ಒಟ್ಟು 85 ಕಡೆಗಳಲ್ಲಿ , 29 ದಾಸರು , 82 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು - ಜಗ ಪ ದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ ಅ ಗುರು ಹಿರಿಯರನು ಕಂಡು ಮುರುಕಿಸುವ ಮೋರೆಯಲಿಅರೆಮತಿಯ ಕೊಂಕು ಮಾತುಗಳನಾಡಿಚರಣಕೆರಗದ ಮನುಜರಿರಬಾರದೆಂದೆನುತಮರಮುರಿದು ಒರಗಿ ಸಾಯಲಿ ಎಂದು ನಡುಗಿದೆಯ1 ಉತ್ತಮರ ಹೊಟ್ಟೆಯಲಿ ಬಗಳೊ ಶ್ವಾನವು ಹುಟ್ಟಿಹೆತ್ತವರ ನಿರ್ಬಂಧಕೊಳಗು ಮಾಡಿಅತ್ತೆ ಮಾವರ ಕೀರ್ತಿಯ ಕೊಂಡಾಡುವಧಮರಹೊತ್ತು ಇರಲಾರೆನೆನುತ ಮತ್ತೆ ನಡುಗಿದೆಯ2 ಕಳ್ಳತನವನು ಕಲಿತು ಕಾಲೋಚಿತವ ಕೇಳ್ದುಸುಳ್ಳು ಮಾತುಗಳಾಡಿ ಒಡಲ ಪೊರೆದುಕೊಳ್ಳಿ ದೆವ್ವಗಳಂತೆ ಅಲೆದಾಡುತಿರುವಂಥಸುಳ್ಳು ಮನುಜರ ಹೊರಲಾರೆನೆಂದು ನಡುಗಿದೆಯ 3 ಕಲಿಯುಗದಿ ಮುರಹರನ ಸ್ಮರಣೆಯನು ಮಾಡದೆಯೆಸಲೆ ಭಕ್ತಿಯಿಂ ವೇದಶಾಸ್ತ್ರವನೋದದೆಲಲನೆಯರ ಮೇಲೆ ಕಣ್ಣಿಡುವ ಹೊಲೆಯರನು ನಾ-ನೊಲಿದು ಹೊರಲಾರೆನೆಂದು ನಡುಗಿದೆಯ 4 ಧರೆಯೊಳಗೆ ಕರ್ಮಿಗಳು ಹೆಚ್ಚಿ ಕವಿತ್ವವ ಕಲಿತುನರಕುರಿಗಳೆಲ್ಲರು ನಡೆಗೆಟ್ಟರೆಂದುಗುರುವೆ ಕೇಳಯ್ಯ ಕನಕ ಪ್ರಿಯ ತಿರುಪತಿಯಗಿರಿಯಾದಿಕೇಶವನೆ ಒಲಿದು ನಿಲ್ಲಿಸಿದ 5
--------------
ಕನಕದಾಸ
ಏನ ಹೇಳಲಿ ಈತನಿರವ ಭಕ್ತರ ಮನಾ- ಧೀನ ಹೆಳವನಕಟ್ಟೆ ರಂಗ ದೇವೋತ್ತುಂಗನ ಪ. ಹೊಳೆವ ಮೈಯ್ಯವ ಕಲ್ಲಹೊರುವ ಕಡಲೊಳಾಡುವ ತಿಳಿಯ ಎರಡಂಗನೆ ತಿರಿವ ಪರುಶುವಿಡಿವ ಕೋಡಗ ಕುಲವನಾಳುವ ಗೋವಕಾಯ್ವ ಕಾಂತೆಯರ ವ್ರತವ- ನಳಿವ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ ಜಲವಪೊಕ್ಕು ದೈತ್ಯನ ಸಂಹರಿಸಿ ಕಲಕಿ ಸಮುದ್ರವ ಕಾರಣಕಾಗಿ ನೆಲಗಳ್ಳನ ಮರ್ದಿಸಿ ಹಿರಣ್ಯಾಕ್ಷನ ಚಲುವ ಚೆಳ್ಳುಗುರಿಂದೊಡಲನೆ ಬಗಿದು ಸುಲಭನಾಗಿ ಶುಕ್ರನ ಕಣ್ಣಿರಿದು ಬಲುಸಾಹಸದಿ ಕ್ಷತ್ರಿಯರನು ಗೆಲಿದು ಗೆಲವ ತೋರಿ ಗೋಪಿಗೆ ಸುತನಾಗಿ ನಿಲುವ ದಿಗಂಬರಧರ ರಾವುತನಾಗಿ ಇಳೆಯೊಳು ಚರಿಸುವ ಈತ ಕಾಣೆ ಅಮ್ಮಯ್ಯ 1 ನಿಲ್ಲದಾಡುವ ನಗವ ಪೊರುವ ಮಣ್ಣಬಗೆವ ಕಲ್ಲ ಕಂಬವನೊಡೆವ ಇಳೆಯನಳೆವ ಭಾರ್ಗವ ವಲ್ಲಭನವರಗೆಲುವ ಲಜ್ಜೆನಾಚಿಕೆ- ಯಿಲ್ಲದೆ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ ಎಲ್ಲ ವೇದವನುದ್ಧರಿಸ್ಯಂಬುದಿಯ ಜಲ್ಲಿಸಿ ಧಾರುಣಿಯನು ತಂದಿರುಹಿ ತಲ್ಲಣಿಸುವ ಪ್ರಹಲ್ಲಾದನ ಪೊರೆÀದು ಬಲ್ಲಿದ ಬಲಿಯ ಬಂಧಿಸಿ ಪಿತನಾಜ್ಞೆಯ ಸಲ್ಲಿಸಿ ಮಾತೆಯ ಶಿರವ ಚೆಂಡಾಡಿ ಬಿಲ್ಲನ್ನೆತ್ತಿ ಭೂಮಿಜೆಯೊಡಗೂಡಿ ಮಲ್ಲರ ಮಡುಹಿ ಮುಪ್ಪುರದ ಬಾಲೆಯರ ಜಳ್ಳು ಮಾಡಿ ಧರ್ಮವ ಹೋಗ್ಯಾಡಿ ಹಲ್ಲಣಿಸುವ ತೇಜಿಯನೇರಿದ ಶಿರಿ ವಾಸುದೇವ ಕಾಣೆ ಅಮ್ಮಯ್ಯ 2 ಎವೆ ಇಕ್ಕ ಬೆನ್ನಲ್ಹೊತ್ತು ಗಿರಿಯಕೊ- ನೆವಲ್ಲ ಮಸೆವ ಸಮಯದಿ ಬಹವಿಪ್ರ ಮುನಿ ಭವ ಶ್ರೀರಾಘವ ನವನೀತಚೋರ ನಾರಿಯರ ಮೋಹಿಸಿ ತವಕದಿ ತುರಗವನೇರಿ ಮೆರೆವನ್ಯಾರೆ ಪೇಳಮ್ಮಯ್ಯ ತಮನ ಮರ್ದಿಸಿ ಸಾಮವನಜಗಿತ್ತು ಸುಮನಸರಿಗೆ ಸುಧೆಯನು ತಂದೆರದು ಅವನಿಗಳೆದ ಅಸುರನ ಸಂಹರಿಸಿ ಮಮತೆಯಿಂದ ಪುಟ್ಟ ಮಗುವನೆ ಸಲಹಿ ಗಮಕದೊಳಗಿದ್ದ ಬಲಿಯನು ಕೆಡಮೆಟ್ಟಿ ಸಮರಂಗದಿ ಸುರಧೇನುವ ತಂದು ದಿನಕರ ವಂಶೋದ್ಧಾರಕನಾಗಿ ಕಂಸ- ನ ಮಡುಹಿ ಮುಪ್ಪುರದ ಬಾಲೆಯರು ಭ್ರಮಿಸುವಂತೆ ಬೌದ್ಧಾವತಾರನಾದ ಕಲ್ಕಿ ಹೆಳವನಕಟ್ಟೆರಂಗ ದೇವೋತ್ತುಂಗನ 3
--------------
ಹೆಳವನಕಟ್ಟೆ ಗಿರಿಯಮ್ಮ
ಏನು ಹೇಳಲಿ ಕೂಸಿನ ಚರ್ಯಮಾನಿನಿ ಉಳಿದದ್ದ ಆಶ್ಚರ್ಯ ಪ ಪುಟ್ಟಿದೇಳನೆಯ ದಿನವೆ ಬಾಲಗ್ರಹ ಬಂದುಎಷ್ಟು ಕಾಡಿದಳು ನಮ್ಮಪ್ಪನಸೃಷ್ಟಿಪಾಲಕ ಸಿರಿವಿಷ್ಣು ದಯದಿಂದಕಷ್ಟ ಕಳೆದು ನಮ್ಮ ಕೂಸು ಉಳಿದಿತೇ 1 ಒಂದು ಮಾಸದ ಕೂಸು ಅಂದು ಬಂಡಿಯ ಕೆಳಗೆಹೊಂದಿಸಿ ಮಲಗಿಸಿದ್ದೆನೇ ನಾನುಅಂದು ಹಸಿದು ಮುಖದಿಂದ ಬೆರಳನೆ ಚೀಪಿಬಂಧ ಕಳೆದು ಹೀಂಗೆ ಬದುಕಿತೇ 2 ದುಷ್ಟತನವು ಬಹಳ ಎಂದು ಒರಳಿಗೆಕಟ್ಟಿಹಾಕಿದೆ ಇವನ ಒಂದಿನಾಬೆಟ್ಟದಂತೆರಡು ಮರಗಳು ಬೀಳಲು ಮಧ್ಯ ಪುಟ್ಟ ನಮ್ಮಪ್ಪ ಹ್ಯಾಂಗೆ ಬದುಕಿತೆ 3 ಅಂಗಳದೊಳಗೆ ಆಡುತ ಕುಳಿತಿದ್ದ ಕೂಸಿನಾ-ಮಂಗಳಾ ಘಾಳಿ ಬಂದೊಯಿತೆಅಂಗನೇರೆಲ್ಲರೂ ಅಳುತ ಕೂತೇವಲ್ಲೆ ನರ-ಸಿಂಗನಾ ಕರುಣದಿಂದುಳಿದಿತೆ 4 ನೀರು ಕುಡಿದು ಯಮುನೆ ಮೇಲೆ ಆಡಲು ಕೂಸುಘೋರ ಪಕ್ಷಿಯು ಬಂದು ನುಂಗಿತೆಪೋರರೆಲ್ಲರು ನೋಡಿ ಗಾಬರಿಯಾಗಲು ಮತ್ತೆಕಾರಿತವನ ಬಕ ಸೋಜಿಗವೆ 5 ಕತ್ತೆಗಳನು ಕೊಂದು ತಾಳಫಲವು ಗೋಪ-ಪುತ್ರರಿಗೆ ಉಣ್ಣ ಕೊಟ್ಟಿಹನಂತೆಚಿತ್ರಚರಿತನ ನಂದಬಾಲನ ಚರಿತೆ ಏಕಾವೃತದಿಂದಲಿ ಪೇಳಲಳವೇನೆ 6 ಕರುಗಳ ಕಾಯುತಿರಲು ವತ್ಸವೇಷದಿದುರುಳನೊಬ್ಬನು ಬಂದಿಹನಂತೆಅರಿಯದಾ ಕೂಸಿನಾ ಕಾಲ್ಪಿಡಿದುಬೆರಳ ಮರದ ಮೇಲಕ್ಕೆ ತೂರಿದನಂತೆ 7 ಏಳೇ ವರ್ಷದವ ಕೇಳೆ ಗೋವರ್ಧನಏಳು ದಿವಸ ಎತ್ತಿದನಂತೆಬಾಳುವ ಗೋಪಿಯರ ಪಾಲನೆ ಮಾಡಿದನೀಲವರ್ಣನ ಎಷ್ಟು ವರ್ಣಿಸಲೆ 8 ಬಾಲನಾದರು ನಿನ್ನ ಹಾಳು ದೈತ್ಯನ ಕೊಂದು ಬ-ಹಳ ಕುತ್ತುಗಳಿವೆ ಕೇಳಿದೇನೆಬಾಲಕರಿಬ್ಬರು ಲೋಲರಿಬ್ಬರು ನಮ್ಮ ಬಾಲಕರೇನೇ ಸ್ವರ್ಗಪಾಲನು ಇಳೆಯೊಳು ಉದಯಿಸಿದನೇ 9 ಮಂದಗಮನೆ ಎನ್ನ ಕಂದನಾಟಗಳನ್ನುಮಂದಿಯ ದೃಷ್ಟಿಯ ಭಯದಿಂದ ನಾನುಒಂದೂ ಹೇಳದೆ ಹೀಗಾನಂದ ಬಡುವೆನು ನಾನುಚಂದ್ರವದನೆ ರೋಹಿಣಿ ಕೇಳೆ 10 ಗೋಪಿ ಸುಖಿಸುತಿಹಳು 11
--------------
ಇಂದಿರೇಶರು
ಕಂಜಾಕ್ಷ ಹರಿಯ ಕಂಡಲ್ಲದೆ ಈಪಂಜರದಿ ಈ ಗಿಣಿ ನಿಲ್ಲದೆ ಪ. ಬಾಲತÀನದಲ್ಲಿ ಮನೆಮನೆಯ ಪೊಕ್ಕುಪಾಲಕುಡಿದನು ಮನದಣಿಯಲಾಲಿಸಿದವನು ಇನ್ನು ಮುನಿಯಲೋಲಾಕ್ಷಿ ಬಿಡನ್ಯಾಕೀ ಗÀಸಣೆಯ 1 ಏಳುವರುಷದ ಶಿಶು ಪೋಗಿಆಲಸ್ಯ ಹಸುತೃಷೆÉಯ ನೀಗಿಶೈಲವಾಗಿ ನಿಂತಿದ್ದ ನಮಗಾಗಿಕಾಲಮ್ಯಾಲೆ ಬಿದ್ದನಿಂದ್ರ ಬಾಗಿ 2 ಕಾಳಿಂದಿಯ ಮಡುವಿನೊಳಾಡಿಕಾಳಿಯಾ ನಾಗಗೆÉ ಮದ ಹುಡಿಮೇಲೆ ಅವರೊಳು ಕೃಪೆಮಾಡಿಪಾಲಿಸಿದ ಕರುಣದಿ ನೋಡಿ3 ಪಾರಿಜಾತದ ಪೂಗಳ ತಂದುನಾರದ ಮುನೇಂದ್ರ ತಾನೆ ಬಂದುಸಾರಿದನಲ್ಲೆ ಗತಿ ನೀನೆಂದುನರ ಸುರರುಗಳಿಗೆ ಬಂಧು 4 ವೃಂದಾವನದೊಳಿವನ ಲೀಲೆ ಆ-ನಂದವನುಣಿಸಿತೆಲೆ ಬಾಲೆಎಂದವನ ಕತೆ ಕರ್ಣದೋಲೆ ಹಾ-ಗೆಂದು ಭಾವಿಸೆ ಪುಣ್ಯಶೀಲೆ 5 ಸಕಲ ಸುರರ ಶಿರೋರನ್ನಮುಕುತಿದಾಯಕ ಸುಪ್ರಸನ್ನಶ್ರೀಕೃಷ್ಣ ಅಟ್ಟಿದ ಉದ್ಧÀ್ದವನ್ನ ಬಂದುವಾಕು ಕೇಳಿ ಮನ್ನಿಸಿಯವನ6 ಚೆಲ್ವ ಹಯವದನನ್ನ ನೀರೆ ನಮ್ಮನಲ್ಲನವನಿಲ್ಲಿ ಬಾರದಿರೆಸುಲಭನ್ನ ಬೇಗ ಕರೆತಾರೆ ನಾ-ವೆಲ್ಲರವನಲ್ಲಿ ಹೋಹ ಬಾರೆ 7
--------------
ವಾದಿರಾಜ
ಕಂದ ಕೃಷ್ಣ ನೀನು ಪವಡಿಸಲೆಂದು ನಾ- ನೊಂದು ಕಥೆಯ ಪೇಳ್ವೆನೋ ನಂದನನೇ ಒಂದು ಕಥೆಯ ಪೇಳ್ವೆನು ಪ ಹಿಂದಿನ ಯುಗದಲ್ಲಿ ಶ್ರೀರಾಮನೆಂಬೊರ್ವ ಕಂದ ಕೌಸಲ್ಯಗಾದ ಮುಂದೆ ಪೇಳು ಹುಂಕಾರದಿ ಕೇಳಿದೆ ಚಂದವಾದೀ ಕಥೆಯ ಸುಧೇಯ 1 ಆತನ ಪತ್ನಿ ಸುಶೀಲೆ ಸೀತೆಯೆಂದು ಖ್ಯಾತಳಾದಳು ಜಗದಿ ಮೂಡಿದನೆಂದೆ ಹುಂ ಮಾತೆ ಮುಂದಕೆ ಪೇಳು ಸೀತಾರಾಮರ ಕಥೆಯು ಸುಶ್ರಾವ್ಯ 2 ಪಂಚವಟಿಯಲಿ ಸಂಚರಿಸುತ್ತಿರೆ ಪಂಚದ್ವಯಾನನನು ಕೊಂಚ ಮಾತ್ರ ಹುಂಕಾರವ ನುಡಿ ವಿ- ರಿಂಚಿ ಪಿತನು ಮುನಿದಾ ಸದ್ದಾದ3 ಮಿಥ್ಯಾಯೋಗಿ ಯಾಗಿ ಸತ್ಯಮಹಿಮಳ ತಾ- ನೆತ್ತಿ ಕೊಂಡೋದನಯ್ಯ ಒತ್ತರಿಸಿತು ಕೋಪ ಮತ್ತೆ ನುಡಿದ ಹರಿ ಎತ್ತ ಸೌಮಿತ್ರೆ ಧನುರ್‍ಧರರ ಧನುರೇತ್ತ ಸೌಮಿತ್ರಿ ಧನುರ್ 4 ಪುಟ್ಟ ಕೂಸÉ ಆರ್ಭಟವೆಷ್ಟು ಮಾಡುವೆ ನಿಟ್ಟಿಪುದಸದಳವು ಥsÀಟ್ಟನೆ ಮಲಗೈಯ್ಯಾ ದಿಟ್ಟಿ ನರಸಿಂಹವಿಠಲ ಪಟ್ಟರಿಸುವೆನಯ್ಯ ರಂಗೈಯ್ಯಾ ಪಟ್ಟರಿಸುವೆನಯ್ಯಾ 5
--------------
ನರಸಿಂಹವಿಠಲರು
ಕನಸಿನಲಿ ಕಂಡೆನಾ-ಶ್ರೀನಿವಾಸನಾ ಕಾಣದಾತನ ||ಕನಸಿನಲಿ|| ಪ ಶರದಾಭಗಾತ್ರನ-ಶಂಪಾಭೋಜ್ವಲ ಕರಪೀತವಸ್ತ್ರನ ಸಾರಸಾಕ್ಷನ ಶರದಿಂದುವಕ್ತ್ರನ ಸಿರಿಯನುರದಿತಾನಿರಿಸಿಕರಗಳಿಂ ದರಚಕ್ರಗಳನು ಧರಿಸಿರ್ಪಾತನ 1 ಕಾಮನಂ ಪೆತ್ತನ ಕಾಕುಸ್ಥನಿಗೆ ಕಾಮಿತವಿತ್ತನ ಕೌಸ್ತುಭಮಣಿ-ಧಾಮವಂ ಪೊತ್ತನ ಹೇಮ ಸೂತ್ರಮಣಿ ದಾಮಭೂಷಣ ಸ್ತೋಮ ದಿವ್ಯಗುಣರಾಮಣೀಯನ ||ಕನಸಿನಲಿ || 2 ಸುರವೃಂದಾನಂದದಿ-ಸ್ತುತಿಸುತ್ತ ಬರುತಿರೆ ತೂರ್ಯಾರವದಿ ಸಿತಛತ್ರಾದ್ಯುರುತರ ರಾಜ ಚಿಹ್ನದಿ ಗರುಡನೇರಿ ನಿಜ ಶರಣರ ಪೊರೆಯುವ ವರದಪುಲಿಗಿರಿ ವರದವಿಠಲನ ||ಕನಸಿನಲಿ|| 3
--------------
ಸರಗೂರು ವೆಂಕಟವರದಾರ್ಯರು
ಕಮಲನಯನನ ಕರತಾರೆ ಕರುಣ ಸಾಗರನ ಕರಿರಾಜ ವರದನ ಪ -------ಪನ ಕಂಬುಕಂಧರನ ಲೋಕನಾಯಕ ಶ್ರೀಯದು ವೀರನಾ ರಾಕೇಂದು ಮುಖಿ ವರ ಲಕ್ಷ್ಮೀನಾಯಕನ ನೀರಜ ನಾಭನಾ 1 ಸುಜನ ವಿಲಾಸನಾ ಕಂದ ಪ್ರಹ್ಲಾದನಾ ಕಾಯ್ದದೇವನಾ ಸುಂದರ ವದನ ಗೋವಿಂದ ಮುಕುಂದನಾ ಮಾಧವ ಕೃಷ್ಣನಾ 2 ಯದುಕುಲಾಬ್ಧಿಚಂದ್ರ ವೇದಗೋಚರನಾ ಮಧÀು ಸೂದನ ರೂಪ ಮಹಿಮ ಪ್ರಕಾಶನಾ ಬುದ್ಧ ಜನರ ಸಿರಿಯ ನಾ ಪೂರ್ಣಾನಂದನ ಚದುರೆ ನೀ ಬೇಗ ಹೋಗಿ ಚಲುವ ಸಂಪನ್ನನಾ 3 ಆನಂದ ನಿಲಯನಾದ ಅಖಿಲವೈಭವನಾ ಜ್ಞಾನಿಗಳ ಪೊರೆವ ಘನ ಗಂಭೀರನಾ ಧೇನು ಪಾಲಕ ದೇವಾದಿ ದೇವನ ಗಾನಲೋಲನಾದ ವೇಣು ಗೋಪಾಲನ 4 ಗರುಡವಾಹನನಾ-----ಜನ ಕಾಯ್ದವನಾ ಸ್ಥಿರ ಹೆನ್ನ ತೀರದಿ ವಾಸವಾಗಿಹನ ದೊರೆ 'ಹೆನ್ನ ವಿಠ್ಠಲನ’ ----ದೇವನಾ ಪೊರೆವನು ನಮ್ಮ ನಿಂದು ಪರಮಹರುಷದಿಂದಾ5
