ಒಟ್ಟು 100 ಕಡೆಗಳಲ್ಲಿ , 40 ದಾಸರು , 94 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎದ್ದು ಬರುತಾರೆ ನೋಡೆ ತಾ - ವೆದ್ದು ಬರುತಾರೆ ನೋಡೆ ಪ ಮುದ್ದು ಬೃಂದಾವನ ಮಧ್ಯದೊಳಗಿದ್ದು ತಿದ್ದಿ ಹಚ್ಚಿದ ನಾಮ - ಮುದ್ರೆಗಳೊಪ್ಪುತೀಗ ಅ.ಪ ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು ಚಲುವ ಮುಖದೊಳು ಪೊಳೆವೊ ದಂತಗಳಿಂದ 1 ಹೃದಯ ಸದನದಲ್ಲಿ ಪದುಮನಾಭನ ಭಜಿಸಿ ನಿತ್ಯ ಸದಮಲ ರೂಪತಾಳಿ 2 ದಾತ ಗುರು ಜಗನ್ನಾಥವಿಠಲನ್ನ ಪ್ರೀತಿಯ ಬಡಿಸುತ ದೂತರ ಪೊರೆಯುತ 3
--------------
ಗುರುಜಗನ್ನಾಥದಾಸರು
ಏನೂ ತೋಚದೋ ಮುಂದೇನು ಗತಿಯೋ ದೇವಾ ಅಪ್ರಮೇಯ ಸದಾ ಪ ನಾನು ನನ್ನದು ಎಂಬಭಿಮಾನದಿಂದನುದಿನ ಹೀನಕರ್ಮದ ಸುಳಿಯೊಳು ನಾ ನೊಂದು ನಿಂದೆನೊ ಅ.ಪ ಬೋಧೆ ಇಲ್ಲದೆ ನಾನು ಬಾಧೆಪಡುವೆ ಪೂರ್ಣ ಬೋಧರ ಮತತತ್ತ್ವ ಸಾಧಿಸಲಿಲ್ಲವೋ ಸಾಧುಸಜ್ಜನರೆಂದು ಆದರಿಸಲರಿಯೆನೋ ಆಧಾರನಾಗೋ ನಿರಾಧಾರನಾಗಿಹೆ ಬಾಧಿಪರೋ ಬಂಧುಗಳು ಪ್ರತಿದಿನ ನಿಂದಿಪರೋ ಮನಬಂದ ತೆರದಲಿ ಊರೊಳಿತರಜನ ಉದಯಾಸ್ತ ಪರಿಯಂತರದಿ ಎನಗೆ ಉದರದ ಯೋಚನೆ ಆದುದೀಪರಿ ಎನ್ನ ಜೀವನ ಇದಕೆ ಸಾಧನಮಾಡಿ ಮೋಹದ ಮುದದಿ ಮೈಮರೆದೆನನುದಿನ ಪದುಮನಾಭನೆ ಮೊರೆಯಿಡುವೆ ಮುಂದೇನು ಗತಿ ಪಥವಾವುದೋ ದೇವಾ 1 ಯುಕುತಿಯಿಂದಲಿ ಕರ್ಮಮಾಡಿ ಬೆಂಡಾದೆ ಭಕುತಿಮಾತ್ರವು ಏನ್ನೊಳಿನಿತಿಲ್ಲವೋ ಶಕುತಿಯುಕುತಿಗಳೊಳು ನೀನಿದ್ದು ನಡೆಸುವೆ ಭಕುತಿ ಕೊಡದಿರುವೆಯಾ ಮುಕುತರೊಡೆಯಾ ಮಾಕಳತ್ರನೆ ನಿನ್ನ ದಯವೊಂದನವರತ ಇರಲಿ ಅಕುಟಿಲಾಂತಃಕರಣ ಭಕ್ತರ ಸಂಗವೆನಗಿರಲಿ ನಿಖಿಲಗುಣಗಣಪೂರ್ಣ ನಿನ್ನಯ ಸ್ಮರಣೆಯೊಂದಿರಲಿ ಸಾಕು ಇದಕಾನೇನು ಮಾಡಲಿ ವಾಕುಮನಸಿಗೆ ಸಿ- ಲುಕದವ ನಿನ್ನ ಕಾಕುಮನುಜ ನಾನೆಂತು ತಿಳಿಯಲಿ ನೀ ಕರುಣಿಸದಲಿರೆ ಇನ್ನು ಅವಿ- ವೇಕಿ ನಾನಿನ್ನೆಂತುಗೈಯಲಿ 2 ನರಜನುಮದಿ ಬಂದು ಬರಿದೆ ಆಯುವ ಕಳೆದೆ ಹರಿಯೆ ನಿನ್ನಯ ಕರುಣ ದೊರೆಯಲಿಲ್ಲಾ ಕರೆಕರೆಪಡುತಲಿ ಜರೆಯೊಳಾಡುತಿಹೆ ದುರಿತ ಹರೇ ದಾರಿ ಎನಗೇನಿಹುದೋ ಇನ್ನು ಮುಂದೆ ಕ್ಲೇಶ ಕೊಡದಲೆ ಪಾರುಗಾಣಿಸೋ ತಂದೆ ಶರಣಜನರಿಗನವರತ ಸುರಧೇನು ನೀನೆಂದೇ ಅರಿಯದವ ನಾ ನೀ ಪೊರೆಯಲರಿದೇ ಕರುಣಾಶರಧಿಯೇ ನಿನ್ನ ಕೃಪೆಯೊಂದಿರಲು ಉರುತರ ಸಾಧನವು ಅದು ತರವರಿತು ಧೃಢಭಕ್ತಿ ಪಾಲಿಸೊ ಉರಗಗಿರಿ ಶ್ರೀ ವೇಂಕಟೇಶನೆ3
--------------
ಉರಗಾದ್ರಿವಾಸವಿಠಲದಾಸರು
ಕರುಣಿಸುವುದೆನಗಿತು | ಕರಿವರದ ಕೃಷ್ಣಾ |ನಿರುತ ನಿನ್ನಯ ಸ್ಮರಣೆ | ವೆರಕವಾಗಲಿ ಮನಕೆ ಪ ಪರಸತಿಯರೊಲಿಮೆಗೇ |ಎರಗುವೀ ಮನವನ್ನು ಬರ ಸೆಳೆದು ನಿನ್ನಂಘ್ರಿ | ಸರಸಿಜದೊಳಿರಿಸೋ |ಶರಣ ವತ್ಸಲನೆಂಬೊ | ಬಿರಿದು ನಿನ್ನದು ಇರಲುಬರಿದೇಕೆ ತಡಗೈವೆ | ಮರುತಾಂತರಾತ್ಮಾ 1 ಮುದಿತನದ ತನುವಿನಲಿ | ಮದಡಾಗಿ ಮೈಮರೆವೆಹೃದಯ ಸದನದಿ ನಿನ್ನ | ಪದವ ನೋಡದಲೇಎದುರಾಳಿ ತತ್ವೇಶ | ರಧಿಕಾರ ತಪ್ಪಿಸುತಪದುಮನಾಭನೆ ನಿನ್ನ | ಪದ ತೋರೊ ಘನ್ನಾ 2 ಪುಂಡಲೀಕನಿಗೊಲಿದೆ | ಪಾಂಡವರ ಪಾಲಿಸಿದೆಪುಂಡರೀಕಾಕ್ಷ ದೃಹಿ | ಣಾಂಡಗಳ ವಡೆಯಾ |ಅಂಡಜಾಧಿಪ ತುರಗ | ಕುಂಡಲಿಯ ಶಯನ ಹೃತ್‍ಪುಂಡರೀಕದಿ ತೋರೊ | ಗುರು ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಕಾಯ ಬೇಕಿವಳಾ ಪ ಪದುಮನಾಭನೆ ನಿನ್ನ ಸೇವೆ ಕಾತುರಳಾ ಅ.