಕರಾಗಿ ಬೆಳೆಯುವಾ ಭಾವುಕರಾಗಿ ಬೆಳ ಗೂವರಾಗಿಯಾದ ಮೇಲೆ ರಂಗನಪಾದವ ಪೂಜಿಪರಾಗಿ ಅ.ಪ ಪರರ ಹಳಿಯದಿರುವರಾಗಿ ಪರರಸುಖಕೆ ನಲಿವರಾಗಿ ಪರರ ಸೇವೆಗೈವರಾಗಿ ಪರಮಶಾಂತರಾಗಿ ಹಿರಿಯರೆಡೆಯ ಕಿರಿಯರಾಗಿ ಕಿರಿಯರೆಡೆಯ ಗೆಳೆಯರಾಗಿ ಹರಿಯನೆನೆವ ಮಾನಸರಾಗಿ ಪರಮಭಕ್ತಿಯಿಂದ ಜಾನಿಪರಾಗಿ1 ವಿತ್ತದಾಸೆಯ ಹಳಿವರಾಗಿ ಚಿತ್ತಪಿತ್ತವ ತೊಡೆವರಾಗಿ ನಿತ್ಯ ತೃಪ್ತರಾಗಿ ಹೊತ್ತಿಗೊದಗಿ ಬರುವರಾಗಿ ಮತ್ತು ಭ್ರಮೆಗಳಿಲ್ಲದರಾಗಿ ಪಾದಯುಗಳಕೆರಗುವರಾಗಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದಿಸುವೆನನವರತ ಇಂದಿರೇಶಾ ಪ ನೊಂದು ಬಳಲಿದೆನಯ್ಯ ಸಲಹೋ ಶ್ರೀಶಾ ಅ.ಪ ಇಂದು ನರಜನುಮದೊಳು ನೊಂದೆನಯ್ಯ ಮುಂದಿನಾ ಜನುಮಗಳ ಸಂದಣಿಗಳೊಳು ನಿನ್ನ ಸುಂದರ ಪಾದಾಂಬುಜವನೆಂದೆಂದು ತೋರೆಂದು1 ನರಜನ್ಮ ಹಿರಿದೆಂದು ಅರಿತವರು ಪೇಳುವರು ನರನಾಗಿ ನಾ ಜನಿಸಿ ಗರುವದಿಂದಾ ಸಿರಿಯಾಸೆಯಿಂದ ಮದ ಪರವೈರ ಲೋಭಗಳ ದುರಿತಗಳನಾರ್ಜಿಸಿದೆ ಪೊರೆಯೊ ದೇವ 2 ಕಡುಪಾಪ ಕೂಪದೊಳಗಡಗಿರ್ಪೆನೈ ಹರಿಯೆ ಅಡಿಗಳಿಗೆ ಎಡೆಯಿಲ್ಲ ನುಡಿವರಿಲ್ಲಾ ಪಿಡಿವುದಕೆ ತೃಣವಿಲ್ಲ ದಡಕೆ ದಾರಿಯು ಇಲ್ಲ ತಡವೇಕೆ ಎನ್ನ ಕೈಪಿಡಿಯೊ ಗೋಪಾಲ 3 ಖಗರಾಜ ಪೊತ್ತಿಹನು ಸುಗತಿದಾಯಕನೆಂದು ಹೊಗುಳುವವು ಶೃತಿ ಶಾಸ್ತ್ರ ನಗಧರನೆ ನಿನ್ನತಾ ನಗಪುತ್ರಿ ನುತಿಸಿಹಳು ನಗಬೇಡವೈ ಪಾದಯುಗಗಳನು ತೋರೆಂದು4 ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲಿ ಮುನ್ನಿಗಿಂತೆಂಟುಮಡಿ ಜನುಮ ಬರಲಿ ಮುನ್ನ ನಾವಾರ್ಜಿಸಿದ ಘನಪಾಪನಶಿಸಲಿ ಚೆನ್ನ ಮಾಂಗಿರಿವಾಸ ನನ್ನ ಹೃದಯದೊಳಿರಲಿ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಪ್ರಾಣೇಶ ದಾಸರಾಯರ ಸ್ತೋತ್ರ ಸಾನುರಾಗದಲಿ ಸ್ಮರಿಸುವರ ಭಕುತಿಯನ್ನು ಕೊಡುತಿಹರು ಪ ವರಕಾಶ್ಯೊಪಸದ್ಗೋತ್ರದಿ ಲಿಂಗಸು - ಗುರು ಕರಣಿಕರಲಿ ಸಂಜನಿಸಿ ತಿರುಕಾರ್ಯರ ಪರತನುಭವಯೋಗೀಂ - ದ್ರರು ಯಂಬ ಸುನಾಮದಿ ಕರಿಸಿ 1 ಕೆಲವುಕಾಲ ಲೌಕಿಕವನುಸರಿಸುತ ಲಲನೆ ತರಳರಿಂದೊಡಗೂಡಿ ಬಲು ವಿನಯದಿ ಸಾಧುಗಳರ್ಚಿಸಿ ನಿ - ರ್ಮಲ ವೈರಾಗ್ಯ ಮನದಿ ಕೂಡಿ2 ಮೂಜಗದೊಳು ಪ್ರಖ್ಯಾತರೆನಿಸಿದ ಶ್ರೀ ಜಗನ್ನಾಥಾರ್ಯರ ಪಾದಾಂ - ಭೋಜ ಭಜಿಸಿ ಪ್ರಾಣೇಶಾಂಕಿತವನು ತಾಜವದಿಂದವರಲಿಪಡೆದ 3 ಶ್ರೀಶಪಾದಯುಗ್ಮಗಳಲಿ ಸದ್ರತಿ ದಾಸಜನಗಳಲಿ ಸದ್ಭಕುತಿ ಹೇಸಿಭವದ ಸುಖದಾಸೆ ಜರಿದು ಸಂ - ತೋಷದಿ ಧರಿಸಿಹ ಸುವಿರಕುತಿ 4 ನೇಮದಿ ಯಮನಿಯಮವ ವಹಿಸಿ ತಾ ಮುದದಲಿ ನಲಿಯುತ ಕೀರ್ತಿಸುತಿಹ ಶ್ರೀ ಮನೋಹರನ ಸುಗುಣರಾಶಿ 5 ಪರಿಪರಿ ಹರಿಕಥೆವರ ಪ್ರಮೇಯಗಳ ಸರ್ವಜ್ಞ್ಞರ ಉಕ್ತ್ಯನುಸರಿಸಿ ವಿರಚಿಸಿ ಹರಿಮಂದಿರದ ಸುಪಥ ಪಾ - ಮರರಿಗೆ ಸೌಕರ್ಯವಗೈಸಿ 6 ವರದೆಂದ್ರರ ಪದಸರಸಿಜ ಸೇವಿಸಿ ಹರುಷದಲವರ ಕರುಣ ಪಡೆದ ವರವೃಂದಾವನ ಸಂಸ್ಥಾಪಿಸಿ ಪರಿಪರಿಯಿಂದಲಿಯಾರಾಧಿಸಿದ7 ಜ್ಞಾನದಿಲಯವನು ಚಿಂತಿಸುತಾ ಚಿತ್ರ ಬಾನುಸಪ್ತಮಿ ಯಾಶ್ವಿಜಶುದ್ಧ ಜಾನಕಿ ಪತಿಪದ ಧೇನಿಸಿಹರಿಪುರ ಕೀನರ ದೇಹ ಜರಿದು ಸಾರ್ದ 8 ಪರಮಭಾಗವತರೆನಿಸುವರಿವರನ ವರ ತನದ ಸುಮಾಲಿಕೆ ಸತತ ಸ್ಮರಿಸುವ ಭಕುತರ ಪುರುಷಾರ್ಥಗಳನು ವರದೇಶವಿಠಲನ ಕೊಡುವ ತ್ವರಿತ 9
--------------
ವರದೇಶವಿಠಲ
ಶ್ರೀನಿವಾಸ ಭಕ್ತಪೋಷಣಭೂಷ ಮನ್ಮಂದಿರವಾಸ ಶ್ರೀನಿವಾಸ ಪಾದಾತನ ಜನರನು ಸಾನುರಾಗದೊಳ್ಮಾನಿಸಿ ಸಲಹುವ ಪ. ಬಾಲತ್ವದಿಂದ ಬಹುವಿಧವಾದ ಭಕ್ತಿಯನಿತ್ತು ಲಾಲಿಸಿ ಪೊರೆದ ಪೂಜ್ಯಪಾದ ಈ ಮಧ್ಯದೊಳಾದ ಧಾಳಿಗಳನು ನಿರ್ಮೂಲಗೈದ ಕರು- ಣಾಳು ರಾಜ ನಿನ್ನಾಳಾಗಿಹೆನು 1 ಪಂಚಭೌತಿಕವಾದ ತನುವಿಂದ ಆಗುವ ತಪ್ಪ ಕಿಂಚಿನ ವರದ ನೀ ದಯದಿಂದ ಕ್ಷಮಿಸೈ ಗೋವಿಂದ ವಂಚಿಸಿ ದಾನವದಿತಿಜರ ಸುರರಿಗೆ ಹಂಚಿದಿ ಸುಧೆಯನು ಶುಭಕರದಿಂದ 2 ಕಮಲಾಬ್ಜಭವರುದ್ರೇಂದ್ರಾದಿಗಳು ಪಾದಯುಗ ಕಲ್ಪ ದ್ರುಮ ನಿನ್ನ ನೆಳಲನಾಶ್ರೈಸಿಹರು ಕರುಣಾರಸದೋರು ನಮಿಸುವೆ ಎಂಬೀ ಮಮತೆಯಿಂದ ಎ- ನ್ನಮಿತಪರಾಧವ ಕ್ಷಮಿಸುವ ಹರಿಯೆ 3 ಇಂದ್ರಿಯಂಗಳ ಭಾವನೆ ಬಹುಘೋರ ಅದರಲ್ಲಿ ಮುಳುಗಿದ- ರಿಂದಿರಾಧವ ನೀನೆ ಬಹುದೂರ ಆ ರೀತಿಯ ಭಾರ ಹೊಂದಿದ ದಾಸರಿಗೆಂದು ತಾರಾ- ಮಂದರಾದ್ರಿಧರಾ ಮಾಧವಧೀರ 4 ಚರಣ ಸಂಸ್ಮರಣೆ ಮಾತ್ರ ಬೇಕು ಇದರಿಂದ ಸರ್ವ ಪುರುಷಾರ್ಥ ಲಬ್ಧಿಗಿನ್ನು ಸಾಕು ಇರುವುದೆ ಈ ನಾಕು ಉರಗ ಗಿರೀಂದ್ರನ ಶಿರದಲಿ ಮಂಡಿಸಿ ಮೆರೆವ ಸುಖಾಂಬುಧಿ ಸುರವರ ನಾಥ5
--------------
ತುಪಾಕಿ ವೆಂಕಟರಮಣಾಚಾರ್ಯ
ಸುಗುಣಾಬ್ಧಿಯತಿ ರಾಯಾ ನಿನ್ನಯ ಪಾದಯುಗಳ ನಂಬಿಹರಯ್ಯ ಪ. ನೀನೆಲ್ಲಿಯಿರುವೆಯೊ ತಾನಲ್ಲಿ ಬರುವನು ಶ್ರೀನಿವಾಸನು ದಯದಿ ಯೀ ನುಡಿ ನಿಜವೆಂದು ಧ್ಯಾನಿಸುವದಕನುಮಾನವಿಲ್ಲವು ಜಗದಿ ಭಾನುತನುಜನ ತ್ರೇತೆಯೊಳು ಪರಮಾನುರಾಗದಿ ಪೊರೆದವನು ಕ ರ್ಣಾನುಜನ ದ್ವಾಪರದಿ ಸೇರಲಿಕೇನುಫಲ ಪವಮಾನ ಪೇಳೆಲೊ 1 ಇದರಿಂದ ನಿನ್ನಯ ಪದ ಕಮಲವ ಸೇರಿ ಬದುಕುವೆನೆಂಬಾಸೆಯಾ ಹೃದಯದಿ ದೃಢವಾಗಿ ವಹಿಸಿರುವೆನು ಬೇಗ ಒದಗಿ ರಕ್ಷಿಸು ಭಾಷೆಯ ಹರಿಯು ಕೃಪೆ ಮಾಡುವಂದದಿ ಜಲನಿಧಿ ಸೇರುವಂದದಿ 2 ಮಂದಮತಿಯ ಮತದಿಂದ ಸಂಗರದೊಳಗಿಂದ್ರಾರಿತವಕ- ದಿಂದಾ ಮಹಾಸ್ತ್ರವ ಬಂಧಿಸೆ ಬೇಗದಿಂದಾ ಆ ಲಂಕೆಯಿಂದಾ ಒಂದೇ ಹಾರಿಕೆಯಿಂದಾಲೌಷಧಿ ತಂದು ಹರಿಗಳ ಕಾಯ್ದ ಪೂರ್ಣ- ನಂದ ರಾಮಾವತಾರಿ ಶೇಷಗಿರೀಂದ್ರ ಕರುಣವ ಸೂರೆಗೊಂಡಿಹ 3
--------------
ತುಪಾಕಿ ವೆಂಕಟರಮಣಾಚಾರ್ಯ
69ಭಾರತಿಜನನಿಪಾಲಿಸೆನಿತ್ಯಮಾರುತನ ರಾಣಿಭಾರತಿಭಕುತಿಗೆ ಸಾರಥಿಯಾಗಿ ನೀಸುರರ ಸತಿಯರಿಗೆ ಧರೆಯೊಳವ-ಜ್ಞಾನಶುಭಕಾಯಳೆ ಸಜ್ಜನರಿಗೆನಂಬಿದೆ ನಿನ್ನ ಪಾದಯುಗಾಂಬುಜ-
--------------
ಗೋಪಾಲದಾಸರು
ಇದರೆನ್ನಧಿಕ ಸುಖವೊಂದವೊಲ್ಲೆಪದುಮನಾಭನೆ ನಿನ್ನ ಪಾದಯುಗ್ಮವೆ ಸಾಕ್ಷಿ ಪಮಧ್ವ ಮತದೊಳಗೆ ಜನಿಸಿ ದ್ವಾದಶನಾಮ |ಮುದ್ರೆ ಶ್ರೀ ತುಲಸಿ ಅಕ್ಷಮಾಲೆ ಧರಿಸಿ ||ಶುದ್ಧ ಗ್ರಂಥವನೋದಿ ಅದ್ವೈತರನು ಹಳಿದು |ಸದ್ವೈಷ್ಣವನೆಂದೆನ್ನಿಸಿಕೊಂಡರೆ ಸಾಕು 1ಹಿರಿಯರಾದವರಿಗೆ ಬಾಗಿ, ದಾನವ ಮಾಡಿ |ನಿರುತ ಸತ್ಕಥೆಗಳ ಕೇಳುತಲಿ ||ವರಮಂತ್ರ ಜಪಿಸುತ ಪಂಚಯಜÕವ ಮಾಡಿ |ಹರಿದಿನ ವ್ರತವನು ನಡೆಸುತಿಪ್ಪುದೆ ಸಾಕು 2ಪ್ರಾಣೇಶ ವಿಠಲ ನೀನೇ ಸರ್ವೋತ್ತಮ, ಬ್ರಹ್ಮ- |ಪ್ರಾಣಾದಿಗಳು ನಿನ್ನ ದಾಸರೆಂಬ ||ಜ್ಞಾನವೆ ಗಳಿಸಿ ವೈಷ್ಣವರ ಮನೆಯ ಬಾಗಿ - |ಲನು ನಿರುತ ಕಾಯ್ದು ಜೀವಿಸುವದೇ ಸಾಕು 3
--------------
ಪ್ರಾಣೇಶದಾಸರು
ಉತ್ಥಾನ ದ್ವಾದಶಿಯ ದಿವಸ(ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ)ರಂಭೆ : ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ.ಮಾನಿನೀಮಣಿ ಈತನ್ಯಾರೆ ಕರುಣಾನಿಧಿಯಂತಿಹ ನೀರೆ ಹಾ ಹಾಭಾನುಸಹಸ್ರ ಸಮಾನಭಾಷಿತ ಮ-ಹಾನುಭಾವನು ಸುಪ್ರವೀಣನಾಗಿಹ ಕಾಣೆ 1ಭಯಭಕ್ತಿಯಿಂದಾಶ್ರಿತರು ಕಾಣಿ-ಕೆಯನಿತ್ತುನುತಿಸಿಪಾಡಿದರು ನಿರಾ-ಮಯ ನೀನೇ ಗತಿಯೆಂದೆಲ್ಲವರು ಹಾ ಹಾಭಯನಿವಾರಣ ಜಯ ಜಯವೆಂದು ನುತಿಸೆ ನಿ-ರ್ಭಯಹಸ್ತತೋರುತ ದಯಮಾಡಿ ಪೊರಟನೆ2ಭೂರಿವಿಪ್ರರ ವೇದ ಘೋಷದಿಂದಸ್ವಾರಿಗೆ ಪೊರಟ ವಿಲಾಸ ಕೌಸ್ತು-ಭಾರತ್ನ ಹಾರ ಸುಭಾಸ ಹಾ ಹಾಚಾರುಕಿರೀಟಕೇಯೂರಪದಕಮುಕ್ತಾಹಾರಾಲಂಕಾರ ಶೃಂಗಾರನಾಗಿರುವನು 3ಸೀಗುರಿ ಛತ್ರ ಚಾಮರದ ಸಮವಾಗಿ ನಿಂದಿರುವ ತೋರಣದ ರಾಜಭೋಗನಿಶಾನಿಯ ಬಿರುದ ಹಾ ಹಾಮಾಗಧಸೂತ ಮುಖ್ಯಾದಿ ಪಾಠಕರ ಸ-ರಾಗ ಕೈವಾರದಿ ಸಾಗಿ ಬರುವ ಕಾಣೆ 4ಮುಂದಣದಲಿ ಶೋಭಿಸುವ ಜನಸಂದಣಿಗಳ ಮಧ್ಯೆ ಮೆರೆವ ತಾರಾವೃಂದೇಂದುವಂತೆ ಕಾಣಿಸುವ ಹಾಹಾಕುಂದಣಖಚಿತವಾದಂದಣವೇರಿ ಸಾ-ನಂದದಿ ಬರುವನು ಮಂದಹಾಸವ ಬೀರಿ 5ತಾಳ ಮೃದಂಗದ ರವದಿಶ್ರುತಿವಾಲಗಭೇರಿರಭಸದಿ ಜನಜಾಲಕೂಡಿರುವ ಮೋಹರದಿ ಹಾಹಾಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ-ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ 6ಊರ್ವಶಿ: ಈತನೆ ಭಾಗ್ಯನಿಧಿ ನೋಡೆ ನೀ ಮುದದಿ ಪ.ಈತನೆ ಈರೇಳು ಲೋಕದದಾತನಾರಾಯಣ ಮಹಾ ಪುರು-ಹೂತ ಮುಖ್ಯಾಮರವಿನುತನಿ-ರ್ಭೀತ ನಿರ್ಗುಣ ಚೇತನಾತ್ಮಕ ಅ.ಪ.ಮೀನ ರೂಪವೆತ್ತಾಮಂದರಪೊತ್ತಭೂನಿತಂಬಿನಿಯ ಪ್ರೀತಮಾನವಮೃಗಾಧಿಪ ತ್ರಿವಿಕ್ರಮದಾನಶಾಲಿ ದಶಾನನಾರಿ ನ-ವೀನ ವೇಣುವಿನೋದ ದೃಢ ನಿ-ರ್ವಾಣ ಪ್ರವುಢ ದಯಾನಿಧಿ ಸಖಿ 1ವಾರಿಜಾಸವಾನವಂದಿತ ಶ್ರೀಪಾದಯುಗ್ಮವತೋರಿಕೊಂಬುವ ಸಂತತಕೇರಿಕೇರಿಯ ಮನೆಗಳಲಿ ದಿ-ವ್ಯಾರತಿಯ ಶೃಂಗಾರ ಭಕ್ತರ-ನಾರತದಿ ಉದ್ಧಾರಗೈಯಲುಸ್ವಾರಿ ಪೊರಟನು ಮಾರಜನಕನು 2ಮುಗುದೆ ನೀ ನೋಡಿದನು ಕಾಣಿಕೆಯ ಕ-ಪ್ಪಗಳ ಕೊಳ್ಳುವನು ತಾನುಬಗೆಬಗೆಯ ಕಟ್ಟೆಯೊಳು ಮಂಡಿಸಿಮಿಗಿಲು ಶರಣಾಗತರ ಮನಸಿನಬಗೆಯನೆಲ್ಲವ ಸಲ್ಲಿಸಿ ಕರುಣಾಳುಗಳ ದೇವನು ಕರುಣಿಸುವ ನೋಡೆ 3ರಂಭೆ : ದೃಢವಾಯಿತೆಲೆ ನಿನ್ನ ನುಡಿಯು ಸುರಗಡಣಓಲಗಕೆ ಇಮ್ಮಡಿಯು ಜನ-ರೊಡಗೂಡಿ ಬರುತಿಹ ನಡೆಯು ಹಾ ಹಾಮೃಡಸರೋಜ ಸುರಗಡಣ ವಂದಿತಕ್ಷೀರಕಡಲ ಶಯನ ಜಗದೊಡೆಯನಹುದು ಕಾಣೆ 1ಮದಗಜಗಮನೆ ನೀ ಪೇಳೆ ದೇವಸದನವ ಪೊರಡುವ ಮೊದಲೇ ಚಂದ-ನದಪಲ್ಲಂಕಿಯ ತಂದು ಮ್ಯಾಲೆ ಹಾ ಹಾಮುದದಿಂದ ಬಾಲಕರೊದಗಿ ಸಂತೋಷದಿಚದುರತನದಿ ಪೋಗುವನು ಪೇಳೆಲೆ ನೀರೆ 2ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವಶ್ರೀರಮಾಧವನ ಲೀಲೆಘೋರದೈತ್ಯಕುಠಾರ ಲಕ್ಷ್ಮೀನಾರಾಯಣನ ಬಲಕರ ಸರೋಜದಿಸೇರಿ ಕುಳಿತ ಗಂಭೀರ ದಿನಪನಭೂರಿತೇಜದಿ ಮೆರೆವುದದು ತಿಳಿ 1ದೊರೆಯು ಬರುವನು ಎಂದು ಎಲ್ಲರಿಗೆ ಗೋ-ಚರಿಸುವನೊಲಿದುಇಂದುತರ ತರದ ಆರತಿಗಳನು ನೀವ್ಧರಿಸಿ ನಿಂದಿರಿಯೆಂದು ಜನರಿಗೆ-ಚ್ಚರಿಗೆಗೋಸುಗ ಮನದ ಭಯವಪ-ಹರಿಸಿ ಬೇಗದಿ ಪೊರಟು ಬಂದುದುರಂಭೆ :ಸರಸಿಜನಯನೆ ನೀ ಪೇಳೆಸೂರ್ಯಕಿರಣದಂತಿಹುದೆಲೆ ಬಾಲೆ ಸುತ್ತಿಗೆರಕವಾಗಿಹುದು ಸುಶೀಲೆ ಆಹಾಹರಿಯ ವೈಕುಂಠ ನಗರದಂತೆ ಜ್ಯೋತಿ ವಿ-ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ 1ಊರ್ವಶಿ : ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧದ್ವಾದಶಿಯೊಳಗೆ ಬಾಲೆಮಾಧವನ ಪ್ರೀತ್ಯರ್ಥವಾಗಿ ಶು-ಭೋದಯದಿ ಸಾಲಾಗಿ ದೀಪಾರಾಧನೆಯ ಉತ್ಸಹದ ಮಹಿಮೆಯಸಾದರದಿ ನೀ ನೋಡೆ ಸುಮನದಿ 1ನಿಗಮಾಗಮದ ಘೋಷದಿ ಸಾನಂದ ಸು-ತ್ತುಗಳ ಬರುವ ಮೋದದಿಬಗೆ ಬಗೆಯ ನರ್ತನ ಸಂಗೀತಾದಿಗಳ ಲೋಲೋಪ್ತಿಯ ಮನೋಹರದುಗುಮಿಗೆಯ ಪಲ್ಲಂಕಿಯೊಳು ಕಿರು 2ನಗೆಯ ಸೂಸುತ ನಗಧರನು ಬಹಚಪಲಾಕ್ಷಿ ಕೇಳೆ ಈ ವಸಂತ ಮಂ-ಟಪದಿ ಮಂಡಿಸಿದ ಬೇಗಅಪರಿಮಿತ ಸಂಗೀತ ಗಾನ ಲೋ-ಲುಪನು ಭಕ್ತರ ಮೇಲೆ ಕರುಣದಿಕೃಪೆಯ ಬೀರಿ ನಿರುಪಮ ಮಂಗಲಉಪಯಿತನು ತಾನೆನಿಸಿ ಮೆರೆವನು 3ಪಂಕಜಮುಖಿನೀ ಕೇಳೆ ಇದೆಲ್ಲವುವೆಂಕಟೇಶ್ವರನ ಲೀಲೆಶಂಕರಾಪ್ತನು ಸಕಲ ಭಕ್ತಾತಂಕವನು ಪರಿಹರಿಸಿಕರಚಕ್ರಾಂಕಿತನು ವೃಂದಾವನದಿ ನಿಶ್ಯಂಕದಿಂ ಪೂಜೆಯಗೊಂಡನು 4ಕಂತುಜನಕನಾಮೇಲೆ ಸಾದರದಿ ಗೃ-ಹಾಂತರಗೈದ ಬಾಲೆಚಿಂತಿತಾರ್ಥವನೀವ ಲಕ್ಷ್ಮೀಕಾಂತ ನಾರಾಯಣನು ಭಕುತರತಿಂಥಿಣಿಗೆ ಪ್ರಸಾದವಿತ್ತೇ-ಕಾಂತ ಸೇವೆಗೆ ನಿಂತಮಾಧವ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