--------------
ಹೆನ್ನೆರಂಗದಾಸರು
ಕೃಷ್ಣ ಪಾಲಿಸು ಪರಮ ಕೃಪಾಲಯ ಪ. ಪಾಲಿಸು ನಿನ್ನಯ ಬಾಲನು ಬೇಡುವ ಬಯಕೆಯ ಲಕ್ಷ್ಮೀ- ಲೊಲ ನೀ ಕರದು ತಾರಾಕೆಯ ಅ.ಪ. ತುರುವು ಮೊಲೆಯನುಂಬ ಕರುವಿನ ಬೆನ್ನನು ತುರಿಸುತ ತಿರುಗುವ ತೆರದಲಿ ನೀ- ನಿರುವಿಯೆಂದರಿದೆನು ಮನದಲಿ ಚರಣ ಪಂಕಜಗಳ ಶರಣ ಹೊಕ್ಕೆನ್ನನು- ದ್ಧರಿಸು ಶ್ರೀಕಾಂತ ಗುಣದಲಿ ಸ್ವೀ- ಕರಿಸುತ ನನ್ನ ನಿನ್ನ ಕೆಲದಲ್ಲಿ 1 ಖಗರಾಜ ಭೂಧರವರ ನಾಗಭೂಷಣ ಶಕ್ರ ಪೂಜಿತ ನಿನ್ನಾ- ವಾಗ ಕಾಂಬೆನು ಗೃಹರಾಜಿತ ಮೂಗಭಾವದ ತಪ್ಪ ಮನಕೆ ತರುವರೆ ಮ- ಹಾ ಗಣಪತಿ ಶಬ್ದ ವಾಚ್ಯನೆ ಎನ್ನ ಬೇಗ ಕರೆಸು ಸರ್ವಾಧ್ಯಕ್ಷನೆ 2 ಎಲ್ಲವು ನಿನಗೊಪ್ಪಿಸುವೆ ಎಂಬುದ ನೀ ಬಲ್ಲಿ ಶ್ರೀಭೂರಮೆನಲ್ಲನೆ ಎನ- ಗಿಲ್ಲ ಭಾರವು ಜಗಮಲ್ಲನೆ ತಲ್ಲಣ ಬಿಡಿಸಿ ಪಾಲಿಸು ಶಿರದಲಿ ಪದ ಪಲ್ಲವನನು ವೆಂಕಟೇಶನೆ ಸರಿ- ಯಲ್ಲ ನಿನಗೆ ಶ್ರೀನಿವಾಸನೆ3
--------------
ತುಪಾಕಿ ವೆಂಕಟರಮಣಾಚಾರ್ಯ
ಗುಮ್ಮ ಬಂದನೆಲೊ ದುರ್ಜನ ಬೇಡಸುಮ್ಮನಿರೆಲೊ ರಂಗಯ್ಯ ಪ ನಿತ್ಯ 1 ಕಡಗ ಕಂಕಣ ಬಾಹುಪುರಿ ಭುಜಕೀರ್ತಿಯುಉರದಲ್ಲಿ ಧರಿಸಿದ ರುಂಡಮಾಲೆಯು ತನ್ನಸಿರದ ಜಟಾಜೂಟೆಯು ತಾಂ ಧರಿಸಿದ ಉರಗನಾ-ಭರಣಗಳು ಪರಮ ಮೂರುತಿ ನಿಮ್ಮ ಚರಣಸೇವೆಗೆ ನಿತ್ಯ2 ಕಾಮನ ರೂಪಕ್ಕೆ ಜರಿವಾ ಚೆನ್ನಿಗನಾಗಿಕೋಮಲಾಂಗೇರು ಭಿಕ್ಷವ ನೀಡಲು ಪ್ರೇಮದಿಂದವರಿಗೆಲ್ಲಮುಕ್ತಿಯನೀವ ಸೋಮಶೇಖರನ ಚೆಲ್ವರಾಮನಾ ಭಾವ ಮೃದುವಾಕ್ಯವಿದು ಮುದ್ದು 3 ಕೋಟಿ ಸೂರ್ಯರ ಕಾಂತಿ ನೇಟಾದ ತನುವಿನಪೂಸಿದ ಭಸ್ಮವು ನೊಸಲ ಮುಕ್ಕಣ್ಣಿನ ನೋಟದಕಿಡಿಯುದುರೆ ಭೂತಗಣಂಗಳು ಕುಟಕಿಚ್ಛಕ ಬೆದರೆನಾಟ್ಯವನಾಡುತ ನಗುತ ಮೋಹನ ಮುದ್ದು 4 ನಿಮ್ಮ ಚರಣ ಸೇವೆಗೆ ನಿತ್ಯಾ5
--------------
ಶ್ರೀಪಾದರಾಜರು
ಜನನೀ ತ್ರಿಜಗತಿ ಜನಾರ್ದನೀ ಜನನೀ ಜಯತು ಶ್ರೀಪದ್ಮಾವತೀ ಪ. ಗುಣಗಣಾರ್ಣವೆ ವಿಶ್ವಪೂಜಿತ ಜನನಮರಣವಿದೂರೆ ಪದ್ಮಾಸನೆ ಘನಗಗನಭೂಪಾಲನಂದಿನಿ ಅ.ಪ. ಶ್ರೀನಿವಾಸನ ರಾಣಿ ಸರ್ವಾರ್ಥ ನಿ- ದಾನಾಂಬುಜಪಾಣಿ ಭಾನುಕೋಟಿಸಮಾನ ತೇಜೆ ಸ- ದಾನುರಾಗಪ್ರದಾನೆ ವಿಬುಧ- ಶ್ರೇಣಿನುತೆ ಮಹದಾದಿಮಾಯಾ- ಮಾನಿ ಮಾಧವಮನವಿಲಾಸಿನಿ 1 ಸುಂದರಿ ಸುಮನೋಹರಿ ಸುಜ್ಞಾನಾ- ನಂದೆ ಸಿಂಧುಕುವರಿ ಚಂದ್ರವದನೆ ಚರಾಚರಾತ್ಮಕಿ ವಂದನೀಯೆ ಪರೇಶಪರಮಾ- ನಂದರೂಪೆ ಸನತ್ಸುಜಾತ ಸ- ನಂದನಾದಿಮುನೀಂದ್ರವಂದಿತೆ 2 ಅಂಬೆ ಶ್ರೀಹರಿಪ್ರೀತೆ ಶಂಭುಸಂಭಾವಿತೆ ತ್ರಿಲೋಕಾ- ರಂಭಸೂತ್ರೆ ಪವಿತ್ರೆ ವಿಶ್ವಕು- ಟುಂಬೆ ಕಮಲಯನೇತ್ರೆ ಸಾಧ್ವೀಕ- ದಂಬಮಸ್ತಕಮಣಿಪ್ರಭಾಶಿನಿ 3 ಪದ್ಮ ಸರೋವಾಸಿನೀ ಪಾವನಹೃ ತ್ಪದ್ಮನಿತ್ಯಭಾಸಿನಿ ಪದ್ಮನವಕ್ರೀಡಾವಿಲಾಸಿನಿ ಮ- ಹನ್ಮನೋಧ್ಯಾನಾಧಿರೂಢೆ ಸು- ಪದ್ಮಹಸ್ತೆ ನಮಸ್ತೆ ಪಾವನೆ ಪದ್ಮನಾಭನರಮಣಿ ಕರುಣಿ 4 ವರಲಕ್ಷ್ಮೀವಾರಾಯಣಿ ಕಲ್ಯಾಣಿ ಶ್ರೀ- ಕರೆ ಕಾಳಾಹಿವೇಣಿ ಧರೆಯೊಳುತ್ತಮ ಕಾರ್ಕಳದಿ ಸು- ಸ್ಥಿರನಿವಸವ ಗೈದೆ ಕರುಣಾ- ಶರಧಿ ಭಕ್ತರ ಪ್ರಾರ್ಥನೆಯ ಸ್ವೀ- ಕರಿಸಿ ಪೊರೆವಿಷ್ಟಾರ್ಥದಾಯಿನಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಮಂಗಳಂ ಸತ್ಯಧೀರತೀರ್ಥರಿಗೆ ಶುಭಮಂಗಳಂ ಯತೀ ಗುಣಮಣಿಗೆ ಪ ಜಗದುದರಧರನಾದ ಜಗವ ಸೃಷ್ಟಿಸಿದಂಥ ಜಗವ ಪಾಲಿಸುವ ಶ್ರೀ ಜಗದೀಶನಾ ತ್ರಿಗುಣಮಾನಿಯಳಿಂದ ಬಗೆ ಬಗೆಯ ಸ್ತುತಿಗೋಳ್ವ ರಘುವರನ ದಿವ್ಯ ಚರಣಗಳ ಸೇವಿಪಗೆ 1 ಜಗದೀಶನಾಜ್ಞೆಯಿಂ ಜಗಕೆ ಗುರುವೆನಿಸಿ ನಾ- ಲ್ಮೊಗನೈಯ್ಯ ಸರ್ವಪರಿಹಾರನೆನಿಸಿದವಗೆ ಜಗದೊಳಿರುವ ಅಜ್ಞ ಜನರುಗಳಿಗೆ ಪಂಚಮು- ದ್ರೆಗಳನೇ ಇತ್ತು ಪಾಪಗಳ ತರಿದವಗೆ 2 ಸತ್ಯವೀರರು ಕರಗಳೆತ್ತಿ ಉತ್ತಮಪದವ ಇತ್ತದ್ದೆ ಪುಸಿಯೆಂದು ನುಡಿದವರ ಮುಖಕೆ ಮೃತ್ತಿಕೆಯನು ಹಚ್ಚಿ ಹತ್ತುಯಂಟೋ ರೂಪ ಸ- ರ್ವೋತ್ತಮನ ಪೂಜಿಸಿದ ಸತ್ಯಧೀರರಿಗೆ 3 ಪುರಕಾಶಿಯಿಂದ ರಾಮೇಶ್ವರದ ಪರಿಯಂತ ಇರುವ ಕ್ಷೇತ್ರಗಳಲ್ಲಿಯ ಮಹಿಮೆಯಾ ದುರುಳ ಕಲಿಯಲಿ ಕಡಿಮೆಯಾಗಬಾರದು ಮನುಜ ಸಿರಿರಾಮನಾಶ್ರಯದಿ ಜನಿಸಿ ಬಂದವಗೆ 4 ಕರುಣಾಸಾಗರನಿಗೆ ಕರೆದಲ್ಲಿ ಬರುವಗೆ ಶರಣುಬಂದವರ ಪರಿಪಾಲಿಸುವಗೆ ವರಗುರು ಮಧ್ವರಾಯರ ಪೀಠಪಾತ್ರಗೆ ಧೀರ ಹನುಮೇಶವಿಠಲ 5
--------------
ಹನುಮೇಶವಿಠಲ
ಜಯಜಯತು ಶುಭಕಾಯ ಜಯಜಯತು ಹರಿಪ್ರೀಯಜಯತು ಜೀಯ ಮಧ್ವಾಖ್ಯಮುನಿರಾಯಪ. ರಾಮಾವತಾರದಲಿ ಹನುಮಂತನಾಗಿ ನೀತಾಮಸನ ಪುರವ ಅನಲಗಾಹುತಿಯನಿತ್ತೆಭೂಮಿಜೆಯ ಕುಶಲವನು ರಘುನಾಥಗರುಹಿದೆಸ್ವಾಮಿಕಾರ್ಯವ ವಹಿಸಿ ಖಳರ ನೀ ತರಿದೆ 1 ದ್ವಾಪರಾಂತ್ಯದಲಿ ಶ್ರೀಕೃಷ್ಣನಂಘ್ರಿಯ ಭಜಿಸಿಪಾಪಿಮಾಗಧ ಬಕ ಕೀಚಕಾದಿಗಳಕೋಪದಿಂದಲಿ ತರಿದು ಕುರುಕುಲವ ನೀನಳಿದೆ ಪ್ರ-ತಾಪದಿಂದಲಿ ಮೆರೆದೆ ಖಳರ ನೀ ಮುರಿದೆ 2 ಮಾಯಿಗಳು ಹೆಚ್ಚಿ ಮತವೆಲ್ಲ ಸಂಕರವಾಗಿತಾಯಿಗಳಿಲ್ಲದ ಶಿಶುಗಳಂತೆ ಸುಜನರಿರಲುನೀಯವತರಿಸಿ ಮತವೆಲ್ಲ ಉದ್ಧರಿಸಿ ನಾ-ರಾಯಣನೆ ಮೂಜಗಕೆ ಪರದೈವವೆಂದೊರೆದೆ 3 ದುರುಳ ವಾದಿಗಳಿಗುತ್ತರವ ಕೊಡಬೇಕೆನುತಸರುವ ಶಾಸ್ತ್ರಾಮೃತವ ಸೃಜಿಸಿ ವಾಕ್ಯಗಳ ಕ್ರೋಡಿಸಿದರುಶನ ಗ್ರಂಥಗಳ ರಚಿಸಿ ಶಿಷ್ಯರಿಗಿತ್ತೆಪರಮ ತತ್ವದ ಖಣಿಯೆ ಗುರುಶಿರೋಮಣಿಯೆ 4 ನಿನ್ನ ಮತವೇ ವೇದಶಾಸ್ತ್ರಗಳ ಸಮ್ಮತವುನಿನ್ನ ಮತವೇ ಇಹಪರಕೆ ಸಾಧನವುಪನ್ನಂಗಶಯನ ಶ್ರೀ ಹಯವದನದಾಸರೊಳುನಿನ್ನ ಪೋಲುವರುಂಟೆ ಮಧ್ವಮುನಿರಾಯ 5
--------------
ವಾದಿರಾಜ
ತತ್ವಸುವಾಲಿಗಳು ಓಂಕಾರ ಪ್ರತಿಪಾದ್ಯ ಶ್ರೀಕಾಂತನೇ ನಿನ್ನ ಭವ ಭಂಗವ ಗೈಸಿ ಶುಭಾಂಗನೆ ಕಾಯಯ್ಯ ಶ್ರೀರಂಗ 1 ಕಾಲತÀ್ರಯಕೃತ ವಿಕಾರವಿಲ್ಲದೆ ನೀನೆ ಮೂಲರೂಪನೆ ಬಹು ರೂಪ-ಬಹುರೂಪ ಸ್ವಗತಭೇದ ವಿವರ್ಜಿಕನೆ ಸಲಹಯ್ಯ 2 ಆವಕಾಲಕು ನೀನೆ ಚತುರ ರೂಪದೊಳಿದ್ದು ಜೀವ ನಿಯಾಮನು ನೀನಾಗಿ-ನೀನಾಗಿ ವಿಶ್ವ ತೈಜಸ ಪ್ರಾಜ್ಞ ತುರ್ಯಾತ್ಮ3 ಶುಭ ವಿಷಯಂಗಳಾ ಮಾಡಿ ಉಣಿಸುವೆ 4 ವಿಶ್ವದಲಿ ವ್ಯಾಪಿಸಿಹೆ ವಿಶ್ವನಂಬೋರು ನಿನ್ನ ನಾಶರಹಿತನೆಂದೂ ನರನೆಂದೂ-ನರನೆಂದೂ ನಿನ್ನ ವೈಶ್ವಾನರನು ಎಂದು ಪೇಳ್ವಾರೊ 5 ಹರಿ ನಿನ್ನ ವಿಶ್ವನೆಂದು ಉಪಾಸನೆಯನು ಮಾಡಿ ಹೇರಂಬ ನಿನ್ನ ಒಲಿಸಿದಾ-ಒಲಿಸಿದಾ ಗಜವಕ್ತ್ರನಾಗಿ ನಿನ್ನ ಸ್ತುತಿಪಾನೋ 6 ದೇಹದೊಳು ಸ್ವಪನದಲಿ ನೀ ನೀಡಿ-ನೀ ನೀಡಿ ಜೀವರುಪಭೋಗಿಸುವ ಸಾರವನು ರಕ್ಷೀಪೆ 7 ತೈಜಸನೆ ವಾಸನಾಮಯವೆಲ್ಲ ತೋರೀಪೆ8 ತತ್ವಗಳ ವ್ಯಾಪಾರವೇ ವ್ಯಾಪಾರ9 ಸುಪ್ತಕಾಲದಿ ಜೀವ ಸ್ವರೂಪಕೆ ತಕ್ಕ ಕ್ಲುಪ್ತ ಅಜ್ಞಾನ ಮೊದಲಾದ-ಮೊದಲಾದ ಕಾಲವನನುಸರಿಸಿ ಜೀವನಿಗೆ ತನ್ನ ತಿಳಿಯಗೊಡದೆ 10 ಪ್ರಾಜ್ಞಮೂರುತಿ ನೀನೆ ಹೃದಯಸ್ಥಾನದೊಳಿದ್ದು ಅಜ್ಞಾನಿ ಜೀವನ ಕಾಲಾವ-ಕಾಲಾವ ನನುಸರಿಸಿ ಜೀವ ಸ್ವರೂಪಾನಂದವÀನು ನೀನೀವೆ11 ಸ್ವಪನ ಜಾಗ್ರತ ಜ್ಞಾನವಿನಿತಿಲ್ಲವೆಂದು ಕೂಡುವ ಜೀವ ಆನಂದ ಹಿಂದೆಂದೂ ಕಾಣನೊ12 ಘನ ಬಹಿ ಪ್ರಾಜ್ಞ ತೈಜಸಾಂತ ಪ್ರಾಜ್ಞ ಘನ ಪ್ರಾಜ್ಞ ಮೂರುತಿ-ಮೂರುತಿ ಗಳುಪಾಸನೆ ಮಾಳ್ವ ಬುಧರೇನು ಧನ್ಯರೊ 13 ನಾಗಿ ನೀ ಕೊಡುತಿರುವೆ ಮುಕ್ತರಿಗೆ ಆನಂದ 14 ಮುಕ್ತರಿಗೆ ದೃಷ್ಟನೋ ಅದೃಷ್ಟನೋ ಅ- ಗುರುಪ್ರಾಣನನುಗ್ರಹದಿ ಲಭ್ಯನಹುದಯ್ಯಾ ಹೇ ಜೀಯ 15 ಕಣ್ಮನ ಹೃದಯ ತ್ರಿಧಾಮಗಳಲ್ಲಿ ಇದ್ದು ಉಣಿಸೂವೇ ಜೀವರಿಗೆ ಫಲಭೋಗ-ಫಲಭೋಗವು ವಿಶ್ವತೈಜಸ ಪ್ರಾಜ್ಞ ಸ್ಥಿತಿಯೊಳು 16 ಸರ್ವರೂಪವು ಪೂರ್ಣ ಸರ್ವಗುಣ ಸಂಪೂರ್ಣ ಸರ್ವೋತ್ಪಾದಕ ಸುಖರೂಪಿ-ಸುಖರೂಪಿ ಸರ್ವಲೋಕ ಜೀವರೊಳಿದ್ದು ನಿರ್ಲಿಪ್ತಾ 17 ವರ್ಣತ್ರಯಯುತ ಓಂಕಾರದೊಳಾದ್ಯವರ್ಣ ವಿಶ್ವ ನೀನೆ-ವಿಶ್ವನು ನೀನೆ ಉಕಾರವೇ ತೈಜಸನು ಮಕಾರ ವಾಚ್ಯನೇ ಶ್ರೀಪ್ರಾಜ್ಞ 18 ನಾದದೊಳು ನೀ ವಾಚ್ಯ ತುರ್ಯರೆಂಬೋರು ನಿನ್ನ ಸದನವಾಗಿಹುದೈ ಶಿರಸ್ಥಾನ-ಶಿರಸ್ಥಾನ ನಾಶಿಕಾಗ್ರದಿ ಊಧ್ರ್ವ ದ್ವಾದಶಾಂಗುಲದಲ್ಲಿ ನೆಲೆಸಿರ್ಪೆ 19 ತೈಜಸನೊಡಗೂಡಿ ವಾಸನಾ-ವಾಸನಾಮಯ ಕಳೆವ ಅಜ್ಞಾನಿ ಜೀವನನ್ನಾಡಿಸುವೆ ಶ್ರೀಪ್ರಾಜ್ಞ 20 ಸರ್ವಶಕ್ತನು ನೀನೆ ಸರ್ವಕತರ್Àನು ನೀನೆ ಸವೋತ್ತಮನು ನೀನೆ ಸರ್ವಜ್ಞ-ಸರ್ವಜ್ಞ ಪೂರ್ಣಪ್ರಜ್ಞಾಂತರ್ಯಾಮಿ ಸಲಹಯೈ21 ಪಲವಿಲ್ಲ ವಾಸುದೇವನೆ ನಿನ್ನ ದಯ ಬೇಕೊ 22 ನೀ ಸುಮ್ಮನಿರದೆ ಎನ್ನನೂ-ಎನ್ನನು ಪ್ರೇರಿಸುವೆ ಲೇಸುಮನ ನಿನ್ನಲ್ಲಿ ನೆಲೆಸಲೋ 23 ಕಂಡಕಂಡಲ್ಲಿ ನಾ ಉಂಡುಂಡು ಓಡಾಡಿ ಧಾಂಡಿಗನಾಗಿ ಬೆಳೆದೆನೊ-ಬೆಳೆದೆನೊ ಪುಂಡರೀಕಾಕ್ಷ ನಿನ್ನ ಮರೆತೆನೋ24 ಅವಾವ ಕಾಲದೊಳು ನೀನಿದ್ದು ಉಣಿಸುವೆ ಜೀವಕೃತ ಕರ್ಮಫಲಗಳ-ಫಲಗಳ ಶ್ರೀ ವೇಂಕಟೇಶ ನೀನಿತ್ತು ಸಲಹೂವೇ 25 ವಂದನೆಯು ಒಂದೆ ಮನದಿಂದೆ-ಮನದಲಿ ನಿನ್ನ ಪಾದಾರವಿಂದವ ತೋರಯ್ಯ26 ಬಂಧುಗಳು ಹಿತರೆನ್ನೆ ಬಂಧಕರಾಗಿಹರು ಬಂಧನಕೆ ನಾ ಇನ್ನು ಸಿಲುಕಿದೆ 27 ಘನವಾಗಿ ತನು ಬೆಳೆಸಿ ಹಿತದಿಂದ-ಹಿತದಿಂದ ಮುಂದೆ ಪರಗತಿಯ ಕಾಣುವುದೆಂತೊ ಗೋವಿಂದ28 ವಿತ್ತಾಪಹಾರಕರು ಹೃತ್ತಾಪಕಳೆವರೆ ಉತ್ತಮಗತಿಯ ತೋರಿಸು29 ಹರಿಕಥಾಪುರಾಣಶ್ರವಣ ನಿತ್ಯದೀ ಮಾಡೀ ಪರಿಯಿಂದ ನಿಜತತ್ವವರಿಯಾದೆ-ಅರಿಯಾದೆ ಬರಿದೇ ವಿಪರೀತ ಜ್ಞಾನಕೆ ವಶನಾದೆ30 ಮದ್ಯ ತುಂಬಿದ ಭಾಂಡ ಗದ್ಗುಗೆಯ ಮೇಲಿಟ್ಟು ಶ್ರಧ್ದೆಯಿಂದಲಿ ಅದನ ಪೂಜಿಸೆ-ಪೂಜಿಸೆ ಪೂತÀ ದುರ್ಗಂಧ ಫಲವದು ಬಿಟ್ಟೀತೆ 31 ಮಂದಹಾಸದಿ ಜನರ ಸಂದೋಹದಲಿ ಕುಳಿತು ನಿಂದೆ ಮಾತುಗಳಾಡಿ ಮದತುಂಬೀ-ಮದತುಂಬಿಬಿದಾ ದುರ್ಮ ದಾಂಧರಿಗೆ ಗತಿಯು ಮುಂದೆ ಇನ್ನೆಂತೊ32 ಕಂಡಕಂಡವರಲ್ಲಿ ಕೊಂಡೆ ಮಾತುಗಳಾಡಿ ಪುಂಡರೀಕಾಕ್ಷ ನಿನ್ನ ಸ್ಮರಿಸಾದೆ-ಸ್ಮರಿಸದಲೆ ಪರದಿ ಯಮದಂಡಕ್ಕೆ ಗುರಿಯಾದೆ33 ಹಿಂದೆ ಮಾಡಿದ ಪುಣ್ಯದಿಂದ ಇಂದಿನ ಭಾಗ್ಯ ವೆಂದು ತಿಳಿದು ಮುಂದೆ ನಡೆಯಾದೆ-ನಡೆಯಾದೆ ತಿಳಿಗೇಡಿ ಬುದ್ಧಿಯಿಂದ ಕುಂದುಪೊಂದುವೆ 34 ಬಾಯಿಮಾತಲ್ಲ ಶ್ರೀ ತೋಯಜಾಕ್ಷನ ಭಕ್ತ- ರಾಯತನ ತಿಳಿವುದು ಶ್ರಮಸಾಧ್ಯ-ಶ್ರಮಸಾಧ್ಯ ವನು ಸದುಪಾಯದಿಂದ ತಿಳಿದು ನಲಿದಾಡೊ 35 ನಿಂದಕರ ನುಡಿಯಿಂದ ಹಿಂದೆ ಮಾಡಿದ ಪಾಪ ಒಂದೊಂದು ಪರಿಯಲ್ಲಿ ಪರಿಹಾರ-ಪರಿಹಾರವಾಗಿ ನಿಂದಕರು ಬಂಧನಕೆ ಬೀಳ್ವಾರೋ 36 ಸ್ಮøತಿಯುಕ್ತಿಯನೆ ಬಿಟ್ಟು ಯುಕ್ತಿಮಾತುಗಳಿಂದ ಹೊತ್ತು ಕಳೆಯುತ ಉನ್ಮತ್ತನೆನಿಸಿ-ಉನ್ಮತ್ತನೆನಿಸಿದವ ಇ- ನ್ನೆತ್ತÀ್ತ ಭವಶರಧಿಯ ದಾಟÀುವ 37 ಅರೆಘಳಿಗೆ ಕಳೆದುದಿಹ ನರಜನ್ಮ-ನರಜನ್ಮ ಬಂದುದು ನರಕಯಾತನೆಗಲ್ಲದಿನ್ನಿಲ್ಲ 38 ಪರಿಯಂತ ಉದರಭರಣಕಾಗಿ ಉದಧಿಶಯನ ನಾ ನಿನ್ನ ಭಜಿಸಾದೆ-ಭಜಿಸಾದೆ ಮದದಿಂದ ಬುಧಜನರ ನಿಂದೆಯ ಮಾಡೀದೆ39 ಇನ್ನಲ್ಲ ಪರಗತಿಯ ಸಾಧನ-ಸಾಧನವು ತನ್ನೊಳು ತÀನ್ನಿರವರಿತು ಸುಮ್ಮನಿರುವುದು ಅದು ನಿಧಾನ40 ಭಿನ್ನಧರ್ಮಂಗಳ ಗ್ರಹಿಸಾದೆ-ಗ್ರಹಿಸಾದೆ ನೀನೆಣಿಸಿದೆ ತನ್ನಗುಣಧರ್ಮದಂತನ್ಯರಿಹನೇನೊ 41 ಕಾಯವೇ ತಾನೆಂದು ಮಾಯಕೆ ಒಳಗಾಗಿ ಕಾಯಯಾತನೆಗೊಂಡು ನೋಯುವಾ 42 ವಚನ ವಚನವು ಸರ್ವ ಉಚಿತ ದೇಹದ ಕಾರ್ಯ ನಿಚಯದೊಳು ಹರಿ ಪ್ರಚುರನಾಗಿ-ಪ್ರಚುರನಾಗಿ ಕಾಯಕುಪಚಯವಿತ್ತು ಸಲಹೂವ 43 ದೇಹ ಕಾಯದ ಕಾರ್ಯಪ್ರಕ್ರಿಯವ ತಿಳಿಯಾದೆ ಮಾಯೆಗೊಳಗಾಗದಿರು ಹೇ ಮಾನವಾ-ಮಾನವನೆ ತಿ- ಳಿಯೊ ಮಾಯಾರಮಣನ ಬಿಂಬಕ್ರಿಯವಾ44 ಅನ್ಯರೊಳು ನೀ ಹೋರಾಡಬಲ್ಲೆಯ-ಬಲ್ಲೆಯಾ ನಿನ್ನ ವೈರಿಗಳ ಜಯಿಸಲರಿಯದ ಖೂಳ ರಣಹೇಡಿ 45 ಕೊಳೆತು ನಾರುವ ದೇಹದೊಳಗಿರುವ ಹುಳುಕುಗಳ ಕೊಳೆಯ ಕಳೆಯದ ಮನುಜ ನೀನೆಂತೊ-ನೀನೆಂತೊ ಕೊಳೆತÀ ಸಗಣಿಯೊಳಗಿಹ ಹುಳುವೆ ನಿನ್ನ ಗತಿಯೆಂತೊ46 ಆದದ್ದು ಆಯಿತು ಯತ್ನ ತಪ್ಪಿತು ಎಂದು ಹೆದ್ದಾರಿ ಹಿಡಿದು