ಪ. ಸುಕೃತ ರಾಶಿಗೇ ಫಲರೂಪದಾಸದೀಕ್ಷೆಯ ವಹಿಸೆ ಆಶಿಸುತ್ತಿಹಳೊ |ಕೇಶವನೆ ಹೃದಯಾಬ್ಜವಾಸ ತವ ಸೇವೆಯನುಲೇಸಾಗಿ ಕೊಟ್ಟು ಮನದಾಶೆ ಪೂರೈಸೋ 1 ನಯವಿನಯ ಗುಣಯುಕ್ತೆ ಕನ್ಯೆ ಬಹು ಭಕ್ತಿಯುತೆವಯಸು ಕಾರಣವಲ್ಲ ಪ್ರಿಯ ನಿನ್ನ ಭಜಿಸೆ |ದಯತೋರಿ ಈ ಶಿಶುವ ಹಯಮೊಗನೆ ಉದ್ಧರಿಸೊವಯನಗಮ್ಯನೆ ಹರಿಯೆ ಭಿನ್ನಯಿಪೆ ನಿನಗೇ 2 ಮರುತ ಮತದಲಿ ದೀಕ್ಷೆ ಹರಿಗುರೂ ಸದ್ಭಕ್ತಿನೆರೆ ಬಂಧು ಜನ ಪ್ರೇಮ ಮರಳಿ ಆಧಮರಲಿಕರುಣೆಯನು ಮಾಳ್ಪಂಥ ವರಮತಿಯ ಕರುಣಿಪುದುಗರುಡವಾಹನದೇವ ಸರ್ವಾಂತರಾತ್ಮ 3 ಘೋರಭವ ಶರನಿಧಿಗೆ ತಾರಕವು ತವನಾಮವಾರವಾರಕೆ ನುಡಿಸು ಮರುತಾಂತರಾತ್ಮತಾರತಮ್ಯ ಜ್ಞಾನ ಸಾರವನೆ ತಿಳಿಸುತ್ತತೋರೋ ತವರೂಪವನೆ ಹೃದ್ಗುಹದಿ ಹರಿಯೇ 4 ಕಾಲ ಸರ್ವಗುಣಪೂರ್ಣಸರ್ವಜ್ಞ ಹರಿ ಎನ್ನ ಭಿನ್ನಪವ ಸಲಿಸೆಂದುಸರ್ವಗುರು ಗೋವಿಂದ ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಗುರುರಾಜಾ ಗುರು ಸಾರ್ವಭೌಮ ಪ ಗುರುರಾಜಾ ಗುರಸಾರ್ವಭೌಮ ನಿನ್ನಯ ಪಾದ ಸರಸಿಜಯುಗಕಭಿ ನಮಿಸುವೇ ಅ.ಪ ಕರುಣ ಸಾಗರನೆಂದು ಚರಣವ ನಂಬಿದೆ ಶರಣನ ಪಾಲಿಸು ಕರುಣಿಯೇ 1 ಅನ್ಯರ ಭಜಿಸದೆ ನಿನ್ನನ್ನೆ ಭಜಿಸುವೆ ಎನ್ನ ಮರೆವೊದಿದು ನ್ಯಾಯವೇ 2 ಪರಮ ಪುರುಷನೆ ನಿನ್ನನು ಚರನೆನಿಸಿ ಧರೆಯೋಳು ನರರÀನ್ನ ಬೇಡೊದು ಘನತೆಯೆ 3 ಸುರನು ಮನೆಯಲ್ಲಿ ಸ್ಥಿರವಾಗಿ ಇರಲಿನು ತಿರಕ ತಕ್ರಕೆ ಬಾಯಿ ತೆರೆವೋರೇ 4 ಬೇಡಿದ ಮನೋರಥ ನೀಡುವ - ನೀನಿರೆ ಬೇಡೆನೆ ನರರನ್ನ ನೀಡೆಂದೂ 5 ಸಂತತ ಎನ ಕಾರ್ಯ ವಂತರಿಲ್ಲದೆ ನೀ - ನಿಂತು ಮಾಡುವದು ಪುಶಿಯಲ್ಲ 6 ಕಾಲಕ್ಕೆ ಸುಖದುಃಖ - ಮೇಲಾಗಿ ಬರುತಿರೆ ಪೇಳಿ ಎನ್ನನು ನೀ ಪಾಲಿಸುವಿ 7 ನಿನ್ನ ಸೇವಿಪರಿಗೆ ಇನ್ನುಂಟೆ ಭಯ ಶೋಕ ಉನ್ನತ ಸುಖದೊಳಗಿರುವರೋ 8 ಭವ ಬನ್ನ ಬಡುವದಿದು ಎನ್ನಪರಾಧವದೇನಯ್ಯಾ 9 ಕುಚ್ಛಿತ ಜನರನ್ನ - ತುಚ್ಛ ಮಾಡದÀಲವರ ಇಚ್ಛೆಕಾರ್ಯವ ಮಾಡಿ ಸಲಿಸುವಿ 10 ಜನನಿ ಪುತ್ರಗೆ ವಿಷsÀ - ವಿನಯದಿ ನೀಡಲು ಜನಕ ತನಯನ ತಾ ಮಾರಲು 11 ವಸುಧೀಶ ವೃತ್ತಿಯ - ಕಸಕೊಂಡ ವಾರ್ತೆಯ ವ್ಯಸನದಿ ಆರಿಗೆ ಉಸರೋದೋ12 ಇದರಂತೆ ನೀ ಮಾಡು - ವದು ಏನು ನ್ಯಾಯವೊ ಪದುಮನಾಭನ ಪ್ರಿಯ ಗುರುರಾಯ 13 ಮೂಕ ಬಧಿರ ಕುರುಡಾ - ನೇಕ ಜನಕೆ ಕಾರ್ಯವಿ - ವೇಕ ಮಾಡಿ ನೀ ಸಲಹಿದಿ 14 ಬಂದು ಬೇಡಿದ - ಮಹ - ವಂಧ್ಯಜನರಿಗೆ ಸು - ಕಂದರ ನೀನಿತ್ತು ಸಲಹುವೀ 15 ಭೂತಾದಿ ಬಾಧವ - ನೀತರಿದು ಸುಖಗಳ ವ್ರಾತವ ಸಲಿಸೀ ಪಾಲಿಸುವಿ 16 ಹಿಂದಿನ ಮಹಿಮ - ದಿಂದೇನು ಎನಗಯ್ಯ ಇಂದು ಮಹಾ ಮಹಿಮೆ - ತೋರಿಸೋ 17 ಯಾತಕೆ ಈ ತೆರ ಮಾಡಿದೀ 18 ಎಲ್ಲೆಲ್ಲಿ ನಾ ಪೋದ - ರಲ್ಲಲ್ಲೆ ನೀ ಬಂದು ಎಲ್ಲ ಕಾರ್ಯಗಳನ್ನು ಮಾಡಿದೀ 19 ಇತರರಿಗಸಾಧ್ಯ ಅತಿಶಯ ಚರ್ಯವ ಯತನಿಲ್ಲದಲೆ ನೀ ಮಾಡಿದಿ 20 ಪೇಳಲೆನ್ನೋಶವಲ್ಲ ಭಾಳ - ನಿನ್ನಯ ಚರ್ಯ ಕೀಳುಮಾನವ ನಾ ಬಲ್ಲೇನೆ 21 ಜ್ಞಾನಿಗಳರಸನೆ ಮೌನಿ ಶಿರೋಮಣಿ ಧ್ಯಾನವ ಸಂತತ ನೀಡಯ್ಯಾ 22 ಸಂತತ ಎನ ಮನೊ - ಅಂತರದಲಿ ನೀ ನಿಂತು ಪಾಲಿಸೊ ಎನ್ನ ಮಹರಾಯಾ 23 ಎಂತೆಂಥ ಭಯ - ಬರೆ - ನಿಂತು ತಳೆದ್ಯೊ ದಯ - ವಂತ ನಿನಗೆಣೆಗಾಣೆನಯ್ಯಾ 24 ನಿನ್ನಲ್ಲಿ ಹರಿ ದಯ - ಉನ್ನತ ಇರಲಿನ್ನು ಎನ್ನಲ್ಲಿ ನಿನ ದಯ ಇರಲಯ್ಯ 25 ದಾತಗುರು ಜಗನ್ನಾಥ ವಿಠಲ ನಿನ್ನ ಮಾತು ಲಾಲಿಸಿದಂತೆ ಪೊರೆ ಎನ್ನಾ 26
--------------
ಗುರುಜಗನ್ನಾಥದಾಸರು
ಗೋಪಗೋಪನೆಂಬಾ ಕೋಗಿಲೆ ನಮ್ಮಶ್ರೀಪತಿಯ ಕಂಡರೆ ಬರಹೇಳೆ ಕೋಗಿಲೆ ಪ . ಕೆಂಗಾವಳೆಯಾಲೆದಲಿ (?) ಪಾಂಡುರಂಗಮಂಗಳ ಮೂರುತಿಪ್ಪಶೃಂಗಾರವಾದ ಸುರತರುವಿನ ನೆರಳೊಳುರಂಗನಾಥನ ಕಂಡರೆ ಬರಹೇಳೆ ಕೋಗಿಲೆ 1 ಮಧುಮಾಸದಲಿ ಮಾಧವನಿರಲುಚದುರೆ ಗೋಪಿಯರಸ ಮೇಳದಲ್ಲಿಮುದದಿ ವನಂತರನಾಡುವ ಭರದಿಂದಪದುಮನಾಭನ ಕಂಡರೆ ನೀ ಬರಹೇಳೆ 2 ಅಟ್ಟಿ ಅರಸುವ ಶ್ರ್ರುತಿಗಳಿಂದ ಸುಖಬಿಟ್ಟೆವೆಂದರವ ಪರಬ್ರಹ್ಮಸೃಷ್ಟಿಯೊಳು ಉಡುಪಿನ ಹಯವದನ ಸ್ವಾಮಿಯದೃಷ್ಟಿಲಿ ಕಂಡರೆ ಬರಹೇಳೆ ಕೋಗಿಲೆ3
--------------
ವಾದಿರಾಜ
ಗೋಪಾಲದಾಸರಾಯ ಮಾಂಪಾಲಯ ಪ ಗೋಪಾಲದಾಸರಾಯಾ ಅಪಾರ ಮಹಿಮ ಮ- ತ್ಪಾಪಗಳೋಡಿಸಿ ಕಾಪಾಡೊ ಗುರುರಾಯ ಅ.ಪ ಸುಜನ ವಿಜಯದಾಸರಿಗೆ ನಿಜ ಶಿಷ್ಯರೆನಿಸಿದ 1 ಧನ್ವಂತ್ರಿ ಜಪದಿ ಜಗನ್ನಾಥದಾಸರ ಬನ್ನವ ಬಿಡಿಸಿದ ಘನ್ನ ಮಹಿಮಗುರು 2 ಏನು ಕರುಣವೋ ಶ್ರೀ ಮಾನವಿ ದಾಸರಿಗೆ ಸಾನುರಾಗದಿ ಆಯುರ್ದಾನವ ಮಾಡಿದ 3 ಪದುಮನಾಭನ ಪದಪದುಮ ಮಹಿಮೆಗಳ ವಿಧ ವಿಧ ಪದಸುಳಾದಿಗಳಿಂದ ತುತಿಸಿದ 4 ಶರಣು ಜನಕೆ ಸುರತರುವೆನಿಸಿ ಧರೆಯೊಳು ಮೆರೆವ ' ಕಾರ್ಪರ ನರಹರಿ’ ಯ ನೊಲಿಸಿದಂಥ5
--------------
ಕಾರ್ಪರ ನರಹರಿದಾಸರು
ಜಾಹ್ನವಿ ಜನಕ ಮೂಜಗತ್ಪತಿ ಸುರಕುಲ ಸನಕಾ ದೀಜನ ಮನೋಹರ ಮಾಣಿಕ್ಯ ಕನಕಾ ವೈಜಯಂತಿ ಹಾರ ಪಾವನ್ನ ಪದಕ ಪ ಕೇಶಿಭಂಜನ ವ್ಯೋಮಕೇಶ ವಂದಿತ ಪಾದ ಕ್ಲೇಶನಾಶನ ವಾತೇಶನ ಜನಕ ಕೇಶರಿರುಹ ಮುಂಜಿಕೇಶನೆ ಕುಂಕುಮ ಶೌರಿ 1 ವಾರುಣಿ ಪತಿನುತ ವಾರುಣನ ಭಯ ನಿ ವಾರಣಾ ವಾರಣಾಶಿ ಪುರದರಸೆ ವಾರಣ ನಗರಿಯ ವಾರನಹತಪಲ್ಲ ವಾರುಣಿ ಪಾಣಿಯೆ ನಾರಾಯಣನೆ ಜೋ ಜೋ 2 ಮಾದೇವಿ ರಮಣ ಭೂಮಿದೇವಿ ಉದ್ಧಾರ ಮಾಧುರ್ಯ ವಚನ ಉಮಾದೇವಿ ವಿನುತಾ ಮಾಧಾರ ಮಹಶೂರ ಮತ್ಕುಲನೆ ಪ್ರೇ ಮಾಧವ ರಾಯಾ 3 ಗೋವಳಿ ಪರಿಪಾಲ ಗೋವಳೇರಾ ಪ್ರಿಯಾ ಗೋವುಗಳ ಕಾಯಿದ ಗೋವಳರಾಯಾ ವಿಪ್ರ ಸಂರಕ್ಷ ಗೋವಿದಾಂಪತಿ ರಂಗ ಗೋವಿಂದ ನಂದ 4 ಮಧುಕೈಟಭಾಸುರ ಮದಗರ್ವ ಮರ್ದನ ನಿತ್ಯ ಮಧುರನ್ನ ಪಾನಾ ಮಧುರಾಪುರ ಪಾಲ ಮದಗಜ ಹರಣಾ ಶಾ ಮದವರ್ಣ ಶರೀರ ಮಧುಸೂದನನೆ 5 ಇಷ್ಟಭಕ್ತರ ಕುಲ ಇಷ್ಟದೈವವೆ ಸರ್ವ ಇಷ್ಟಾರ್ಥ ಕೊಡುವ ಬಲಿಷ್ಟನು ನಿನ್ನ ಇಷ್ಟ ಅಷ್ಟಯೆಂದು ತಿಳಿಯಲಿ ವಶವಲ್ಲ ವಿಷ್ಣು ಸರ್ವೋತ್ತಮ ವಿಶ್ವನಾಟಕನೆ6 ಅಕ್ರಮದಲಿ ಸ್ವರ್ಗ ಆಕ್ರಮಿಸಿ ಬಲಿ ವಿಕ್ರಮನಾಗಿ ಕಾಲಕ್ರಮಣಿ ಮಾಡೆ ಶಕ್ರಮರ್ಚಿಸೆ ಅನುಕ್ರಮನಾಗಿ ಪ ರಾಕ್ರಮದಲಿ ಬೆಳದೆ ತ್ರಿವಿಕ್ರಮನೆ 7 ವಾಮಲೋಚನೆಯರ ವಾಮನ ಕೆಡಿಸಿದೆ ವಾಮನವಾಶಿಷ್ಟವಾ ಮುನಿವಂದ್ಯ ವಾಮನದಲಿ ದಾನವಾಮನ್ಯಗಳರನ್ನು ಅ ವಮಾನ ಮಾಡಿದೆ ಸಿರಿವಾಮನನೆ 8 ಶ್ರೀಧರ ರಮಣನೆ ಶೃಂಗಾರ ವಾರಿಧಿ ಶ್ರೀಧನ ಸಂಪತ್ತಾಶ್ರಿತ ಜನರಿಗೆ ಶ್ರೀಧೇನು ನೀನಯ್ಯಾ ಶ್ರೀ ಕರುಣಾಕರ ಶ್ರೀದೇವಿ ಉರಭೂಷಾ ಶ್ರೀಧರನಂತಾ 9 ಋಷಿಕೇಶನ ತಾತ ಋಷಿಜನ ಸಂಪ್ರೀತ ಋಷಿಕುಲೋದ್ಭವ ಪುರುಷ ರಾಮ ಮಹಾ ಋಷಿನಾಮಧೇಯನೆ ಋಷಿಪತ್ನಿ ಪಾಲನೆ ಋಷಿಗಳ ಒಡೆಯನೆ ಹೃಷಿಕೇಶ ದೇವ 10 ಪದುಮಜಾಂಡದಲ್ಲಿ ಪದುಮೆ ಮಾತನು ಕೇಳಿ ಪದುಮನಾಭಿಯಲ್ಲಿ ಪದುಮಜನ ಪೆತ್ತ ಪದುಮಾಸ್ಯ ಪದುಮಾಕ್ಷ ಪದುಮಕರನೆ ಪಾದ ಪದುಮ ಮಿಗಲು ಕಾಂತಿ ಪದುಮನಾಭನೆ11 ಧಾಮನಿಧಿಕುಲನು ಧಾಮನೆ ನಿರುತ ತ್ರಿ ಧಾಮನಿವಾಸ ಸುಧಾಮನ ಮಿತ್ರ ಧಾಮ ಪುಣ್ಯಧಾಮ ಭಕ್ತ ಹೃದ್ವನಜ ಧಾಮ ಮಧುಕರನೆ ದಾಮೋದರ ಧರ್ಮಾ 12 ಶಂಖ ಸುರಾಹರಾ ನಿಃಶಂಕ ಚರಿತ ಶಂಖಪಾಣಿ ಶಶಾಂಕ ಸುವದನ ಸಂಖ್ಯೆಯಿಲ್ಲದೆ ತಾಯಿ ಸಂಕಲೆ ಹರಿಗಡಿದೆ ಸಂಕರುಷಣನುವುಜ ಸಂಕರುಷಣನೆ 13 ಪ್ರಧಾನ ಮೂರುತಿ ಪ್ರದ್ವೀಪ ವರ್ಣ ಸುಪ್ರದಾಯಕನೆ ಪ್ರದೇಶ ಪರಿಮಾಣ ವರಪ್ರದ ಸಿದ್ಧನೆ ಪ್ರದ್ಯುಕ್ತ ಅವ್ಯಕ್ತ ಪ್ರದ್ಯುಮ್ನ ವಿಶ್ವ14 ವಾಸುವಾನುಜ ಶ್ರೀನಿವಾಸ ಪುಂಡ್ರೀಕ ವಾಸುದೇವನ ಶಮನಪುರದಲ್ಲಿ ವಾಸಮಾಡಿಸಿದಯ್ಯಾ ವಾಸವಾರ್ಚಿತ ಶ್ರೀ ವಾಸುದೇವ 15 ಅನುಗಾಲವು ನಿನ್ನ ಅನುಸರಿಸಿದೆ ನಾನು ಅನುಕೂಲವಾಗಿ ಎನ್ನನು ಸಾಕುವುದು ಅನುಮಾನವ್ಯಾತಕೆ ಅನಿಮಿತ್ತ ಬಂಧು ಅನಿರುದ್ಧ ಶ್ರೀಶಾ 16 ಪುರುಷ ಪುರುಷ ಶ್ರೇಷ್ಠ ಪುರುಷಾರ್ಥ ಕಾರಣ ಪುರುಷೇಶ್ವರ ತತ್ಪುರುಷಾದಿ ಪುರುಷ ಪುರುಷ ಬೀಜ ವೇದ ಪುರುಷ ಪರಮ ಪುರುಷ ಪುರುಷರು ಮೋಹಿಸುವ ಪುರುಷೋತ್ತಮನೆ 17 ಅಕ್ಷಯ ಬಲ ಸಹಸ್ರಾಕ್ಷ ರಕ್ಷಕ ಅಕ್ಷರಪರ ಬ್ರಹ್ಮ ಗೀರ್ವಾಣಧ್ಯಕ್ಷ ಅಕ್ಷಯ ಪಾತ್ರಿಯ ಶಾಖಾದಳವನ್ನು ಅಕ್ಷಯ ಮಾಡಿದಧೋಕ್ಷಜ ಚಕ್ರಿ 18 ನರಸಖ ನರಹರಿ ನಾರಾಯಣ ವಾ ನರ ದಳನಾಯಕ ನಾರದ ವಿನುತ ನರಕ ಉದ್ಧಾರಕ ನರಕಾಂತಕ ಕಿ ನ್ನರ ಸುರನರೋರಗ ವೃಂದ ನರಸಿಂಹ 19 ಸಚ್ಚಿದಾನಂದಾತ್ಮ ಸಚಲ ವಿಗ್ರಹನೆ ಸಚ್ಚರಾಚರದೊಳೂ ಗುಣಪರಿಪೂರ್ಣ ಸಚ್ಛಾಸ್ತ್ರದಲಿ ನಿನ್ನ ಸಾಮರ್ಥಿ ಪರಿಪೂರ್ತಿ ಸಚ್ಚೂತ ಚುತಿ ದೂರ ಚಿನ್ಮಯ ರೂಪಾ 20 ಜನನ ಮರಣ ನಾಶ ಜನನಾದಿಕರ್ತಾಂ ಜನಸುತಗತಿ ಪ್ರೇಮಾಂಜನ ಗಿರಿಧಾಮ ಜನಕವರದ ಸಜ್ಜನರಘದಹನ ದು ರ್ಜನರ ಕುಲರಾತಿ ಜನಾರ್ದನನೆ 21 ವೀಂದ್ರವಾಹನ ಮಹೇಂದ್ರಧಾರನೆ ಗ ಜೇಂದ್ರನ್ನ ಬಿಡಿಸಿ ನಕ್ಷೇಂದ್ರನ ಸೀಳಿ ನಾ ಗೇಂದ್ರ ಶಯನ ಗುಣಸಾಂದ್ರ ಗೋಕುಲ ಚಂದ್ರ ಇಂದ್ರಮಣಿ ನಿಭ ರಾಮಚಂದ್ರ ಉಪೇಂದ್ರಾ 22 ಹರಿ ಎನುತಾ ಹರಿ ಹರಿದು ಓಡಿ ಬರೆ ಹರಿದು ಪೋಗಿ ಪರಿಹರಿಸಿದ ಖಳನ ಹರಿ ಹರಿಯು ನಲಿವನೆ ಹರಿರೂಪ ಪರಿ ಹರಿನಾಮವೆ ಗತಿ ಹರಿ ಸರ್ವೋತ್ತಮಾ23 ಕೃಷ್ಣದ್ವಯಪಾಯನ ಉತ್ಕøಷ್ಟ ಮುನೇಶ ಕೃಷ್ಟಿಗೆ ಬಂದ ಕಷ್ಟ ಓಡಿಸಿದೆ ಕೃಷ್ಣವತ್ರ್ಮನೆ ಸಂತುಷ್ಟೀಲಿ ಸುಖಬಡುವ ಕೃಷ್ಣಾವತಾರ ಕೃಷ್ಣ ಕಮಲೇಶ 24 ನಿನ್ನ ಮಹಿಮೆಯನ್ನು ಬಣ್ಣಿಸಲಳವಿಲ್ಲ ನಿನ್ನೊಳಗೆ ನೀನು ಬೀಯ ಬೀಜವನು ಎನ್ನ ಪಾಲಿಸುವುದು ವಿಜಯವಿಠ್ಠಲ ಪ್ರಸನ್ನ ಭಕ್ತರ ವರದ ಬಾಲ ಗೋಪಾಲ ಜೋ ಜೋ 25
--------------
ವಿಜಯದಾಸ
ತತ್ವನಿರೂಪಣೆ ಆಟವಾಡುವ ಕೂಸು ನಾನು | ಕೃಷ್ಣ ಕಾಟಬಡಿಸುವೆ ನಿನ್ನ ಸಾಧನವ ನೀಡೊ ಪ. ಗುರುಗಳು ತಂದು ನಿನಗೊಪ್ಪಿಸಿದರೆಲೊ ದೇವ ಸರಿಯ ಸಖನೆಂದು ಅನುಗಾಲವೂ ಸಿರಿಯರಸ ಕೇಳಿನ್ನು ಹಿರಿಯನೆ ನೀನಹುದೊ ಕಿರಿಯತನದಿಂದ ನಾ ಆಟವಾಡುವೆನೊ 1 ಹೃದಯವೆಂಬೋ ಪುಟ್ಟ ಮನೆಯ ಕಟ್ಟಿ ಅಲ್ಲಿ ಮುದದಿಂದ ಅಷ್ಟದಳ ಪದುಮ ರಚಿಸಿ ಒದಗಿ ಬರುತಿಹ ದುಷ್ಟ ಅರಿಗಳನೆ ನುಗ್ಗೊತ್ತಿ ಪದುಮನಾಭನೆ ನಿನ್ನ ಜೊತೆಯವರೊಡನೆ2 ಅಂಬರ ಮಧ್ಯದಲಿ ಬಿಂಬವೆನ್ನುವ ದಿವ್ಯ ಬೊಂಬೆಯನೆ ಇಟ್ಟು ಸಂಭ್ರಮದಿ ಶೃಂಗರಿಸಿ ಹಾಡಿ ಪಾಡಿ ಕುಣಿದು ಆಂಬ್ರಣಿನುತ ನಿನ್ನ ನೋಡಿ ದಣಿಯುವೆನೊ 3 ಪುಂಡರೀಕಾಕ್ಷ ನಿನ್ನ ಕೊಂಡಾÀಡುವೊ ಬಹಳ ತಿಂಡಿಯನೆ ನೀಡೆನಗೆ ಅನುಗಾಲವೂ ಭಂಡು ಮಾಡುವರೊ ಬರಿಕೈಲಿದ್ದರೆ ಸಖರು ಕಂಡು ಕಂಡೂ ನೀನು ಸಮ್ಮನಿರಬೇಡೊ 4 ಎಷ್ಟು ಜನ ಸ್ನೇಹಿತರೊ ಈ ಮನೆಯೊಳೆಲೆ ದೇವ ಪುಟ್ಟನಾಗಿರುವೆ ನಾನೆಲ್ಲರಿಗೆ ಇನ್ನು ಕೊಟ್ಟರೆ ಸಲಕರಣೆ ಆಟವಾಡುವೆ ಅಳದೆ ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ತಿರುಪತಿವಿಠಲರ ಹಾಡು ದಾಸರಾಯರ ನೋಡಿದ್ಯಾ | ಶ್ರೀಶ ಪ್ರಾಣೇಶ |ದಾಸರಾಯರ ನೋಡಿದ್ಯಾ ||ದಾಸರಾಯರ ಪಾದಾಶ್ರಯವ ಮಾಡಲು |ದೋಷಗಳೋಡಿಸಿ ಶ್ರೀಶನೊಲಿಸಿ ಕೊಡುವ ಪ ಸ್ನಾನದಿ ಮಹಮಂತ್ರವ | ನಿತ್ಯದಿ ಮಾಡಿ |ಜ್ಞಾನಪೂರ್ವಕ ಜಪವು ||ದ್ಯಾನದಿ ಬಿಂಬನ ಹವಣಿ ಮನದಿಂದ |ಮೌನದಿ ಪೂಜಿಸ್ವಾನಂದದೊಳಿರುವಂಥ 1 ಸತತ ಶ್ರೀ ಹರಿಯ ನಾಮ | ಸ್ಮರಣೆಯೊಳು |ರತರಾಗಿಕೊಂಡು ಪ್ರೇಮ ||ಗತಿಗೆ ನೀನೆ ಜಗತ್ಪತಿಯೆಂದು ನಿಶ್ಚಯ |ಮತಿವುಳ್ಳ ಮಹಿಮನ ತುತಿಸುವ ಗುರುಗಳ 2 ಮೊದಲರ ಪದ್ಧತಿಯ | ತಿಳಿದು ಮಾಡೆ |ಪದುಮನಾಭನ ಸೇವೆಯು ||ಪದ ಸುಳಾದಿಗಳರ್ಥ | ಮುದದಿ ಕೇಳುತ ಜಗ |ದುದರ ತಿರುಪತಿ ವಿಠಲನ್ನೆನದು ನಲಿವ ಮುದ್ದು 3
