ಒಟ್ಟು 5363 ಕಡೆಗಳಲ್ಲಿ , 130 ದಾಸರು , 3529 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸಿ ವೃಷ್ಟಿಗರಿ ಕಮಲನಯನನರರಪರಾಧಗಳ ನೋಡದಲೆ ವೇಗದಲಿ ಪ ತ್ರಿವಿಧ ಸಾಧನ ಪೂರ್ತಿಪದು ||ಅನ್ನದಿಂದಲೆ ಅಭಿವೃಧ್ದಿ ಆಹದರಿಂದ ಪ-ರ್ಜನ್ಯದಿಂದಲಿ ಅನ್ನ ಜನಿಸುವ ಕಾರಣದಿ 1 `ಭೀಷ್ಮಾಸ್ಮಾದ್ವಹತಿ ಪವತಿ` ಎಂಬೋಕ್ತಿಯಲಿಈ ಸಮಸ್ತಮರರೂ ನಿನ್ನ ಭಯದಿ ||ಬ್ಯಾಸರವೆ ತಮ ತಮ್ಮ ವ್ಯಾಪಾರಗಳ ಮಾಡಿಪೋಷಿಸುವರು ಜಗವ ಪ್ರೀತಿಯಿಂದ 2 ಸುರರು ನಿಮಿತ್ಯ ಮಾತ್ರಪರಮ ಗುಣಸಾಂದ್ರ ಹೇ ಕರುಣಾಬ್ಧಿ ಚಂದ್ರ 3 ನರನೊಬ್ಬ ಪ್ರಭು ತನ್ನ ಪರಿಚಾರಿಗಳನ್ನು ಪರಮ ಅಭಿಮಾನದಲಿ ಪರಿಪಾಲಿಪ ||ಸುರರ ಬ್ರಹ್ಮಾದಿಗಳ ದೊರೆಯ ನಿನಗೀ ಮಾತುಸರಿಹೋದರೆ ವಚನ ಸಲಿಸು ಕೃಪೆಯಿಂದ 4 ಆವಾವ ಸಾಧನದಿ ಆವ ಸುಖವೈದುತಿರೆದೇವ ನಿನ್ನಯ ಕೀರ್ತಿ ಬರುವದೆಂತೋ ||ದೇವ ದೇವೇಶ ಗುರು ವಿಜಯ ವಿಠಲರೇಯ ಸಾವಧಾನದಲಿತ್ತು ಪರಿಪಾಲಿಪುದು ಬಿನ್ನಪವ 5
--------------
ಗುರುವಿಜಯವಿಠ್ಠಲರು
ಕಾಯಿ ಕಾಯಯ್ಯಾ ಭಜಕರ ಪ್ರಿಯಾ ಪ ಕಾಯ ಸುರಾವಳಿ ಸಾಹ್ಯನಿ ಶ್ರೀಕರ | ಗ್ರಾಹಿ ಪರಾತ್ಪರ ಪಾಹಿ ಮುಕುಂದಾ 1 ಅಂಬರವರ್ಣ ಚಿದಂಬರ ವಾಸ ಪೀ ತಾಂಬರಧರ ವಿಶ್ವಂಬರ ಕೃಷ್ಣಾ 2 ವಿಹಂಗ ತುರಂಗ ||ಭು|| ಜಂಗ ಶಯನ ಮಾತಂಗ ಸುವರದಾ 3 ಶ್ರೀಧರ ಭೂಧರ ರಿಪು ನಿಜ ಸೋದರ | ಶ್ರೀ ದಾಮೋದರ ದೇವಾ 4 ಅತ್ರಿವರದ ಲೋಕತ್ರಯ ಜಿತ | ಮಿತ್ರ ಸುತೇಜ ವಿಚಿತ್ರ ಚರಿತ್ರಾ 5 ಜಂಬುವಿಭೇದನ ಕುಂಭಜ ಶಂಭು ಸ್ವ ಯಂಭು ಮುಖಾರ್ಚಿತ ಕುಂಭಿನಿ ರಮಣಾ6 ಸುಂದರ ನಿಜಗುಣ ಮಂದಿರ ಕೇಶವ | ತಂದೆ ಮಹಿಪತಿ- ನಂದನ ಪ್ರಾಣಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗಜಮುಖ ಗಣಪನಂಬುಜಪಾದಕ್ಕೆರಗುವೆ ನಿಜವಾದ ವರವ ನಾ ಬೇಡಿಕೊಂಬೆ ಅಜನರಸಿಗೆ ಅತಿ ಭಕ್ತಿಂದೆ ಭಜಿಸುವೆ ತ್ರಿಜಗವಂದಿತನ ಕತೆಯ ಪೇಳ್ವೆನು 1 ಗೋಕುಲದೊಳಗೆಲ್ಲ ಗೋಪಾಂಗನೇರು ಕೂಡಿ ಏಕವಾಗಿ ಮಾತನಾಡಿಕೊಂಡು ತಾವು ಅ- ನೇಕ ಸಂಭ್ರಮದಿಂದ ಆಡಿ ನೀರಾಟವ ಬೇಕಾದೂಟವನುಂಡು ಬರುವೋಣೆಂದು 2 ಘೃತ ಪರಮಾನ್ನವು ಚಕ್ಕುಲಿ ಗಿಲುಗಂಜಿ ಗುಳ್ಳೋರಿಗೆ ಬುಂದ್ಯ ಭಕ್ಷ್ಯ ಮಂಡಿಗೆ ಫೇಣಿ ಬುತ್ತಿ ಚಿತ್ರಾನ್ನ ಹಪ್ಪಳ ಸಂಡಿಗಂಬೋಡುಪ್ಪಿನಕಾಯಿಗಳು 3 ಕೇಸರಿ ಕುಂಕುಮರಿಷಿಣ ಅಚ್ಚಮಲ್ಲಿಗೆ ಶಾವಂತಿಗೆ ಸರವು ದಿವ್ಯ ಕರ್ಪೂರದಡಿಕೆ ಯಾಲಕ್ಕಿ ಎಲೆಯ ಸುಣ್ಣ ಪತ್ರೆ ಲವಂಗ ತಬಕಿಲೆ ತಂದರು 4 ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ ಅರಳು ಮಲ್ಲಿಗೆ ಸಂಪಿಗೆ ಮುಡಿದು ದಿವ್ಯ ಕೊರಳ ಕಟ್ಟಾಣಿ ಸರಿಗೆ ಚಂದ್ರಹಾರ ಪು- ತ್ಥಳಿ ಪಚ್ಚಪದಕಗಳ್ಹೊಳೆಯುತಲಿ 5 ಕಡಗ ಕಂಕಣ ದ್ವಾರ್ಯ ನಾಗಮುರಿಗೆ ವಂಕಿ ಬಿಡಿಮುತ್ತಿನ ಗೊಂಡ್ಯ ಬಾಜುಬಂದು ದೊಡ್ಡ ವಾಲೆ ಸರಪಳಿ ಮುತ್ತು ಬು- ಗುಡಿ ಚಂದರ ಬಾಳ್ಯ ಹೊಳೆಯುತಲಿ 6 ಮುದ್ದು ಮೋರೆಗೆ ತಕ್ಕ ಮುಕುರ್ಯ ಬುಲಾಕನಿಟ್ಟ ವ- ಜ್ರದ್ಹರಳು ಬಲಮೂಗಿನಲಿ ದಿವ್ಯ ತಿದ್ದಿ ಮುಂಗುರುಳು ಮುತ್ತಿನ ಬೊಟ್ಟು ಕುಂಕುಮ ಪದ್ಮದ್ಹೂವಿನ ಕುಬುಸಗಳ ತೊಟ್ಟು 7 ಹರದಿಯರೆಲ್ಲರು ಪರಮ ಸುಭ್ರಮದಿಂದ ಜರದ ಪೀತಾಂಬರ್ವಜ್ಜರದ ಪಟ್ಟಿನಿಟ್ಟು ಪರಿ ಬಣ್ಣ ಸೀರೆಗಳುಟ್ಟು ಕಾಲ- ಲಿ ರುಳಿ ಕಾಲುಂಗರ ಗೆಜ್ಜೆ ಪೈಜಣವು 8 ಚೆಲ್ವೆಯರೆಲ್ಲರು ಉಲ್ಲಾಸದಿಂದಲಿ ಘುಲ್ಲು ಘಲ್ಲೆಂದು ಹೆಜ್ಜನಿಡುತ ತಾವು ಮಲ್ಲೆ ಮಲ್ಲಿಗೆ ಪುನ್ನಾಗ ಸಂಪಿಗೆ ತೋಟ ಅಲ್ಲಲ್ಲೆ ನಿಂತು