ಒಟ್ಟು 37 ಕಡೆಗಳಲ್ಲಿ , 23 ದಾಸರು , 37 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣೆನು ಮನವೆ ನರಹರಿಯ ನೆನೆ ಮನವೆಘೋರ ದುರಿತಗಳ ಬೆದರಿಸಿ ಓಡಿಸುವುದು ಪ ಗುರುವಿನುಪದೇಶದಲ್ಲಿ ಪರಮ ರಹಸ್ಯವನರಿತುಮರೆಯದಲೆ ಅಲ್ಲಿ ಅಧಿಕಾರಿಯಾಗೊತಿರುಮಂತ್ರವನು ಜಪಿಸು ತಿರುಲಾಂಛನವ ಧರಿಸುಪರಮ ವೈಷ್ಣವರ ಪಂಕ್ತಿಯ ಸೇರು ಮನವೆ 1 ನಿತ್ಯ ಸುಖಿಯಾಗೋ 2 ಶೇಷವಿಶೇಷವೆಂದೆನಿಪ ಪರಮಾರ್ಥದೊಳುಮೀಸಲಳಿಯದ ಪಾಪರಹಿತನಾಗುವಾಸಾಧಿಪತಿ ಕಾಗಿನೆಲೆಯಾದಿಕೇಶವನದಾಸಾನುದಾಸರಿಗೆ ದಾಸ ನೀನಾಗೊ 3
--------------
ಕನಕದಾಸ
ನಿಲಯ ಐಕೂರು ಗ್ರಾಮಾಲಯ | ಸ್ತಂಭೋಧ್ವವ ದೇವ ನಾಮಧೇಯ ಧ್ವಯಭಾರ್ಯ ಸುಮನಸಪ್ರಿಯ ಸದ್ಭಕ್ತಾರ್ತಿವಿದೂರ ವಿಮಲ ಹೃದಯ ಅತ್ಯಂತ ಕರುಣಾಮಯ | ಅಸ್ಮದ್ ಸದ್ಗುರುವರ್ಯ ನಿತ್ಯ ಸನ್ಮಂಗಳ 1 ಸಾರೋದ್ಧಾರ ಸಂಗೀತ ಭಾರತಿಯುತ ವೇದಾರ್ಥ ಸಂಪೂರಿತ | ಸಹ್ಲಾವಂಶಜ ದಾಸವರ್ಯ ವಿರಚಿತ ಶ್ರೀಶೌರಿ ಸುಕಥಾಮೃತ ಸಾರಜ್ಞಂ ಸುಶೀಲೇಂದ್ರತಿರ್ಥರ ಮಮತ ಸಂಪೂರ್ಣ ಸಂಪಾದಿತ ಅಸ್ಮದಗ ಸದ್ಗುರುವರ್ಯ ನಿತ್ಯ ಸನ್ಮಂಗಳ 2 ಅಷ್ಟಪದಲೋಷ್ಟ ಭಾವಸಮತ | ಕರತಧೀರ ಸನ್ಮಾನಿತ ಅಷ್ಟ್ಯೆಕಾಮಲ ಭಕ್ತಿ ಜ್ಞಾನ ಭರಿತ ವೈರಾಗ್ಯ ಸಂಶೋಭಿತ | ಸೃಷ್ಟ್ಯಂತರ್ಗತ ಮೂರ್ತಿ ಸತತ | ಸಂದರ್ಶನಾನಂದಿತ ನಿತ್ಯ ಸನ್ಮಂಗಳ 3 ಶೃಂಗಾರಾಂಗ ಸುನಾಮದ್ವಾದಶಧೃತ ಮುದ್ರಾಕ್ಷತಾಲಾಂಕೃತ ಕಮಲ ಜಪಿತ ಪದ್ಮಾಕ್ಷಮಾಲಾಂದ್ರಿತೆ ಇಂಗಿತಜ್ಞ ಸುಸಾಧು ಸಂಗ ಸಹಿತ ಮುಕ್ತ್ಯಂಗನಾಲಿಂಗಿತ ನಿತ್ಯ ಸನ್ಮಂಗಳ4 ತಾಪತ್ರಯದೂರ ಪಾಪರಹಿತ | ಕೋಪಾದಿಗುಣವರ್ಜಿತ | ಶಾಪಾನುಗ್ರಹಶಕ್ತ ಸುಜನಪ್ರೀತ ಸಂಸಾರ‌ಘನ ಮಾರುತ ಗೂಡಾರ್ಥ ಸಂಬೋಧಿತ ಅಸ್ಮದ್ ಸದ್ಗುರುವರ್ಯ ಈಯೋ ನೀ ನಿತ್ಯಸನ್ಮಂಗಳ 5 ಆಧ್ಯಾತ್ಮ ಸುವಿಚಾರ ಸತತ ಶೃತ್ಯರ್ಥಬಹು ಗರ್ಭಿತ | ಸತ್ಯವಲ್ಲಭ ಸತ್ಯದೇವ ಚರಿತ ವಕ್ತಾರ ಬುಧ ಸಮ್ಮತ | ನಾಡ್ಯಾಂತರ್ಗತ ಸರ್ವತೀರ್ಥ ಸ್ನಾತ | ತನ್ಮೂರ್ತಿ ಪ್ರತ್ಯಕ್ಷತ ನಿತ್ಯ ಸನ್ಮಂಗಳ 6 ಧರ್ಮಾಚಾರ ವಿಚಾರಶೀಲ ನಿರತ | ಷಟ್ಕರ್ಮ ಸಂಭೂಷಿತ | ನಿರ್ಮತ್ಸರ ಮೋಹ ದೇಹ ಮಮತ ಸುಶರ್ಮಕುಲರಾಜಿತ | ಧಮೋದರವಾತಜಾತ ಪೋತ ಜಾತಾರಿಖತಿವರ್ಜಿತ | ಅಸ್ಮಾದ್ ಸದ್ಗುರುವರ್ಯ ಈಯೋ ನಮಗೆ ಸತತ ನೀ ಸನ್ಮಂಗಳ 7
--------------
ಶಾಮಸುಂದರ ವಿಠಲ
ಪಾಪೇಂದ್ರಿಯಗಳಿಗೆರಗಿ ಪರಹಿತಾರ್ಥವ ಮರೆದು ವ್ಯಾಪಾರ ವಿಷಯಂಗಳಲ್ಲಿರೆ ಯಮನೊಯ್ದು ಕೋಪಾಟೋಪದಲಿಂದ ದಂಡಿಸಿ ತಮಸಿನ ಕೂಪದಲ್ಲಿ ಹಾಕದಲೆ ಬಿಡುವನೆ ಮರುಳೆ ಪ ಉಡಿಗೆ ತೊಡಿಗೆ ಇಡಲು ಮಡದಿಯಳ ಮುಖ ನೋಡಿ ಕಡು ಹಿಗ್ಗಿ ಹುಗ್ಗಿ ಪಡಗದಂತೆ ಹಿರ್ರನೆ ಪಿಡಿದು ಗಲ್ಲವ ಮುಟ್ಟಿ ಮುಡಿಗೆ ಮುಡಿವಾಳವನು ತಡಿಯದಲೆ ಮುಡಿಸುತ್ತಲಿ ಕಕ್ಕಸ ಕುಚ ವಡನೊಡನೆ ನೋಡಿ ಸುಖಬಡುತಾ ಬಿಡದೆ ಕಾಳ್ಯಾಡುವುದು ಸುಡುಸುಡು ಮಾಡಿದರಿನ್ನಾವ ಗತಿ ಮರುಳೇ 1 ನೆಂಟರು ಮನೆಗೆ ಬರಲು ವಂಟಿಯಂತೆ ಮೊಗವ ಸೊಂಟ ಮಾಡಿಕೊಂಡು ಕಂಠವನು ತರ್ಕೈಸಿ ಕುಂಟವಾರ್ತೆಯ ಕೇಳಿ ಬಂಟನು ನಾನೆಂದು ತೊಂಟತನ ಬಗೆ ತೋರುತಾ ಉಂಟಾದ ಗೋಧಿಯ ಸೊಂಟೆ ಬೆಲ್ಲನು ತಂದು ಹೆಂಟಿಯಂತೆ ಹದಿನೆಂಟು ಕಡುಬನೆ ಕೊರಿಸಿ ವಂಟಿಲಿ ಕುಳಿತು ಸುಂಡಿಗೆಯನ್ನು ಚಾಚುತ್ತಾ ಎಂಟು ಮಡಿಸದೆ ವಾರ್ತಿ ಪೇಳುತಲಿ ಮರುಳೇ 2 ಇಂದು ನಮ್ಮನೆ ಪ್ರಸ್ತÀವೆಂದು ಆರಾದರೂ ಬಂದು ಪೇಳಲು ಊರ ಹಂದಿಯಂತೆ ಕಾಯಿದು ಒಂದು ಕಾಳು ತಿನದೆ ಸಂದಿಗೊಂದಿ ಸುತ್ತಿ ಸಂಧ್ಯಾಕಾಲ ವಾನರಾಗುತ್ತ ಚಂದದಿಂದ್ಯುಕ್ತಿಯೊಳು ದ್ವಂದ್ವದಲಿ ಕುಳಿತಿವರು ತಂದೆ ತಾಯಿ ಕಡೆ ಬಂಧುಬಳಗವೆಂದೂ ಒಂದಿಷ್ಟು ಕಡಿಮೆ ತಿನ್ನದೆ ಪರರ ಒಡವೆಯನು ತಿಂದು ಡರ್ರನೆ ತೇಗಿ ನಸುವ ನಗುವ ಮರುಳೇ3 ನಾಡಾಡಿ ಚಾಡಿ ಮಾತಾಡಬೇಕಾದರೆ ಖೋಡಿ ನಾಲಿಗೆ ದೊಡತಾಗಿ ಬಾಹಿನೀ ನಿಡಿ ಲಟಲಟವೆನುತಾ ಕೋಡಗದಂತೆ ಕುಳಿತು ಹೇಡಿ ಪರನಿಂದೆಗಳಿಗೆ ಬಾಡದಲೆ ಬತ್ತದಲೆ ಮಾಡಿದ ಮಹಾಪುಣ್ಯ ಕಾಡಿಗೊಪ್ಪಿಸಿ ಕೊಟ್ಟ ಮೂಢ ಗಾರ್ಧಬನಂತೆ ಓಡಾಡಿ ಬಳಲಿ ನಾಡಾಡಿ ಸುದ್ದಿಗಳಿಗೆ ಬಿಡಿ ಬಿಡಿಂದಾ ತಿರುಗುವಾ ಹೀನ ಮರುಳೇ 4 ಸಂಸಾರವೆಂಬಾ ಸಾರಾ ಸಾಗರ ಮಧ್ಯ ಹಿಂಸನಾಗದೆ ಬಿಟ್ಟು ಇದರಂತೆ ಭಕುತಿ ಮರು ದಂಶ ಗುರು ಮಧ್ವಮುನಿರನ್ನನಾ ಶ್ರೀ ಚರಣ ಸಂಶಯವಿಲ್ಲದಲೆ ನಂಬಿ ಸಂಸಾರ ಉತ್ತರಿಸು ಸಂದೇಹ ಇದಕಿಲ್ಲ ಕಂಸಾಸುರನ ಪ್ರಾಣಹರ ಎನ್ನ ಮನಸ್ಸಾ ಹಂಸ ಶ್ರೀ ವಿಜಯವಿಠ್ಠಲನ್ನ ಪಾದದಾ ಪಾಂಶವೊ ಮಾಡಿ ಗತಿಯಲಿ ಬಾಳು ಮರುಳೇ5
--------------
ವಿಜಯದಾಸ
ಬನ್ನಿರಿ ದಾಸರೇ ಪೋಗುವಾ ನಮ್ಮ ಚನ್ನಕೇಶವನೆಂಬ ಹರಿಮಂದಿರಕೇ ಪ ಬನ್ನಿರಿ ಪೋಗುವಾ ಗುಡಿಯೊಳು ತಿನ್ನುವಾ ಚನ್ನಗೆ ಅರ್ಪಿಸಿ ತಂದ ಪಕ್ವಗಳ ಅ.ಪ. ನಾ ತಂದಿರುವೆನು ಪರಮಾನ್ನವನ್ನು ತಾತನ ನಾಮಕ್ಕೆ ಬೆರಿಸಿ ಮಾಡಿದೆನು ನೀತಿಯೊಳಾಭಕ್ತಿ ಮಧುಕ್ಷೀರವನ್ನು ಸತ್ಯದಿ ಕೂಡಿಸಿ ಸೇವಿಸುವಾ 1 ಪರಹಿತವೆನ್ನುವ ಸಕ್ಕರೆ ತಂದು ನಾ ಬೆರಿಸುವೆ ಧರ್ಮಗಳೆಂಬ ಪಾಯಸಕೇ ಹರಿಯ ಕೀರ್ತನೆಗಳ ಅಮೃತವ ಸೇರಿಸಿ ಪರಮಾನ್ನವೀ ರೀತಿ ಮಾಡಿರುವೆನಯ್ಯ 2 ಹರಿಭಕ್ತಿಯೆಂಬುವ ತಂಡುಲವನೆ ತಂದು ಹರಿಯ ಸ್ಮರಣೆಯೆಂಬ ವುದಕದಿ ತೊಳೆದು ಹರಿಯ ಭಜನೆಯೆಂಬ ಬೆಂಕಿಯ ಮೇಲಿಟ್ಟು ಸರಸದಿ ನಾ ಪಾಕವ ಮಾಡಿರುವೆ 3 ಸನ್ನುತ ದೂರ್ವಾಪಟ್ಟಣದಿ ನಿತ್ತಿರುವಂಥ ಪನ್ನಗಶಯನ ಶ್ರೀ ಹರಿಯ ನೆನೆಯುತ್ತ ಉನ್ನತ ಸೇವೆಯಿಂದಾತನ ಮೆಚ್ಚಿಸಿ ತಿನ್ನುವಾ ಕೇಶವ ನೀಯುವ ವರವಾ 4
--------------
ಕರ್ಕಿ ಕೇಶವದಾಸ
