ಒಟ್ಟು 422 ಕಡೆಗಳಲ್ಲಿ , 42 ದಾಸರು , 393 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಂತಪದ್ಮನಾಭ | ವಿಠ್ಠಲನೆ ನೀನಿವನಅನಂತ ಜನ್ಮದ ಪಾಪ | ಕಳೆದು ಸಲಹೋ ಪ ಗುಣಗಣಾರ್ಣವ ಸ್ವಾಮಿ | ಪೂರ್ಣಕರುಣೆಯೆಂದುನಿನಗೆ ನಾ ಬಿನ್ನೈಪೆ | ಸತತ ಹರಿಯೇ ಅ.ಪ. ಹಂಚಿ ದೈತ್ಯರಿಗೇ |ಸಂಚಿತಾಗಮ ಕಳೆವ | ಸಂಚುಗಳ ನೀ ತೋರಿವಾಂಛಿತಪ್ರದನಾಗೊ | ಅಂಚೆವಹ ಪಿತನೇ 1 ಭವ ತಾರಕವು | ನಾಮಸ್ಮøತಿಯೆಂಬಮೃತಯಾಮಯಾಮಕೆ ಉಣಿಸಿ | ರಾಮನೇ ಸಲಹೋ 2 ಮೂರೆರಡು ಭೇದಗಳು ತಾರತಮ್ಯ ವನರುಹಿಸಾರತಮ ನೀನೆಂಬ | ಸುಜ್ಞಾನವೀಯೋ |ಕಾರಣಿಕ ಶ್ರೀಹರಿಯೆ | ವೈರಾಗ್ಯ ಧನದಿ ಸಂಸಾರ ನಿಸ್ಸಾರೆಂಬ | ಸನ್ಮತಿಯ ನೀಯೋ 3 ದಾಸನಿವನೆಂದೆನುತ | ನೀ ಸಲಹ ಬೇಕಿವನಈಶಾದಿ ದಿವಿಜೇಡ್ಯ | ಶೇಷಶಾಯೀಕ್ಲೇಶ ಆನಂದಗಳು | ಶ್ರೀಶ ನಿನ್ನಿಂದೆಂಬಈಸು ಸನ್ಮತಿ ಕೊಟ್ಟು | ನೀ ಸಲಹಬೇಕೊ4 ಸರ್ವವ್ಯಾಪ್ತ ಸ್ವಾಮಿ | ನಿರ್ವಿಕಾರನೆ ದೇವಸರ್ವಜ್ಞ ನೀನಿರಲು | ನಾ ಪೇಳ್ವುದೇನೋದರ್ವಿ ಜೀವನ ಕಾವ | ಸರ್ವಭಾರವು ನಿಂದುಸರ್ವ ಸುಂದರ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಅನಂತಶಯನ ವಿಠಲಾ | ಕಾಪಾಡೊ ಇವಳಾ ಪ ಸಾರ ಅ.ಪ. ತಾಪತ್ರಯಗಳು ಎಂಬ | ಕೂಪಾರದಲಿ ಬಿದ್ದು ಶಾಪಕೊಳಗಾಗಿ ಹಳ ಕಾಪಾಡಬೇಕೊದ್ರೌಪದಿಯವರದ ಕರು | ಣಾಪಯೋನಿಧಿಹರೆಯೆನೀ ಪೊರೆಯದಿರಲನ್ಯ | ಕಾಪಾಡ್ವರ್ಯಾರೊ 1 ತೈಜಸನೆ ನೀನಾಗಿ | ಸೂಚಿಸಿಹ ಅಂಕಿತವಯೋಜಿಸಿಹೆ ಇವಳೀಗೆ | ಅವ್ಯಾಜ ಕರುಣೀಪ್ರಾಜ್ಯ ಎನ ಸಂಸಾರ | ಗೌಜು ಕಳೆಯಲ್‍ವೆನ್‍ತ್ರ್ಯಜಗದ್ವಾಪನೆ | ವಾಜಿವದನಾಖ್ಯ 2 ಕರ್ಮಾಕರ್ಮಗಳ | ಮರ್ಮಗಳ ತಿಳಿಸುತ್ತಪೇರ್ಮೆಯಲಿ ಪತಿಸೇವೆ | ಕರ್ಮಪ್ರಾಧಾನ್ಯಧರ್ಮವನೆ ತಿಳಿಸುತ್ತ | ಭರ್ಮಗರ್ಭನ ಪಿತನೆಕರ್ಮಬೀಜವ ಕಳೆಯೊ | ಬ್ರಹ್ಮಣ್ಯದೇವಾ3 ಮರುತಾಂತರಾತ್ಮನೆ | ಮೂರೆರಡು ಭೇದಗಳತರತಮಂಗಳನರುಹಿ | ಪೊರೆಯೊ ಇವಳಾಅರುಹುವೆನೊ ಸರ್ವಜ್ಞ | ತರುಳೆಬಹುಭಕ್ತಿಯಂತೆಕರುಣಿಸೆಲೊ ಕೃಪಾಸಾಂದ್ರ | ಕಂಜಜಾನಯ್ಯ 4 ಗಾವಲ್ಗಣೀ ವರದ | ಭಾವದಲಿ ಮೈದೋರಿನೀ ವೊಲಿಯೆ ಬಿನ್ನಪದೆ | ಗೈಯೆ ಶ್ರೀಹರಿಯೆಕೋವಿದೊತ್ತಂಸ ಗುರು | ಗೋವಿಂದ ವಿಠಲನೆಕಾವ ಕರುಣಿ ಎಂದು | ಪ್ರಾರ್ಥಿಸುವೆ ಹರಿಯೆ 5
--------------
ಗುರುಗೋವಿಂದವಿಠಲರು
