ಒಟ್ಟು 24 ಕಡೆಗಳಲ್ಲಿ , 11 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ರಾಘವೇಂದ್ರರು ರಾಘವೇಂದ್ರ ಗುರುರಾಯರ ಸೇವಿಸಿರೊ ಸೌಖ್ಯದಿ ಜೀವಿಸಿರೊ ಪ ವಾಸೋತ್ತುಂಗಾ ತೀರದಲ್ಲೆ ನಿಂತು ವಸುಧೆಯೊಳು ಬಂದು ಅ.ಪ. ಕರ ಸರೋಜ ಸಂಜಾತ ವಸುಧೆಯೊಳು ಪುನೀತಾ ದಾಶರಥಿಯ ದಾಸತ್ವವ ತಾನೂಹಿಸಿ ದುರ್ಮತಿಗಳ ಜಯಿಸಿ ತ್ಯಜಿಸಿ ಈ ಸಮೀರಮತ ಸಂಸ್ಥಾಪಕರಾಗಿ ನಿಂದಕರನು ನೀಗಿ ಭೂಸುರರಿಗೆ ಸಂಸೇವಸಹಾಚರಣೀ ಕಂಗೊಳಿಸುವ ಕರುಣಿ 1 ಕುಂದದೆ ವರ ಮಂತ್ರಾಲಯದಲ್ಲಿರುವಾ ಕರೆದಲ್ಲಿಗೆ ಬರುವಾ ಸಂದರುಶನದಿಂದಲಿ ಮಹತ್ಪಾಪ ಪರಿದೋಡಿಸಲಾಪಾ ವೃಂದಾವನ ಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ ಮಂದ ಭಾಗ್ಯರಿಗೆ ದೊರೆಯದಿವರ ಸೇವಾ ಶರಣರ ಸಂಜೀವಾ 2 ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸಿದ ಮಾತ್ರಾ ಮೋದಬಡಿಸುವ ತಾನಿಹಪರದಲ್ಲಿ ಈತಗೆ ಸಮರೆಲ್ಲಿ ಮೇದಿನಿಯೊಳಗಿನ್ನರಸಲು ಕಾಣೆ ಪುಸಿಯಿಲ್ಲೆನ್ನಾಣೆ ಪಾದಸ್ಮರಣೆ ಮಾಡದವನೆ ಪಾಪಿ ನಾ ಪೇಳ್ವೆನು 3
--------------
ಶ್ರೀದವಿಠಲರು
ಶ್ರೀ ಶ್ರೀ ಶ್ರೀಸತ್ಯಪ್ರಮೋದತೀರ್ಥರು ಸತ್ಯಾಭಿಜ್ಞ ಕರಜ ಶ್ರೀ | ಸತ್ಯಪ್ರಮೋದಾ |ತೀರ್ಥ ನಿಮ್ಮಯ ಚರಣ ದ್ವಂದ್ವಕಾ ನಮಿಪೆ ಪ ವೈರಾಗ್ಯ ಸದ್ಭಾಗ್ಯ | ಪರಮ ನಿಧಿಯೆನಿಸುತಲಿಶ್ರೀರಾಮ ಪದತುಂಗ | ಸರಸಿರುಹ ಭೃಂಗಾ |ಊರೂರು ಚರಿಸುತಲಿ | ಆ ರಾಮ ಪದದ್ವಂದ್ವಆರಾಧಕರಿಗ್ವೊರೆದ | ಪರಮ ತತ್ವಗಳಾ 1 ವಾದಿಗಳ ಹೃದಯ ನಿ | ರ್ಭೇದ ಗೈಸುವ ನಿಮ್ಮವಾದಗಳ ಗಡಣೆಗಳ | ವಾದಿಗಳು ಕೇಳೀ |ಪಾದವನು ಕ್ರಮಿಸುತ್ತ | ಗೈದರು ಪಲಾಯನವಮೋದ ಪ್ರಮೋದ ಹರಿ | ಕಾರುಣ್ಯ ಪಾತ್ರಾ 2 ಕಲ್ಯಾಣ ಪುರಿಯೊಳಗೆ | ಎಲ್ಲ ವೈಷ್ಣವರ್ನೆರೆದುಪುಲ್ಲನಾಭನು ಶ್ರೀ ವೇದವ್ಯಾಸರನೂ |ಚೆಲ್ವಗಜ ವಾಹನದಿ | ಕುಳ್ಳಿರಿಸಿ ಐತರಲುಎಲ್ಲ ಭಕ್ತರು ಮೊರೆಯೆ | ಅಂಬರವು ಬಿರಿಯೇ 3 ವತ್ಸರ ಚಾರು ಸಿರಿ | ಸತ್ಯಧ್ಯಾನರ ಭಕ್ತಿಲೀ 4 ಭವ ಬಂಧಾ 5 ಕೋಪರಹಿತರುಯೆನಿಸಿ | ಶ್ರೀ ಪತಿಯ ಧ್ಯಾನಿಸುತತಾಪಸೀಗಳು ತೀರ್ಥ | ಪ್ರಾಪಿಸುತ್ತಿರೆ ಭಕುತರೂ |ಪಾಪ ಕಳೆದೆವು ಯೆಂಬ ಸ | ಲ್ಲಾಪದೊಳು ತಪನತಾಪ ಮರೆತರು ನೋಡಿ | ಪಾಪ ಹೊರದೂಡೀ 6 ಹತ್ತಾರು ಸಾಸಿರಕೆ | ಮತ್ತೆ ಭೋಜನಗೈಸಿಕೃತಿವಾಸನ ತಾತ | ಉತ್ತಮೋತ್ತಮನೆನ್ನುತಾ |ಸತ್ಯವಲ್ಲಭ ಗುರೂ | ಗೋವಿಂದ ವಿಠಲನಪ್ರತ್ಯಹರ್ ಅರ್ಚಿಸುವ | ಸತ್ಯ ಪ್ರಮೋದಾರ್ಯ 7
--------------
ಗುರುಗೋವಿಂದವಿಠಲರು
ಶ್ರೀಶ ಮುಕುಂದಾ ಜಗದಾನಂದಾ ಪ ಸುರಮುನಿ ಬೃಂದಾ ನಾದಾನಂದಾ ಅ.ಪ ನೀರಜನೇತ್ರಾ | ಸುರನುತಿಪಾತ್ರಾ ದಾನವವೇತ್ರಾ | ನೀರದಗಾತ್ರಾ ತ್ರಿಭುವನಸೂತ್ರಾ | ಪುಣ್ಯಚರಿತ್ರಾ ಧರಣಿಕಳತ್ರಾ ಶ್ರೀಗೋತ್ರಾ ಜಯಾ 1 ಮನಿಜನಪ್ರೇಮ ಅಗಣಿತನಾಮ ದಾನವ ಭೀಮಾ ಶ್ರೀ ರಘುರಾಮಾ ಕುವಲಯಶ್ಯಾಮ ಜಗದಭಿರಾಮ ಮಾಂಗಿರಿಧಾಮಾ ಶ್ರೀರಾಮ ಜಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸೂಳಿನ್ನ ಪೊಗುವವ ಏನಾದೆಂತಾ ಹಾಳಾದಬಳಿಕ ಪುಣ್ಯ ಮೂಳನಾಯಾದ ಪ ಮೂತ್ರದ್ವಾರಕೆ ಮೆಚ್ಚಿ ಮಾತಾಪಿತರ್ವೈರ್ಯಾಗಿ ಪಾತ್ರಾಪಾತ್ರೆನದೆ ಕುಲಗೋತ್ರ ಧರ್ಮಳಿದ ಮಾತೃ ಭೂಮಾತೆಯ ಯಾತ್ರ ಸುದ್ದರಿಯದೆ ಧಾತ್ರಿಯೊಳ್ ಕೈಸೂತ್ರಗೊಂಬ್ಯಾದ1 ಸುಲಭದಿಂ ತನ್ನಯ ಕುಲನಾಶಗೆ ಅನ್ಯ ಕುಲಕೆ ಹವಣಿಪ ಮಾರಿಬಲೆಗೆ ಒಳಪಟ್ಟು ಕುಲ ವಿಧವಿಧ ಭಕ್ತಿಗಳನಗಲಿ ಬಲುಪಾಪಕೊಳಗಾಗಂಕತನ ಮಹ ಕೊಲೆಗೆ ಈಡಾದ 2 ಉತ್ತಮರ ಲಕ್ಷಿಸದೆ ಸತ್ಯಕ್ಕೆ ಮನಗೊಡದೆ ಮೃತ್ಯುರೂಪಿಣಿಮಾತೇ ಅತ್ಯಧಿಕವೆನುತ ಮರ್ತು ತನ್ನಯ ಸುಖವ ತೊತ್ತಾಗಿ ಪಾತಕಿಗೆ ನಿತ್ಯ ಮೈಲಿಗೆಹೊರುವ ಕತ್ತೆಯಂತಾದ 3 ಸಾರುತಿಹ್ಯವೇದ ಸುವಿಚಾರವಾದಗಳೆಲ್ಲ ತೂರಿ ಅಡಿವಿಗೆ ಅಟ್ಟಿ ಮೀರಿ ಮಹವಾಕ್ಯ ಘೋರನರಕಕೊಯ್ದು ಸೇರಿಸುವವತಾರಿ ಮಕ್ಕ ಮಾರಿ ಜಾರೆಗೆ ಬಿಡದೆ ಸೆರೆಯಾಳು ಆದ 4 ಮನ ಅವಳಿಗರ್ಪಿಸಿ ತನು ಅವಳಿಗೊಪ್ಪಿಸಿ ಧನವನಿತು ಅವಳ ಅಧೀನದಲ್ಲಿರಿಸಿ ಬಿನುಗರೊಳುಬಿನುಗೆನಿಸಿ ಕುಣಿಕುಣಿದು ಕಡೆಗೆ ಮಮ ಜನಕ ಶ್ರೀರಾಮನಡಿ ಕನಿಕರಕ್ಹೊರತಾದ 5
