ಒಟ್ಟು 35 ಕಡೆಗಳಲ್ಲಿ , 24 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಲ್ಲಣಿಸದಿರು ಕಂಡ್ಯ ತಾಳು ಮನವೆ ಪ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಅ ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆಕಟ್ಟೆಯನು ಕಟ್ಟಿ ನೀರೆರೆದವರು ಯಾರೊಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲುಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ 1 ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲಅಡಿಗಡಿಗೆ ಆಹಾರವಿತ್ತವರು ಯಾರೊ ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ 2 ನವಿಲಿಗೆ ಚಿತ್ರ ಬರೆದವರು ಯಾರುಪವಳದ ಲತೆಗೆ ಕೆಂಪಿಟ್ಟವರು ಯಾರುಸವಿಮಾತಿನರಗಿಳಿಗೆ ಹಸುರು ಬರೆದವರು ಯಾರುಅವನೆ ಸಲಹುವನು ಇದಕೆ ಸಂಶಯವಿಲ್ಲ3 ಕಲ್ಲಿನಲಿ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲಅಲ್ಲಲ್ಲಿಗಾಹಾರ ತಂದೀವರಾರುಬಲ್ಲಿದನು ಕಾಗಿನೆಲೆಯಾದಿಕೇಶವರಾಯಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ 4
--------------
ಕನಕದಾಸ
ನೆನೆಸಿ ನೆನೆಸಿ ನಗುವರಮ್ಮಯ್ಯಮನಸಿಜನಯ್ಯನ ಮಿತ್ರಿ ಧೇನಿಸಿಧೇನಿಸಿ ಹೇಳಿ ಬರೆಸಿದ ಚಿತ್ತಾರವ ಕಂಡು ನೆನೆಸಿ ನೆನೆಸಿ ನಗುವರಮ್ಮ ಪ. ಅತ್ತಿಗೆಯರು ಕುಳಿತಲ್ಲೆ ಅರ್ಥಿಯ ನೋಡುವ ಬರೆಬತ್ತಲೆ ಗೊಂಬೆ ಬಗೆ ಬಗೆ ಬತ್ತಲೆ ಗೊಂಬೆ ಬಗೆ ಬಗೆ ಕುಶಲರ್ಥಚಿತ್ತಾರವ ಯಾರು ಬರೆಸಿಹರು 1 ಜಾತಿ ಹಂಸ ಪಕ್ಷಿಗಳು ಮಾತಿನ ಗಿಳಿವಿಂಡುನೂತನ ನವಿಲು ಬರೆಸಿಲ್ಲನೂತನ ನವಿಲು ಪಕ್ಷಿ ಬರೆಸಿಲ್ಲಹನುಮನೆಂಬೊ ಕೋತಿ ಯಾಕೆ ಬರೆಸಿಹರು2 ಭೇರುಂಡ ಮೃಗವ ತಿದ್ದಿ ತಾನುಬರೆಸಿಲ್ಲ ಬಿದ್ದು ಜನರೆಲ್ಲ ನಗುವಂತೆ ಬಿದ್ದು ಜನರೆಲ್ಲ ನಗುವಂತೆ ತಾನುಮುದಿಹದ್ದ ಯಾಕೆ ಬರೆಸಿಹರು 3 ಎಂಟು ದಿಕ್ಕಿಗೊಪ್ಪೊ ಬಂಟರ ಬರೆಸಿಲ್ಲಕುಂಟ ಸಾರಥಿಯ ವಶವಾಗಿ ಕುಂಟ ಸಾರಥಿಯ ವಶವಾಗಿ ತಿರುಗಾಡುವ ಸೊಟ್ಟ ಸೂರ್ಯನ ಚಿತ್ತಾರ ಬರೆಸಿಹರು 4 ಸುಂದರ ಸುಂದರ ವೃಂದಾರಕರನೆಲ್ಲ ಬಿಟ್ಟುಬಂದ ಜನರೆಲ್ಲ ನಗುವಂತೆ ಬಂದ ಜನರೆಲ್ಲ ನಗುವಂತೆ ಕಳೆಗುಂದಿದಚಂದ್ರನ ಚಿತ್ತಾರ ಬರೆಸಿಹರು 5 ರೂಢಿಗೊಡೆಯನ ಮನೆಯ ಗೋಡೆ ಮ್ಯಾಲಿನ ಗೊಂಬೆ ನೋಡಿದವರೆಲ್ಲ ನಗುವಂತೆನೋಡಿದವರೆಲ್ಲ ನಗುವಂತೆ ತಾತನ ಕೋಡು ಇಲ್ಯಾಕೆ ಬರೆಸಿಹರು 6 ಚೆನ್ನ ರಾಮೇಶನ ಹೊನ್ನ ಗೋಡೆಯ ಮ್ಯಾಲೆ ಮುನ್ನೆ ಜನರೆಲ್ಲ ನಗುವಂತೆ ಮುನ್ನೆ ಜನರೆಲ್ಲ ನಗುವಂತೆ ರುಗ್ಮನ ಪನ್ನಿ ವಿಸ್ತಾರ ಬರೆಸಿಹರು ಚಿತ್ತಾರ 7
--------------
ಗಲಗಲಿಅವ್ವನವರು
ಪಾದ ಕ್ಕೆರಗಿ ಯಾಚಿಸುತಲೆ ಮುಗಿವೆನು ಕೈಯ್ಯಾನೆರೆ ನಂಬಿದವರನು ಎರವು ಮಾಡಲು ನಿನಗೊಳತೇನಯ್ಯಾ ಪಿಡಿ ಬೇಗನೆ ಕೈಯ್ಯ ಕರದಶಿಗಳರಸನೆ ಕಾಮಿತ ಫಲದನೆ ಕರಿರಾಜನ ಭೀಕರ ಹರ ವೆಂಕಟ ಪ ಆಪಾರ ಮಹಿಮಾ ಆಪದ್ಬಂಧೋ ಆಪನ್ನರ ಪಾಲಿಪ ವ್ಯಾಪಾ ನಿನಗಲ್ಲದೆ ಮತ್ತೊಂದು ಕಾಣೆನೊ ಜಗದೀ ಭೂಪಾನೆ ಭೂಮ್ನ ಗುಣಗಣಸಿಂಧೋ ಸ್ವಾಮಿಯೆ ಎನಗಿಂದು ಪರಿಪಾಲಿಸು ಶ್ರೀಪತಿ ಅಂಜನ ಗಿರಿರಾಜ 1 ಕಲಿಯುಗದೊಳಗೀ ಪರ್ವತಕೆಲ್ಲಿ ಸರಿಗಾಣೆನು ಯೆಂದು ನೆಲಸಿದೀ ನೀನೆ ಈ ಸ್ಥಳದಲ್ಲಿ ವೈಕುಂಠಕಿಂತ ನೆಲೆಯು ವೆಗ್ಗಳವೆಂದು ನೀ ಬಲ್ಲೀ ಅದಕಾರಣ ಇಲ್ಲೀ ತಲೆಯಾಗುವರಯ್ಯಾ ಭಳಿರೆ ಕಾಂಚನ 2 ತರುಜಾತಿ ಮೃಗಪಕ್ಷಿಗಳಾಕಾರ ಮೊದಲಾದ ರೂಪದಿ | ನೂರಾರು ಕಿನ್ನರು ತಮ್ಮ ಪರಿವಾರ ಒಡಗೂಡಿ ನಿನ್ನ ಚರಣಾರಾಧನೆ ಮಾಡಿದ ವಿಸ್ತಾರ ಈ ಬಗೆ ಶೃಂಗಾರ ಸರಿಗಾಣೆನೊ ಹೇ ತಿರುಪತಿ ವೆಂಕಟ ಗಿರಿರಾಜ3 ಹದಿನಾಲ್ಕು ಲೋಕದ ಭಾಗ್ಯಗಳಲ್ಲಿ ಅಮರತತಿಗೆ ಕೊಟ್ಟ ವಿಧವೆಲ್ಲಾ ಪ್ರತ್ಯಕ್ಷವು ಪುಸಿಯಲ್ಲ ನಾನವರ ನೋಡೆ ಅಧಮಾಧಮನು ನೀನೆ ಬಲ್ಲೆಲ್ಲಾ ಎನ್ನ ಯೋಗ್ಯತಯ ಫಣಿ 4 ಸುವರ್ಣ ಮುಖರಿತೀರ ನಿವಾಸ ನವರಾತ್ರಿಯಲ್ಲೀ ಆವ ಬ್ರಹ್ಮೋತ್ಸವ ನೋಡಲು ಶ್ರೀಶ ಸಂಪದವನಿತ್ತು ಪೊ ರವಾನು ಕಲುಷದ ಭಯ ಬರಲೀಸ ಶ್ರೀನಿವಾಸ ಭೂದೇವರ ವರದ5
--------------
ವಿಜಯದಾಸ
ಬಾಗುವ ತೆಂಗಿನ ಮರನೋಡ ರಂಗನ ಅಂಘ್ರಿಗೆರಗುವಂತೆ ಸಖಿಯೆ ಪ. ಶೃಂಗಾರದ ವನ ನೋಡ ಪಂಚರಂಗದ ಗಿಳಿ ನೋಡ ಮಂಗಳ ಸ್ವರ ನೋಡ ಕೋಕಿಲ ರಂಗನ ಪಾಡುತಲಿವೆ 1 ಮೃಗ ನೋಡ ಕಸ್ತೂರಿ ಹರಿಪಾದಕೆ ಆತುರದಿ ಬರುತಲಿವೆ 2 ನೆಲ್ಲಿ ನೇರಲೆ ನೋಡ ಪುಷ್ಪ ಚೆಲ್ಲಿ ನಲಿಯುತಲಿವೆ ಮಲ್ಲ ಮಲ್ಲಿಗೆ ನೋಡ ಹರಿಪಾದ ಪಲ್ಲವಕೆ ಎರಗುತಿವೆ 3 ಸಾರ ಪಕ್ಷಿಗಳ ನೋಡ ಹರಿಗುಣ ಸಾರುತ ನಲಿಯುತಿವೆ4 ನಾಗ ಪುನ್ನಾಗ ನೋಡ ಸಂಪಿಗೆ ಪರಿಮಳ ನೋಡ ಹಾಂಗೆ ಕ್ಯಾದಿಗೆ ನೋಡ ಹರಿಪಾದ ಕ್ಹೋಗಿ ಎರಗುತಿವೆ 5 ಕುಸುಮ ನೋಡ ತುಳಸಿ ವಿರಾಜಿಸುªವನÀ ನೋಡ ಸಹಜದವನವ ನೋಡ ರಂಗನ ಪೂಜೆಗೆ ಒದಗುವಂತೆ 6 ಮಂದ ಮಾರುತ ನೋಡ ಪರಿಮಳ ತಂದು ಬೀಸುತಲಿದೆ ಸುಂದರ ಲತೆ ನೋಡ ರಂಗಗೆ ಫಲ ತಂದು ಅರ್ಪಿಸುವಂತೆ7 ಓಕುಳಿ ಕುಣಿನೋಡ ನಿಲ್ಲಿಸಿದ ಜೀಕಳಿ ಗೊಂಬೆಗಳ ಲೋಕ ನಾಯಕ ಹರಿಗೆ ಚಿಮ್ಮುತ ಹಾಕುವ ಪರಿಯಂತೆ 8 ಸಾಲು ಮರಗಳ ನೋಡ ರಂಗಗೆ ಫಲ ಮೇಲಾಡಿ ಮೆಲಿಸುವಂತೆ ಲಾಲಿಮಣಿಯ ನೋಡ ರಾಮೇಶನ ವಾಲೈಸಿ ಕರೆಯುತಿವೆ9
--------------
ಗಲಗಲಿಅವ್ವನವರು
ಭವ | ಬನ್ನ ಬಿಡಿಸಿ ಕಾಯೋ ಅಜಭವರಯ್ಯ ಪ ಆಶೆಯೆಂಬ ನದಿಯಲ್ಲಿ | ಘನ | ಸೂಸುವ ಮನೋರಥವ ಸೆಳವಿನಲಿ | ವಾಸನೆ ತೆರೆಗಳಿ ಬರಲಿ | ಬಲು | ಘಾಸಿಯಾಗುವೆ ಸಿಕ್ಕಿ ಮೋಹ ಸುಳಿಯಲಿ 1 ಉಲಿವ ಕುತರ್ಕ ಪಕ್ಷಿಗಳು | ನುಂಗ | ನಕ್ರ ಕಾಮಕ್ರೋಧಗಳು | ಬಲಿದು ವಿವೇಕ ಧಡಿಗಳು | ಕೋರೆ | ಯಲಿ ಬೀಳೆ ಧೃತಿ ಶಾಂತಿಯೆಂಬಾ ವೃಕ್ಷಗಳು2 ಸಿರಿ | ಕಾಂತ ನಿನ್ನಯ ನಾಮ ಹಡಗ ತಂದು | ಪಂಥಗಾಣಿಸೋ ಗತಿಗಿಂದು | ದಯ | ವಂತ ಗುರು ಮಹಿಪತಿ ಪ್ರಭು ದೀನ ಬಂಧು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಲವಕುಶರ ಹಾಡು ಹರಿಹರ ಬ್ರಹ್ಮ ತ್ರಿಮೂರ್ತಿಗಳ ಬಲಗೊಂಡು *ಗುರುಹಿರಿಯರ ಪಾದಕ್ಕೆರಗೀ | ಅಜನ ಪಟ್ಟದ ಶ್ರೀ ಸರಸ್ವತಿಯನೆ ಬಲಗೊಂಡು ತೊಡಗುವೆ ರಾಮರ ಕಥೆಯಾ 1 ಬಣ್ಣದ ಅಕ್ಷತೆ ಕಣ್ಣು ತುಂಬೆ ಪುಷ್ಪ ಸು ವರ್ಣ ದಕ್ಷಿಣೆ ತಾಂಬೂಲಾ | ಉಮ್ಮಿಯ ಪುತ್ರ ಗಣೇಶಗೆ ಅರ್ಪಿಸಿ ವರ್ಣಿಪೆ ಲವಕುಶರ ಕಥೆಯಾ 2 ಕುಲದ ಸ್ವಾಮಿ ಕದ್ರಿ ನರಸಿಂಹನ ಬಲಗೊಂಡು | ಗುರು ಮಧ್ವರಾಯರ ನೆನೆದು | ಮನದಲ್ಲಿ ವಿಷ್ಣು ದೇವತೆಗಳ ಬಲಗೊಂಡು ತೊಡಗುವೆ ರಾಮರ ಕಥೆಯಾ 3 ವೇದಪಾರಾಯಣ ಅಂತ್ಯದ ಪೀಠಕ ಮಾಧವ ಹರಿ ಸುಗೋತ್ರ | ವೇದ ಮೂರುತಿ ಕೊಂಡಪ್ಪನ ಪುತ್ರಿಕೆಗೆ (?) ಹೇಳಿದಳುಹರಿನಾಮ ಕಥೆಯಾ 4 ಯಗ್ನ ಸಂತತಿಯೂ ಪೀಠಕವೂ | ಅಜ್ಞಾನಿ ಮೂಢಜೀವರಿಗೆ 5 ಹರುವುಳ್ಳ ನಿರಯಾಗಿಗಳೂ | ಹರವುಳ್ಳ ಕೈ(?)ಮುನಿವಳ್ಳೇರು ಜಾಣರು ತಿಳಿವೂದು ಅರ್ಥಸಂದೇಶ 6 ನಾಡನ ಕಥೆಯಲ್ಲ ಬೇಡುಂಬ ಪದನಲ್ಲ ನಾಡೊಳಗೆ ಹರಿನಾಮ ಕೇಳಿದ ಜನರಿಗೆ | ವಿಲ್ಲವಾಗುವುದು 7 ಪ್ರಚಂಡರು ರಾಮಲಕ್ಷ್ಮಣರು | ಇತ್ತಬೇಟೆಯನಾಡುವ ಕ್ರಮಗಳ ಚಂದವಿನ್ನೆಂತು ವರ್ಣಿಸಲೆ 8 ತಾಂಬೂಲ ಶ್ರೀಮೊಗದಿಂದೆ | ಇಂದುವದನೆಯ ಬಿಗಿದಪ್ಪಿ ಮುದ್ದಾಡಿದ ಇಂದುವದನೆ ಗರ್ಭವೆಂದ 9 ನಳಿನನಾಭನು ತನ್ನ ಲಲನೇಯ ಮುಖನೋಡಿ ಲಲನೆ ನಿನ್ನ ಪ್ರೇಮವೇನೆ | ಮುನಿಯು ಆಮುನಿಗಳು ಕೂಡಿದ ನಂತ್ರ ವನಭೋಜನ ತನಗೆಂದ್ಲೂ 10 ಹಲವು ಕಾಲವು ಸೀತೆ ಅಸುರರ ವಡನಾಡಿ ನೆನದಳು ಋಷಿಗಳಾಶ್ರಮವಾ | ಹಸನವಲ್ಲವು ಸೀತೆ ಇನ್ನು ನೀನುಳಿವದು ಋಷಿಗಳಾಶ್ರಮಕೆ ಹೋಗೆಂದಾ 11 ಅಯೋಧ್ಯಾಪುರದ ವಾನರರೆಲ್ಲಾ ಬಿಟ್ಟು ಕೈಹಿಡಿದ ಪುರುಷನ ಬಿಟ್ಟು | ನೆನದಾಳು ಋಷಿಗಳಾಶ್ರಮವ 12 ಅಂದು ಶ್ರೀರಾಮರು ಬೇಟೆಗ್ಹೋದೇವೆಂದು ಇಂದು ಡಂಗುರವ ಸಾರಿದರೂ | ಒಂದು ಗಳಿಗೆ ಮುಹೂರ್ತತಡೆಯಲಾಗದು ಎಂದು ಮಂದಿ ಮಕ್ಕಳ ಕರಸಿದರೂ 13 ಬಂದರು ಮಂತ್ರಿ ಮಾನ್ಯರು ಪ್ರಹಸ್ತರು ಬಂದರು ಪ್ರಧಾನೇರು | ಬಂದರು ರವಿಗುರಿನವಿಗುರಿಕಾರರು (?) ಬಂದರು ವಾಲಗದೋರೊಪ್ಪಿದರು 14 ಆಟಪಾಟದೋರು ನೋಟಕ್ಕೆ ದಾರಾರು ಸೂತ್ರದವರು ಸುವ್ವಿಯವರು | ಪಾಟಕ್ಕೆ ದಾರಾರು ಪೊಗಳುವ ಭಂಟರು ರಘು ನಾಥನೋಲಗದಲೊಪ್ಪಿದರೂ 15 ಹೊನ್ನು ಹಲಗೆಯವರು ಬೆನ್ನಬತ್ತಲೆಯವರು ಚಿನ್ನಬಿನ್ನಾಣನಾಯಕರೂ | ಚೆನ್ನಿಗರಾಮರ ಪೊಗಳುವ ಭಂಟರು ಬಿನ್ನಾಣದಿಂದೊಪ್ಪುತಿಹರೂ 16 ಪಟ್ಟಾವಳಿ ಹೊಸಧೋತರವು ಇಟ್ಟರು ಆಭರಣವನ್ನೂ | ಮಕರಕುಂಡಲ ಕಿರೀಟವೂ ಇಟ್ಟರು ನೊಸಲ ಕಸ್ತುರಿಯಾ 17 ಹಾರಮಾಣಿಕನಿಟ್ಟು ಕಾಲುಪೆಂಡೆಯನಿಟ್ಟು ನ್ಯಾವಳದ ಉಡುದಾರನಿಟ್ಟು ಸೂರ್ಯನ ಕುಲದ ಕುಮಾರರು ನಾಲ್ವರು ಏರಿದರು ಹೊನ್ನ ರಥವಾ 18 ವಾಯುವೇಗ ಮನೋವೇಗವೆಂಬೋ ರಥ ಏರಿದರೆ ರಾಮಲಕ್ಷ್ಮಣರೂ | ಸೂರ್ಯ ತಾನೆ ರಥವ ನಡೆಸೆ ಕೂಡ ಬೇಟೆಗೆ ತೆರಳಿದರು 19 ಅತ್ತಿ ಆಲದ ಮರ ಸುತ್ತ ಹೆದ್ದುಮ್ಮರಿ ಉತ್ತತ್ತಿ ಬೆಳಲು ದಾಳಿಂಬ ಉತ್ತಮ ಅಶ್ವತ್ಥ ಇಪ್ಪಿಯ ವನಗಳು ವಿಸ್ತರವನವೊಪ್ಪುತಿಹವೂ 20 ನಾರಂಗ ಬೆರಸಿದ ಕಿತ್ತಳಿ ಹರಿಸಿಣದ ತೋಪು ಎಲಿತ್ವಾಟ ಅರಸುಮಕ್ಕಳು ರಾಮಲಕ್ಷ್ಮಣರೆಲ್ಲರು ಬೆರಸಿ ಬೇಟೆಯ ನಾಡುತಿಹರೂ 21 ಯಾರಾಡಿಗಿಡಗಳು ಕ್ಯಾದೀಗಿವನಗಳು ನಾಗಸಂಪಿಗೆಯ ತೋಪುಗಳು | ಜೋಡೀಲಿ ಭರತ ಶತ್ರುಘ್ನರೆಲ್ಲರು ಕಾಲಾಳು ಬೇಟೆನಾಡಿದರೂ 22 ಉದ್ದಂಡ ಕೇಕಾಪಕ್ಷಿ ಚಂದಾದ ಬಕನ ಪಕ್ಷಿಗಳೂ | ಅಂದಾದ ಆಲಿವಾಣ ಆಲಹಕ್ಕಿಯು ರಾಮ ಚಂದ್ರನು ಬೇಟೆಯಾಡಿದನು 23 ಬೇಟೆನಾಡಿ ಬಂದು ನಿಂತಾರು ನೆರಳಲ್ಲಿ ಒಂದುಗಳಿಗೆ ಶ್ರಮವ ಕಳೆದು ನಂದನವನದಲ್ಲಿ ತನಿಹಣ್ಣು ಮೆಲುವೋರು ಗಂಗೆಯ ಉದಕ ಕುಡಿಯುವೋರು 24 ನಳಿನನಾಭನು ತಾನು ಬಳಲಿ ಬೇಟೆಯನಾಡಿ ನೆರಳಲ್ಲಿ ತುರಗ ಮೇಯಿಸಿದ ಕಿರಿಯಲಕ್ಷ್ಮಣ ದೇವ ತೊಡೆಯನ್ನೆ ಕೊಡು ಎಂದು ಮಲಗೀದ ಒಂದು ನಿಮಿಷವನೂ 25 ಮುಂದಿನ ಆಗೆಂತ್ರವ(?) ಕಂಡನು ಕನಸಿನಲಿ ರಾಮ ಕಂಗೆಟ್ಟು ಮೈಮುರಿದೆದ್ದಾ | ಕಂದ ಲಕ್ಷ್ಮಣ ಕೇಳೊ ಇಂದೆನ್ನ ಸೊಪ್ನದಲಿ ಬಂದಿಹಳೊಬ್ಬ ತಾಟಕಿಯೂ 26 ಇಂದುವದನೆಮುಡಿ ಪಿಡಿದಳೆವೊ ದುಕಂಡೆ ತುಂಡರಾವಣ ಕುಯೋದು ಕಂಡೆ | ಇಂದು ನೀ ಸೀತೆಯ ಕರೆದೊಯಿದು ಕಾನನದಿ ದಿಂಜಾರಿಳಿಸೋದು ಕಂಡೆ 27 ಮುನ್ನ ಅರಿಯದೆ ನಾವು ಬಂದೆವೋ ಲಕ್ಷ್ಮಣ ಇನ್ನು ಸೀತೆಗೆ ಜಯವಿಲ್ಲಾ | ಅಂದು ಶ್ರೀರಾಮರಾ ಬೇಟೆ ಮೂಲಕದಿಂದೆ ಬಂದಾಳು ಮಾಯದ ಗರತಿ | 28 ಬಂದು ಅಯೋಧ್ಯಾಪುರದ ಬೀದಿಯವಳಗೆ ಚಂದದಿ ಕುಣಿದಾಡುತಿಹಳು | ಅಂದು ಶ್ರೀ ರಾಮರ ಅರಮನೆ ಬಾಗಿಲಿಗೆ ಚಂದುಳ್ಳ ದ್ವಾರಪಾಲಕರೂ 29 ಬಂದು ಅಸುರೆ ನಿನ್ನ ಬಿಡವಲ್ಲೆನೆಂದರೆ ಬಂದಡರಿದಳರಮನೆಗೆ ಕಂಡು ಜಾನಕಿ ತಾನು ಕರಸಿದಳಾಗಲೆ ಬಂದಳು