--------------
ಶ್ರೀಶಪ್ರಾಣೇಶವಿಠಲರು
ತಿಳಿವರು ಮನುಜರು ತಿಳಿದೊಮ್ಮೆ ತಿಳಿಯರು ನಳಿನಾಕ್ಷ ನಾಶರಹಿತನಲ್ಲದಿಲ್ಲವೆಂದು ಪ ಅರ್ಕಜಂಬುಜ ಬಲ್ಲ .................. ಮಾರ್ಕಂಡೆಯ ಮುನಿ ಬಲ್ಲ ಮಹಿ ಬಲ್ಲಳು ಅರ್ಕ ತನುಜ ಬಲ್ಲ ಅಂಬರೀಷ ಬಲ್ಲ ದೇ ವರ್ಕಳವೊಡಿಯ ಮಾಧವನಲ್ಲದಿಲ್ಲವೆಂದು 1 ವಾಯುನಂದನ ಬಲ್ಲವಾ............. ಯತಿ ಬಲ್ಲ ಕರಿ ಬಲ್ಲನೊ ರಾಯ ಧರ್ಮಜ ಬಲ್ಲ ರಾಜ ರಾಜನು ಬಲ್ಲ ಮಾಯಾರೂಪತಾಳಿ ಹರಿಯಲ್ಲದಿಲ್ಲವೆಂದು2 ಗರುಡದೇವನು ಬಲ್ಲ ಗಂಗಾತನಯ ಬಲ್ಲ ಉರಗಾಧಿಪತಿ ಬಲ್ಲ ಉಮೆ ಬಲ್ಲಳು ................ಶರಣರಣ್ಣಪ್ಪ ಪರಮಾತ್ಮ -ಇಂ ದಿರಾಪತಿಯಲ್ಲದಿಲ್ಲವೆಂದು3 ಪಾರಾಶರನು ಬಲ್ಲ ಪ್ರಹ್ಲಾದ ಭಕ್ತ ಬಲ್ಲ ನಾರದಮುನಿ ಬಲ್ಲ ನರಬಲ್ಲನು ವಾರಿಜಸಖ ಬಲ್ಲ ವಶಿಷ್ಠ ತಪಸಿ ಬಲ್ಲ ಧಾರುಣಿಕರ್ತೃ ಶ್ರೀಧರನಲ್ಲದಿಲ್ಲವೆಂದು 4 ಬಲಿಚಕ್ರವರ್ತಿ ಬಲ್ಲ ಭೃಗುಋಷೇಶ್ವರ ಬಲ್ಲ ಕಳಸಸಂಭವ ಬಲ್ಲ.................. ಬಲ್ಲನು ಗಿಳಿಮುಖದವ ಬಲ್ಲ ಗೌತಮ ಮುನಿ ಬಲ್ಲ ಇಳಿಗೆ ಆಧಾರ ಶ್ರೀಕೃಷ್ಣನಲ್ಲದಿಲ್ಲರೆಂದು 5 ಉದಧಿರಾಯನು ಬಲ್ಲ ಉಧ್ಧವ ಯದು ಬಲ್ಲ ವಿಧುಶೇಖರ ಬಲ್ಲ ವಿದುರ ಬಲ್ಲ ಪದುಮನಾಭನೆ ಪರಗತಿಯಲ್ಲದಿಲ್ಲವೆಂದು 6 ಜನಕರಾಜನು ಬಲ್ಲ ಜಾಹ್ನವಿನದಿ ಬಲ್ಲಳು ದನುಜೋತ್ತಮ ಬಲ್ಲ ವಾಲ್ಖ್ಯ ಬಲ್ಲ ಅನುಸಾಲ್ವಪತಿ ಬಲ್ಲ ಅಜಮಿಳನು ಬಲ್ಲ ಜನಸ್ಥಿತಿಲಯ ಜನಾದರ್Àನ ಅಲ್ಲದಿಲ್ಲವೆಂದು7 ಜಮದಗ್ನಿ ಬಲ್ಲ ಜಾತವೇದಸ ಬಲ್ಲ ಸಾಮಾವರ್ತಿ ಬಲ್ಲ ಶಶಿ ಬಲ್ಲನು ಆ ಮಹಾಕಪಿ ಬಲ್ಲ ಅಕ್ರೂರನು ಬಲ್ಲ ರೋಮ ರೋಮ ಬ್ರಹ್ಮಾಂಡ ರಾಮನಲ್ಲದಿಲ್ಲವೆಂದು 8 ಪುಂಡರೀಕ ಬಲ್ಲ ದಾ................... ವಂದಾರವ ಬಲ್ಲ ಸಿರಿ ಬಲ್ಲಳು .............. ಆಶಾ ಶ್ರೀಶ ವಿಜಯವಿಠ್ಠಲೇಶನಲ್ಲದಿಲ್ಲವೆಂದು
--------------
ವಿಜಯದಾಸ
ದ್ವಾದಶನಾಮ ನಿರ್ವಚನ ಶ್ರೀಕೃಷ್ಣ ನಿನ್ನ ಚರಣಾರವಿಂದಕ್ಕೆರಗಿ ಭಕುತಿಯಿಂ ನಿನ್ನ ಪನ್ನೆರಡು ರೂಪಗಳ ನಾಮ ನಿರ್ವಚನದಿಂ ಕೂಡಿ ನುತಿಸುವೆ ನಾನು ಸರ್ವಸಿದ್ಧಿಯನ್ನಿತ್ತು ಕಾಪಾಡು ಹರಿಯೆ 18 ಸೃಷ್ಟಿಲಯಕಾರಿಗಳು ಬೊಮ್ಮರುದ್ರರು ಇವರೆ ಕೇಶವೆಂಬಕ್ಷರದಿ ಮೆರೆಯುತ್ತಲಿಹರು ವರ್ತನವು ಯಾರಿಂದಲಹುದವನೆ ಪರದೇವ ಕೇಶವಾತ್ಮಕನವನು ಶ್ರೀಕೃಷ್ಣ ದೇವ 19 ನಾರವೆಂದರೆ ದೋಷ ಲೇಶವಿಲ್ಲದ ಗುಣವು ನಾರವೆಂದರೆ ನೀರು ಜೀವನಾಧಾರ ನಾರವಯನವು ಯಾರಿಗವನೆ ನಾರಾಯಣನು ರಜತಪೀಠದ ಪುರದ ಪರದೈವವವನು 20 ಮಾಧವನು ಮಾಲಕುಮಿಗೊಡೆಯನವ ಪರಮಾತ್ಮ ಮಾಯೆಯನು ಎದೆಯಲ್ಲಿ ತಾಳ್ದ ಸಿರಿವರನು ಮಾಯೆಯಿಂದಲಿ ಮಾನವಗೆ ಮುಸುಕನು ಹಾಕಿ ತನ್ನ ರೂಪವನಾರು ನೋಡದಂತಿಹನು 21 ಹಿರಿ ಬೆಟ್ಟವನು ತಾನು ಕಿರಿ ಬೆಟ್ಟಿನಲಿ ಹೊತ್ತು ಗೋವುಗಳ ರಕ್ಷಿಸಿದ ಗೋಪಾಲ ನೀನು ವೇದರಕ್ಷಕನಾಗಿ ಗೋವಿಂದನೆನಿಸಿರುವೆ ಶ್ರೀಕೃಷ್ಣ ನಿನ್ನ ಮಹಿಮೆಯನೇನ ಪೇಳ್ವೆ 22 ಚೇಷ್ಟಕನು ಬಲರೂಪನಾಗಿರುವ ಕಾರಣದಿ ವಿಶ್ವದಲ್ಲೆಲ್ಲು ವ್ಯಾಪಿಸಿರುವುದರಿಂ ವಿಷ್ಣುನಾಮದ ನೀನು ವೈಷ್ಣವರ ಕುಲದೊಡೆಯ ಮಧ್ವಹೃನ್ಮಂದಿರದ ನೆಲೆಯಲ್ಲಿ ಇರುವೆ 23 ಮಧುವೆಂಬ ದೈತ್ಯನನು ಸೃಜಿಸಿಯವನನು ಕೊಂದು ಮಧುಸೂದನನು ಎಂಬ ಬಿರುದು ನೀ ಪೊತ್ತೆ ದುರ್ಜನರ ಸಂಹಾರ ಸಜ್ಜನರ ಉದ್ಧಾರ ಎಂಬೆರಡು