ಒಟ್ಟು 34 ಕಡೆಗಳಲ್ಲಿ , 24 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಡಿ | ಪರಗತಿಯನ್ನ ಮನವೇ ಪ ಹರಿವ ನದಿಯೊಳಗ ಕುಳಿತಿರುವ ಜ | ನರನು ಧಡಿಯ ಪೊರೆಗೊಯ್ದು ತೆರದಂತೆ | ಭವ ಸಮುದ್ರದಿಂ | ತ್ವರಿತದಿಂ ದಾಟಿಸುವ ತಾನು 1 ಕಟ್ಟಿ ಮನಿಯ ಪುಳವ ತಂದಿಟ್ಟು ತನ್ನಂದದಿ | ಘಟ್ಯಾಗಿ ಮಾಡುತಿಹಾ | ಸ್ಪಷ್ಟ ಭೃಂಗಿಯ ವೊಲು ಮುಟ್ಟಿ ಬಂದರೆ ತನ್ನ | ಮಟ್ಟ ತನ್ನಂತ ಮಾಳ್ಪಾ ಭೂಪಾ 2 ಈ ಪರಿಯಲಾಗಿಹ ಮಹಿಪತಿ ಗುರು ಮಹಿಮೆಯ | ನಾ ಪೊಗಳಲೆನ್ನ ಅಳವೇ | ತಾ | ಪಸುಳೆ | ಕೃಷ್ಣನಾ ಟೋಪಮಂ | ಗೆಲಿಪನಾ | ಶ್ರೀ ಪದವ ಹೊಂದಿ ಸುಖಿಸೋ ತರಿಸೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಯಸಾಗರ ಶಯನನೆ ಭಜಿಪೆನು ನಿನ್ನ ಭವಸಾಗರದಾಟಿಸು ಶ್ರೀಹರಿ ಎನ್ನ ಪ. ಹಿಂದೆ ಮುಂದೆ ಗತಿ ನೀನೆಂದು ನಂಬಿರುವೆ ಇಂದಿರೆಯರಸನೆ ಎಂದಿಗಾದರು ಕಾಯೊ ತಂದೆ ಬಂದು ಎನ್ನ ಬಂಧನ ಬಿಡಿಸೊ 1 ಕರುಣಾಸಾಗರ ವರದಮೂರುತಿ ನಿನ್ನ ಸ್ಮರಣೆಯೆನಗೆ ನೀ ನಿರುತದಿ ನುಡಿಸು ಪರಮಪಾಮರನಿಗೆ ನಿನ್ನ ಚರಣವ ತೋರೊ 2 ಪುಟ್ಟಿಸಿದವನೀ ಕಷ್ಟ ಪಡಿಸುವುದು ಇಷ್ಟವೆ ನಿನಗದು ಕೃಷ್ಣಮೂರುತಿ ಸೃಷ್ಟೀಶ ಶ್ರೀ ಶ್ರೀನಿವಾಸ ದೊರೆಯೆ 3
--------------
ಸರಸ್ವತಿ ಬಾಯಿ
ಪವಮಾನ-ಪಾವನಮೂರ್ತಿಯು ನೀನು ಕಾವುದೆಮ್ಮನು ಪ ಭುವನ ಚತುರ್ದಶದಲ್ಲಿಹ ಜೀವರ ಜೀವನ ನಿನ್ನದೋ ದೇವವರೇಣ್ಯಅ.ಪ ತೃಣಜೀವರಾದಿ ಸರ್ವರೊಳು ನಿಂತು ಗುಣಕಾಲಕರ್ಮಕ್ಕನುಗುಣನಾಗಿಹ ಫಲವ ನೀನಿತ್ತು ಕ್ಷಣ ಬಿಡದೆಲೆ ನೀನಗಣಿತ ಕಾರ್ಯವ ದಣಿಯದೆ ಮಾಡಿಸಿ ಧಣಿಗರ್ಪಿಸುವಿಯೊ1 ಶ್ರೀ ಜಗದ್ಗುರುವರೇಣ್ಯನೆ ನೀನು ಋಜುಸಾರ್ವಭೌಮ ನಿಜ ಪಾದಾಂಬುಜವ ತೋರಿಸೊ ಇನ್ನು ಈ ಜಗ ಕಾರ್ಯ ನಿವ್ರ್ಯಾಜದಿ ಮಾಡುತ ನೀ ಜಯಾಪತಿಗರ್ಪಿಸಿ ಅಜಪದ ಪಡೆದೆಯೊ2 ಕೋಟಿತ್ರಯರೂಪನೆ ಕಾಯುವುದಯ್ಯ ದಾಟಿಸು ಭವಶರಧಿಯಾ ಪಾಟುಪಟ್ಟದ್ದೆಲ್ಲ ನೀನರಿಯಾ ಸಾಟಿಯುಂಟೆ ಲಲಾಟನೇತ್ರ ಬೆ ನ್ನಟ್ಟಿ ಬರಲು ಕೇದಾರಕೆ ಅಟ್ಟಿದೆ 3 ಮರಣ ಜನುಮಂಗಳು ಬಂದರೆ ಬರಲಿ ಹರಿಗುರುಗಳಲಿ ಸ್ಮರಣೆಯು ತಪ್ಪದೆ ನಿಶ್ಚಲವಿರಲಿ ಉರುತರ ಹರಿಸರ್ವೋತ್ತಮವೆಂಬುವ ತರತಮ ಭೇದವು ನಿರುತವು ಇರಲಿ 4 ಶ್ರವಣ ಮನನಾದಿ ಭಕುತಿಯನ್ನು ಪವಮಾನ ನೀ ಕೊಡು ಅನುಮಾನಿಸಬೇಡವೋ ನೀ ಇದಕ್ಕಿನ್ನು ಭವಮೋಚಕ ಶ್ರೀ ವೇಂಕಟೇಶ ಇನ್ನೊಳಹೊರಗಿಹನೆಂಬುವುದನು ತೋರೋ 5
--------------
ಉರಗಾದ್ರಿವಾಸವಿಠಲದಾಸರು
ಪಾಲಿಸು ದಯಾಕರನೆ ನೀಲಮೇಘಶ್ಯಾಮ ಪಾಲಿಸು ದಯಾಕರನೆ ಪ ಪಾಲಿಸು ಎನ್ನ ಕರುಣಾಳು ವ್ಯಾಲಮಾಲ ಬಾಲನ ದಯದಿಂ ಮಾಲತುಲಸೀವನ ಅ.ಪ ಬಂದುಬಿದ್ದೆನಯ್ಯ ಸಂಸಾರ ದಂದುಗ ವೆಂಬ ಮಾಯಬಲೆಯೊಳು ನೊಂದು ಕಾಯ ಬಂಧನಿವಾರಿಸಯ್ಯ ನೊಂದಿಸಿ ಅರ್ಥವ ತಂದು ಸತಿಯು ಸುತ ರೆಂದು ಸಲಹಿ ಯಮ ಬಂಧಕೀಡಾದೆನು ಮುಂದೆ ಇಂಥ ಬವಣಿಂದೆ ತಾರದೆನ್ನ 1 ರಿಣವೆಂಬ ಸೂತಕಿದು ಎನ್ನಗೆ ಘನವಾಗಿ ಕಾಡುವುದು ಇನ್ನಿದು ಜನು ಜನುಮದಿ ಬಿಡದು ಬೆನ್ನತ್ತಿ ಬರ್ಪುದು ಗನ್ನಗತಕನಾಗಿನ್ನು ಭವಭವಂಗ ಬನ್ನ ಬಡಲಿಬೇಕೊ ಮನ್ನಿಸಿ ದಯದಿಂ ನಿನ್ನ ಕೃಪೋದಕ ವನ್ನು ತಳೆದು ಬೇಗೆನ್ನ ಶುದ್ಧಮಾಡು 2 ಆಗಿಹೋದದ್ದ್ಹೋಯ್ತು ಮುಂದಿಹ್ಯ ಭೋಗ ಬೇಡ ಜಗತ್ತು ಪಾಲನೆ ಬಾಗುವೆ ಮನವರಿತು ಚರಣಕೆ ಶಿರವಿತ್ತು ಭೋಗಭಾಗ್ಯದಾಸೆ ನೀಗಿಸಿ ಈ ಭವ ಸಾಗರ ದಾಂಟಿಸು ಯೋಗಿಗಳರಸನೆ ನಾಗಶಯನ ದಯಮಾಡಿ ದಾಸನ ದು ರ್ಭೋಗ ದೂರಮಾಡು ಜಗಮೋಹ ಶ್ರೀರಾಮ 3
--------------
ರಾಮದಾಸರು
