ಒಟ್ಟು 32 ಕಡೆಗಳಲ್ಲಿ , 15 ದಾಸರು , 26 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೋತಂಪಲ್ಲಿ ಪ್ರಾಣದೇವರ ಸ್ತೋತ್ರ ಏನು ಕರುಣವೊ ನಿನಗೆ ಮೋತಪಲ್ಲಿಶಾ ||ದೀನ ದ್ವಿಜಗೊಲಿದು ಬಂದಿಲ್ಲಿ ನಿಂತೇ ಪ ವಿಪ್ರವರ ತಪಗೈಯ್ಯೆ | ನೀನೊಲಿದು ಅವನಿಗೆಕ್ಷಿಪ್ರದಿಂ ಕಿಂಪುರುಷ | ಖಂಡದಿಂಧ್ಹೊರಟೂ |ಅಪ್ರತಕ್ರ್ಯೊರು ಸ | ದ್ಗುಣ ಪೂರ್ಣ ಹರಿದೂತಸುಪ್ರಸನ್ನನು ಆಗಿ ಬಂದಿಲ್ಲಿ ನಿಂತೇ 1 ಸುಜನ ಜನರಂದೂ 2 ಪಾದ | ಪದ್ಮಯುಗವಾ ||ದ್ವಿಜಗುರೂ ಪ್ರಾಣಪತಿ | ತೈಜಸನು ತಾನಾಗಿ |ಭಜಕರಿಗೆ ಪೇಳಿದನು | ಸ್ವಪ್ನ ಸೂಚಿಸುತಾ 3 ಭಿನ್ನವಾಗಿದ್ದಂಥ | ಅಂಗಗಳ ಜೋಡಿಸುತನನ್ನೆಯಿಂ ತೈಲವನು | ಪೂಸೆನ್ನುತಾ |ತನ್ನ ಸದನದ ಕದವ | ನಾಲ್ವತ್ತು ಮತ್ತೊಂದುದಿನ್ನ ತೆಗೆಯದೆ ಲವಣ | ವ್ರತ ಮಾಳ್ಪುದೆಂದಾ 4 ಸದನ | ಕದ ತೆಗೆಯುತಿರಲೂ |ನೇಮ ಮೀರಿದ ಫಲವು | ತೋರುವನೊ ಎಂಬಂತೆಕೀಮು ರಕ್ತವ ಸ್ರವಿಸೆ | ವಕ್ಷದಲಿ ಕಂಗಳಲೀ 5 ತಪ್ಪು ತಪ್ಪೆಂದವನು | ದವಡೆಯನೆ ತಟ್ಟುತ್ತಅರ್ಪಿಸಲು ತನುಮನವ | ಭಕುತಿಯಿಂದಾ |ವಪ್ಪಿಕೊಳ್ಳುತ ಹನುಮ | ಸ್ವಪ್ನದಲಿ ಪೇಳಿದನುಅರ್ಪಿಸುವುದಲ್ಲಿಲಿ | ಶಾಲಿಗ್ರಾಮಗಳಾ6 ಹರಿಮಹಿಮೆ ಕೊಂಡಾಡಿ | ಬರದಂತೆ ತಾವ್ ಮಾಡಿನರಸಿಂಹ ವಸುದೇವ | ಸುತ ಶಾಲಿಗ್ರಾಮಗಳಾ |ಸ್ಥಿರಪಡಿಸಲಲ್ಲಿಲಿ | ಕರುಣದಿಂದಲಿ ದಿವ್ಯವರ ರೂಪದಿಂ ನಿಂತೆ | ಗುರು ಮಾರುತೀಶಾ 7 ಮಾಸ | ಎಂಟೈದನೇ ದಿನದಿನೆಂಟರೆಲ್ಲರು ಸೇರಿ | ಬಹು ಉತ್ಸವಗಳಾ |ಭಂಟರಾಮರ ನಿನಗೆ ಉಂಟು ಮಾಡಲು ಭಕ್ತಕಂಟಂಕಗಳ ನೀಗಿ | ವಾಂಛಿತವ ನೀನೇ 8 ಗುರುಗೋವಿಂದ ವಿಠಲ | ಪರಮ ಸೇವಕ ಹನುಮಪರಿ ಪರೀಯಲಿ ನಿನ್ನ | ಚರಣ ಯುಗ್ಮಗಳಾ |ಪರಮ ಭಕ್ತಿಲಿ ಸೇವೆ | ನೆರೆ ಮಾಳ್ಪ ಸುಖವಿತ್ತುಪರಮ ಪುರುಷನ ಕಾಂಬ | ವರ ಮಾರ್ಗ ತೋರೋ 9
--------------
ಗುರುಗೋವಿಂದವಿಠಲರು
ಯತಿ ವರ್ಣನೆ ಕಾಶೀಮಠದ ಶ್ರೀ ಭುವನೇಂದ್ರರ ಸ್ತುತಿ ಕಂಡು ಕೃತಾರ್ಥನಾದೆ ಭುವನೇಂದ್ರರಂಘ್ರಿಯ ಕಂಡು ಕೃತಾರ್ಥನಾದೆ ಪ. ಕಂಡು ಕೃತಾರ್ಥನಾದೆ ಭೂ- ಮಂಡಲದಿ ಪೆಸರ್ಗೊಂಡು ಮೆರೆದಿಹ ಪುಂಡರೀಕದಳಾಕ್ಷ ಸತತಾ- ಖಂಡಸುಖ ಮಾರ್ತಾಂಡತೇಜರ ಅ.ಪ. ವಾರಿರುಹಭವಾಂಡದ ಭೂಮಧ್ಯ ವಿ- ಸ್ತಾರಜಂಬೂದ್ವೀಪದ ನವಖಂಡದೊಳ್ ಸಾರಭರತಖಂಡದÀ ಹಿಮಗಿರಿಯ ಪಾಶ್ರ್ವದ ತೋರ್ಪ ವಿಂಧ್ಯಾಚಲದ ಮಧ್ಯ ಭಾ- ಗೀರಥಿಯ ಪಶ್ಚಿಮ ಭೂಭಾಗದ ತೀರ ಕಾಶೀಮಠಸಂಸ್ಥಾನ ವಿ- ಚಾರಶಾಸ್ತ್ರವಿಶಾರದರ ಪದ 1 ವರ ರಾಜೇಂದ್ರ ಯತೀಂದ್ರರ ಕರಸಂಜಾ- ತರ ಗುರುಸುರೇಂದ್ರರ ಕರಕಮಲಮಧ್ಯದಿ ಧರಿಸಿರ್ದ ವಿಭುದೇಂದ್ರರ ಸರೋರುಹ ಕರಸಂಜಾತ ಮಹಾನುಭಾವರ ಕರುಣನಿಧಿ ಕಮನೀಯ ಸದ್ಗುಣ ಭರಿತ ಶ್ರೀಭುವನೇಂದ್ರರಂಘ್ರಿಯ 2 ಸುಂದರಮುಖಶೋಭೆಯ ಪೂರ್ಣಮಿ ಶುಭ ಚಂದ್ರಸನ್ನಿಭಕಾಂತಿಯ ಶೋಭಿಪ ನವ ಕುಂದರದನ್ತಪಂಕ್ತಿಯ ತಿಲಕದ ಛಾಯ ಮಂದಹಾಸಾನಂದ ಪುರಜನ ವೃಂದಪೂಜಿತಪಾದಪದ್ಮ ದ್ವಂದ್ವ ಸತತಾನಂದ ಸದ್ಗುಣ ಇಂದ್ರ ಶ್ರೀಭುವನೇಂದ್ರರಂಘ್ರಿಯ 3 ಶೃಂಗಾರರಸತೇಜರ ಯಮನಿಯಮಾದ್ಯ ಷ್ಟಾಂಗಯೋಗಸರ್ವಜ್ಞರ ಪಾಪಾತ್ಮರ ಕಂಗಳಿಗಗೋಚರ ಸತ್ಯಾವತಾರ ಮಂಗಳಾತ್ಮಕಸಂಗ ಸುಮಮನಸ ರಂಗ ಸಾಧ್ಯವೇದಾಂಕ ಕರುಣಾ ಪಾಂಗ ವಿಬುಧೋತ್ತುಂಗ ಅಂಗಜ ಭಂಗ ಶ್ರೀಯತಿಪುಂಗವರ ಪದ 4 ಎಷ್ಟೆಂದು ನಾ ಪೇಳಲಿ ಸದ್ಗುರುವರ- ರಿಷ್ಟಕೆ ತೋಷ ತಾಳಲಿ ದಾರಿದ್ರ್ಯದ ಕಷ್ಟವೆಲ್ಲ ಪರಿಹರಿಸಲಿ ದಯವಿರಲಿ ಎನ್ನಲಿ ಶ್ರೇಷ್ಠ ಗೌಡಸಾರಸ್ವತ ಸ- ಮಷ್ಟಿ ಕೊಂಕಣದೇಶವಿಪ್ರ ವಿ- ಶಿಷ್ಟ ಒಡೆತನ ಪಟ್ಟವಾಳುವ ಶ್ರೇಷ್ಠಯತಿವರರಂಘ್ರಿಕಮಲವ 5 ಆಶೆಯೊಂದುಂಟೆನಗೆ ಕಾವ್ಯವ ಓದ್ಯ- ಭ್ಯಾಸಗೈಯುವದು ಮಿಗೆ ಸನ್ನಿಧಾನದಿ ಪೋಷಿಸಿ ಎನ್ನ ಹೀಗೆ ರಕ್ಷಿಸಲು ಕಡೆಗೆ ಏಸು ಧನ್ಯನು ನಾನು ಕರುಣಾ ನಿಗಮ ವಿ- ಲಾಸರಂಘ್ರಿಗೆ ದಾಸದಾಸರ ದಾಸ ನಾನು ದಯಾಶರಧಿಯರ 6 ಸತತ ಸದ್ಯತಿಧರ್ಮದ ಪರಿಪಾಲಿಸಿ ಕ್ಷಿತಿಗತಿ ಪ್ರತಿವಾಸವನಂತೆಸೆವುತಾ ಮಿತ ಭಾಗ್ಯಸಂಪದವ ವಿಖ್ಯಾತವ ರತಿಪತಿಯ ಪಿತ ಕ್ರುತುಪಾಲಿತ ಸೂ- ನೃತಭಾಷಿತ ಲಕ್ಷ್ಮೀನಾರಾಯಣ ಸತತ ವೇದವ್ಯಾಸ ಶ್ರೀರಘು ಪತೀಚರಣಪೂಜಿತರ ಪದವನು 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಯತಿ ವರ್ಣನೆ ಕಾಶೀಮಠದ ಶ್ರೀ ಭುವನೇಂದ್ರರ ಸ್ತುತಿ ಕಂಡು ಕೃತಾರ್ಥನಾದೆ ಭುವನೇಂದ್ರರಂಘ್ರಿಯ ಕಂಡು ಕೃತಾರ್ಥನಾದೆಪ. ಕಂಡು ಕೃತಾರ್ಥನಾದೆ ಭೂ- ಮಂಡಲದಿ ಪೆಸರ್ಗೊಂಡು ಮೆರೆದಿಹ ಪುಂಡರೀಕದಳಾಕ್ಷ ಸತತಾ- ಖಂಡಸುಖ ಮಾರ್ತಾಂಡತೇಜರಅ.