ಮಾಯದ ಗರತಿ 30 ಬಂದು ಪಾದಕ್ಕೆರಗಿ ಕೈಮುಗಿದು ನಿಂತಳು ತಂದಳು ನಾಗ ಸಂಪಿಗೆಯಾ | ಅಂಗನೆ ಜಾನಕಿ ನೀಮುಡಿಯೆಂದು ಕೊಟ್ಟರೆ ಸಂದೇಹ ಬಟ್ಟಳಾ ಸೀತೆ 31 ಈನಾಡ ಗರತಿ ನೀನಲ್ಲ | ದಾರು ಬಂಧುಗಳುಂಟು ದಾರ ಬಳಿಗೆ ನೀ ಬಂದೀ 32 ಈರೇಳು ಲೋಕವ ಸುತ್ತಿ ತಿರುಗಿ ಬಂದೆ ನಾಗಲೋಕಕ್ಕೆ ಬಾಹೆನೆಂದು ನಾಗಲೋಕದಿಂದ ದೇವಲೋಕಕ್ಕೆ ಬಂದೆ ದೇವಿಗೆ ಕಾಣಿಕೆ ತಂದೇ 33 ಹೊನ್ನು ಹಣವನೀವೆ ಅನ್ನವಸ್ತ್ರವನೀವೆ ಇನ್ನು ನೀವಲಿದದ್ದು ಈವೆ | ಇನ್ನು ನೀವಲಿದದ್ದು ಚೆನ್ನಾಗಿ ಕೊಡುವೆನು ಬಿನ್ನವಿಸೆ ಗರತಿ ನೀ ಅಂದ್ಲೂ 34 ಹೊನ್ನು ಹಣವನೊಲ್ಲೆ ಅನ್ನವಸ್ತ್ರವನೊಲ್ಲೆ ನಿನ್ನ ಭಾಗ್ಯವು ನಾನೊಲ್ಲೆ | ಮುನ್ನಿನ ಅಸುರರೂಪ ಇನ್ನು ನೀಬರೆದರೆ ಹರಣ ಹೊರುವೆನು 35 ಮುನ್ನವನು ಕಂಡು ಕೇಳರಿಯ | ಪನ್ನಂಗಧರ ರಾಮ ಬಂದರೆ ಬೈದಾರು ಗಮನ ಮಾಡಂದ್ಲೂ36 ಅಂದರೆ ಸೀತೆ ತನ್ನಂಗಕ್ಕೆ ಬರಲೆಂದು ತಂದು ತೊಡೆದಳು ಭಸುಮವನು | ಅಂದೆನ್ನ ವನಕೆ ಪ್ರದಕ್ಷಿಣೆ ಬರುವಾಗ ಉಂಗುಷ್ಟವನು ಕಂಡುಬಲ್ಲೆ 37 ಉಂಗುಷ್ಟದಂದಕ್ಕೆ ಮುಂದೆ ಪಾದವ ಬರಿ ಹಿಂದೆ ಹಿಂಬುಡ ಮೊಣಕಾಲು | ಹೊಂದಿಸಿ ಬರೆ ಎಂದಳವಳು 38 ಚಂದಾದ ಕಾಗದ ಲೆಕ್ಕಣಿಕೆ ಪಿಡಿದು ತಂದು ಕೊಟ್ಟಳು ಸೀತೆ ಕೈಗೆ | ಒಂದು ಕಾಯಕೆ ಹತ್ತು ಸಿರಗಳ ಬರೆದಳು ಮುಂದೆರಡು ಪಾದವ ಬರೆದಳು 39 ಒಂದರ ಹಿಂದೊಂದು ವರ್ಣಿಸಿ ಬರೆದಳು ತಂದು ನಿಲಿಸಿದಳು ರಾವಣನಾ | ಚಂದವಾಯಿತು ದೇವಿ ವರವಕೊಡೆನುತಲಿ ಎಂದೆಂದಿಗೂ ಅಳಿಯದ್ಹಾಗೇ 40 ಅಳಿದು ಉಳಿಯದಿರು ಉಳಿದು ನೀ ಕೆಡದಿರು ಧರಿಯವಳಗೆ ಅಡಗದಿರು | ಕಿರಿಯ ಲಕ್ಷ್ಮಣದೇವ ಹೊಡೆದರೆ ಮಡಿ ಎಂದು ವರವ ಕೊಟ್ಟಳು ಸೀತೆ ಪಠಕೆ 41 ಮರೆ
--------------
ಹೆಳವನಕಟ್ಟೆ ಗಿರಿಯಮ್ಮ
ಶಂಕರ ಗಂಡನ ಹಾಡು ಸರಸ್ವತಿಗಭಿವಂದಿಸುವೆ ಒಡೆಯನು ಎನ್ನ ಮನದೊಡೆಯ 1 ಸಂಭ್ರಮ[ದಾ] ಕೇಳಿ ಸಜ್ಜನರು 2 ವಿಶಾಲ ವಿಲಾಸ ಪಟ್ಟಣದಿ ಖಚಿತ ಮಂದಿರದಿ 3 ಮಂದಮಾರುತ ತಂಪೆÉಸೆಯೆ ಗಂಧ ಕಸ್ತೂರಿ ಕದಂಬವನೇರಿಸಿ ಆನಂದವಾಗಿದ್ದ ಮನ್ಮಥನು4 ಮಯೂರ ಪಕ್ಷಿಗಳು ನಳಿನ ನಾಭನ ಓಲಗವು 5 ನಿರ್ಭಯದಲಿನಲ್ಕಾವತಿಯು ಪಾಲಿಸುತ್ತ 6 ಮರಿಹಾವುಗಳ ನೆರೆಹುವಳು ಗೊಂಬೆಯಾಟವನೆ ಆಡುವಳು 7 ಕೂಡಿದ್ದ ಗೆಳತಿಯರ ಒಡನೆ ನೋಡಿದ ನವಯೌವನೆಯನು 8 ಕುಚವು ತೋರಿದವು ಚಿತ್ತದೊಳಗೆ ಚಿಂತಿಸುತ್ತಿದ್ದ 9 ಚೆನ್ನಿಗನು ಮನ್ಮಥನು ಉದಯಕ್ಕೆ ಕರೆತನ್ನಿರೆಂದ 10 ಬಂದು ವಿಲಾಸ ಪಟ್ಟಣದೊಳು ಮದನಗೆ ಪ್ರೀತಿಲಿ ನಿಂದು ಕೈ ಮುಗಿದರು ಹೋ ಗ್ಯೆಂದು ಶಂಕರಗಂಡ ಕಳುಹಿದ ನಿಮ್ಮನೆಗೈತಂದೆವೆನಲು 11 ಮಾತಾಡಿ ನಗುತ ಭೂ ಕೇಳಿದ ಮನ್ಮಥನ 12 ರಾಜ್ಯವು ಕ್ಷೇಮವೆನ್ನಲು ಬ್ರಹ್ಮಾನಂದದಲಿದ್ದ ಶಂಕರಗಂಡನು 13 ವಿವಾಹ ಮಾಡಲಿಚ್ಛಿಸುವೆ ಚಂದ್ರಮುಖಿಯು 14 ಸಂಭ್ರಮದಿಂದ ಕುಳಿತರು ತಂದಿಡುವರು ಮನ್ಮಥಗೆ 15 ಅಂಗಜ ಅತಿ ದೈನ್ಯ ಉಕ್ತಿಯಿಂದಲಿ ಬಹು ಮಂಗಳ ಮೃದು ವಾಕ್ಯವನ್ನು ಪ್ರ ತಂಗಿಯನೆನಗೀಹುದೆಂದ 16 ಮಲ್ಲಿಗಿಸರ ಕಬ್ಬು ಬಿಲ್ಲು ಹಿರಿಯರು ಹೇಳುವರು 17 ಒಬ್ಬಳೇ ರತಿ ನಮ್ಮ ತಂಗಿ ಹಬ್ಬ ಹುಣ್ಣಿಮೆಗೆ ಕಳಿಸದೆ ನಮ್ಮನೆಗೆ ನಿರ್ಬಂಧ ಮಾಡುವಿರೆಂದ 18 ಕಡುಮೋಹದಿಂದ ಸಾಕಿದೆನು ಕೊಡಲಾರೆ ತಂಗಿಯನೆಂದ 19 ಅವಳಿಗೆ ಸ್ವತಂತ್ರವಿಲ್ಲೇನು ನುಡಿದ ದೈನ್ಯದಲಿ 20 ಭಾಗ್ಯದಿಂದಲಿ ನೋಡಿದರು ಮದನ ನೇಮವನೆ ಮಾಡಿದರು 21 ಪ್ರತಿಬಿಂಬ[ದಂದ]ದಲಿ ಎಣಿಕೆಯಿಲ್ಲದ ಬಂಧು ಜನರ 22 ಎಲ್ಲರು ನೆರೆದು ಸಂಭ್ರಮದಿ ಮಲ್ಲಿಗೆ ಸರದಿ ಮದನರತಿದೇವಿಗೆ ಕಲ್ಯಾಣವನೆ ಮಾಡಿದರು 23 ಬಟ್ಟಲು ಗಿಂಡಿಗಳನ್ನು ಬಳುವಳಿ ತಂಗಿಗೆ ಇತ್ತ 24 ಸಾಸಿರ ಗೋವು ಗಜವು ತುರಗವು ಬ್ಯಾಸರಿಯದೆ ತಂಗಿಗಿತ್ತ ವಿಲಾಸಪಟ್ಟಣಕೆ ಕಳಿಸಿದ 25 ದಿನ ಬಾಳುತಿರಲು ತಾನೇ ಯೋಚಿಸಿದ 26 ಬಿಗಿದ ನಾಡಗಂಬಳಿಯ ನಗುವಂತೆ ಮಾಡಿ ರೂಪವನು 27 ಕುಡಗೋಲು ಕÀವಣೆಯ ಪಿಡಿದು ಮಾಡುವೆನೆನುತ 28 ರೂಢಿಯೊಳಗೆ ಅತಿಚೆಲುವ ಸತಿಗೆ ತೋರಿದನು 29 ಒಡಹುಟ್ಟಿದಣ್ಣ ತಾ ಮುನಿಯೆ ನಮಗೆ ಬೇಡವೆಂದ್ಲು 30 ಕಾರಣವ ಹೇಳದಂತೆ ದಿನÀಕರ ನಂತೆ ಹೊಳೆಯುತ ಸಭೆಯಲಿತವಕದಿಂದಲಿ ಬಂದು ಕುಳಿತು31 ಗೆಲುವಿನಿಂದ ಮಾತಾಡಲಿಲ್ಲ ಜುಲ್ಮಿಂದ ತಾನೆ ಕೇಳಿದನು 32 ನಮ್ಮನೆಯಲಿ ನಾವೀಗ ಕಳಿಸುವೋರಲ್ಲ 33 ತೌರುಮನೆಯ ಹಾರೈಸುವರು ಉಂಡು ಸಂಭ್ರಮದಿಂದ ಬಾಹೋಳೆಂದ 34 ಕರುವ ಕಾಯಿ ನಮ್ಮ ಮನೆಯ ಮರೆಯದೆ ಹೊಯ್ಸುವೆಂನೆಂದ 35 ಜೋಳವ ಕೊಂಡು ಹೋಗೆನಲು ಬೇಡೆಲವೊ ಕಾಮ ನಿನ್ನ ಐಶ್ವರ್ಯವ ಹಾಳು ಮಾಡುವೆನೊಂದÀು ಗಳಿಗೆಯಲಿ 36 ಗಮಕದಿಂದಲಿ ಬೆಳೆವೆನೆಂದು ಚಮತ್ಕಾರದಿಂದ ಮಾಯವಾದ 37 ಅಟ್ಟ ಅಡಿಗೆ ಮನೆಂiÉ
--------------
ಹೆಳವನಕಟ್ಟೆ ಗಿರಿಯಮ್ಮ
ಸತ್ಯಸಂಕಲ್ಪ ತ್ವಚಿತ್ತಾನುಸಾರ ತ್ವ ಚಿತ್ತ ವೃತ್ತಿಯು ನಿನಗೆ ಸರ್ವÀತ್ರದಿ ಪ ಉತ್ತಮೋತ್ತಮ ನೀನೆಗತಿ ಎಂ- ಉತ್ತರಿಸು ಭವಶರಧಿಯಲಿ ಎತ್ತಿ ಕಡೆಹಾಯಿಸುವುದೀಗಲೆ ಅ.ಪ ಜಗದಾಖ್ಯವೃಕ್ಷಕ್ಕೆ ಆದಿಕಾರಣನಾಗಿ ಜಗದೇಕವಂದ್ಯ ನೀನಾಧಾರನೋ ತ್ವಗಾದಿ ಜ್ಞಾನೇಂದ್ರಿಯಗಳೆಂಬೀ ಐದು ಬಿಳಲುಗಳೂ ಪಡೂರ್ಮಿಗಳೂ ಮೇಧ ಹೊದಿಕೆಗಳು ಪಂ ಮನ ಅಹಂಕಾರವೆಂದು ಪೊಟ್ಟರೆಗಳು 1 ಪ್ರಾಣಾದಿಪಂಚಕವು ಕೂರ್ಮ ಕೃಕಳಾದಿ ಪಂಚವಾಯುಗಳು ಪರ್ಣಗಳು ಹತ್ತೆನಿಸಿ ವೃಕ್ಷಕೆ ದುಃಖ ಸುಖವೆಂಬೆರಡು ಮೋಕ್ಷಗಳೆಂಬÉೂ ರಸಗಳು ಪಕ್ಷಿಗಳು ವಿಹರಿಸುತಲಿಹವು ಕರ್ಮಫÀಲವನು ಕಟಾಕ್ಷವಿಲ್ಲದೆ 2 ಅಡಿ ಮೇಲಾಗಿಹ ಗಿಡದೊಡೆಯ ನೀ ಗಿಡದೊಳು ಅಡಿಗಡಿಗೆ ಜೀವರೊಡಗೂಡಿ ಬಂದವರನು ನಿನ್ನೊಡಗೂಡಿ ಒಂದೇ- ಕಡೆಯಾಡುತಿಹ ಬಡಜೀವಿ ನಾನಯ್ಯ ಪಡೆದ ಫಲವದು ಬೆಂಬಿಡದೆ ಭೋಗಕೆ ಬರುತಲಿಹುದಯ್ಯ ಬಡಿದು ಉಣಿಸುವೆಯೊ ಬಿಡದಿರುವೆ ಎನ್ನೊಡೆಯಾ ಒಡೆಯ ನಿನ್ನೆದುರಿನಲಿ ನಾ ಪರಿಹರಿಸಿ ರಕ್ಷಿಸೊ ಮೃಡನುತ ಶ್ರೀ ವೇಂಕಟೇಶಾ 3
--------------
ಉರಗಾದ್ರಿವಾಸವಿಠಲದಾಸರು
ಸೆರೆಯೊಳಗೆ ಹರಿಸೆರೆಯೆ ಮುಖ್ಯಾ ಭಾವದೊಳಗೆ ಗುರುಭಾವನÉಯೆ ಮುಖ್ಯಾ ಪ ----ದೊಳಗೆ ಪ್ರಥಮ -----ರಾರÉೀ ಮುಖ್ಯಾ ಸೇವನೆಯೊಳಗೆ ಪುಣ್ಯ ಸೇವನೆ ಮುಖ್ಯಾ ದೇವರೊಳಗೆ ವಿಷ್ಣು ದೇವಾರೆ ಮುಖ್ಯಾವು ಯಾವ ಶಾಸ್ತ್ರಗಳಿಗೂ ವೇದವೇ ಮುಖ್ಯಾ 1 ವನದೊಳು ಫಲವುಳ್ಳಾ -----ಮುಖ್ಯಾ ದೀನದಾನವರೊಳಗೆ -----ದೀನನೆಂಬುವದೇ ಮುಖ್ಯ ಜನರೊಳು ಸಾಧು ಸಜ್ಜನರಾದವರೇ ಮುಖ್ಯಾ ಮನೆಗೆ ಹಿರಿಯನಾದ ಯಜಮಾನನೇ ಮುಖ್ಯಾ 2 ಮಾಸಗಳೊಳು ಚೈತ್ರಮಾಸವೆ ಮುಖ್ಯವು ವಾಸನೆಯೊಳು ಲಕ್ಷ್ಮೀವಾಸನೆ ಮುಖ್ಯ ಭೂಸುರರೊಳಗೆಲ್ಲ ಪೂರ್ಣ ಪಂಡಿತರೆ ಮುಖ್ಯ ವಾಸು ದೇವರಿಗೆ ----ದಾಸನೆ ಮುಖ್ಯ 3 ಸ್ಥಾನದೊಳಗೆ ಗಂಗಾಸ್ಥಾನವೇ ಮುಖ್ಯವು ಧೇನುಗಳೊಳು ಕಾಮಧೇನುವೇ ಮುಖ್ಯ ಜ್ಞಾನದಲ್ಲಿ ಹರಿಸರ್ವೋತ್ತಮ ಜ್ಞಾನವೆ ಮುಖ್ಯ ಗಾನದೊಳಗೆ ಸಾಮಗಾನವೇ ಮುಖ್ಯ 4 ವೃಕ್ಷಗಳೊಳು ತುಲಸೀ ವೃಕ್ಷವೇ ಮುಖ್ಯವು ಭಿಕ್ಷಗಳೊಳು ಯತಿ ಭಿಕ್ಷವೇ ಮುಖ್ಯವು ಪಕ್ಷಿಗಳೊಳು ಗರುಡ ¥ಕ್ಷಿಯೇ ಮುಖ್ಯ ಲಕ್ಷಾಧಿಕಾರರಿಗೆ ಲಕ್ಷ್ಮೀಯೆ ಮುಖ್ಯ 5 ಪರ್ವತಗಳೊಳು ಮೇರು ಪರ್ವತವೆ ಮುಖ್ಯ ಉರೆಗೆ ಮಳೆ ಬೆಳೆ ಉರುವೆ (ಬರುವೆ?) ಮುಖ್ಯ ಮರ್ಯಾದೆ ನ್ಯಾಯಗಳಿಗೆ ಹಿರಿಯರಾದವರೇ ಮುಖ್ಯ ಸರ್ವಾಧಿಕಾರರಿಗೆ ಸರ್ವಸಮತವೆ ಮುಖ್ಯ 6 ಕ್ಷೇತ್ರಗಳೊಳು ಕುರುಕ್ಷೇತ್ರವೆ ಮುಖ್ಯ ಯಾತ್ರಿಗಳೊಳು ಗಂಗಾಯಾತ್ರಿಯೆ ಮುಖ್ಯ ಸೂತ್ರಗಳೊಳು---------ಮುಖ್ಯವು ಸ್ತೋತ್ರಗಳೊಳು ಹರಿಸ್ತೋತ್ರವೇ ಮುಖ್ಯ 7 ಗ್ರಾಮಗಳೊಳು ಸಾಲಿಗ್ರಾಮವೇ ಮುಖ್ಯ ಭೂಮಿಗಳೊಳು ಪುಣ್ಯ ಭೂಮಿಯೇ ಮುಖ್ಯ ಆರು-------ಳಿಗೆಲ್ಲ ಆರೋಗ್ಯವೆ ಮುಖ್ಯ ಕಾಮುಕ ಸ್ತ್ರೀಯರಿಗೆಲ್ಲ ಕಾಮಪುರುಷನೇ ಮುಖ್ಯ 8 ಸನ್ಮಾರ್ಗಗಳೊಳಗೆ ಸನ್ಯಾಸಿ ಮಾರ್ಗವೆ ಮುಖ್ಯ ಅನಿಮೇಷಾ ಜಾಗರದೊಳಗೆ ಅನಿಮೇಷರೆ ಮುಖ್ಯ ಧನ್ಯ `ಹೆನ್ನೆ ವಿಠ್ಠಲನ ' ದಯವು ಇದ್ದರೆ ಮುಖ್ಯ 9
--------------
ಹೆನ್ನೆರಂಗದಾಸರು
ಸೇರಿದೆನು ಸೇರಿದೆನು ಗುರುವರನ ಪದವಾ ಮೀರಿದೆನು ಘೋರತರ ನರಕದತಿಭಯವಾ ಪದೂರ್ವೆ ಮೊದಲಾದ ತೃಣಧಾನ್ಯ ಗರ್ಭವ ಮೆಟ್ಟಿಸರ್ವ ಸ್ಥಾವರ ಜಾತಿಗಳಲಿ ಪುಟ್ಟಿಪಾರ್ವಪಕ್ಷಿಗಳ ಬಸುರೊಳು ಪುಟ್ಟಿ ಬಹಳ ಪಶೂದರ್ವೀಕರಂಗಳಲಿ ಪುಟ್ಟಿ ಕಂಗೆಟ್ಟೂ1ಮನುಜರೊಳು ಪದಿನೆಂಟು ಜಾತಿಗಳೊಳಗೆ ಬಂದುಬಿನುಗುತನದಿಂದಖಿಳ ವಿಷಯಗಳ ತಿಂದೂಅನುವರಿಯದಜ್ಞಾನದೊಳಗೆ ಬಳಿಸಂದು ಪಾರ್ವನ ಜನ್ಮದಲಿ ವಿಹಿತಕರ್ಮದಲಿ ಮನನಿಂದು2ಮೆಲ್ಲ ಮೆಲ್ಲನೆ ಕಾಮ್ಯ ನಿಷ್ಕಾಮ ಕರ್ಮಗಳಬಲ್ಲ ಬಲ್ಲಂತೆ ಮಾಡುತ ಪೂರ್ವದಾಸಲ್ಲಲಿತ ಪುಣ್ಯದೊಳು ಭಕ್ತಿಯೊಳ್ಮನ ಮುಟ್ಟಿಅಲ್ಲಲ್ಲಿ ಹರಿನಾಮ ಕಥೆಯೊಳಳವಟ್ಟೂ 3ಭಾಗವತ ಜನ ಸಂಗದಿಂದ ಹರಿಕಥೆಗಳನುರಾಗದಿಂ ಕೇಳಿ ಗುರುವಿನ ಮಹಿಮೆಯಾಶ್ರೀಗುರುಗಳಿಂದಲೆ ಧನ್ಯತ್ವವಹುದೆಂದುಯೋಗ ಸಂಪದವೆ ತನಗಾಗಬೇಕೆಂದೂ 4ಸದಸದ್ವಿವೇಕ ಶಮೆ ದಮೆ ತಿತಿಕ್ಷೆಗಳಿಂದಲಧಿಕ ಮೋಕ್ಷೇಛ್ಛೆ ಮುಂತಾದ ಸಾಧನವೂಒದವಿರಲು ಬೇಕು ಗೋಪಾಲಾರ್ಯ ಗುರುವರನಪದವೆ ಸತ್ಯಾನಂದ ರೂಪವೆಂತೆಂದೂ 5
--------------
ಗೋಪಾಲಾರ್ಯರು
ಹರಿ ನಿನ್ನ ರೋಮ ಕೂಪದಲಿ ಜೀವಿಪಸರಸಿಜ ಭವಾಂಡ ಕೋಟಿಯಲಿ ಪ ತುರುಗಿಪ್ಪ ಬ್ರಹ್ಮರುದ್ರಾದಿ ಜೀವರುಗಳುಹರಿ ನಿನ್ನ ಮಹಿಮೆಯ ಪೇರ್ಮೆಯ ಬಲ್ಲರೆ ಅ.ಪ. ಅತ್ತಿಯ ಮರದಿಂದುದುರುವ ಫಲಂಗಳಮೊತ್ತದಲಿರುತಿಪ್ಪ ಮಶಕಂಗಳುಕತ್ತೆಯ ಬಳಗಗಳೆಲ್ಲವು ಕೂಡಿಕೊಂಡುಅತ್ತಿಯ ತರುವಿನಾದ್ಯಂತವ ಬಲ್ಲವÉ 1 ಐವತ್ತು ಕೋಟಿ ಯೋಜನ ವಿಸ್ತರವಾದಭೂವಲಯದ ತಮ್ಮ ಗೂಡಿನಲಿಆವಾಸವಾಗಿಪ್ಪ ಕ್ಷುದ್ರ ಪಿಪೀಲಿಕಜೀವರು ಧರಣಿಯ ಮೇರೆಯ ಬಲ್ಲರೆ 2 ನೊರಜು ಮೊದಲಾಗಿ ಗರುಡ ಪರಿಯಂತಪರಿಪರಿ ಜಾತಿಯ ಪಕ್ಷಿಗಳು ತೆರದಲಿ ಹಾರುವರಲ್ಲದೆ ಗಗನದ ಪರಿಣಾಮವೆಂತೆಂದು ಬಲ್ಲವೆ ಶ್ರೀ ಕೃಷ್ಣ3
--------------
ವ್ಯಾಸರಾಯರು
ಏಕೆಕಕುಲಾತಿಪಡುವೆ - ಎಲೆ ಮನವೆಪಲೋಕವನೆ ಸಲಹುವ ಶ್ರೀನಿವಾಸನು ನಮ್ಮ |ಸಾಕಲಾರದೆ ಬಿಡುವನೇ - ಮನವೆ ಅಪಆನೆಗಳಿಗೆಯ್ದಾರು ಮಣವಿನಾಹಾರವನು ಅಲ್ಲಿ ತಂದಿತ್ತವರದಾರೊ |ಜೇನುನೊಣ ಮೊದಲಾದ ಕ್ರಿಮಿ - ಕೀಟಗಳಿಗೆಲ್ಲ |ತಾನುಣಿಸದಲೆ ಬಿಡುವನೇ - ಮರುಳೆ 1ಕಲ್ಲಿನೊಳಗಿರುವ ಕಪ್ಪೆಗಳಿಗಾಹಾರವನುಅಲ್ಲಿ ತಂದಿತ್ತವರದಾರೊ |ಎಲ್ಲವನು ತೊರೆದು ಅರಣ್ಯ ಸೇರಿದ್ರ್ದವರ |ಅಲ್ಲಿ ನಡಸದೆ ಬಿಡುವನೇ - ಮರುಳೆ 2ಅಡವಿಯೊಳಗೇ ಪುಟ್ಟುವಾ ಮೃಗಕುಲಕ್ಕೆಲ್ಲಒಡೆಯನಾರುಂಟು ಪೇಳೊ |ಗಿಡದಿಂದ ಗಿಡಕೆಹಾರುವ ಪಕ್ಷಿಗಳಿಗಲ್ಲಿ |ಪಡಿಯ ನಡೆಸದೆ ಬಿಡುವನೇ - ಮರುಳೆ 3ಕಂಡಕಂಡವರ ಕಾಲಿಗೆ ಎರಗಿ ಎಲೆ ಮರುಳೆಮಂಡೆ ದಡ್ಡಾಯಿತಲ್ಲ |ಭಂಡ ಮನವೇ ನೀನು ಕಂಡವರಿಗೆರಗದಿರುಕೊಂಡಾಡಿ ಹರಿಯ ಭಜಿಸೋ - ಮರುಳೆ 4ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನ್ನುಬೆಂಬಿಡದೆ ಸಲುಹುತಿಹನು |ನಂಬು ಶ್ರೀ ಪುರಂದರವಿಠಲನ ಪಾದವನುನಂಬಿದರೆ ಸಲಹದಲೆ ಬಿಡುವನೇ - ಮರುಳೆ 5