ಬ್ರಹ್ಮದೇವರ ಸ್ತೋತ್ರ* ಮಟ್ಟತಾಳ ಕಂಬು ವಿಹಂಗ ಗಮನ ವಿಭುವೆನಂಬಿದವರ ಪೊರೆವ ವ್ಯಾಸವಿಠಲ ನೀ-ನೆಂಬುವರನ ನಂಬಿದ ನೀಚನ ಮರಿಯಾದಿರು 2 ತ್ರಿವಿಡಿತಾಳ ಜಿಹ್ವೆ ನುಡಿಯದುಸವಿಯದ ನಾನಾ ರಸವನುಂಡು ಬಹುಕಾಲಸವೆದು ಪೋದವು ನಟ್ಟ ಮನವು ಇನ್ನು ತಿರಗದುತವ ವಿಸ್ಮøತಿಯಲಿಂದ ಭೂ ವನದೊಳಿದ್ದ ಮಾ-ನವರ ಚರಿಯದಲಿ ಕೋಪವೆ ತಗ್ಗದುಎವೆ ಇಡುವಿನಿತು ಕಾಲವಾದರು ಪೂಜಾವಿವರದಲ್ಲಿಗೆ ಚಿತ್ತವು ನಿಲ್ಲದು ಭವವಿದೂರನೆ ಕೇಳುಕವಲ ಬುದ್ಧಿಯಲಿಂದ ನವನವ ರೂಪದ ಯುವತಿಯರನಿವಹದ ಅನುಭವ ದ್ವಿವಿಧವಿಂದಿಗೇ ಕಾ-ಯವ ನೋಡಲಿದ್ದಂತೆ ಇಲ್ಲದಂತೆಧ್ರುವದಲಿ ನುಡಿವೆ ಎನ್ನವಗುಣವಿನ್ನೊಂದುಭವಸಾಗರವ ದಾಟಿಸುವ ಜ್ಞಾನಿಗಳ ಪ್ರೀತಿಯನೆ ತ-ಗ್ಗುವಂತೆ ಚತುರ ತೋರುವೆಇವುಗಳಿಂದಾಗುವ ಜನನ ಬಾಧಿಯ ಬಲ್ಲೆಜೀವರಲ್ಲಿ ಹೀನ ಜನ್ಮವ ಬರುವದು ಬಲ್ಲೆಸ್ಥಾವಿರಾಯ ವ್ಯಾನಾದಿ ನೆಗುವವು ಪುಣ್ಯಾಖ್ಯಗಿರಿಗೆಪವಿಯಂಬದನುಗಾಲ ಪಠಿಸಬಲ್ಲೆಪವನನಂತರ್ಯಾಮಿ ಶ್ರೀವ್ಯಾಸವಿಠಲ ಇಂಥಅವಿವೇಕ ಮನುಜಂಗೆ ಆವಗತಿಯಾಗುವದೊ 3 ಅಟ್ಟತಾಳ ಅನ್ಯಾಯ ನಡತಿಗಳ ಚರಿಸುತಲಿಪ್ಪಮನುಜಾಧಮನಿಗೆ ಮಹಿಯೊಳಗೆ ವಿಪ್ರಜನ್ಮವ ನೀನಿತ್ತದಾವ ಬಗೆಯ ಕಾಣೆಇನ್ನೀಗ ಮಾಡುವ ಅನ್ಯಾಯ ನಡತಿಯುತಣ್ಣನ ಕಿಡಿಯಂತೆ ತತ್ಕಾಲಕಿಪ್ಪದುಘನ್ನ ಬವಣೆ ಮುಂದೆ ಅನುಭವವೇ ನಿಜಪನ್ನಗ ಶಯನ ಶ್ರೀ ವ್ಯಾಸವಿಠ್ಠಲ ಸುಪ್ರಸನ್ನ ವದನ ದೇವ ನಿನ್ನ ಪಾದವೆ ಗತಿ 4 ಆದಿತಾಳ ಪಾದ ಚೆನ್ನಾಗಿ ಪೊಂದಿಸಿನಿನ್ನವನಿವನೆಂದು ಮನುಜರಿಂದ ನುಡಿಸಿನಿನ್ನ ಕೀರ್ತನೆಯ ವದನದಿಂದ ಪೇಳಿಸಿಇನ್ನು ಈ ಬಗೆ ಮಾಳ್ಪರೆ ಘನ್ನದಯಾಂಬುಧೇಮನ್ನ ವಾಚ ಕಾಯದಿ ಅನ್ಯಾಯ ಪೆಚ್ಚಿಸದೆಎನ್ನ ಬೆಳವಿಗೆಯಂತೆ ಬೆಳಸದಂತೆ ಮಾಡಿದೆಮನ್ನಣಿಸುವ ಜನರಿಂದ ಮಾಂದ್ಯವ ಮಾಡಿಸಿದೆಸನ್ಯಾಯವಲ್ಲ ಧೊರಿಯೆ ನಿನ್ನ ಚಿತ್ತವೊ ಸ್ವಾಮಿಸನ್ಮುನಿಗಣ ಪ್ರೀಯ ವ್ಯಾಸವಿಠ್ಠಲರೇಯಾನಿನ್ನವರವನೊ ನಿನ್ನ ಸರಿ ಬಂದ ಬಗೆ ಮಾಡೊ 5 ಜತೆ ವೇಣುಗೋಪಾಲ ದಾಸರ ಮನ ಮಂದಿರಾ |ಪ್ರಾಣ ನಿನ್ನದೊ ವ್ಯಾಸವಿಠ್ಠಲ ಗೋಪಾಲಕೃಷ್ಣ ||
--------------
