ಒಟ್ಟು 522 ಕಡೆಗಳಲ್ಲಿ , 72 ದಾಸರು , 422 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

[ದಿತಿಜರಿಗೆದುರಾಂತ] ಕೃತಾಂತಗತಿ ನೀ ನಮಗೆ ಗುಣವಂತ ಹನುಮಂತಪ. ಕೇಸರಿತನಯ ದಕ್ಷಿಣಗಾಗಿ ಬಂದೆ ವ-ರುಷಗಳಿಂದಲಿ ಬಲುಗಿರಿಯನು ತಂದೆಈಶ ರಘುಪತಿ ಸೇವೆ ಘನವಾಗಿ ನಿಂದೆಅಸುರ ರಾವಣನ ಸರ್ವ ಸೈನ್ಯವ ಕೊಂದೆ 1 ಅಂಬುಧಿಯ ದಾಂಟಿ ಸೀತೆಯ ರೂಪ ಕಂಡೆಕುಬುದ್ಧಿಯ ರಾವಣನ ಪುರವ ಸೂರೆಗೊಂಡೆವಿಬುಧರ ಸ್ನೇಹವ ಮಾಡಿದೆ ಬಲುಗಂಡೆಪ್ರಬುದ್ಧರಂದದಿ ಪುಣ್ಯಫಲರಸ ಉಂಡೆ 2 ಹಯವದನನ ಕೃಪೆ ಪ್ರಿಯ ಹೂಡಿ ಪೊತ್ತೆ ಪ್ರಿಯವಾದ ಭವತರುವಿನ ಬೇರ ಕಿತ್ತೆಭಯವ ಖಂಡಿಸಿ ನಮಗಭಯವನಿತ್ತೆಜಯಜಯ ಪ್ರಾಣನಾಥ ನಮೋ ನಮಸ್ತೆ 3
--------------
ವಾದಿರಾಜ
624ಚಿ ಇಂದು ಧನ್ಯವಾಯಿತು ಜನುಮ ಬಂದು ಕೂಡಿದ ಘನ ಮಹಿಮ ಧ್ರುವ ಏನು ಪುಣ್ಯ ಮಾಡಿದ್ದೆವೊ ಮೊದಲೆ ಖೂನಗಂಡೆವೊ ಹರಿಯ ಮನದಲಿ ಕಾಣದಿದ್ದೆವೊ ಏಸು ಜನ್ಮದಲಿ ತಾನೆ ಒಲಿದು ಬಂದು ಸುಪ್ರಸನ್ನಲಿ 1 ಬ್ರಹ್ಮಾದಿಕರಿಗೆ ದಾವ ದುರ್ಲಭ ನಮ್ಮ ನೆನವಿನೊಳಾದವ ಸುಲಭ ತಮ್ಮ ನಿಜಸುಖದ ನೆಲೆನಿಭ ಬ್ರಹ್ಮಾನಂದ ದೋರಿದ ಪ್ರಾಣದೊಲ್ಲಭ 2 ಖೂನದೋರಿತು ಮುನ್ನ ನಾ ಮಾಡಿದ ಭಾನುಕೋಟಿತೇಜನ ಕೈಗೂಡಿದ ಅನುಭವಾಮೃತಸಾರ ನೀಡಿದ ದೀನ ಮಹಿಪತಿ ಮನೋಹರ ಮಾಡಿದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅಂಜಬ್ಯಾಡ ಬ್ಯಾಡೆಲೆ ಜಾಣಿ ಭವಭಂಜನ ಬಲರಾಮನ ಅಣಿ ಪ. ಕುಂಜರಗಮನೆ ಕಮಲಾಕ್ಷಿಕುಂಜರಗಮನೆ ಕಮಲಾಕ್ಷಿ ದ್ರೌಪದಿಅಂಜಬ್ಯಾಡ ಅಭಯಕೊಡತೇವ1 ಭಯವುಳ್ಳ ಬಾಲೆ ನೀ ಐವರಿಗೆ ಇಂತಿಪ್ಪೆಸೈವಲ್ಲದ ಮಾತು ಜಗಕಿದುಸೈವಲ್ಲದ ಮಾತು ಜಗಕಿದು ಈ ನಡೆತೆನಯವಲ್ಲವೆಂದು ನಗುತಾರೆ2 ಲೋಕದೊಳೊಬ್ಬಳಿಗೆ ಏಕಪತಿಯುಂಟುಏಕಕಾಲದೆ ಐವರ ಏಕಕಾಲದಲೆ ಐವರನ ಕೂಡೋದುನಾ ಕಾಣಿನೆಲ್ಲೂ ಕೌತುಕವ3 ಕೆಂಡವ ತುಂಬಿದ ಕುಂಡದಿ ಪುಟ್ಟಿದಿಕಂಡ ಜನಕೆಲ್ಲ ಭಯವಾದಿಕಂಡ ಜನಕೆಲ್ಲ ಭಯವಾದಿ ಭೀಮಸೇನನಿನ್ನ ಗಂಡ ಎಂಥ ಎದೆಗಾರ4 ಎಲ್ಲ ನಾರಿಯರೊಬ್ಬ ನಲ್ಲನಬೆರಿಯೆಬಲ್ಲಿದ ಭೂಪ ರೈವರುಬಲ್ಲಿದ ಭೂಪರೈವರ ನೊಲಿಸಿದಿಎಲ್ಲರಂತಲ್ಲ ಬಲುಧೀರೆ 5 ಪಲ್ಯಾದ ತುದಿಯಿಂದ ಎಲ್ಲ ಪದಾರ್ಥಮಾಡಿಬಲ್ಲಿದ ಮುನಿಗೆ ಉಣಿಸಿದಿಬಲ್ಲಿದ ಮುನಿಗೆ ಉಣಿಸಿದಿ ಇಂದ್ರÀಜಾಲಬಲ್ಲವಳಿಗಿಂಥ ಭಯವುಂಟೆ6 ಕೇಳ ದ್ರೌಪತಿ ರಾಜ್ಯವಾಳೊಗಂಡನ ಕೈಲೆಲಾಳಿ ತಕ್ಕೊಂಡ ಪರಿಯಂತೆಲಾಳಿ ತಕ್ಕೊಂಡ ಪರಿಯಂತೆ ಈ ನಡತೆಕೇಳಿದವರೆಲ್ಲ ನಗುತಾರೆ 7 ಅತ್ತೆಯ ಮಗ ನಿನ್ನ ಅತ್ಯಂತ ನಗೆನೋಡಿತಪ್ತವಾಗೊಮ್ಮೆ ತಿರುಗಿದತಪ್ತವಾಗೊಮ್ಮೆ ತಿರುಗಿದ ದ್ರೌಪತಿಮತ್ತಾರೆ ಬುದ್ಧಿ ಬರಲಿಲ್ಲ8 ಅರಸನ ಮಡದಿ ಒಬ್ಬ ಅರಸನ ಮನೆಯಲ್ಲಿನಿರುತ ದಾಸಿಯೆಂದು ಇರುತಲೆನಿರುತ ದಾಸಿಯೆಂದು ಇರುತಲೆ ಸೇವಿಸೋದುಈ ಸರಸ ರಮೇಶಗೆ ಹರುಷೇನ9
--------------
ಗಲಗಲಿಅವ್ವನವರು
