ಶ್ರೀ ರಮಣ ಸರ್ವೇಶ ತ್ವಚ್ಚರ-
ಣಾರವಿಂದವ ನಂಬಿರುವನಲಿ
ಘೋರ ಭಾವವ ತಾಳ್ದ ಹೂಣನ ದೂರ ಓಡಿಸುವ
ಭಾರ ನಿನ್ನದು ಪರಮ ಕರುಣಾ
ವಾರುಧಿಯೆ ನೀನಲ್ಲದೆನಗೆ-
ಸಾರಥಿ 1
ಸುಗುಣ ಸಜ್ಜನ ಶಿರೋಮಣಿ
ಮಗುವು ಪ್ರಹ್ಲಾದನ ಪದಾಂಬುಜ
ಯುಗವ ನೆನೆವುದನರಿತು ತತ್ಪಿತನೆಂದು ರೋಷದಲಿ
ನೆಗೆದು ಬಂಡೆಯ ಝಳಪಿಸುತ ಬರೆ
ಧಗಧಗಿಸಿ ಕಂಬದಲಿ ತೋರುತ
ಬಗೆದಿ ದೈತ್ಯನ ಕರುಳ ಜಯ ಜಯ ವಿಜಯಸಾರಥಿ 2
ದೋಷಿ ದೈತ್ಯಾವೇಷದಿಂದಲಿ
ವಾಸವಾದಿ ಸಮಸ್ತ ದಿವಿಜರ
ಘಾಸಿಗೊಳಿಸಿದ ದಶಶಿರನ ತದ್ವಂಶಜರ ಸಹಿತ
ನಾಶಗೈದು ನಿರಾಪರಾಧಿ ವಿ-
ಭೀಷಣಗೆ ಸಾಮ್ರಾಜ್ಯವಿತ್ತ ಪ-
ರೇಶ ಸೀತಾಕಾಂತ ಜಯ ಜಯ ವಿಜಯಸಾರಥಿ 3
ಪೂತನಾ ಬಕ ಶಕಟ ಧೇನುಕ
ಪಾತಕಿ ಶಾರಿಷ್ಠ ಕೇಶಿಕಿ-
ರಾತ ಕಂಸಾಂಬಷ್ಟ ಮುಷ್ಟಿಕ ಮಲ್ಲ ಚಾಣೂರ
ಕಾತರದ ಶಿಶುಪಾಲ ಮುಖ್ಯರ
ಘಾತಿಸಿದ ಗರುಡಧ್ವಜನೆ ಪುರು-
ಹೂತ ಸುತನನು ಕಾಯ್ದೆ ಜಯ ಜಯ ವಿಜಯಸಾರಥಿ 4
ಅತ್ಯಧಿಕ ಕೋಪದಲಿ ಪ್ರಜ್ವಲಿ
ಕಮಲ ಜೌಸ್ತ್ರವ
ನುತ್ತರೆಯ ಗರ್ಭದಲಿ ಬಿಡದೆ ಸುತ್ತಿಕೊಂಡಿರಲು
ಸತ್ಯಭಾಮಾಕಾಂತ ಕರುಣದಿ
ತೆತ್ತಿಯನು ಕಾಪಾಡಿದಖಿಳೋ-
ತ್ಪತ್ತಿರಕ್ಷಣಕಾರಿ ಜಯ ಜಯ ವಿಜಯಸಾರಥಿ 5
ಇರುವೆ ಮೊದಲು ಬ್ರಹ್ಮಾಂತರಾಗಿಹ
ಸುರನರಾಸುರ ಮುಖ ಪ್ರಪಂಚ ದೊ-
ಳಿರುವೆ ಸರ್ವೇಂದ್ರ್ರಿಯ ನಿಯಾಮಕ ಸರಿವ ಕೃತ್ಯವನು
ಅರಿತು ಮಾಡಿಸಿ ನೋಡಿ ನಗುತಿಹ
ಪರಮ ಮಂಗಳ ಚರಿತ ನೀ ಯನ-
ಗಿರಲು ಭಯವ್ಯಾಕಿನ್ನು ಜಯ ಜಯ ವಿಜಯಸಾರಥಿ 6
ಆದರೀ ತೆರದಿಂದ ನಿನ್ನಯ
ಪಾದ ಪಂಕಜಗಳನು ಪೊಗಳಿದ-
ರಾದುದೊಂದಾಶ್ಚರ್ಯ ನೋಡಲಿ ಸುಜನರಾದವರು
ಮೋದ ಭೋದಿ ದಯಾಬ್ಧಿ ವೆಂಕಟ
ಭೂಧರೇಶನೆ ಸತತ ನಮ್ಮನು
ಕಾದಿರುವೆ ಕಮಲೇಶ ಜಯ ಜಯ ವಿಜಯಸಾರಥಿ7