ವ್ಯಾಸವಿಠ್ಠಲರು
ಭೂಮಿಯನೆ ಬಿಡಿಸೋ ಭೂದೇವಿ ರಮಣಾ ನಾ ಮಾಡುವೆ ನಿನಗೆ ಶರಣಾ ಪ. ಕರಿ ಕರಿಯಾ ಸಂಸಾರ ಥೆರಿಯಾ ಅ.ಪ. ಯನ್ನಿಂದ ದುಷ್ಟಕಾರ್ಯವನು ಮಾಡಿಸಿದಿಯೋ ನೀನು ಇಷ್ಟು ನಾನೀಗ ಉದಾಶೀನಳಾಗಿ ಇರುವೊದುಕಿಂತಾ ವೊಂದಷ್ಟು ಪ್ರಾಣವನು ಬಿಡಿಸೊ ಶ್ರೀಶಾ ಶ್ರೀನಿವಾಸಾ 1 ಸರ್ವಜ್ಞರ ಮತದೊಳಗೆನ್ನ ಪುಟ್ಟಿಸಿದೆಯೋ ಅಜ್ಞಾನ ಅಧಃಪತದಲಿ ಮಗ್ನಳಾಗಿರುವೆನು ಸುಜ್ಞಾನವನು ನಾನರಿಯೆನು ಭವಾಬ್ಧಿಯನು ದಾಟಿಸು ನೀನು 2 ದುರ್ಜನರ ಸಂಗವಾ ಕೊಡಬ್ಯಾಡ ಸಜ್ಜನರ ಸಂಗವ ಕೊಡು ಬ್ಯಾಗ ಮೂರ್ಜಗದೊಡೆಯನೇ ನೀಯನ್ನ ಪಾಲಿಸಯ್ಯ ಕಾಳಿಮರ್ಧನ ಕೃಷ್ಣರಾಯ 3
--------------
ಕಳಸದ ಸುಂದರಮ್ಮ
ಮನದಧಿಪ ಮಹದೇವ ಮೊರೆಯೆ ಕೇಳೊ ಪ ತಿಮಿರ ಸ್ಥಿತಿಯಲ್ಲಿ ಎದೆ ಒಡೆದು ನಿಂದಿಹೆನು ಅ.ಪ. ಮನಕರಣಗಳು ಎನ್ನ ತಮ್ಮ ಸೆರೆಯಲಿ ಇಟ್ಟು ಘನ ಯಾತನೆಯ ಪಡಿಸಿ ಮೂರ್ಛೆಗೊಳಿಸಿ ಕ್ಷಣ ಬಿಡದೆ ದಣಿಸುವುವು ಮೊರೆ ಇಡಲು ಮುಖವಿಲ್ಲ ಪ್ರಣಿತ ಪಾಲಕರಲ್ಲಿ ಸರಿ ಇಲ್ಲ ನಿನಗೆಂದು 1 ಪವಮಾನ ಪದಕಮಲ ಮಧು ಮತ್ತ ಮಹಭೃಂಗ ಹರಿದಾಸ ಶಿರೋರತ್ನ ಅಭಯದಾಯಿ ಶಿವತಮನೆ ನಿನ್ನಂಘ್ರಿ ರಜಲಕ್ಷ್ಮಿಯನ್ನು ಶಿರ ನಿತ್ಯ ಮಾಡೆನ್ನ ಕೃತಕೃತ್ಯ 2 ಗೌರೀಶ ಗುಣನಿಧಿಯೆ ಗುಪ್ತ ಮಂಗಳ ಮಹಿಮ ಶೌರಿ ಜಯೇಶವಿಠಲ ಧ್ಯಾನಲೋಲ ತಾರಕನೆ ಭವಸಿಂಧು ದಾಟಿಸುವ ಅಂಬಿಗನೆ ಕಾರುಣ್ಯಗರೆದೆನ್ನ ಹರಿಪಾದ ದಡಕೊಯ್ಯೊ 3
--------------
ಜಯೇಶವಿಠಲ
ಯಾತಕಿನ್ನಾಥನೆಂಬುವದೂ ಕರುಣಾಳು ಜಗ - ನ್ನಾಥದಾಸರ ಸೇರಿಕೊಂಬುವದೂ ಪ ಭೀತಕರ ಬಹು ಜನ್ಮಕೃತ ಮಹಾ ಪಾತಕಾದ್ರಿಗಳನು ಭೇದಿಸಿ ಮಾತುಳಾಂತಕನಂಘ್ರಿ ಕುಮುದ ನೀತ ಭಕ್ತಿಯ ನೀಡಿ ಸಲಹುವ ಅ.