ಪರಮಾರ್ಥ-ಪರಮಾರ್ಥವ ಬುದ್ಧಿ ತಿದ್ದಿಕೊಳ್ಳಲು ಮುಂದೆ ಅನುವಾಗೊ47 ತತ್ತ ್ವದೇವತೆಗಳು ತತ್ತತ್ವಕಾರ್ಯಜಿ- ವೋತ್ತಮನಾಜ್ಞೆಯಿಂ ತಾವ್ ಗೈವರೊ-ತಾವ್‍ಗÉೈ ಯುತ್ತಲಿರೆ ನಾನೆತ್ತ ಮೃತ್ತಿಕಾಪ್ರತಿಮೆಯೋ48 ಒಂದೊಂದು ರೀತಿಯಿಂ ಚೆಂದಾಗಿ ಯೋಚಿಸು ಮಂದಮತಿಯು ನೀನು ಹಿಂದೆಂತೂ-ಹಿಂದೇನು ವಂದನೆಯೊಂದಲ್ಲದಿನ್ನಿಲ್ಲ49 ಡಾಂಭಿಕತನ ಬಿಟ್ಟು ಡಿಂಬದೊಳು ಸರ್ವದಾ ಅಂಬುಜನಾಭನೇ ಇಂಬಾಗಿ-ಇಂಬಾಗಿ ಸರ್ವತ್ರ ತುಂಬಿಕೊಂಡಿಹನೆಂದು ನಲಿದಾಡೋ 50 ತುಷ್ಟಿಯಾಗಿರು ನೀನು ಕೊಟ್ಟಷ್ಟು ಲಾಭಕ್ಕೆ ದುಷ್ಟವಿಷಯಗಳಿಗೆ ಎರಗಾದೆ-ಎರಗಾದೆ ಇರಲು ಸಂ- ತುಷ್ಟ ನಾಗುವನಯ್ಯ ಶ್ರೀಕೃಷ್ಣ51 ಕಾಯ ನಿನ್ನದು ಅಲ್ಲ ಮನವು ಅಧೀನವಲ್ಲ ಹೇಯವಿಲ್ಲದೆ ಮಾಯಕೊಳಗಾಗಿ ಮರುಳಾಗದಲೆ-ಮರುಳಾಗದಲೆ ಮಾಯಾರಮಣನ್ನ ನೆನೆಯೊ ನಿರ್ಭಯದಿಂದ 52 ಹಲವು ಶಾಸ್ತ್ರವ ನೋಡಿ ತಲೆಹರಟೆಯ ಬಿಟ್ಟು ಅಲವಬೋಧರ ತತ್ತ ್ವಸುಧೆಯನ್ನು- ಸುಧೆಯನ್ನು ಸವಿದು ನಿ-
--------------
ಉರಗಾದ್ರಿವಾಸವಿಠಲದಾಸರು
ತವದಾಸೋಹಂ ದಾಶರಥೆ ಪ ದಶರಥಪುತ್ರಾ-ಪಶುಪತಿಮಿತ್ರ-ಶಶಿರವಿನೇತ್ರಾ-ದಾಶರಥೆ1 ಕದನಪ್ರಚಂಡ ದಾಶರಥೆ 2 ತಾಟಕಾಹನನ ತಾಡಿತಕುಜನ ಹಾಟಕವಸನಾ-ದಾಶರಥೆ 3 ಮನಸಿಜವೇಷ ಮಂಜುಳಭಾಷ ಮನುಜವಿಶೇಷ ದಾಶರಥೆ4 ಶರದಾಭಗಾತ್ರ ಶರನಿಧಿಯಾತ್ರಾ ಕರಧೃತಗೋತ್ರ ದಾಶರಥೆ 5 ರಾವಣಹರಣ-ಪಾವನಚರಣ-ಶ್ರೀವಧೂರಮಣ-ದಾಶರಥೆ 6 ರಕ್ಷಿತಲೋಕ ರಚಿತಸು ಶ್ಲೋಕ ಶಿಕ್ಷಿತಕಾಕ ದಾಶರಥೆ 7 ವ್ಯಾಘ್ರಾಗಶಮನ-ವ್ಯಾಘ್ರಾರಿಗಮನ ವ್ಯಾಘ್ರಾದ್ರಿಸದನ ದಾಶರಥೆ 8 ಪರಿಹೃತ ಕುಟಿಲ-ಸರಸಿಜನಿಟಿಲ ವರದಾರ್ಯವಿಠಲ ದಾಶರಥೆ 9
--------------
ಸರಗೂರು ವೆಂಕಟವರದಾರ್ಯರು
ತಾಳಲಾರೆನು ದೇವ ಪಾಪ ತಪ್ಪಿಸಿ ಬೇಗ ಸಂಜೀವ ಕಾಳಭೈರವನಿಗಪ್ಪಣೆಯ ಕೊಡೊ ದೈತ್ಯಕುಲ ಕಾಲ ಬಿಡಿಸುವುದೆನ್ನ ನೋವ ಪ. ನರಹರಿಯೆ ಸರ್ವತ್ರ ಇರುವಂಥ ನಿನಗೆ ನಾ- ನರುಹಲೇನಿಹುದಿನ್ನು ಜೀಯ ಉರಿಯನುಗುಳುವ ಘೋರ ಶರಗಳೋಲ್ ಪ್ರತಿನಿಮಿಷ ವಿರಿವುತಿದೆ ಬಲ್ಲಿ ಮಹರಾಯ ತರಹರಿಸಿ ದಿನದಿನಕೆ ಕರುಗುತಿಹ ಮದ್ದೇಹ ಸ್ಥಿರವಾಗಲೀ ನಿನ್ನ ಪಾಯ ದರ ಚಕ್ರ ಶಾಙ್ರ್ಗನಂದಕ ಚರ್ಮಗದೆಗಳನು ಧರಿಸಿ ವೋಡಿಸು ಶತ್ರುಮಾಯ 1 ಕಾಶೀಶ ಕಳುಹಿಸಿದ ಪೈಶಾಚ ದಕ್ಷಿಣಾಗ್ನಿಯನು ದೋಷವೆಣಿಸದ ಅಂಬರೀಷನಲಿ ಮುನಿದ ದು- ರ್ವಾಸ ಮುನಿಕೃತ ಕೃತ್ರಿಮವನು ನಾಶಗೈದಖಿಳಗುಣ ಭೂಷಣನೆ ನಿನಗೆನ್ನ ಪೋಷಣೆಯು ಬಹು ಭಾರವೇನು 2 ಸರ್ವಶಕ್ತಿಯೆ ನಿನಗೆದುರ್ವಾದ್ಯವುಂಟೆ ಗುರು ಶರ್ವ ಸುರನಾಥ ಮುಖವಂದ್ಯ ಗೀರ್ವಾಣ ಪಕ್ಷಜನ ನಿರ್ವಹಿಸಿ ನೀನೆ ಯೆನ- ಗಿರ್ವೆ ಗತಿಯಾಗಿ ಸುರವಂದ್ಯ ಬರ್ವ ದುರಿತಗಳ ಮಹದೂರ್ವಣೆಗೆ ಪುಡಿಗೈದು ಗರ್ವಿ ವೈರಿಗಳ ಸದೆ ಬಡಿದು ಪೂರ್ವದಿಂದಲಿ ಸೇವೆ ಸ್ವೀಕರಿಸು ಸರ್ಪವರ ಪರ್ವತೇಶನೆ ಬೇಗ ಒಲಿದು 3
--------------
ತುಪಾಕಿ ವೆಂಕಟರಮಣಾಚಾರ್ಯ