ಯಾಕೆನಗೆ ವೈರಾಗ್ಯ ಪುಟ್ಟಲಿಲ್ಲವೊ ದೇವ ಏನು ಪಾಪಿಯೊ ಜಗದಲಿ ಪ. ಸಾಕು ಸಾಕೀ ವಿಷಯ ಚಿಂತನೆಯ ಬಿಡಿಸಿನ್ನು ಲೋಕನಾಯಕನೆ ಸ್ವಾಮಿ ಅ.ಪ. ಅಸನವಸನಗಳಿಗೆ ಆಲ್ಪರಿದು ಅನ್ಯರಿಗೆ ಬಿಸಜನಯನನೆ ಕಾಲಹರಣೆಯನೆಗೈದೆ ವಸುದೇವಸುತ ನಿನ್ನ ಅರಘಳಿಗೆ ನೆನೆಯದಲೆ ಹಸಿವು ತೃಷೆಯಿಂ ಬಳಲಿ ಬೆಂಡಾದೆನಯ್ಯಾ 1 ಇಂದ್ರಿಯಗಳೆಲ್ಲವನು ಬಂಧನದೊಳಗೆ ಇರಿಸಿ ಇಂದಿರೇಶನೆ ನಿನ್ನ ಧ್ಯಾನಿಸದಲೆ ಮಂದಮತಿಯಿಂದ ನಾ ಮಮಕಾರದಲಿ ಬಿದ್ದು ಮಂದ ಜನರೊಡನಾಡಿ ಮಾಯಕೊಳಗಾದೆ 2 ಭಕ್ತಿಮಾರ್ಗವ ಕಾಣೆ ಜ್ಞಾನ ಮೊದಲೆ ಅರಿಯೆ ಮುಕ್ತಿಗೊಡೆಯನೆ ಎನ್ನ ಮುದದಿಂದ ಸಲಹೊ ಯುಕ್ತಯುಕ್ತಿಗಳರಿಯೆ ಸುತ್ತುತಿಪ್ಪೆನೊ ಭವದಿ ಶಕ್ತ ನೀ ಒಳಗಿದ್ದು ಎನ್ನ ಕಾಡುವರೆ 3 ಕರ್ಮಮಾರ್ಗವ ತೊರೆದು ನಿರ್ಮಲದಲಿ ನಿನ್ನ ಒಮ್ಮೆಗಾದರೂ ಮನದಿ ನೆನೆಯಲಿಲ್ಲ ರಮೆಯರಸನೆ ಶ್ರೀ ಗುರುಗಳಂತರ್ಯಾಮಿ ಕರ್ಮತ್ರಯಗಳ ಕಡಿದು ಕರುಣದಲಿ ಕಾಯೊ4 ಪಾಪರಹಿತನೆ ಎನ್ನ ಪಾಪ ಕರ್ಮಗಳೆಲ್ಲ ಪರಿ ನುಡಿದೆ ನೀ ಪರಿಹರಿಸಿ ಕಾಯೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಈ ಪಾಪಿಯನು ಕಾಯ್ವರಾರೊ ಶ್ರೀ ಹರಿಯೆ5
--------------
ಅಂಬಾಬಾಯಿ
ಯಾರಿಗೆ ದಾರೋ ಗೋಡೆಗೆ ಮಣ್ಣು ಮಾರಿಯರೆಲ್ಲರು ಶ್ರೀ ಹರಿಯೇ ಪ ಸ್ಥಿತಿಯಲ್ಲ ದೇವಾ ನಿನ್ನುಳಿದು 1 ಅಂಬುಜಲೋಚನ ಪರಮ ಪುರುಷನ ಭವ ಅಂಬುಜೆರಮಣಾ ನಿನ್ನುಳಿದು 2 ನಂಬಿದ ಭಕ್ತರ ಸಲಹುವ ಹರಿಯೇ ಸಂಭ್ರಮದಾತ್ಮಗೆ ನಿನ್ನುಳಿದು3 ನರಹರಿ ಭಕ್ತಿ ಮಾಡಿದ ಧರ್ಮ ಸರಸದಿ ಪರಹಿತವನ್ನುಳಿದು 4 ಹಿಡಿಯುವೆ ಮುಕ್ತಿಯ ಮಾರ್ಗವನೀಗ ಪಡೆವೆನು ಸುಖವ ಕೇಶವನೇ5
--------------
ಕರ್ಕಿ ಕೇಶವದಾಸ
ರಮಾಸಮುದ್ರನ ಕುಮಾರಿ ನಿನ್ನಸರಿ ಸಮಾನರ್ಯಾರಮ್ಮ ಪ ಉಮೇಶ ಮೊದಲಾದ ಅಮರ ನಿಕರವು ಪಾದ ಕಮಲ ಭಜಿಪುದು ಅ.ಪ ಕರುಣಾವಾರಿಧಿಯೆಂದು ಶರಣ ಜನರು ನಿನ್ನ ಸ್ಮರಣೆ ಮಾಡುತ ಲಿಪ್ಪರೆ ಹರಿಣಾಕ್ಷಿ ಕೇಳ್ನಿನ್ನ ಕರುಣಾದಿಂದಲಿ ಅಘ ಹರಣ ಮಾಡಿ ನಿನ್ನ ಚರಣಾವ ತೋರಿಸಮ್ಮ 1 ಅಪಾರ ಮಹಿಮನ ವ್ಯಾಪಾರಗಳ ತಿಳಿದು ಕಾಪಾಡುವೇ ಜಗವಾ ಕೋಪರಹಿತಳಾಗಿ ಶ್ರೀಪತಿಯೊಳು ಎಮ್ಮ ತಾಪತ್ರಯವ ಪೇಳಿ ಕಾಪಾಡಬೇಕಮ್ಮ 2 ವಾಸವ ವಂದಿತ ಸಿರಿಶೇಷವಿಠ್ಠಲನೊಳು ವಾಸವ ಮಾಡುವಳೆ ಘಾಸೀ ಮಾಡದೆ ಎನ್ನ ಈ ಸಮಯದೊಳು ವಾಸುದೇವಗೆ ಪೇಳಿ ಪೋಷಿಸಬೇಕಮ್ಮ 3
