ದ್ವಾರಕೆಯ ಅರಸಗೆ ಪ.
ಸುರೂಪಿಸೀರೆಯನುಟ್ಟು
ಥೋರ ಮುತ್ತನೆ ಕಟ್ಟಿ
ತೇರಿನಾರುತಿಯ
ಮುರಾರಿಯ ಮುಂದೆತ್ತುವರು1
ರಂಜಿಸೊಸೀರೆಯನುಟ್ಟು
ಪಂಜರ ದ್ವಾಲೆನಿಟ್ಟು
ನೀರಾಂಜನ ಎತ್ತಿದರು 2
ತಾಕೀತೆಂದು ಕೆಲರು
ಓಕುಳಿ ನಿವಾಳಿಸುವರು
ಲೋಕನಾಯಕಗೆ 3
ಕೃಷ್ಣರಾಯನ ಮುಖಕೆ
ದೃಷ್ಟಿ ನೆಟ್ಟೀತೆಂದು ಕೆಲರು
ಬಟ್ಟು ಮುತ್ತು ನಿವಾಳಿಸಿ
ಇಟ್ಟು ಕಸ್ತೂರಿ ಕಪ್ಪು 4
ಕದಳಿ ಸಾಲು ಜಗಲಿ ತೋರಣ
ವಿಶಾಲ ಬೀದಿಯೊಳು 5
ನಿವಾಳಿಸಿ ನಿವಾಳಿಸಿ ನಾಲ್ಕು ಕಡೆಗೆ ಒಗೆದು6
ಶ್ರೀಲೋಲ ರಾಮೇಶನ ಭಕ್ತರು ವಾಲೈಸುವರು ಹೀಗೆ7