ಪ. ಘೋರಸಂಸಾರ ಪಾರಾವಾರ ದಾಟಿಸುವಾ ಲಕ್ಷ್ಮೀ ನಿತ್ಯ ಭಾರ ವಹಿಸಿರುವಾ ಮೂರು ಲೋಕೋದ್ಧಾರ ದುರಿತೌಘಾರಿ ಕೃಷ್ಣ ಕಥಾಮೃತಾಬ್ಧಿಯ ಸಾರ ತೆಗೆದು ಬೀರಿ ಕರುಣವ ಬೀರಿ ಸುಜನೋದ್ಧಾರ ಮಾಡಿದ 1 ವೇದಶಾಸ್ತ್ರ ಪುರಾಣವೆಲ್ಲವ ತೋರಲಿಟ್ಟಿಹರು ಬಹು ವಿಧ- ವಾದ ದುರ್ಮತವಾದಿಗಳ ಮಾರ್ಗದಿ ಕಟ್ಟಿಹರೊ ಮೋದತೀರ್ಥ ಮತಾನುಗತ ಸದ್ವಾದಪೂರ್ಣ ಪರಮಾತ್ಮದರ್ಶನ ಶ್ರೀದನೊಲಿದು ಕೃಪಾಕಟಾಕ್ಷ ಪ್ರಸಾದ ಒಲಿವ ವಿನೋದಗೊಳಿಸುತ2 ಶ್ರೀರಮಾಪತಿ ಸರ್ವಸುಗುಣಾಧಾರ ದಯದಿಂದಾ ಮುರಲಾ ಸೇರಿ ಬರುವದು ಸರ್ವಸಂಪತ್ಪಾರವಾನಂದ ಕಾರುಣಿಕತನದಿಂದಲಿಂತುಪಕಾರವ ಮಾಡಿ ದೀನ ಜನರಿಗೆ ಧೀರ ಶ್ರೀದವಿಠಲನ ತೋರಿದರು ನಿಜಭಕ್ತಜನರಿಗೆ 3
--------------
ಶ್ರೀದವಿಠಲರು
ರಮಾವಿನುತ ವಿಠಲ ಪೊರೆಯಬೇಕೊ ಇವಳ ಪ ಕ್ರಮಾನುಸಾರ ತವದಾಸ್ಯ ಕಾಂಕ್ಷಿಪಳ ಅ.ಪ. ಪತಿಸುತರು ಹಿತರಲ್ಲಿ ವ್ಯತಿರೇಕ ಮತಿ ಕೊಡದೆಅತುಳ ಪ್ರೀತಿಯಲಿ ಅವರಂತರಾತ್ಮಕನಾ |ಹಿತ ಸೇವೆಯೆಂಬ ಸನ್ಮತಿಯನೇ ಕರುಣಿಸುತಕೃತ ಕಾರ್ಯಳೆಂದೆನಿಸೊ ಕ್ಷಿತಿರಮಣ ಹರಿಯೇ 1 ಭವಶರಧಿ ದಾಟಿಸುವ ಪ್ಲವವೆನಿಪ ತವನಾಮಸ್ತವನಗಳ ಸರ್ವತ್ರ ಸರ್ವಕಾರ್ಯದಲಿಹವಣಿಸುತ ನೀನಾಗಿ ಪ್ರವರ ಸಾಧನಗೈಸೊಪವಮಾನ ಸನ್ನಿಹಿತ ಭುವನ ಮೋಹನನೇ 2 ಪ್ರಾಚೀನ ಕರ್ಮಗಳ ಯೋಚಿಸಲು ಎನ್ನಳವೇಕೀಚಕಾರಿಪ್ರೀಯ ಮೋಚಕೇಚ್ಛೆಯನುಸೂಚಿಸುವುದೋ ಸವ್ಯಸಾಚಿಸಖ ಶ್ರೀಹರಿಯೆನೀಚೋಚ್ಚ ತರತಮವ ತಿಳಿಸಿ ಪೊರೆ ಇವಳಾ 3 ನಂದ ಗೋಪನ ಕಂದ ಇಂದಿರೇಶನೆ ಹೃದಯಮಂದಿರದಿ ತವರೂಪ ಸಂದರುಶನಾ |ನಂದವನೆ ಇತ್ತಿವಳ ಅಂದದಲಿ ಸಲಹೆಂದುಕಂದರ್ಪಪಿತ ನಿನ್ನ ವಂದಿಸುತ ಬೇಡ್ವೆ4 ಅನಿರುದ್ಧ ರೂಪಾತ್ಮಮಧ್ವಗುರು ಗೋವಿಂದ ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಲಕ್ಷ್ಮೀ ವೆಂಕಟೇಶ ವಿಠಲ | ರಕ್ಷಿಸೋ ಇವಳಾ ಪ ವಿಶ್ವ ವ್ಯಾಪಕನೇ ಅ.