ಒಟ್ಟು 20 ಕಡೆಗಳಲ್ಲಿ , 10 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ಎನ್ನಿರೊ - ಶ್ರೀ ನರಹರಿ |ನಾರಾಯಣ ಎನ್ನಿರೊ ಪ.ನಾರಾಯಣನೆಂದು ಅಜಮಿಳಕೈವಲ್ಯ |ಸೂರೆಗೊಂಡನೆಂಬ ಸುದ್ದಿಯನರಿಯಿರಾ ? ಅಪಚೋರರ ಭಯ ಎಲ್ಲವೊ - ಇದಕೆ ನೋಡೈ - |ದಾರರಂಜಿಕೆ ಇಲ್ಲವೊ ||ಊರನಾಳುವ ದೊರೆಯ ಭೀತಿ ಇನಿತಿಲ್ಲವೊ ||ಘೋರ ಪಾತಕವೆಲ್ಲ ಹಾರಬಿಡುವುದಿದು 1ಕಾಶಿಗೆ ಹೋಗಲೇಕೆ - ಕಾವಡಿ ಹೊತ್ತು - |ಬೇಸತ್ತು ತಿರುಗಲೇಕೆ |ವಾಸುದೇವನ ನಾಮ ವರ್ಣಿಸಿದವರಿಗೆ |ಕ್ಲೇಶವೆಂಬುವುದಿದು ಲೇಶಮಾತ್ರವು ಇಲ್ಲ 2ಸ್ನಾನವ ಮಾಡಲೇಕೆ - ಸಂಧ್ಯಾವಂದನೆ - |ಮೌನ ಮಂತ್ರಗಳೇತಕೆ ||ದೀನರಕ್ಷಕ ಬೆಟ್ಟದೊಡೆಯನಾದವನ |ಧ್ಯಾನಕೆ ಸಮವುಂಟೆ ಪುರಂದರವಿಠಲನ 3
--------------
ಪುರಂದರದಾಸರು
ಮುಂಚೆ ಕೈವಿಡಿದಂತೆ ಮಿಂಚೆನ್ನ ಎದೆಗುಡಿಲಿಪಂಚಬಾಣನ ಜನಕನೆ ಪ.ಸಂಚಿತಾರಬ್ಧಾಗಾಮಿ ಸಂಚಂಚಲಿಪ ಮನದ ಪ್ರಪಂಚವನು ಬಿಡಿಸು ತಂದೆ ನೊಂದೆ ಅ.ಪ.ಭವಬವಣೆಗಳನು ಅನುಭವಿಸಿದನ ಸತ್ಕುಲೋದ್ಭವನ ಮಾಡಿದ ಕೃಪೆಗೆ ನವಭಕುತಿ ಕಲಿಸು ಎನ್ನವಗುಣವ ಬಿಡಿಸು ದಾನವವೈರಿನರಮುರಾರಿಶೌರಿ1ಲೇಸು ಹೊಲ್ಲೆಯನರಿಯೆ ಲೇಶ ನಿಷ್ಠೆಯನರಿಯೆ ನಾಲೇಶದೊಳು ನಿನ್ನ ಮರೆದೆ ದಾಸಾಭಿಮಾನಿಯೆ ಸದಾ ಸರ್ವಕಾಲದಿ ಉದಾಸೀನವ ಮಾಡಬೇಡೈ ನೋಡೈ 2ಸ್ಮøತಿಯೊಳಗೆ ಕೂಡಿ ವಿಸ್ಮøತಿಯ ಕೂಡೋಡಾಡಿಸ್ಮøತಿದಾರಿ ಕೊಳದು ಮನವು ಸ್ಮøತಿವಂದ್ಯ ಪ್ರಸನ್ವೆಂಕಟಸ್ಮಿತವದನದಾತಅಸ್ಮತ್ ಪಾಪ ಪಂಕಶೋಷ ನಿರ್ದೋಷ3
--------------
ಪ್ರಸನ್ನವೆಂಕಟದಾಸರು