ಒಟ್ಟು 27 ಕಡೆಗಳಲ್ಲಿ , 15 ದಾಸರು , 27 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿದೆನು ಉಡುಪೀ ನಿವಾಸನ ನೋಡಿದೆನು ಯಾದವೇಶನ ನೋಡಿದೆನು ಮಾನಿಸ ವೇಷನ ನೋಡಿದೆನೊ ಲಕುಮೇಶನ ಪ ಪರಶುರಾಮನು ಭೂಮಿ ಸುರರಿಗೆ ಸರವು ಧಾರುಣಿ ಧಾರಿಯಾ ಎರದು ಕೇಸರಗಿರಿಯ ಪಡುಮೂಲ ಶರನಿಧಿಯನು ಶರದಲೀ ಭರದಿ ಬಿಡಿಸಿದ ಶೂರ್ಪಕಾರದ ತೆರದಿ ನೆಲ ನೀ ಧರುಣಿಗೆ ಪರಮ ಸಾಹಸ ರಾಮಭೋಜನು ಅರಸನಾದುದು ನೋಡಿದೆ 1 ಯಾಗಗೋಸುಗ ರಾಮ ಭೋಜನು ನೇಗಿಲಿಯ ಕೊನೆಯಿಂದಲಿ ಆಗ ಭೂಮಿಯ ಶೋಧಿಸÀಲು ಬಂದು ನಾಗ ಬಂದಿತು ಮೃತವಾಗಿ ತೂಗಿ ಶಿರವನು ಭೃಗು ಕುಲೇಶಗೆ ಬಾಗಿ ನೆನೆಯಲು ಸಂಕೇತಾ ಸಾಗಿ ಭೂಮಿಪಾಲ ರಿಪು ಚನ್ನಾಗಿ ಒಲಿದದು ನೋಡಿದೆ 2 ತಿಳುಹಿದನು ಪೂರ್ವದಲಿ ಈ ಫಣಿ ಖಳನು ಕಾಣೊ ಇವನಿಂದು ಅಳಿದು ಪೋದದು ಲೇಸು ಭೂಸುರ ಕುಲಕೆ ಸಂತೋಷವಾಯಿತು ಒಲುಮೆಯಲಿ ಸತ್ಕಾರ ವಿಧ ವೆ ಗ್ಗಳವಾಗಿ ಸುಯಾಗವ ಸುಲಭ ಮನದಲಿ ಮಾಡೆನಲು ನಿ ಶ್ಚಲ ಭಕುತಿಲಿ ಸ್ತುತಿಸಲು 3 ಇಂದಿರಾಪತಿ ಕರುಣಿಸೆಂದು ಅಂದಿಗಾ ರಾಮ ಭೋಜನು ಒಂದು ಕ್ರೋಶದ ಅಗಲ ರಜತಾ ಚಂದದಾಸನ ಮಾಡಿಸಿ ತಂದು ದೇವನ ಕುಳ್ಳಿರಿಸಿ ಆ ನಂದದಲಿ ಓಲಾಡುತಾ ಕುಂದದಲೆ ಮೇಧವನು ಮುಗಿಸಿ ಗೋ ವಿಂದನ ಪ್ರೀತಿಪಡಿಸಿದಾ 4 ಭೂತಳದೊಳು ರಜತಪೀಠಾಖ್ಯ ಖ್ಯಾತಿ ಆಯಿತು ಸರ್ವದಾ ಆ ತರುವಾಯದಲ್ಲಿ ಭಾರ್ಗವ ಭೂತನಾಥನ ನಂದದಿ ವಾತ ಭಕ್ಷನ ನಡುವೆ ನಿಂದನು ಮಾತುಯಿದು ಪುಶಿಯಲ್ಲವೊ ಪೂತುರೆ ಮೋಹಕವೆ ತೋರಿದ ಜಾತ ರಹಿತಗೆ ನಮೋ ನಮೋ 5 ಪರಿ ಇರಲು ಗಂಗೆಯ ಕಾಂತ ಮಹಾ ತಪವನೆ ಮಾಡಿ ಸಂತತ ಗೋಪಾಲಕೃಷ್ಣನ ಸಂತೋಷವನು ಬಡಿಸಿದಾ ಚಿಂತೆಯಲಿ ವಿದೂರನಾದನು ಮುಂತೆ ನಡೆದ ಕಥೆ ಕೇಳಿ ಕಂತುಹರನನ ಒಲಿಸಿ ಉಡುಪಾ ಕಾಂತ ವರವನೆ ಐದಿದಾ 6 ಮೂರು ಯುಗದಲಿ ಈ ಪರಿಯಾಗೆ ಮಾರುತ ಮಧ್ಯಗೇಹನ ಚಾರು ಮನೆಯಲಿ ಜನಿಸಿ ವೈಷ್ಣವಾ ಚಾರ್ಯ ಈ ದುಶ್ಯಾಸ್ತ್ರವ ಹಾರಿಸಿದ ಹರುಷದಲಿ ರುಕ್ಮಿಣಿ ದ್ವಾರಕೆಲಿ ಪೂಜೆ ಮಾಡಿದ ಮೂರುತಿಯ ಸ್ಥಾಪಿಸಿದ ಲೀಲೆಯು ಆರು ಬಣ್ಣಿಸಲಾಪರು 7 ಇದೇ ರಜತಪೀಠ ಅಜಕಾನನವಿದೆ ಇದೇ ಉಡುಪಿ ಇದೇ ಶಿವಕುಲ್ಲ್ಯ ಅದರ ಬಳಿಯಲಿಯಿಪ್ಪ ತೀರ್ಥವ ಅದುಭುತವ ವರ್ಣಿಸುವೆನು ಇದೇ ಅನಂತ ಸರೋವರವು ಮ ತ್ತಿದೇ ವಾರುಣ್ಯಚಂದ್ರಮತೀರ್ಥ ಇದಕೆ ಮಧ್ವಸರೋವರ ವೆಂ ಬದು ಕಾಣೊ ಶ್ರುತಿ ಉಕ್ತಿಲಿ 8 ಸಕಲ ದೇಶದ ಜನರು ತ್ರಿವಿಧ ಸುಖವಾರಿಧಿಯೊಳು ಸೂಸುತಾ ಅಖಿಳ ವೈಭವದಿಂದ ಬಪ್ಪ ಅಕಟ ಸಂದಣಿಗೇನೆಂಬೆ ಸೂರ್ಯ ಬಂದ ಕಾ ಲಕೆ ಕೃಷ್ಣನ ನೋಡುವೆನೆಂದು ಚಕ್ಕನೆ ನಿಲ್ಲದೆ ಬಂದು ನೆರದಂದು ಮುಕ್ತಾರ್ಥ ಹರಿಪ್ರೇರಕಾ 9 ಸಜ್ಜನರ ಸಿರಿಚರಣ ರಜದಲಿ ಮಜ್ಜನವ ಗೈವುತ ಹೆಜ್ಜಿಹೆಜ್ಜಿಗೆ ಕೃಷ್ಣ ಕೃಷ್ಣ ಅಬ್ಜನಾಭ ನಾರಾಯಣ ಮೂಜಗತ್ಪತೆ ಎಂದು ಸ್ತೋತ್ರ ನಿ ರ್ಲಜ್ಜನಾಗಿ ಪಠಿಸುತಾ ರಜ್ಜುಪಾಣಿಯ ಬಹಿರದಿಂದ ನಿ ವ್ರ್ಯಾಜ್ಯ ಭಕುತಿಲಿ ನೋಡಿದೆ 10 ಮೊದಲು ನಮಿಸಿದೆ ಚಂದ್ರಶೇಖರ ಪದುಮಗರ್ಭನ ಮಗನೆಂದು ಅದರ ತರುವಾಯದಲ್ಲಿ ಮಾಯಿಯ ಸದಬಡೆದ ಪೂರ್ಣಬೋಧರು ಸದಮಲಾ ಕುಳುತಿಪ್ಪ ಸ್ಥಾನವ ಒದಗಿ ನೋಡಿ ಕೊಂಡಾಡುತಾ ಮದನ ಜನಕಾನಂತ ಸ್ವಾಮಿಯ ಪದಯುಗಳವನು ನೋಡಿದೆ11 ರತುನ ಗರ್ಭದೊಳಧಿಕವಾದ ತೀ ರಥವಿದು ಮಧ್ವಾಖ್ಯದಿ ಸತತ ಬಿಡದಲೆ ಇಲ್ಲಿ ಭಾಗೀ ರಥಿವಾಸ ನದಿಗಳ ಕೂಡಿ ನುತಿಸಿ ಮೆಲ್ಲನೆ ಮುಟ್ಟಿ ಮಿಂದು ಮತ್ತೆ ಕರ್ಮದ ಚರಿಯವ ಹಿತ ಮನಸಿನಲ್ಲಿ ಮಾಡುವಂಥ ಕೃತ ಕಾರ್ಯವನು ನೋಡಿದೆ 12 ಅಲ್ಲಿಂದ ನವರಂಧ್ರಗಳು ಕಂಡು ಪುಲ್ಲಲೋಚನ ಕೃಷ್ಣನ ಸೊಲ್ಲಿನಿಂದಲಿ ಪಾಡಿ ಭಾರತಿ ವಲ್ಲಭನ ಕೊಂಡಾಡುತಾ ಮೆಲ್ಲ ಮೆಲ್ಲನೆ ದ್ವಾರವನೆ ಪೊಕ್ಕು ನಿಲ್ಲದಲೆ ಸಮೀಪಕೆ ಬಲ್ಲವನು ಗುಣಿಸುತ್ತ ಭಕುತ ವ ತ್ಸಲನಂಘ್ರಿ ನೋಡಿದೆ13 ಮೂರು ಬಗೆ ಭೂಷಣವ ಧರಿಸಿದ ಮೂರುತಿ ಇದೇ ಕಾಣಿರೊ ಪಾರುಗಾಣರು ಈತನ ಅವ ತಾರ ಗುಣಕ್ರಿಯೆ ಮಹಿಮೆಯಾ ವಾರಿಜೋದ್ಭವ ಶಿವ ಮುಖಾದ್ಯರು ಸಾರಿ ಹಾಹಾ ಎಂಬರೊ ಧಾರುಣಿಗೆ ಇದೇ ದೈವ ನವನೀತ ಚೋರನ ಕೊಂಡಾಡಿದೆ 14 ತ್ರಾಹಿ ತ್ರಯಾವಸ್ಥೆ ಪ್ರೇರಕ ತ್ರಾಹಿ ತ್ರಯಗುಣ ವಿರಹಿತಾ ತ್ರಾಹಿ ತ್ರಯಧಾಮ ವಾಸ ಸರ್ವೇಶ ತ್ರಾಹಿ ತ್ರಯ ರೂಪಾತ್ಮಕಾ ತ್ರಾಹಿ ತ್ರಯವನು ಗೆದ್ದ ಪ್ರಸಿದ್ಧ ತ್ರಾಹಿ ತ್ರಯವನು ಕೊಡುವನೆ ತ್ರಾಹಿ ತ್ರಯಗಣ್ಣ ವನಪಾಲಕ ತ್ರಾಹಿ ತ್ರಯಲೋಕಾಧಿಪಾ 15 ಪಾಹಿಪರಮಾನಂದ ಗೋವಿಂದ ಪಾಹಿ ಪರತರ ಪರಂಜ್ಯೋತಿ ಪಾಹಿ ಪತಿತ ಪಾವನ್ನ ಮೋಹನ್ನಾ ಪಾಹಿ ಪಾಲಾಂಬುಧಿಶಾಯಿ ಪಾಹಿ ಜಗದತ್ಯಂತ ಭಿನ್ನಾ ಪಾಹಿ ನಿರ್ಭಿನ್ನ ಸ್ವರೂಪ ಪಾಹಿ ನಖಶಿಖ ಜ್ಞಾನ ಪೂರ್ಣನ ಪಾಹಿ ಎನ್ನಯ ಪ್ರೇಮನೆ 16 ನಮೋ ನಮೋ ಚತುರಾತ್ಮ ಗುಣನಿಧಿ ನಮೋ ನಮೋ ಪುನ್ನಾಮಕ ನಮೋ ನಮೋ ವಟಪತ್ರಶಾಯಿ ನಮೋ ನಮೋ ಪುಣ್ಯಶ್ಲೋಕನೆ ನಮೋ ನಮೋ ಸಮಸ್ತ ಸರ್ವಗ ನಮೋ ನಮೋ ಸರ್ವ ಶಬ್ದನೆ ನಮೋ ನಮೋ ಅವ್ಯಕ್ತ ವ್ಯಕ್ತಾ ನಮೋ ನಮೋ ನಾರಾಯಣ 17 ಜಯ ಜಯತು ಕರಿವರದ ವಾಮನ ಜಯತು ನಾರದ ವಂದ್ಯನೆ ಜಯ ಜಯತು ಪ್ರಹ್ಲಾದ ರಕ್ಷಕ ಜಯ ಜಯತು ಪಾರ್ಥನ ಸಾರಥೆ ಜಯ ಜಯತು ಅಂಬರೀಷ ಪರಿಪಾಲಾ ಜಯತು ಪರಾಶರನುತಾ ಜಯ ಜಯತು ಪಾಂಚಾಲಿ ಮಾನ ಕಾಯ್ದನೆ ಜಯ ಜಯತು ಗೋಪಿಕಾ ವಲ್ಲಭಾ18 ಇನಿತು ಬಗೆಯಲಿ ತುತಿಸಿ ದೇವನ ಮನದಣಿಯ ಕೊಂಡಾಡುತಾ ಕ್ಷಣಬಿಡದೆ ತನ್ನ ನೆನೆಸಿದವರಿಗೆ ಹೊಣೆಯಾಗಿ ಪಾಲಿಸುವನು ಜನುಮ ಜನ್ಮದಲಿಂದ ಮಾಡಿದ ಘನದುರಿತ ಪರ್ವತಗಳು ಚಿನಿಗಡೆದು ಸಾಧನವೆಲ್ಲ ವೇಗ ತನಗೆ ತಾ ಮಾಡಿಸುವನು 19 ವ್ಯಾಧ ಭೂಸುರ ವೇಷವು ಭೇದ ಮಾಡಿದ ನಾರಾಯಣಿ ಸುಪ್ರಸಾದ ನಿರ್ಮಲರೂಪವು ಆದಿವಾರವು ವಿಡಿದು ಎರಡು ಐದು ದಿನ ಪರಿಯಂತವು ಶ್ರೀಧರೇಶನು ವೇಷ ಧರಿಸಿದ್ದು ಸಾಧು ಸಂಗಡ ನೋಡಿದೆ20 ಉದಯಕಾಲದ ಪೂಜೆಯಾಗಲು ಮುದ ನಿರ್ಮಾಲ್ಯ ವಿಸರ್ಜನೆ ಇದೆ ಪೂರೈಸಲು ಮತ್ತೆ ಪಂಚ ಸುಧ ಪೂಜೆ ಉದ್ವಾರ್ಥನೆ ಒದಗಿಯಾಗಲು ಮೇಲೆ ಸುಧ ವಿಧುದಂತೆ ಬೆಣ್ಣೆ ಶರ್ಕರ ಇದೆ ಮಹ ಪೂಜೆ ನೋಡಿದೆ 21 ಗಂಧ ಪರಿಮಳ ತುಲಸಿ ಪುಷ್ಪಾ ನಂದ ಭೂಷಣ ಧರಿಸಿಪ್ಪ ಒಂದು ಕೈಯಲಿ ದಾಮ ಕಡಗೋ ಲಂದದಲಿ ತಾಳಿದಾ ಮಂದರಿಗೆ ಇದು ಸಾಧ್ಯವಲ್ಲವು ಮುಂದೆ ಯತಿಗಳು ಮಂತ್ರವ ಮಂದ ನಗಿಯಲಿ ಪೇಳುತಿಪ್ಪ ಚಂದವನು ನಾ ನೋಡಿದೆ 22 ಎತ್ತುವ ಧೂಪಾರತಿಗಳು ಹತ್ತೆಂಟು ಬಗೆ ಮಂಗಳಾ ರುತ್ತಿ ನಾನಾ ನೈವೇದ್ಯ ಷಡುರಸ ಮೊತ್ತಂಗಳು ಪರಿವಿಧಾ ಉತ್ತಮ ಶಾಖಾದಿ ಘೃತದಧಿ ತತ್ತಕ್ರಫಲ ಪಕ್ವವು ಸುತ್ತಲು ತಂದಿಟ್ಟು ಅರ್ಪಿ ಸುತ್ತಲ್ಲಿಪ್ಪುದು ನೋಡಿದೆ 13 ಮಂತ್ರ ಘೋಷಣೆ ಭಾಗವತಜನ ನಿಂತು ಗಾಯನ ಮಾಡಲು ಅಂತವಿಲ್ಲದೆ ವಾದ್ಯಸಂದಣಿ ಚಿಂತಿಸುವ ನಿಜದಾಸರು ವಂತು ವಾಳೆಯಿಲ್ಲದಾ ಜನ ಸಂತೋಷದಲಿ ನಲಿವುತಾ ತಂತ್ರ ಸಾರೋಕ್ತದ ಪೂಜೆ ಅತ್ಯಂತವನು ನಾ ನೋಡಿದೆ 24 ತೀರ್ಥ ಪ್ರಸಾದ ಗಂಧ ಅಕ್ಷತೆ ಅರ್ಥಿಯಲ್ಲಿ ಕೊಡುವರು ವ್ಯರ್ಥವಲ್ಲಿವು ಇಲ್ಲಿ ಒಂದು ಮು ಹೂರ್ತವಾದರು ಎಂದಿಗೂ ಶುಭ ಪ ದಾರ್ಥ ಬಡಿಸಲು ಉಂಡು ಕೃ ತಾರ್ಥನಾದೆನು ಜ್ಞಾನವಧಿಕ ಸಾರ್ಥಕರನ ನೋಡಿದೆ25 ತರಣಿ ಮಕರಕೆ ಬರಲು ಗೋಪಾಲ ಮೆರೆವ ವೈಭವವೆಂಬೆನೇ ಗಜ ತುರಗ ಹರಿ ಗರುಡ ಶ್ರೀ ಹನುಮಂತನಾ ವರ ರೂಢನಾಗಿ ಮೆರೆದು ಆಮೇಲೆ ಮಿರುಗುವ ರಥವನೇ ಏರಿ ಪರಮ ವೇಗದಿ ಚತುರ್ವೀಧಿಯ ತಿರುಗಿ ಬಪ್ಪದು ನೋಡಿದೆ 26 ಓಕಳಿಯ ಸಂಭ್ರಮವೆ ಪೇಳಲು ಗೋಕುಲಕೆ ಸಮನೆನಿಸಿತು ವಾಕು ಕೇಳ್ ಸುರ ಮುನಿಗಳೊಡನೆ ಲೋಕಕ್ಕಾಶ್ಚರ್ಯ ತೋರುತಾ ಸೋಕಿ ಸೋಕದ ಹಾಸೆ ಓಕುಳೀ ಹಾಕಿ ಆಡುವ ಲೀಲೆಯ ಈ ಕಲಿಯುಗದಲ್ಲಿ ಸೋಜಿಗ ಈ ಕಥೆಯಾದುದು ನೋಡಿದೆ 27 ವಾಲಗ ಎಡಬಲದಲಿ ಪಂಜು ಕಟ್ಟಿಕೆಕಾರರು ರಂಜಿಸುವ ಪಲ್ಲಕ್ಕಿ ಸೇವಿಪ ರಂಜಳವಾಗಿ ಒಪ್ಪಲು ಕುಂಜರಾರಿಯ ಪೀಠದಮೇಲೆ ಕಂಜಲೋಚನ ಕುಳ್ಳಿರೆ ನಿ ರಂಜನದಲಿ ಪೂಜಿಸುವ ಮತಿ ಪುಂಜ ಯತಿಗಳ ನೋಡಿದೆ 28 ಶ್ರುತಿ ಪುರಾಣಗಳುಪನಿಕ್ಷತ್ ವೊ ಸತು ಶಾಸ್ತ್ರ ಪ್ರಬಂಧವು ಭಾಗವತ ಸುಸಂ ಗೀತಿಯಲಿ ರಾಗ ಭೇದವು ಶ್ರುತಿ ಕಥಾಭಾಗ ಪದ್ಯ ಅಷ್ಟಕ ಮಿತಿಯಿಲ್ಲದಲಿಪ್ಪ ಪ್ರಸಂಗ ತತುವ ಮಾರ್ಗದಿ ನುಡಿವ ಬಲು ಉ ನ್ನತ ಮಹಿಮರ ನೋಡಿದೆ 29
--------------
ವಿಜಯದಾಸ
ಪವಮಾನ ಪಾವನ ಚರಿತ ಪದ್ಮ ಭವನ ಪದಾರ್ಹನೆ ನಿರುತ ಅಹ ಪ ಶ್ರವಣಾದಿ ಭಕುತಿ ಜ್ಞಾನವಿತ್ತು ಸಲಹೊ ಮೂ ರವತಾರಾತ್ಮಕ ತತ್ವ ದಿವಿಜನಿಯಾಮಕ ಅ.ಪ. ಪ್ರಾಣೋಪಾನ ವ್ಯಾನೋದಾನ ಹೇ ಸ ಮಾನ ರೂಪಕನೆ ವಿಜ್ಞಾನ ತತ್ವ ಗೀರ್ವಾಣ ಅಹ ಸೇನಾಧಿಪತಿ ನಿನ್ನ ಜ್ಞಾನಸಾರದಲಿಪ್ಪ ಮಾನವರನು ಕಾಯೋ ಮೌನಿ ಧ್ಯಾನಗಮ್ಯ 1 ನಾಗಕೂರ್ಮ ದೇವದತ್ತ ಕೃಕಳ ಯೋಗಿವರಿಯ ಮುಕ್ತಾಮುಕ್ತ ಕ್ಲುಪ್ತ ಭೋಗಗಳೀವ ಸುಶಕ್ತಾ ತಲೆ ಬಾಗಿ ಬೇಡುವೆ ಸರ್ವೋದ್ರ್ರಿಕ್ತ ಅಹ ಜಾಗುಮಾಡದೆ ನಿಜ ಭಾಗವತರೊಳಿಡೊ ಮೈಗಣ್ಣಪದನಾಳ್ದ 2 ಮೂರುಕೋಟಿ ರೂಪಧರನೆ ಲೋಕ ಧಾರಕ ಲಾವಣ್ಯಕರನೆ ಸರ್ವ ಪ್ರೇರಕ ಭಾರತಿವರನೆ ತ್ರಿಪು ರಾರಿಗೆ ವಜ್ರಪಂಜರನೆ ಆಹ ನೀರಜ ಜಾಂಡದಿ ಮೂರೇಳು ಸಾವಿರ ದಾರು ನೂರು ಜಪ ಬೇರೆ ಬೇರೆ ಮಾಳ್ಪ 3 ಆಖಣಾಶ್ಮ ಸಮಚರಣ ಪದ್ಮ ಲೇಖರ ಮಸ್ತಕಾಭರಣ ಕಲ್ಪ ಶಾಖೆಯಂತೆ ಅತಿಕರುಣಾದಿಂದ ಈ ಖಂಡದೊಳು ಮಿಥ್ಯಾವರಣ ಆಹಾ ನೀ ಖಂಡಿಸಿದಿ ದಂಡ ಮೇಖಲ ಭೂಷಣ ಆಖುವಾಹನಪಿತ ಆಖಂಡಲರ್ಚಿತ 4 ಶ್ರೀವಲ್ಲಭಗೆ ಪ್ರತಿಬಿಂಬನಾಗಿ ಜೀವವೇದ ಕಾಲಸ್ತಂಭಗತ ಆವಾಗ ಹರಿರೂಪ ಕಾಂಬ ಶಕ್ತ ನೀ ಒಬ್ಬನಹುದೋ ನಾನೆಂಬೆ ಆಹಾ ವಿಭವ ಜಗ ನಿತ್ಯ 5 ದಕ್ಷಿಣಾಕ್ಷಿಗತ ವತ್ಸಾ ರೂಪಿ ದಕ್ಷನಹುದೋ ಪರಮೋಚ್ಚಾ ಚಾರು ತ್ರ್ಯಕ್ಷಾದಿ ಸುರರೊಳಧ್ಯಕ್ಷಾ ಸರ್ವಾ ಪೇಕ್ಷರಹಿತನೆ ಸ್ವೇಚ್ಛಾ ಆಹಾ ಮೋಕ್ಷಾದಿ ದ್ವಾತ್ರಿಂಶ ಲಕ್ಷಣ ಪುರುಷ ನಿ ರೀಕ್ಷಿಸಿ ಕರುಣದಿ ರಕ್ಷಿಸೋ ಎನ್ನನು 6 ಮೂಲೇಶನಂಘ್ರಿ ಸರೋಜ ಭೃಂಗ ಏಳೇಳು ಲೋಕಾಧಿರಾಜಾ ಇಪ್ಪ ತ್ತೇಳು ರೂಪನೆ ರವಿತೇಜಾ ಲೋಕ ಪಾಲಕರಾಳ್ವ ಮಹೋಜಾ ಆಹಾ ಕಾಳಿರಮಣ ನಿನ್ನ ಕಾಲಿಗೆರಗುವೆ ಕೃ ಪಾಳು ಭಕ್ತಿ ಜ್ಞಾನವಾಲಯ ಕರುಣಿಸು 7 ಅಧಿಭೂತ ಅಧ್ಯಾತ್ಮಗತನೇ ವಿಮಲ ಅಧಿದೈವರೊಳು ಪ್ರವಿತತನೆ ಕಲಿ ವದನದಿ ನಿಲಿಸೋ ಮಾರುತನೆ ಆಹಾ ಬದರಿಕಾಶ್ರಮದೊಳು ಹದಿನಾರು ಸಾವಿರ ಸನ್ನುತ 8 ಮಾತರಿಶ್ವ ಮಹಾಮಹಿಮ ಸರ್ವ ಚೇತನ ಹೃದ್ಗತ ಹನುಮ ಭೀಮ ಭೂತಳದೊಳು ಮಧ್ವ ನಾಮಾದಿಂದ ಜಾತನಾಗಿ ಜಿತಕಾಮಾ ಆಹಾ ಆ ತಿಪ್ಪಣ್ಣಾದಿ ವಿಖ್ಯಾತ ಮಾಯ್ಗಿಳ ಗೆದ್ದ ಸೀತಾರಮಣ ಜಗನ್ನಾಥ ವಿಠ್ಠಲ ದೂತ 9
--------------
ಜಗನ್ನಾಥದಾಸರು
ಪವಮಾನ-ಪಾವನಾ ಜಗಜ್ಜೀವನ ಪ ಶಿವ ಖಗಪತಿ ಅಹಿಸುರ ವಂದಿತಪದ ಅ.ಪ ಸೇವಾ ಕೃಷ್ಣ ಸಾಧನಾ ಕಾವಕರುಣಿ ಕಿಂಪುರುಷ ಖಂಡಾಧಿಪ ಕಾವಳದೊಳು ನಿನ್ನವರನು ಕಾಯ್ದೆ ಭೂವಳಯದೊಳವಿದ್ಯೆಯನಳಿಸಿದ ಸದ್ವರ್ತನು ನೀನೆನ್ನನುದ್ಧರಿಸಯ್ಯ 1 ಶರಧಿ ಹಾರಿದೆ | ಕೌರವ ಕಲಿಯಾ ನೀ ಗದೆಯಿಂ ಛೇದಿಸಿದೆ ಧಾರುಣಿಯೊಳು ಯತಿಪುಂಗವನೆಂದೆನಿಸಿದೆ ನಿರುತದಿ ರಾಮರ ಕಾರ್ಯವ ಸಾಧಿಸಿ ವಿರಥರ ಮಾಡಿದೆ ಅತಿರಥರುಗಳ ಹರಿಸರ್ವೋತ್ತಮ ತರತÀಮ ಸತ್ತತ್ವಗ ಳರುಹಿದ ಸದ್ವರ್ತನು ನೀನೆ 2 ರಾಮಪದಕುಮುದಸೋಮ ಭೀಮಾ ರಿಪುಕುಲ ಧೂಮ ನಿಸ್ಸೀಮ ಶ್ರೀಮದಾನಂದಮುನಿ ಸಾರ್ವಭೌಮ ಭೂಮಿಜೆ ಕುರುಹ ಶ್ರೀರಾಮರಿಗರ್ಪಿಸಿ ಅ ಮಹ ಬಕ ಕೀಚಕರ ಸಂಹರಿಸಿ ತಾಮಸ ಗ್ರಂಥವನಳಿಸಿ ಜನಕೆ ಸದ್ಬೋಧೆ ಇತ್ತ ಗುರು ಪೂರ್ಣಬೋಧನೆ 3 ದ್ರೋಣಾಚಲವ ತಂದ ಪ್ರಾಣ ಎಣೆಯುಂಟೆ ಬಲದೊಳು ನೀನೆ ನಿಸ್ಸೀಮ ಕಾಣೆನೊ ಜಗದಿ ಪರಮಹಂಸರ ಪ್ರಾಣ ಪ್ರಾಣಿಗಳೊಳಗೆ ಮುಖ್ಯಪ್ರಾಣನೆಂದೆನಿಸಿದೆ ಕ್ಷೋಣಿಯೊಳು ಕುರುಸೇನೆ ಸಂಹರಿಸಿ ಕ್ಷೀಣವಾಗುತಲಿಹ ಸುಜನರ ಮನಸ ತ್ರಾಣ ಮಾಡಿ ಸತ್ಪ್ರಮಾಣಗಳಿತ್ತೆ4 ಋಜುಪುಂಗವ ದೇವಾ ಹನುಮಾ ಗಜಪುರಾಗ್ರಣಿ ಕೌರವನಿಗೆ ನೀ ಕಾಲಯಮ ಕುಲಿಶ ನಿಸ್ಸೀಮ ಅಜಪದ ಪಡೆದಿ ಶ್ರೀ ಆಂಜನೇಯನೆ ವಿಜಯಸಾರಥಿನೊಲಿಸಿ ಪೂಜಿಸಿ ಸೃಜಿಸಿ ಮರೆದೆ ಸಚ್ಛಾಸ್ತ್ರದಿಂದ ಈ ಚತುರ್ದಶಭುವನಾಚಾರ್ಯನೆನಿಸಿದೆ 5 ಖೂಳ ಅಕ್ಷಕುವರನ ಹರಿಸೆ ಖಳರ ಕಾಳೋರಗ ಬಾಧೆ ಲೆಕ್ಕಿಸದೆ ಖಳ ಭೂದೈತ್ಯರ ಬಾಧೆ ಹರಿಸಿದೆ ಬಾಲತನದಲಿ ಭಾನುಮಂಡಲ ಹಾರಿದೆ ಲೋಲತನದಿ ಸತಿಗೆ ಪೂವಿತ್ತೆ ಶೀಲಮೂರುತಿ ಮಾಯ ಜಾಲ ಹರಿಸಿ ಜಗಖ್ಯಾತನಾದೆ ಯತಿದಶಪ್ರಮತಿಯೆ 6 ಮಾರುತಿ ಧೀಮಂತಮೂರುತಿ ಭಾರತದಿ ಭೂಭಾರನಿಳುಹಿದ ಖ್ಯಾತಿ ಸಾರ ಶ್ರೀ ಬಾದರಾಯಣಗೆ ಅತಿಪ್ರೀತಿ ಅರಿಪುರ ವೈಶ್ವಾನರನಿಗರ್ಪಿಸಿ ವಾರಣಪುರದೊಳು ಅತಿರಥನೆನಿಸಿ ದುರ್ವಾದಿಮತ್ತಗಜಸಿಂಹನಾಗಿ ನೀ ನಿವ್ರ್ಯಾಜÀದ ಭಕ್ತಿಯ ಹರಿಗರ್ಪಿಸಿದೆಯೊ 7 ಹನುಮಾ ಭೀಮಾ ಆನಂದ ಮುನಿಪಾ ಆ ವಾನರಾಧಿಪಾ ಗಜಪುರಾಧಿಪ ಯತಿಪಾ ಧ್ಯಾನನಿರತ ರಾಮಪದದಿ ಮಾನಸದಲ್ಲಿ ಯದುಪತಿಯ ಪೂಜಿಸಿ ದೀನಜನರುದ್ಧಾರಮಾಡಿ ಸದ್ಬೋಧೆ ಯನಿತ್ತ ಮಧ್ವಮುನಿಯೆ 8 ರಾಮಾಲಿಂಗನ ಮಾಡಿದಾ ರೋಮ ರೋಮಕೆ ಕೋಟಿಲಿಂಗವ ಸೃಜಿಸಿದಾ ಶ್ರೀಮಧ್ಯಗೇಹಾರ್ಯಸೂನುವೆಂದೆನಿಸಿದಾ ಆ ಮಹಾರ್ಣವ ಲಂಘಿಸಿದಾ ಧೀರಾ ಭೀಮಭಯಂಕರ ದ್ರೌಪದೀಪ್ರಿಯಕರ ಈ ಮಹಿಮೆಯೊಳಾರೆಣೆಯೋ ನಿನಗೆ ನಿ ಸ್ಸೀಮನಹುದೋ ಯತಿಸಾರ್ವಭೌಮನೆ 9 ಸುರಜೇಷ್ಠಾನಸ್ತ್ರ ಮಾನಿಸಿದಾ| ಜರೆಯನ ಸೀಳಿ ನಿರಪರ ಸೆರೆಯ ಬಿಡಿಸಿದಾ ಧರೆಯೊಳ್ ಸುರಶ್ರೇಷ್ಠನೆಂದೆನಿಸಿದಾ ಭರದೊಳು ಭರತೆಗೆ ಕುಶಲವ ತಿಳಿಸಿ ಕರುಳಮತಿಯಿಂ ಸತಿಯ ಸಂತೈಸಿ ದುರುಳ ಭಾಷ್ಯಂಗಳ ತತ್ತ್ವವನಳಿಸಿದಾ ಪರಮದಯಾಂಬುನಿಧಿ ಶ್ರೀಮದಾನಂದ 10 ರಕ್ಷಕ ನೀನೆ ಸಜೀವ ಲಾಕ್ಷ್ಯಾಗಾರದ ಬಾಧೆÉಯಿಂ ರಕ್ಷಿಸಿ ಮೆರೆದಯ್ಯ ಈ ಕ್ಷಿತಿಯೊಳು ದೈತ್ಯ ಶಿಕ್ಷಕನೆನಿಸಿದೆ ತಕ್ಷಣ ಸಿಂಹಿಕೆ ಕುಕ್ಷಿಯ ಸೀಳ್ದೆ ಭಿಕ್ಷೆಯಿಂದ ನಿನ್ನವರನು ಕಾಯ್ದೆ ದಕ್ಷನಹುದೊ ನೀನಚ್ಯುತ ಪ್ರೇಕ್ಷರಿಂ ದೀಕ್ಷೆಯ ವಹಿಸಿ ಸತ್ಸಿಕ್ಷಕನಾದ್ಯೊ 11 ನೀ ರಂಜಿಸಿ ಮೆರೆದೆಯೊ ಗುರು ಮಧ್ವಾರ್ಯ ಧೀರ ಕೇಸರಿಕುವರ ಪುರುಷಾಮೃಗವ ಸಾಧಿಸಿ ತಂದ ಶೂರ ಈ ಧರಾವಲಯದಿ ತೋರಿದೆ ತತ್ವಸಾರ ತೋರಿ ಭಕ್ತಿ ಶ್ರೀರಾಮರ ಪದದಿ ಕಂ ಸಾರಿಯ ಸೇವಿಸಿ ಭಾರವನಿಳುಹಿದೆ ಸಾರಿದೆ ಹರಿಸರ್ವೋತ್ತಮ ತರತಮಭೇದವನರುಹಿದ ಪರಮದಯಾಳೊ12 ಅಂಜನೆ ಕುವರಾ ಧೀರಾ ಕುಂಜರಪುರದ ಅರಿಗಳಂಜಿಸಿದ ಶೂರ ಧರಣಿ ದುರ್ಮದಾಂಧರ ದುರ್ವಾದ ಪಂಕಜೋದ್ಭವನ ಪದವ ಪಡೆವೆ ನೀ ಅಂಜದೆ ಗದೆಯಿಂ ಕೊಂದೆ ಕುರುಪನ ಮಂಜುಳವಾಣಿಯ ಜಗಕೆ ಇತ್ತು ನೀ ರಂಜಿಸಿ ಮರೆದೆಯೊ ಗುರುಮಧ್ವಾರ್ಯ 13 ರೋಚಕ ನಾಮಕನೆನಿಸಿ ಪು ರೋಚನನ ಕಾರ್ಯವನೆಲ್ಲಾ ಕೆಡಿಸಿ ಪಾಜಕ ಕ್ಷೇತ್ರ ಪವಿತ್ರ ಮಾಡಿದೀ ಖೇಚರಮಾರ್ಗದಿ ನೆಗಹಿ ನಿ ಶಾಚರರೆÉಲ್ಲರ ಸದೆದೆ ಗದೆಯಿಂ ಸೂಚಿತ ಗ್ರಂಥ ವಿರಚಿಸಿ ಜಗಕೆ ನೀ ಗೋಚರಿಸಿದೆಯೊ ತ್ರಿಜಗಾಚಾರ್ಯ 14 ರಣದೊಳು ಘುಣಿವಿರೂಪಾನೆತ್ತಿದೆ ಬಾಣಸಿಗನೆನಿಸಿ ಮತ್ಸ್ಯದೇಶವ ಸೇರ್ದೆ ಕ್ಷೋಣಿಯೊಳು ಗುಣವಾರಿಧಿ ಎನಿಸಿದೆ ಗಣನೆ ಇಲ್ಲದೆ ಗಿರಿಯನೆಗಹಿದೆ ಹಣಿದೆ ಹಿಡಿಂಬಾಸುರನ ಸೀಳಿದೆ ಮಣಿಮಂತಾದಿ ದುರಾತ್ಮರಿಗೆ ನೀನಂತಕನೆನಿಸಿದೆ ಶಾಂತಮೂರುತಿಯೆ15 ವಿಜಯರಥಕೆ ನೀ ಕೇತುನಾಥ ವಿಜಯಸಾರಥಿಯಾ ದೂತ ವಿಜಯದಶಮಿಯೊಳ್ ಜನಿತ ಸೋಜಿಗ ತೋರಿ ಸಂಜೀವನ ತಂದೆ ಆ ಜಗಜಟ್ಟಿಗಳೆಲ್ಲರ ಸದೆದೆ ಈ ಜಗದೊಳು ಸರಿಗಾಣೆ ಜಗದೊ ಳು ಜಗದ್ಗುರುವಹುದೋ ನೀ ಗುರುಪೀಳಿಗೆಗೆ16 ಮಂಗಳಮೂರುತಿ ಮಾರುತಿ ಸೌಗಂಧಿಕ ನೆವದಿ ಮರುತನೊಳ್ ನೀ ಸೆಣೆಸಿದಿ ಶೃಂಗಾರ ಗೋಪಿನಂದನನ ಸ್ಥಾಪಿಸಿದೆ ಭಂಗಿಸಿ ವನವನು ಉಂಗುರವನು ತಂದೆ ಸಂಗರ ಹನುಮನೊಳ್ ನೀಡಿ ಮೋಹ ತೋರ್ದೆ ಅಂಗಜಪಿತನ ಇಂಗಿತವರಿತು ಭಂಗಿಸಿದೆಯೊ ದುಶ್ಯಾಸ್ತ್ರಂಗಳನು 17 ಕೇಸರಿ ಕ್ಷೇತ್ರ ಜನಿತಾಭೂಸು ರ ಸುತನ ಭೀತಿಯ ನೀ ಬಿಡಿಸಿದೆ ವಸುಮತಿಯೊಳು ಸುರಶ್ರೇಷ್ಠನೆಂದೆನಿಸಿದೆ ಕೋಸಲನಗರಾಧೀಶನ ಪ್ರೀಯ ವಾಸುದೇವಗರ್ಪಿಸಿದೆ ಅಧ್ವರ್ಯ ಶ್ರೀಶನಾಜ್ಞೆಯ ತಾ ಶಿರದಿ ಧರಿಸಿ ಪ್ರ ಕಾಶ ಮಾಡ್ದೆ ಸರ್ವಮೂಲಗ್ರಂಥವ 18 ಶ್ವಾಸನಿಯಾಮಕನೆನಿಸಿದೆ ಪ್ರ ಯಾಸವಿಲ್ಲದೆ ವನವಾಸಂಚರಿಸಿದೆ ಶ್ರೀ ವ್ಯಾಸರಿಗೆ ಅತಿಮೋದವ ಪಡಿಸಿದೆ ಶ್ರೀಶನಾಜ್ಞೆಯಲ್ಲಿ ಕೀಶನಾಗಿ ನಿಂದು ನಿಶಾಚರರೆÉಲ್ಲರ ಸದೆದೆ ಗದೆಯಿಂದ ಶ್ರೀಶನೆ ಸರ್ವೋತ್ತಮನೆಂಬ ಸತ್ಸಿದ್ಧಾಂತವ ತೋರಿದ ಸದ್ಗುಣಪೂರ್ಣ 19 ಸರ್ವಜೀವರ ತ್ರಾಣ ಪ್ರಾಣ ಗರ್ವಿಸಿದವರೊಳು ನೀ ಗರ್ವ ಹರಣ ಸರ್ವಜ್ಞಾಚಾರ್ಯ ಗುರುವರೇಣ್ಯ ಪೂರ್ವದೇವರ ಗರ್ವವನಿಳುಹಿ ಸರ್ವ ಕೌರವರ ಪಡೆಯನು ಸವರಿದೆ ಉರ್ವಿಯೊಳು ಜನಿಸಿದ ದುರ್ಮದಾಂಧರ ಗರ್ವಹರಣಮಾಡಿ ಕರುಣವ ತೋರಿದೆ 20 ಶ್ರೀರಾಮನೇಕಾಂತ ಭಕ್ತ ಶೌರಿಯ ಆಜ್ಞೆಯಿಂ ಸರ್ವಕಾರ್ಯಸಕ್ತ ಧಾರುಣಿಯೊಳು ಸಚ್ಛಾಸ್ತ್ರಕರ್ತ ಹಾರಿದೆ ಶರಧಿಯ ಅಣುಮಹದ್ರೂಪದಿ ತೋರಿದೆ ಶಕ್ತಿಯ ಗಿರಿ ತರುತೃಣವತ್ ಸಾರಿದೆ ಧರಣಿಯ ಸುರಜನುಮದಿ ನೀ ಬೀರಿದೆ ಸುಜನಕೆ ತತ್ವಾಮೃತವ 21 ಕಾಶಿ ಕಂಚುಕವ ಧರಿಸಿದೆ ಕಾಶ್ಯಪಿಯೊಳು ಕಾವಿಶಾಟಿಯ ಧರಿಸಿದೆ ಕೀಶತನದಿ ಹರಿಕಾರ್ಯವ ಸಾಧಿಸಿ ಜಗ ದೀಶಕುಲದೊಳು ಜನಿಸಿ ಮೆರೆದೆ ವೇದ ವ್ಯಾಸ ಪದಕಮಲ ಮಧುಪ ಜಗಖ್ಯಾತನಾ ದ ಶ್ರೀ ಮಧ್ವಸೂರ್ಯನೆ 22 ಸುಗ್ರೀವಗಭಯ ಕೊಡಿಸಿದಾ ಮ ಹೋಗ್ರರಾದ ದ್ವೇಷಿಗಳ ಸವರಿದಾ ಸ ಮಗ್ರ ಸಿದ್ಧಾಂತ ರಚಿಸಿದಾ ವಿಗ್ರಹದೊಳು ಧಾತಾಸ್ತ್ರವ ಮಾನಿಸಿ ಅಗ್ರಹರಿಪುಕುಲ ಕಾಲನೆಂದೆನಿಸಿ ಉಗ್ರವಾದಿಗಳ ದುರಾಗ್ರಹ ವಿಗ್ರಹ ಶೀಘ್ರದಿ ಮಾಡಿ ಅನುಗ್ರಹವಿತ್ತೇ23 ಸೋಮಕುಲದೊಳು ನೀನೆ ಅತಿ ಬಲವಂತ ಈ ಮಹಿಯೊಳು ರೌಪ್ಯಪೀಠದಿ ಜನಿತ ರಾಮಾಂಗನೆಯ ಪ್ರೇಮದ ದೂತ ಸೋಮಶೇಖರನ ಕೇದಾರಕಟ್ಟಿದ ಸ್ವಾಮಿಗೆ ಪ್ರಕೃತಿಯ ಮಾಯವ ಪೇಳ್ವ ಕೇಸರಿ ಎನಿಸಿದೆ 24 ಮಾರ್ಜಾಲರೂಪವ ಧರಿಸಿದೆ ನೀ ನರ್ಜುನಾಗ್ರಜಾದಿಗಳ ಪೊರೆದೇ ನೀ ಸರ್ಜಿಸಿ ತೋರ್ದೆ ಸತ್ಸತ್ವಗಳೆಲ್ಲ ಘರ್ಜಿಸಿ ಅರ್ಜುನನ ರಥದಲಿ ನೆಲೆಸಿದೆ ಮೂರ್ಜಗಜಟ್ಟಿಗಳೆಲ್ಲರ ಸದೆದೆ ವರ್ಜಿಸಿ ಅರಿಷಡ್ವರ್ಗಗಳೆಲ್ಲವ ದುರ್ಜಯವಾದಕೆ ಘರ್ಜನೆ ಮಾಡಿದೆ 25 ವಾಯುಕುವರ ಅಸುವರ ಕಾಯಜನಯ್ಯನ ಅತಿಪ್ರೀಯಾ ಶೂರಾ ಜೀಯಾ ನೀನಿತ್ತೆ ಸದ್ಗ್ರಂಥವಿಸ್ತಾರಾ ಕಾಯಕಭಕುತಿ ಶ್ರೀರಾಮರಿಗರ್ಪಿಸಿ ಮಾನಸದಲಿ ಯದುಪತಿಯ ಪೂಜಿಸಿ ಮಾಯಮತವ ನಿರಾಕರಿಸಿ ವಾಚದಿ ಶ್ರೀಯರಸನ ಮೆಚ್ಚಿಸಿದೆ ಯತೀಂದ್ರ 26 ವಾತಜಾತ ಹನುಮಂತ ಖ್ಯಾತ ದ್ವಾಪರದಿ ದ್ರೌಪದೀಕಾಂತ ಭೂತಳದೊಳು ಯತಿನಾಥ ಅತಿಶಾಂತ ಧತಾಜನಕ ಶ್ರೀ ವೇಂಕಟೇಶನ ಪ್ರೀತಿಪಾತ್ರ ಶ್ರೀಕೃಷ್ಣನಂಘ್ರಿಗೆ ಖ್ಯಾತನಾದೆ ಸೂತ್ರಾರ್ಥಪೇಳಿ ಕೃಪಾಪಾತ್ರನಾದೆ ಶ್ರೀ ಬಾದರಾಯಣಗೆ27
--------------
ಉರಗಾದ್ರಿವಾಸವಿಠಲದಾಸರು
ಪೋತನ ಪಾಲಿಸೋಪವಮಾನಾ | ಈ ಭೂತಳದೊಳು ನಿನ್ನ ಖ್ಯಾತಿ ಘುನಾ ಪದರಿಗೆ ಬಿದ್ದವನೆಂದು ಗ್ರಹಿಸೋ 1 ತಾಯಿಯು ಇಲ್ಲದ ಬಾಲಕನು | ಇವನ ಕಾಯಲು ನೀ ದಯಾ ಸಾಗರನು 2 ಶ್ವಾಸದೊಡಿಯ ನೀನೆಂತೆಂದು | ಶೃತಿ ಘೋಷಿಸುವದು ಆನತ ಬಂಧು3 ಶಿಶುವಿಗೊಲಿದು ನೀ ಸಲಹಿದರೆ | ದೇವ ಖರೆ 4 ಗ್ರಾಮ ಬಲ್ಲಿಟಗಿ ಕೃತವಾಸ | ಶಿರಿಶಾಮಸುಂದರನ ಪ್ರಿಯದಾಸ 5
--------------
ಶಾಮಸುಂದರ ವಿಠಲ
ಬೊಮ್ಮಗಟ್ಟಿರಾಯ ಪಾಲಿಸೋ ನಮ್ಮ ನೀ ಮಾರಾಯ ಧರ್ಮ ಕಾಮ್ಯಾರ್ಥ ಕೊಡುವೊ ಕರುಣಾಂಬುಧಿ ಪ ನಿಗ್ರ(ಹ) ಮಾಡುತ ಪರಮಾಗ್ರ(ಹ) ದಲಿ ಸೀಗ್ರ (ಶೀಘ್ರ?) ದಿಂದಲಿ ದಶಗ್ರೀವನ ಲಂಕ- ದುರ್ಗದಲ್ಲಾಡಿದ್ಯಗ್ನಿಯ ಒಡಗೂಡಿ 1 ರಾಮಪಾದಾಂಬುಜ ಸೇವಕ ಸೇತುವೆ ಪ್ರೇಮದಿ ಕಟ್ಟಿ ನಿಂತನು ರಣದಿ ನೇಮದಿಂದಲಿ ಸಂಜೀವನ ತಂದಾತ ವಾಹನನಾದ ತ್ರಿಧಾಮದೊಡೆಯಗೆ 2 ವಾತಾತ್ಮಜ ರಘುನಾಥಗೆ ನೀ ನಿಜ- ದೂತನೆನಿಸಿ ಬಹು ಪ್ರೀತಿಯಲಿ ಭೂತಳದೊಳು ಪ್ರಖ್ಯಾತಿಯ ಪಡೆದೆ ನಿ- ರ್ಭೀತನಾದ ಭೀಮೇಶಕೃಷ್ಣನ ಪ್ರಿಯ 3
--------------
ಹರಪನಹಳ್ಳಿಭೀಮವ್ವ
ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ ಪ ಜಗದಂತರಂಗ ಹೋ ಹೋಅಪ ಶೀಕರೆ ಪುಟ್ಟಿದೆ ಮೇದಿನಿಪಾಲಗೆ ಮೆಚ್ಚಿ-ಬಂದನೊ ಹೆಚ್ಚಿ ಲೀಲಾ ವಿನೋದ ಸುತ್ತಿ ಪರಿಗೊಲಿದ ಭೂತಳದೊಳು ಜಾನಕಿಗೆ ನಾಥನಾಗಿ ಮೆರೆದ- ಕಾಮಿತಗರೆದ ಹೋ ಹೋ 1 ಜಲಜಸಂಭವಭವ ಮಿಕ್ಕಾದವರನು ಗರ್ಭ-ದೊಳಿಟ್ಟ ಸರ್ಬ ಅಂದು ಪಡೆದ-ಮಗನಿಗೆ ನುಡಿದ ಪ್ರಳಯಕಾಲದಿ ವಟ ಪತ್ರದ ಮೇಲ್ ಮಲ-ಗಿದ್ದ ಸುಪ್ರಸಿದ್ಧ ಬಂದ ಪರಮಾ-ನಂದ ಹೋ ಹೋ 2 ಬರುತ ವಿಭೀಷಣ ಕಾವೇರಿ ತೀರಕೆ ಬಂದ, ಉತ್ಸಾಹದಿಂದ ಪರಮ ಪುರುಷ ಲಂಕೆಗೆ ಪೋಗದೆ ನಿಂತ-ಬಲು ಜಯವಂತ ಧರಣಿಪತಿ ಧರ್ಮವರ್ಮನ ಮಾತಿಗೆ ನಕ್ಕ-ಕೇಳಾವಾಕ್ಯ ಪೂಜೆಗೊಂಬ ಸರ್ವರ-ಬಿಂಬ ಹೋ ಹೋ 3 ಕಂಟಕ ದಶಕಂಠನ ವಂಶವ ಕೊಂದ -ಈತ ಮುಕುಂದ ಮಾಡಿಸಿಕೊಂಡ -ಬಲು ಪ್ರಚಂಡ ಜಯವೆನುತಿರಲಯೋಧ್ಯಾ-ಆಳ್ದ ಅನಾದ್ಯ ಕರುಣಾ-ಸಿಂಧು ಹೋ ಹೋ 4 ಮೂಜಗದ್ದಪ್ಪ ನಕ್ಷತ್ರೇಶ ಸರೋವರತಟ ಪುನ್ನಾಗ-ವೃಕ್ಷದಲ್ಲಿಹ ದಕ್ಷ ಅಪ್ರಾಕೃತ ಶರೀರ-ಧೃತ ಮಂದಾರ ವಾಹನ ರಾಜಾಧಿರಾಜ ಹೋ ಹೋ 5
--------------
ವಿಜಯದಾಸ
ಶ್ರೀ ಕಮಲನೇತುರ | ಪುಣ್ಯಗಾತುರ | ಸಾಕಾರ ಕ್ಷಣ ಮಾತುರ | ನೀ ಕರುಣದಿಂದ | ವಾಕು ಲಾಲಿಸು | ಬೇಕು ವೇಗದಲಿ | ಗೋಕುಲಾಂಬುಧಿ ರಾಕಾಂಬುಜ ಲಾ | ವಕರ ತೊಲಗಿಸಿ | ಸಾಕುವುದೆನ್ನ ನಿ | ಜಕರ ವಿಡಿದೂ ಪ ನಿತ್ಯ ಅಜಾತಾ | ಕುಂಭ ಮಕುಟನೀತಾ | ಮಾವ ಮರ್ದನ ನಿರ್ಭೀತಾ || ದೇವಮರರ ಕಾ | ವ ಭಕ್ತರ | ಜೀವನೆ ವರ | ವೀವನನುದಿನ | ಆವು ಕಾವುತ ಪೋಗಿ | ದಾ ವಿಷ ಬಿಡಿಸದೆ || ಶ್ರೀ ವಲ್ಲಭ ನಿನಗಾವವನೆಣೆ ತ್ರಿ | ಭುವನದೊಳಗತಿ | ಸೇವಕ ಜನರಿಗೆ ಕೈವಲ್ಯವನು ಕೊಡುವಾ 1 ಪೂತನಿ ಪ್ರಾಣಾಪಹಾರಾ | ಪರಮ ಸುಂದರಾ | ಪರಿಹಾರಾ | ಮರಣಜರ ವಿದೂರಾ | ಭೂತಿ ಉಳ್ಳಿಂದ್ರ ಕುಮಾರಾ | ಸೂತ ನೀನಾಗಿ ಭೂತಳದೊಳು | ವ್ರಾತ ಯಮುನೆಯ | ಭ್ರಾತನ್ನ ನಗರಿಯ | ಯಾತನಿಗಟ್ಟಿದೆ | ಪೂತುರೆ ನಿನ್ನ ಮಾ | ಯಾತನಕೇನೆಂಬೆ | ಖ್ಯಾತಿ ಮೂರುತಿ ಬೆನ್ನಾತು ಕಾಯೊ ಪಾರಿ | ಜಾತವ ತಂದ | ಮಿತ ಮಹಿಮ ಜಗ | ತಾತಾ ಬೊಮ್ಮಾದಿ ವಿನುತಾ 2 ತೋಷ ಗೋಪಾಲ ಮಾನಿಸಾ ವೇಷ | ಆ ಪಾರ ರತುನ ಭೂಷಾ | ನಂತಪ್ರಕಾಳಾ | ತಾಪಸಿಗಳ ವಿಲಾಸಾ || ಕೋಪ ಮೊದಲಾದ ತಾಪತ್ರಯಗಳ | ನೀ ಪೋಗಾಡು ಉ | ಡುಪಿ ಸದನನೆ ಪಾಪರಹಿತ ಮಧ್ವಪತಿ ಕರದಿಂ | ದ ಪೂಜೆಗೊಂಡ ಪ್ರತಾಪನೆ ಜ್ಞಾನದ | ದೀಪ ಬೆಳಗಲಿ | ರೂಪವ ತೋರಿಸು ಯದುಪಾ ಎನ್ನ ಸಮೀಪಾ 3
--------------
ವಿಜಯದಾಸ
ಶ್ರೀ ರಾಘವೇಂದ್ರರು ಇಂಥಾ ಗುರುಗಳ ಕಾಣಿನಾ | ಭೂತಳದೊಳು ಇಂಥಾ ಯತಿಗಳ ಕಾಣಿನಾ ಪ ಕಾಣಿ \ ಮಂತ್ರ ಮಂದಿರದಲ್ಲಿ ನಿಂತು ಭಜಕರಿಗೆ | ಚಿಂತೆ ಕಳೆವ ಕರುಣಿ ಅ.ಪ ದೇವಸ್ವಭಾವನೀತನು | ಸತತ ಪವನ ದೇವನಾವೇಶಯುಕ್ತನು || ಆವ ಸಂಶಯವ್ಯಾಕೆ | ದೇವಾಧಿದೇವ ನರಮೃಗ ದೇವನೀತನ ಭಕ್ತಿಗೆ | ಧಾವಿಸಿ ಬಂದ ಸ್ತಂಭದಿ ಭಾವ ಭಕ್ತಿಯಲಿ | ಸೇವಿಪರಿಗೆ ಭವ ನೋವು ಕಳೆದು ಸುರ | ಗೋವಿನ ತೆರ ವರ ವೀವನು ಕರುಣದಿ | ಕಾಮನು ಪರಮ ಪಾವನ ಚರಿತನು | ಕೋವಿದರೊಡೆಯನು 1 ವರಹಜ ತಟದಲ್ಲಿರುವ ಭಕ್ತರು ಕೂಗಿ ಕರೆದಲ್ಲಿಗೋಡಿ ಬರುವ | ಮರುತ ಶಾಸ್ತ್ರದ ಮರ್ಮ ಭರಿತವಾದಂಥ ದಿವ್ಯ ಪರಿಮಳ ಗ್ರಂಥವ ವಿರಚಿಸಿ ಬುಧರಿಗೆ ಗರೆದನು ಕರುಣದಿ ಪೊರೆದನು ಪರಮತ ಮುರಿದನು ಜಗದೋಳ್ ಮೆರೆದನು ಹೊಸ ಹೊಸ ಪರಿ ಸುಮಹೋತ್ಸವ ಹರುಷದಿ ಪ್ರತಿದಿನ ಗುರು ಸುಯಮೀಂದ್ರರ | ಕರದಿಂಗೊಂಬರು 2 ಮಂದಹಾಸನ ಶ್ರೀ ಶಾಮಸುಂದರ ರಂಘ್ರಿ ಸೇವಕ | ಕೇಸರಿ ಎನಿಸಿ ಗಂಧವಾಹನ ಮತ | ಸಿಂಧುವಿಗೆ ಶಶಿ ಯಂದದಿ ರಾಜಿಸಿ ವೃಂದಾವನವನು ಒಂದೆ ಮನದಲಿ ವಂದಿಸಿ ನಮಿಸುವ ವಂದ್ಯಾಂಧಕರಿಗೆ | ಕಂದರಕ್ಷಿಗಳ ಕುಂದದಿ ಕೊಡುವ | ಕರ್ಮಂದಿ ಕುಲಾಗ್ರಣಿ 3
--------------
ಶಾಮಸುಂದರ ವಿಠಲ
ಸಜ್ಜನರ ಸಂಗ ಸ್ವಹಿತಕೆ ಸುಖಸನ್ಮತ ಅಮೃತ ಧ್ರುವ ಗಂಗಿಯೊಳು ಮುಳಗಿ ತಾ ಮಿಂದರ್ಹೋಗದು ಪಾಪ ಹಾಂಗೆಂದಿಗಲ್ಲ ಸಜ್ಜನರ ಪ್ರತಾಪ ಕಂಗಳಲಿ ಕಂಡರ್ಹೋಗುವುದು ತಾಪಾಪ ಸಂಗ ಸುಖದಲಿ ಸರ್ವಪುಣ್ಯ ಮೋಪ 1 ಚಂದ್ರ ಶೀತಳದೊಳು ನಿಂದರ್ಹೋಗುದು ತಾಪ ಎಂದೆಂದಿಗ್ಹಾಂಗಲ್ಲ ಸಜ್ಜನ ಸಮೀಪ ಒಂದೆ ಮನದಲಿ ನೆನೆದರ್ಹಿಂಗಿ ಹೋಗುದು ತಾಪ ವಂದಿಸೀದವಾ ಮೂರು ಲೋಕ ತಾಪಾ 2 ಕಲ್ಪತರುವಿಗೆ ಕಲ್ಪಿಸಿದರ್ಹೋಗುದು ದೈನ್ಯ ಒಲಮಿಂದ್ಹಾಗಲ್ಲ ಸದ್ಗುರು ಸುಪುಣ್ಯ ಕಲ್ಪಿಸದೆ ಕುಡುವದಿದು ನೋಡಿ ಘನ ತಾರ್ಕಣ್ಯ ಸಲಹುತೀಹ್ಯ ಮಹಿಪತಿಗಿದೆವೆ ಧನ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಖ್ಯಾತಿಯಿಂದಪುರುಹೂತಸಹಿತ ಸುರ |ವ್ರಾತವು ನಿನ್ನನು ಒತ್ತಿ ಓಲೈಸಲು ||ಭೂತಳದೊಳು ಸಂಪ್ರೀತಿಗೆ ಸಿಲುಕಿ ನೀ |ಪಾರ್ಥನ ರಥಕೆ ಸೂತನಾದ ಮೇಲೆ 2ಪರಮಪುರುಷ ಪರಬೊಮ್ಮ ನೀನೆನುತಲಿ |ನಿರುತದಿ ಶ್ರೂತಿಯು ಕೊಂಡಾಡುತಿರೆ ||ವರಪಾಂಡವರರ ಮನೆಯೊಳುಊಳಿಗ|ಕರೆಕರೆದಲ್ಲಿಗೆ ಪೋದಪೋದ ಮೇಲೆ 3ಧುರದಲಿ ಪಣೆಯನೊಡೆದ ಭೀಷ್ಮನ ಸಂ- |ಹರಿಪೆನೆನುತ ಚಕ್ರವ ಪಿಡಿಯೆ ||ಹರಿನಿನ್ನ ಕರುಣದ ಜೋಡು ತೊಟ್ಟಿರಲವ- |ನಿರವ ಕಾಣುತ ಸುಮ್ಮನೆ ತಿರುಗಿದ ಮೇಲೆ 4ತರಳನು ಕರೆಯಲು ಭರದಿ ಕಂಬದಿ ಬಂದು |ನರಮೃಗರೂಪ ಭಕ್ತರ ತೆತ್ತಿಗನೆ ||ವರದ ಪುರಂದರವಿಠಲರಾಯ ನಿನ |ಸ್ಮರಿಪರ ಮನದಲಿ ಸೆರೆಯು ಸಿಕ್ಕಿದ ಮೇಲೆ 5
