ಒಟ್ಟು 128 ಕಡೆಗಳಲ್ಲಿ , 29 ದಾಸರು , 121 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ಬೇಕಾಗಿತ್ತೊ ನಿನಗೆ ಈ ಆಟಲೋಕೇಶ ಸಾಕಯ್ಯ ಇಲಿ ಬೆಕ್ಕಿನಾಟಾ ಪ ಸುಷ್ಟು ಜಲಧಿಶಯನ ಬಿಸುಟಿ ಬಿಸಲ್ಯಾಕೆಸೃಷ್ಟಿಪುದು ಮೊದಲ್ಯಾಕೆ ಸೃಷ್ಟಿಸಲು ಪ್ರಾಣಿಗಳಕಷ್ಟ ಪಡಿಸುವುದ್ಯಾಕೆ ಕಷ್ಟವನು ನೋಡಿತುಷ್ಟಪಡುವುದು ಯಾಕೆ ಇಷ್ಟಕೆ ಬಯಕೆ 1 ಸ್ವರ್ಗ ನರಕಗಳೇಕೆ ಜನ್ಮ ಜನ್ಮಾಂತರಕೆವರ್ಗ ಮಾಡುವುದೇಕೆ ಪಾಪಪುಣ್ಯಗಳೇಕೆದುರ್ಗಮದ ವೈಕುಂಠದಾಸೆ ತೋರುವುದೇಕೆನಿರ್ಗುಣನೆ ಸಲ್ಲದಿ ಉದ್ಯೋಗವ್ಯಾಕೆ 2 ಉದಧಿಶಯನದೊಳಾತ್ಮಾನಂದದಲಿ ಮುಳುಗಿಹೃದಯದೊಳು ನೀನೊಂದು ನೀನೇಯೇ ನೀನಾಗಿಮೋದ ಪಡುವುದು ಬಿಟ್ಟು ವೀರನಾರಾಯಣನೆಗದುಗಿನೊಳು ಬಂದಿಲ್ಲಿ ನಿಂತಿರುವುದೇಕೇ 3
--------------
ವೀರನಾರಾಯಣ
ಏನು ಕಾರಣ ಬಂದೆ ಗಂಗೆ | ನಾನೇನು ಪುಣ್ಯವನು ಮಾಡಿದವನಲ್ಲ ಪ ಕಾಸೀಪುರದಿಂದಲಿ ದೇಶ ನೋಡಲು ಬಂದ್ಯೋ | ಬೀಸಿ ಬಿಸುಟುವಂಥ ಅಸ್ಥಿಗಾರದೆ ಒಂದ್ಯೋ | ದಾಸರ ಮಹಿಮೆಯನು ನೋಡುವೆನೆಂದು ಬಂದ್ಯೋ | ದೋಷವರ್ಜಿತ ವಾರಣಾಸಿ ಕಡಿಯದಲೆ | ಲೇಸಾಗಿ ತಿಳಿಪುವದು ಭೀಷ್ಮನ ಜನನೀ 1 ತಿಲನೀರು ಕುಡಿದು ಧರಿಸಲಾರದೆ ಬಂದ್ಯೋ | ಮಲಜನರ ದೋಷವನು ಕಳೆವೆನೆಂದು ಬಂದ್ಯೋ | ಕಲಿಯುಗಕೆ ಈ ಕೃಷ್ಣಾ ಅಧೀನಳೆಂದು ಬಂದ್ಯೋ | ಸುಲಭ ತ್ರಿದದೇಶ್ವರಿ ಗಂಗೆ ತಡೆಯದಲೆ | ನೀರಜ ನಯನೇ 2 ನಿತ್ಯ ಕರ್ಮಗಳು ನೋಡಲಿ ಬಂದ್ಯೋ | ಮಜ್ಜನವ ಮಾಡಿಸಿ ಎನ್ನ ಪೊರಿಯಲು ಬಂದ್ಯೋ | ಮೂಜಗದೊಳು ಪೆಸೆರಾಗಿಪ್ಪೆನೆಂದು ಬಂದ್ಯೋ | ನಿರ್ಜನ ತಟನಿ ನಿರ್ಗುಣಸಾಂದ್ರೆ ತಡಿಯದಲೆ | ನಿಜವ ತಿಳುಪುವದು ವಿಜಯವಿಠ್ಠಲಸುತೆ 3
--------------
ವಿಜಯದಾಸ
ಏನೆಂದ್ಹೇಳಲಿ ಕಂಡದನುಭವನಾ ಅನುಭವನಾ ಸ್ವಾನಂದ ಸುಖಸದೋದಿತ ಸುಸಾಧನ ಧ್ರುವ ಘಮಿಘಮಿಸುವ ರವಿಕೋಟಿತೇಜನ ಠವಿಠವಿಸುದ ಕಂಡೆ ದಿವ್ಯಸ್ವರೂಪನ ಸವಿಸವಿ ಸುರುವ ಸುಖಸಂಬ್ರಹ್ಮನನು ಸೇವಿಸುವದು ಕಂಡೆ ಶುಕಮುನಿಜನ 1 ಥಳಥಳಿಸುವ ತೇಜೋಮಯ ನಿಧಾನ ಝಳಝಳಿಸುದು ಕಂಡೆ ಹೊಳೆವ ಪ್ರಕಾಶನ ಒಳಹೊರಗೊಂದೇಪರಿ ಭಾಸುವ ಗುಣ ಹೇಳಲಿನ್ನೇನದ ಸುಳವ್ಹು ಸೂಕ್ಷ್ಮನ 2 ಸಣ್ಣದೊಡ್ಡಾರೊಳಿಹ್ಯ ವಸ್ತುನಿರ್ಗುಣ ಬಣ್ಣಬಣ್ಣದಿ ಕಂಡ ಗುರುಸ್ವರೂಪನ ಕಣ್ಣಾರೆ ಕಂಡೆ ಸದ್ಗುರು ಚರಣ ಧನ್ಯಧನ್ಯವಾಯಿತು ಮಹಿಪತಿ ಜೀವನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಒಂದಿಲ್ಲದ ಮೇಲೆರಡುಂಟೇ ಭಕ್ತಿ ಒಂದಲ್ಲದೆ ಹರಿಯೊಲವುಟೇ ಪ ರುಚಿ ಔಷಧಿಯುಂಟೇ ನೊಂದಲ್ಲದೆ ರಂಗಾ ಎಂಬುವುದುಂಟೇ ಅ.ಪ ಗಿಡಮರವಾಗದೆ ಕೃಮಿಯಾಗುವೆನೇ ಅಡವಿಯೊಳಿರದೆ ಗೋವಾಗುವೆನೇ ಪಡೆಯದೆ ಪುಣ್ಯವ ನರನಾಗುವೆನೇ ಮೃಡನ ಪೂಜಿಸದೇ ದ್ವಿಜನಾಗುವೆನೇ 1 ಸುಗುಣವಿರದೆ ಮಾತಿನಿದಾಗುವುದೇ ಸೊಗಮಿಲ್ಲದೆ ಬಾಯಿ ನಗೆದೋರುವುದೇ ಸುಗುಣವಿಲ್ಲದೆ ನಿರ್ಗುಣಬಹುದೇ ಮುಗಿಲಿಲ್ಲದೆ ಮಳೆ ಧರೆಗೆ ಬೀಳುವುದೇ 2 ತಂಗಿದ್ದಲ್ಲದೆ ಭಾವ ಎಂಬೋದುಂಟೋ ಹಂಗಿ[ಗ]ಲ್ಲದೆ ಮರೆ ಹಿತಕುಂಟೋ ತಂಗಿನೋಡಲು ಭಾವ ಮರೆಯಹುದುಂಟೋ ಮಾಂಗಿರಿರಂಗ ನೀನೆನ್ನಯ ನಂಟೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಂಡೆನೋ ಕಂಡೆ ಗುರುಚಿದಂಬರನಾ ತನು ಗೊಂಡು ಭೂಮಂಡಲದೊಳು ಚರಿಸುವನಾ ಪ ಪರಮಾತ್ಮ ಪರತತ್ವವನು ತಿಳಿದವನ ಧರೆಯ ಜನರನÀು ಪಾವನವ ಮಾಡುವನಾ ಕರುಣ ಸಮುದ್ರ ದೀನರ ದಯಾಪರನಾ ನೆರೆನಂಬಿದವರಿಗೆ ವರವ ಕೊಡುವನಾ 1 ಮಳೆ ಛಳಿ ಬಿಸಿಲು ಹಸಿವಿಗಂಜದವನ ಕಲ್ಲು ಮುಳ್ಳು ಬೆಟ್ಟವೆನ್ನದೆ ಚರಿಸುವನ ನೆಲೆಗಾಣದಂತಹ ಅಪಾರ ಮಹಿಮನು ಕಲಿಮನದೊಡ್ಡದಾನಂದ ನಿರ್ಗುಣನ 2 ಸ್ಮರಹರನಂತೆ ಭಸಿತ ದಿಗಂಬರನಾ ಕೆರೆಬಾವಿ ದೇವಾಲಯವನು ಕಟ್ಟಿಸುವನ ಪುರಹರನಂತೆ ಢಿಕ್ಕನೆ ಧರಿಸಿಹನ ನರ ಗುರಿಗಳು ಬಲ್ಲರೇನೋ ಇಂಥವನಾ 3 ಯಮನಿಯಮ ಅಷ್ಟಾಂಗ ನಿರತನ ಕಮಲಾರಿ ಪಿತನಂತೆ ಗಂಭೀರದವನ ಹಿಮವಂತನಂತೆ ಧೈರ್ಯದೊಳಿರುತಿಹನ ಕಮಲ ಬಾಂಧವನಂತೆ ತೇಜದಿಂದಿರುತಿಹನ 4 ಅರಿಗಳನರುವರ ನುಗ್ಗೊತ್ತಿದವನ ಕರಣೇಂದ್ರಿಯಂಗಳ ನಿಗ್ರಹಿಸಿದವನ ಪರಮ ದಾಸಗೆ ಆಲಿಂಗನವನಿತ್ತನಾ ಸ್ಥಿರ ಚಿದಾನಂದ ಪುರದ ದಿಗಂಬರನ 5
--------------
ಕವಿ ಪರಮದೇವದಾಸರು
ಕಂಡೆವಯ್ಯ ಗುರುನಿಮ್ಮ ಶ್ರೀಪಾದ ಸಂದಿಸಿತು ಎನ್ನ ಭೇದಾಭೇದ ಮಂಡಲದೊಳಾಯಿತಯ್ಯ ಸುಬೋಧ ಕೊಂಡಾಡುವೆ ಕೀರ್ತಿ ಅಖಂಡವಾದ 1 ಸ್ಮರಿಸುವೆ ನಿಮ್ಮ ಕ್ಷಣ ಕ್ಷಣ ಸ್ಮರಿಸುವೆ ನಿಮ್ಮ ಶ್ರೀಚರಣ ಸ್ಮರಿಸುವೆ ನಿಮ್ಮ ಸಗುಣ ನಿರ್ಗುಣ ಅನುದಿನ 2 ಸ್ಮರಿಸದೆ ನಿಮ್ಮ ಸ್ವರೂಪ ನಿರ್ವಾಣ ಅರಘಳಿಗಿರಲಾರದೆನ್ನ ಪ್ರಾಣ ಪಥ ನಿಮ್ಮ ವಿನಾ ಮೊರೆ ಹೊಕ್ಕಿದೆ ನಾ ಪರಿಪೂರ್ಣ 3 ಆವಾವ ಪರಿಯಲಿನಿಮ್ಮ ಕೀರ್ತಿ ದಿವಾರಾತ್ರೆಯಲಿ ಕೇಳುವ ಸುವಾರ್ತಿ ಭಾವಿಸುವೆ ನಿಮ್ಮ ನಿಜಾನಂದ ಮೂರ್ತಿ ಜೀವನ ಮಾಡುವೆÀ ನಾ ಮಂಗಳಾರ್ತಿ 4 ಬಾಹ್ಯಾಂತ್ರ ನಿಮ್ಮ ಧ್ಯಾನಿಸುವೆ ನಿತ್ಯಾ ಮಹಾಗುರು ನಿಮ್ಮ ಕೃಪೆವಿದು ಸತ್ಯ ಗುಹ್ಯ ಮಹಾವಾಕ್ಯವಾಯಿತು ಪಥ್ಯ ಮಹಿಪತಿ ಆದ ನೋಡಿ ತಾ ಕೃತಕೃತ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಪಟನಾಟಕನೀತ ಕೃಪಾಸಿಂಧು ಸಾಕ್ಷಾತ ಧ್ರುವ ಸಗುಣ ಸುಪಥ ದೋರಿ ನಿರ್ಗುಣನಾಗಿಹ ಶ್ರೀಹರಿ ಅಗಣಿತ ಗುಣದೋರುವ ಅನೇಕಾಪರಿ ಜಗದೊಳು ಮುರಾರಿ 1 ಹಿಡಿದೇನೆಂದರೆ ಸಿಲುಕ ಗೂಡಿನೊಳಗೆ ಮಾಡಿಹ್ಯ ಮಲಕ ನೋಡೇನೆಂದರೆ ಭಕ್ತಿಗೆ ನಿಲುಕ ಒಡಿಯ ಗೋಪಾಲಕ 2 ಕುಲಗಳ್ಳಗೆ ಕೊಡುವ ಮ್ಯಾಲೆ ಹುಯಲು ತಾ ಮಾಡುವ ಬಲುಖಳ ದೈವ 3 ಭಾಷೆ ಕೊಟ್ಟರೆ ತಪ್ಪ ಋಷಿ ಮುನಿಗಳ ಪಾಲಿಪ ಭಾಸುತ ಭಕ್ತರ ಹೃದಯದೊಳಗಿಪ್ಪ ಭಾಸ್ಕರ ಸ್ವರೂಪ 4 ಗುಹ್ಯ ಆಗೋಚರ ಸೋಹ್ಯ ತಿಳಿಯಲು ಸಾಕ್ಷಾತ್ಕಾರ ಇಹಪರ ಸಹಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಲಕಾಲದಲಿ ಕೇಶವನೆನ್ನಿರೊ ಬಾಲ ಮುಕುಂದ ಮಾಧವನೆನ್ನಿರೊ ಧ್ರುವ ಉದಯಕಾಲದಲಿ ಅನಂತಮಹಿಮನೆನ್ನಿ ಮಧ್ಯಾಹ್ನದಲಿ ಪದ್ಮನಾ¨sನೆನ್ನಿ ಸಂಧ್ಯಾಸಾಯಂಕಾಲದಲಿ ಶ್ರೀಧರನೆನ್ನಿ ಸದಾ ಕಾಲದಲಿ ಶ್ರೀ ಹರಿಯೆನ್ನಿರೊ 1 ಏಳುತ ಮಚ್ಛಾವತಾರ ಅಚ್ಯುತನೆನ್ನಿ ಮಲಗುತ ಶೇಷಶಯನನೆನ್ನಿರೊ ಹೇಳುತ ವಿಷ್ಣುವರಾಹವತಾರನೆನ್ನಿ ಕೇಳುತ ಕೃಷ್ಣಾವತಾರನೆನ್ನಿ 2 ನಡೆಯುತ ಸುಗುಣ ನಿರ್ಗುಣ ಸರ್ವೋತ್ತಮನೆನ್ನಿ ನುಡಿಯುತ ನಾರಯಣನೆನ್ನಿರೊ ಮಾಡುತ ಕೃಷ್ಣನಿರ್ಮಿತ ದಾಮೋದರನೆನ್ನಿ ಕೂಡುತ ಕೂರ್ಮಾವತಾರನೆನ್ನಿ3 ಆಡುತ ಗರುಡವಾಹನ ತ್ರಿವಿಕ್ರಮನೆನ್ನಿ ಬೇಡುತ ಸ್ವಾಮಿ ವಾಮನನೆನ್ನಿರೊ ನೋಡುತ ವಾರಿಜನೇತ್ರ ಪ್ರಸಿದ್ದನೆನ್ನಿ ಪಾಡುತ ಪರಮಾತ್ಮನೆನ್ನಿರೊ 4 ಉದ್ಯೋಗದಲಿ ಸಹಕಾರನಿರುದ್ದನೆನ್ನಿ ಉದರ ಕಾಯದಲಿ ಉಪೇಂದ್ರನೆನ್ನಿ ಮೇದಿನೊಯೊಳು ಹರಿಮಧುಸೂದನನೆನ್ನಿ ಆದಿ ಅಂತಿಮ ಅಧೋಕ್ಷಜನೆನ್ನಿರೊ 5 ಹೃದಯಕಮಲದೊಳು ಹೃಷೀಕೇಶನು ಎನ್ನಿ ಶಬ್ದಜಿಹ್ವೆಲಿ ಜನಾರ್ಧನನೆನ್ನಿರೊ ಬುದ್ಧಿಯಲಿ ಸಿದ್ಧಬೌದ್ದಾವತಾರನೆನ್ನಿ ಅದಿಅನಾದಿ ಗೋವಿಂದನೆನ್ನಿ 6 ಅನುದಿನ ಮನದೊಳು ಘನಮಹಿಮನು ಎನ್ನಿ ತನುವಿನೊಳು ಪುರುಷೋತ್ತಮ ನಾನೆನ್ನಿ ಅನ್ನವುದಕ ಸೇವಿಸುವ ಹರಿಭೋಕ್ತನೆನ್ನಿ ಘನಭೂಷಣದಿ ಸಂಕರುಷಣನೆನ್ನಿ 7 ಸತಿಪತಿ ಸಂಯೋಗದಲಿ ಪ್ರದ್ಯುಮ್ನನೆನ್ನಿ ಪತಿತಪಾವನ ಪರಬ್ರಹ್ಮನೆನ್ನಿ ಭಕ್ತವತ್ಸಲ ನರಸಿಂಹಾವತಾರನೆನ್ನಿ ಮುಕ್ತಿದಾಯಕ ದೇವೋತ್ತಮನೆನ್ನಿರೊ 8 ಪಾವನಮೂರುತಿ ಪರಶುರಾಮನೆನ್ನಿ ಜೀವಸಂಜೀವ ಶ್ರೀ ರಾಮನೆನ್ನಿ ಭವಭಯನಾಶ ಕಲ್ಕ್ಯಾವತಾರನೆನ್ನಿ ಮಹಿಪತಿಗುರು ವಾಸುದೇವನೆನ್ನಿ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಲು ತೊಳೆದವನೊಬ್ಬ ತೊಳೆಸಿಕೊಂಡವನೊಬ್ಬ ಮೌಳಿ ಮೇಲಾಜಲವ ಸತತ ಧರಿಸಿದನೊಬ್ಬ ಪಾಲಿಸುವ ಪ್ರಭುವೊಬ್ಬ ಕೊಲುವ ತಳವಾರನೊಬ್ಬ ಮೂರ್ಲೋಕವರಿಯೆ ಪುಟ್ಟಿಸಿದ ಪಿತನೊಬ್ಬ ಆಲೋಚನೆಯ ಬಲ್ಲವಗೆ ಸಂಶಯ ಸಲ್ಲ ಮಾಲೆಯನು ಮಹಲಕ್ಷುಮಿ ಹಯವದನಗಿತ್ತಳಾಗಿ 1 ರಾವಣನ ಕೊಂದ ಪಾಪವ ಕಳೆಯಬೇಕೆಂದು ದೇವ ರಘುಪತಿ ಸದಾಶಿವನ ಪೂಜಿಸಿದ ಗಡಾ ಆ ವಿಧಿಯ ಒಂದು ತಲೆಯನು ಕಡಿದ ಮಾತ್ರದಿಂದ ಆವಾಗ ಕರದಲ್ಲಿ ಇಹ ಕಪಾಲವ ಕಾಣನೆ ದಾವಘದೊಳು ಪೊರಳುವನ ದಾವಾತ ಭಜಿಸುವನು ಜೀವರಿಗೆ ಉಳ್ಳಷ್ಟು ವಿವೇಕ ಹಯವದನಗಿಲ್ಲವೆ 2 ರಾಮಾಯಣದ ಕತೆಯು ಮಹಾಪುಣ್ಯ ಕಥೆಯು ಗಡಾ ರಾಮ ರಾವಣನ ಕೊಂದದ್ದು ಮಹಾಪಾಪ ಗಡಾ ಆ ಮನುಮುನಿಗಳೆಲ್ಲ ಪಾಪಕಂಗೀಕರಿಸಿದರೆ ಸ್ವಾಮಿಯು ಲಯದಿ ಬೊಮ್ಮನ ಮೊದಲು ಕೊಲಿಸದೆ ಧೀಮಂತ ಹಯವದನ ಕೊಂದ ಹಿರಣ್ಯಕ ಮುಖ್ಯ ತಾಮಸ ದಿತಿಜರು ಕಶ್ಯಪ ಋಷಿ ಸುತರಲ್ಲವೆ3 ಶ್ರುತಿಯಿವ ಕರ್ಮಣಾನೋಕನೀಯ ಎಂದು ತುತಿಸುತಿರೆ ನಿಮ್ಮ ನಿರ್ಗುಣ ಬೊಮ್ಮಗೆ ಕರ್ಮವುಂಟೆ ಕ್ಷಿತಿಯೊಳಗೆ ರಾವಣನ ವಧೆಯ ಮಾಡಿದ ಸೇತುಪತಿಯ ಪಾವನನೆನಲು ಅವನ ಕೊಂದವನ ಪತಿತಪಾವನನೆಂಬುದೆ ಕುಚಿತ್ತಯುಕುತಿಯು ಸತತ ಹಯವದನನೊಬ್ಬನೆ ಶುದ್ಧ ಕಾಣಿರೊ 4 ಒಂದು ಕಡೆಯಲಿ ವಿಭೀಷಣನ ಪ್ರತಿಷ್ಠಿಸಿದನು ಮ- ತ್ತೊಂದು ಕಡೆಯಲಿ ಸದಾಶಿವನ ಪೂಜಿಸಿದ ಇಂ- ತೆಂದು ಪುರಾಣಗಳು ಕೂಗುತಿವೆ ತ್ರಾಸಿನೊಳು ಹೊಂದಿಸಿ ಸಮನೆಂದು ತೂಗಿ ತೋರು ಮದದಲಿ ಸಂದೇಹ ಸಲ್ಲ ಹಯವದನ ರಘುಪತಿಗಿಬ್ಬರು ಸಂದ ಭಕುತರೆಂಬುದು ಸಲೆ ಸುಪ್ರಸಿದ್ಧ 5 ಸೇತುವೆಯ ಕಂಡ ನರರಿಗೆ ಬ್ರಹ್ಮಹತ್ಯಾದಿ ಪಾತಕವು ಬಿಡುವುದೆಂಬ ಶ್ರುತಿಯ ಮನ್ನಿಸಲು ಖ್ಯಾತ ಬೊಮ್ಮನ ತಲೆಯ ಕಡಿಯೆ ಕರದಲಿಕೊಟ್ಟ ತಾ- ಸುಕೃತ ಸೇತುಮುಖದಿಂದ ಸೀತೆಯರಸನು ಶಿವನ ನಿಲ್ಲಿಸಿ ಪ್ರತಿಷ್ಠಾಪಿಸಿದ ಜಗನ್ನಾಥ ಹಯವದನ ಭಕ್ತರಬಂಧು ಕಾಣಿರೊ 6 ರಾಮ ಶ್ರೀರಾಮರಾಮೇತಿ ರಮೆಯೆಂಬ ಆ ಮಹಾದೇವ ಭಗವದ್ಭಕ್ತನಲ್ಲವೆ ಸ್ವಾಮಿ ತನ್ನ ಭಕ್ತರÀನು ಪ್ರತಿಷ್ಠಿಸಿದ ನಿ- ಸ್ಸೀಮ ಕರುಣಾಂಬುಧಿ ಮಹಾಮಹಿಮನೆಂಬರು ಭ್ರಾಮಕದ ನುಡಿಗೆ ಮರುಳಾಗದಿರು ಹಯವದನ ರಾಮಚಂದ್ರನೆ ಕಾಶಿಯ ತಾರಕಬೊಮ್ಮ ಕಾಣಿರೊ 7 ಕಾಶಿಯಲಿ ರಾಮಮಂತ್ರೋಪದೇಶವ ಮಾಳ್ಪ ಈಶ ಜಾಣರ ಮತದಿ ಜಗಕೆ ಗುರುವೆಂತೆಂಬ ಆ ಶಿವನ ಮಂತ್ರದೇವತೆ ತಾರಕಬೊಮ್ಮಯೆನಿಪ ವಾಸುದೇವನೆ ಜಗಕೆ ಪರದೈವ ಕಾಣಿರೊ ಈ ಸುತತ್ವÀವ ಪೇಳ್ವ ಹರಗೆ ನಮ್ಮ ಹಯವದನ ಏಸುಮನ್ನಣೆ ಮಾಡಿದರುಚಿತ ಕಾಣಿರೊ 8 ಕರವ ಶಿರದ ಮೇಲೆ ಇರಿಸಬಂದ ಖಳಗಂಜಿ ಹರ ಸಕಲ ಸುರೇಶ್ವರರ ಅರಮನೆಗಳಿಗೆ ಪೋಗಿ ಪರಿಹರವ ಕಾಣದೆ ನಮ್ಮ ಸಿರಿವರನ ಮರೆಹೊಗಲು ಪÀರಿಣಾಮವನು ಪೊರೆದ ಗಡಾ ಶರಣರಕ್ಷಕನೆಂಬ ಬಿರುದುಳ್ಳ ಹಯವದನ ಹರಿಯಲ್ಲದೆ ಪಿರಿದೊಂದು ಪರದೈವವಿಲ್ಲವಯ್ಯ 9 ರೋಮಕೋಟಿಲಿಂಗನೆನಿಸಿದ ಹನುಮನೊಂದು ರೋಮಕೆ ಕೋಟಿ ಶಿವರ ಮಾಡುವ ಶಕ್ತ ಕಾಣಿರೊ ಆ ಮಹಾತ್ಮನ ತನ್ನ ಆಳುಮಾಡಿ ನಡೆಸಿಕೊಂಡ ರಾಮಚಂದ್ರನೆ ಜಗಕ್ಕೆ ಪರದೈವ ಕಾಣಿರೊ ಸ್ವಾಮಿ ಹಯವದನ ವೇದವ ತಂದು ಕಮಲಜನ ಕಾಮಿತವನಿತ್ತನಾಗಿ ಅವನೆ ಜಗದೊಡೆಯ 10 ನೂರು ರುದ್ರರು ಪೇಳೆ ಕಾರ್ಯವಾದರೇನವರು ಈರೇಳು ಜಗವ ಸಂಹರಿಸಲರಿಯರು ಗಡಾ ಕಾರ್ಯವಿಲ್ಲದ ಶಿವರ ಪೇಳಲದ್ವೈತಮತ ಹಾರಿಹೋಗದೆ ಬರಿದೆ ಹಲವು ಹಂಬಲಿಸದೆ ಶ್ರೀರಮಣ ಹಯವದನನೊಡಂಬಟ್ಟನಿ ಬರನು ದೂರ ಕಳಚಿದನೆಂದು ಪೂರ್ವದವರನೆ ನಂಬು 11 ಯಾತ್ರೆಯ ಮಾಡಿಸಿಕೊಂಡು ಹರ ಹಿರಿಯ ತಾನಾಗಿ ಯುಕ್ತಿ ಬಾಧಕವಾಯಿತ್ತು ಹರಿಹರರೊಳೈಕ್ಯ ಚಿತ್ರ ನಿನ್ನ ಮತಕೆ ನೀನೆ ಶತ್ರುವಾದೆ ಪ್ರತ್ಯುತ್ತರವ ಪೇಳೆ ಪರಾಜಯ ಬಾರದಿಹುದೆ ಮತ್ತೆ ನೆನೆಯೊ ಶ್ರೀಹಯವದನಗಿದು ಲೀಲೆಯಾದರೆ ಸತ್ವ ಹೆಚ್ಚಿತು ಸರ್ವೋತ್ತಮನೆಂಬ ಶ್ರುತಿಗೆ 12 ವಂದ್ಯಮಾನಂ ಪಿತಾನಾಂ ಪ್ರತಿ ಪ್ರಮಾಣಂ ಎಂದು ರುದ್ರನ ಕೂಡೆ ಶ್ರುತಿ ಪೇಳಿತಾಗಿ ತಂದೆ ಮಕ್ಕಳ ಮನೆಗೆ ಪೋದಂತೆ ಪೋಗಿ ಮು- ಕುಂದ ಮೊಮ್ಮಗನಿಗೆ ಹಿರಿತನವ ಕೊಡಲೆಂದು ಮುಂದೆ ಜನಿಸುವ ಕಿರಿಯ ಕುವರರೊಳು ತನ್ನ ಕಂದನ ಸೃಜಿಸಿದ ಹಯವದನ ಚತುರನಲ್ಲವೆ 13 ಸುರರು ದ್ವಾರಕಾಪುರ ಯಾತ್ರೆಯಲಿ ಪಾಲಸಾಗರಯಾತ್ರೆ ಗರ್ಭಯಾತ್ರೆ ಕಳೆಯೆ ಶೂಲಧರ ಖಳಗಂಜಿ ಭುವನವೆಲ್ಲವ ಸುತ್ತಿ ಶ್ರೀ- ಲೋಲನಿಹ ವೈಕುಂಠಯಾತ್ರೆಯಿಂದ ಬದುಕನೆ ಭೂಲೋಕದಲಿ ಪುಟ್ಟಿ ಹಯವದನ ಕೃಷ್ಣ ಮಾಡಿದ ಕೈಲಾಸಯಾತ್ರೆ ಕೈವಲ್ಯಪತಿಗೆ ಲೀಲೆ 14 ಹರನಾರು ಪುರಾಣಗಳು ವಿರಿಂಚನಾರು ಪುರಾಣಗಳು ಹರ ವಿರಿಂಚರವಲ್ಲವೆಂದು ಹಿರಿಯರೆ ಮನ್ನಿಸಲಾಗಿ ಪರಮ ಸಿದ್ಧಾಂತಕೋವಿದರೆನಿಪ ಬುಧರಿಗೆ ಪುರಾಣಗಳ ಮ್ಯಾಲೆ ಮಾಡುವ ಪರಮಾದÀರ ಸಲ್ಲದಯ್ಯ ದುರಾಗ್ರಹವ ಮಾಡಬ್ಯಾಡ ಗುರುಮತವ ಬಿಡಬ್ಯಾಡ ಸಿರಿ ಹಯವದನನಾರುಪುರಾಣಗಳ ನೋಡಿರೊ 15 ಒಂದು ಬೊಮ್ಮಚಿತ್ತು ಒಂದು ಜೀವಚಿತ್ತು ಇಂ- ತೆಂದು ಶ್ರುತಿಸ್ಕಂಧÀ ಚೇತವೆಲ್ಲ ಗ್ರಂಥ[ಆ]ಸ್ಯ ದಿಂದ [ಒರೆಯೆ] ಹರಿಜಡನೋ ಹರಜಡನೋ ಮಂದಹಾಸದಿಂದ ಜಡರು ಮನುಮುನಿಗಳೆಲ್ಲ ಇಂಥ ಶಿವನ ವಹಿಸಿಕೊಂಡು ವಾದಿಸುವರು ಹಿಂದು ಮುಂದರಿಯರೆಂದು ಹಯವದನ ನಗನೆ 16 ಯಂ ಬ್ರಹ್ಮವೇದಾಹಂ ಬ್ರಹ್ಮ ವೇದಶ್ರುತಿಶಬ್ದ ಬ್ರಹ್ಮ- ವೆಂಬ ವೇದ ಬೋಧಿಸಿತಾಗಿ ಇಂಥ ಮನುಜರಿಗೆಲ್ಲ ಭಾವಾಭಾವ ಪೇಳ್ವ ಹೊಂದಿಬದುಕು ಹಯವದನನ ಚರಣವ ಹೊಂದಿಬದುಕೊ ಜೀವ ಹರಿಯೆ ನಾನೆನ್ನಬ್ಯಾಡ 17
--------------
ವಾದಿರಾಜ