ಅನಿಲ ಹೃತ್ಕಮಲಸ್ಥ | ಮುನಿ ವೇದವ್ಯಾಸಎನಗಿನ್ನು ತವಧ್ಯಾನ | ಸುಖವೀಯೊ ಶ್ರೀಶಾ ಪ ಚಿದಚಿದ್ವ ಲಕ್ಷಣನೆ | ಚಿತ್ರ ಚಾರಿತ್ರನೇಚತುರಾಸ್ಯ ಪಿತ ನೀನು | ಸುರ ಚಕ್ರವರ್ತೀ |ಚತುರ ರೂಪವ ಧರಿಸಿ | ಚತುರ ವ್ಯೂಹವ ರಚಿಸಿಚತುರ ವಿಧ ಸೃಷ್ಟಿಯನು | ಚತುರ ವಿರಚಿಸಿದೇ1 ಮುನಿ ಪರಾಶರ ತನುಜ | ಶ್ರೀನಿಕೇತನ ಹರಿಯೆಎನಗರುಹು ವೇದಾರ್ಥ | ವೇದವೇದ್ಯಾ |ಘನ ಮಹಿಮ ಕೋಟಿ | ನಿಖಿಲಾಂಡ ನಾಯಕನೆಅನಘ ನೀ ಸಲಹಯ್ಯ | ಕಪಿಲ ರೂಪಾತ್ಮ 2 ಸಚ್ಛಾಸ್ತ್ರ ಕರ್ತೃ ಸತ್ | ಸೂತ್ರಗಳ ನಿರ್ಮಾತೃಸಚ್ಛಾಸ್ತ್ರ ಭಾವಗಳ | ಅರುಹೆ ವಿಬುಧರಿಗೇ |ಮತ್ಸ್ಯಾದಿ ರೂಪನಿ | ನ್ನಿಚ್ಛೆಯಿಂದಲಿ ಪೊಂದಿವತ್ಸರ್ಗೆ ಭೋದಿಸಿದೆ | ಸಚ್ಚಿದಾನಂದಾ 3 ಮೂಲ ಪ್ರಕೃತಿಯ ಮಾನಿ | ಮಹಾಲಕ್ಷ್ಮಿ ನಿನ್ನಯಶೀಲಗಳನನುಸರಿಸಿ | ಸೇವಿಸುವಳೂ |ಪ್ರಲಯ ಕಾಲದಿ ನಿನ್ನ | ಒಲುಮೆಗೋಸುಗ ವಟದಎಲೆಯ ರೂಪದಿ | ಮಲಗಲನು ವಾದಳಯ್ಯ 4 ಮೂರ್ತಿ | ಬದರಿ ಕ್ಷೇತ್ರದಿ ಪೂರ್ಣಭೋದರ ಸುಸೇವೆಯನೆ | ಸತತ ಕೊಳುತಾ |ಮೋದ ಗುಣ ಪೂರ್ಣ ಗುರು | ಗೋವಿಂದ ವಿಠ್ಠಲನೆಹೇ ದಯಾಂಬುಧೆ ನಿನ್ನ | ಪಾದಾಬ್ಜ ತೋರೋ 5
--------------
ಗುರುಗೋವಿಂದವಿಠಲರು
ಅಭಿಮಾನ ಕಳೆವಂಥ | ಸುಲಭ ಮಾರ್ಗವನೇ |ಪ್ರಭುವೆ ಹರಿ ನಿನ್ನ ಸ್ಮøತಿ | ಸರ್ಬದಲಿ ಈಯೋ ಪ ಕರ್ಮ | ಸೃಷ್ಟಿ ನಡೆಸುವಲಿ |ಇಷ್ಟು ತತ್ವೇಶರನು | ಸುಷ್ಠು ಕರ್ಮವ ನಡೆಸೆಭ್ರಷ್ಟ ಎನ್ನಿಂದೆಂಬ | ಕರ್ತೃತ್ವದಲ್ಲಿರುವಾ 1 ಕರ್ಮ ಕರ್ಮ ನಾಮಕನೇ 2 ತನುನಿಷ್ಠ ತತ್ವೇಶರ | ಗಣಿತದ ಕರ್ಮಗಳತನು ತಮ್ಮ ಇಂದ್ರಿಯದಿ | ಅನುನಯದಿ ಗೈಯ್ಯೋ |ಎನ ತನುವು ಇಂದ್ರಿಯವೆ | ಕಾರಣವು ಎಂಬಂಥಹೀನ ಕಾರಕ ಸ್ವಾಮ್ಯ | ಮಾನವೆಂಬಂಥಾ 3 ಹಲವು ತತ್ವರು ದೇಹ | ದಲಿ ನಿಂತು ಕರ್ಮಗಳಹಲವು ಗೈಯುತ ಹರಿಗೆ | ಒಲಿದು ಅರ್ಪಿಸುತಿರೇ |ಫಲವು ಹಂಚಿಪ ಹರಿಯ | ಫಲಸ್ವಾಮ್ಯ ತಿಳಿಯದಿಹತಿಳಿಗೇಡಿ ಯೆನ್ನ ಭ್ರಮ | ಒಲಿದು ನೀ ಕಳೆಯೋ 4 ಅಹಿಕ ಪಾರತ್ರಿಕವು | ವಿಹಿತ ಸುಖವೆರಡರಲಿಅಹಿಕ ದುಃಖದ ವಿರಲು | ಬಹುದು ಮೋಕ್ಷೆರಿ ಬಾ |ಅಹಿತ ಮತಿ ಕಳೆಯುತ | ಶ್ರೀಹರಿಯೆ ನಿನ್ವೊಲಿಮೆಮಹಿತ ಮೋಕ್ಷದವೆಂಬ | ವಿಹಿತ ಮತಿ ಈ ಯೋ 5 ವಿಷಯದಲಿ ಮೈ ಮೆರೆತು | ವಿಷಯೋಪ ಭೋಗಗಳೆಅಸಮ ಪುರುಷಾರ್ಥಗಳ | ಲೇಸು ಪ್ರದವೆಂಬಾ |ವಿಷಯಾಭಿಮಾನಗಳು | ನಶಿಪಂತೆ ನೀ ಮಾಡಿವಿಷಯಾದಿಗಳಿಗೆಲ್ಲ | ಈಶ ನೀವೆನೆ ತಿಳಿಸೋ 6 ಕಕ್ಕಸದ ಅಭಿಮಾನ | ಷಟ್ಕಗಳ ನೀ ಕಳೆದುಅಕ್ಕರದಿ ತಾಯ್ತನ್ನ | ಮಕ್ಕಳನು ಪೊರೆವಂತೇ |ಲೆಕ್ಕಿಸದಲೆನ್ನಯ | ಲಕ್ಷ ಅಪರಾಧಗಳ ಕ್ಷಮಿಸಿಚೊಕ್ಕ ಗುರು ಗೋವಿಂದ | ವಿಠ್ಠಲನೆ ಸಲಹೋ 7
--------------
ಗುರುಗೋವಿಂದವಿಠಲರು
ಅಶ್ವಧಾಟೀ ಕೃಷ್ಣನೆ ಎಮ್ಮನು ಪ ಕಾಯ ನಂಬಿದೆ ನಿನ್ನನುಅ.ಪ ಸಾರ ಮಾರ್ಗದ ದಾರಿ ಕಾಣದೆ ಸಾರಿ ಬೇಡುವೆ ನಿನ್ನನು ನೀರಜಾಕ್ಷನೆ ಘೋರಭವದಿ ಪಾರುಗಾಣಿಸೊ ಎಮ್ಮನು 1 ದುಷ್ಟನಾಶಕ ಶಿಷ್ಟಪಾಲಕ ಶ್ರೇಷ್ಠಮೂರುತಿದೇವನೆ ಕಷ್ಟಓಡಿಸಿ ಇಷ್ಟಪಾಲಿಸೊ ಅಷ್ಟಕರ್ತನೆ ಬೇಗನೆ 2 ವೇದಗೋಚರ ಯಾದವೇಂದ್ರ ಸುಧಾಮ ರಕ್ಷಕ ಕೃಷ್ಣನೆ ನಂದಗೋಪ ಸುಕಂದ ನಾಮಕ ರಾಧೆವಂದಿತ ಚರಣನೆ 3 ಗೋಪಿ ಮೋಹಕ ಪಾಪಮೋಚಕ ತಾಪಸ ಪ್ರಿಯರೂಪನೆ ಕೋಪಮಾಡದೆ ಪಾಪಿ ಎನಗೆ ರೂಪ ತೋರಿಸೊ ಬೇಗನೆ 4 ದೋಷದೂರ ವಿನಾಶವರ್ಜಿತ ಕೇಶಿ ಸೂದನ ಶೂರನೆ ಕ್ಲೇಶ ಓಡಿಸಿ ದಾಸನೆನಿಸೊ ಬಿಂಬನೆ 5 ವೇಣುನಾದ ವಿನೋದ ಸುಂದರ ಜಾಣೆ ರುಕ್ಮಿಣಿ ಅರಸನೆ ಸಾನುರಾಗದಿ ಜ್ಞಾನದಂಬಕ ದಾನ ಮಾಡೊ ದಾನಿಯೆ6 ಶ್ಯಾಮಸುಂದರ ಮಾಮನೋಹರ ಭೀಮ ವಿಕ್ರಮ ಭೂತಿಯೆ ಸಾಮಸನ್ನುತ ರಾಮಚಂದಿರ ಕಾಮಜನಕನೆ ಕಲ್ಕಿಯೆ 7 ಸಿಂಧು ಶಯನನೇ ಬಂಧಮೋಚಕ ಮಂದರಾದ್ರಿಧಾರನೇ ಬಿಂಧುಮಾಧವ ಮಂದಹಾಸದ ಸುಂದರಾಂಗ ರೂಪನೆ8 ಲಕ್ಷ್ಮಣಾಗ್ರಜ ಪಕ್ಷಿವಾಹನ ಅಕ್ಷರೇಡ್ಯ ಸುಲಕ್ಷಣ ಮೋಕ್ಷದಾಯಕ ಲಕ್ಷ್ಮಿರಮಣನೆ ರಕ್ಷಿಸಯ್ಯ ಸರ್ವದಾ 9 ವಾರಿಜನೇತ್ರ ವಾರಿಜನಾಭ ವಾರಿಜಾಸನ ವಂದ್ಯನೆ ಸೂರಿ ಶೇಖರ ಮೇರೆಗಾಣದ ಮಹಿಮನೆ 10 ಸರ್ವವ್ಯಾಪ್ತನೆ ಸರ್ವವಂದ್ಯನೆ ಸರ್ವವಾಚ್ಯದ ಈಶನೆ 11 ಪೂರ್ಣಗುಣನೆ ಪೂರ್ಣಶಕ್ತನೆ ಪೂರ್ಣಭೋಧರ ಪ್ರಿಯನೆ ಪೂರ್ಣರೂಪನೆ ಪೂರ್ಣಪೂರ್ಣನೆ ಪೂರ್ಣ ತಂತ್ರ ಸ್ವತಂತ್ರನೆ12 ಬಾಲ ಲೀಲ ಕಲಾವಿಭೂಷಿತ ಲೀಲ ಮಾನುಷ ವಿಗ್ರಹ ಲೋಲ ಸುಂದರ ಜಾಲ ಮೋಹಕ ಕಾಲನಾಮಕ ಪುರುಷ 13 ಕಾಳಿಮರ್ಧನ ಕಾಳಿವರದ ಕಾಳಿಯನುಜ ಕೇವಲ ಮೌಳಿಯಿಂದಲಿ ಕಾಲಿಗೆರಗುವೆ ಪಾಲಿಸಯ್ಯ ಈಗಲೇ 14 ಭಂಜನ ನಿಕಟ ಸರ್ವರ ಕುಟಿಲ ವರ್ಜಿತ ಶ್ರೇಷ್ಟನೆ ನಕ್ರತರಿದ ಚಕ್ರಪಾಣಿಯೆ ಫಕ್ಕನೊಲಿಯೊ ಶುಕ್ರನೇ 15 ವಿಪ್ರಸತಿಯರ ಕ್ಷಿಪ್ರದಿಂದಲಿ ತಪ್ಪದೆ ಪೊರೆದಾತನೆ ತಪ್ಪುನೋಡದೆ ಒಪ್ಪಿಕೊಂಡು ಅಪ್ಪ ಒಲಿಯೊ ವೆಂಕಟ 16 ಪಾಂಡವ ಪ್ರಿಯ ಪುಂಡಮರ್ದನ ಅಂಡಜಾಧಿಪ ಅಂಡಗ ಭಂಡನೆನಿಸದೆ ತೊಂಡನೆನಿಸೊ ಪಾಂಡುರಂಗ ವಿಠ್ಠಲಾ 17 ಸೋಮಶೇಖರ ಭಾಮೆ ಪೂಜಿತ ಕಾಮಿತ ಪ್ರದಸಾಮನೆ ತಾಮಸಾರಿಯ ನೇಮದಿಂದಲಿ ನಾಮನುಡಿಸೊ ಶೀಲನೆ 18 ಸೋಮಕಾಂತಕ ಭಾಮ ರೂಪದಿ ಸೋಮಹಂಚಿದ ಜಾಣನೆ ವಾಮದೇವಗೆ ಭ್ರಮೆಯ ಮಾಡಿದ ಶ್ರೀಮನೋಹರವಾಮನ 19 ಇಂದ್ರಗೊಲಿದ ವೀಂದ್ರವಾಹನ ನಂದಗೋಕುಲ ಚಂದ್ರನೆ ಬಂಧನಪ್ರದ ಬಂಧು ಸರ್ವರ ತಂದೆ ಕಾಯೋ ಬೇಗನೆ 20 ವಿಜಯಸಾರಥಿ ವೃಜಿಜನಾರ್ದನ ಅಜಭವಾದಿ ಪೂಜಿತ ತ್ರಿಜಗವಂದಿತ ಭುಜಗಶಯನನೆ ಅಜಿತ ಶಾಶ್ವತ ವಿಷ್ಣುವೆ 21 ಕಳತ್ರ ಅನೀಕನೆ ವಾಕು ಲಾಲಿಸು ನೂಕುಭವವನು ಏಕರೀತಿಲಿಮೆರೆವನೆ 22 ಜೀವ ಪ್ರೇರಕ ಜೀವಭಾಸರ ಜೀವರಾಶ್ರಯ ಭಿನ್ನನೇ ದೇವದೇವನೆ ಕಾವುದೆಮ್ಮನು ಕೋವಿದಪ್ರಿಯ ಕಪಿಲನೆ 23 ಅನ್ನನಾಮಕ ಅನ್ನದಾಯಕ ಅನ್ನುಉಂಬುವ ಅತಿಥಿಯೆ ಮಾನ್ಯಮಾನದ ಜ್ಞಾನಿಗಮ್ಯನೆ ಬೆನ್ನುಬಿದ್ದೆ ಅನಂತನೆ 24 ಸಾರ ಉಣ್ಣುವ ಗಾರು ಉಣ್ಣದ ಮಾರುತೀಶನೆ ಸ್ವರತನೆ ಧೀರ ಜಯಮುನಿ ವಾಯು ಅಂತರ ಮೆರೆವ ಸಿರಿಪತಿ ಕೃಷ್ಣವಿಠಲನೆ ಬಿಂಬನೆ 25
