ಧನ್ಯನಾದೆನು ನಾಂ ಪ
ಘನ್ನಮಹಿಮ ಶ್ರೀನಿವಾಸ ಕರುಣದಿಂದ ಒಲಿದನಿನ್ನು ಅ.ಪ
ದೇಶದೇಶದಿಂದ ಸಕಲ
ದಾಸಜನರು ಬಂದು ಸದಾ
ಶ್ರೀಶ ಸಲಹೆಂದು ಕೂಗುವ
ಘೋಷ ಕೇಳಿ ಕರ್ಣಗಳಿಂ 1
ವೈರಿ ವಿನುತ ಅರ್ಥ ಗಳಿಸುವವನ ಕಂಡು2
ಸತಿಯರೆಲ್ಲ ಮುತ್ತಿನಾ-
ರತಿಯ ಬೆಳಗುವುದು ಕಂಡು 3
ಸಂತಸದಿ ಮಹಂತರು ಶ್ರೀ-
ಕಾಂತನ ಗುಣರಾಸಿ ಪೊಗಳಿ
ಸ್ವಾಂತನಿರ್ಮಲರಾಗಿ ಭಜಿಪ-
ರಂತರಾತ್ಮನ ಕಂಡು 4
ಭೂಮಿಗಧಿಕ ಶೇಷಗಿರಿ
ಧಾಮಪೂರ್ಣಕಾಮ ಭಕ್ತ-
ಸ್ತೋಮವನ್ನು ಪಾಲಿಪ ಗುರು-
ರಾಮವಿಠಲನ್ನ ಕಂಡು 5