--------------
ಬಾಗೇಪಲ್ಲಿ ಶೇಷದಾಸರು
ರಾಮ ಶ್ರೀ ರಘುನಂದನ ಶರಣು ಸಾರ್ವ- ಭೌಮ ಭೂಸುರವಂದ್ಯ ಸೋಮಶೇಖರಮಿತ್ರ ಕಾಮಿತ ಫಲದಾತ್ರ ಸನ್ನುತ ಸೀತಾ ಪ. ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ- ಭಾರಹರ ಭಜಕÀಜನೋದ್ಧಾರ ವೇದಾಂತಸಾರ ಚಾರುವದನ ಮಣಿಹಾರ ಕುಂಡಲಧರ ವೀರರಾಘವ ವಿಶ್ವಾಧಾರ ಕರುಣಿಸು ಸೀತಾ 1 ಪಾಪರಹಿತ ಪಾವನ ಚರಿತ ಅಹಲ್ಯಾ ಹರಣ ದಿವ್ಯರೂಪ ರಮಾರಮಣ ತಾಪ ವಿಚ್ಛೇದನ ತಾಮಸ ಗುಣಹರಣ ದ- ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ 2 ಮಾಧವ ಪುಣ್ಯಚರಿತ ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ 3
--------------
ಹೆಳವನಕಟ್ಟೆ ಗಿರಿಯಮ್ಮ
ವೇದವೇದ್ಯರ ವಂದಿಸುವೆನು ವಾದಿರಾಜರ ಪ್ರಿಯ ಶಿಷ್ಯರ ವೇದವೇದ್ಯರ ವಂದಿಸುವೆನು ಪ ವಾದಿರಾಜರ ಪಾಶ್ರ್ವದಲ್ಲಿಹ ಮಧ್ವಶಾಸ್ತ್ರವನುದ್ಧರಿಸಿದ ವೇದನಿಧಿಗಳ ತಾತರಾಗಿಹ 1 ರೂಪ್ಯಪೀಠದಿ ಕೃಷ್ಣಮಂದಿರ ರೂಪಳಿದುದನುದ್ಧಾರ ಮಾಡಿದ ಪಾಪರಹಿತರ ಕೋಪಶೂನ್ಯ ಸೋ- ದಾಪುರದೊಳಗೆ ಇರ್ಪ ಯತಿಗಳ 2 ಯಾದವೇಶ ರಾಜೇಶ ಹಯಮುಖ ಸಾಧುಜನರಿಗಾಧಾರರಾಗಿಹ ವಾದಿರಾಜರ ಪದದೊಳಿರ್ಪರ 3
--------------
ವಿಶ್ವೇಂದ್ರತೀರ್ಥ
ಶಿವಮಂಗಳಂ ಸದಾಶಿವ ಮಂಗಳಂಮಂಗಳಂ ರಜತಾದ್ರಿ ಮುಖ್ಯನಿಲಯಾಯ ಪಹಿಮಕರಾವತಂಸಾಯ ಹಿಮರುಚಿರಕಾಯಾಯಹಿಮರೂಪಗಿರಿಚಿತ್ತ ಹಾರಕಾಯಹಿಮಹರಾಮಿತಕಾಂತಿ ಸದೃಶಾಯ ಸೌಮ್ಯಾಯಹಿಮತಾಪರಹಿತಾಯ ಹೇಮವರ್ಣಾಯ 1ವರಜಟಾಮಕುಟಾಯ ವಾರಿಯುತಕೇಶಾಯಸ್ಫುರದಿನಾನಲಸೋಮಲೋಚನಾಯಗರನೀಲಕಂಠಾಯ ಕದ್ರುಸುತ ಹಾರಾಯಪರಶು ಮೃಗ ಶೂಲಾದಿ ಪರಮಾಯುಧಾಯ2ನಾಗೋಪವೀತಾಯ ನಾಗೇಶ ವಲಯಾಯನಾಗಧವಳಾಂಗಾಯ ನಾಯಕಾಯನಾಗವಾಹನ ಮುಖ್ಯ ನಾಕಜನನಾಥಾಯನಾಗಪರ್ಯಂಕಸ್ಥ ನಿತ್ಯಮಿತ್ರಾಯ 3ಗೌರೀಧೃತಾಂಗಾಯ ಗಂಧರ್ವಸೇವ್ಯಾಯಭೂರಿ ಗುಣಬ್ರಹ್ಮಾಂಡ ಭೂತಾಯಚಾರು ಕಟಿ ಶುಭ ಜಂಘಾಯನೀರಜಾಮಲ ಪೀಠ ನಿಹಿತ ಪಾದಾಯ 4ಮೃಗಚರ್ಮವಸನಾಯ ಮಂಜುಳ ಮಯೂಖಾಯಜಗದೇಕನಾಥಾಯ ಜೀವನಾಯಸುಗಮ ತಿರುಪತಿ ನಾಮ ಸದ್ಮಾಧಿನಾಥಾಯಗಗನಧುನಿ ಗಿರಿ ವಾಸ ಗಂಗಾಧರಾಯ 5 ಓಂ ನವನೀತನವಾಹಾರಾಯ ನಮಃ
--------------
ತಿಮ್ಮಪ್ಪದಾಸರು
ಶ್ರೀ ಕಮಲನೇತುರ | ಪುಣ್ಯಗಾತುರ | ಸಾಕಾರ ಕ್ಷಣ ಮಾತುರ | ನೀ ಕರುಣದಿಂದ | ವಾಕು ಲಾಲಿಸು | ಬೇಕು ವೇಗದಲಿ | ಗೋಕುಲಾಂಬುಧಿ ರಾಕಾಂಬುಜ ಲಾ | ವಕರ ತೊಲಗಿಸಿ | ಸಾಕುವುದೆನ್ನ ನಿ | ಜಕರ ವಿಡಿದೂ ಪ ನಿತ್ಯ ಅಜಾತಾ | ಕುಂಭ ಮಕುಟನೀತಾ | ಮಾವ ಮರ್ದನ ನಿರ್ಭೀತಾ || ದೇವಮರರ ಕಾ | ವ ಭಕ್ತರ | ಜೀವನೆ ವರ | ವೀವನನುದಿನ | ಆವು ಕಾವುತ ಪೋಗಿ | ದಾ ವಿಷ ಬಿಡಿಸದೆ || ಶ್ರೀ ವಲ್ಲಭ ನಿನಗಾವವನೆಣೆ ತ್ರಿ | ಭುವನದೊಳಗತಿ | ಸೇವಕ ಜನರಿಗೆ ಕೈವಲ್ಯವನು ಕೊಡುವಾ 1 ಪೂತನಿ ಪ್ರಾಣಾಪಹಾರಾ | ಪರಮ ಸುಂದರಾ | ಪರಿಹಾರಾ | ಮರಣಜರ ವಿದೂರಾ | ಭೂತಿ ಉಳ್ಳಿಂದ್ರ ಕುಮಾರಾ | ಸೂತ ನೀನಾಗಿ ಭೂತಳದೊಳು | ವ್ರಾತ ಯಮುನೆಯ | ಭ್ರಾತನ್ನ ನಗರಿಯ | ಯಾತನಿಗಟ್ಟಿದೆ | ಪೂತುರೆ ನಿನ್ನ ಮಾ | ಯಾತನಕೇನೆಂಬೆ | ಖ್ಯಾತಿ ಮೂರುತಿ ಬೆನ್ನಾತು ಕಾಯೊ ಪಾರಿ | ಜಾತವ ತಂದ | ಮಿತ ಮಹಿಮ ಜಗ | ತಾತಾ ಬೊಮ್ಮಾದಿ ವಿನುತಾ 2 ತೋಷ ಗೋಪಾಲ ಮಾನಿಸಾ ವೇಷ | ಆ ಪಾರ ರತುನ ಭೂಷಾ | ನಂತಪ್ರಕಾಳಾ | ತಾಪಸಿಗಳ ವಿಲಾಸಾ || ಕೋಪ ಮೊದಲಾದ ತಾಪತ್ರಯಗಳ | ನೀ ಪೋಗಾಡು ಉ | ಡುಪಿ ಸದನನೆ ಪಾಪರಹಿತ ಮಧ್ವಪತಿ ಕರದಿಂ | ದ ಪೂಜೆಗೊಂಡ ಪ್ರತಾಪನೆ ಜ್ಞಾನದ | ದೀಪ ಬೆಳಗಲಿ | ರೂಪವ ತೋರಿಸು ಯದುಪಾ ಎನ್ನ ಸಮೀಪಾ 3
--------------
ವಿಜಯದಾಸ