--------------
ಕೃಷ್ಣವಿಠಲದಾಸರು
ಆತ್ಮನಿವೇದನೆ ಅಪಮೃತ್ಯು ಪರಿಹರಿಸೊ ಶ್ರೀ ವೆಂಕಟೇಶ ಅಪರಾಧವೆಣಿಸದಲೆ ಉದ್ಧರಿಸೊ ಶ್ರೀಶಾ ಪ ಅಪರಾಧ ಸಹಸ್ರಗಳ ಮಾಡುತನುದಿನದಿ ಅಪರಿಮಿತ ಮಹಿಮ ನಿನ್ನನ್ನು ಸ್ಮರಿಸದೆ ಚಪಲ ಬುದ್ಧಿಗಳಿಂದ ತಪಿಸಿದೆನೊ ಭವದೊಳಗೆ ಗುಪಿತದಿಂ ಸಲಹಯ್ಯ ಪಿತನೆ ಕೈ ಮುಗಿವೆ 1 ಪೂರ್ವಕಾಲದೊಳೊಬ್ಬ ರಾಜಶೇಖರ ತನ್ನ ಮೋಜಿನಿಂದಲೆ ನಿನ್ನ ಸ್ಮರಣೆ ಮರೆತು ಮೂರ್ಜಗತ್ಪತಿಯ ಪೂಜಿಸದೆ ಕಾಲವ ಕಳೆಯೆ ಆ ಜವನ ದೂತರೆಳೆ ತಂದರೈ ಹರಿಯೆ 2 ಅಂದು ಯಮ ಭಟರುಗಳ ಬಂಧನದೊಳಿರೆ ನೃಪನು ಚಂದದಿಂ ಪಾಪಕರ್ಮಗಳ ನೋಡೆ ತುಂಬಿದ ಪಾಪವೆ ಬಹಳವಾಗುತಿರಲು ಇಂದಿರೇಶನ ಪೂಜೆ ಒಂದೆ ದಿನವೆನಲು 3 ಬಿಡದೆ ಇವನಿಗೆ ಶಿಕ್ಷೆ ಕೊಡಿರಿ ಎಂದೆನಲು ನುಡಿದರಾ ಭಟರುಗಳು ಮೊದಲು ಯಾವದು ಎನಲು ಮೊದಲು ಪುಣ್ಯವು ಎಂದು ನುಡಿದನಾ ನೃಪನು4 ತಕ್ಷಣವೆ ವಿಷ್ಣುದೂತರು ಬಂದು ನೃಪವರನ ಚಿತ್ತಜನಯ್ಯನಿಹ ಉತ್ತಮ ಸ್ಥಳಕೆ ಸತ್ಯವಂತರು ಬಹಳ ಕೀರ್ತಿಸುತ ಶ್ರೀಹರಿಯ ಮತ್ತೆ ವೈಕುಂಠದಲಿ ಮೆರೆಸಿದರು ಕ್ಷಣದಿ 5 ಒಡನೆ ಪುಣ್ಯವು ಮುಗಿಯೆ ನಡಿ ನರಕಕೆಂದೆನಲು ಒಡೆದು ಎದೆ ನಡುಗಿ ಕಳವಳಿಸಿ ನೃಪನು ನುಡಿದ ಹೀಗೆನುತ ಘರ್ಜಿಸುತ ಯಮದೂತರಿಗೆ ಬಿಡಿರಿ ನಿಮ್ಮಯ ಸತ್ಯ ನಿಜವಲ್ಲವೆನುತ 6 ನಾರಾಯಣನ ನೋಡಿದವರಿಗೆ ನರಕ ಭಯ ನಾರದರೆ ಈ ರೀತಿ ಸಾರಿ ಡಂಗುರವ ಹೀಗೆನಲು ನುಡಿಕೇಳಿ ಸಾರಿ ಪೇಳಿದರಾಗ ದೇವ ದೇವನೆ ಇದಕೆ ಉಪಾಯವೇನೆನಲು7 ಪರಮ ಕೃಪಾಳು ಹರಿ ಪರಮ ಭಕ್ತರನೆಲ್ಲ ಕರೆದು ಏಕಾಂತದಲಿ ಸರಸವಾಕ್ಯದಲಿ ಇರಲಿ ಈ ನರನ ವಾಕ್ಯದ ಜಾಣತನವನು ಸುರ ಲೋಕದವರು ಸ್ತುತಿ ಮಾಡಲೆಂದೆನಲು8 ಭಾಗವತ ಜನಪ್ರಿಯ ಬಾಗಿ ನಮಿಸುತಲಿ ವಂದನೆ ಮಾಡುವೆ ನಾಗಶಯನನೆ ನಿನ್ನ ಮಹಿಮೆಗೆಣೆಗಾಣೆನೊ ಬೇಗ ಪಾಲಿಸು ಕಮಲನಾಭ ವಿಠ್ಠಲನೆ 9
--------------
ನಿಡಗುರುಕಿ ಜೀವೂಬಾಯಿ
ಆತ್ಮಶೋಧನೆ ಅನಂತಾನಂತ ಪಾಪ ಮಾಡುವೆ ನಾನು ಪ ಅನಂತದಯಾನಿಧೆ ನೀನೊ ಹಯವದನ ಅ.ಪ ದಾರು ಎನ್ನ ಪಾತಕಕ್ಕೆ ಸರಿಗಾಣಿಸೆನೆಂದರೆ ಪಾಪ ಕ್ಷೋಣಿ ಪರಿಮಾಣುಗಳಿಗೆ 1 ಪೇಳು ಪಾಪವೆಂದಲೆನಲು ಪೇಳಲಿಕ್ಕೆ ಬಲುಲಜ್ಜೆ ಗಳು ಅಂಡಲಿವುತಿದೆ ತಿಳಿದಾತ ನೀನಲ್ಲವೆ 2 ಎನಗೊಂದು ಉಪಾಯವ ಅನಾಯಾಸ ಮಾಡುವಂಥ ನಿನ್ನ ನಾಮಸುಧೆಯನ್ನು ಎನಗೀಯೊ ಮುದದಿಂದ3 ಕಾಲ ಸ್ವಾಮಿ ನೀನು ದಾಸನು ಆಸು ಕಾಲದವನು ವಾಸುದೇವವಿಠಲನೆ ನೀ ಸಡಲ ಬಿಡುವರೇನೊ4
--------------
ವ್ಯಾಸತತ್ವಜ್ಞದಾಸರು
ಆದಿಯಲಿ ಮಧುಕೈಟಬರನು ಸಂಹರಿಸಿದಂಥ ಶೂರನೆ ವೇದವನು ಕದ್ದೊಯ್ದ ದಾನವನೊಳು ಕಾದಿಗೆದ್ದ ಧೀರನೆ 1 ಹದಿನಾರು ಸಾವಿರ ಗೋಪಿಯನಾಳಿದಾಮಿತ ಬಲವಂತನೆ ಕದನಕೊದಗಿದಸುರರನ್ನು ಸದೆ ಬಡಿದ ಪ್ರಖ್ಯಾತನೆ 2 ಸಾಧು ಸಜ್ಜನರ ಸಂತಾಪ ಕಳೆದಾಮೋದ ತೀರ್ಥಾರಾಧ್ಯನೆ ಆದಿದೈವಿಕಾದಿ ಈತಿ ಬಾಧೆ ಕಳೆಯೊ ರಂಗೇಶವಿಠಲನೆ 3
--------------
ರಂಗೇಶವಿಠಲದಾಸರು
ಆದಿಯುಗದಿ ಮಹ ಆದಿದೈತೇಯನೊಬ್ಬ ಮೇದಿನಿಯೊಳ್ ಸ್ವರ್ಣಕಶ್ಯಪು ನಾಮದಿ ಸಾಧಿಸಿ ಬಂದವಗೊಬ್ಬ ಸೋದರ ಸ್ವರ್ಣಾಂಬಕನೆನಿಸಿ ಮೇದಿನಿ ಚೋರನಾಗಿ ಹತನಾದನು ಆದಿಶೇಷನೆ ವಿಷ್ಟಕ್ಸೇನ ತಾ- ನಾದ ಪ್ರಹ್ಲಾದ ಪ್ರಾಣಾವೇಶದಿಂದ ಸೋದರ ಜೀವಾಂಶಾಪಾನಾವಿಷ್ಟ ಸ- ಲ್ಹಾದನಾಮಕ ಮಿತ್ರನಾದ ಕ ಹ್ಲಾದ ವ್ಯಾನಾವೇಶದಿಂದ ಮೋದದಿ ಸೋಮಾಂಶೋದಾನಾಯುತ ನು- ಹ್ಲಾದ ನಾಮಕ ಸಂಭೂತನಾದ ಆದರೈವರಾದೈತ್ಯಗೆ ಪುತ್ರರು ಮೇದಿನಿ ಸುರರುದ್ಧಾರಗೋಸುಗ ಆದಿದೈವ ನಾರೇಯಣ ತಾ ನಾದಿಕಾರಣ ವಿಶ್ವಕರ್ತಾ ಮೋದಾನಂದ ಮೂರುತಿ ಸುಗುಣ ಭೋಧಪೊರ್ಣ ಸರ್ವಜ್ಞ ಸ್ವಾತಂತ್ರ ವೇದಪುರುಷಾದಿ ಜಡಾದಿ ಜಗಕೆ ಆಧಾರ ಹರಿ ಎಂಬ ಜ್ಞಾನವ ಭೋದಿಸಿ ಬೊಮ್ಮಮುಖರು ಹರಿ ಪಾದಸೇವಕರೆನುತ ನಿತ್ಯ ವಾದದಿ ವಾದಿಗಳ ಜಯಸಿದರವರ ಪಾದಸೇವಿಸಿ ಕರುಣಾಪಡೆದು ಆದಿ ಗುರು ಜಗನ್ನಾಥವಿಠಲನ್ನ ಆದರದಲಿ ಭಜಿಪೆ ಪರಮ ಸುಖ ರಾಗ :ಕಲ್ಯಾಣಿ ಅಸುರರ ಜನ್ಮದಿ ಪುಟ್ಟಿದ ಇವರಿಗೆ ಶ್ವಸನನ ಆವೇಶ ಸುರರಾವೇಶ ಬಲದಿ ಅಸಮಙÁ್ಞನ ಭಕುತಿ ವಿರಾಗವು ವಸುಧಿಯ ತಳದಿ ದಿನದಿನದಲ್ಲಿ ಪಸರಿಪ ಸೂರ್ಯನ ಪ್ರಭೆಯಂದದಲಿ ಮಿಸುಪದಕಿದೇ ಕಾರಣ ಉಂಟು ಬಿಸಜಾಂಬಕ ಹರಿಪೇಳಿದ ಇವರಿಗೆ ಅಸುರೇಶ ಹಿರಣ್ಯಕಶಿಪುವಿನಲ್ಲಿ ಶಿಶುಭಾವದಿಂದ ಜನಿಸಲು ಪೋಗಿರಿ ಪುಸಿಯಲ್ಲ ಮಚ್ಛಾಪÀ ಅಸುರಭಾವ ಪ್ರಲ್ಹಾದಾದ್ಯ ರಸಮಮಹಿಮರಾಗೀ ಜನಿಸಿರೆಂದು ಉಸುರಿದ ವಾಕ್ಯವು ಪ್ರಮಾಣ ಸಿದ್ಧವೆನ್ನಿ ವ್ಯಸನzಲೈವರು ಹರಿಯನೆ ಮತ್ತೆ ಬೆಸಗೊಂಡರೀಪರಿ ಪರಿಯಾ ಅಸುರನ ಪತ್ನಿಯ ಬಸಿರೊಳು ಪುಟ್ಟುವುದು ವಶವಲ್ಲವೋ ಸ್ವಾಮಿ ಕುಸುಮನಾಭನೆ ನಿನ್ನ ಅಸಮಲೋಕದ ಸುಖ ವಸುಧಿತಳಾದಲ್ಲಿ ಎಸಗದು ಎಸಗದು ಎಂದಿನಕಾಲಕ್ಕೂ ಮುಸುಕುವದಙÁ್ಞನ ದುಃಖದ ಭವದಲ್ಲಿ ಕಸವಿಸಿಗೊಳುತಾ ಙÁ್ಞನವನೀಗಿ ಬಿಸನಿಲಯನೆ ನಿನ್ನ ದರುಶನವಿಲ್ಲದೆ ಅಸುನಿಲ್ಲುವ ಬಗೆ ಯಾವುದು ಪೇಳೋ ಶಶಿಧರವಂದ್ಯ ಗುರುಜಗನ್ನಾಥ ವಿಠಲ ನಮ್ಮ ವ್ಯಸನವನು ಕಳೆದು ಸುಖವನು