--------------
ಪುರಂದರದಾಸರು
ಶರಣು ಶರಣೂ ಪ.ಮಹಾದೇವರಾ ಗರ್ಭದಲಿ ಉದ್ಭವಿಸಿದಿಯೊ ನೀನುಸಾಧುಮಾತೆಯ ಶಾಪವನ್ನು ಕೈಗೊಂಡುಆದಿಪೂಜೆಗೆ ಅಭಿಮಾನಿದೇವತೆಯಾದಿಮಾಧವನಮ್ಮ ಹಯವದನನ್ನ ಪ್ರಿಯ1ಹಿಮಗಿರಿಗೆ ಮಗಳಾಗಿ ಜನಿಸಿ ತಪವನು ಗೈದುಕಮಲಸಂಭವಸುತನ ಒಲಿಸಬೇಕೆಂದುರಮಣಿ ರಾಮಮಂತ್ರ್ರ ದಿನಸಹಸ್ರವು ಜಪಿಸೆಕಮಲಾಕ್ಷನೆಮ್ಮ ಹಯವದನನ್ನ ಪ್ರಿಯೆ 2ಮಡದಿ ಹೋದಾಗ್ರಹಕೆ ಜಡೆಯ ಕಿತ್ತಪ್ಪಳಿಸಿಕಡುಘೋರ ತಪಗೈಯೆ ಮನ್ಮಥನು ಬರಲುಕಿಡಿಗಣ್ಣಿನಲಿ ಅವನ ಭಸ್ಮವನು ಮಾಡಿದಿಕಡಲೊಡೆಯ ನಮ್ಮ ಹಯವದನನ್ನ ಪ್ರಿಯ 3ಮತ್ಸ್ಯದೇಶಕೆ ಪೋಗಿ ಮನದ ಚಿಂತೆಯಲಿರಲುತುಚ್ಛರಕ್ಕಸನು ನಿಮ್ಮನು ಪಿಡಿಯ ಬರಲುಚಿತ್ತದೊಲ್ಲಭಗ್ಹೇಳಿ ಕೊಚ್ಚಿಸಿದಿ ಅವನ ಶಿರಅಚ್ಯುತನಮ್ಮ ಹಯವದನನ್ನ ಪ್ರಿಯೆ4ಕೇಸರಿಯ ಗರ್ಭದಲಿ ಉದ್ಭವಿಸಿದಿಯೊ ನೀನುತ್ರೇತೆಯಲಿ ರಾಮರ ಸೇವೆಯನು ಮಾಡಿಭೂತಳದೊಳು ಭೀಮ ಕಡೆಗೆ ಯತಿಯಾಗಿ ನೀಶ್ರೀಪತಿ ಹಯವದನ ದೂತ ಪ್ರಖ್ಯಾತ 5ಈರೇಳು ಲೋಕದ ಜನರ ನಾಲಗೆಯಲ್ಲಿಬೀಜವನು ಬಿತ್ತಿ ಅನ್ನವ ಕೊಡುವ ತಾಯೆವಾರಿಜಸಂಭವನ ಹಿರಿಯ ಪಟ್ಟದ ರಾಣಿನೀರಜಾಕ್ಷನಮ್ಮ ಹಯವದನನ್ನ ಪ್ರಿಯೆ6ಜನನಿಹುಟ್ಟಿದ ನಾಳದಲ್ಲಿ ಜನಿಸಿದಿ ನೀನುಜನರ ಸೃಷ್ಟಿ ಸ್ಥಿತಿಗೆ ಕಾರಣನೆಂದುಅನಿಮಿಷರೆಲ್ಲರೂ ಸ್ತುತಿಸಿ ಕೊಂಡಾಡಲುವನಜಾಕ್ಷ ನಮ್ಮ ಹಯವದನನ್ನ ಪ್ರಿಯ 7ಪದ್ಮದಲ್ಲುದ್ಭವಿಸಿ ರಾಮರ ಕೈಹಿಡಿದುಪದ್ಮಾಕ್ಷನ ರಥಕ್ಕೆ ಕೈ ನೀಡಿ ಬಂದೆಪದ್ಮಾವತಿ ಎಂದು ಖ್ಯಾತಿ ಮೂರ್ಲೋಕದೊಳುಪದ್ಮಾಕ್ಷ ನಮ್ಮ ಹಯವದನನ್ನ ಪ್ರಿಯೆ 8ಅನಂತ ನಾಟಕಾನಂತ ಸೂತ್ರಧಾರಿಅನಂತ ಚರಿತ ನಿತ್ಯಾನಂದಭರಿತಅನಂತಾಸನ ಶ್ವೇತದ್ವೀಪ ವೈಕುಂಠಅನಂತಗುಣಭರಿತ ಹಯವದನ ಚರಿತ 9ಶರಣುಮತ್ಸ್ಯಕೂರ್ಮವರಾಹನಾರಸಿಂಹಶರಣು ವಾಮನಭಾರ್ಗವರಾಮಚಂದ್ರಶರಣು ಕೃಷ್ಣ ಬೌದ್ಧ ಕಲ್ಕ್ಯಸ್ವರೂಪನೆಶರಣು ಹಯವದನನ್ನ ಚರಣಗಳ ನುತಿಪೆ 10
--------------
ವಾದಿರಾಜ
ಶ್ರೀ ಮಧ್ವರಾಯರ ಸೇವೆ ದೊರಕುವುದುಜನುಮ ಸಫಲ ಕಾಣಿರೋ ಪಶ್ರೀಮದಾನಂದ ತೀರ್ಥರ ಪಾದವ ನೆನೆವರುಸಾಮಾನ್ಯಸುರರುಕಾಣಿ-ಬೊಮ್ಮನಆಣಿಅ.ಪಜಗತು ಸತ್ಯವು ಅಲ್ಲ ಜಡ-ಜೀವ ಭೇದವಲ್ಲಅಗುಣನು ಪರಬೊಮ್ಮನು-||ಹೀಗೆ ನುಡಿವ ಜನರ ನಿಗಮಶಾಸ್ತ್ರದಿ ಗೆದ್ದುಜಗ ಸತ್ಯ ಸಗುಣ ಬ್ರಹ್ಮ ಎಂದು ಪೇಳುವ 1ಹರಿಸರ್ವೋತ್ತಮನಿತ್ಯತರುವಾಯ ರಮಾದೇವಿತರುವಾಯ ವಿಧಿಪ್ರಾಣರುಸರಸ್ವತಿಭಾರತಿಗರುಡ ಅನಂತ ರುದ್ರತರುವಾಯ ಆರು ದೇವಿಗಳು 2ಸೌಪರ್ಣಿವಾರುಣಿದೇವಿ ಅಪರ್ಣಾದೇವಿಯರು ಸಮರುದ್ವಿಪದಿ ಮನ್ವಾದಿಗಳು ||ಈಪರಿತಾರತಮ್ಯ ಜಪ-ಧ್ಯಾನಾರ್ಚನೆಯಿಂದಅಪವರ್ಗದನ ಸೇವೆಯ ಮಾಡಿರೊ ಎಂಬ 3ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿಚೆಂದದಿಂದಲಿ ಲಾಲಿಸಿ ||ಇಂದಿರಾರಮಣ ಗೋವಿಂದನೇ ದೈವವೆಂದು |ಸಂದೇಹವಿಲ್ಲದೆ ಸಾಧಿಸಿ-ಮಾಯೀ ಸೋಲಿಸಿ 4ಹಿಮಗಿರಿಯಿಂದ ಸೇತುವೆಯ ಪರ್ಯಂತರಭ್ರಮಿಸುತ ಸುಜನರಿಗೆ ||ಕ್ರಮತತ್ತ್ವ ಬೋಧಿಸಿ ಕಮಲನಾಭನಮೂರ್ತಿಕ್ರಮವರಿತು ಸ್ಥಾಪಿಸಿ ಪೂಜಿಸಿರೆಂದ 5ಭೂತಳದೊಳು ರೌಪ್ಯಪುರದಿ ನೆಲಸಿ ಗೆದ್ದುಧಾತ್ರೀ ಮುದ್ರೆಯ ತೋರಿಸಿ ||ಈತನೇ ಹನುಮಂತ ಈತನೇ ಭೀಮಸೇನಈತನೇ ಭವಿಷ್ಯದ ಬ್ರಹ್ಮಜೀವೋತ್ತಮ6ಶ್ರೀಮದನಂತನೆ ಅನಂತಕಾಲಕೆಯೆಂದುಯಮಕ ಭಾರತ ತೋರಿಸಿಸ್ವಾಮಿ ಸರ್ವಾಂತರ್ಯಾಮಿ | ಸರ್ವಗುಣಪೂರ್ಣನೆಂದುಪ್ರೇಮಿಪುರಂದರವಿಠಲನ ದಾಸನಾದ7
--------------
ಪುರಂದರದಾಸರು