ಅಧ್ಯಾಯ ಐದು ಶ್ರೀ ಕಾಲಿಯ ಫಣಾರ್ಪಿತ ಪಾದಾಂಬುಜಾಯನಮ ಶ್ರೀ ಗುರುಭ್ಯೋನಮಃ ಪದ, ರಾಗ ಸೌರಾಷ್ಟ ತಾಳ ತಿವಿಡೆ ಸ್ವರ ಋಷಭ ಬಿಡದೆ ಕೃಷ್ಣನ ಅಪ್ಪಿ ತಾಯಿಯು ನಡದಳಾ ಗೃಹಕಾರ್ಯದಲ್ಲೆ ನಡೆದವನು ಜೋಡ್ಯರಡು ಮತ್ತೀ ಗಿಡಗಳಿದ್ದಲ್ಲೇ ನಡೆದವುಗಳ ಮತ್ತವು ತಡದು ಅಡ್ಡಾಯಿತು ಊಲೂಬಲ ಕಡಕಡೆನುತಲಿ ಕಡದು ಬಿದ್ದವುಗಿಡಗಳವು ಎರಡು|| 1 ಪತಿತ ವೃಕ್ಷಗಳಿಂದ ಹೊರಟರು ಅತಿಸುರೂಪರು ಅತಿ ಮದೋನ್ಮತ್ತರು ಕುಬೇರನ ಸುತರು ಮಂಚೆವರು| ಪೃಥಿವಿಯಲಿ ತರುಜನ್ಮಕೊಂಡರು ಪ್ರಥಮ ನಳಕೂಬರನು ಎನಿಸುವ ದ್ವಿತಿಯ ಮಣಿಗ್ರಿವಾ|| 2 ವೃಕ್ಷ ಜನ್ಮದಿ ಮುಕ್ತರಾದರಧೋಕ್ಷಜನ ದಯದಿಂದ ಇಬ್ಬರು ವೃಕ್ಷ ಶಬ್ದವ ಕೇಳಿ ನೆರೆದರು ಆ ಕ್ಷಣಕೆ ಜನರು ಲಕ್ಷ್ಮಿ ಇಲ್ಯಲ್ಲರಿಗೆ ಹರಿ ಪುತ್ಯಕ್ಷ ಅಲ್ಲಿರಲು|| 3 ತನ್ನ ಮಗನಾಟವನು ತಿಳಿಯದೆ ಚನ್ನಿಗನು ಆನಂದಗೋಪನು ಮುನ್ನವನು ಕರಕೊಂಡು ನಡಿದನು ಕಣ್ಣಿಯನು ಬಿಟ್ಟಿ|| ಆದಾವೆಂದು ಚಿಂತಿಸಿ ತನ್ನ ಮನದೊಳಗೆ 4 ಹೂಡಿ ಭಂಡಿಗಳನ್ನು ಮರುದಿನ ಮಾಡಿಸಿದ್ಧವು ಎಲ್ಲರಿಂದಲಿ ಕೂಡಿ ವೃಂದಾವನಕ ಪೋಗುತ ಮಾಡಿದಾಶ್ರಯವು | ನೋಡಿ ಆ ವೃಂದಾವನ ಸ್ಥಳ ಗಾಢ ಹರುಷದಲಿ ಬಾಲರೆಲ್ಲರು ಕೂಡಿದರು ಕುಣಿದಾಡಿದರು ಙಡ್ಯಾಡಿದರು ಅಲ್ಲೆ5 ಸ್ವಚ್ಛ ಯಮುನಾ ತೀರದಲಿ ತನ್ನಿಚ್ಛಿಯಿಂದ ವಿಚಾರ ಮಾಡುವ ವತ್ಸಗಳ ಕಾಯುವನು ತಾ ಶ್ರೀ ವತ್ಸಲಾಂಧನನು| ವಂತ್ಸರೂಪದಿ ಬಂದ ಅಸುರನ ಪುಚ್ಛ ಹಿಂಗಾಲ್ಹಿಡದು ತಿರಿಗಿಸಿ ಉತ್ಸವದಿ ಮ್ಯಾಲೊಗೆದ ಬಿದ್ದಾವತ್ಸಹತವಾಗಿ|| 6 ನಳಿನನಾಭನು ಮುಂದ ಆತರಗಳಿಗೆ ತಾ ನೀರಕುಡಿಸಿ ತೀರದ ಮಳಲಿನೂಳಗಾಡುವನು ಮತ್ತಾ ಗೆಳೆಯರನ ಕೂಡಿ| ಖಳ ಅಸುರ ಬಕಪಕ್ಷಿ ರೂಪದಿ ಸುಳದು ಮೆಲ್ಲನೆ ಬಂದು ಬಾಲಕರೂಳಗಿರುವ ಕೃಷ್ಣನ್ನ ತಾ ಬಾಯ್ವಳಗ ನುಂಗಿದನು||7 ಸುಡುವ ಕೃಷ್ಣನ ಉಂಡು ದಕ್ಕಿಸಿಕೊಳದೆ ಘಾಬರಿಗೊಂಡು ಕಾರಿದನು| ತುಂಡು ಮಾಡಿಯೊಗದಾ||8 ಘಾಸಿ ಆಗದೆ ಉಳದನೆಂದು ತೀಸವಾಗ್ಯಲ್ಲಾರು ಬಹಳುಲ್ಹಾಸವನು ಬಟ್ಟು ಏಸುಕಾಲಕೆ ಬಿಡದೆ ನಮ್ಮನ್ನು ಘಾಸಿಮಾಡದೆ ಗುರು ಅನಂತಾದ್ರೇಶ ರಕ್ಷಿಸುವೋನು ಎಂದು ಆ ಸಮಯದಲ್ಲಿ 9 ಪದ್ಯ ಸಾಧು ಹಿತಕರ ಕೃಷ್ಣಯಾದವರಲ್ಯವ ತರಿಸಿ ಐದು ವರ್ಷಾದ ಮ್ಯಾಲ್ಕಾಯ್ದನು ಆಕಳುಗಳನು ಆದರದಿ ಮತ್ತು ರಾಮಾದಿಗಳಕೂಡಿ ಬೇಕಾದ ಆಟಗಳಾಡಿ ಅನುಸರಿಸಿ ಆ ಧೇನುಕಗಳ ಕೂಡಿ ಸ್ವಾದು ಫಲಗಳು ಕೋಮಲಾದ ತೃಣ ಇದ್ದಲ್ಲೆ ಆದಿಯಲಿ ಬಲರಾಮ ಹಾದಿಯನು ಮಾಡಿ ಮುಂಧೋದ ಆ ಸ್ಥಳಕ್ಕೆ || 1 ನೋಡ್ಯಲ್ಲೆ ತಾಳಾಖ್ಯ ಪ್ರೌಢ ವೃಕ್ಷಗಳನ್ನು ಆ ಫಳಗಳನ್ನು ಪ್ರೌಢಫಲಗಳು ನೋಡಿ ಅಬ್ಬರದಿಂದ ಓಡಿ ಬಂದನು ಅಸುರ ಕೂಡಿ ತನ್ನವರಿಂದ ಕಾಡ ಖರರೂಪಿ ಅವ ಮಾಡಿ ಕ್ರೂರಧ್ವನಿಯ ಮಾಡಿದನು ಮೂಢಧೇನುಕನು 2 ಖಡುಕೋಪದಲಿ ರಾಮ ಹಿಡಿದು ಹಿಂಗಾಲುಗಳ ತಡಿಯದಲೆ ತಿರಿವ್ಯಾಡಿ ಗಿಡದ ಮ್ಯಾಲೊಗದ ಆ ಗಿಡಕ ಭಾರಾಗ್ಯವನು ಗಿಡಸಹಿತ ಪ್ರಾಣ ವನು ಬಿಡುತಲೆ ಬಿದ್ದನು ತೆಳಗೆ ತಡವು ಇಲ್ಲದಲೆ| ಬಿಡದೆ ವಸುದೇವಜರು ಬಿಡಿ ಮೆಂದಿಗಳ ಕೊಂಡು ಖಡು ಹರುಷದಿಂದಲ್ಲೆ ಬಿಡದೆ ಗೋಪಾಲರಿಂದೊಡಗೂಡಿ ಎಲ್ಲಾರು ಖಡು ರುಚಿಕರಾಗಿರುವ ಗಿಡದ ಫಲಗಳ ತಿಂದು ನಡದರಾಲಯಕೆ|| 3 ಬಂದು ದಿನದಲಿ ದಿವಿಜವಂದಿತನು ಶ್ರೀ ಕೃಷ್ಣವಂದಿಸ್ಯಗ್ರಜಗ ಅವನ ಮಂದಿರದಲಿಟ್ಟು ಬಹು ಛಂದವಾಗಿರುವ ಕಾಳಿಂದಿಯಾ ತೀರದಲಿ ಬಂದÀ ಗೋಗೋಪಾಲ ವೃಂದವನು ಕಾಲಂದಿಯಲಿ ವಿಷಜಲವು ಛಂದಾಗಿ ಕುಡದುಮರಣ ಬದಿಕಿಸಿದ ಗೋವಿಂದ ಎಲ್ಲಾರನಾ|| 4 ಚಾರು ಕಾಲಿಂದಿಯಲಿ ನೀರು ವಿಷವಾದಕ್ಕೆ ಕಾರಣ ಹುಡುಕುವೆನೆಂದ ಶೌರಿಸುತ ಶ್ರೀಕೃಷ್ಣಸಾರ ಕಡಹಾಲ ಮರನೇರಿ ಆ ಮಡಿವಿನಲಿ ಹಾರಿದಾಕ್ಷಣಕ್ಕೆ ಉಕ್ಕೇರಿದಳು ಸಾರ ಮದಗಜದಂತೆ ನೀರೊಳಗೆ ಗಡಬಡಿಸಿ ಸಾರ ಸರ್ಪನ ಹಿಡಿದ ಕ್ರೂರನವ ಮೈಮ್ಯಾಲೇರಿ ಕಚ್ಚುತ ತನ್ನ ಶರೀರಪಾಶದಿ ಹರಿ ಶರೀರ ಸುತ್ತಿದನು||5 ದುಷ್ಟಾಹಿಯಿಂದ ನಿಶ್ಚೇಷ್ಟನಾದನು ಕೃಷ್ಣದೃಷ್ಟಿಯಿಂದಲಿ ನೋಡಿ ಅಷ್ಟು ಗೋಗಳು ಮತ್ತೆ ಅಷ್ಟೆಗೋಪಾಲಕರು ಕಷ್ಟವನು ಬಟ್ಟು ಉತ್ಕøಷ್ಟ ತಾಪದಲೆ ನಿಶ್ಬೇಷ್ಟರಾದರು ಅಲ್ಲೆ ಕಾಷ್ಟಮೂರ್ತಿಗಳಂತೆ ಸ್ಪಷ್ಟತೋರಿದರು| ಗೋಷ್ಟದಲಿ ಮತ್ತೆಲ್ಲ ದುಷಚಿನ್ಹವು ಕಂಡು ಶೇಷ್ಠ ನಂದಾದಿಗಳು ಕÀಷ್ಟದನು ಬಟ್ಟಸಂತುಷ್ಟರಾಮನ ಕೂಡಿ ಅಷ್ಟೂರು ನಡದರಾ ವೃಷ್ಣಿಕುಲ ತಿಲಕ ಶ್ರೀಕೃಷ್ಣ ಇದ್ದಲ್ಲೆ||6 ಮುಂದವನ ತಾಯಿ ಆಕಂದನಾ ಕಂಡು ಕಾಳಿಂದಿಯಲಿ ಧುಮುಕಬೇಕೆಂದು ಧಾವಿಸಲಾಗಿ ಮಂದಗಮನಿಯರೆಲ್ಲ ಹಿಂದಕ್ಕ ಸರಿಸಿದರು ನಂದಗೋಪನ ಹಿಡಿದು ಹಿಂದಕ್ಕ ಸರಿಸಿದನು óಛಂದದಲಿ ರೋಹಿಣಿಯ ಕಂದ ಬಲರಾಮಾ| ಮುಂದೆರಡು ಫಳಿಗಿ ಮ್ಯಾಲೆ ಛಂದಾಗಿ ಎಚ್ಚÀ್ಚರಿಕಿಯಿಂದ ಸರ್ಪನ ಹಿಡಿದು ಹಿಂದೊತ್ತಿ ಹೆಡಿಮೇಲೆ ಛóಂದಾಗಿ ಮಂದ ಹಾಸ್ಯದಿ ನಗುತ ನಂದಸುತ ಕುಣಿದ ಆನಂದದಿಂದಾ|| 7 ಪದ, ರಾಗ:ಆನಂದ ಭೈರವಿ ಆದಿತಾಳ ರಂಗ ಕುಣಿದ ಕಾಳಿಂಗನ ಹೆಡಿಮ್ಯಾಲ ಕಂಗಳಿಂದಲಿ ನೋಡಿ ಹಿಂಗದೆ ಸುರಕಿಲ್ಲ ಸಂಗೀತ ಸಹಿತ ಸಾರಂಗ ಮೃದಂಗ ತಾಲಂಗಳ ನುಡಿಸಿದರು ಹಿಂಗದಲೆ||ಪ ಹಿಂಗದೆ ಯಮುನಿ ತರಂಗಗಳಿಂದಲೆ ಮಂಗಳಾಂಗನ ಪಾದಂಗಳ ತೊಳುವಳು | ಅಂಗಾಲಿಲ್ಯವನು ಕಾಳಿಂಗನ ಮರ್ದಿಸಿ ಮಂಗಳ ಕೂಡುವ ಜಗಂಗಳಿಗೆ | ಮಂಗಳಕರ ಪುಷ್ಟಂಗಳ ದೃಷ್ಟಿಯ ರಂಗಗ ಮಾಳ್ಪರು ಹಿಂಗದೆ ದಿವಿಜರು ಭೃಂಗಕೋಕಿಲ ಮಯೂರಂಗಳು ಮಾಳ್ಪವು ರಂಗನ ಸಂಗಾತ ಸಂಗೀತವು|| 1 ಮುನ್ನಾಗಿ ಬಹುವರ್ಷ ತನ್ನ ಸಂದರ್ಶನವನ್ನು ಬಯಸುವಂಥ ಮಾನ್ಯಾದ ಮುನಿಗಳಿಗೆ ಚೆನ್ನಾಗಿ ಶ್ರೀಹರಿ ತನ್ನ ಕೃಷ್ಣರೂಪವನ್ನು ತೋರಿಸುತ ಪ್ರಸನ್ನನಾಗಿ| ಉನ್ನತವಾಗಿಹ ಪನ್ನಗಾಧೀಶನ ಉನ್ನತವಾಗಿಹ ಘನ್ನ ಹೆಡಿಗಳಲ್ಲಿ| ರನ್ನದಂಥೊಳುವಂಥಾ ತನ್ನ ಪಾದಗಳಟ್ಟು ತನ್ನಂಗಡ ಧಿನ್ನಂ ಗಡ ಧಿಕ್ಕಡ ಥೌ ಎಂದು|| 2 ಎಂತು ವರ್ಣಿಸಲಿ ಅನಂತ ಮಹಿಮಿಯು ಎಂಥವರಿಗೆ ಬಹಿರಂತವ್ರ್ಯಾಪತನಾಗ್ಯನಂತ ಪ್ರಾಣಿಗಳಲ್ಲಿ ನಿಂತಿರುವಾ| ಅಂತ್ಹತ್ತಗುಡದೆ ತನ್ನಂತೆ ತಾ ಕುಣಿದಾಡುವಂಥದಗನ್ಯ ದೃಷ್ಟಾಂತವೆಂಬುದಿಲ್ಲ ಇಂಥ ಎಲ್ಲರು ಭ್ರಾಂತರಾಗಿ|| 3 ಆರ್ಯಾ ಪದ, ರಾಗ :ಜಾಂಗಲಾ ಶ್ರೀ ಪತಿಯೇ ನಮ್ಮ ಪ್ರಾಣಪತಿಯ ಪಾಲಿಸು ಶ್ರೀ ಪತಿಯೆ|| ಪ ಪತಿಯು ಪಾವಿತನಾದ ಹಿತವಾಯಿತು||1 ಫಣಿಯ ಫಣಗಳಲ್ಲಿ ಪ್ರಣಯದಲಿ ಕಾಲಿಟ್ಟ ಶುಣಿಕುಣಿ ದಾಡಿದ್ದು ಗುಣವಾಯಿತು|| 2 ಮುದ್ದು ಮುಖದ ಅನಂತಾದ್ರೀಶ ದುಃಖ ಸಮುದ್ರದಿಂದ ನಮ್ಮನ್ನು ಉದ್ಧಾರ ಮಾಡು 3 ಆರ್ಯಾ ಕೃಷ್ಣ ವೇಣಿಯರ ಕಷ್ಟನೋಡಿ ಶ್ರೀ ಕೃಷ್ಣ ಅವನ ಬಿಟ್ಟನುಬ್ಯಾಗೆ| ಕೃಷ್ಣನೇ ಸಾಕ್ಷಾದ್ದಿಷ್ಣುನೆಂದು ಆ ಕೃಷಸರ್ಪ ನುಡಿದನು ಹೀಂಗೆ|| 3 ಭಕುತಿಯ ಕೊಡು ಮೋಹನಾ|| ಪ ಚನ್ನಾಗಿಕೊಡು ನೀನಿನ್ನಲ್ಲಿ ಧ್ಯಾನಾ||1 ಲೋಕನಾಥನೆ ನಿನ್ನ ತೋಕನೆಂದರಿತು|| 2 ಹರಿಯೆ ಅನಂತಾದ್ರಿ ದೊರಿಯೆ ಎಂದೆಂದು|| 3 ಆರ್ಯಾ ಕಾಳಿಯ ನುಡಿಯನು ಕೇಳುತ ಶ್ರೀ ಪತಿ ಭಾಳ ಪ್ರೇಮದಲಿ ಹೀಗೆಂದಾ | ಹೇಳುವೆ ಕಾಳಿಯ ಕೇಳ್ಯನ್ನಯ ವಚನಾ ಏಳು ಶೀಘ್ರದಲಿ ಇಲ್ಲಿಂದಾ|| 1