ಕೃಪೆ ನಿಮ್ಮದಾಗಬೇಕು ಸ್ವಾಮಿ ನಿಮ್ಮರಿಯಲಿಕ್ಕೆ ಅಪಾರ ಮಹಿಮೆ ನಿಮ್ಮ ಸುಂಪಾದ ತಿಳಿಯಲಿಕ್ಕೆ ಧ್ರುವ ಭ್ರಾಂತಗೆಲ್ಲಿಹುದಯ್ಯ ಪೂರ್ಣನಿಂತ ನಿಲಕಡೆಙÁ್ಞನ | ಎಂತುಹೇಳಿದರ ಖೂನ ಶಾಂತಹೊಂದದಯ್ಯಮನ | ಪಂಥ ಪರಮ ಗುಹ್ಯಸ್ಥಾನ ತಂತುವಿಡಿಯಲು ನಿರ್ಗುಣ | ಅಂತು ಇಂತು ಎಂಬುಂದೆ ನಾನಂತ ಗುನ ನಿಧಾನ 1 ಖೂನ ತಿಳಿಯಲಿಕ್ಯಗಾಧಗುರು ನಿಮ್ಮಶ್ರೀಪಾದ | ಬೋಧ ನೀಡಬೇಕು ಸುಪ್ರಸಾದ | ನೀನೆವೆ ನಿತ್ಯವಾದ ವಸ್ತು ಪರಿಪೂರ್ಣ ಸದಾ | ದೀನ ಬಂಧು ದಯದಿಂದ ಖೂನದೋರೊ ಆಶ್ರಯದ 2 ಮಂದ ಮತಿ ನಾನು ಭಕ್ತಿ ಮಾಡಲರಿಯೆನು ಒಡಿಯನಹುದಯ್ಯ ನೀನುಮಹಿಪತಿಯ ಕಾಮಧೇನು ಕೊಡಲಿಕ್ಕೆ ಪೂರ್ಣ ನೀನು ಸ್ವಾಮಿ ಕಾವ ಕರುಣನು ಪಿಡಿದಿಹ್ಯ ನಿಮ್ಮ ನಾನು ದಿವ್ಯ ಪಾದಪದ್ಮವನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೃಷ್ಣ ಕೃಪಾಲ ಕರುಣಾದಾಯಕ ಕರುಣಾದಾಯಕ ದುಷ್ಟಮರ್ದನ ಶಿಷ್ಟಜನಪಾಲಕ ಧ್ರುವ ಮಾಧವ ಮಧುಸೂದನ ಮಧುಸೂದನ ಪಂಕಜನಾಭ ಪತಿತಪಾವನ ಶಂಖಚಕ್ರಧರ ಸಂಕರುಷಣ ಸಂಕುರಷಣ ಪತಿ ರಾಜೀವನಯನ 1 ಕಸ್ತೂರಿತಿಲಕ ಕೌಸ್ತುಭಭೂಷಣ ಕೌಸ್ತುಭಭೂಷಣ ಮಸ್ತಕ ಮುಗುಟ ಮದನಮೋಹನ ಭಕ್ತವತ್ಸಲ ಹರಿ ನಾರಾಯಣ ನಾರಾಯಣ ವಸ್ತುಪರಾತ್ಪರ ನಿಜನಿರ್ಗುಣ 2 ಗರುಡಗಮನ ಉರಗಶಯನ ಉರಗಶಯನ ಸುರಬ್ರಹ್ಮಾದಿ ವಂದಿತಚರಣ ಕರುಣಾನಂದ ಪರಿಪೂರಣ ಪರಿಪೂರಣ ತರಳ ಮಹಿಪತಿ ಜೀವಜೀವನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೊರವಂಜಿ ಪದ ಬಾರೆ ಸತ್ಯಭಾಮೆ ತೋರೆ ನಿಮ್ಮ ಸುಹಸ್ತದ ಠೇವೆ ಧ್ರುವ ಸರ್ಕನೆ ಬಾರವ್ವಾ ಅರಿಕ್ಯುಳ್ಳ ಗರತಿ ಕರವ ಕೊರವತಿ ತಾರ್ಕಣ್ಯ ಬರುತಾದ ಪರಮ ಸುವಾರ್ತಿ ತರ್ಕರಹಿತ ವಸ್ತು ಕರಕೊ ಸುಮೂರ್ತಿ 1 ಓಯವ್ವ ಅವ್ವ ಬಾರೆ ನಮ್ಮವ್ವ ದೈವುಳ್ಳ ಗರತಿ ನೀನವ್ವ ದೈವ ಬರುದೆ ನಿನ್ನೊಳಗವ್ವ ಕೈದೋರೆ ಕೈದೋರೆ ಕೈದೋರೆ ನಿಮ್ಮ 2 ಕೈದೋರೆ ಕೈದೋರೆ ಕೈದೋರೆ ನಿಮ್ಮ ಕೈಯ ಲಕ್ಷಣ ನೋಡಿ ಹೇಳುವೆನಮ್ಮ ಅಯ್ಯ ಬರುತಾನೆ ಆಶೇಲಿ ನಿಮ್ಮ ಕೈಗೊಟ್ಟು ಕೇಳೆ ನಿಜ ಗುಹ್ಯವರ್ಮ 3 ಸುಳ್ಳು ಮಾತನಾಡಿ ಒಡಲ ಹೊರಳವಲ್ಲ ಬಲ್ಲಷ್ಟು ಬೊಗಳುವೆ ವಿಷಯ ದಾಸ್ಯವಳಲ್ಲ ಉಳ್ಳಷ್ಟು ಹೇಳುವೆ ಕೇಳೆ ಶಿವ ಸೊಲ್ಲ ಹೇಳುವ ಮಾತಿದು ಘನ ಗುರು ತಾ ಬಲ್ಲ 4 ಕೊರವಂಜಿ ಮಾತಿದು ಕಿವಿಗೊಟ್ಟು ಕೇಳಮ್ಮ ಬರುತಾನ ಉದರಲಿ ಹುಟ್ಟಿ ಸಗುಣ ನಿಮ್ಮ ತಾರಿಸುವ ಸ್ವಾಮಿ ಪತಿತ ಪಾವನ ನಿಮ್ಮ ಹರಷದೋರುವ ನಿತ್ಯಾನಂದೋ ಬ್ರಹ್ಮ 5 ಎಂದ ಮಾತನೆ ಕೇಳಿ ಬಂದಳು ಭಾವೆಮ್ಮ ಚೆಂದ ಉಳ್ಳ ಸುರಸ ವಾಕ್ಯ ಕೇಳಿದಳೊಮ್ಮೆ ಬಂದು ಹರುಷದಿ ಪೂರ್ಣ ಸಂದಿಸಿಟ್ಟಳು ಪ್ರೇಮ ಒಂದೆ ನಿಜಸುಮಾತ್ಹೇಳ್ಯೆಂದಳು ನೇಮ 6 ಎಲ್ಲಿಂದ ಬಂದೆವ್ವ ಸೊಲ್ಲ ಬೀರುತ ಶಿವ ಬಲ್ಲ ಮಹಿಮಳೆಂದು ನಾನರಿಯೆನವ್ವ ಇಲ್ಲೆವೆ ಕಂಡೆ ನಾ ಸೊಲ್ಲಿನ ಮಹಿಮರು ಎಲ್ಲ ನೆಲೆನಿಭೇಳೌವ್ವ 7 ಸರಿಯ ಬಂದರ ನಿನ್ನ ಮರಿಯೆನವ್ವ ಎಂದು ಖರೆ ಉಳ್ಳ ಮಾತನೆ ಹೇಳೆ ನಿಜ ಒಂದು ಹಿರಿಯರಗೀ ಮಾತು ಸರಿಯ ಬಾವ್ಹಾಂಗಿಂದು ಬೀರವ್ವ ನಿಜಸಾರವಿಂದು 8 ಲಕ್ಷ ಎಂಬತ್ತುನಾಲ್ಕು ಗ್ರಾಮವ ನೋಡಿ ಲಕ್ಷಿಸುತ ಬಂದ ಲಕ್ಷಣ ನಿಜಗೂಡಿ ಲಕ್ಷುಮಿ ಕರದೋರುತದ ನಿಮ್ಮೊಳೊಡಮೂಡಿ ಅಕ್ಷಯಾನಂದ ಬರುತಾನೆ ಇದರಿಡಿ 9 ಕರ ಕೊಟ್ಟಳು ಸುಶೀಲೆ ವರ ಕೃಪೆಯಲಿ ಕೊರವಂಜಿ ಮಾತಲಿ ಅರಿತಳು ತಾ ತನ್ನಲಿ ಪರಮಾನಂದ ಲೀಲೆ ಬೆರದಳು ಕೇಳಿ 10 ನುಡಿಯುವ್ವ ಸಲಲಿತವಾದ ನಿಜವಾಕ್ಯ ಬಡುವಂತೆ ಹರುಷವು ನೋಡಿ ತ್ರಯಲೋಕ್ಯ ಬಡಸವ್ವ ನನಗಿಂದು ಇದೆ ನಿಜ ಮುಖ್ಯ ಕುಡಲಿಕ್ಕೆ ನಿನಗಿದು ಶಕ್ಯ 11 ಮನದಂತೆಯಾದರ ನೆನದೇನವ್ವ ನಿಮ್ಮ ಅನುಕೂಲಾಗುವ ಪುಣ್ಯ ಪೂರ್ವಾರ್ಜಿತ ನಮ್ಮ ಸಾನುಕೂಲಾಗುವಂತೆ ಬೇಡಿಕೊಳ್ಳಮ್ಮ ನೆನಿ ಎಕನಾತಿ ಎಲ್ಲಮ್ಮ 12 ಒಡಮೂಡಿ ಬಂದರ ಉಡಿಯ ತುಂಬೇನವ್ವ ಜಡಿತಾಭರಣದುಡಿಗಟ್ಟೆ ನಿನಗವ್ವ ಹಿಡಿಯದೆ ಅನುಮಾನ ನುಡಿ ನಿಜ ಸಾರವ್ವ ಕುಡಲಿಕ್ಕೆ ನಿಧಾನದವ್ವ 13 ಕೈಯ ಲಕ್ಷಣದಲಿ ಶ್ರೇಯ ತೋರುತಲ್ಯದ ದಯ ಉಳ್ಳ ಮಹಿಮದ ಸೋಹ್ಯ ಬೀರುತಲ್ಯದ ಭಯವಿಲ್ಲದ ಭಾಗ್ಯ ಅಚಲ ತಾನಾಗ್ಯದ ಜಯಜಯಕಾರ ಭಾಸುತದ 14 ಪುಣ್ಯ ಪ್ರಭೆಯ ಚೆನ್ನಾಗಿ ಭಾಸುತಲ್ಯದೆ ಕಣ್ಣಿಗೆ ಸುಚಿನ್ಹ ಹೊಳವುತದೆ ಚಿನ್ನುಮಯದ ಸುಪುತ್ಥಳಿ ಬರುತದೆ ಬಣ್ಣ ಬಣ್ಣದ ಸುಖ ಬೀರುತದೆ 15 ಅಂಗದೊಳಗ ನಿಮ್ಮ ರಂಗ ಬರುತಾನಮ್ಮ ಕಂಗಳಿಗಿದರಿಡುತದೆ ಹರುಷವು ನಿಮ್ಮ ಭವ ಬಂಧದ ದುಷ್ಕರ್ಮ ಮಂಗಳಕರಾನಂದೊ ಬ್ರಹ್ಮ 16 ನಿನ್ನ ಭಾಗ್ಯಕ ಸರಿ ಇಲ್ಲೆ ಸಂಜೀವನಿ ಚೆನ್ನಾಗಿ ಕೇಳೆ ನೀ ಭಾವೆಗುಣಮಣಿ ಧನ್ಯವಾಯಿತು ನಿನ್ನಂದೆವೆ ಯತಿಮುನಿ ನಿನ್ನೊಳಗುಂಟು ದೇವಶಿಖಾಮಣಿ 17 ಭಾವೆ ನಿನ್ನಿಂದ ಪಾವನ್ನವಾಯಿತು ಜಗ ದೇವಾಧಿದೇವ ಮೂಡುವ ನಿನ್ನೊಳಗೀಗ ಕಾವಕರುಣ ಪ್ರತ್ಯಕ್ಷವಾಗುವ ಯೋಗ ಸುವಿದ್ಯ ಭಾಸುವ ದಿವ್ಯಭೋಗ 18 ಉಂಡ ಊಟ ಕಂಡ ಕನಸು ಪಿಂಡಲಕ್ಷಣ್ಹೇಳುವೆ ಮಂಡಲೊಳಗ ಮಂಡಿಸಿಹ್ಯ ಮಹಿಮೆ ನೀನಗ್ಹೇಳುವೆ ಹಿಂಡದೈವದೊಡಿಯ ನಿನ್ನೊಡಲೊಳಗ ತಾಳುವೆ ಪಂಡಿತರಿಗೆ ಪ್ರಿಯವಾದಾಗ್ಯ ಖಂಡನೀನೆ ಬಾಳುವೆ 19 ನೀನೆ ಜಗಕ ತಾರಿಸುವ ದೈವದೋರಿಕುಡುವೆ ನೀನೆ ಭಕ್ತಜನರ ಜನ್ಮಸಾರ್ಥಕವು ಮಾಡುವೆ ಜ್ಞಾನಗಮ್ಯವಾದ ವಸ್ತುಹಿಡದು ನೀನೆ ಕುಡುವೆ ನಿತ್ಯ ಆಡುವೆ 20 ಅಮ್ಮ ನಿಮ್ಮೊಳು ಘಮ್ಮನ್ಹೊಳುವ ತಮ್ಮ ಬರುತಾನ ಸುಮ್ಮಾನಿಹ್ಹಾ ಸಮೀಪಲೆ ಧಿಮ್ಮ ಹಿಡಿದ ಹಮ್ಮಿನೊಳು ಘುಮ್ಮವಾದರು ಬ್ರಹ್ಮಾದಿಗಳೆ ನಮ್ಮ ನಿಮ್ಮದೆಂಬು ಭ್ರಮೆ ಸುಮ್ಮನ್ಯಾಕಿದೊ ಅಮ್ಮಕೇಳೆ 21 ಬಯಕಿ ಲಕ್ಷಣ ನಿನ್ನ ಹೇಳ್ಹೆನವ್ವಾ ತಾಯಿ ಮಾಯಿಕ ಗುಣ ಸುಟ್ಟು ತಿಂದೇನೆಂಬುದು ಬಾಯಿ ಕೈಕಚ್ಚಿಲೆ ಶುದ್ದಿಲ್ಲಾದವರ ತಾಳದು ಸೋವಿ ಐರಾವತ ಬರುತಾನ ನಿನ್ನೊಳು ಪನ್ನಂಗಶಾಯಿ 22 ಬಾಹ್ಯನಿಷ್ಟರ ಕಂಡು ಬದಿಗೆ ಬರಗುಡಿ ನೀನು ಅಹಂಭಾವಕ ಹೇಸಿ ವಾಕರಿಸುವೆ ನೀನು ಗುಹ್ಯ ಹೇಳುವೆ ನಾನು ಸಾಹ್ಯ ಮಾಡುವ ಶ್ರೀಗುರು ತಾನು 23 ಕಾಮಕ್ರೋಧ ಕರದು ತಿಂದೇನೆಂಬುದು ಬಯಕಿ ನೇಮದಿಂದಲಿ ಮದ ಮತ್ಸರನೆ ನೂಕಿ ಪ್ರೇಮವಿಲ್ಲದವರ ಎಂದಿಗಾದರ ಸೋಕಿ ವರ್ಮಿಕರಿಗೆ ನೀ ಕೈಯಗುಡುವಾಕಿ 24 ಆಸಿ ಎಂಬುದು ಅಟ್ಟುಅರದೇನೆಂಬುದು ಬ್ಯಾಗ ಹುಸಿನುಡಿವೆಂಬದು ಹುರವಾದೀಗ ಹಸನಾದ ಬಯಕೀದು ಋಷಿ ಮುನಿಗಳ ಯೋಗ ಲೇಸು ಲೇಸು ನಿನ್ನ ಅಂತರಂಗ 25 ಧನ್ಯವಾದ ರಾಜಯೋಗವ ಬಯಸುದು ಉನ್ಮನವಾಗಿ ಊರ್ಜಿತವಾದೇನೆಂಬುದು ಸ್ವಾನುಭವದ ಸುಖ ಸೂರ್ಯಾಡೇನೆಂಬುದು ಭಿನ್ನ ಭೇದಕ ಕಣ್ಣ ತ್ಯರಿಯದಿದು 26 ವಾಸುದೇವನ ಭಕ್ತಿ ಆಶ್ರೈಸೇನೆಂಬುದು ಶ್ವಾಸೋಚ್ಛ್ವಾಸಕ ಒಮ್ಮೆ ಬಯಸುವುದು ವಿಷಯ ಪ್ರಪಂಚಕ ಹೇಸಿ ತಾ ಜರೆವುದು ಕುಸುಮನಾಭನ ಸೇವೆ ಇಚ್ಛಿಸುವದು 27 ಒಮ್ಮೆ ಸರಸ್ವತಿ ಕೂಡ ಸರಸಾಡೇನೆಂಬುದು ಒಮ್ಮೆ ಲಕ್ಷುಮಿ ಕೂಡ ಲೋಲಾಡೇನೆಂಬುದು ಒಮ್ಮೆ ಪಾರ್ವತಿ ಕೂಡ ಪವಡೀಸೆನೆಂಬುದು ಒಮ್ಮೆ ಏನುನೊಲ್ಲ್ಯೆನೆಂಬುದು 28 ಹೇಳೇನೆಂದರೆ ನಿನ್ನ ಬಯಕಿಯ ಉಲ್ಹಾಸ ತಿಳಿಯದಿನ್ನೊಬ್ಬರಿಗ ಗರ್ಭದ ಸುವಾಸ ಉಲವುತದೆ ನಿನ್ನೊಳು ಸುಪ್ರಕಾಶ ಥಳಥಳಗುಡುತಿಹ್ಯ ಬಾಲವೇಷ 29 ಧನ್ಯ ಧನ್ಯ ನಿನ್ನ ಗರ್ಭಹೊಳುವ ಹೊಂಬಣ್ಣವು ಒಡಲು ನಿನ್ನ ಪುಣ್ಯ ಪಾವನ್ನವು ಧನ್ಯ ಧನ್ಯ ನಿನ್ನ ದರುಷಣದ ಜೀವನವು ಧನ್ಯ ಧನ್ಯ ನಿನ್ನ ಕಂಡ ಜನರ ಜೀವಪ್ರಾಣವು 30 ಭಾವೆ ನಿನ್ನಿಂದ ಖ್ಯಾತಿಪಡೆದ ಪ್ರಹ್ಲಾದನು ದೇವ ದೇವ ಬಂದು ಸ್ತಂಭದೊಳು ಮೂಡಿದನು ಆವಾವ ಠಾವಿನೊಳು ಬಂದು ರಕ್ಷಿಸಿದನು ಜೀವ ಜೀವ ತಾನೆ ಅಗಿ ಪ್ರಾಣನುಳಹಿದನು 31 ನಿನ್ನ ಬಲಗೊಂಡು ದ್ರೌಪದಿಯ ಖ್ಯಾತಿಪಡೆದಳು ಪುಣ್ಯ ಉಳ್ಳ ಮಹಿಮನಂಘ್ರಿ ಕಣ್ಣಾರ ಕಂಡಳು ಚೆನ್ನಾಗಿ ಬಂದು ಸ್ವಾಮಿ ಲಜ್ಜೆಗಾಯ್ದು ಸಭೆಯೊಳು ಬಣ್ಣ ಬಣ್ಣ ವಸ್ತ್ರ ಪೂರಿಸಿದಾನೇಕಗಳು 32 ಸ್ತುತಿಯು ಮಾಡಲು ನಿನ್ನ ಯತಿಮುನಿಗಳವಲ್ಲ ಗತಿಯ ಪಡೆದರು ಸಕಲ ಮುನಿಜನರೆಲ್ಲ ಅತಿ ಹರುಷವು ಕೂಡಿದರು ಜಗದೊಳಗ್ಯಲ್ಲ ಹಿತದೋರುತಿದೆ ವಸ್ತು ಮಯವೆಲ್ಲ 33 ಹೊಳೆವ ಸುಳಿವ ಚೆಲುವ ನಿನ್ನೊಳಗ ನಲುವನೆ ಕಳವಿಲೊಯಿದ ವೇದನುಳುಹಿದವನು ಬೆಳೆವನೆ ಭಾರ ತಾಳಿದವನು ಉಲುವನೆ ನೆಲವ ಗೆದ್ದ ಬಲಿಯು ನಿನ್ನೊಳಗೆ ಒಲುವನೆ 34 ಸೀಳಿ ದೈತ್ಯನ ಕೊಂದ ಶೂರ ಘಮಗುಡತಾನೆ ಅಳದು ಭೂಮಿಯ ಕೊಂಡು ಬೆಳದವ ಬರುತಾನೆ ತಿಳಿದು ಪಿತರ ಸೂಡುಕೊಂಡವ ಬರುತಾನೆ ಬಲುಪರಾಕ್ರಮದವ ತೋಳುತಾನೆ 35 ತಾಂ ಸಂಚರಿಸ್ಹ್ಯಾನ ನಿನ್ನೊಳಗ ಮೂಡಿ ಬರುತಾನೆ ಬ್ಯಾಗೆ ನಗುತ ಬರುತಾನೆ ಈಗ ಕೈಯಗೊಟ್ಟು ಬರುತಾನೆ ನಿನಗೆ 36 ಸಾಧೀಸಿ ಕೇಳೆ ಕಿವಿಗೊಟ್ಟು ಒದುಗುವ ತಾಂ ಇದರಿಟ್ಟು ಉದಿಯವಾಗುವ ದಯವಿಟ್ಟು ಸದ್ಬಕ್ತರಿಗೆ ಕೈಯಗೊಟ್ಟು 37 ಹುಟ್ಟುವ ಶಿಶುವಿನ ಘಟಣಿಯ ಬಹಳ ಗುಟ್ಟೊಡಿಯಲು ತಾಂ ಮುಟ್ಟನು ತಾಳ ಕಟ್ಟುವ ದೈತ್ಯರ ದಿಟ್ಟ ಮಾ ಸಾಳ ದೃಷ್ಟಿಸಿ ನೋಡುವ ನಿಷ್ಠರ ಮೇಳ 38 ಶಿಶುವಿನ ಲಕ್ಷಣ ಬಲು ಅಗಾಧ ಪರಿ ಮಾಟವು ಋಷಿಗಳ ಬೋಧ ಹಸು ನೀರಡಿಸರವುದು ಶ್ರೀಪಾದ ಬಸುರಿನ ಬಯಕಿದು ಬಲುಸುಸ್ವಾದ 39 ಘಮಗುಡುತದೆ ಅನಾಹತದ ಧ್ವನಿಯು ಕ್ರಮ ತಿಳಿವದು ಸುಯೋಗದ ಮನಿಯು ಧಿಮಿಗುಡುತದ ಆನಂದದ ಖಣಿಯು ಭ್ರಮ ಬಿಡಿಸುವ ಘನ ಚಿಂತಾಮಣಿಯು 40 ಹುಟ್ಟಿ ಬರುತಾನಿವ ಶಿಷ್ಟರ ಮನಿಲಿವ ದುಷ್ಟ ಮರ್ದನ ದೇವ ನಿಷ್ಠರಿಗೆ ಕಾವ ಎಷ್ಟೆಂದ್ಹೇಳಲವ್ವ ಸೃಷ್ಟಿಗಧಿಕನಿವ ಮುಟ್ಟಿ ಮುದ್ರಿಸುವ ದಿಟ್ಟೆದೆ ಕೂಸವ್ವ 41 ವರ್ಣಿಸಲಾಗದು ಶಿಶುವಿನ ವಿವರಣ ದಣಿಯಿತು ಕೊಂಡಾಡಿ ವೇದಸುಪುರಾಣ ಖೂನ ತಿಳಿಯದು ತಾನು ಶಾಸ್ತ್ರಕ ಸಂಪೂರ್ಣ ದ್ಯಾನ ಮೋನಕ ದೂರಗಮ್ಯ ಸ್ಥಾನ 42 ಗುಟ್ಟು ತಿಳಿಯದ ವಸ್ತು ಹುಟ್ಟಿಬಾಹುದು ಕೇಳಿ ಉಂಟಾಗುವದು ನಿನ್ನೊಳು ನೆನದಾಗಳೆ ಘಟ್ಯಾಗಿ ಅನುಭವಿಸುತ ನೀನೆ ಬಾಳೆ ದೃಷ್ಟಿಯೊಳೀಗುಟ್ಟು ಆರೀಗ್ಹೇಳೆ 43 ಬಸುರು ಬಯಕೆಂಬುದು ಹೆಸರಿಸಲಳವಲ್ಲ ಹಸನಾಗಿ ಅನುಭವಿಸುವ ಪುರುಷನೆ ಬಲ್ಲ ವಾಸುದೇವನ ಕಾಣದಿಹ್ಯದೆ ಕಣ್ಣಲ್ಲ ಆಸಿ ಅಳಿದವರೆ ತಾಂ ತಿಳಿದರೆಲ್ಲ 44 ಹುಟ್ಟುವ ಲಕ್ಷಣ ಕೇಳೆ ನೀ ಕಿವಿಗೊಟ್ಟು ಮುಟ್ಟಿ ಮುದ್ರಿಸಿಹ್ಯ ಗುರು ಕಟಾಕ್ಷವ ಕೊಟ್ಟು ಇಟ್ಟುಕೊ ಈ ಮಾತು ಆರಿಗ್ಹೇಳೆ ಬಿಟ್ಟು ಗಂಟು ಕಟ್ಟಿದ ಮಾತು ಹೇಳೆಬಿಟ್ಟು 45 ಆಲಕ್ಷವೆಂಬ ಸುನಕ್ಷತ್ರದಲಿ ಪುಟ್ಟಿ ಸುಲಕ್ಷಣದಲಿ ಬರುತಾನೆ ಜಗಜಟ್ಟಿ ನೆಲಯುಗೊಂಡಾಡಿಸಿ ಮನಮುಟ್ಟಿ 46 ಜನ್ಮನಾಮೆಂಬುದು ಕೂಸಿನ ನಿರ್ಗುಣ ಸಮಸ್ತರಿಗೆ ನಡವ ನಾಮವೆ ಸಗುಣ ಬ್ರಹ್ಮಾನಂದದಿ ಲೋಲ್ಯಾಡುವ ಪರಿಪೂರ್ಣ ಕಮಲನಯನ ಸ್ವಾಮಿ ರಮಾರಮಣ 47 ಕೂಸು ಎಂದರ ತಾನು ಕೂಸು ಎನಲಾಗದು ವಾಸವಾಗ್ಯಾಡುದು ವಿಶ್ವಲಿದು ಹೆಸರನೇಕಪರಿಯಲಿ ಕರಿಸಿಕೊಂಡು ಲೇಸು ಲೇಸಾಗಿ ತಾ ಆಡುವುದು 48 ಹಿಂದ ಅಡಿದ ಆಟ ಮಂದದೆ ಆಡುದು ಎಂದಿಗ್ಯದರ ಗುಟ್ಟು ತಿಳಿಯಗುಡುದು ಒಂದಿಸಿದವರ ತನ್ನೊಳು ಕೂಡಿಕೊಂಬುದು ಒಂದೆ ವಸ್ತುವಾಗಿ ತೋರುವುದು 49 ಹೇಳುವೆ ಕೇಳೆ ಶಿಶುವಿನ ಆಟ ತಿಳಿಯಲು ಜಗದೊಳು ಬಲು ಅವ್ಹಾಟ ನೆಲಿ ತಿಳಿದವರಿಗೆ ತೋರುದದು ನೀಟ ನಲಿನಲಿದಾಡುವ ಸಲಲಿತದಾಟ 50 ಒಮ್ಮೆ ನೀರನೆ ಚಲಿಪಿಲಿ ಮಾಡುವ ಒಮ್ಮೆ ಬಾಗಿ ಜಗನೆಗುವ ಒಮ್ಮೆ ಹಲ್ಲಿಲೆ ಬೇರನೆ ಅಗಳುವ ಒಮ್ಮೆ ಬರುತಲಿ ಗುರುಗುಡುವ 51 ಒಮ್ಮೆ ಬಲು ಗಿಡ್ಡಾಗಿ ತೋರುವ ಒಮ್ಮೆ ಪರಾಕ್ರಮ ಹಿಡುವ ಒಮ್ಮೆ ವನದೊಳಗಾಡುತ ಹೋಗುವ ಒಮ್ಮೆ ಕಡವ ಬೆಣ್ಣೆಯ ಮೆಲುವ 52 ಒಮ್ಮೆ ಬತ್ತಲೆ ತ್ರಿಪುರದಲಿ ಸುಳಿವ ಒಮ್ಮೆ ಏರುವ ತಾ ಹಯವ ಒಮ್ಮೊಮ್ಮಾಗುವ ತಾನೆವೆ ಸಗುಣವ ಒಮ್ಮೊಮ್ಮಾಗುವ ನಿರ್ಗುಣವ 53
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುನಾಮ ಸ್ಮರಿಸಿರೊ ಶ್ರೀಗುರುನಾಮ ಸುರುಮುನಿಜರ ಪ್ರಿಯವಾದ ನಾಮ ದ್ರುವ ಬ್ರಹ್ಮ ವಿಷ್ಣುರುದ್ರರಿಗಿದೆ ನಿಜನಾಮ ಪ್ರೇಮದಿಂದ ಸ್ಮರಿಸುವರು ಇದೆ ನಾಮ ಸಮಸ್ತ ಲೋಕಕ್ಕೆ ಸಾರವಾದ ನಾಮ ನೇಮದಿಂದ ತಾರಿಸುವ ದಿವ್ಯನಾಮ 1 ಸಕಲಾಗಮ ಪೂಜಿತರಿದೆ ನಾಮ ಏಕೋಮಯವಾಗಿ ದೋರುವದಿದೆನಾಮ ಶುಕವಾಮ ದೇವರಿಗಿದೆ ನಿಜ ನಾಮ ಸುಖ ಸರ್ವರಿಗೆ ದೋರುವ ಗುರುನಾಮ 2 ಕರ್ಮಬಂಧನ ಛೇದಿಸುವದಿದೆ ನಾಮ ಕರ್ಮದೋರಿ ಕೊಡುವದೀ ಗುರುನಾಮ ಬ್ರಹ್ಮಾನಂದ ಸುಖದೊರುವಾನಂದ ನಾಮ ಧರ್ಮ ಜಾಗಿಸಿಕೊಡುವದೀ ಗುರುನಾಮ 3 ಅಜಮಿಳಗೆ ತಾರಿಸಿದಿದೇ ನಾಮ ಗಜಭಯ ಪರಿಹರಿಸಿದಿದೆ ನಾಮ ಸುಜನರಿಗೆ ಸುಪ್ರಸನ್ನವಾದ ನಾಮ ಮೂಜಗಕೆ ತಾಮುಖ್ಯವಾದ ಗುರುನಾಮ 4 ಅಹಲ್ಯ ಉದ್ಧರಣ ಮಾಡಿದುದಿದೆ ನಾಮ ಪ್ರಲ್ಹಾದÀನ ಪ್ರಾಣಗಾಯಿದಿದೆ ನಾಮ ಫಲುಗುಣ ತಾ ಪಕ್ಷವಾದದುದಿದೆ ನಾಮ ಒಲಿದು ಧ್ರುವಗಥಳವಿತ್ತ ಗುರುನಾಮ 5 ಅಗಣಿತ ಗುಣ ಪರಿಪೂರ್ಣವಾದ ನಾಮ ಸುಗಮ ಸುಪಥಸಾಧನ ಇದೆ ನಾಮ ಯೋಜನ ಸೇವಿಸುವ ನಿಜನಾಮ ನಿರ್ಗುಣಾನಂದವಾಗಿಹ್ಯ ಗುರುನಾಮ6 ಸೂರ್ಯಚಂದ್ರ ಸಮಸ್ತವಂದ್ಯ ಇದೆ ನಾಮ ಕಾರ್ಯಕಾರಣವಾಗಿಹ್ಯ ವಿದೆ ನಾಮ ತೂರ್ಯಾವಸ್ಥೆ ಯೊಳಗೆ ಸೂರಿಗೊಂಬು ನಾಮ ತರಳಮಹಿಪತಿ ತಾರಕ ಗುರುನಾಮ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುವೇ ಗುರುವೇ ಗುರು ಗುರುವೇ ಮಹಾಗುರು ಗುರುವೇ ಶ್ರೀ ಗುರುವೇ ಪ ನಿರಂಜನ ನಿಷ್ಕಲಂಕ ಗುರುವೇಪ್ರತ್ಯಾಗಾತ್ಮ ಪರಾತ್ಪರಾತ್ಪರ ಪ್ರತ್ಯಯರಹಿತ ಗುರುವೇ 1 ನಿರ್ವಿಕಲ್ಪ ನಿರಾಕಾರ ನಿರ್ಗುಣ ನಿರ್ಮಾಯನೇ ಗುರುವೇನಿರ್ವಿಕಾರ ನಿದ್ರ್ವಂದ್ವ ನಿಜಾಕಾರ ನಿರುಪಮಾತ್ಮ ಗುರುವೇ 2 ಪೂಜ್ಯಮಾನ ಸುರಾಸುರ ಸಿದ್ಧಾಯಿಂ ಪೂಜಾರ್ಪಿತ ಗುರುವೇಈ ಜಗದೇಕ ನಾಥನೆ ಚಿದಾನಂದ ತೇಜಃಪುಂಜ ಗುರುವೇ 3
--------------
ಚಿದಾನಂದ ಅವಧೂತರು
ಚಿತ್ತದ ಕ್ಲೇಶವ ಭಂಜಿಸಿ ವಾಸುದೇವನೆ ದಯದಿ ಹರೆ ಪ ಇಂದಿರಾವದನಾರವಿಂದ ಭಾಸ್ಕರ ಕುಂದರದನ ವದನ ಹರೆ 1 ಪಾವನ ಮೂರುತಿಯೆ ಹರೆ 2 ಚಿನ್ಮಯ ರೂಪನೆ ಬ್ರಹ್ಮಕಾರಣಗುಣ ನಿರ್ಮಲ ನಿರ್ಗುಣನೆ ಹರೆ 3 ಭೋಗಿ ಭೂಷ ನುತನೆ ಹರೆ 4 ಧ್ಯಾನವ ಗೈಯುವೆನೈ ಹರೆ 5
--------------
ಬೇಟೆರಾಯ ದೀಕ್ಷಿತರು