ಒಟ್ಟು 19 ಕಡೆಗಳಲ್ಲಿ , 13 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ಎನ್ನಿರೊ - ಶ್ರೀ ನರಹರಿ |ನಾರಾಯಣ ಎನ್ನಿರೊ ಪ.ನಾರಾಯಣನೆಂದು ಅಜಮಿಳಕೈವಲ್ಯ |ಸೂರೆಗೊಂಡನೆಂಬ ಸುದ್ದಿಯನರಿಯಿರಾ ? ಅಪಚೋರರ ಭಯ ಎಲ್ಲವೊ - ಇದಕೆ ನೋಡೈ - |ದಾರರಂಜಿಕೆ ಇಲ್ಲವೊ ||ಊರನಾಳುವ ದೊರೆಯ ಭೀತಿ ಇನಿತಿಲ್ಲವೊ ||ಘೋರ ಪಾತಕವೆಲ್ಲ ಹಾರಬಿಡುವುದಿದು 1ಕಾಶಿಗೆ ಹೋಗಲೇಕೆ - ಕಾವಡಿ ಹೊತ್ತು - |ಬೇಸತ್ತು ತಿರುಗಲೇಕೆ |ವಾಸುದೇವನ ನಾಮ ವರ್ಣಿಸಿದವರಿಗೆ |ಕ್ಲೇಶವೆಂಬುವುದಿದು ಲೇಶಮಾತ್ರವು ಇಲ್ಲ 2ಸ್ನಾನವ ಮಾಡಲೇಕೆ - ಸಂಧ್ಯಾವಂದನೆ - |ಮೌನ ಮಂತ್ರಗಳೇತಕೆ ||ದೀನರಕ್ಷಕ ಬೆಟ್ಟದೊಡೆಯನಾದವನ |ಧ್ಯಾನಕೆ ಸಮವುಂಟೆ ಪುರಂದರವಿಠಲನ 3
--------------
ಪುರಂದರದಾಸರು
ಯಾರೆನ್ನ ಕಾಯುವರು | ಶ್ರೀಹರಿಯೆ |ಹರಿಯೇ | ನೀ ದೂರ ಮಾಡುವರೇ ಪಘೋರಪಾತಕವೆಂಬೀ | ಶಾರೀರವನು ಪೊತ್ತು |ಪಾರಗಾಣದ ದುಃಖಕರ್ಹನಾದೆನು ಹರಿಯೆ 1ಜೀವದಂತ್ಯದಿ ಯಮನೀವ ಪಾಶವ ಕಡಿದುಕಾಯುವರಿಲ್ಲ | ದಯಾಕರ ಮೂರುತಿ 2ಕಾಸು ಕನಕವಿರಲಾಸೆ ಮಾಡುವರೆಲ್ಲ |ದೇಶ ಬಿಕ್ಷುಕನಾದ | ರೀಸು ಮೆಚ್ಚುವರಿಲ್ಲ 3ಬಂಧು ಬಳಗವೆಂಬುದೊಂದು | ಸಂಸಾರದಿ |ಬಂದು ನೋಯುವೆನು | ಗೋವಿಂದ ನೀನಲ್ಲದೆ 4
--------------
ಗೋವಿಂದದಾಸ
ಶಿವನಾದ ಮೇಲೆ ಶಿವತಾನೆಂಬರಿವು ಇರಬೇಕುಪಕಂಗಳ ಮುಟ್ಟಿ ತೆರೆಯಲು ಬೇಕುಕಂಗಳೊಳು ಆನಂದವಿರಬೇಕುಸಂಗಹರನಾಗಿ ಇರಬೇಕು1ದೇಹವೆ ತೂಗುತಲಿರುತಿರಬೇಕುದೇಹವೇ ತಾನೆಂದರಿತಿರಬೇಕುದೇಹವ ಮರೆತಿರಬೇಕು2ಜಗವಿದು ಎನ್ನಲಿ ಜನನವೆನಬೇಕುಜಗವಿದು ಎನ್ನಲಿ ಲಯವೆನಬೇಕುಜಗಕೆ ತಾ ಸಾಕ್ಷಿಯಿರಬೇಕು3ನೀತಿಯ ಶಮೆದಮೆ ಶಾಂತಿಯು ಇರಬೇಕುಪಾತಕವೆಲ್ಲವ ಹರಿದಿರಬೇಕುಮಾತು ಮಾತಿಗೆ ಗುರುವೆನಬೇಕು4ಸುಧೆಶರದಿಯ ಸುಖ ತುಳುಕಲಿ ಬೇಕುವಿಧವಿಧ ಗುಣಗಳ ಬಿಟ್ಟಿರಬೇಕುಚಿದಾನಂದಗುರುತಾನೆನಬೇಕು5
--------------
ಚಿದಾನಂದ ಅವಧೂತರು
ಸ್ಮರಣೆಯೊಂದೆ ಸಾಲದೆ - ಗೋವಿಂದನ |ಸ್ಮರಣೆಯೊಂದೆ ಸಾಲದೆ ? ಪ.ಪರಿಪರಿ ಸಾಧನ ಭ್ರಾಂತಿಯ ಬಿಡಿಸುವ |ಪರಮಾತ್ಮನಪಾದನೆರೆನಂಬಿದವರಿಗೆಅಪಕಡುಮೂರ್ಖನಾದರೇನು - ದಾನ - ಧರ್ಮ - |ಕೊಡದಾತನಾದರೇನು ||ಬಡವನಾದರೇನು ವಿಜಾತಿಯಾದರೇನು |ಒಡನೆ ಪ್ರಹ್ಲಾದನುದ್ಧರಿಸಿದ ಶ್ರೀ ಹರಿಯ 1ಪಾತಕಿಯಾದರೇನು - ಸರ್ವಲೋಕ - |ಘಾತಕಿಯಾದರೇನು ||ಮಾತೆಯಂದದಿ ತನ್ನ ದಾಸರ ಸಲಹುವ |ಚೇತನಾತ್ಮಕನ ಪಾದವ ನಂಬಿದವರಿಗೆ 2ಪಾತಕ ವೆಗ್ಗಳವೊ - ನಾಮವು ಪ್ರಾಯ - |ಶ್ಚಿತ್ತಕೆ ವೆಗ್ಗಳವೊ ||ಪಾತಕವೆನಗಿಲ್ಲ ಪ್ರಾಯಶ್ಚಿತ್ತ ಮುನ್ನಿಲ್ಲ |ಏತರ ಭಯವಯ್ಯ ಪುರಂದರವಿಠಲನ 3
--------------
ಪುರಂದರದಾಸರು