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಹತ್ತು ತಾಕ್ರ್ಷಸ್ಕಂಧ ಸಮಾರೂಢಃ ಶ್ರೀ ಬ್ರಹ್ಮಾದಿಭಿರಾವ್ನತಃ | ಧ್ವನಿ ಪರಿ ಪರಿ ಪ ಗರುಡನೇರಿದ ಶ್ರೀನಿವಾಸನು ರಾಜ ವರ ಹಂಸವನೇರಿದ ಬ್ರಹ್ಮನು ತ್ವರ ನಂದಿಯೇರಿದ ರುದ್ರನು ಅ ವರ ನಡುಮಧ್ಯೆ ನಡೆದ ಶ್ರೀಹರಿ ತಾನು 1 ದೇವಿಯೇರಿದಳಾಗ ರಥದಲಿ ಬಕುಲಾ ದೇವಿ ಯೇರಿದಳೊಂದು ರಥದಲಿ ಕೇವಲ ತಮ್ಮ ತಮ್ಮ ರಥದಲಿ ಉಳಿದ ದೇವಿಯರೇರಿ ಕೊಂಡರು ಅಲ್ಲಿ 2 ಉತ್ತಮ ಮಂಗಳವಾದ್ಯವು ನË ಬತ್ತು ನಗಾರಿಗಳಾದವು ಮತ್ತೆ ಉಳಿದ ಎಲ್ಲ ವಾದ್ಯಗಳು ಬಹು ವತ್ತಿ ಶಬ್ದಮಾಡಿ ನುಡಿದವು 3 ನಡೆದರು ಋಷಿಗಂಧರ್ವರು ಬಹು ಸಡಗರದಿಂದಲ್ಲೆ ಅಪ್ಸರರು ಬಡವ ಬಗ್ಗರು ಉಳಿದ ಮನುಜರು ಬಹು ಗಡಿಬಿಡಿಯಿಂದಲ್ಲೆ ನಡೆದರು 4 ಕುಂಟರು ಕುರುಡರು ಕಲ್ಲು ಕಂಟಕ ಕಾಲಿಲೆ ತುಳಿವವರೂ ಗಂಟು ತಲಿಯಲಿಟ್ಟುನಡಿಯುವರು ತಪ್ಪ ಗಂಟಾಗಿ ಒದರುತಲಿಹರು 5 ಕೆಲವರು ಗಂಡನ ಒದರುವರು ಮತ್ತ ಕೆಲವರು ಮಕ್ಕಳನೊದರುವರು ಕೆಲವರು ಎಡವುತಲಿರುವರು ಮತ್ತು ಕೆಲವರು ಭರದಿಂದ ಬೀಳುವರು 6 ಕೆಲವರೆಳೆದು ಎಬ್ಬಿಸುವರು ಮತ್ತು ಕೆಲವರು ನೋಡುತ ನಗುವವರು ಬಾಲರಳುವ ಧ್ವನಿ ಆಯಿತು ಜಗತ್ ಪಾಲನಸೈನ್ಯ ನಡೆಯಿತು ಮೇಲಾದನಂ ತಾಂದ್ರೀ ಇಳಿಯಿತು ಭೂಪಾಲಪುರದ್ಹಾದಿ ಹಿಡಿಯಿತು7 ವಚನ ಶೈಲವನು ಹಿಡಿದು ಭೂಪಾಲನಪುರತನಕ ಸಾಲ್ಹಿಡಿದು ನಡೆವಂಥ ಕಾಲದಲಿ ಮತ್ತಲ್ಲಿಡುವದಕ್ಕೆ ಎಳ್ಳು ಕಾಳಷ್ಟು ಸ್ಥಳವಿಲ್ಲ ಶ್ರೀಲಲಾಮನು ಮಧ್ಯಸಾಲಿನ ಮಧ್ಯಾಹ್ನ ಕಾಲ ದಲಿ ಶುಕಮುನಿಯ ಆಲಯಕೆ ಬಂದು ಕಾಲಿಗೆರಗಿದನು ಆಕಾಲಕೆ ಮುನಿ ಬಂದು ಹೇಳಿಕೊಂಡೀ ಪರಿಯು ಶೈಲ ಭೋಜನವು ಎನ್ನ ಮೇಲೆ ಕರುಣಿಯಿಂದಾ 1 ಹೀಗೆಂದು ನುಡಿದ ಶುಕಯೋಗಿಯ ವಚನವ ಕೇಳಿ ಬಾಗಿ ತಾ ನಮಿಸುತಲೆ ಆಗ ಶ್ರೀಹರಿ ನುಡಿದ ಯೋಗಿಗಳು ನಾ ಸಂಸಾರಿ ಆಗಿ ಇರವೆ ಇಲ್ಲೆ ಉಂಡರೆ ಮಿತಿಯ ಇಲ್ಲದಲೆ ಪುರದಲ್ಲೆ ಪೋಗುವುದು 2 ಮುನಿ ಮಂಡಲೇಶನು ಕೇಳಿಕೊಂಡು ಹೀಗೆಂದು ಬ್ರಹ್ಮಾಂಡ ಪತಿಯೆ ಒಬ್ಬ ಉಂಡರೆ ಜಗವೆಲ್ಲ ಉಂಡಂತೆ ಆಗುವುದು ಪುಂಡರೀಕಾಕ್ಷಾ ಭಾಳ ಕೇಳುತಲೆ ಮುಂದೆ ಬಾಲಕನ ಮುಖನೊಡಿ ಬಾಲೆ ನುಡಿದಳು ಬಕುಲ ಮಾಲಿಕೆಯು ತಾನು3 ಧ್ವನಿ:ವಸಂತಭೈರವಿ ಆದಿತಾಳ ತರವೆ ಹರಿಯೆ ಈ ಪರಿಯ ಮಾಡುವದುಪ ಸುಖಕರವಾಗಿಹ ಶುಕಮುನಿ ವಚನವು || ಲಕ್ಷಿಸದೆ ಶುಭಕಾರ್ಯಕೆ ಪೋಗುವದೂ 1 ಬಲ್ಲಿದ ಶಕುನವು ಇಲ್ಲೆನಿನಗೆ ತಿಳಿ| ಊಟಕೆ ಒಲ್ಲೆನೆಂಬುವದೂ 2 ಶ್ರೀಶ ಅನಂತಾದ್ರೀಶ ಮಹಾತ್ಮರ|| ಭಾಷೆಯ ಕೇವಲುದಾಸೀನ ಮಾಳ್ಪುದು 3 ವಚನ ಹೆತ್ತಾಯಿ ಪರಿಯಾಗಿ ಹೊತ್ತು ಹೊತ್ತಿಗೆ ತನಗೆ ಅತ್ಯಂತ ಹಿತ ಮಾಡುತಿರ್ದ ಬಕುಲಾವತಿ ಸತ್ಯವಚನ ಹರಿಯು ಮತ್ತು ಶುಕಮುನಿಗೆ ಉತ್ತರವ ಕೇಳಿ ಮುನಿ ಉತ್ತರಣೆಯು ಬೀಜ ಒತ್ತಿಕೈಯಲಿ ಮಾಡಿ ವೃತ್ತಾದ ಗುಳ್ಳ ಫಲದುತ್ತಮೋತ್ತಮಶಾಕ ತಿಂತ್ರಿಣಿಯ ರಸಸಹಿತ ಪಾತ್ರದಲಿ ಬಡಿಸಿ ಸತ್ಪಾತ್ರನಾಗಿರುವ ಸರ್ವೋತ್ತಮಗೆ ಅರ್ಪಿಸಿದ ಭಕ್ತಿಯಿಂದ 1 ತೃಪ್ತನಾದನು ನಿತ್ಯತೃಪ್ತ ಹರಿ ತಾ ಉಂಡು ಮತ್ತೆ ಮುನಿಗಳು ಎದ್ದರತ್ಯಂತ ಕೋಪದಲಿ ಚಿತ್ತಜನ ಪಿತ ಅವರ ಚಿತ್ತವೃತ್ತಿ ಸತ್ಯದಲಿ ಎಲ್ಲರಿಗೂ ತೃಪ್ತಿಯಾಗಲಿ ಎಂದು ತಿಳಿದು ಪೂತ್ಕಾರ ಮಾಡಿದನು ತತ್ಕಾಲದಲ್ಲಿ ಉತ್ತಮಳು ಶ್ರೀರಮಾ ಮತ್ತೆ ಬ್ರಹ್ಮಾದಿಗಳು ಸುತ್ತಸನ ಶುಕ ಸತ್ವ ಶೀಲರು ಉಳಿದ ಸುತ್ತೆಲ್ಲ ಜನರು ಸಂತೃಪ್ತರಾದರು ಹರಿಯ ಫೂತ್ಕಾರದಿಂದ 2 ನಿದ್ರೆಯನು ಮಾಡಿ ಅಲ್ಲಿದ್ದು ಆ ರಾತ್ರಿಯಲಿ ಎದ್ದು ಮರು ಕೂಡಿ ವಾದ್ಯ ವೈಭವ ದಿಂದ, ಸಿದ್ಧಾಗಿ ಬಂದರು ವಿಯದ್ರಾಜನ ಪುರಕೆ ಶುದ್ಧ ಸಂಜೆಯಲಿ ಮುದ್ದು ವೇಂಕಟ ಬಂದ ಸುದ್ದಿಯನು ಕೇಳುತ ವಿಯದ್ರಾಜ ತಾ ಬಹಳ ಉದ್ರೇಕದಿಂದಲೆ ಇದ್ದ ಜನರನು ವೈಭವದಿಂದ ಸಿದ್ಧನಾಗಿ3 ಧ್ವನಿ:ಕಾಂಬೋಧಿ ಆದಿತಾಳ ಆಕಾಲದಲಿ ಕಂಡನು ಹರಿಯಮುಖ ಆಕಾಲದಲಿ ಕಂಡನು ಎಲ್ಲರ ಕೂಡ ಆಕಾಶ ರಾಜನು ತಾನು1 ಹರುಷದಿಂದಲಿ ಉಬ್ಬಿದ ಹರಿಯ ಕಂಡು ಹರುಷದಿಂದಲಿ ಎದರುಗೊಂಡು ವರಪೂಜೆಯನು ಮಾಡಿದ 2 ಅಳಿಯಗಾಭರಣವನು ವಸ್ತ್ರವ ಕೊಟ್ಟು ಅಳಿಯಗಾಭರಣವನು ಉತ್ಸವದಿಂದೆ ಕಳಿಸಿ ಮನೆಗೆ ಪೋದನು3 ಶ್ರೀನಾಥದೇವ ತಾನು ಆ ಕಾಲಕ್ಕೆ ಶ್ರೀನಾಥದೇವ ತಾನು ಕರೆದುತೊಂಡ ಮಾನರಾಜಗೆ ನುಡಿದನು 4 ಹಸಿದು ಬಂದೆವು ನಾವೆಲ್ಲ ಉಣ್ಣದೆ ಬಹಳ ಹಸಿದು ಬಂದೆವು ನಾವೆಲ್ಲ ಬೇಗನೆ ಪಾಕ ಹಸನಾಗಿ ಮಾಡಿಸೆಲ್ಲ5 ಅಕ್ಕರದಲಿ ರಾಜನು ಆನುಡಿ ಕೇಳಿ ಅಕ್ಕರದಲಿ ಮಾಡಿಸಿದನು ರುಕ್ಕೋತದಡಿಗೆಯನು 6 ಮಂಡಿಗೆ ಗುಳ್ಳೋರಿಗೆ ಶಾವಿಗೆ ಮೊದಲು ತೊಂಡಮಾನÀನು ಚಂದಾಗಿ 7 ಹರಿಗೆ ಅರ್ಪಣೆ ಮಾಡಿದ ಎಲ್ಲರ ಕೂಡಿ ಹರಿಯು ಭೋಜನ ಮಾಡಿದ 8 ಆನಂದದಿಂದಿದ್ದನು ಆ ರಾತ್ರಿಯೊಳ್ ಆನಂದದಿಂದಿದ್ದನು ಮಾಡಿದ ನಿದ್ರೆ `ಅನಂತಾದ್ರೀಶ' ತಾನು 9 ವಚನ ಶ್ರೀನಿವಾಸ ಎದ್ದು ತಾನು ಮರುದಿನದಲಿ ಮಾನಿತ ವಶಿಷ್ಠ ಲಕ್ಷ್ಮೀಸಹಿತ ನೀನು ಬ್ರಹ್ಮನು ಮತ್ತೆ ಮಾನಿತಳು ಎನ್ನತಾಯಿ ತಾನು ಐವರು ಅನ್ನಹೀನರಗಿರುವುದು ಖೂನದಲಿ ಕನ್ನಿಕೆಯ ದಾನ ಪರ್ಯಂತ ಮಾನಿತನು ಆರಾಜಮಾನಿನಿಯು ಮತ್ತೆ ವಸು ದಾನರಾಜನು ಅನ್ನರಹಿತರೈವರು ಅವರು ಖೂನದಲಿ ಕನ್ನಿಕೆಯ ದಾನಪರ್ಯಂತ 1 ಪೇಳು ಅರಸನಿಗೆಂದು ಹರಿಯು ಹೇಳಿದಂತಾ ಭೂಮಿಪಾಲ ಮಾಡಿದನು ಮುನಿಹೇಳಿದಂತೆ ಮೇಲೆ ಮುನ್ನ ಸಾಯಾಹ್ನಕಾಲದಲಿ ಚತುರಂಗ ಸಾಲ ಸೈನ್ಯವು ನಡೆಸಿ ಕಾಳಿ, ಕರ್ಣಿಯ ತೂರ್ಯ, ತಾಳಮದ್ದಲೆ ಮೊದಲು ಭಾಳವಾದ್ಯ ಗಳಿಂದ ಮೇಲಾದ ಗುರುಮುಂದೆ ಮೇಲೆ ತನ್ನವರಿಂದ ಕಾಲನಡುತಿಯಲೆ ಹರಿಯ ಆಲಯಕೆ ಬಂದ 2 ಈ ವ್ಯಾಳ್ಯದಲಿ ಧರಣಿದೇವಿ ತಾ ಲಜ್ಜೆಯಲಿ ದೇವ ಗುರು ಬ್ರಹಸ್ಪತಿಯ ಕೇವಲಾಜ್ಞದಿ ದೇವದೇವ ಎನಿಸುವ ಅಳಿಯ ಶಾವಿಗೆಯ ಪರಮಾನ್ನ ವಿಯದ್ರಾಜ ಮುಂದಾ ವೇಳೆಯಲಿ ಐರಾವತದ ಮೇಲೆ ದೇವನ ಕುಳ್ಳಿರಿಸಿ ಬಂದನು ಮನೆಗೆ ತೀವ್ರದಿಂದ 3 ಆಕಾಲದಲಿ ತೋಂಡ ಸತಿ ನಿವಾಳಿಸುವತ ಚಲ್ಲಿದಳು ಶೈಲದೊಡೆಯನು ಗಜದ ಮೇಲಿಂದ ಇಳಿದು ಆಮೇಲೆ ತಾ ಬಂದಾ ಸುವಿಶಾಲ ಮಂಟಪಕೆ ಮೇಲಾದ ಗದ್ದಿಗೆಯ ಮೇಲೆ ವೇಂಕಟರಮಣನು ಕಾಲಿಟ್ಟು ಕುಳಿತನಾಮೇಲೆ ಬ್ರಹ್ಮಾದಿ ಗಳು ಗಾಲವ, ವಶಿಷ್ಠಮುನಿ ವಾಲ್ಮೀಕಿ ಭೃಗು ಜಟಾಜಾಲ ಸಂಪನ್ನ, ಶುಕ, ದಾಲ್ಭ್ಯ ಮೊದಲಾದವರು ಸಾಲ್ಹಿಡಿದು ಕುಳಿತರಾ ಕಾಲಕ್ಕೆ ಎಲ್ಲಾ ಒದಗಿ ಬೇಗನೆ ವಿಷ್ಣು ಪದರಾಜ4 ತೊಳೆದು ಆ ಉದಿಕ ಮಧುಸೂದನನ ಪೂಜೆ ಮಧುಪರ್ಕದಿಂದ ಬುಧಜನರು ಪೇಳಿದಾಜ್ಞೆಯಲಿ ಗೃಹ ದೇವತಾಸನದಲಿ ಹರಿಯ ಧ್ಯಾನದಲಿ ಇರುತಿರುವ ಮದನ ಮೋಹನ ಸನ್ನಿಧಿಗೆ ಸಮ್ಮುಖವಾಗಿ ಮುದದಿ ಇರಿಸಿದನಾಗ ಬದಿಲಿದ್ದ ಬೃಹಸ್ಪತಿಯ ಒದಗಿ ವಧು ವರಗಳಿಗೆ ವಿಹಿತದ ಅಂತಃಪÀಟವ ಮುದದಿ ಮಧ್ಯದಲ್ಲಿ ಪಿಡಿದು ಒದರಿದನು ಈ ಪರಿಯು ಮದವೆಯ ಕಾಲಕ್ಕೆ ಮಧುರÉೂೀಕ್ತಿಯಿಂದ5 ಧ್ವನಿ:ಸೌರಾಷ್ಟ್ರ ಅಟತಾಳ ಸಾವಧಾನ ಧೇ ವಾಧೀಶನ ಲಗ್ನ ದಿವ್ಯ ವೇಳೆಯಲ್ಲಿ ಸಾವಧಾನ ಪ ಪದ್ಮನಾಭನೆ ನೀನು ಸಿದ್ಧಾಗಿ ಇರು ಕಂಡ್ಯ ಸಾವಧಾನ ಪದ್ಮಾವತಿಯೆ ನೀನು ಪದ್ಮನಾಭನ ಸ್ಮರಿಸು ಸಾವಧಾನ 1 ಫಲಕಾಲದಲಿ ಚಂಚಲರಾಗದಲೆ ನೀವು ಸಾವಧಾನ ಕುಲದೇವಿ ಸ್ಮರಣಿ ನಿರ್ಮಲವಾಗಿ ಮಾಡಿರಿ ಸಾವಧಾನ 2 ಶ್ರೇಷ್ಠಾದ ಅತಿ ವಶಿಷ್ಠ ಮುನಿಗಳೆಲ್ಲ ಸಾವಧಾನ ಸ್ಪಷ್ಟಾಗಿ ಶ್ರೀ ಮಂಗಳಾಷ್ಟಕ ಪಠಿಸಿರಿ ಸಾವಧಾನ 3 ಮಂಗಳ ಮೂರುತಿ ಮನದಿಂ ಸ್ಮರಿಸಿರಿ ಸಾವಧಾನ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಯ್ಯೊ ಸಾಕಿದೇನು ಚಂದಾ ಮೈ ಸೋಕದಿರೆಲೋ ಮುಕುಂದ ಪ ಗಂಡನುಳ್ಳ ನಿಜ ಗರತೀ ಒಡ- ಗೊಂಡು ಬದಿಗೆ ಕೈ ತರುತೀ ಬಲು ಪುಂಡಾಟಗಳ ನೀನೆಸಗುತೀ1 ಹೆಚ್ಚು ನುಡಿಯದಿರು ನಂಟು ಕಂಡು ಹುಚ್ಚು ಮಾಡುವದುಂಟೂ ನಡೆ ಬಿಚ್ಚದಿರೆಲೊ ಮೊಲೆಗಂಟೂ 2 ಶ್ರೀದವಿಠಲ ಯದುರಾಯಾ ನಿನ್ನ ಪಾದಕೆರಗುವೆನಯ್ಯಾ ನಡು- ಬೀದಿಯೊಳಗೆ ಬಿಡು ಕೈಯ್ಯಾ 3
--------------
ಶ್ರೀದವಿಠಲರು
ಅರಿತವರಿಗತಿ ಸುಲಭ ಹರಿಯ ಪೂಜೆ ಪ ಅರಿಯದವ ನಿರ್ಭಾಗ್ಯತರ ಲೋಕದೊಳಗೆ ಅ.ಪ. ಹೈಮಾಂಡ ಮಂಟಪವು ಭೂಮಂಡಲವೆ ಪೀಠ ಸೋಮ ಸೂರ್ಯರೆ ದೀಪ ಭೂರುಹಗಳು ಚಾಮರಗಳತಿ ವಿಮಲ ವ್ಯೋಮ ಮಂಡಲ ಛತ್ರ ಯಾಮಾಷ್ಟಕರಗಳಷ್ಟದಳದ ಪದ್ಮವುಯೆಂದು 1 ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ ಮಲಯಜಾನಿಲವೇ ಶ್ರೀಗಂಧ ಧೂಪಾ ಇಳೆಯೊಳಗೆ ಬೆಳೆದ ಧಾನ್ಯಗಳೆಲ್ಲ ನೈವೇದ್ಯ ಥಳ ಥಳಿಪ ಮಿಂಚು ಕರ್ಪೂರದಾರತಿಗಳೆಂದು 2 ನಕ್ಷತ್ರ ಮಂಡಲವೇ ಲಕ್ಷ ದೀಪಾವಳಿಯು ದಕ್ಷಿಣೋತ್ತರ ಅಯನಗಳೇ ಬನವು ವೃಕ್ಷ ವಲ್ಲಿಜ, ಸುಫಲ ಪುಷ್ಪಗಳೊಳಗೆ ಲಕ್ಷ್ಮೀ ವಕ್ಷ ವ್ಯಾಪಕನಾಗಿ ತಾನೆ ಭೋಗಿಪನೆಂದು 3 ಗುಡುಗು ಸಪ್ತ ಸಮುದ್ರ ಸಿಡಿಲು ಘೋಷವೇ ವಾದ್ಯ ಪೊಡವಿಪರಿಗೀವ ಕಪ್ಪವೇ ಕಾಣಿಕೆಗಳು ಉಡುಪ ಭಾಸ್ಕರರ ಮಂಡಲಗಳಾದರ್ಶಗಳು ನಡೆವ ನಡೆಗಳು ಹರಿಗೆ ಬಿಡದೆ ನರ್ತನವೆಂದೂ 4 ಯುಗ ಚತುಷ್ಟಯವೆ ಪರಿಯಂಕ ಪಾದಗಳಬ್ದ ಬಿಗಿವ ಪಟ್ಟಿಗಳು ಕಂದಾಯ ಕಸಿ ಯೊ ಗಗನ ಮೇಲ್ಗಟ್ಟು ಸಂಕ್ರಮಣಗಳೇ ಬಡವುಗಳೂ ಭಗವಂತಗುಪಬರ್ಹಣಗಳು ಷಡೃತುಗಳೆಂದೂ 5 ನಾಗವಲ್ಲೆಗಳೆ ದಿವಸಗಳು ಕರಣವೇ ಕ್ರಮಕೆ ಯೋಗಗಳೇ ಚೂರ್ಣ ರಾತ್ರೆ ತಾಂಶೊಕ ಭೋಗವತೀ ಜಲವೆ ಗಂಡೂಷೋದಕ ಶುದ್ಧ ಸಾಗರವೆ ಪಾದೋದಕ ವಿರಾಡ್ರ್ರೂಪಗೆಂದು6 ಶಾತಕುಂಭೋಧರಾಂಡಾಂತಸ್ಥ ರೂಪ ಸಂ ಪ್ರೀತಿಯಿಂದಲಿ ಯಜಿಸಿ ಮೋದಿಪರನಾ ಮಿತ ಶೋಕರ ಮಾಡಿ ಸಂತೈಸುತಿಹ ಜಗ ನ್ನಾಥ ವಿಠಲ ಒಲಿದು ಸರ್ವ ಕಾಲಗಳಲ್ಲಿ 7
--------------
ಜಗನ್ನಾಥದಾಸರು
ಅಲ್ಲಿಂದಲ್ಲೆದೆಮಾ ಅಲ್ಲಿಂದಲ್ಲೆದೆ ಘನಗುರುಮಹಿಮೆ ಧ್ರುವ ಅಲ್ಲಿಂದಲ್ಲಿದ್ದು ತಿಳಿಯದು ಲೋಕಾ 1 ಅಲ್ಯಾವನಾದರ ಅಲ್ಲೆವೇ ತಿಳಿದಾ 2 ಬಲ್ಲಮಹಿಮರ ಬಲಗೊಂಡು ಕೇಳಿ 3 ಒಳಗಲ್ಲ ಹೊರಗಲ್ಲ ಒಳಿತಾಗಿ ಕೇಳಿ4 ಕೆಳಗಲ್ಲ ಮ್ಯಾಲಲ್ಲ ತಿಳಿದುಕೊಂಡು ನೋಡಿ 5 ಹಿಂದಲ್ಲ ಮುಂದಲ್ಲ ಸಂಧಿಸಿ ನೋಡಿ 6 ಎಡಕಲ್ಲ ಬಲಕಲ್ಲ ಪಡಕೊಂಡು ನೋಡಿ 7 ದೂರಲ್ಲ ಸಾರ್ಯಲ್ಲ ಅರಿತಿನ್ನು ನೋಡಿ 8 ಬೆಡಗಿನ ಮಾತಲ್ಲ ಕಡಗಂಡು ನೋಡಿ 9 ಸ್ಥೂಲಲ್ಲ ಸೂಕ್ಷ್ಮಲ್ಲ ಭೇದಿಸಿ ನೋಡಿ 10 ಮನದಿರಗಿ ಉನ್ಮನವಾಗಲಿಕ್ಕೆ 11 ಕಣ್ಣದಿರಗಿ ಕಣ್ಣ ನೋಡಲಿಕ್ಕೆ 12 ಎಚ್ಚತ್ತು ಅಲ್ಲಿವೆ ಯೋಚಿಸಲಿಕ್ಕೆ 13 ಅರವಿನ ಮುಂದ ಮರವಿನ ಹಿಂದ 14 ಜಾಗ್ರ ನಿದ್ರಿ ಮಧ್ಯ ಅರುವಾಗಲಿಕ್ಕೆ 15 ಗುರುಕೃಪೆಯಿಂದಲಿ ಗುರುತಿಟ್ಟು ನೋಡಿ16 ಸಾಧಕನಾದರ ಸಾಧಿಸಬಹುದಿದು 17 ಭೇದಿಸೇನೆಂದರೆ ಭೇದಿಸಬಹುದಿದು 18 ಸೂರ್ಯಾಡೇನಂದರ ಸೂರ್ಯಾಡಬಹುದಿದು 19 ಖೂನಹೇಳಿದ ಮ್ಯಾಲ ಙÁ್ಞನೇನಬಹುದು 20 ಹೆಜ್ಜೆ ಹೇಳಿದ ಮ್ಯಾಲ ಸಜ್ಜನ ಅವನೀಗ 21 ಚೆನ್ನಾಗ್ಹೇಳಿದ ಮ್ಯಾಲ ಮನ್ನಿಸಬಹುದಿದು 22 ಗುರುತಹೇಳಿದ ಮ್ಯಾಲ ಗುರುಸ್ವರೂಪ ತಾಂ 23 ಸರಗಹೇಳಿದ ಮ್ಯಾಲ ಶರಣೆಂಬುದಾತಗ 24 ಅಲ್ಲಿಂದಲ್ಲೆಂಬುದನುಭವಾಗಬೇಕು 25 ಅನುಭವದೋರಿದ ಘನಗುರು ನಮ್ಮಯ್ಯ 26 ಲೇಸು ಲೇಸು ನಮ್ಮ ಭಾಸ್ಕರ ಗುರುದಯ 27 ಭಾಸುತ ಭಾಸ್ಕರಕೋಟಿ ತೇಜಾದನು 28 ದಾಸಮಹಿಪತಿಗೆ ಲೇಸು ಲೇಸಾಯಿತು 29