ಸಲಿಸೋ ರಾಗ - ಕಾಂಭೋದಿ ತಾಳ - ತ್ರಿವಿಡಿ ಭಕುತವಾಕ್ಯವ ಲಾಲಿಸಿ ತಾನಾಗ ಪರಿ ನುಡಿದನು ವಿಕಳ ಪೊಂದದೆ ನೀವು ತ್ವರಿತಾದಿ ಧರೆಯೊಳು ಸಕಲರು ಜನಿಸಲು ಮುಸಕದಙÁ್ಞನ ಲಕುಮಿ ಭೂಮಿಯ ಸಹಿತ ಇರುವೆನು ನಿಮ್ಮೊಳು ನಿತ್ಯ ಪರಿಪರಿ ಮಹಿಮವ ಪ್ರಕಟಮಾಡುವೆ ಮುಖ್ಯಪ್ರಾಣನಿಪ್ಪನು ಸತತ ಕಕುಲಾತಿ ಯಾಕಿನ್ನು ನಡಿರೆಂದು ಹರಿಯೆಂದ ಉಕುತ ವಾಕ್ಯದಲಿಂದ ದಿತಿಜನಲ್ಲಿ ಸುಕೃತಿಗಳೈವರು ಉದಯವೈದಿದರಾಗ ಮುಕುತಿದಾಯಕ ಗುರುಜಗನ್ನಾಥ ವಿಠಲನೆಂಬ ಭಕುತಿ ಪೂರ್ವಕ ಙÁ್ಞನವೃದ್ಧಿಯೈದಿದರು ರಾಗ - ಆರಭಿ ತಾಳ - ಅಟ್ಟ ಪಿರಿಯ ಪ್ರಲ್ಹಾದನ್ನ - ಕರದು ತೊಡೆಯ ಮೇಲೆ ಇರಿಸಿ ಪ್ರೇಮದಿ ನಿಮ್ಮ - ಗುರುವೇನು ಪೇಳ್ಯಾನೆ ಮರಿಯಾದೆ ಎನಮುಂದೆ - ಅರಹು ಎನಲು ಬಾಲ ಕಿರಿನಗೆ ಮುಖದಿಂದ - ಹರಿಯೆ ಸರ್ವೋತ್ತಮ ಹರಬೊಮ್ಮ ಮುಖರೆಲ್ಲ - ಪರಿವಾರಭೂತರು ಅರಿದಿಪ್ಪೆ ಎನ್ನಯ್ಯ ಸರಸಿಜಜಾಂಡಕ್ಕೆ ಅರಸು ತಾನಾಗಿದ್ದು ಇರುವಾದಿ ಚೇತನ ತರುವಾದಿ ಜಡಮಯ ಸರ್ವಸ್ಥಳದಲ್ಲಿ ನಿರುತದಿ ವ್ಯಾಪಿಸಿ ಇರುತಿಹ ಹರಿ ಎಂದು ಅರಿತ ಮಾನವÀÀನಿಗೆ ದೊರೆವೋನು ನಿಶ್ಚಯ ಅರಿತು ಪೇಳಿದ ತನ್ನ ತರಳಾನ ನುಡಿಕೇಳಿ ಭರದಿಂದ ಕಂಬವ ಕರದಿಂದ ಬಡಿಯಾಲು ನರಮೃಗಾಕಾರದಿ ಹೊರಗೆ ಬಂದಾದೈತ್ಯನು ದರವ ಬಗೆದು ಕರುಳಮಾಲೆಯತಾ ಕೊರಳೊಳು ಧರಿಸಿದ ಚರಜನ ಪರಿಪಾಲ ಬಿರುದು ಬೀರಿದ ನಮ್ಮ ಗುರುಜಗನ್ನಾಥವಿಠಲ ಶರಣರ ಮರೆಯನೋ ಧರಿತಳದೊಳಗೆ ರಾಗ :ಇಚ್ಛಾ :ತಾಳ - ಆದಿ ಈ ತೆರ ಪ್ರಹ್ಹಾದ ಹರಿಪಾದವ ಭಜಿಸಿ ಪ್ರೀತಿಯ ಪಡೆದು ಭೂಸುರಗಣಕೆ ಭೂತಳದೊಳಗೆ ಯತಿಗಳ ಕುಲಕೆ ನಾಥನು ವ್ಯಾಸಮುನಿ ಎನಿಸಿ ಮರಳಿ ಖ್ಯಾತ ಶ್ರೀ ರಾಘವೇಂದ್ರನೆಂದೆನಿಸಿ ಪ್ರೀತಿಯಿಂದಲಿ ಭಕ್ತರ ಪೊರೆಯಲು ನೀತಿ ಭಾವದಲಿ ಯತಿಯಾಶ್ರಮ ಪೊಂದಿ ಸೀತಾಪತಿರಾಮ ಯದುನಾಯಕ ಕೃಷ್ಣ ಭೀತಿಹರ ನರಸಿಂಹ ವ್ಯಾಸರ ಭಜಿಸಿ ದೂತರ ಮನೋರಥ ಪೂರ್ತಿಸಿ ಪೊರೆವನು ದಾತಗುರುಜಗನ್ನಾಥ ವಿಠಲನ್ನ ನೀತ ವಿಭೂತಿಯ ಪಡೆದು ನಿರ್ಭೀತನಾಗಿಹನು ಜತೆ ದೂತಜನರ ಮಹಾಪಾತಕ ಹರನೆನ್ನಿ ಪ್ರೀತಗುರುಜಗನ್ನಾಥವಿಠಲನೊಲಿವ ರಾಗ :ಶಂಕರಾಭರಣ :ತಾಳ :ಏಕ
--------------
ಗುರುಜಗನ್ನಾಥದಾಸರು
ಆನಂದನಿಲಯ ವಿಠ್ಠಲನೆ | ನೀನಿವಳ ಸಲಹಬೇಕೊಜ್ಞಾನಗಮ್ಯನೆ ದೇವ | ಮೌನಿಮಧ್ವರ ಹೃದಯಾ ಪ ಪಾದ ಸೂಸಿ ಸೇವಿಪಳೋ |ವಾಸುಕೀಶಯನ ಮ | ಧ್ವೇಶ ತವಪದ ಕಮಲದಾಸಳೆಂದೆನಿಸುತ್ತ | ನೀ ಸಲಹೊ ಹರಿಯೇ 1 ಉದ್ಯೋಗ ವ್ಯವಹಾರ | ವಿದ್ಯೆಯಲಿ ಚಾತುರ್ಯಮಧ್ಯೆ ಮಧ್ಯೇ ಬರುವ | ಹೃದ್ರೋಗಗಳು ಸರ್ವಪ್ರದ್ಯುಮ್ನ ತವ ಸೇವೆ | ಎಲ್ಲ ಇವು ಎಂಬಂಥಶುದ್ಧ ಜ್ಞಾನವಿತ್ತು | ಉದ್ಧರಿಸೊ ಹರಿಯೇ 2 ಭವ ಕಳೆಯೋಈರ ಕರುಣಾ ಪಾತ್ರ | ಗೌರಿಪತಿ ಶಿವವಂದ್ಯಗೌರಿದೇವಿಯ ಅಭಯ | ತೋರ್ದೆ ಸ್ವಪ್ನದಲೀ3 ಪತಿಸೇವೆ ಇತ್ತಿವಳ | ಕೃತಕಾರ್ಯಳೆಂದೆನಿಸುಹಿತಮಿತ್ರ ಪಿತೃಮಾತೃ | ಬಂಧು ಬಳಗದಲೀ |ಕೃತಿಪತಿಯು ಸರ್ವರಲಿ | ವ್ಯಾಪ್ತನಾಗಿಹನೆಂಬಮತಿಯಿತ್ತು ಸಲಹಿವಳ | ಗತಿ ಪ್ರದನೆ ಹರಿಯೇ 4 ಗುರುಧರ್ಮ ಗುರುಸೇವೆ | ಪರಮ ಭಕುತಿಯಲಿಂದಚರಿಪ ಸನ್ಮತಿಯಿತ್ತು ಕರುಣದಲಿ ಕಾಯೋಗುರುವಂತ ರಾತ್ಮನನ | ತೋರೆಂದು ಪ್ರಾರ್ಥಿಸುವೆಪರಮ ಪುರುಷನೆ ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಆನಂದಾದ್ರಿ ವಾಸ | ವಿಠಲ ಪೊರೆ ಇವನಾ ಪ ಮಾನಮೇಯ ಜ್ಞಾನ | ಸಾನುಕೂಲಿಸಿ ಇವಗೆನೀನಾಗಿ ಪೊರೆಯೊ ಹರಿ | ಕೋನೇರಿವಾಸಾ ಅ.ಪ. ಚಿತ್ರ ಚಾರಿತ್ರ | ಶುಭಗಾತ್ರನೇ ಶತಪತ್ರನೇತ್ರಕರವಾದ ದ್ವಂದ್ವ | ಸೂತ್ರಾಂತರಾತ್ಮ |ಮಿತ್ರನಾನುಗ್ರಹಕೆ | ಪಾತ್ರನ ಸಲಹೊ ಮಾಕಳತ್ರನೇ ನಿನ್ನ ಸುಪ | ವಿತ್ರ ಪದ ನಮಿಪೇ 1 ಕರುಣವೆಂತುಟೊ ನಿನಗೆ | ಶರಣಜನ ವತ್ಸಲನೇಕರೆದೊಯ್ದು ಸ್ವಪ್ನದಲಿ | ಹರ ಗಿರಿಜೆ ತೋರೀ |ಮರಳಿ ಬ್ರಹ್ಮನ ಲೋಕ | ದರುಶನಾನಂದದಲಿಕರೆದೊಯ್ದು ಕರುಣಾಳು | ಸುರಸೇವ್ಯ ಬದರಿಗೆ 2 ದಶಮತಿಗೆ ಬೋಧಿಸುವ | ವ್ಯಾಸದರ್ಶನ ಭಾವಿದಶಮತಿಯ ಸಹವಿರುವ | ವ್ಯಾಸ ಭಕ್ತನ್ನಾ |ಹಸನಾಗಿ ತೋರಿ ನೀ | ವಸುಮತಿಗೆ ಕರೆತಂದುಬೆಸಸಿದೆಯಾ ಫಲದೈವ | ದರ್ಶನಕೆ ಇವನಾ 3 ಬದ್ಧನಾದರು ಇಹದಿ | ಶುದ್ಧ ಸಂಸ್ಕøತನಿಹನುಮಧ್ವಮತ ದಾಸತ್ವ | ಶ್ರದ್ಧೆಯುಳ್ಳವನೇಬುದ್ಧಿಯಲಿ ಎನಗೆ ಉ | ದ್ಬುದ್ಭವನೆ ಮಾಡ್ದ ಪರಿತಿದ್ದಿ ಅಂಕಿತವಿತ್ತು | ಬುದ್ಧಿ ಪೇಳಿಹೆನೋ 4 ಸಂಚಿತ ಕರ್ಮ | ತೀವ್ರದಲಿ ದಹಿಸೇಗೋವುಗಳ ಪಾಲ ಗುರು | ಗೋವಿಂದ ವಿಠ್ಠಲನೆಭಾವದಲಿ ಬಿನ್ನವಿಪೆ | ನೀ ವೊಲಿದು ಸಲಿಸೋ 5
--------------
ಗುರುಗೋವಿಂದವಿಠಲರು
ಆನೆ ಬಂದಿತಮ್ಮಾ ಮರಿಯಾನೆ ಬಂದಿತಮ್ಮಾ ಪ ಸ್ಮರಿಸಿರಿ ಸ್ಮರಿಸಿರಿ ಸರ್ವರ ರಕ್ಷಿಸುವ ಮುಖ್ಯ ಪ್ರಾಣನೆಂಬಾನೆಅ.ಪ ವಾಯು ಸುಪುತ್ರ ನೆಂದೆನಿಸ್ಯಾನೇ ವಾರಿಧಿಯನ್ನೇದಾಟ್ಯಾನೇ ಶಶಿಮುಖಿ ಸೀತೆಯ ಕಂಡಾನೇ ದಶಕಂಠನಗರ್ವ ಮುರಿದಾನೆ 1 ಪಂಚಪಾಂಡವರ ಮಧ್ಯಾನೆ ಪ್ರಚಂಡ ಪರಾಕ್ರಮಿ ಎನಿಸ್ಯಾನೇ ವಂಚಿಸಿ ಕೀಚಕನ ಕೊಂದಾನೆ ಪಾಂಚಾಲಿಗೆ ಪ್ರಿಯನಾದನೆ 2 ಮಧ್ವಮತವ ಉದ್ಧರಿಸ್ಯಾನೇ ವೆಂಕಟ ವಿಠಲನೆಂಬಾನೆ 3
--------------
ರಾಧಾಬಾಯಿ
ಆಪದ್ಭಾಂಧವ ವಿಠಲ | ಕಾಪಾಡೊ ಇವಳಾ ಪ ಶ್ರೀಪತಿ ಶೀರಂಗ ಸ | ಮೀಪಗನೆ ಹರಿಯೇ ಅ.ಪ. ದುರಿತ ರಾಶಿಗಳಳಿದು | ಹರಿನಾಮ ಸುಧೆ ಸವಿಯೆವರಮಾರ್ಗ ತೋರಿ ಪೊರೆ | ಶ್ರೀದ ನರಹರಿಯೇ |ತರುಣಿಮಣಿ ಹರಿದಾಸ್ಯ | ನೆರೆಸುಕಾಂಕ್ಷಿಸಲಾಗಿವಿರಚಿಸಿಹೆ ಉಪದೇಶ | ಪರಿಪಾಲಿಸಿವಳಾ 1 ತಾರತಮ್ಯಾಂತರದಿ | ಹರಿಯ ಉತ್ಕರ್ಷತ್ವಸುರಸಾದಿ ಸುರರೆಲ್ಲ | ಹರಿದಾಸರೆಂಬಾ |ಎರಡು ಮೂರ್ಭೇದ ಸಹ | ವರ ಜಗದ ಸತ್ಯತೆಯಅರುಹಿ ಪಾಲಿಸು ಇವಳ | ಕರಿವರದ ಹರಿಯೇ2 ಸೀಮೆ ಮೀರಿದ ಮಹಿಮ | ಭೂಮ ಗುಣ ಸಂಪೂರ್ಣಕಾಮಾರಿ ಸಖಕೃಷ್ಣ | ಕಾಮಿತಾರ್ಥದನೇನೇಮ ನಿಷ್ಠೆಗಳಿತ್ತು | ಸಾಧನಗಳಳವಡಿಸಿಕಾಮಿನಿಯ ಪೊರೆಯೊ ಹರಿ ಸ್ವಾಮಿ ಭೂವರಹಾ 3 ಜಲಜಾಕ್ಷನಮಲ ಗುಣ | ತಿಳಿಯಲ್ಕೆ ಸಾಧನವುಕಲಿಯುಗದಿ ಸತ್ಸಂಗಾ | ಬಲ ಉಳ್ಳದೋಹಲವು ಮಾತೇಕೆ ನಿನ್ನ | ಮಲಗುಣ ನಾಮಗಳತಿಳಿಸಿ ಪೊರೆ ಇವಳನ್ನು | ಕಲಿಮಲಧ್ವಂಸೀ 4 ಪಾವ ಮಾನಿಯ ಪ್ರೀಯ ದೇವ ದೇವೋತ್ತಮನೆಭಾವುಕಳ ಪೊರೆಯಲ್ಕೆ | ತೀವ್ರ ಭಿನ್ನವಿಪೇಕಾವ ಕರುಣಾಳು ಗುರು | ಗೋವಿಂದ ವಿಠ್ಠಲನೆಈ ವಿಧದ ಭಿನ್ನಪವ | ನೀ ವೊಲಿದು ಸಲಿಸೋ5
--------------
ಗುರುಗೋವಿಂದವಿಠಲರು
ಆರ್ತನಾಭೀಷ್ಟವನು | ಪೂರ್ತಿಗೊಳಿಸೊ ಪ ಕಾರ್ತಸ್ವರ ಮೊದಲಾದ | ವಾರ್ತೆ ನಾನೊಲ್ಲೇ ಅ.ಪ. ಫಲ ಗಿಡೆಲೆ ಮರ ಬಳ್ಳಿ | ಜಲ ಬಿಂದು ನವ ನದಿಯುಜಲ ನಿಧಿಯು ವನಗಿರಿಯು | ಜಲ ಚರಾಚರಧೀ ||ಒಳ ಹೊರಗೆ ಸಂವ್ಯಾಪ್ತ | ಚಲಿಪೆ ನೆಲೆಯಿಲ್ಲದಲೆತಿಳಿಸೊ ತವ ಮಹಿಮೆಗಳ | ಅಲವ ಭೋದಾತ್ಮಾ 1 ಕಂಡ ನೀರೊಳು ಮುಳುಗಿ | ಅಂಡಲೆದು ಬೆಂಡಾದೆಪುಂಡರೀಕಾಕ್ಷ ಪದ | ಬಂಡುಣಿ ಎನಿಸದೇ ||ಹಿಂಡು ತೀರದ ಗತ | ಪಾಂಡುರಂಗನ ರೂಪಕಂಡು ಹಿಗ್ಗುವುದೆಂದೊ | ಕುಂಡಲಿಯ ಶಯನಾ 2 ಜ್ಞಾನಾಯು ರೂಪಕನೂ | ಪ್ರಾಣಾಂತರಾತ್ಮ ನಿನಜ್ಞಾನ ಕೊಟ್ಟು ಧರಿಸೊ | ಗಾನ ಪ್ರಿಯನೇ ||ಪ್ರಾಣನಿಗೆ ಪ್ರಾಣ ಗುರು | ಗೋವಿಂದ ವಿಠ್ಠಲನೆನೀನಾಗಿ ಒಲಿಯದಲೆ | ಅನ್ಯಗತಿ ಕಾಣೇ3
--------------
ಗುರುಗೋವಿಂದವಿಠಲರು
ಇದನೆ ಪಾಲಿಸು ಜನ್ಮ ಜನ್ಮಗಳಲಿ ಪ ಮಧುಸೂದನನೆ ನಿನ್ನ ಸ್ಮರಣೆ ದಾಸರ ಸಂಗ ಅ ಪುಣ್ಯಪಾಪ ಜಯಾಪಜಯ ಕೀರ್ತಿ ಅಪಕೀರ್ತಿ ಮನ್ಯುಮೋಹಾಸಕ್ತಿ ಕಾಮಲೋಭಾ ನಿನ್ನಾಧೀನವು ಎನ್ನದಲ್ಲವೆಂದಿಗು ಪ್ರಕೃತಿ ಜನ್ಮ ಗುಣಕಾರ್ಯವೆಂಬುವ ಜ್ಞಾನವೇ ಸತತ 1 ಗುಣಕರ್ಮ ಕಾಲಗಳ ಮನಮಾಡಿ ಜೀವರಿಗೆ ಉಣಿಸುತಿಹೆ ಸುಖದುಃಖ ಘನ ಮಹಿಮನೆ ಗುಣಗಳಭಿಮಾನಿ ಶ್ರೀವನಿತಾರಮಣ ಪ್ರಯೋ ಜನವಿಲ್ಲದಲೆ ಮಾಡಿ ಜನರ ಮೋಹಿಪಿಯೆಂಬೋ 2 ಈಶ ನೀನಾದ ಕಾರಣದಿಂದ ಸುಖದುಃಖ ಲೇಶವಿಲ್ಲವು ಸರ್ವಕಾಲಗಳಲಿ ಕೇಶವ ಜಗನ್ನಾಥ ವಿಠ್ಠಲನೆ ಭಕ್ತರ ಪ್ರ ಯಾಸವಿಲ್ಲದೆ ಕಾಯ್ವಿಯೆಂಬ ಸ್ಮರಣೆ ನಿರುತ 3
--------------
ಜಗನ್ನಾಥದಾಸರು