ಪ. ಪುಟ್ಟಿ ಸತ್ಕುಲದಲ್ಲಿ | ತೊಟ್ಟು ಸತ್ಸಿದ್ಧಾಂತ ಇಷ್ಟ ಪಡುತಿಹಳಯ್ಯ | ಕಷ್ಟದಾಸತ್ವಾಇಷ್ಟ ಮೂರುತಿ ನೀನು | ತೈಜಸೀ ರೂಪದಲಿಸ್ಪಷ್ಟ ತೋರಿದ ಹರಿಯೆ | ಇತ್ತೆ ಉಪದೇಶಾ 1 ಮರುತ ಮತದಲಿ ದೀಕ್ಷೆ | ಹಿರಿಯರನು ಸರಣೆಯಲಿನಿರುತ ಆಸಕ್ತಿಯನು | ಕರುಣಿಸುತ ಭವದಾಶರಧಿಯನೆ ದಾಟಿಸುವ | ಮಾರ್ಗವನೆ ತೋರೊ ಹರಿಕರುಣಾಂಬುನಿಧಿಯೆಂದು | ಮೊರೆ ನಿನಗೆ ಇಡುವೇ 2 ಕಷ್ಟ ನಿಷ್ಠೂರಗಳ | ಸುಷ್ಠುಸಮತೆಲಿ ಉಂಬಶ್ರೇಷ್ಠ ಮತಿಯನೆ ಇತ್ತು | ರಕ್ಷಿಸೋ ಇವಳಾ |ಅಷ್ಟ ಸೌಭಾಗ್ಯಗಳ | ಕೊಟ್ಟು ಕಾಯಲಿ ಬೇಕೊಕೃಷ್ಣ ಮೂರುತಿ ಹರಿಯೆ | ಭಕ್ತ ವತ್ಸಲ್ಲಾ 3 ಪರಮಾರ್ಥ ಸಾಧನಕೆ | ಗುರು ಕರುಣಬೇಕೆಂಬವರಮತಿಯ ಕರುಣಿಸುತ | ಪೊರೆಯ ಬೇಕಿವಳಾಗರುಡ ಗಮನನೆ ದೇವ | ಸರ್ವಾಂತರಾತ್ಮಕನೆಕರುಣದಿಂ ಕೈ ಪಿಡಿದು | ಉದ್ಧರಿಸೋ ಇವಳಾ 4 ಪಾವಮಾನಿಯ ಪ್ರೀಯ | ಭಾವದಲಿ ಮೈದೋರಿಜೀವಿಯನು ಉದ್ಧರಿಸೋ | ದೇವ ದೇವೇಶಾಗೋವತ್ಸದನಿ ಕೇಳಿ | ಆಪು ಪೊರೆವಂತೆ ತೋರಿಗೋವಿದಾಂಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವೇಣು ಗಾನಪ್ರಿಯ - ಗೋವಿಂದ ನಮ್ಮಮಾನ್ಯ ಮಾನದನೇ - ಗೋವಿಂದ ಪ ದಕ್ಷಿಣಾಕ್ಷಿಯಲಿಹ - ಗೋವಿಂದ | ನಮ್ಮ | ಪಕ್ಷಿಯ ವಾಹ - ಮುಕುಂದ ||ಕುಕ್ಷಿಲಿ ತ್ರಿಭುವನ - ಗೋವಿಂದ | ನಮ್ಮ | ಅಕ್ಷರ ಕ್ಷರವರ _ ಮುಕುಂದ1 ಪೂರ್ಣ ಗುಣಾರ್ಣವ - ಗೋವಿಂದ | ನಮ್ಮ | ಪೂರ್ಣ ಭೋದನುತ ಮುಕುಂದಪೂರ್ಣಾನಂದ ಪ್ರದ - ಗೋವಿಂದ | ಕುಭ | ವಾರ್ಣವ ದಾಟಿಸು ಮುಕುಂದ 2 ಭವ | ಗೋಜನೆ ಬಿಡಿಸೊ - ಮುಕುಂದ 3 ಕಾರಣ ಕಾರಣ - ಗೋವಿಂದ | ಜಗ | ಕಾರಣ ನೈಮಿತ್ಯ - ಮುಕುಂದಈರಣ ಜಗಕೆಲ್ಲ - ಗೋವಿಂದ | ಮದ ವಾರಣ ಮಾರಣ - ಮುಕುಂದ 4 ಶಿರಿ ಹಯವದನನೆ - ಗೋವಿಂದ | ನಮ್ಮ | ಶಿರಿ ಕೃಷ್ಣ ರಾಮನೆ - ಮುಕುಂದಶಿರಿ ವೇದವ್ಯಾಸ - ಗೋವಿಂದ | ಕಾಯೊ | ಗುರು ಗೋವಿಂದ - ವಿಠಲ ಮುಕುಂದ 5
--------------
ಗುರುಗೋವಿಂದವಿಠಲರು