ಶ್ರೀ ರಘುದಾಂತತೀರ್ಥರ ಸ್ತೋತ್ರ ನಮೋ ನಮೋ ಶ್ರೀ ರಘುದಾಂತ ತೀರ್ಥ ಮುನಿಯ ಮತಮಹಮಸಿರಿಯೆ ಭ್ರಮರನೆನಿಪಗುರುವೆ ಪ ಮಾರಮಣನಪದ ಸಾರಸಷಟ್ಟದ ಸೂರಿಸುಗುಣ ಭರಿತ ಮಾರುತಮತ ಪಯವಾರಿಧಿ ಶಶಿ ಗಂಭೀರ ವಿಮಲ ಚರಿತ ನೀರಜ ಶರವಿಜಿತ ಶ್ರೀ ರಘುಪತಿ ತೀರ್ಥಾರ್ಯರ ಕರಸರಸೀರುಹಸಂಜನಿತ 1 ಆರ್ತಬಂಧು ಸತ್ಕೀರ್ತಿವಂತ ಸರ್ವೋತ್ತಮ ಹರಿಯನಿಪ ಸೂತ್ರನಾಮಕ ಶಿಖಿನೇತ್ರ ಪ್ರಮುಖ ದೇವೋತ್ತಮನೆಂದೆನಿಪ ಸ್ತೋತ್ರಗೈಯ್ಯುತಿಪ್ಪ ಗಾತ್ರ ಮರೆದು ಶ್ರೀ ಪಾರ್ಥಸಖನಗುಣಕೀರ್ತಿಸಿ ಸುರಿಪ 2 ಪರಮತುರಗನಭಚರ ಪತಿಯೆನಿಸುವ ಕರುಣಿ ಕೋಪರಹಿತ ಶರಧಿ ಕುಂಭಜಾತ ಭಾಗವತ ಸಿರಿಮುಖ ಕುಮುದಕೆ ಶರನಿಧಿ ಸಂಜಾತ ಪರತತ್ವದಿ ಪರತರನೆನಿಸುವ ಮುನಿವರ ನಿರ್ಗತದುರಿತ 3 ಅನಘನಿನ್ನಪದವನಜÀಜದರಜವನು ವಿನಯದಿರಿಸಿ ಶಿರದಿ ಜನುಮಜನುಮದಘತೃಣರಾಶಿಯ ಮಧ್ಯಗಳ ಪೊಕ್ಕತೆರದಿ ಕ್ಷಣದಲಿ ದಹಿಸದೆ ಸನುಮತೆಂದೆನಲು ಅನುಗೃಹಿಸಿ ತ್ವರದಿ ಸನುಮಾರ್ಗಪ್ರದ, ದರುಶÀನದು ಪ್ರಕೃತಿನೆನೆವೆನು ಇಹಪÀರದಿ 4 ಮಾಮನೋರಮಪದ ತಾಮರಸಂಗಳನೇಮದಿ ಪೂಜಿಪನೆ ಪತಿ ಧೀಮಂತಪ್ರಿಯನೆ ನಿಮ್ಮ ಪ್ರೇಮದಿನಂಬಿಹೆನೆ ರಾಮನಾಮರತಿ ನೇಮದಿಕೂಡು ವರದೇಶ ವಿಠಲಪ್ರೀಯನೆ 5
--------------
ವರದೇಶವಿಠಲ
ಶ್ರೀ ಶ್ರೀ ಶ್ರೀಸತ್ಯಪ್ರಮೋದತೀರ್ಥರು ಸತ್ಯಾಭಿಜ್ಞ ಕರಜ ಶ್ರೀ | ಸತ್ಯಪ್ರಮೋದಾ |ತೀರ್ಥ ನಿಮ್ಮಯ ಚರಣ ದ್ವಂದ್ವಕಾ ನಮಿಪೆ ಪ ವೈರಾಗ್ಯ ಸದ್ಭಾಗ್ಯ | ಪರಮ ನಿಧಿಯೆನಿಸುತಲಿಶ್ರೀರಾಮ ಪದತುಂಗ | ಸರಸಿರುಹ ಭೃಂಗಾ |ಊರೂರು ಚರಿಸುತಲಿ | ಆ ರಾಮ ಪದದ್ವಂದ್ವಆರಾಧಕರಿಗ್ವೊರೆದ | ಪರಮ ತತ್ವಗಳಾ 1 ವಾದಿಗಳ ಹೃದಯ ನಿ | ರ್ಭೇದ ಗೈಸುವ ನಿಮ್ಮವಾದಗಳ ಗಡಣೆಗಳ | ವಾದಿಗಳು ಕೇಳೀ |ಪಾದವನು ಕ್ರಮಿಸುತ್ತ | ಗೈದರು ಪಲಾಯನವಮೋದ ಪ್ರಮೋದ ಹರಿ | ಕಾರುಣ್ಯ ಪಾತ್ರಾ 2 ಕಲ್ಯಾಣ ಪುರಿಯೊಳಗೆ | ಎಲ್ಲ ವೈಷ್ಣವರ್ನೆರೆದುಪುಲ್ಲನಾಭನು ಶ್ರೀ ವೇದವ್ಯಾಸರನೂ |ಚೆಲ್ವಗಜ ವಾಹನದಿ | ಕುಳ್ಳಿರಿಸಿ ಐತರಲುಎಲ್ಲ ಭಕ್ತರು ಮೊರೆಯೆ | ಅಂಬರವು ಬಿರಿಯೇ 3 ವತ್ಸರ ಚಾರು ಸಿರಿ | ಸತ್ಯಧ್ಯಾನರ ಭಕ್ತಿಲೀ 4 ಭವ ಬಂಧಾ 5 ಕೋಪರಹಿತರುಯೆನಿಸಿ | ಶ್ರೀ ಪತಿಯ ಧ್ಯಾನಿಸುತತಾಪಸೀಗಳು ತೀರ್ಥ | ಪ್ರಾಪಿಸುತ್ತಿರೆ ಭಕುತರೂ |ಪಾಪ ಕಳೆದೆವು ಯೆಂಬ ಸ | ಲ್ಲಾಪದೊಳು ತಪನತಾಪ ಮರೆತರು ನೋಡಿ | ಪಾಪ ಹೊರದೂಡೀ 6 ಹತ್ತಾರು ಸಾಸಿರಕೆ | ಮತ್ತೆ ಭೋಜನಗೈಸಿಕೃತಿವಾಸನ ತಾತ | ಉತ್ತಮೋತ್ತಮನೆನ್ನುತಾ |ಸತ್ಯವಲ್ಲಭ ಗುರೂ | ಗೋವಿಂದ ವಿಠಲನಪ್ರತ್ಯಹರ್ ಅರ್ಚಿಸುವ | ಸತ್ಯ ಪ್ರಮೋದಾರ್ಯ 7
--------------
ಗುರುಗೋವಿಂದವಿಠಲರು
ಶ್ರೀನಿವಾಸ ನಿನ್ನ ನಂಬಿದ ದಾಸನ ಎನ್ನನು ಕಾಯೋ ಶ್ರೀವಾಸುಕಿಶಯನ ಪ ರೂಪರಹಿತ ಬಹುರೂಪ ಧರಿಸಿಹ ಶ್ರೀಪತಿ ಎನ್ನನು ನೀಪರಿಪಾಲಿಸು 1 ಕಾಲರೂಪ ಬಹುಲೀಲೆಯ ತೋರುವ ಮೂಲಪುರುಷ ಸುರಪಾಲಕ ಶ್ರೀಹರಿ 2 ಶಕ್ತಿಗಳನು ಅವ್ಯಕ್ತದೊಳಿರಿಸಿ ಸ ಮಸ್ತ ವಸ್ತುವ ಸುವ್ಯಕ್ತ ಪಡಿಸಿದ 3 ಕಲ್ಪಕೋಟಿ ನಿನಗಲ್ಪಕಾಲ ಪರಿ ಕಲ್ಪಿತ ಸುರನರ ಕಲ್ಪಭೋಜ ಹರಿ 4 ಖಂಡಪರಶು ಅಖಂಡಲಾದಿ ಸುರ ಪುಂಡರೀಕ ಪದ 5 ಮಂದರಧರ ಗೋವಿಂದ ಮುಕುಂದ ಸ ನಂದನಾದಿ ಮುನಿಬೃಂದ ಸುವಂದಿತ 6 ಸಾರಸುಗುಣ ಪರಿವಾರ ಸಜ್ಜನಾಧಾರ ಧೀರವರದವಿಠಲ ಹರಿ 7
--------------
ವೆಂಕಟವರದಾರ್ಯರು
ಶ್ರೀಪ್ರಶಾಂತ ನಿಲಯ ನಿನ್ನ ಸುಪ್ರಕಾಶ ಬೆಳಗಲಿ ಪ ಅಪ್ರಮೇಯ ನಮಗೆ ನಿನ್ನ ಸುಪ್ರಸನ್ನತೆ ದೊರೆಯಲಿ ಅ.ಪ ನಿನ್ನ ಮಹಿಮೆ ಲೋಕವಿದಿತ ನಿನ್ನ ಚರಿತೆ ಪುಣ್ಯಭರಿತ ನಿನ್ನ ಭಜನೆ ಪಾಪರಹಿತ ನಿನ್ನದರ್ಶನ ಮೋಕ್ಷಕಲಿತ1 ಇಂದು ಪರ್ತಿಯಲಿ ಜನಿಸಿ ಚಂದ್ರಮೌಳಿ ಎನಿಸಿದೆ 2 ಸತ್ಯಸಾಯಿಬಾಬ ನಿನ್ನ ತತ್ವಬೋಧ ನಿರುಪಮ ಧಾಮ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್