--------------
ರಾಮದಾಸರು
ಶಂಕರ ಶಂಭು ಮಹೇಶ ದಿಗಂಬರ |ಕಿಂಕರನುತಿಪಾತ್ರಾ || ಸತ್ಪಾತ್ರಾ ||ಶಂಕರ ಅಂಬಾ ಮನೋಹರ ಶುಭಕರವೆಂಕಟಪತಿಮಿತ್ರಾ | ವಿಚಿತ್ರಾ 1ನಿತ್ಯಾನಂದ ನಿರಾಮಯ ನಿರುಪಮ |ಮೃತ್ಯುಂಜಯಮೂರ್ತಿ|| ಸುಮೂರ್ತಿ ||ನಿತ್ಯತೃಪ್ತ ನಿರಾಶ್ರಯ ನಿರ್ಮಲ |ಸತ್ಯಂ ಜಯಕೀರ್ತಿ | ಸುಕೀರ್ತಿ 2ಹಿಮಕರ ಶೈಲ ನಿವಾಸ ಸುರಾಸುರ |ನಮಿತ ಶೋಕಹಾರೀ ||ಉದಾರಿ||ಪ್ರಮಥಾಧಿಪ ಪರಮೇಶಪರಾತ್ಪರ|ಡಮರು ಬಾಲಧಾರಿ | ಪುರಾರಿ 3ಚಂದಿರಧರ ಅಘವೃಂದ ವಿನಾಶನ |ವಂದಿಸುವೆನು ದೇವಾ || ಮಹದೇವಾ ||ಮಂದರಧರಗೋವಿಂದನ ದಾಸಗೆ |ಚಂದದಿ ವರವೀವಾ | ಸಂಜೀವಾ 4
--------------
ಗೋವಿಂದದಾಸ
ಹಲವನು ಯೋಚಿಸಲೇನು ಫಲ ಬರಿ |ಜಲವನು ಮಥಿಸಲಿನ್ನೇನು ಫಲ ||ಕುಲಜನು ಶೂದ್ರನ ಲಲನೆಯ ಕೂಡುತ |ಸಲಿಲದಿ ಮುಳುಗಿದರೇನು ಫಲ ||ಜಲಜಾಕ್ಷನ ಪದದೊಲುಮೆಯಿಲ್ಲದೆನರ|ಬಲಯುತ ತಾನೆನಲೇನು ಫಲ1ಪರಸತಿ ಪರಧನದಾಸೆಯೊಳಿರ್ಪನು |ಸುರನದಿಮುಳುಗಿದರೇನು ಫಲ ||ಪರಮಾತ್ಮನ ತಮ್ಮ ಹೃದಯದಿ ಕಾಣದೇ |ಧರೆಯಲ್ಲರಸಿದರೇನು ಫಲ2ಕಾಣದೆ ಕುಣಿಯೊಳು ಬಿದ್ದಾನೆಯು ಬಲು |ತ್ರಾಣಿಯಂತಾದರಿನ್ನೇನು ಫಲ ||ಕ್ಷೋಣಿಯೊಳಗೆ ಹರಿದಾಸರ ಜರೆಯುತ |ಜ್ಞಾನಿಯು ತಾನೆನಲೇನು ಫಲ3ಧೂರ್ತತನದಿ ಹಣ ಗಳಿಸುತ ಲೋಭದಿಸ್ವಾರ್ಥವೆಂದೆನಿಸಿದರೇನು ಫಲ ||ಪಾತ್ರಾಪಾತ್ರವನೆಣಿಸದೆ ದಾನವ |ಅರ್ತಿಯೊಳೆಸಗಿದರೇನು ಫಲ4ಪತಿಯನು ವಂಚಿಸಿರೂಪಮಾರುವಸತಿ|ವ್ರತಗಳ ಮಾಡಿದರೇನು ಫಲ ||ರತಿಪತಿಪಿತಗೋವಿಂದನ ನೆನೆಯದೆ |ಗತಿಯನುಬಯಸಿದರೇನು ಫಲ5xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