ಒಟ್ಟು 20 ಕಡೆಗಳಲ್ಲಿ , 13 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊಳೆವೊ ಮಂದಿರವ ಪ. ರಂಗಗೆ ರಚಿಸಿದ ಶೃಂಗಾರದ ವೈಕುಂಠ ಮಂಗಳಾದೇವಿಯರು ಇಳಿಯಲಿ1 ವೀತದೋಷಗೆ ದಿವ್ಯ ಸೇತು ದ್ವೀಪವ ರಚಿಸಿ ಪ್ರೀತಿ ಮಡದಿಯರು ಇಳಿಯಲಿ2 ರನ್ನಮಾಣಿಕದ ಅರಮನೆ ಪನ್ನಿಯರು ಬಂದು ಇಳಿಯಲಿ 3 ಪಟ್ಟೆ ಮುತ್ತುಗಳ ಬಿಗಿದು ಇಟ್ಟಾವ ಕನ್ನಡಿ ಧಿಟ್ಟ ತೋರೋದೆ ಜನಕೆಲ್ಲ ಅಷ್ಟು ಮಡದಿಯರು ಇಳಿಯಲಿ 4 ಹಸಿರು ಪಚ್ಚವ ಬಿಗಿದ ಕುಸುರಾದ ಗಿಳಿಬೋದು ದೇವಕಿ ವಸುದೇವ ಬಂದು ಇಳಿಯಲಿ5 ಜತ್ತು ತೋರುವುದು ಜನಕೆಲ್ಲ ಜತ್ತು ತೋರುವುದು ಜನಕೆಲ್ಲ ಸರಸ್ವತಿ ಮತ್ತೆ ಚತುರ್ಮುಖನು ಇಳಿಯಲಿ 6 ಎದ್ದು ತೋರುವುದು ಜನಕೆಲ್ಲ ಎದ್ದು ತೋರುವುದು ಜನಕೆಲ್ಲ ಪಾರ್ವತಿ ರುದ್ರಾದಿಗಳೆಲ್ಲ ಇಳಿಯಲಿ 7 ಕುಂದಣ ರತ್ನಗಳಿಂದ ಹೊಂದಿ ಕಟ್ಟಿದರಮನೆ ಅಂಬರಕೆ ಮ್ಯಾಲೆ ತುಳುಕುವ ಶಚಿದೇವಿ ಇಂದ್ರಾದಿಗಳೆಲ್ಲ ಇಳಿಯಲಿ 8 ರೇವತಿ ಬಲರಾಮರು ಬಂದು ಇಳಿಯಲಿ9 ಒಂಭತ್ತು ಬಗೆ ರತ್ನ ತಂಬಿ ರಚಿಸಿದ ಮನೆ ಅಂಬರಕೆ ಮೇಲೆ ತುಳುಕುವ ಅಂಬರಕೆ ಮೇಲೆ ತುಳುಕುವರತಿದೇವಿಸಾಂಬ ಪ್ರದ್ಯುಮ್ನರು ಇಳಿಯಲಿ10 ಚಂದ ತೋರುವುದು ಜನಕೆಲ್ಲ ಚಂದ ತೋರುವುದು ಜನಕೆಲ್ಲಭಾನು ಮಾನು ಬಂದ ಜನರೆಲ್ಲ ಇಳಿಯಲಿ 11
--------------
ಗಲಗಲಿಅವ್ವನವರು
ಧನ್ಯರೆ ನೀವು ಧನ್ಯರೆಪನ್ನಂಗ ಶÀಯನನ ಕನ್ಯೆಯರುನಮಮ್ಯಾಲೆ ಅನಂತ ದಯಮಾಡಿಮನ್ನಿಸಿ ಬನ್ನಿರಿ ಪ.ಇಂದಿರಾ ದೇವಿಯರು ಕುಂದುನೋಡದೆನಮ್ಮ ಮಂದಿರಕ್ಕೆ ಬನ್ನಿರೆಂದು ದ್ರೌಪತಿಯು 1ಮುದ್ದು ಪಾದಕೆ ನಾನು ಬಿದ್ದು ಬೇಡುವೆದಯಇದ್ದರೆ ಬಾ ಅನಿರುದ್ಧನ ರಾಣಿ 2ಕಡುಬ್ಯಾಗಸುಭದ್ರಾ ಅಡಿಗೆರಗುತಕರಹಿಡಿದು ರಾಮೇಶನ ಮಡದಿ ಬಾರಮ್ಮ 3
--------------
ಗಲಗಲಿಅವ್ವನವರು
ಪವಡಿಸು ಪರಮಾತ್ಮಾ ಶ್ರೀ ಶ್ರೀಶಾಪವಡಿಸು ಪರಮಾತ್ಮಾ ಪಪರಮಭಕ್ತರನು ಪೊರೆಯುವ ದೇವನೆಅ.ಪರನ್ನಮಂಟಪದೊಳು ಕನ್ನಡಿಯಂದದಿಸ್ವರ್ಣವರ್ಣದಲಿಹ ಪನ್ನಂಗ ಕಾದಿಹ 1ಸುತ್ತಲು ತುಂಬುರರು ನಾರದರು ಸ್ತೋತ್ರವ ಮಾಡಿಅತ್ಯಂತ ಹರುಷದಿ ಚಿತ್ತೈಸೆಂದೆನುವರು 2ಥಳಥಳಿಸುವ ದಿವ್ಯತಾರೆಗಳಂದದಿಲಲನೆಶ್ರೀ ಭೂದೇವಿಯರು ಸೇವಿಪರು ನಿನ್ನ3ವೇದವ ಕದ್ದನ ಭೇದಿಸಿ ಅಜನಿಗೆವೇದವ ತಂದಿತ್ತು ಆದರಿಸಿದ ದೇವ 4ಮುಳುಗಿದ ಗಿರಿಯನು ಧರಿಸಿ ಬೆನ್ನಲಿ ಬೇಗಸುರರಿಗೆ ಅಮೃತವ ಕುಡಿಸಿದಮಾಧವ5ಸುರಮುನಿಗಳಿಗೆಲ್ಲಾ ಅಭಯವ ನೀಡುತವರಹರೂಪತಾಳಿ ಬಳಲಿ ದಣಿದು ಬಂದಿ6ಕಂದನಿಗಾಗಿ ದೊಡ್ಡ ಕಂಬದಿಂದುದಿಸಿ ಖಳನಕೊಂದು ಕರುಳ ವನಮಾಲೆ ಧರಿಸಿ ದಣಿದಿ 7ಮೂರಡಿ ಭೂಮಿಯ ಬೇಡಿ ಬಲೀಂದ್ರನದೂಡಿ ಪಾತಾಳಕೆ ಬಹಳ ಬಳಲಿ ಬಂದಿ 8ಭೂಮಿ ಪಾಲಕರನ್ನು ಸೋಲಿಸಿಬಾರಿಬಾರಿವಾರಿಜಾಕ್ಷ ಶ್ರೀರಾಮರಿಗೊಲಿದೆಯೊ 9ಸೇತುವೆಯನ್ನುಕಟ್ಟಿದೂರ್ತರಾವಣನ ಕುಲವಘಾತಿಸಿ ಕೊಂದ ರಘುನಾಥನೆ ಬಳಲಿದೆ 10ವಸುದೇವ ಕಂದನೆ ಶಿಶುರೂಪಿನಿಂದಲಿಅಸುರೆ ಪೂತಣಿ ಅಸುಹೀರಿ ಬಳಲಿ ಬಂದಿ 11ತಿದ್ದಿ ತ್ರಿಪುರಾಸುರರ ಮರ್ದಿಸಿ ಸುಜನರಿಗೆಮುದ್ದು ತೋರಿದ ಸುಪ್ರಸಿದ್ಧ ಮೂರುತಿ ಬೇಗ 12ಕರದಿ ಖಡ್ಗವ ಧರಿಸಿ ಸಿರದಿ ಕಿರೀಟ ಹೊಳೆಯೆಇಳೆಯ ಮನುಜರಿಗೆಲ್ಲ ಸುಲಭನಂದದಿ ತೋರ್ಪಿ 13ಮಂಗಳಚರಿತ ವಿಹಂಗವಾಹನ ಸುರಗಂಗೆಯಪಿತ ಸಾಧುಸಂಗವಂದಿತ ದೇವ 14ಗರುಡಗಮನ ಕೃಷ್ಣ ಉರಗನ್ಹಾಸಿಗೆಯೊಳುಸಿರಿದೇವಿ ಸಹವರ ಕಮಲನಾಭ ವಿಠ್ಠಲ 15