ವ್ಯಾಸಕೂಟ-ದಾಸಕೂಟದ ಇತರ ಗುರುಗಳ ವರ್ಣನೆ ಮುನಿವರ್ಯ ಶ್ರೀಕಾರ್ಪರ ಮುನಿವರ್ಯ ಪ ಗೃಂಥಾರ್ಥ ಜ್ಞಾನ ವಿಷಯವ ನೆನೆಸದಂದದಿ ಮಾಡೋ ವನಜನಾಭನ ಪ್ರೀಯ ಅ.ಪ ಮುನಿವರ್ಯ ಮನವಾಚಾಕಾಯಾ ದಿಂದ ಅನುದಿನ ನಡೆಯುವ ಕ್ರಿಯಾ ಶ್ರೀ ಕೃಷ್ಣನೆ ಮಾಡಿಸುವನೆಂಬೊ ಮತಿಯಾ ಕೊಡು ಯನಗೆಂದು ಮುಗಿವೆನು ಕೈಯಾ ಆಹಾ ಭವ ವನಧಿ ದಾಟಿಸುವ ಸಜ್ಜನರ ಸಂಗವ ಕೊಡು 1 ಶ್ರೀಕಾಂತನಶ್ವತ್ಥ ರೂಪ ದಿಂದ ಒಲಿದು ಬಂದು ನಿಂತು ಭಕ್ತ ವೃಂದವ ಪಾಲಿಪ ನಿರುತ ಆಹ ಇಂದುಮೌಲಿ ಮುಖರಿಂದ ಸಹಿತನಾಗಿ ಮಂದ ಜಾಸನನಿಲ್ಲಿ ಬಂದು ಪೂಜಿಪನಿತ್ಯ 2 ಶ್ರೀ ಕಾರ್ಪರಾಗಾರ ಬಹುಶರಣು ಜನರಿಗೆ ಮಂದಾರ ನರಹರಿಯನೊಲಿಸಿದಂಥ ಧೀರಾ ಆಹಾ ಕರುಣ ಶರಧೆಯನ್ನ ದುರಿತಗಳೋಡಿಸಿ ಹರಿಗುರು ಚರಣದಿ ಪರಮಭಕ್ತಿಯ ಕೊಡೊ 3
--------------
ಕಾರ್ಪರ ನರಹರಿದಾಸರು
ಶುಭ ವಾಸುದೇವ ಮೂರುತಿಗೆ ಪಕುಂದಣಕೆ ಸರಿಯಾದ ಕಾಯದತಿ ಕಾಂತಿಗೆಸಿಂಧುವನು ಪೋಲ್ವ ಗಂಭೀರ ರಸಕೆಇಂದುಬಿಂಬವ ಜರೆವ ಮುಖದ ಸೊಂಪಿನ ಸಿರಿಗೆಕಂದರ್ಪ ಕೋಟಿ ಲಾವಣ್ಯ ನಿಧಿಗೆ 1ಅಭಯದಾನವ ಕೊಡುವ ಕರಗಳತಿ ಚೆಲು'ಕೆಗೆಶುಭಗಳಿಗೆ ನೆಲೆಯಾದ ನೇತ್ರಗಳಿಗೆ'ಭವಗಳಿಗೆಡೆಬಿಡದ ಮುಗುಳುನಗೆಯೊಗು'ುಗೆಗೆತ್ರಿಭುವನಂಗಳನಳೆದ ಪದ ನಳಿನಗಳಿಗೆ 2ಜ್ಞಾನಮುದ್ರೆಯ ಕರದಿ ಜ್ಞಾನೋಪದೇಶವನುತಾನೆ ಕರೆದಿತ್ತು ಭಕ್ತರ ಸಲಹುತಾ ಮಾನವನು ಕಡೆಗೊತ್ತಿ ಮಾನ್ಯ ತಾನೆಂದೆನಿಪಶ್ರೀನಿಕೇತನ ನಿಜದ ಚಿನ್ಮಯಾತ್ಮಕಗೆ 3ಕಾವೇರಿ ಗಂಗೆಯೊಲು ಕಮಲನಾಭನ ಕಥೆಯ ಪಾವನದ ತೀರ್ಥದಲಿ ಪಾಪವಳಿದು ಜೀವಭಾವವ ಬಿಟ್ಟು ಬ್ರಹ್ಮ ತಾನೇಯಾಗಿಯಾವಗವು ಸುಖಶರಧಿಯಾದ ಚಿನ್ಮಯಗೆ 4ರಾಗಾದಿರ'ತನಿಗೆ ರಾಗಿಗಳ ಸಂಸಾರಸಾಗರವ ದಾಟಿಸುವ ಬೋಧ ಘನಗೆಯೋಗಿಗಳ ಸಂಮತಗೆ ಗುರು ವಾಸುದೇವಗೆಯೋಗೇಶ ತಿರುಪತಿಯ ವೆಂಕಟೇಶ್ವರಗೆ 5ಓಂ ಶ್ರೀವತ್ಸಕೌಸ್ತುಭಧರಾಯ ನಮಃ