ಕಾರ್ಯಗಳಿಗಾಗಿಯವತಾರ 24 ತ್ರೈವಿಕ್ರಮಾವತಾರವ ತಾಳ್ದು ದೇವ ಕಾಲ ತೊಳೆದು ಮೂರು ಲೋಕದ ಭಕುತರಿಗೆ ದರ್ಶನವ ಕೊಟ್ಟು ಭಕ್ತರಕ್ಷಕನಾಗಿ ಮೆರೆದೆ ಸಿರಿವರನೆ25 ವಾಮನನು ನೀನಾಗಿ ವಾಮಪಂಥದಿ ಹೋಗಿ ಬಲಿ ಚಕ್ರವರ್ತಿಯಲಿ ಮೂಹೆಜ್ಜೆ ಬೇಡೆ ಭಕುತಿಯಿಂದವ ಕೊಡಲು ಮುಕುತಿಯನು ಕೊಡಲೆಂದು ಬಲಿಯ ಮನೆಯೂಳಿಗವ ಗೈದೆ ಪರಮಾತ್ಮ26 ಸಿರಿಯನೆದೆಯಲಿ ಪೊತ್ತು ಶ್ರೀಧರನು ನೀನಾಗಿ ಸರ್ವ ಭೂಷಣಗಳಿಂ ಶೋಭಿಸುತಲಿರುವೆ ಅನ್ನದಾತನು ನೀನು ಅನ್ನಭೋಕ್ತøವು ನೀನು ಭುಕ್ತಿ ಮುಕ್ತಿ ಪ್ರದನು ನೀನಿರುವೆ ದೇವ 27 ಇಂದ್ರಿಯಗಳು ಹೃಷೀಕಾಭಿಧಾನದಲಿಹವು ನೀನವುಗಳಿಗೆ ಎಲ್ಲ ಒಡೆಯನಾಗಿರುವೆ ಹೃಷೀಕೇಶ ನಾಮವದು ನಿನಗೊಪ್ಪುವದು ಹರಿಯೆ ನನ್ನ ಮನ ನಿನ್ನಡಿಯೊಳಿರುವಂತೆ ಮಾಡು28 ಸಾಗರವನುದರದಲ್ಲಿರಿಸಿ ನೀನದರಿಂದ ನಾಭಿಯಲಿ ಪದುಮವನು ಸೃಷ್ಟಿಸಿದೆ ದೇವಾ ಪದುಮನಾಭನು ನೀನು ಬೊಮ್ಮಪಿತನಾಗಿರುವೆ ಮಾಯಾ ರೂಪವನೇನಪೇಳ್ವೆ29 ಮೊಸರ ಕುಡಿಕೆಯನೊಡೆದು ತಾಯಿಯಿಂ ಬಂಧಿತನು ದಾಮೋದರನು ಎನಿಸಿ ಉಜಡೆಯನ್ನೊಯ್ದು ಮರಗಳೆಡೆಯಲಿ ಪೊಕ್ಕು ಬೀಳಿಸುತಲವುಗಳನು ಭಕುತರಾ ಶಾಪಮೋಚನೆಯ ನೀ ಮಾಡ್ದೆ30 ಕೇಶವನೆ ಮೊದಲಾದ ಪನ್ನೆರಡು ನಾಮಗಳ ಅರ್ಥವರಿತನವರತ ಪೇಳಲವಗೊಲಿದು ಸಂಸಾರ ಬಂಧನವ ತೊಲಗಿಸಿಯೆ ಪರಮಾತ್ಮ ತನ್ನ ಬಳಿಗೊಯ್ಯುವನು ನಿಜ ಪೇಳ್ವೆ ನಾನು31 ಶ್ವೇತ ರಕ್ತವು ಪೀತ ಕೃಷ್ಣ ವರ್ಣಗಳೆಂಬ ನಾಲ್ಕು ಬಣ್ಣದ ದೇವನೊಬ್ಬನೇ ಇಹನು ಕಲಿಯುಗದ ಕಾಲದಲಿ ಕೃಷ್ಣನೊಬ್ಬನ ನೆನೆದು ನಾಮಜಪ ಮಾಡಿದರೆ ಮುಕ್ತಿಯನು ಕೊಡುವ 32
--------------
ನಿಡಂಬೂರು ರಾಮದಾಸ
ಧೇನಿಸೂ ಶ್ರೀಹರಿಯ ಮಹಿಮೆ ನೀ ಧೇನಿಸೊ ಪ ಧೇನಿಸು ಶ್ರೀಹರಿಯ ಲೀಲಾ ಸೃಷ್ಟಿ ಮಾನಸದಲಿ ನೆನೆಯೋ ಪರಿಯಾ ||ಆಹಾ|| ತಾನೆ ತನ್ನಯ ಲೀಲಾಜಾಲತನದಿ ತನ್ನ ಆನಂದದೊಳಿಪ್ಪ ಶ್ರೀ ಮುಕುಂದ ನನ್ನ ಅ.ಪ ಮೂಲ ನಾರಾಯಣ ದೇವ ತಾನು ಆಲದೆಲೆಯೊಳು ಲೀಲಾ ತೋರಿ ಬಾಲತನದಿ ತಾ ನಲಿವಾ ಅನೇಕ ಕಾಲ ಪರ್ಯಂತರದಿ ಸರ್ವ ||ಆಹಾ|| ಎಲ್ಲ ಜಗವ ತನ್ನ ಒಡಲೊಳಡಗಿಸಿ ಲೋಲನಾಗಿ ಬಾಲಕ್ರೀಡೆಯಾಡುವಪರಿಯಾ 1 ಇಂತು ಶಯನಗೈದ ಹರಿಯ ಅ- ನಂತ ವೇದಗಳಿಂದ ತ್ವರಿಯಾ ದುರ್ಗ ಸಂತಸದಿಂದ ಸಂಸ್ತುತಿಯ ಮಾಡೆ ಕಂತುಪಿತÀನು ತಾನೆಚ್ಚರಿಯ ||ಆಹಾ|| ಅಂತೆ ತÉೂೀರ್ದ ವಾಸುದೇವಾದಿ ಚತುರಾ- ಸಿರಿ ರೂಪಗಳ ಸಹಿತ 2 ಸಕಲ ರೂಪಗಳ ತನ್ನೊಳೈಕ್ಯಾ ಮಾಡಿ ಸಕಲ ಲಕುಮಿ ರೂಪಗಳಲಿ ಐಕ್ಯಾ ಇಟ್ಟು ಸಕಲ ಮರುತರ್ಗೆ ತನುಮುಖ್ಯಾ ಇತ್ತು ಸಕಲ ಕ್ರೀಡೆಯೊಳು ಸೌಖ್ಯಾ ||ಆಹಾ|| ಲಕುಮಿಯ ಸ್ತುತಿಗೆ ಒಲಿದು ತಾನೇತ- ನ್ನ ಕಡೆಗಣ್ಣಿಂದ ಪಂಚಜೀವರ ನೋಡಿದಾ 3 ಶುದ್ಧಸೃಷ್ಟಿಯೆಂಬುದೊಂದು ಪರಾ- ಧೀನ ವಿಶೇಷವು ಎಂದು ಮತ್ತೆ ಒಂದು ಮಿಶ್ರ ಸೃಷ್ಟಿಯೆಂದು-ಒಂದು ಕೇವಲ ಸೃಷ್ಟಿಯೆಂದೂ ||ಆಹಾ|| ತಮಾಂಧಕಾರವ ಪ್ರಾಶಿಸಿದ ವಿವರಾ 4 ತನ್ನೊಳೈಕ್ಯವಾಗಿದ್ದ ಮಹ ತಾನೆ ಪ್ರಕಟನಾಗಿ ನಿಂದ ಆಗ ಉನ್ನಂತ ಚತುರ ನಾಮದಿಂದ ||ಆಹಾ|| ಜನುಮ ಸ್ಥಿತಿ ಮೃತಿ ಮೋಕ್ಷದನಾಗಿರ್ಪ ಅನಿರುದ್ಧಾದಿ ಚತುರಮೂರ್ತಿಗಳ ವ್ಯಾಪಾರ5 ಪುರುಷನಾಮಕ ಪರಮಾತ್ಮ ತಾ ತರವರಿತು ಘನಮಾಡ್ದ ಮಹಿಮಾ ಸೃಷ್ಟಿ ತರತರ ಮಾಡ್ದ ಮಾಹಾತ್ಮ ||ಆಹಾ|| ಪ್ರಾಕೃತ ವೈಕೃತ ದೇವತೆ ಸುಮಾನ ಈ ಮೂರುವಿಧ ಸೃಷ್ಟಿಯಾನೆಸಗಿದ ಪರಿಯ ನೀ 6 ಮಹದಹಂಕಾರ ತತ್ವ ಪಂಚ ಮಹಭೂತಗಳು ಮನಸ್ತತ್ವ ಇನ್ನು ಮಹದಶೇಂದ್ರಯಗಳ ತತ್ವ ಮತ್ತೆ ಮಹತಾಮಿಶ್ರಾಂಧ ತಾಮಸ ತತ್ವ ||ಆಹಾ|| ಇಹುದು ಈ ಪರಿಯಲ್ಲಿ ಪ್ರಾಕೃತ ಸೃಷ್ಟಿಯು ಮುಹುರ್ಮುಹು