ನೋಡುತ ಬಂದರು 9 ಕುಂದ ಮಂದಾರ ಸುಗಂಧಿಕ ದವನವು ಬಂಗಾರದಂಥ ಕ್ಯಾದಿಗೆಯಮಲ ಚೊಕ್ಕ ದುಂಡುಮಲ್ಲಿಗೆ ಪಾರಿಜಾತ ತಾವರೆಮೊಗ್ಗು ಚೆಂದ ಚೆಂದದ ಶಾವಂತಿಗೆ ವನವು 10 ಹತ್ತಿ ಆಲದ ಮರ ಅಡಕೆ ತೆಂಗಿನ ಮರ ಅ- ಶ್ವತ್ಥ ಕಪಿತ್ಥ ಕಿತ್ತಳೆ ಹಲಸು ನೋಡು- ತ್ತತ್ತಿ ದ್ರಾಕ್ಷಿ ನೀರಲ ನಿಂಬೆ ದಾಳಿಂಬ್ರ ಪಕ್ವಾದ ಜಂಬು ಸೀತಾಫಲವು 11 ಎಲೆದೋಟದೊಳಗೆ ಯಾಲಕ್ಕಿಗೊನೆಯು ನೋಡೆ ಕಳಿತ ಮಾವಿನ ಹಣ್ಣು ಕದಳೀ ಫಲ ಬೋರೆ ಶ್ರೀತುಳಸಿ ವನಗಳಲ್ಲೆ ಅರಿಷಿಣಂಜೂರಿ ಔದುಂಬ್ರ ಫಲ 12 ಚಕೋರ ಚಾತಕ ಗಿಳಿ ಚಕ್ರವಾಕ ಪಕ್ಷಿ ಗಿಳಿಹಿಂಡು ಗಂಡೆರಳೆ ಗರುಡ ಹಂಸವು ನೋಡೆ ಹರಿ ಬ್ರಹ್ಮ ತಂದೆ ಮಕ್ಕಳು ಏರೋವಾಹನವು 13 ಕಸ್ತೂರಿಮೃಗ ಪುನುಗಿನ ಬೆಕ್ಕು ಪಾರ್ವಾಳ ಜಕ್ವಕ್ಕಿ ಕೊಳಲ್ಹಕ್ಕಿ ಸಾರಂಗವು ಚಾರಿ ಕುಕ್ಕುಟ ಭೈರುಂಡ ಎಡಖಗ ಬಲಕ್ಕಾಗಿ ಕೊಟ್ಟವು ಶಕುನ ಜಲಕ್ರೀಡೆಗೆ 14 ಕಾಳಿಮರ್ದನ ಕೃಷ್ಣ ಹಾರಿದ ಮಡುವಿದು ಕಾಳಿಂಗನೋಡಿಸಿ ಕಳೆದ ವಿಷ ಕೆಟ್ಟ ನೋಡೆ ಅಮೃತಕೆ ಮಿಗಿಲಾಗಿದೆ ಈ ಜಲ ಏನು ಪುಣ್ಯ ಮಾಡಿದ್ದಳೊ ಯಮುನಾ 15 ನೀಲ ಮಾಣಿಕ್ಯ ಮುತ್ತು ಕೂಡಿಸಿದಂತೆ ತ್ರಿವೇಣಿ ಆ- ದಳು ತಾ ಪ್ರಯಾಗದಲಿ ತ್ರಿವೇಣಿ ಭಾಗೀರಥಿ ಸರಸ್ವತಿ ಕೂಡಿ ಸಂಗಮಳಾಗಿ ಪೋಗೋಳು ಕಾಶಿ ಪಟ್ಟಣಕೆ 16 ಕಮಲಸಖನ ಪುತ್ರಿ ಕಾಮಿತ ಫಲಕೊಟ್ಟು ವರುಣನರ್ಧಾಂಗಿ ನೀ ವರವ ಕೊಡೆ ತಾಯೆ ಯಮಧರ್ಮರಾಯನ ಭಗಿನಿ ನಿಮ್ಮ ಸ್ನಾನ- ಫಲಕೊಟ್ಟು ಪಾಲಿಸೀಗೆಂದೆನುತ 17 ನೋಡುತ ನಗುತ ಮಾತಾಡುತ ನಿಂತರು ಓಡುತಾವೆ ಜಲ ಸೆಳವಿನಿಂದ ಆಹ ಮಾಡುವೋಣ್ಹ್ಯಾಗೆ ಸ್ನಾನವ ನಾವು ಎನುತಲಿ ಜೋಡಿಸಿ ತಮ್ಮ ್ಹಸ್ತ ಮುಗಿದರಾಗ 18 ಉಟ್ಟ ಸೀರೆಗಳನು ಬಿಟ್ಟು ಕುಪ್ಪಸ ಕಟ್ಟಿ ಇಟ್ಟರು ಉಸುಕಿನ ಮಿಟ್ಟಿಯಲ್ಲೇ ತಾವು ಮಿತ್ರೆಯರೆಲ್ಲ ತಮ್ಮ ಸ್ತನಗಳ್ಹಿಡಕೊಂಡು ಥಟ್ಟನೆ ಇಳಿದರು ನದಿಯೊಳಗೆ 19 ವಾರಿಗೆ ಗೆಳೆತೇರು ವರ ಮೋಹನಾಂಗೇರು ಮೋರೆಗೆ ಅರಿಷಿಣ ಕುಂಕುಮ್ಹಚ್ಚಿ ತಮ್ಮ ನೀರಜಾಕ್ಷಿಯರೆಲ್ಲ ನಿರ್ಮಲವಾಗಿದ್ದ ನೀರೊಳು ನಿಂತು ಮೈ ತೊಳೆದರಾಗ 20 ಭಾರಿ ಸೆಳವಿನೊಳು ಬತ್ತಲೋಲ್ಯಾಡುತ ಸಾರಸಮುಖಿಯರು ಸರಸದಿಂದ ಚೆಲ್ಲೆ ದ್ವಾರ್ಯ ಕಂಕಣಕರ ಬೊಗಸೆಲಿಂದ ನೀರು ತುಂಬಿ ಚೆಲ್ಲ್ಯಾಡುತಲಿ 21 ಸರ್ಪನಂಥ ಹೆರಳೊಲಿವುತ ನೀರೊಳು ಮುತ್ತಿನ ಸರಪದಕ್ಹೊಳೆಯುತಲಿ ಬುಕ್ಕ್ಹಿಟ್ಟು ಗಂಧ ಮಲ್ಲಿಗೆ ಪಾರಿಜಾತವು ತೆಪ್ಪದಂದದಲಿ ತೇಲಾಡುತಿರೆ22 ಅಂಬುಜಮುಖಿಯರು ಸಂಭ್ರಮದಿಂದಲಿ
--------------
ಹರಪನಹಳ್ಳಿಭೀಮವ್ವ
ಗೆಲಿಯಬಲ್ಲವರಾರು ಮೂಜಗದಿ ಪಣೆಯ ಬರಹ ಗೆಲಿಯಬಲ್ಲವರಾರು ಮೂಜಗದಿ ಪ ಗೆಲಿಯಬಲ್ಲವರಾರು ಮೂಜಗದೊಳಗೆ ಬಲ್ಲಿದರೆಂಬರೆಲ್ಲರು ಜಲಜಪೀಠನ ಲಿಪಿಗೆ ಸಿಲ್ಕಿ ತೊಳಲಿ ಬಲಳಿದರ್ಹಲವು ಪರಿಯಲಿ ಅ.ಪ ಒಂದೇ ಧರ್ಮದಿಗೂಡಿ ತಾ ನಡೆದ ವಿಕ್ರಮನೆಂಬುವ ಒಂದೆ ಕೊಡೆಲಿಡೀಭುವನವಾಳಿದ ಸದ್ಧರ್ಮ ತನದಿಂ ದೊಂದೆ ಆ ಸುಮರೂಪ ಪ್ರಜರ ಪಾಲಿಸಿದ ಉದ್ದಂಡನೆನಿಸಿದ ಒಂದು ಪಾಪಾಚರಣೆಗೈಯದೆ ಒಂದು ಬಿಡಿದಖಿಲ್ವಿದ್ಯವರಿದ ಒಂದು ಅರಿಯದೆ ತನ್ನ ಕೈಕಾಲು ಒಂದೇ ಮಾತಿಗೆ ಕಳೆದುಕೊಂಡ 1 ಎರಡುಹೊತ್ತು ಸತ್ಯಮಂ ಬಿಡದ ಸುಚಿಂತದಿರುವ ಎರಡನೇ ಗುಣ ಸ್ವಪ್ನದರಿಯದ ನಳಚಕ್ರವರ್ತಿ ಎರಡು ತಿಳಿಯದೆ ಜೂಜನಾಡಿದ ಮಹವಿಪಿನಕೈದಿದ ಎರಡು ಮಕ್ಕಳ ವನದಿ ಅಗಲಿದ ಎರಡನರಿಯದೆ ಮಲಗಿದರಸಿಯ ಎರಡನೆಬಗೆದಡವಿಯಲಿ ಬಿಟ್ಟು ಎರಡನೇರಾಯನಶ್ವ ತಿರುವಿದ 2 ಮೂರು ಜಗ ಅರೆಲವದಿ ತಿರುಗುವ ದಿನದಿನವುಬಿಡದೆ ಮೂರುಮೂರ್ತಿದರ್ಶನವ ಪಡೆಯುವ ಆ ಪರಮಪಾವನ ಮೂರು ಕಾಲದ ಜ್ಞಾನ ಬಲ್ಲವ ನಾರದನೆಂಬುವ ಮೂರುಮಂದಿ ಶಕ್ತಿಯರಿಗೆ ಮೂರು ಬಟ್ಟೆಯ ಸುದ್ದಿ ಪೇಳಿ ಮೂರು ಮೂರ್ತಿಗಳುಪಾಯನರಿಯದೆ ಮೂರಿಪ್ಪತ್ತು ಮಕ್ಕಳ್ಹಡದ 3 ನಾಲ್ಕುಯುಗ ಪ್ರಮಾಣಗಳ ತಿಳಿದ ಬ್ರಹ್ಮನುಬಿಡದೆ ನಾಲ್ಕುವೇದಗಳ್ಹಸ್ತದೋಳ್ಪಿಡಿದು ವಿಧವಿಧದಿ ಎಂಭತ್ತು ನಾಲ್ಕುಲಕ್ಷಜೀವರಾಶಿಗಳ ಬರಿದೆ ಉತ್ಪತ್ತಿಗೈದು ನಾಲ್ಕುಭುಜನ ಸುರನೆಂದೆನಿಸಿ ನಾಲ್ಕು ವಿಧ ಮತಿವಂತನಾದವ ನಾಲ್ಕು ಒಂದು ಮುಖ ಮೊದಲಿಗಿರ್ದನು ನಾಲ್ಕೆ ಮುಖದವನೆನಿಸಿಕೊಂಡು 4 ಐದುಬಾಣನಪಿತನಸಖನಾದ ಉರಿನೇತ್ರ ಬಿಟ್ಟು ಐದುಬಾಣನ ಭಸ್ಮ ಮಾಡಿದ ಅಪಾರ ಶಂಭೋ ಐದು ಒಂದು ಮುಖದವನ ತಾ ಪಡೆದ ಹರಿಕರುಣದಿಂದ ಐದು ಒಂದು ಮುಖದವನಿಂ ತಾರಕ ನೈದುವಂದುದಲ್ಲೆ ಸೀಳಿಸಿ ದೈದುತತ್ವಕಾಲಯೆನಿಸಿದ ಐದುಮುಖಸ್ಮಶಾನ ಸೇರಿದ 5 ಆರು ಎರಡೈಶ್ವರ್ಯಗಳಲೊಳ ವೈಕುಂಠನಾಯಕ ಆರು ಎಂಟುಲೋಕಗಳ ಪರಿಪಾಲ ಬಿಡದೇಳು ಇಪ್ಪತ್ತು ಆರುಕೋಟಿ ಅಮರಾದಿಗಳ ಮೂಲ ಮಹಮಂತ್ರ ಜಾಲ ಆರುನಾಲ್ಕು ಭುಜನ ಮೊರೆ ಕೇ ಳಾರುನಾಲ್ಕು ಶಿರನ ವಧಿಸಿದ ಆರುನಾಲ್ಕರಗಧಿಕನೆನಿಸಿ ಆರುನಾಲ್ಕವತಾರ ತಾಳಿದ 6 ಆರಿಗಾದರು ಬಿಡದೀ ಬರವಣಿಗೆ ಬಿದ್ದಂತೆ ಫಲಿಸಿತು ತೀರಲಿಲ್ಲದಂತಂಥ ಹಿರಿಯರಿಗೆ ಸಾಧ್ಯದಪ್ಪಿ ಮಹ ಘೋರ ಬಡಿಸಿತು ಸರ್ವ ಶಕ್ತರಿಗೆ ಬ್ರಹ್ಮನಸುಡಗಿ ವಾರಿಜನು ಬರೆದ ಬರೆಹ ಮೀರಿ ನಡೆದೇನೆಂದರಿನ್ನು ಸಾರಮೋಕ್ಷಕ್ಕಧಿಪ ನಮ್ಮ ಧೀರಪ್ರಭು ಶ್ರೀರಾಮ ಬಲ್ಲ 7
--------------
ರಾಮದಾಸರು
ಜೈ ಭೀಮ ಜರೆಸುತನ್ವೈರಿ ಜೈ ಭೀಮ ಜಯ ಜಯ ಜಯ ಮುಖ್ಯಪ್ರಾಣ ಸೋಮ ಕುಲದೊಳುದ್ಭವಿಸಿ ಗೀರ್ವಾಣ ಬಲು ಬಲುಮೆಯಿಂದಲಿ ದುರ್ವಾದಿಗಳನ್ನೆ ಮೂತಿಂದ್ವೊತ್ತಿ ಸಲಹೆನ್ನ ಶ್ರೀಮ- ದಾನಂದತೀರ್ಥಮುನಿ ಪ ರೋಮ ರೋಮಕೆ ಕೋಟಿಲಿಂಗ ಜಗತ್ಪ್ರಾಣಿಗಳಿಗೆ ಅಂತರಂಗ ಲಂಕೆನಾಳ್ವೋ ಭೂಪತಿಗತಿ ಭಂಗಬಡಿಸಿ ಕ್ಷೋಣಿಸುತೆಗೆ ಉಂಗುರಿಟ್ಟು ರಾಮರಲ್ಲೆ ಪ್ರೇಮ- ವಾರ್ತೆಯ ತಂದ ಪ್ರಾ- ಣೇಶ ದಯವಾಗೊ 1 ಮಧುವೈರಿ ಮಾತುಳನಾಗೆ ಬಂದು ಮಗಧ ಮುತ್ತಿಗೆ ಹಾಕೆ ಬ್ಯಾಗ ವೃಕೋದರ ಛಲವ್ಹಿಡಿದು ತಾ ಹೋಗೆ ಅಲ್ಲೆ ದ್ವಿಜನ್ವೇಷಧರಿಸ್ವಾಸುದೇವ ವಾಸವಿ ಕೂಡಿ ಮಗಧರಾಜನ ಮ- ರ್ಮಗಳಿಂದ ಸೀಳಿದ್ಯೊ 2 ಹಾಟಕಾಂಬರನಲ್ಲಿ ಭಕ್ತರೆಂದು ಅರಿಯದೆ ಅಂತಕನ ಪುತ್ರ(ನ) ಜೂಜಿನಾಟ(ದಿ) ಸೋಲಿಸಿ ಸೆಳೆಯೆ ವಸ್ತ್ರ ಕೃಷ್ಣೆ ನೋಟದಿ ಭಸ್ಮ ವಿಚಿತ್ರ ಸವ್ಯಸಾಚಿ ಸಹಿತವಾಗ್ವಿರಾಟ- ವರ್ಗದಿ ಸತಿಗೆ ಕಾಟ ಕಳೆದ್ಯಮ- ಪುರಿಗೆ ದಾಟಿಸ್ದ್ಯೋ ಕೀಚಕನ 3 ಕಳೆದÀು ಅಲ್ಲಜ್ಞಾತವಾಸ ಬಂದು ಖಳರೊಳಗಧಿಕ ದುಶ್ಶಾಸ(ನ) ಅವನ ಕರುಳ ಬಗೆಯಲತಿ ರೋಷ ಕಾಲಕ್ಕೊದಗಲು ನರಹರಿ ಆ- ವೇಶ ಕಂಡು ಸುರರಸುರರ ಸೈನ್ಯ ಜರಿದು ಹಿಂದಕೆ ನಿಲ್ಲೆ ರಣಧೀರ- ಗೆಣೆಯಿಲ್ಲ ಪರಮ ಪರಾಕ್ರಮ 4 ಸಕಲ ಜೀವರಿಗಾಧಾರಕನೊ ಭಾರತಿ ಪ್ರಾರಂಭಕ್ವೊಂದಿತನೊ ಮಧ್ವಮತ ಶಾಸ್ತ್ರಗಳ ಉದ್ಧಾರಕÀನೊ ತ್ರಿಗುಣ ಜೀವನು ಸಾರಪ್ರೇರಕನು ವಾಯು ಸಕಲ ಸುರರೊಡೆಯ ಭೀಮೇಶ ಕೃಷ್ಣನಲ್ಲಿ ಭಕುತಿ ಜ್ಞಾನವ ದಿವ್ಯ ಮುಕುತಿ ಮಾರ್ಗವ ತೋರಿದಿ 5
--------------
ಹರಪನಹಳ್ಳಿಭೀಮವ್ವ
ತಿಳಿಯ ಬಲ್ಲೆನೆ ನಾನಿನ್ನ ವೆಂಕಟರಮಣ ಪ ತಿಳಿಯ ಬಲ್ಲೆನೆ ನಿನ್ನ ನಳಿನಭವಾದ್ಯರಿ ಗಳವಡಿಯದ ಪಾದ ಪಾದ ಭಜನೆ ಬೇಡಿದೆ ಕೃಪಾಸಿಂಧು ನಂಬಿದೆ ನಿನ್ನ ಸುಜನವಾರಿಧಿ ಶರದೇಂದು ಪಾಲಿಸು ಎನ್ನ ನಿಜವಾಗಿ ಪೇಳುವೆ ವೃಜಿ£ಮರ್ದನನೆಂದು 1 ಎಡಬಲದಲಿ ನಿನ್ನ ಮಡದೇರ ಒಡಗೂಡಿ ಒಡಲನಾಮಕವಾಗಿ ಒಡಲೊಳಿದ್ದನ್ನವ ವಡಬಾಗ್ನಿಯೊಳುನಿಂತು ಜಡÀಜಸಂಭವಸುರ ಗಡಣ ಕೆ ನೀಡುತ್ತಾ ಒಡೆಯನೆನಿಸಿ ಭವ ನಿತ್ಯ ಒಡೆಯ ಪುಷ್ಕÀರಣಿಕೂಲನಿಲಯ ಜಗ ದ್ವಡೆಯ ಎನ್ನನು ಪೊರೆ ತಡವ್ಯಾಕೊ ಸಿರಿಲೋಲ2 ಸಿದ್ಧರಾಮಶೆಟ್ಟಿ ಶುದ್ಧಸ್ವರೂಪನೆ ಮುದ್ದುಮೋಹನ ಮುಖಕೆ ತಿದ್ದಿತೀಡಿದನಾಮ ಶುದ್ಧ ಭಕ್ತರನ್ನೆಲ್ಲ ಮುದ್ದುಗೊಳಿಸುವಂಥ ಮುದ್ದಾದ ಮುಖದಲ್ಲಿ ಎದ್ದು ಕಾಣುವ ನಗೆ ಪೊದ್ದುಕೊಂಡಿಹ ನಾನಾ ಆಭರಣದಿಂದಲಿ ಎದ್ದು ಬರುವ ನಿನ್ನ ಪ್ರದ್ಯೊತನಿಭ ಮೂರ್ತಿ ವಾಸುದೇವ ಮದ್ಹøದಯಗತಬಿಂಬ ಸಿದ್ಧಗುರುಜಗನ್ನಾಥ ವಿಠಲರೇಯ 3
--------------
ಗುರುಜಗನ್ನಾಥದಾಸರು
ದಯಕಿಂತ ಗುಣವಿಲ್ಲ ನರಗೆ ದಯಕೆ ನಿರ್ಬಂಧವಿಲ್ಲಣ್ಣ ಜಗದಿ ಪ ಹೃದಯ ಮಂದಿರದಲಿ ನೆಲೆಸಿಹ ದಯೆಯು ಮೃದು ಮಳೆಹನಿ ತೆರದಲಿ ಸುರಿಯುವುದು ಅ.ಪ ಬಾರಿಯ ಸ್ಥಾನಕೆ ಈ ದಯೆ ಗುಣವು ಭಾರಿಯ ಶಕುತಿಯ ನೀಡುವುದು ಚಾರು ಕಿರೀಟವ ಮೀರಿದ ಕಾಂತಿಯ ಬೀರುವುದೀ ದಯೆ ನರಪತಿಗೆ 1 ರಾಜನ ದಂಡವ ನೋಡುತ ನೋಡುತ ಈ ಜಗವೆಲ್ಲವು ನಡುಗುವುದು ರಾಜನ ಕಾರ್ಯಗಳೆಲ್ಲಕೆ ದೈವಿಕ ತೇಜವ ಕೊಡುವುದು ದಯೆ ಗುಣವು 2 ನಶ್ವರವೆಲ್ಲವು ಪ್ರಾಕೃತವು ಈಶ್ವರ ಧರ್ಮವೆ ಈ ದಯೆಯು ಶಾಶ್ವತ ಧರ್ಮಗಳೆಲ್ಲವು ದಯದಿ ಮಿಶ್ರಿತವಾದರೆ ಸುಖಮಯವು 3 ಪರಮ ಪುರುಷ ದಯೆ ತೋರದಿರೆ ವರಗತಿ ಪಡೆಯಲು ನರಗಳವೆ ಕರುಣೆ ಪ್ರಸನ್ನನ ಮೊರೆ ಹೋಗದೆ ನೀ ಅರಿಯಲು ಸಾಧ್ಯವೆ ಕರುಣೆಯ ಬೆಲೆಯ 4
--------------
ವಿದ್ಯಾಪ್ರಸನ್ನತೀರ್ಥರು
ದೃಷ್ಟ ಅದೃಷ್ಟದ ಬಲವು ನೊಡಿ ವಿಸ್ತಾರ ಸೃಷ್ಟಿಯಲಿ ಮುಟ್ಟಿ ಮುದ್ರಿಸಿದ ವಾಕ್ಯಂಗಳು ಕೇಳಿ ಆತ್ಮನಿಷ್ಠ ಜನರು 1 ದೃಷ್ಟಿ ಪುರುಷನ ಸೈನ್ಯಗಳು ಕೇಳಿ ಚಿತ್ತದಲಿ ಮಾನವರು ಅಜ್ಞಾನವೆಂಬಾಶ ಗತಿಯು ಮಾಯಾಮೋಹಕವೆಂಬ ಸುತರು 2 ಬಂಟ ಜನರು ಪ್ರಪಂಚ ಸೈನ್ಯಾಧಿಪತಿ ಸುಖ ದು:ಖದಳ ಭಾರಗಳು3 ಚಂಚಲವಂಚಲಶ್ವಗಳು ಅಹಂ ಮಮತಾ ಗಜಗಳು ಅವಸ್ಥೆಗಳು ಕಾಲಾಳುಗಳು ಮನ್ನೆವಾರರು ಕರಣಗಳು4 ಮೆರೆಯುತಿಹರು ಪಂಚೇಂದ್ರಿಯಗಳು ಸೂಸುತಲಿಹ ಬೇಹಿನವರು ಮೊದಲಾದ ದಶವಾಯುಗಳು 5 ಸುತ್ತಲಿಹ ಪರಿವಾರಗಳು ಸಪ್ತವ್ಯಸನ ಭೂಷಣಂಗಳು ಪಂಚಾಗ್ನಿಗಳು ಪಂಜಿನವರು ಅಷ್ಟಮದವು ಕಾವಲಿಗಳು 6 ಮೂರು ಪರಿಯ ತ್ರಿಗುಣಗಳು ಸೈನ್ಯದ ಪಾರುಪತ್ಯದವರು ಜಾಗ್ರಸ್ವಪ್ನ ಸುಷುಪ್ತಿಗಳು ಛತ್ರ ಚಾಮರ ಭೂಷಣಗಳು 7 ಸಪ್ತಧಾತುದ ಸುಖಾಸನವು ಪಂಚಾತ್ಮಗಳು ನಿಶ್ಯಾನಿಗಳು ತಾಮಸವೆಂಬ ಭೇರಿಗಳು ಅಹಂಕಾರವು ಕಹಳೆಗಳು 8 ಪರಿ ಚಂದ ಚಂದದಲಿ ಇಳಿದಿಹ ಸೈನ್ಯ ಭಾರಗಳು 9 ಜನನ ಮರಣದ ಮಂಟಪವು ಕಟ್ಟಿಹರು ವಿಸ್ತಾರದಲಿ ಚಿಂತಿ ಮುಪ್ಪಳಿಯು ಭ್ರಾಂತಿಗಳಲಿ ಸ್ಥಿತಿ ಸ್ಥಳಲಿಹ ದ್ವಾರಗಳು 10 ದುರ್ಮೋಹ ಬಲದಲಿ ತನುವೆಂಬ ದುರ್ಗಬಲದಲಿ ಕದನ ಮಾಡುವರನುದಿನದಲಿ 11 ಇನ್ನು ಅದೃಷ್ಟದ ಬಲವು ಕೇಳಿ ಚೆನ್ನಾಗಿ ಮನದಲಿ ಸಮ್ಯಜ್ಞಾನೆಂಬಾಶಗತಿಯ ಜ್ಞಾನ ವೈರಾಗ್ಯಸುತರು 12 ಬಂಟ ಜನರು ಬೋಧ ಸೈನ್ಯಾಧಿಪತಿಯ ದೃಢ ನಿಶ್ಚಯ ದಳ ಭಾರಗಳು 13 ನಿರ್ಮಳ ನಿಶ್ಚಳಶ್ವಗಳು ವಿವೇಕವೆಂಬ ಗಜಗಳು ಮಗುಟ ವರ್ಧನರು 14 ಶೂರತನದ ಪ್ರರಾಕ್ರಮರು ಸ್ಮರಣೆ ಚಿಂತನೆ ಧ್ಯಾನಗಳು ಸೂಸುತಲಿಹ ಬೇಹಿನವರು ಯೋಚನೆ ಅವಲೋಕನೆಗಳು 15 ಸುತ್ತಲಿಹ ಪರಿವಾರಗಳು ರತಿಪ್ರೇಮ ಸದ್ಭಾವನೆಗಳು ಲಯ ಲಕ್ಷ್ಯಗಳು ಪಂಜಿನವರು ಮೌನ್ಯ ಮೋನವೆ ಕಾವಲಿಗಳು 16 ನಾದ ಬಿಂದು ಕಳೆಯಗಳು ಸೈನ್ಯದ ಪಾರುಪತ್ಯವರು ಅನಿಮಿಷ ಛತ್ರ ಚಾಮರವು ಏಕಾಕಾರವೆ ನಿಶ್ಯಾನಿಗಳು 17 ಅನುಭವ ಸುಖಾಸನಗಳು ತೂರ್ಯಾವಸ್ಥೆಯ ಭೂಷಣಗಳು ಆನಂದಮಯವೆ ಭೇರಿಗಳು ನಿಶ್ಚಿಂತವೆ ಕಹಳೆಗಳು 18 ಸುಜ್ಞಾನದ ಮೊದಲಾದ ಅಂಗಡಿಯು ಇಳಿದಿಹ ಸಾಲವರಿಯಲಿ ಚಂದ ಚಂದ ಶೃಂಗಾರದಲಿ ಇಳಿದಿಹ ಸೈನ್ಯ ಭಾರಗಳು 19 ಸದ್ಗತಿ ಮುಕ್ತಿ ಮಂಟಪವು ಹೊಳೆಯುತಿಹದು ಸ್ಯೆನ್ಯದೊಳಲಿ ಶೋಭಿಸುವದು ಶೃಂಗಾರದಲಿ 20 ನಿರಾಶವೆಂಬ ಪ್ಯಾಟಿಯಲಿ ಇಳಿದಿಹದು ಸಂತೋಷದಲಿ ದೃಷ್ಟಿ ಪುರುಷನ ಅಟ್ಟಲೆಯ ಕೇಳಿ ನಡೆಯಿತು ಮಾರ್ಬಲವು 21 ಧಿಮಿ ಧಿಮಿಗುಡುತ ನಾದ ಮಾಡಿದರಾನಂದಲ ಗ್ಹೇಳೆನಿಸುತ್ತ ಕಹಳೆಗಳು ಭೋರ್ಗರೆಯುತಲಿ ನಡೆದರು 22 ನಡೆವರು ಅತಿಶಯ ಶೀಘ್ರದಲಿ ಬಾಣ ಬಾಣಗಳು ಮಾಡುತಲಿ ದಣಿದಣಿಸುತಲಿ ನಡೆದರು 23 ತುಂಬಿದ ಸೈನ್ಯ ಭಾರಗಳು ಉಬ್ಬು ಕೊಬ್ಬಿ ನಡೆದವು ನಗುತ ಗೆಲವಿಂದಶ್ವಗಳು ಏರಿ ಹಾರಿಸುತ ನಡೆದರು 24 ಮಗುಟ ವರ್ಧನರು ನಡೆದರು ಅತಿ ಹರುಷದಲಿ ಕಾಲಾಳುಗಳು ಮುಂದೆ ಮಾಡಿ ನಡೆಯಿತು ದಳ ಭಾರಗಳು 25 ಶೂರತನದ ಪರಾಕ್ರಮರು ಮುಂದಾಗಿ ಬ್ಯಾಗೆ ನಡೆದರು ಅಬ್ಬರಿಸುತಲಿ ಮಾರ್ಬಲವು ನಡೆಯಿತವರ ಸೈನ್ಯ ಮ್ಯಾಲೆ 26 ವಿವೇಕವೆಂಬ ಗಜಗಳು ವಾಲ್ಯಾಡುತಲಿ ನಡೆದರು ರಗಡಿಸುತ ಡೋಲಿಸುತಲಿ ನಡೆದರು ಪರಚಕ್ರ ಮ್ಯಾಲೆ 27 ನಡೆವ ಮಾರ್ಬಲದ ಧೂಳಿಗಳು ಮುಸುಕಿತು ಸುವಾಸನೆಗಳು ಗರ್ಜಿಸುವ ಧ್ವನಿಗೇಳಿ ಹೆದರಿತು ಶತ್ರು ಮಾರ್ಬಲವು 28 ಕಂಡು ದೃಷ್ಟರ ಸೈನ್ಯದವರು ಸಿದ್ದವಾದರು ಸಮಸ್ತದಲಿ ತಮ್ಮ ತಮ್ಮೊಳು ಹಾಕ್ಯಾಡುತಲಿ ನಡೆದುಬಂದರು ಸನ್ಮುಖಕೆ 29 ಚಿಂತಿಸುತಲಿ ಪರಾಕ್ರಮರು ಬಂದರು ವೀರ ಕಾಳಗಕೆ ಕಾಳಿ ಭೇರಿಗಳು ಬಾರಿಸುತ ಬಂದರು ಮಹಾಜನರು 30 ಕೂಗಿ ಚೀರುತ ಒದರುತಲಿ ಬಂದು ನಿಂದರು ಪರಾಕ್ರಮರು ಅಹಂ ಮಮತಾ ಗಜಗಳು ನಡೆದು ಬಂದವು ಎದುರಾಗ 31 ಕಾಲಾಳು ಸಹ ಕೂಡಿಕೊಂಡು ರಚಿಸಿ ಬಂದರಶ್ವಗಳು ಕೂಡಿತು ಉಭಯ ದಳವು 32 ಸುವಾಸನೆ ಧೂಳಿಯೊಳಗೆ ಅಡಗಿತು ದುರ್ವಾಸನೆಯು ಅಹಂ ಮಮತಾ ಗಜಗಳು ಕಂಡು ಓಡಿದವು ಹಿಂದಾಗಿ33 ಬೆನ್ನಟ್ಟಿ ವಿವೇಕ ಗಜವು ಹೊಡೆದು ಕೆಡವಿದವು ಧರೆಗೆ ಅವಸ್ಥೆಗಳು ಕಾಲಾಳುಗಳು ಜಗಳ ಮಾಡಿದವು ನಿಮಿಷವು 34 ವಿಚಾರ ಕಾಲಾಳು ಮುಂದೆ ಓಡಿದರು ದೆಸೆದೆಸೆಗೆ ಚಂಚಳವೆಂಚಳಶ್ವಗಳು ಏರಿ ಬಂದರು ರಾವುತರು 35 ಯುದ್ದಮಾಡಿದರರಗಳಿಗೆಯು ಶುದ್ಧಿ ಇಲ್ಲದೆ ಓಡಿದರು ನಿರ್ಮಳ ನಿಶ್ಚಳಶ್ವಗಳು ಏರಿ ಬೆನ್ನಟ್ಟಿ ನಡೆದರು 36 ಚಂಚಳ ವೆಂಚಳಶ್ವಗಳ್ಹರಿಗಡೆದರು ಕಾಲು ಬಲ ರಾಹುತರ ಸಹವಾಗಿ ಕಡೆದೊಟ್ಟಿದರು ಶಿರಸವನು 37 ವೀರರು ಕಾಮಕ್ರೋಧಗಳು ಬಂದರು ಅತಿಶಯಉಗ್ರದಲಿ ಶಮೆ ದಮೆ ವೀರಗಳೊಡನೆ ಕಾದಿ ಮಡಿದರು ಆ ಕ್ಷಣದಲಿ 38 ಬಂಟ ಜನರು ಬಂದರು ಸಿಟ್ಟು ಕೋಪದಲಿ ಭಾವ ಭಕ್ತಿಯ ಬಂಟರೊಡನೆ ಕಾದಿ ಕಾಲಾಳು ಮಡಿದರು 39 ಪ್ರಪಂಚ ಸೈನ್ಯಾಧಿಪತಿಯ ಕೈಸೆರೆಯಲಿ ಹಿಡಿದರು ಬೋಧ ಸೈನ್ಯಾಧಿಪತಿಯು ನಾದಘೋಷವು ಮಾಡಿಸಿದನು 40 ಉಲ್ಹಾಸವೆಂಬ ಸರವರಿಯು ಹಚ್ಚಿಸಿದರು ಸೈನ್ಯದೊಳಲ್ಲಿ ದಯ ಕರುಣ ಭಾಂಡಾರಗಳು ಒಡೆದು ಧರ್ಮ ಮಾಡಿದರು 41 ಪಂಚೇಂದ್ರಿಯಗಳ ಪರಾಕ್ರಮರ ಹಿಡಿದು ಕಟ್ಟಿದರು ಪಾಶದಲಿ ಸ್ಮರಣಿ ಚಿಂತನೆ ಪರಾಕ್ರಮರು ಉಬ್ಬಿದರು ಹರುಷದಲಿ 42 ದಶವಾಯುಗಳ ಬೇಹಿನವರ ಹಿಡಿದು ಬಂಧನವ ಮಾಡಿದರು ಅವಲೋಕನೆ ಬೇಹಿನವರ ಸದ್ಬ್ರಹ್ಮದಲಿ ಸುಖಿಸಿದರು 43 ಸಪ್ತವ್ಯಸನ ಪರಿವಾರಗಳು ರತಿಪ್ರೇಮರೊಡನೆ ಕೂಡಿದರು ಪಂಚಾಗ್ನಿಗಳು ಪಂಜಿನವರು ಪಂಚ ಪಾಲದಿ ಅಡಗಿದರು 44 ಲಯ ಲಕ್ಷಗಳು ಪಂಜಿನವರು ಸಂಜೀವದಂತೆ ಹೊಳೆವರು ಅಷ್ಟಮದವು ಕಾವಲಿಗಳು ಅಡಗಿದವು ಸ್ಥಳ ಸ್ಥಳಲಿ 45 ಮೌನ್ಯ ಮೋನವೆ ಕಾವಲೆಗಳು ತಾವೆ ತಾವಾಗಿ ದೋರಿದರು ತ್ರಿಗುಣರ ಪಾರುಪತ್ಯದವರು ಒಂದು ಸ್ಥಳದಲಿರಿಸಿದರು 46 ನಾದ ಬಿಂದು ಕಳೆಯಗಳು ಮುಟ್ಟಿ ಪಾರುಪತ್ಯ ಮಾಡುವರು ಶತ್ರುರಾಘನ ಭೂಷಣಗಳು ಸೆಳೆದುಕೊಂಡರು ಗಳಿಗೆಯೊಳು 47 ಅವಿದ್ಯ ಮೊದಲಾದಾಗದರಿಂದ ಚೋಳಿಯು ಮಾಡಿದರು ಜನನ ಮರಣದ ಮಂಪಟವು ಸುಟ್ಟು ಸಂಹಾರ ಮಾಡಿದರು 48 ಚಿಂತೆ ಭ್ರಾಂತಿಯ ದ್ವಾರಗಳು ಕಿತ್ತಿ ಬೀಸಾಟಿದರು ಆಶಾಪ್ಯಾಟಿಗೆ ಧಾಳಿನಿಕ್ಕಿ ಲೂಟಿಸಿದರು ನಿಮಿಷದಲಿ 49 ತನು ದುರ್ಗ ವಶಮಾಡಿಕೊಂಡು ಇಳಿಯಿತು ಸೈನ್ಯ ಸುಖದಲಿ ಸದ್ಗತಿ ಮುಕ್ತಿ ಮಂಟಪವು ಕೊಟ್ಟರು ಅಚಲದಲಿ 50 ಯೋಗ ಭೋಗದ ದ್ವಾರದಿಂದ ನಡೆದರು ಮಹಾ ಭಕ್ತಜನರು ಮನ್ನೆವಾರರು ಕರಣಗಳು ಅಭಯವ ಕೊಂಡು ನಡೆದರು 51 ಅಜ್ಞಾನವೆಂಬಾಶಾಗತಿಯು ಮುಕ್ತವಾದಳು ಸುಜ್ಞಾನz ಮಾಯವಾದರು ವೈರಾಗ್ಯದಲಿ52 ದೃಷ್ಟ ಪುರುಷನ ತಂದಿನ್ನು ಇಟ್ಟುಕೊಂಡರು ತಮ್ಮೊಳಲಿ ತನು ದುರ್ಗ ವಶಮಾಡಿಕೊಂಡು ಮುಂದೆನಡೆದರಾನಂದದಲಿ 53 ಅಧಾರ ಪುರ ಬೆನ್ನಮಾಡಿ ನಡೆದರು ಬ್ರಹ್ಮಾಂಡಪುರಕೆ ವಿಘ್ನಹರನ ಬಲಗೊಂಡು ಮ್ಯಾಲೆ ಮಣಿಪುರಕೆ ನಡೆದರು 54 ಅನಾಹತಪುರ ದಾಟಿ ಮುಂದೆ ನಡೆದರು ವಿಶುದ್ಧ ಪುರಕೆ ಸ್ಥಳ ಸ್ಥಳ ಹರುಷ ನೋಡುತಲಿ ನಡೆದರಗ್ನಿ ಚಕ್ರಪುರಕೆ 55 ಮ್ಯಾಲಿಹ ಬ್ರಹ್ಮಾಂಡ ಪುರವು ಹೊಳೆಯುತಿಹದು ಪರಿಪರಿಲಿ ಸಹಸ್ರದಳ ಕಮಲಗಲು ಥಳಥಳಿಸುವದದರೊಳು 56 ಘನ ಬೆಳಗಿನ ಪ್ರಭೆಯುಗಳು ಹೊಳಯುತಿಹುದು ಕಿರಣಗಳು ಹರಿ ಬ್ರಹ್ಮಾದಿಗಳು ವಂದಿಸುವ ಸ್ಥಳ ನೋಡಿ ಗುರು ಕರುಣದಲಿ 57 ಪಿಂಡ ಬ್ರಹ್ಮಾಂಡೈಕ್ಯಪುರದಿ ಒಳಗಿಹ ಹಂಸಾತ್ಮಗತಿಯು ಸಹಸ್ರ ರವಿಕೋಟಿ ತೇಜ ಭಾಸುವಾ ವಸ್ತುಗತಿಯು 58 ವಿಶ್ವ ವ್ಯಾಪಕನೆಂಬ ಸ್ಥಿತಿಯು ಮಹಿಮಾನಂದ ಸ್ಫೂರ್ತಿಯು 59 ದೃಷ್ಟಾದೃಷ್ಟಗತಿಯು ದೋರಿದ ಗುರು ಸದೃಷ್ಟದಲಿ ಗುರು ಕರುಣದ ಕಟಾಕ್ಷದಲಿ ಬೆರೆಯಿತು ಮನ ಹರುಷದಲಿ 60 ಕಂಡು ಮಹಿಪತಿಯ ಜೀವನವು ಧನ್ಯವಾಯಿತು ದೃಷ್ಟದಲಿ ಪರಮಾನಂದ ಸುಪಥದಲಿ ಜೀವನ ಮುಕ್ತ್ಯದರಲ್ಲಿ 61
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವಿ ಭಜನೆ ಓಂ ನಮೋ ಓಂ ನಮೋ ಓ ನಮೋ ದೇವಿ || ಓಂ ನಮೋ ಓಂ ನಮೋ ಭಕ್ತ ಸಂಜೀವಿ ಪ. ಶಂಭು ಮನೋಹರೆ | ಶಾಂಭವಿ ದೆÉೀವಿ || ಜಂಭಾರಿ ಸುರನರ | ವಂದಿತೆ ದೇವಿ ಅ.ಪ. ಮಧುಕೈಟಭಾಖ್ಯರ ವಧಿಸಿದ ದೇವಿ || ಮುದದೊಳೀ ಮಹಿಯ | ನುದ್ಧರಿಸಿದ ದೇವಿ 1 ಮಹಿಷಾಖ್ಯ ದಾನವ ಮರ್ದಿನಿ ದೇವಿ || ದಹಿಸಿದೆ ಧೂಮ್ರಾಕ್ಷ | ನನು ಮಹಾದೇವಿ 2 ಚಂಡಮುಂಡಾಖ್ಯರ | ಖಂಡಿಸಿ ಶಿರಗಳ || ಚೆಂಡಾಡಿದ ಶ್ರೀ ಚಾಮುಂಡಿ ದೇವಿ 3 ರುಧಿರಬೀಜಾಖ್ಯನ | ರುಧಿರವ ಹೀರಿ || ವಧಿಸಿದೆ ಅದ್ಭುತ | ಮಹಿಮೆಯದೋರಿ 4 ಶುಂಭ ನಿಶುಂಭ ನಿ | ಷೂದಿನಿ ದೇವಿ || ಕುಂಭಿನಿ ಭಾರವ | ಹರಿಸಿದ ದೇವಿ 5 ಅರುಣಾಸುರ ಸಂ | ಹಾರಿಣಿ ದೇವಿ || ಶರಣರಿಗೊಲಿದ ಶ್ರೀ | ಭ್ರಾಮರಿ ದೇವಿ6 ನಂದಿನಿ ನದಿಯೊಳು | ನೆಲೆಸಿದ ದೇವಿ || ಕಂದರಂತೆಮ್ಮನು | ಸಲಹುವ ದೇವಿ7 ನಂಬಿದ ಭಕ್ತರ | ವೃಂದವ ದೇವಿ || ಅಂಬಿಕೆ ಪಾಲಿಸು | ಜಗದಂಬ ದೇವಿ 8 ಜಟಾಧರೇಶನ | ರ್ಧಾಂಗಿನೀ ದೇವಿ || ಕಟಿಲೊಳು ಮೆರೆದ | ಭ್ರಮರಾಂಬ ದೇವಿ9
--------------
ವೆಂಕಟ್‍ರಾವ್