--------------
ಪುರಂದರದಾಸರು
ತಲ್ಲಣಿಸದಿರು ಕಂಡ್ಯ ತಾಳು ಮನವೆ ಸ್ವಾಮಿನಿಲ್ಲದಲೆ ರಕ್ಷಿಸುವಸಂದೇಹಬೇಡಪಬೆಟ್ಟದ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆಕಟ್ಟೆ ಕಟ್ಟುತ ನೀರ ಹೊಯ್ವರಾರುಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲೆಕೊಟ್ಟು ರಕ್ಷಿಸುವನು ಇದಕೆಸಂದೇಹಬೇಡ1ಅಡವಿಯೊಳಗಾಡುವ ಮೃಗಜಾತಿ ಪಕ್ಷಿಗಳಿಗೆಅಡಿಗಡಿಗೆ ಆಹಾರವಿತ್ತವರದಾರುಪಡೆದ ಜನಿನಿಯಂತೆ ಸಾರಥಿಯಾಗಿ ತಾಬಿಡದೆ ರಕ್ಷಿಸುವನು ಇದಕೆ ಸಂದೇಹಬೇಡ 2ಕಲ್ಲೊಳಗೆ ಪುಟ್ಟಿ ಕೂಗುವ ಮಂಡೂಕಂಗಳಿಗೆಅಲ್ಲಿ ಹೋಗಿ ಆಹಾರವಿತ್ತವರದಾರುಬಲ್ಲಿದನು ಪುರಂದರವಿಠಲರಾಯನಿಲ್ಲದೇ ರಕ್ಷಿಪನು ಇದಕೆ ಸಂದೇಹಬೇಡ 3
--------------
ಪುರಂದರದಾಸರು
ದ್ವಂದ್ವವೆ ವಸಂತದ ಹಬ್ಬದ್ವಂದ್ವವೆ ಇಹಪರದಲ್ಲಿ ಹಬ್ಬ ಪ.ದ್ವಂದ್ವಾಮೃತ ಕ್ಷೇಮಅಭಯವಸಂತದ್ವಂದ್ವ ಜೀವೇಶರ ತಿಳಿದವ ಶಾಂತದ್ವಂದ್ವದ ನಡೆನುಡಿ ಬಲ್ಲವ ಸಂತದ್ವಂದ್ವವರಿಯದನ ಗತಿಯೆ ವಸಂತ 1ದ್ವಂದ್ವ ಶೀತೋಷ್ಣ ಸಮಾನವ ಕಂಡುದ್ವಂದ್ವ ನಿಂದಾಸ್ತುತಿ ಸರಿಯಿಟ್ಟುಕೊಂಡುದ್ವಂದ್ವವಮಾನವಹಿಡಿದರೆ ಭಂಡುದ್ವಂದ್ವ ಪಕ್ಷಿಗಳ ಬಗೆಯ ಕೇಳಿಕೊಂಡು 2ಫಾಲ್ಗುಣ ಪೌರ್ಣಿಮೆ ಬಂದಿತಿಳೆಗೆಬಾಲಕರೆಲ್ಲ ನೆರೆವುದೊಂದು ‌ಘಳಿಗೆಹೋಳಿಯನಾಡುವ ಸಂಭ್ರಮದೊಳಗೆಕಾಳಗಬೇಡಿರೊ ನಿಮ್ಮ ನಿಮ್ಮೊಳಗೆ3ಅಜೆÕೈಕ್ಯ ಪ್ರತಿಪದ ಹಿಂದಾದರಿಂದಸುಜ್ಞಾನ ದ್ವಿತಿಯಕ್ಕೆ ತೋರುವ ಚಂದ್ರಒಗ್ಗೂಡಿ ಗೆಳೆಯರೊಮ್ಮತದಿಂದಲಗ್ಗೆಕಾರರು ಮುಂದೆ ನಡೆವುದೆ ಚಂದ 4ಭಕ್ತೆಂಬೊ ಪುರದಲ್ಲಿ ಒಂಬತ್ತು ಬೀದಿ ವಿರಕ್ತಿರಂಹಸ ಬ್ರಹ್ಮದ್ಹಾದಿಯ ಐದಿವ್ಯಕ್ತವಾಗುವ ವಸ್ತು ಓದಿಕೆ ಓದಿರಿಕ್ತದ ನುಡಿಗಳು ತಮಸಿನ ಹಾದಿ 5ದಿನಪತಿ ಅಡಗಿರೆ ಮಲಗದೆ ಎದ್ದುಮನೆಯವರನು ಎಚ್ಚರಿಸಬ್ಯಾಡಿ ಸದ್ದುನೆನೆವ ವಿಷಯಗೋಡೆ ಏರುತ್ತ ಬಿದ್ದುಮನೆ ಮನೋವಾರ್ತೆಯ ಕುರುಳನೆ ಕದ್ದು 6ಹಾರುವರ ಕೇರಿಯ ಹೊಗಬ್ಯಾಡಿಕೇಳಿಬೇರೂರವರ ಬಿಟ್ಟು ಬಿಡಿ ದೂರದಲ್ಲಿದೂರುವರೊಡನಾಟ ದುರ್ದೆಶೆಫಲವು ವಸ್ತುದೋರುವ ಮನೆಯೇವೆ ಸರಸ ವೆಗ್ಗಳವು 7ಧೂಳಿ ನೀರುರಿಗಾಳಿ ಬಯಲೊಳಗಾಡಿಮ್ಯಾಲೆ ಮೂರುರಿಯೊಳು ಮತಿಗುಂದಬ್ಯಾಡಿಹಾಳು ತುರುಕರ ಕೇರಿಯೊಳು ನಿಷ್ಫಲವುಜಾಲಗಾರರ ಕೇರಿ ಹೊಕ್ಕರೆ ಫಲವು 8ಹಿಂಚಾದ ಹಿರಿಯರ ಮಾತಲೆ ನಡೆದುವಂಚಕ ಮೂವರ ಸಂಗವ ಕಡಿದುಮಿಂಚುವ ಮಾನ್ಯರ ಪ್ರೀತಿಯ ಪಡೆದುಸಂಚಿತಪ್ರಾರಬ್ಧಾಗಾಮಿಯ ಒಡೆದು9ಮುಚ್ಚಿದ ಕದವೆರಡನು ಮುರಿಹೊಯ್ದುಇಚ್ಛೆ ಮೂರೆಂಬ ನಾಯಿಗಳಜಿಹ್ವೆಕೊಯ್ದುಬೆಚ್ಚದೆ ಮನೆ ಮೆಲ್ಲನೆ ಹೊಗಿರಣ್ಣಸಚ್ಚಿದ ಗೋರಸ ಸೂರ್ಯಾಡಿರಣ್ಣ 10ಏಕಾಧಿಪತಿಯಾಜÕ ಅಭಯವು ಬೇಕುನಾಕು ಝಾವಿನ ರಾತ್ರಿ ನಲವಿರಬೇಕುಪೋಕಕಳ್ಳಾರ್ವರ ಮೆಟ್ಟ್ಯಾಳಬೇಕುಭೂಕಾಂತಗೆ ಸೇವೆಯೊಪ್ಪಿಸಬೇಕು 11ರಮಣನೊಲ್ಲದ ಆರ್ವರ ಸಂಗವಿಡಿದುರಮಿಸುವ ಬುದ್ಧಿಜಾರಿಯ ಗಟ್ಟಿವಿಡಿದುಅಮಿತ ವೈರಾಗ್ಯಹಗ್ಗದಿ ಕೈಯಕಟ್ಟಿಶ್ರೀರಮಣನಂಘ್ರಿಗೆ ಒಪ್ಪಿಸಲು ಕಾರ್ಯ ಗಟ್ಟಿ 12ಎಲ್ಲೆಲ್ಲ್ಯಜ್ಞಾನಾಹಿ ವಿಷಯ ತೇಳುಗಳುಎಲ್ಲೆಲ್ಲಿ ನಿರ್ಜಲಸೃತಿಯ ಬಾವಿಗಳುಎಲ್ಲೆಲ್ಲಿನಿರಯಕಮ್ಮರಿ ಮಿಟ್ಟೆಗಳುಎಲ್ಲ ತಪ್ಪಿಸಿ ಜ್ಞಾನ ಬೆಳದಿಂಗಳೊಳು 13ವ್ಯಾಳ್ಯವರಿತು ತತ್ವಸಂಧಿಯ ಒಲಿದುಸೂಳಿ ಮದೆಂಟರ ಕೈಸೆರೆವಿಡಿದುಕಾಲಾಖ್ಯ ತಳವಾರನಾಳಿಗೆ ಕೊಟ್ಟುಮ್ಯಾಳದ ಗೆಳೆಯರು ಸಂತೋಷಪಟ್ಟು 14ಎಂಬತ್ತು ನಾಲ್ಕು ಲಕ್ಷಾಗಾರ ಹೊಗುತಡೊಂಬಿಯಿಲ್ಲದೆ ಬಂದ ಬನ್ನವಬಡುತಕುಂಭಿಣಿಸುರ ಕುಲ ಭೂಮಿಗೆ ಬಂದುದಂಭ ಮಾಡದಲೆ ಕುರುಳ ಒಯ್ಯಿರೆಂದು 15ರಾಗ ಮತ್ಸರಗೂಡಿದರ ಕುರುಳನೊಟ್ಟಿಭೂಗಗನ ಹೊಗುವ ಕಾಮವಕಟ್ಟಿಯೋಗವಾಗಿರುವ ಹುಬ್ಬಿನ ಕ್ಷೇತ್ರದಲಿಮ್ಯಾಗ ವಿಜ್ಞಾನಗ್ನಿ ಹಾಕಬೇಕಲ್ಲಿ 16ಲೋಭ ಹೋಳಿಕೆಯ ಹೋಳಿಗೆ ತುಪ್ಪ ಸವಿದುಲಾಭಕ್ಕೆ ಕುಣಿಯಲು ವೇತ್ರರು ಹೊಯ್ದುಶೋಭನ ರಸ ಬೊಬ್ಬೆಯ ಸಾಧುಹಿಂಡುತ್ರಿಭುವನಪತಿಕಾಮನಯ್ಯನ ದಂಡು17ಸ್ವರ್ಧುನಿಜನಕನ ಗುಣಗಣಕೀರ್ತಿಊಧ್ರ್ವಸ್ವರದಿ ಹಾಡಿ ಹೊಗಳುವಅರ್ಥಿನಿರ್ಧೂಮಜ್ವಾಲೆಯ ಬೆಳಗಲಿ ಸುತ್ತಿದುರ್ದೇಹಿಗಳ ಕಿವಿಧಾರೆಯ ಕಿತ್ತಿ 18ಅವಿದ್ಯ ಕಾಮ್ಯಕರ್ಮದ ಹೋಳಿ ಸುಟ್ಟುಹ್ಯಾವಿನ ಮೈಯ ಬೂದಿಯ ಮಾಡಿಬಿಟ್ಟುಕೋವಿದರ ಚಾತುರ್ಯಕೆ ಒಡಂಬಟ್ಟು ಚಿದ್ಭಾವ ಮಂದಿರದ ಬ್ರಹ್ಮಕೆ ಲಕ್ಷ್ಯವಿಟ್ಟು 19ಹಂಗಿಲೆ ಬೆಳೆದ ವೃಕ್ಷದ ಮೂಲ ಮುರಿದೂಧ್ರ್ವಾಂಗಕ್ಕೆ ಸುತ್ತುವ ಜಾಣರ ಬಿರಿದುರಂಗು ಮುತ್ತಿನ ಮೂಗುತಿ ಹೆಣ್ಣವಿಡಿದುಶೃಂಗಾರ ಚೇಷ್ಟೆಯ ಮಾಡಿರೊಜಡಿದು20ಬೆಳಗಿನ ಝಾವದಿ ಬೂದಿ ಚಲ್ಲ್ಯಾಡಿಗೆಳೆಯರು ನೆರೆವುದೊಂದೆ ತಾಣ ನೋಡಿಜಲಜಾಕ್ಷನುದ್ಯಮದಂಗಡಿಯಲ್ಲಿನಲಿವ ಸ್ವಾನಂದದೂಟವ ಬೇಡಿಕೊಳ್ಳಿ 21ತಿರುತಿರುಗಿ ಬಂದು ದಣಿದು ನೀವಿಂದುಹರಿಯ ಮೈ ಬೆವರಿನ ಹೊಳೆಯಲ್ಲಿ ಮಿಂದುಥರ ಥರದ್ಹದಿನಾರು ವರ್ಣಗಳಿಂದತರುಣ ತರಣಿಯಂತೆ ಹೊಳೆವುದು ಚಂದ 22ಆನಂದಮಯವಾಸುದೇವನ ಕಂಡುಆನಂದಪುರದಿ ಭಕ್ತಿಯ ನೆರೆಗೊಂಡುಆನಂದ ತೀರ್ಥಗುರು ಕೃಪೆಯಿಂದಸ್ವಾನಂದದೋಕುಳಿಯಾಡುವ ಚಂದ 23ಈ ವಿಧ ಅಧ್ಯಾತ್ಮ ಹೋಳಿಯ ಭೇದಭಾವುಕ ಜನರಿಗೆ ಪರಮಾಹ್ಲಾದದೇವ ಋಷಿಕುಲದೈವ ಮುಕುಂದಕಾವನು ಕರುಣಾಬ್ಧಿಕೇಳಿಗೋವಿಂದ24ವೇದನ ತಂದ ಹಯಾಸ್ಯನ ಹೋಳಿಭೂಧರಧರಿಸಿದಮರ ಕಾರ್ಯಕೇಳಿಮೇದಿನ ತರಲಡ್ಡಾದವನೊಮ್ಮೆ ಹೋಳಿ ಪ್ರಹ್ಲಾದನಿಷ್ಠೆಗೆಹರಿಉದಿಸಿದಕೇಳಿ25ನಾನೆಂಬೊ ದಾನವೇಂದ್ರನ ಮದ ಹೋಳಿಹೀನರಿಗಾಗಿ ಕೊಡಲಿ ಹೊತ್ತಕೇಳಿಜಾನಕಿ ತಂದ ದಶಾಸ್ಯನ ಹೋಳಿಮಾನಿನಿಯರಾಳ್ದ ವಿಡಂಬನಕೇಳಿ26ಸನ್ಮಾರ್ಗ ಬಿಟ್ಟ ಖಳರ ಮತಿ ಹೋಳಿಉನ್ಮತ್ತಕಲಿಯನರಸಿ ಕೊಂದಕೇಳಿಚಿನ್ಮಯಮೂರ್ತಿ ಭೂಭಾರವ ಹೋಳಿಜನ್ಮಿಸಿಬಹುದೆಲ್ಲ ಮೋಹನಕೇಳಿ27ಅನಂತದುರಿತರಾಶಿಗಳನ್ನು ಹೋಳಿಆನಂದ ಸುಖವೀವ ನೆನೆದರೆಕೇಳಿಅನಂತ ಅನವದ್ಯಗುಣ ಪರಿಪೂರ್ಣಅನಂತಾದ್ಭುತಕರ್ಮದೀನ ದಯಾರ್ಣ28ಈಪರಿವಿಜ್ಞಾನವಸಂತದಾಟಚೌಪದಿ ರತ್ನಮಾಲಿಕೆ ಮಾಡಿ ಪಾಠಶ್ರೀಪ್ರಸನ್ವೆಂಕಟ ಕಿಟಿರೂಪಿ ಕೃಷ್ಣತಾ ಪರಿಪಾಲಿಪ ಪುರುಷವರಿಷ್ಠ 29
--------------
ಪ್ರಸನ್ನವೆಂಕಟದಾಸರು
ನಿನ್ನನಾಶ್ರಯಿಸುವೆ - ನಿಗಮಗೋಚರನಿತ್ಯಬೆನ್ನ ಬಿಡದಲೆ ಕಾಯೊ ಮನದಿಷ್ಟವೀಯೋ ಪಕುಂದಣದ ಆಶ್ರಯವು ನವರತ್ನಗಳಿಗೆಲ್ಲಚಂದಿರನ ಆಶ್ರಯ ಚಕೋರಗಳಿಗೆ ||ಕಂದರ್ಪನಾಶ್ರಯ ವಸಂತ ಕಾಲಕ್ಕೆ ಗೋವಿಂದ ನಿನ್ನಾಶ್ರಯವು ಮರಣಕಾಲದೊಳು 1ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವುಪುಣ್ಯನದಿಗಳು ಋಷಿಗಳಿಂಗೆ ಆಶ್ರಯವು ||ಕಣ್ಣಿಲ್ಲದಾತನಿಗೆ ಕೈಗೋಲಿನಾಶ್ರಯವುಎನ್ನಿಷ್ಟ ಪಡೆಯುವರೆ ನಿನ್ನ ಆಶ್ರಯವು 2ಪತಿವ್ರತಾವನಿತೆಗೆ ಪತಿಯೊಂದೆ ಆಶ್ರಯವುಯತಿಗಳಿಗನುಶ್ರುತದಿ ಪ್ರಣವದಾಶ್ರಯವು ||ಮತಿವಂತನಿಗೆಹರಿಸ್ತುತಿಗಳೇ ಆಶ್ರಯವುಹಿತವಹುದು ಪುರಂದರವಿಠಲನಾಶ್ರಯವು 3
--------------
ಪುರಂದರದಾಸರು