--------------
ತಿಮ್ಮಪ್ಪದಾಸರು
ಹನುಮೇಶ ವಿಠ್ಠಲನೆ ಸಲಹ ಬೇಕಿವಳಾಗುಣಪೂರ್ಣ ನಿರ್ದೋಷ ಚಿದ್ಭವನೆ ಹರಿಯೇ ಪ ನಾಗಕಾಳೀಯ ಮದ ಭಂಜನನೆ ಶಿರಿಕೃಷ್ಣನೀಗಿ ಹೃದ್ರೋಗವನು ಆಗು ಹೋಗುಗಳಾ |ನಾಗಶಯನನೆ ನೀನೆ ಮಾಳ್ಪುದನೆ ತಿಳಿಸುತ್ತಾಭೋಗ ವಿಹ ಪರಧ್ವಂಸ ಭೋಗ ತಿಳಿಸುವುದೋ1 ಮಧ್ವ ಶಾಸ್ತ್ರಜ್ಞಾನ ಉದ್ಭೋಧ ಕೊಟ್ಟಿವಳಶುದ್ಧ ತರತಮ ಭೇದ ಪಂಚಕವ ತಿಳಿಸಿ |ಅದ್ವಿತೀಯನೆ ಭಾವ ದ್ರವ್ಯ ಕ್ರಿಯಗಳು ಎಂಬಅದ್ವೈತ ತ್ರಯಜ್ಞಾನವಿತ್ತು ಪಾಲಿಪುದು 2 ಖಗವರಧ್ವಜದೇವ ಗೋವಿಂದ ಮೂರುತಿಯೆಬಗೆಬಗೆಯ ತವಲೀಲೆ ಮಿಗಿಲು ಸ್ಮøತಿಯಿತ್ತು |ಹಗರಣದ ಸಂಸಾರ ಸಾಗರವ ದಾಟಿಸುತನಿಗಮ ವೇದ್ಯನೆ ತೋರೊ ಹೃದ್ಗುಹದಿ ಹರಿಯೇ 3 ಪತಿಸೇವೆಯಿತ್ತಿವಳ ಕೃತಕಾರ್ಯಳೆಂದೆನಿಸೊಪಿತೃ ಮಾತೃ ಬಂಧುಗಳು ಹಿತ ಜನಾಂತಸ್ಥಕೃತಿ ಪತಿಯೆ ನಿನವ್ಯಾಪ್ತಿ ಮತಿಯಿತ್ತು ಪಾಲಿಸುತಹಿತದಿ ಸಾಧನಗೈಸೊ ವಾತಾತ್ಮ ಹರಿಯೇ 4 ನಿರುತ ತವ ದಾಸತ್ವ ಅರ್ಥಿಯಲಿ ಇರುವಂಥತರಳೆಯನು ಸ್ವೀಕರಿಸಿ ದಾಸಳೆಂದೆನಿಸೊಶರಣ ಜನ ವತ್ಸಲನೆ ಕರುಣಿ ಭಿನ್ನಪ ಸಲಿಸೊಮರುತಾಂತರಾತ್ಮ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಹರಿಶಯ್ಯ - ಹರಿಶಯ್ಯ ಪ ಪೂರ್ವ ತ್ರಿಯಂಬಕ | ಜೀವರ ಮಾನಿಯೆ ಅ.ಪ. ಪತಿ ಚಾರು ಭವ ವಾರಿಧಿ ದಾಟಿಸು 1 ದಾತನೆ ಪ್ರಾರ್ಥಿಪೆ | ವಾತೋದ್ಭವ ಎನಪ್ರೀತಿಲಿ ಕರಪಿಡಿ | ವಾತಾಶನ ಗುರು2 ನಿಕರ ಸಿರಿ | ಕೇಶವನಲಿ ಬಿಡು 3 ಭವ 4 ಪಕ್ಷಿಯ ವಹ ಹರಿ | ಪಕ್ಷಸಾಧಕ ಗುರುಚಕ್ಷುಶ್ರ್ಯವ ಎನ | ಈಕ್ಷಿಸು ಕರುಣದಿ 5 ಸ್ವಪ್ನದಿ ಇತ್ತಿಹ | ಆಜ್ಞೆಯಂತೆ ಗುರುಸ್ವಪ್ನಾಖ್ಯಾನದಿ | ಪ್ರಜ್ಞೆಯ ನಿರಿಸೋ 6 ಸಾವಿರ ಮುಖದಲಿ | ಭುವಿಧರಭಿಧ ಗುರುಗೋವಿಂದ ವಿಠಲನ | ಸೇವಿಪೆ ಭಕುತಿಲಿ 7
--------------
ಗುರುಗೋವಿಂದವಿಠಲರು