ನಂಬದೆ-ನಾ-ಕೆಟ್ಟೆ ಪ ಅಂಬುಜಾಕ್ಷನೆ ನಿನ್ನಾ ಅ.ಪ ಗಳಿಸಿತು ಬಹುಕಾಲಾ ವಿಷಯಕೆ ಆಯ್ತೆಲ್ಲಾ ಅತಿಶಯ ವಾಯ್ತಾಶೇಗತಿಯನು ನಾಕಾಣೆ ಮತಿವಂತ ವ್ರತತತಿ ಜಪಜಪ ಹೋಮಕೆ ಗತಿದಾಯಕ ನಂಬದೆ 1 ಬಂದೆನು ಬಹುಸಾರಿ ನೊಂದೆನು ಈ ಪರಿಯೇ ಕಂದಿಸೆ ಯಮರಾಯಾ ಬಂಧುವು ಯಾರೈಯ ಇಂದಿರೆ ಮನಶಶಿ ಸುಂದರಮೂರ್ತಿ ಮಹೇಂದ್ರ ಪರಾತ್ಪರ ಪೂರ್ಣಾನಂದನ 2 ಮಾಡಿಹೆನಪರಾಧ ಪಾಡದೆ ತವ ಮಹಿಮೆ ಬೇಡುವೆ ನಿಜಭಕ್ತಿ ಓಡಿಸು ಈ ಬುದ್ಧಿ ಓಡಿಸೆ ಜಗ ಕಾಪಾಡುತಜೀವರ ಈಡು ದಿಕ್ಕಿಲ್ಲದ ಗೂಢ ಸ್ವತಂತ್ರನೆ 3 ಜ್ಞಾನವ ನಾಬಿಟ್ಟೆ ಹೀನನು ಹೇ ಧೊರೆಯೆ ಜ್ಞಾನದ ಶರಣೆಂಬೆ ಏನನು ಕೊಡಲಾರೆ ಆನತ ಬಂಧುವನಂತ ಗುಣಾರ್ಣವ ಶ್ರೀನಿಧಿ ಸೃಷ್ಟಿವಿನೋದವ ಗೈವನ4 ಬಂದಿಯು ನಾನೈಯಾ ಬಂಧಕ ನೀನೈಯ ಎಂದಿಗುನಾದಾಸಾ-ತಂಡಿಡು ನೀಲೇಸಾ ನಂದ ಮುನೀಂದ್ರ ಸುಮಾನಸ ಮಂದಿರ ನಂದದ ಶ್ರೀವರ “ಶ್ರೀ ಕೃಷ್ಣವಿಠಲ”ನ5
--------------
ಕೃಷ್ಣವಿಠಲದಾಸರು
ನಮೋ ನಮೋ ವೆಂಕಟೇಶಾ ಸರ್ವೋತ್ತಮಾನೆ ಶ್ರೀಶಾ ಪ ರಮಾರಮನೆ ಸದ್ಧಿ ಮಾಕರಾಕರ್Àಮುಖ ಸುಮಾನಸಾನತ ಸಮೀರನಗಧೀಶಾ ಅ.ಪ ವರವೈಕುಂಠದಿಂದ ಈ ಧರಾತಳಕೆ ಬಂದ ಚರಣಕಮಲಕೆ ಶರಣು ಮಾಳ್ಪರ ಕುರುಣಿಸೀ ಭವ ಅರಣದಾಟಿಪ 1 ಧರೇಶ ತೊಂಡನೃಪಗೆ ನೀ ದರಾರಿ ಇತ್ತವಗೆ ಧರಾಸುರೇಶನ ಜರತರಿದು ಬಹು ತ್ವರದಿ ಯೌವನ ಖರೆಯನೀಡಿದಿ 2 ಇಭರಾಜ ನಿನ್ನ ನುತಿಸೆ ಅಭಯವಿತ್ತೆಘನ್ನಾ ಶುಭಕರನೆ ನಿನ್ನ ಪ್ರಭಾವ ಕೇಳಿದೆ ಪ್ರಭುವೆ ಎನ್ನ ಭವಭಯಾಕಳಿಯೊ ಸ್ವಾಮಿ 3 ಮಹಾನುಭಾವ ಎನ್ನ ಮನದಲಿ ವಹಿಸಿದೇ ನಿನ್ನ ಗಹನಮಹಿಮನೆ ಮಹಾಪರಾಧವ ಸಹನ ಮಾಡೆಲೊ ಅಹೀಶಗಿರಿವಾಸ 4 ಪಾತಕಾದ್ರಿಕುಲಿಶಾ ನೀ ವಿಧಾತಾದಿಸುರಕುಲೇಶಾ ನೀತಗುರು ಜಗನ್ನಾಥವಿಠಲ ನಿಜ ದೂತಜ£ಕÀತಿ ಪ್ರೀತಾನಾಗುವೊ ದಾತಾ 5
--------------
ಗುರುಜಗನ್ನಾಥದಾಸರು
ನಾಥಾ ಸಮರ್ಥ ಗುರುನಾಥಗೆ ಮಂಗಳ |ಪ್ರೀತಾ ಭಕ್ತರ ನಿಜ ದಾತಾಗೆ ಮಂಗಳ 1 ಜನನ ಮರಣ ದಾಂಟಿಸುವಗೆ ಮಂಗಳ |ಘನಕೆ ಘನವಾದ ಸ್ಥಾನ ನಿತ್ಯಗೆ ಮಂಗಳ 2 ಭೀಮಾಶಂಕರ ಗುರುಮೂರ್ತಿಗೆ ಮಂಗಳ |ಪ್ರೇಮಾ ಸ್ಫುರಿತ ನಿಜಗಿರಿಗೆ ಮಂಗಳ 3
--------------
ಭೀಮಾಶಂಕರ
ನಿಖಿಳ ಗುಣಗಣ ಪೂರ್ಣ ಪ ಅಂಬುಜಾಸನ ಜನಕ ನರಹರಿ ಅಂಭ್ರಣೀ ಜಗನ್ನಾಥ ನಾಯಕ ಬಿಂಬ ವಿಷ್ಣುವೆ ನಿಖಿಳವಿಶ್ವಕೆ ತುಂಬಿ ಭಕ್ತಿಯ ಕಾಯೋ ಕರುಣಿ ಯೇ ಅ.ಪ. ತಂದೆಕಾರಣ ಭವದೀ- ನೀ ಎನ್ನ ಬಂದೆನಲ್ಲದೆ ನಿಜದೀ- ಸುಖಪೂರ್ಣ ನಿಂದು ನಡೆಸದೆ ಭವದೀ- ದಾಟಿನ್ನ ಎಂದಿಗಾದರು ಗೆಲ್ಲುವೆನೆ ಘನ್ನ ಬಂಧನಪ್ರದ ನೀ ಬಂಧಮೋಚಕ ತಂದ ವಿಷ್ಣುವೆ ಮೂಲಕಾರಣ ವೆಂದು ಶೃತಿಗಳವೃಂದ ನುಡಿವುವು ಬಂದು ನಿನಗಿಂತಧಿಕರಾರೈ ನಿಂದು ಹೃದಯದಿ ಸರ್ವಕಾಲದಿ ತಂದು ಉಣಿಸುವೆ ಸಕಲ ವಿಷಯವ ಬಂಧಿ ನಾನಿಹೆ ಜಡವೆ ನೀ ಬಿಡೆ ಮುಂದಿನಾಗತಿ ಬೇಗ ತೋರೈ ಇಂದಿರೇಶ ಮಹೇಂದ್ರ ಸುಖಮಯ ಕಂದರಾಶ್ರಯ ಬ್ರಹ್ಮಮಂದಿರ ನಂದಿವಾಹನ ತಾತ ವಿಭುವರ ಚಂದಗೋಚರ ಸಾರ್ವಭೌಮನೆ ಕೂಂದುನಕ್ರನ ಗಜವ ಸಲಹಿದೆ ನಂದನೀಡಿದೆ ಪಾರ್ಥಮಡದಿಗೆ ತಿಂದು ಎಂಜಲ ಕಾಯ್ದೆ ಶಬರಿಯ ಗಂಧ ಕೊಳ್ಳುತ ಕಾಯ್ದೆ ಕುಬ್ಜೆಯ ಕಂದ ಕೂಗಲ್ ಬಂದೆ ಕಂಭದಿ ಇಂದ್ರ ಗೋಸುಗ ಬಲಿಯ ಬೇಡದೆ ಮಂದರಾದ್ರಿಯ ಪೊತ್ತೆ ಸುರರಡೆ ಸುಂದರಾಂಗಿಯುಆದೆ ಹಾಗೆಯೆ ಹಿಂದೆ ಈತೆರ ನಿತ್ಯತೃಪ್ತನೆ ಬಂದು ಸಲಹಿದ ಭಕ್ತವೃಂದವ ಮಂದನಾದರು ಶರಣುಬಿದ್ದವ ನೆಂದು ಸಲಹೈ ಪೂರ್ಣಕರುಣಿಯೇ1 ಕೂಡಿಸುತ ಮನ ವಿಷಯ ಬಲೆಯಲ್ಲೀ ಮಾಡಿಸುವೆ ಮಾಡಿದ್ದ ದಿನದಿನದೀ ಗೂಢ ನಿನ್ನಯ ಭಕ್ತಿ ಕೊಡಲೊಲ್ಲೀ ಕೇಡುಮೋಹ ಸಜಾಡ್ಯ ಹರಿಸಿಲ್ಲೀ ಓಡಿಓಡಿಸೆ ಜಗವು ನಡೆವುದು ನೋಡಿನೋಡಿಸೆ ನಾವು ನೋಳ್ಪೆವು ಮಾಡಿಮಾಡಿಸೆ ಕರ್ಮವಾಹುದು ಪ್ರೌಢ ನಿನ್ನಯ ಬಲದ ವಿಶ್ವಕೆ ಕಾಡಿಕಾಡಿಪ ವಿಷಯ ಬಿಡಿಸುತ ಹಾಡಿಹಾಡಿಸಿ ನಿಮ್ಮ ಕೀರ್ತನೆ ಆಡಿಆಡಿಸಿ ಸಾಧುಸಂಗದ ಜಾಡುತೋರಿಸೊ ಭಕ್ತಿ ಮಾರ್ಗದ ಕ್ರೋಢನರಹರಿ ಮತ್ಸ್ಯವಾಮನ ಪ್ರೌಢ ಭಾರ್ಗವ ರಾಮಕೃಷ್ಣನೆ ಗಾಡಿಕಾರ ಪರೇಶ ಬುದ್ಧನೆ ದೂಡು ಕಲಿಯನು ಕಲ್ಕಿದೇವನೆ ಕೂಡು ಮನದಲಿ ಬಾದರಾಯಣ ನೀಡು ಜ್ಞಾನವ ಜೀಯ ಹಯಮುಖ ಮಾಡು ದತ್ತಾತ್ರೇಯ ಕೃಪೆಯನು ಈಡುಕಾಣದು ಕಪಿಲಮೂರ್ತಿಯೆ ಬೀಡುಗೈದಿಹ ಬೀಜ ನಿದ್ರೆಯು ನೋಡಗೊಡದೈ ನಿನ್ನತುರ್ಯನೆ ನಾಡುದೈವಗಳನ್ನು ಭಜಿಸಲು ಓಡದದು ಎಂದೆಂದು ಸತ್ಯವು ಮಾಡುತಲಿ ಸಾಷ್ಟಾಂಗ ನತಿಗಳ ಜೋಡಿಸಿಹೆ ಶಿರ ಪಾದಪದ್ಮದಿ ಗಾಢಪ್ರೇಮದಿ ಸಲಹು ಭೂಮನೆ ಮೂಡಿಸುತನಿಜ ಭಕ್ತಿ ಜ್ಞಾನವ 2 ಎನ್ನ ಯೋಗ್ಯತೆ ನೋಡೆ ಫಲವಿಲ್ಲ ನಿನ್ನಕೃಪೆ ತೋರದಿರೆ ಗತಿಯಿಲ್ಲ ಅನ್ಯ ಹಾದಿಯು ಯಾವುದೆನಗಿಲ್ಲ ಘನ್ನಚಿತ್ತಕೆ ಬರಲು ತಡಿಯಿಲ್ಲ _ ಹೇನಲ್ಲ ಪೂರ್ಣಜ್ಞಾನಾನಂದ ಶಾಶ್ವತ ಪೂರ್ಣ ಚಿನ್ಮಯ ಪೂರ್ಣ ಮೂಲದಿ ಪೂರ್ಣ ನಂದದಿ ಪೂರ್ಣ ಅವಯವಿ ಪೂರ್ಣಶಕ್ತನೆ ಪೂರ್ಣಬೋಧ ಮುನೀಂದ್ರ ವಂದಿತ ಶರಧಿ ದೇವನೆ ಪೂರ್ಣನಿತ್ಯಾನಂದ ದಾಯಕ ಪೂರ್ಣಮಾಡೈ ಬಯಕೆ ತೂರ್ಣದಿ ನೀನೆ ಸರ್ವಾಧಾರ ಪ್ರೇರಕ ನೀನೆ ರಕ್ಷಕ ಸರ್ವಶಿಕ್ಷಕ ನೀನೆ ಸೀಮಾಶೂನ್ಯ ನಿಶ್ಚಯ ನೀನೆಪೊಗಳಿತನಿಖಿಳವೇದದಿ ನೀನೆ ವಾಚ್ಯನು ಸರ್ವಶಬ್ದದಿ ನೀನೆ ಮುಕ್ತಾಯಕ್ತ ಸೇವಿತ ನೀನೆ ದೋಷವಿದೂರ ಸ್ಥಾಣುವು ನೀನೆ ಸೃಷ್ಟಾ ದ್ಯಷ್ಟಕರ್ತೃವು ನಿನ್ನಸಮ ಉತ್ಕøಷ್ಟರಿಲ್ಲವು ನಿನ್ನ ದಾಸರು ಸರ್ವಜೀವರು ಭಿನ್ನರೈ ಸರ್ವತ್ರ ಸರ್ವರು ನಿನ್ನ ದಾಸರ ಭಾಗ್ಯಬೇಡುವೆ ಜನ್ಮಜನ್ಮಕು ಇದನೆ ಬಯಸುವೆ ನಿನ್ನ ನಂಬಿಹೆ ನಿನ್ನನಂಬಿಹೆ ಸಿರಿಪತಿ ಕೃಷ್ಣವಿಠಲನೇ 3
--------------
ಕೃಷ್ಣವಿಠಲದಾಸರು
ನಿತ್ಯ ಶುಭ ಪಾದ ಪಾದ ತೀರ್ಥಕ್ಕೆ || ಜಯ || 1 ಭವ ಹರಿಸುವ ತೀರ್ಥಕ್ಕೆ | ಇಪ್ಪತ್ತೈದು ತತ್ತ್ವ ಪಾವನಗೈದ ತೀರ್ಥಕ್ಕೆ |ಕೃಪನಿಧಿ ತಾರಿಸಿದ ಗುರುಪಾದ ತೀರ್ಥಕ್ಕೆ || ಜಯ || 2 ತಾಪ ನಾಶವಗೈವ ಗುರುಪಾದ ತೀರ್ಥಕ್ಕೆ || ಜಯ || 3 ಜಗದೊಳಗಿನ ತೀರ್ಥ ಸಾಗರದೊಳಿರುತಿಹವು | ಸಾಗರಾಂತ ಸಹ ಪರಿವಾರದಿ | ಅಘವ ಹರಿಸುವದೆಂದು ಜಗದೊಡೆಯನ ಪಾದದಿ |ಬೇಗನೆ ಬಂದು ಮಡಿಯಾಗುವ ತೀರ್ಥಕ್ಕೆ || ಜಯ || 4 ಕಮಲನಯನ ಕಮಲೋದ್ಭವರೆಲ್ಲರು | ವಿಮಲಮಹ ಪದಗಳನು ಹೃದಯದಲಿ ಧರಿಸಿ | ಬ್ರಹ್ಮಾಂಡಕೋಟಿಗಳನು ಉದ್ಧರಿಸುವ ತೀರ್ಥಕ್ಕೆ |ಭೀಮಾಶಂಕರನು ಸೇವಿಸಿದ ಗುರುಪಾದ ತೀರ್ಥಕ್ಕೆ || ಜಯ5
--------------
ಭೀಮಾಶಂಕರ
ನಿನಗಿನ್ನ ನಾನಧಿಕ ಇಂದಿರೇಶಾ ಎನಗೆ ನಾಥನು ಉಂಟು ಅನಾಥನು ನೀನು ಪ ಕುಲಗೋತ್ರ ನಿನಗಿಲ್ಲ ಕುಲಗೋತ್ರ ಎನಗುಂಟು ಲಲಿತರೂಪನು ನಾನು ಅರೂಪ ನೀನೂ ಚೆಲುವ ಸುಗುಣಿಯು ನಾನು ಅಗುಣರೂಪನು ನೀನು ಬಲಹೀನನು ನೀನು ಸಬಲ ನಾನು ದೇವಾ 1 ನಾಮಧೇಯನು ನಾ ಅನಾಮಧೇಯನು ನೀನು ಕಾಮಕಾಮುಕ ನಾ ಅಕಾಮಿ ನೀನು ಪಾರನು ನಾ ಅಪಾರನು ನೀನಯ್ಯಾ ನೇಮಬದ್ಧನು ನಾ ಅನೇಮಿ ನೀನು 2 ಗತಿಯು ನೀನೆಗೈಯ್ಯ ಸದ್ಗತಿಯು ನಿನಗಾರಯ್ಯ ವ್ರತನೇಮ ಎನಗುಂಟು ನಿನಗಾವುವೋ ಸತತಮಾನಿಯು ನಾನು ಅಮಾನಿ ನೀನಯ್ಯ ವಿತತಕರ್ಮಿಯು ನಾನು ಕರ್ಮಹೀನನು ನೀನು 3 ಪತಿತಪಾತಕಿ ನಾನು ಪತಿತಪಾವನನು ನೀನು ರತಿಬದ್ಧನು ನಾ ವಿರತಿಯು ನೀನು ಶ್ರೀತಜನರಪಾಲ ಆಶ್ರಿತ ನಾನು ನಿನಗೈಯ್ಯ ಸತತಪಾಲಕ ನೀನು ಪಾಲ್ಯ ನಾನು 4 ದೂತರಾಧಮ ನಾನು ದೂತವತ್ಸಲ ನೀನು ಆತುರನು ನಾನು ನಿಜದಾತ ನೀನು ನೀತ ಗುರುಜಗನ್ನಾಥವಿಠಲರೇಯ ತಾತ ನೀ ಎನಗಯ್ಯ ನಿನಗಾವ ತಾತಾ 5
--------------
ಗುರುಜಗನ್ನಾಥದಾಸರು