ಒಟ್ಟು 17 ಕಡೆಗಳಲ್ಲಿ , 11 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಸನ್ನ ಶ್ರೀ ಜಯರಾಮಚಂದ್ರ ಸ್ತೋತ್ರ143ಬಿಸಜನಯನನೆ ಇವಗೆ ಒಲಿಯೋ ದಯದಿಂದ ಪವೇದ ತತಿಗಳಿದಿರ್ಯ ಉರುಗುಣಾಂಬುಧಿ ಶ್ಶಾಮಸುಂದರನೆ ಸೀತಾಸಮೇತ ವಿಭು ನಿನ್ನಪಾದಪದುಮಗಳಲ್ಲಿ ಹನುಮದಾದಿಗಳೆಲ್ಲಆದರದಿ ಸರ್ವದಾ ಭಜಿಸುವರೋ ಸ್ವಾಮಿ 1ವರಅಭಯಕರಗಳಲ್ಲಿ ಶರಚಾಪ ಪಿಡಿದಿರುವಿಕಾರುಣ್ಯ ಬೀರುವ ನೋಟ ಮುಗಳ್‍ಹಾಸಶರಣಾದೆ ನಿನಗೆನಾ ಸುಕೃತ್ ವಿಭುವೇ ಸದಾವರಜ್ಞಾನ ಭಕ್ತ್ಯಾದಿ ಐಶ್ವರ್ಯ ಈಯೋ 2ಅನಂತಾರ್ಕ ಶಶಿಅಧಿಕ ಕಾಂತಿಯಿಂ ಜ್ವಲಿಸುತಿಅನಂತ ಪಾಪಗಳೆÀಲ್ಲ ಮನ್ನಿಸಿ ದಯದಿಎನ್ನ ಇವನ ಸರ್ವವೈಷ್ಣವರ ಕಾಯಯ್ಯವನರುಹಾಸನ ಪಿತ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು
ರಂಗ ಒಲಿದ ದಾಸರಾಯರ - ಪಾದಯುಗ್ಮಕಂಗಳಿಂದ ನೋಡಿದಾವರÀ - ಪಾಪಂಗಳೆಲ್ಲಹಿಂಗಿಪೋಪವಲ್ಲೊ ಸತ್ವರ - ಏನು ಪೇಳಲೀವರಾ ಪತುಂಗಮಹಿಮೆ ತೋರಿ ಜನಕೆಮಂಗಳಾವ ಕೊಡುವರಿಂಥಾ ಅ.ಪಬ್ಯಾಗವಾಟನಾಮ ಗ್ರಾಮದಿ - ನಾರಸಿಂಹಭಾಗವತಆದಿ ಶಾಸ್ತ್ರಭೋಗಿಶಯನ ಕರುಣದಿಂದಆಗ ಈಗ ಎನದೆ ಸದಾನುರಾಗ ತೋರುವಂಥ 1ಮುದದಿ ದಾಸ್ಯಭಾವದಿಂದಲಿ - ಜಗದಿ ಜನರಹೃದಯಭಾವಪೂರ್ತಿಯಿಂದಲಿ- ಪ್ರೀತಿಗೈದುಪದುಮನಾಭನ ಪ್ರೀತಿಯಿಂದಲಿ - ಗುಣಗಳನ್ನುಭುಧರಮ್ಯಾಳಸಂಗದಿಂದಮುದದಿ ಮನವ ಧರಿಸಿನಿತ್ಯಪದುಮನಾಭನ ಭಜನಿಗೈಯುತ - ತತ್ವಸಾರವದನದಿಂದುಚ್ಭಾರ ಗೈಯುತ - ತೀರ್ಥಯಾತ್ರೆಮುದದಿಕಾಯಧರಿಸಿ ಹರಿಯ ಭಜನೆಗೈದು ಸುಖಿಸಿದಂಥ2ಖ್ಯಾತ ಶುಕ್ಲ ಬಾದ್ರಪದದಿ ನವಮಿ ಜಗ -ನ್ನಾಥ ವಿಠಲಪಾದಪದುಮದಿ ಮನವೆ ಮೊದಲುಭೂತಕಾಶಮಾರ್ಗ ಸಂಗದಿ - ಹೃದಯ ಮಂಡಲಧಾತನಿಂದ ಕೂಡಿ ವಿ -ಧಾತನಾಂಡ ಭೇಧಿಸಿ ಗುರುಜಗ -ನ್ನಾಥ ವಿಠಲಪಾದಪೊಂದಿದಾ - ಈತನಂಥಆತುರಾದಿ ಕೊಡುವ ನಂದನ - ಏನು ಮಹಿಮೆವಾತದೇವನ ನಿಜಾವೇಶದಿಂದ ಯುಕ್ತರಾದ 3
--------------
ಗುರುಜಗನ್ನಾಥದಾಸರು