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿಸಹಜವಿದು ಸಜ್ಜನರ ಮನಕೆ ಸಮ್ಮತವು ಪ ಕರಿಕೆಯಿಲ್ಲದ ಬಾಳು ಕರಿವರದನ ದಯೆ ಕೇಳುಅರಿತವರಿರೆ ಮನೆಯೊಳು ಅದು ಸ್ವರ್ಗವು ಕೇಳುಕರಣಿಕರೊಳಗಣ ನಂಟು ಕಟ್ಟಿದ ಹಣವಿನ ಗಂಟುಗುರುವಿನ ವಾಕ್ಯದಿ ಭಕ್ತಿ ಇಹಪರಕದು ಮುಕ್ತಿ1 ಒಕ್ಕಲಿಗಾಗದ ಗವುಡ ಮೇಲೆರಗಿ ಕುಕ್ಕುವ ಲಗಡಮಕ್ಕಳ ಪಡೆವುದು ಪುಣ್ಯ ನಲಿವು ನಗೆಗಳ ಪಣ್ಯಇಕ್ಕುವ ಅನ್ನವು ಧರ್ಮ ಇಹಪರಕದು ಅತಿ ಧರ್ಮಬಿಕ್ಕಳಿಕಿಕ್ಕಿದ ವ್ಯಾಧಿ ಯಮಪುರಕದು ಹಾದಿ2 ಕಂಡರೆ ಸೇರದ ನಾರಿ ಕೆಂಡವನುಗುಳುವ ಮಾರಿದಂಡವ ತೆರಿಸುವ ಪುತ್ರ ಹಗೆಗಳಿಗವ ಮಿತ್ರಉಂಡರೆ ಸೇರದ ತಾಯಿ ಉರಗನ ಮೆಕ್ಕೆ ಕಾಯಿಹಿಂಡನಗಲಿದ ಗೋವು ಹುಲಿಗಿಕ್ಕಿದ ಮೇವು 3 ಪರನಾರಿಯರೊಡನಾಟ ಗರಲವನಟ್ಟುಂಬಾಟಬರೆದೂ ಅರಿಯದ ಲೆಕ್ಕ ಕಡೆಯಲಿ ಬಹು ದುಕ್ಕಇರಿತಕೆ ಬೆದರುವ ಮದಕರಿ ಬಾಯ್ಕಿರಿವ ಕೋಡಗ ಮರಿಕರೆ ಬರಲರಿಯದ ಗಂಡ ಅವ ನಾಚಿಕೆ ಭಂಡ4 ಸಮಯಕ್ಕೊದಗದ ಅರ್ಥ ಸಾವಿರವಿದ್ದರು ವ್ಯರ್ಥಸವತಿಯರೊಳಗಣ ಕೂಟ ಎಳನಾಗರ ಕಾಟಅಮರರಿಗೊದಗದ ಯಾಗ ಆಡಿನ ಮೇಲಣ ರೋಗನಮ್ಮ ಆದಿಕೇಶವನ ಭಕ್ತ ಅವ ಜೀವನ್ಮುಕ್ತ 5
--------------
ಕನಕದಾಸ
ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ ಪ ಬಹುಜನರು ನೆರೆ ತಿಳಿದು ಪೇಳಿ ಮತ್ತಿದನು ಅ ಕುಹಕ ಯುಕುತಿಹೇವವಿಲ್ಲದ ಹೆಣ್ಣು ಗಜುಗ ಬೆಳೆದ ಕಣ್ಣುಸೇವೆಯರಿಯದ ದಣಿಯು ಕಲ್ಲಿನಾ ಕಣಿಯು1 ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸುನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸುಶರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡುಮರ್ಮವಿಲ್ಲದ ಮಾತು ಒಡಕು ಮಡಕೆ ತೂತು 2 ಭೃತ್ಯ ಅವ ಕ್ರೂರ ಕೃತ್ಯ 3 ಬಂಟ ಒಡಕು ಹರವಿಯ ಕಂಠಗಂಡಗಂಜದ ನಾರಿ ಅವಳೆ ಹೆಮ್ಮಾರಿ 4 ದಾತ ಅವ ಹೀನ ಜಾತಸೃಷ್ಟಿಯೊಳು ಕಾಗಿನೆಲೆಯಾದಿಕೇಶವನಂಘ್ರಿಮುಟ್ಟಿ ಭಜಿಸದ ನರನು ಅವನೆ ವಾನರನು 5
--------------
ಕನಕದಾಸ
ಆಡಿನ ಮರಿಯೆತ್ತಂಬುಧಿಯೊಳಾಡುವ ಕರಿಯೆತ್ತ ಮಾನವ ಮಾಡದಿರಚ್ಚುತ ನಾನೆಂಬ ಮನವಪ. ಯಾಡಮೂಢನೊಬ್ಬ ಎಲ್ಲಾ ಜಗದೊಳು ಗೂಢನಾಗಿ ನೋಡುತಿಹ ಸುಖಿಯೊಬ್ಬ ಗಡ ನಾಡರಿಯೆ ದುಃಖಿಯೊಬ್ಬ ಸುಖದಲ್ಲಿ ಲೋ- ಲಾಡುತಿಹ ನಿರನಿಷ್ಟನೊಬ್ಬ ಗಡ1 ಕಡಲ ಕಡೆದು ಸುಧೆಯ ನೋಡಿ ತ- ನ್ನೊಡಲ ಧಣಿಯಉಂಡವನೊಬ್ಬ ಹೆ- ಣ್ಣುಡಿಗೆಯನ್ನುಟ್ಟು ಅಸುರರ ಬಾಯ ಹೊಡೆದು ಬಡಿಸಿದವನೊಬ್ಬ ಗಡ 2 ಆಡುತಲಬ್ಧಿಯೊಳಡಗಿದದ್ರಿಯ ಕೋಡುಗಲ್ಲನೆತ್ತಿ ಹೂಡಲು ಬಲ್ಲೆಯ ಓಡುತಲೊಬ್ಬನೊರಗಿದ್ದನ ಕಣ್ಣೊಳೊಡದು ಮೂಡಿದÀಗ್ನಿಯಿಂದ ಸುಡುವೆಯ3 ಮಂದ ನೀನೊಬ್ಬನೆ ಮಾಡುವೆಯ ಲೆಕ್ಕವಿಲ್ಲದೆ ಮಕ್ಕಳ ಕೂಡಿದನ ಬಹಳ ಕೋಟಿಧನಂಗಳ ಕೂಡಿರ್ದಗೆ ಕೊಟ್ಟು ನೋಡಿ ಸುಖಿಪೆಯ 4 ದೃಢವಾಗಿ ನಿನ್ನುಂಗುಟ ನಖದಿಂ ದೊಡಲನಾದರು ಒಡೆಯಲಾಪೆಯ ಮೃಡಪ್ರಿಯ ಹಯವದನನಂತೆ ಮೂಢಜಾತಿಯಾಗಿ ವೇದ ಓದುವೆಯ 5
--------------
ವಾದಿರಾಜ
ಆನೆಯ ನೋಡಿರಯ್ಯ ನೀವೆಲ್ಲರುಆನಂದ ಪಡೆಯಿರಯ್ಯ ಪ ತಾನು ತನ್ನವರೆಂಬ ಮಾನವರ ಸಲಹಿದಅ ಪಾಂಡು ಚಕ್ರೇಶನ ಸುತರಿಗೊಲಿದಾನೆಗಂಡುಗಲಿ ಮಾಗಧನ ಒರಸಿದಾನೆಹಿಂಡು ಗೋವಳರೊಳಗೆ ಹಿರಿಯನ ಕಳೆಯದಾನೆಲಂಡರಿಗೆ ಎದೆಗೊಡುವ ಪುಂಡಾನೆ 1 ಬಾಲಕನ ನುಡಿಗೇಳಿ ಖಳನ ಸೀಳಿದಾನೆಪಾಲುಂಡು ವಿದುರನ ಸಲಹಿದಾನೆಲೋಲಾಕ್ಷಿ ಮಾನಭಂಗಕ್ಕೊದಗಿದಾನೆಖೂಳ ಶಿಶುಪಾಲನನು ಸೀಳಿದಾನೆ2 ಅಜಮಿಳನಿಗೆ ನಿಜಪದವಿಯ ಕೊಟ್ಟಾನೆಕುಜನರೆಲ್ಲರನು ಒರಗಿಸಿದಾನೆಅಜಪಿತ ಕಾಗಿನೆಲೆಯಾದಿಕೇಶವಾನೆತ್ರಿಜಗವಲ್ಲಭ ತಾನು ಭಜಕರ ವಶವಾನೆ 3
--------------
ಕನಕದಾಸ
ಆರ ನಂಬುಗೆ ಜಗದೆನಗಿಲ್ಲ ಹರಿಯೆ ಕಾರುಣ್ಯನಿಧಿ ನೀನೆ ಗತಿಯೆನಗೆ ಪೊರೆಯೈ ಪ ತಿಂಡಿಗ್ಹಾಕುವತನಕ ಹೆಂಡತಿಯು ನುಡಿಯುವಳು ಗಂಡನೇ ಗತಿಯೆಂದು ಮಂಡೆಯನು ಬಾಗಿ ತಿಂಡಿತಪ್ಪಿದ ಕ್ಷಣದಿ ಕಂಡಕಂಡತೆ ಕೂಗಿ ಬಂಡುಮಾಡುವಳಿಹ್ಯದಿ ಷಂಡನೆಂದಭವ 1 ಬಂಧುಬಾಂಧವರೆಲ್ಲ ಸಂದುಬಿಡಿದಡಿಗಡಿಗೆ ವಂದಿಸಿ ನುಡಿಯುವರು ತಿಂದುಡುವನತಕ ಸಂಧಿಸಲು ಬಡತನವು ವಂದಿಸಿದವರೆ ಮನ ಬಂದಂತೆ ನಿಂದಿಪರು ಕುಂದ್ಹೊರಿಸಿ ದೇವ 2 ಭೂಮಿಯ ಜನರೆಲ್ಲ ಕ್ಷೇಮ ನೀ ಕೊಟ್ಟಿರಲು ತಾಮಸವ ಬಿಟ್ಟು ಬಲು ಪ್ರೇಮ ಬಳಸುವರು ಸ್ವಾಮಿ ಶ್ರೀರಾಮ ನಿಮ್ಮ ಪ್ರೇಮ ತುಸು ತಪ್ಪಿದರೆ ಭೂಮಿಯೊಳಗಿನ ಕೇಡು ನಾ ಸ್ಮರಿಸಲಾರೆ 3
--------------
ರಾಮದಾಸರು
ಆರು ಬದುಕಿದರಯ್ಯ ಹರಿ ನಿನ್ನ ನಂಬಿ ಪ ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ ಅ ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆಸುಲಭದಲಿ ಕೌರವರ ಮನೆಯ ಮುರಿದೆನೆಲನ ಬೇಡಲು ಪೋಗಿ ಬಲಿಯ ಭೂಮಿಗೆ ತುಳಿದೆಮೊಲೆಯನುಣ್ಣಲು ಪೋಗಿ ಪೂತನಿಯ ಕೊಂದೆ 1 ಕರುಳೊಳಗೆ ಕತ್ತರಿಯನಿಟ್ಟೆ ಹಂಸಧ್ವಜನಸರಸದಿಂ ಮಗಳ ಗಂಡನ ಕೊಲಿಸಿದೆಮರುಳಿನಿಂದಲಿ ಪೋಗಿ ಭೃಗುಮುನಿಯ ಕಣ್ಣೊಡೆದೆಅರಿತು ನರಕಾಸುರನ ಹೆಂಡಿರನು ತಂದೆ2 ತಿರುಪೆ ಕೂಳ್ ಪುಟ್ಟದೈ ಕೃಷ್ಣ3
--------------
ಕನಕದಾಸ
ಆರೇನು ಮಾಡುವರು ಅವನಿಯೊಳಗೆ | ಕರ್ಮ ಫಣಿಯಲ್ಲಿ ಬರೆದುದಕೆ ಪ ಮಾಡಿದಡಿಗಿಯು ಕೆಡಲು ಮನಿಯ ಗಂಡನು ಬಿಡಲು | ಸತಿ ತನ್ನ ಕುಣಿಸ್ಯಾಡಲು ನಿಜದಿ || ಗೋಡೆಗೆ ಬರೆದ ಹುಲಿ ಘಡಘಡನೆ ತಿನಬರಲು | ಆಡಿದ ಮತುಗಳು ಅಖಿಳಿರು ನಿಜವೆನಲು 1 ಹೊಲ ಬೇಲಿ ಮೆಯ್ದರೆ ಮೊಲ ಇರಿಯ ಬಂದರೆ | ತಲೆಗೆ ತನ್ನ ಕೈ ಪೆಟ್ಟು ತಾಕಿದರೆ || ಹೆರಳು ಹಾವಾದರೆ ಗೆಳೆಯ ರಿಪುವಾದರೆ | ಕಲಿಸಿದ ಅವಲಕ್ಕಿ ಕಲಪರಟಿ ನುಂಗಿದರೆ 2 ಹೆತ್ತ ತಾಯಿ ಹಿಡಿದು ಮಕ್ಕಳಿಗೆ ವಿಷ ಹಾಕಿದರೆ | ಪೆತ್ತ ತಂದೆಯು ಹೊರಗೆ ಮಾಡಿದರೆ || ತೊತ್ತು ಅರಸಿಗೆ ಪ್ರತ್ಯುತ್ತರವನಾಡಿದರೆ | ಕತ್ತಲೆ ಬೆನ್ನಟ್ಟಿ ಕರಡ್ಯಾಗಿ ಬಂದರೆ 3 ಕಣ್ಣವೊಳಗಿನ ಗೊಂಬಿ ಕಾದ ಬಂದರೆ | ಹೆಣ್ಣಿನ ಹರಟೆ ಹೆಚ್ಚಾದರೆ | ಅನ್ನವನು ಉಣ್ಣಲು ಅಜೀರ್ಣವಾದರೆ | ಪುಣ್ಯಕ್ಷೇತ್ರಗಳಲ್ಲಿ ಪಾಪ ಅಟ್ಟಿಸಿದರೆ 4 ಏರಿ ಕುಳಿತ ಕುಂಬಿ ಎರಡಾಗಿ ಮುರಿದರೆ | ವಾರಿಧಿಗಳು ಮೇರೆ ಮೀರಿದರೆ || ಆರಿದ ಇದ್ದಲಿಗಳು ಅಗ್ನಿಯಾದರೆ | ನಮ್ಮ ವಿಜಯವಿಠ್ಠಲನಿರುವ ತನಕ 5
--------------
ವಿಜಯದಾಸ