--------------
ನಿಡಗುರುಕಿ ಜೀವೂಬಾಯಿ
ಶ್ರೀ ಮಧ್ವರಾಯರ ಸೇವೆ ದೊರಕುವುದುಜನುಮ ಸಫಲ ಕಾಣಿರೋ ಪಶ್ರೀಮದಾನಂದ ತೀರ್ಥರ ಪಾದವ ನೆನೆವರುಸಾಮಾನ್ಯಸುರರುಕಾಣಿ-ಬೊಮ್ಮನಆಣಿಅ.ಪಜಗತು ಸತ್ಯವು ಅಲ್ಲ ಜಡ-ಜೀವ ಭೇದವಲ್ಲಅಗುಣನು ಪರಬೊಮ್ಮನು-||ಹೀಗೆ ನುಡಿವ ಜನರ ನಿಗಮಶಾಸ್ತ್ರದಿ ಗೆದ್ದುಜಗ ಸತ್ಯ ಸಗುಣ ಬ್ರಹ್ಮ ಎಂದು ಪೇಳುವ 1ಹರಿಸರ್ವೋತ್ತಮನಿತ್ಯತರುವಾಯ ರಮಾದೇವಿತರುವಾಯ ವಿಧಿಪ್ರಾಣರುಸರಸ್ವತಿಭಾರತಿಗರುಡ ಅನಂತ ರುದ್ರತರುವಾಯ ಆರು ದೇವಿಗಳು 2ಸೌಪರ್ಣಿವಾರುಣಿದೇವಿ ಅಪರ್ಣಾದೇವಿಯರು ಸಮರುದ್ವಿಪದಿ ಮನ್ವಾದಿಗಳು ||ಈಪರಿತಾರತಮ್ಯ ಜಪ-ಧ್ಯಾನಾರ್ಚನೆಯಿಂದಅಪವರ್ಗದನ ಸೇವೆಯ ಮಾಡಿರೊ ಎಂಬ 3ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿಚೆಂದದಿಂದಲಿ ಲಾಲಿಸಿ ||ಇಂದಿರಾರಮಣ ಗೋವಿಂದನೇ ದೈವವೆಂದು |ಸಂದೇಹವಿಲ್ಲದೆ ಸಾಧಿಸಿ-ಮಾಯೀ ಸೋಲಿಸಿ 4ಹಿಮಗಿರಿಯಿಂದ ಸೇತುವೆಯ ಪರ್ಯಂತರಭ್ರಮಿಸುತ ಸುಜನರಿಗೆ ||ಕ್ರಮತತ್ತ್ವ ಬೋಧಿಸಿ ಕಮಲನಾಭನಮೂರ್ತಿಕ್ರಮವರಿತು ಸ್ಥಾಪಿಸಿ ಪೂಜಿಸಿರೆಂದ 5ಭೂತಳದೊಳು ರೌಪ್ಯಪುರದಿ ನೆಲಸಿ ಗೆದ್ದುಧಾತ್ರೀ ಮುದ್ರೆಯ ತೋರಿಸಿ ||ಈತನೇ ಹನುಮಂತ ಈತನೇ ಭೀಮಸೇನಈತನೇ ಭವಿಷ್ಯದ ಬ್ರಹ್ಮಜೀವೋತ್ತಮ6ಶ್ರೀಮದನಂತನೆ ಅನಂತಕಾಲಕೆಯೆಂದುಯಮಕ ಭಾರತ ತೋರಿಸಿಸ್ವಾಮಿ ಸರ್ವಾಂತರ್ಯಾಮಿ | ಸರ್ವಗುಣಪೂರ್ಣನೆಂದುಪ್ರೇಮಿಪುರಂದರವಿಠಲನ ದಾಸನಾದ7
--------------