ಇದನೆ ಆಲಿಸಿ ನಿನ್ನೊಳು 7 ವೈಕೃತದೋಳು ಸಕಲ ವೃಕ್ಷಾ ತಿರ್ಯಕ್ ಸಕಲ ಪ್ರಾಣಿಗಳ್ ಮನುಜ ಕಕ್ಷಾ ಎಲ್ಲ ವಿಕೃತ ಸೃಷ್ಟಿಯ ಮಾಡ್ದ ಅಧ್ಯಕ್ಷಾ ಇನ್ನು ಸುರಸಮಾನ ಸೃಷ್ಟಿಯ ಅಪೇಕ್ಷಾ ||ಆಹಾ|| ಸಕಲ ಸುರಾಸುರಪ್ಸರ ಗಂಧರ್ವರು ಪಿತೃಗಳು ಯಕ್ಷರಾಕ್ಷಸರ ಪರಿಯವರಾ 8 ಪುನ್ನಾಮ ವಿರಂಚಿ ಬ್ರಹ್ಮಾನು ಅಂದು ಘನ್ನವಾಸುದೇವ ತಾನು ಸೃಷ್ಟಿ ಯನ್ನ ಪ್ರಕಟಮಾಡಿದನು ಮುಂದೆ ಅನಿಲದೇವನು ಸಂಕರುಷಣನ ||ಆಹಾ|| ಅನಿಲನೆ ಸೂತ್ರನಾಮಕವಾಯುವಾಗಿಹ ಭಾವೀ ಬ್ರಹ್ಮನೀತನೆ ನಿತ್ಯಗುರುವೆಂದು 9 ಪ್ರದ್ಯುಮ್ನನಿಂದ ಸರಸ್ವತಿ ಇನ್ನು ಶ್ರಧ್ದಾನಾಮಕಳು ಭಾರತಿ ಸೃಷ್ಟಿ- ಯಾದ ವಿವರ ತಿಳಿಯೊ ಪೂರ್ತೀ ಇದೇ ಪ್ರದ್ಯುಮ್ನನ ಸೃಷ್ಟಿಯ ಕೀರ್ತಿ ||ಆಹಾ|| ಶ್ರದ್ಧಾದೇವಿಯೊಳು ಸೂತ್ರನ ವೀರ್ಯದಿಂ- ದುದ್ಭವಿಸಿದ ಜೀವ ಕಾಲನಾಮಕನು 10 ಈರ ಬ್ರಹ್ಮರಸೃಷ್ಟಿ ಚರಿತ್ರೆ ಚಿತ್ರ ಗಾತ್ರ ತರವೆಲ್ಲ ವಿಚಿತ್ರ ||ಆಹಾ|| ವಿರಂಚಿ ಬ್ರಹ್ಮ ಸರಸ್ವತಿಯಿಂದ ವೈ- ಕಾರಿಕ ರುದ್ರ ಶೇಷಗರುಡರ ನೀ 11 ಸೂತ್ರ ಶ್ರದ್ಧಾ ದೇವೇರಿಂದ ಪವಿ ತ್ರತೈಜಸ ರುದ್ರ ಬಂದಾ ಪ- ಪುತ್ರರಾಗಿಹರತಿ ಚೆಂದಾ ||ಆಹಾ|| ಪುತ್ರನಾದ ತಾಮಸ ರುದ್ರ ಶೇಷಗೆ12 ಪ್ರದ್ಯುಮ್ನ ಸೂಕ್ಷಶರೀರ ಕೊಟ್ಟು ಉದ್ಧಾರ ಮಾಡಿದ ಜೀವರ ಅನಿ ರುದ್ಧನ ಕೈಲಿ ಕೂಡಲವರಾ ಅನಿ ರುಧ್ದನು ಮಾಡ್ದ ವಿಸ್ತಾರಾ ||ಆಹಾ|| ತದಪೇಕ್ಷ ಮೂಲಪ್ರಕೃತಿಯಿಂದ ಗುಣತ್ರಿ- ವಿಧ ಕೊಂಡು ಮಹತ್ತತ್ವ ನಿರ್ಮಿಸಿದಾ 13 ಮಹತ್ತತ್ವದಿಂದಹಂಕಾರ ತತÀ್ತ ್ವ ಮಹದಹಂಕಾರವು ಮೂರುತರ ಇದ- ರೊಳು ಬ್ರಹ್ಮವೈಕಾರಿಕ ಶರೀರವಾಗಿ ಪರಿ ಈ ರೂಪ ವಿವರಾ ||ಆಹಾ|| ಅಹುದು ತೈಜಸದಿಂದ ಶೇಷನ ದೇಹವು ತಾಮಸದಿಂದಲಿ ರುದ್ರ ತಾನಾದನು 14 ಎರಡನೆಯ ಸಾರಿ ಪ್ರದ್ಯುಮ್ನ ಅರ್ಧ ನಾರೀ ರೂಪನಾಗಿ ಇನ್ನು ಎಡದಿ ಸ್ರೀರೂಪ ಜೀವರುಗಳನ್ನು ಬಲದಿ ಪುರುಷ ಜೀವರೆಲ್ಲರನ್ನು ||ಆಹಾ|| ಧರಿಸಿ ಅವರ ದೇಹಗಳನಿತ್ತು ಅ ನಿರುದ್ಧನ ಕೈಯೊಳಿತ್ತ ಪರಿಯನ್ನು 15 ಅದರಂತೆ ಅನಿರುಧ್ದದೇವ ತಾ ನದಕಿಂತ ಸ್ಥೂಲದೇಹವ ಮೂಲ ಪ್ರಕೃತಿಯಿಂದ ಗುಣವಾ ಕೊಂಡು ಅದುಭುತ ಮಹತ್ತತ್ವತೋರ್ವ ||ಆಹಾ|| ಅದುಭುತ ಮಹತ್ತತ್ವದಿಂದಹಂಕಾರ ಉದಿಸಿದ ಪರಿಯನು ಮುದದಿಂದಲಿ ಅರಿತು 16 ಪರಮ ಕರುಣೆಯಲೀ ರುದ್ರನು ಅರ್ಧ ನಾರೀರೂಪ ತಾಳಿ ಇನ್ನೂ ಎಡದಿ ಸುರರಸ್ತ್ರೀಗಳನ್ನು ಬಲದೀ ಸುರಪುರಷರನ್ನೂ ||ಆಹಾ|| ಭರದಿ ಪುಟ್ಟಿಸಿ ಪ್ರದ್ಯುಮ್ನನ ಕೈಲಿತ್ತ ಪರಿಪರಿ ಸೃಷ್ಟಿಯ ಕ್ರಮವರಿತು ನೀನೀಗ 17 ಅನಿರುಧ್ದ ದೇವನು ಜೀವರ ಸ್ಥೂಲ ತನುವ ಕೊಟ್ಟು ಪಾಲಿಪ ತದಭಿ- ಮಾನಿ ಶ್ರೀ ಭೂ ದುರ್ಗಾ ಮಾಡಿ ತಾನೆಲ್ಲರ ಸತತ ಪೊರೆವಾ ||ಆಹಾ|| ಮಹತ್ತತ್ತಾ ್ವಭಿಮಾನಿಗಳೆನಿಸಿದ ದೇವನ18 ಅಹಂಕಾರ ತತ್ತಾ ್ವಭಿಮಾನಿ ಅದಕೆ ಅಹಿಗರುಡರು ಅಭಿಮಾನಿ ಇನ್ನು ಅನಿರುದ್ಧಾದಿ ರೂಪತ್ರಯವು ಇದಕೆ ಇನ್ನು ನಿಯಾಮಕನು ಎನ್ನು ||ಆಹಾ|| ಮಹತ್ತತ್ವಾ ನಿಯಾಮಕ ವಾಸುದೇವನಿಂದ- ನವರತ ಈ ಸೂಕ್ಷ್ಮಪ್ರಮೇಯ ಗ್ರಹಿಸಿ ನೀನು 19 ಮನಸ್ತತ್ವಾಭಿಮಾನಿ ಸುರರಾ ಸೃಷ್ಟಿ ಯನ್ನೆ ವೈಕಾರಿಕದಿಂದಲವರಾ ಮಾಡಿ ಘನ್ನ ತೈಜಸದಿಂದಲಿಂದ್ರಿಯ ತತ್ಪವೆ- ಲ್ಲನೆಸಗಿದಂಥ ವಿವರಾ ||ಆಹಾ|| ಉನ್ನಂತ ತನ್ಮಾತ್ರ ಭೂತಪಂಚಕಗಳ ತಾಮಸದಿಂದಲಿ ಉದಿಸಿದ ಪರಿಯನು 20 ಯುಕ್ತಸ್ಥಾನಾದಿಗಳನ್ನು ಕೊಡೆ ಉತ್ತಮೋತ್ತಮನನ್ನು ತಾವು ಸುತ್ತಿ ಸ್ತುತಿಸಲು ಇನ್ನೂ ||ಆಹಾ|| ತತ್ವದೇವತೆಗಳ ಭಕ್ತಿಗೆ ಒಲಿದು ತತ್ವರೆಲ್ಲರ ತೋರೆ ರೂಪದಿ ಧರಿಸಿಟ್ಟನು21 