ಪುರಂದರದಾಸರು
ಶ್ರೀ ವೈಕುಂಠಕೆ ಸರಿಯಾದ ದ್ವಾರಕೆಯಲಿ ಶ್ರೀಕೃಷ್ಣ ರುಕ್ಮಿಣಿದೇವಿಯರ ವಿವಾಹ ಶೋಭನದಿ ಉತ್ಸಾಹದಲಿ ಸರಸ್ವತಿಭಾರತಿದೇವಿಯರು ಸರ ಋಷಿ ಭಾವೆಯರು ಸಂಗೀತಕೋವಿದೆಯರು ಹಸೆಗಿಬ್ಬರನು ಕರೆದರು ಪ.ಅಗಣಿತಬ್ರಹ್ಮಾಂಡವ ರಚಿಸಿನಗುತಲೆ ನುಂಗೇಕಾಕಿಯಲಿಮಗುವೆನಿಸಿ ವಟಪತ್ರದಲಿ ಮಲಗಿದೆಮಲಗಿದಪ್ರಾಕೃತ ನಂದನಮಗನೆ ಬಾ ಕಸ್ತೂರಿ ಮೃಗನೆ ಬಾ ಶ್ರೀ ತ್ರಿಯುಗನೆ ಬಾರೆಂದು ಹಸೆಗೆ ಕರೆದರು 1ಕಡೆಗಣ್ಣಿನ ನೋಟದಿ ಕಮಲಜಮೃಡÀಮುಖ್ಯರ ಪಾಲಿಸುವೆ ಪಾಲ್ಗಡಲೊಡೆಯನ ಪಟ್ಟದರಂಭೆ ಜಗದಂಬೆಜಗದಂಬೆ ಮೋಹನ ಮಾಯದಬೆಡಗೆ ಬಾ ಭಾಗ್ಯದ ಹಡಗೆ ಬಾ ವ್ರಜದಕಡೆಗೆ ಬಾರೆಂದು ಹಸೆಗೆ ಕರೆದರು 2ಪೂತನಿ ಶಕಟಾಂತಕನೆ ಬಾ ಚಕ್ರವಾತನ ಘಾತಿಸಿದವನೆ ಬಾಪಾತಕಿಬಕಧೇನುಕಹರ ನವನೀತಚೋರ ನವನೀತಚೋರ ಭುವನಕಪ್ರತಿಪೂತನೆ ಬಾ ದೇವಕಿ ಜಾತನೆ ಬಾ ಬೊಮ್ಮನತಾತನೆÉ ಬಾರೆಂದು ಹಸೆಗೆ ಕರೆದರು 3ಯಮಳಾರ್ಜುನಭಂಜನಬಾ ಸಂಯಮಿ ಕುಲ ಮನರಂಜನ ಬಾರಮಣಕಪತಿ ಮದಹರಶುಭಯಮುನಾವಿಹಾರಯಮುನಾವಿಹಾರ ಗೋಪವಧೂಟೀರರಮಣ ಬಾ ಖಳಕುಲದಮನ ಬಾಖಗವರಗಮನಬಾರೆಂದು ಹಸೆಗೆ ಕರೆದರು4ಹೆಂಗಳ ಪಣೆಮಣಿಯೆ ಬಾ ಮನಮಂಗಳ ಗುಣಮಣಿಯೆ ಬಾ ಭುವನಂಗಳ ಬೆಳಗುವ ಚೆಲ್ವಿಕೆಯ ನಗೆಮೊಗದನಗೆಮೊಗದ ನೈದಿಲೆಗಂಗಳೆ ಬಾ ಸುರಮುನಿಜಂಗುಳಿ ಬಾ ಮಾತಿನಹೊಂಗಿಳಿಬಾರೆಂದು ಹಸೆಗೆ ಕರೆದರು 5ಸ್ವರ್ಧುನಿಯಳ ಜನಕನೆ ಬಾಭವಕರ್ದಮ ಶೋಷಕನೆ ಬಾ ಸುರಶಾರ್ದೂಲಸದ್ಗುಣಜಾಲ ಸಂಗೀತಲೋಲಸಂಗೀತಲೋಲ ಗೋಪಾಲಕವರ್ಧನಬಾ ರಿಪುಚಯ ಮರ್ದನ ಬಾಧೃತಗೋವರ್ಧನಬಾರೆಂದು ಹಸೆಗೆ ಕರೆದರು6ಅಂಬುಜಮಾಲಿನಿಯೆ ಬಾ ಮತ್ತಂಬುಜಜ ಜನನಿಯೆ ಬಾ ಹೇಮಾಂಬರೆ ಸಂಪಿಗೆಯ ಕಬರೆ ಬಿಂಬಾಧರೆಬಿಂಬಾಧರೆ ಬಹಳ ಉದಾರಿಗಳಿಂಬೆ ಬಾ ಜಗದ ವಿಡಂಬೆ ಬಾಕುಂದಣಬೊಂಬೆ ಬಾರೆಂದು ಹಸೆಗೆ ಕರೆದರು 7ರಾಜನಗಜ ಮಡುಹಿದನೆ ಬಾಮತ್ತಭೋಜೇಂದ್ರನ ಕೆಡಹಿದÀನೆ ಬಾಈ ಜನನೀ ಜನಕರ ಬಂಧನ ನಿವಾರಣನಿವಾರಣ ಕಾರಣ ಪೂರಣತೇಜಬಾ ರಾಜಾಧಿರಾಜ ಬಾ ದ್ವಿಜಸುರಭೋಜ ಬಾರೆಂದು ಹಸೆಗೆ ಕರೆದರು 8ವೈದರ್ಭ ಗರ್ಭಜಾ ತೇಜಾ ಅಲರೈದಂಬನ ಮಾತೆ ಬಾವೈದಿಕ ವಿಖ್ಯಾತೆ ಸ್ವಯಂಜ್ಯೋತೆ ದಾತೆಸ್ವಯಂಜ್ಯೋತೆ ದಾತೆ ನಿತ್ಯಮುತ್ತೈದೆ ಬಾ ಮುಕ್ತಿಯ ಬೋಧೆ ಬಾ ಮುದ್ದಿನಮೋದೆ ಬಾರೆಂದು ಹಸೆಗೆ ಕರೆದರು 9ಪಾಂಡವ ಸ್ಥಾಪಕನೆ ಬಾ ಮಹಾಖಾಂಡವವನ ದಾಹಕನೆ ಬಾಹೆಂಡರು ಹದಿನಾರು ಸಾವಿರದ ನೂರೆಂಟುನೂರೆಂಟರನಾಳುವಕದನಪ್ರಚಂಡ ಬಾ ಉದ್ದಂಡೋದ್ದಂಡ ಬಾ ಪುಂಡರಗಂಡಬಾರೆಂದು ಹಸೆಗೆ ಕರೆದರು10ಮುತ್ತಿನ ಸೂಸಕಳೆ ಬಾ ನವರತ್ನದ ಭೂಷÀಕಳೆ ಬಾಕಸ್ತೂರಿ ತಿಲಕದ ಪುತ್ಥಳಿಯೆ ಅಳಿಕುಂತಳೆಯೆಅಳಿಕುಂತಳೆಯೆ ಮದವಳಿಗನಚಿತ್ತೆ ಬಾ ನಿಜಪತಿವ್ರತ್ತೆ ಬಾಸುಪ್ಪಾಣಿಮುತ್ತೆ ಬಾರೆಂದು ಹಸೆಗೆ ಕರೆದರು 11ತುರಗಾಸ್ಯನ ಹೂಳಿದನೆ ಬಾ ಮಂದರಬೆನ್ನಲಿ ತಾಳಿದನೆ ಬಾವರಹ ನರಹರಿ ವಾಮನಭಾರ್ಗವರಾಮರಾಮರ ರಾಮ ಕೃಷ್ಣಯೋಗಿವರನೆ ಬಾ ಕಲಿಮಲಹರನೆ ಬಾ ಶಾಮಸುಂದರನೆ ಬಾರೆಂದು ಹಸೆಗೆ ಕರೆದರು 12ಶಂಕಿಣಿ ಪದ್ಮಿಣಿಯರು ರುಕ್ಮಿಣಿಪಂಕಜನಾಭನ ಪೂಜಿಸಿ ರತ್ನಾಂಕಿತ ಹರಿವಾಣದಲಿ ಆರತಿಯೆತ್ತಿಆರತಿಯೆತ್ತಿ ಪಾಡಿದರು ಅಕಳಂಕನ ಅಹಿಪರಿಯಂಕನ ಪ್ರಸನ್ನವೆಂಕಟರಮಣಗೆ ವಿಜಯವ ಹರಸಿದರು 13
--------------
ಪ್ರಸನ್ನವೆಂಕಟದಾಸರು