ರಜಸುವರ್ಣಾತ್ಮಕವಾದ ಘನ ನಿಜ ಐವತ್ತು ಕೋಟಿ ಗಾವುದ ಉಳ್ಳ ಅಜಾಂಡವನ್ನು ತಾ ತೋರ್ದ ತನ್ನ ನಿಜಪತ್ನಿ ಉದರದಿ ಮಾಡ್ದ ||ಆಹಾ|| ಸೃಜಿಸಿ ಬ್ರಹ್ಮಾಂಡದಿ ತತ್ವಗಳೊಡಗೂಡಿ ನಿಜವಾಗಿ ತಾನೊಳ ಪೊಕ್ಕ ವಿರಾಟನ್ನ 22 ಪಾತಾಳಾದಿ ಸಪ್ತಲೋಕ ಕಡೆ ಪರಿಯಂತ ರೂಪ ತಾ ತಾಳಿದ ಆದ್ಯಂತ ಇಂತು ನಿರತನು ಸಚ್ಚಿದಾನಂದ ||ಆಹಾ|| ಇಂತು ವಿರಾಟ ತನ್ನಂತರದೊಳು ತತ್ವರೆಲ್ಲರ ತತ್‍ಸ್ಥಳದೊಳಿಟ್ಟು ಪೊರೆದನ್ನ23 ಸಕಲ ಉದಕ ಶುಷ್ಕದಿಂದ ಇರಲು ತಕ್ಕ ಮುಕ್ತಾಮುಕ್ತರ ಭೇದದಿಂದ ತಕ್ಕ ಸ್ಥಾನವೆ ಕಲ್ಪಿಸಿದ ಚೆಂದಾ ||ಆಹಾ|| ಅಕಳಂಕ ಪುನ್ನಾಮಕನು ಧಾಮತ್ರಯ ಮೊದಲಾದ ನರಕ ಪಂಚಕಗಳ ಮಾಡಿದ 24 ಉದಕ ಶೋಷಣೆಯನ್ನು ಮಾಡಿ ಇನ್ನುಮ- ಹದಹಂಕಾರವ ಕೂಡಿ ಭೂತ ಪಂಚಕವ ಮಿಳನ ಮಾಡಿ ಆಗ ಹದಿನಾಲ್ಕೂದಳಾತ್ಮಕ ಪದ್ಮತೋರಿ ||ಆಹಾ|| ಅದುಭುತ ಪದುಮದಿ ಉದಿಸಿದ ಬ್ರಹ್ಮನು ಚತುರ ನಾಲ್ಕುದಿಕ್ಕು ಮುದದಿಂದ ನೋಡಿದ 25 ಪದುಮದಲಿ ಚತುರಾಸ್ಯನಾಗಿ ಅದು ಭುತÀ ಮಹಿಮೆ ನೋಡುತ ತಾನೆ ಮುದದಿಂದ ಮೊಗತಿರುಗಿಸುತಾ ಅದ ಅದುಭುತ ಶಬ್ದಕೇಳುತ್ತಾ ||ಆಹಾ|| ತದಪೇಕ್ಷ ತಪವನಾಚರಿಸಿ ನಾಳದಿ ಬಂದು ಪದುಮನಾಭನು ತಾನು ಮುದದಿಂದ ನೋಡಿದ 26 ಪರಮಪುರುಷ ಉಕ್ತಿ ಲಾಲಿಸಿ ಮೆಚ್ಚಿ ವರವ ಕೊಟ್ಟು ಪಾಲಿಸಿ ಸೃಷ್ಟಿ ನಿರುತ ಮಾಡಲು ತಾ ಬೆಸಸೀ ತಾನು ಅವನಂತರದೊಳು ನೆಲೆಸೀ ||ಆಹಾ|| ಹೊರಗೂ ಒಳಗೂ ನಿಂತು ಸೃಷ್ಟಿಲೀಲೆಯ ತೋರ್ವ ಉರಗಾದ್ರಿವಾಸವಿಠಲ ವೇಂಕಟೇಶನ್ನ 27
--------------
ಉರಗಾದ್ರಿವಾಸವಿಠಲದಾಸರು
ನಂದ ತೀರಥರಾಯ ಅಸ್ಮದ್ಗುರೋರ್ಗುರು ಕಾಯ ಪೊರೆಯಯ್ಯ ಜೀಯಾ ಪ ಪಾದ ಕಮಲಕೆ ನಂದ ಮಧುಕರ ನಂದದಲಿ ನಿಜ ಮಂದ ಜನರಿಗೆ ನಂದ ಕೊಡುವಾ ಮೂರ್ತಿ ಆನಂದಕಾರಿಯೆ ಅ.ಪ ಮಧ್ಯಮನಿ ದ್ವಿಜನಲ್ಲಿ ಉದ್ಭವಿಸಿ ನೀನೂ ಮಧ್ವಮುನಿ ಪೆಸರಲ್ಲಿ ದುರ್ವಾದಿಗಳ ಅ - ಶುದ್ಧ ಭಾಷ್ಯಗಳಲ್ಲಿ ಜಯಪಡೆದ ನಿನ್ನಾ ಶುದ್ಧ ಭಾಷ್ಯಗಳಲ್ಲಿ ಭಕ್ತಿಯಿಂದಲ್ಲಿ ಶುದ್ಧ ಶ್ರೀ ಹರಿಮತದ ಶುಭ ಸಿದ್ಧಾಂತ ಸ್ಥಾಪಿಸಿ ಜಗದಿ ಜೀವರ ಸಿದ್ಧಗಣಕಧಿನಾಥನೆಂದೂ ಪ್ರ - ಸಿದ್ಧಗೈಸಿದಿ ಶುದ್ಧ ಮೂರುತಿ 1 ಬದರಿಕಾಶ್ರಮವನ್ನು ಐದಿದ್ಯೊ ಮುದದಿ ಪದುಮನಾಭನನ್ನು ಬಲಗೈಸಿ ನಿನ್ನ ಬದಿಗ ಜನರಿಗಿನ್ನೂ ಸುವಾಕ್ಯ ದಿಂದಲಿ ಪೇಳಿದದು ನಿಜ ಪದುಮನಾಭನೆ ಪರಮದೈವನು ಪದುಮೆ ಮೊದಲು ಬ್ರಹ್ಮಾಂತ ಜೀವರ ಪದದಿ ಗುಣದ ತಾರತಮ್ಯವ ಹೃದಯ ಮಂದಿರದಲ್ಲಿ ಪೇಳಿದ 2 ಘನ್ನಮಹಿಮನೆ ಎನ್ನಮನ ವಚನ ಕಾಯದಿ ಇನ್ನು ಮಾಡುವುದನ್ನು ಸ್ವೀಕರಿಸಿ ಹರಿಗೆ ಮುನ್ನ ನೀಡೆಲೊ ಚೆನ್ನವಾಗಿ ನಿಜಫಲ ನಿನ್ನ ಜನರೀಗಿನ್ನ ನೀಡಯ್ಯ ಮುನ್ನ ನಿನ್ನ ಒಳಗೆ ನಿರುತ ಇರುವ ಘನ್ನ ಗುರುಜಗನ್ನಾಥವಿಠಲನ ಎನ್ನ ಮನದಲಿ ತೋರಿಸೆಂದು ನಿನ್ನ ಪದಯುಗವನ್ನು ಭಜಿಸಿದೆ 3
--------------
ಗುರುಜಗನ್ನಾಥದಾಸರು
ನಂದನಂದನ ಅರವಿಂದದಳಾಕ್ಷನೆ ವಂದಿಸುವೆ ಪಾದಾರವಿಂದಗಳಿÀಗೀಗ ಪ ಪದುಮನಾಭನೆ ನಿನ್ನ ಪಾದಭಕುತಿಯೊಳಿಟ್ಟು ಸುಜನ ಸಂಗತಿ ನೀಡೊ ಸುರವಂದ್ಯ ಹರಿಯೆ ಒದಗಿ ಬರುವೊ ಮೃತ್ಯು ಮೊದಲೆ ಅರಿಯದೆ ನಾ ಕಾಲ 1 ಭೂತಳದೊಳು ಸಲಹೋ ದಾತರೆಲ್ಲಿಹರಿನ್ನು ಮಾತುಳಾಂತಕನೆ ಈ ಮಾತ ಪೇಳೆನಗೆ ಮಾತಾಪಿತರು ಮೊದಲಿಲ್ಲ ಇನ್ನನ್ಯರಿಲ್ಲ ಅ- ನಾಥನೆಂದೆನ್ನ ಕಯ್ಯ ಪ್ರೀತಿಂದೆ ಹಿಡಿ ಪ್ರಿಯ 2 ವಾಸುಕೀಶಯನನ ವರವ ಪಡೆಯದೆ ನಾ ಮೋಸಹೋದೆನೊ ಈ ಸಂಸಾರದೊಳು ಸಿಲ್ಕಿ ಶ್ರೀಶ ನೀ ಸಲಹೊ ಭೀಮೇಶ ಕೃಷ್ಣನೆ ಎನ್ನ ಘಾಸಿ ಮಾಡದೆ ಹೃಷಿಕೇಶ ಕರುಣದಿಂದ 3
--------------
ಹರಪನಹಳ್ಳಿಭೀಮವ್ವ