ಪ. ವಾರಿರುಹಭವಾಂಡದ ಭೂಮಧ್ಯ ವಿ- ಸ್ತಾರಜಂಬೂದ್ವೀಪದ ನವಖಂಡದೊಳ್ ಸಾರಭರತಖಂಡದÀ ಹಿಮಗಿರಿಯ ಪಾಶ್ರ್ವದ ತೋರ್ಪ ವಿಂಧ್ಯಾಚಲದ ಮಧ್ಯ ಭಾ- ಗೀರಥಿಯ ಪಶ್ಚಿಮ ಭೂಭಾಗದ ತೀರ ಕಾಶೀಮಠಸಂಸ್ಥಾನ ವಿ- ಚಾರಶಾಸ್ತ್ರವಿಶಾರದರ ಪದ 1 ವರ ರಾಜೇಂದ್ರ ಯತೀಂದ್ರರ ಕರಸಂಜಾ- ತರ ಗುರುಸುರೇಂದ್ರರ ಕರಕಮಲಮಧ್ಯದಿ ಧರಿಸಿರ್ದ ವಿಭುದೇಂದ್ರರ ಸರೋರುಹ ಕರಸಂಜಾತ ಮಹಾನುಭಾವರ ಕರುಣನಿಧಿ ಕಮನೀಯ ಸದ್ಗುಣ ಭರಿತ ಶ್ರೀಭುವನೇಂದ್ರರಂಘ್ರಿಯ2 ಸುಂದರಮುಖಶೋಭೆಯ ಪೂರ್ಣಮಿ ಶುಭ ಚಂದ್ರಸನ್ನಿಭಕಾಂತಿಯ ಶೋಭಿಪ ನವ ಕುಂದರದನ್ತಪಂಕ್ತಿಯ ತಿಲಕದ ಛಾಯ ಮಂದಹಾಸಾನಂದ ಪುರಜನ ವೃಂದಪೂಜಿತಪಾದಪದ್ಮ ದ್ವಂದ್ವ ಸತತಾನಂದ ಸದ್ಗುಣ ಇಂದ್ರ ಶ್ರೀಭುವನೇಂದ್ರರಂಘ್ರಿಯ3 ಶೃಂಗಾರರಸತೇಜರ ಯಮನಿಯಮಾದ್ಯ ಷ್ಟಾಂಗಯೋಗಸರ್ವಜ್ಞರ ಪಾಪಾತ್ಮರ ಕಂಗಳಿಗಗೋಚರ ಸತ್ಯಾವತಾರ ಮಂಗಳಾತ್ಮಕಸಂಗ ಸುಮಮನಸ ರಂಗ ಸಾಧ್ಯವೇದಾಂಕ ಕರುಣಾ ಪಾಂಗ ವಿಬುಧೋತ್ತುಂಗ ಅಂಗಜ ಭಂಗ ಶ್ರೀಯತಿಪುಂಗವರ ಪದ4 ಎಷ್ಟೆಂದು ನಾ ಪೇಳಲಿ ಸದ್ಗುರುವರ- ರಿಷ್ಟಕೆ ತೋಷ ತಾಳಲಿ ದಾರಿದ್ರ್ಯದ ಕಷ್ಟವೆಲ್ಲ ಪರಿಹರಿಸಲಿ ದಯವಿರಲಿ ಎನ್ನಲಿ ಶ್ರೇಷ್ಠ ಗೌಡಸಾರಸ್ವತ ಸ- ಮಷ್ಟಿ ಕೊಂಕಣದೇಶವಿಪ್ರ ವಿ- ಶಿಷ್ಟ ಒಡೆತನ ಪಟ್ಟವಾಳುವ ಶ್ರೇಷ್ಠಯತಿವರರಂಘ್ರಿಕಮಲವ5 ಆಶೆಯೊಂದುಂಟೆನಗೆ ಕಾವ್ಯವ ಓದ್ಯ- ಭ್ಯಾಸಗೈಯುವದು ಮಿಗೆ ಸನ್ನಿಧಾನದಿ ಪೋಷಿಸಿ ಎನ್ನ ಹೀಗೆ ರಕ್ಷಿಸಲು ಕಡೆಗೆ ಏಸು ಧನ್ಯನು ನಾನು ಕರುಣಾ ನಿಗಮ ವಿ- ಲಾಸರಂಘ್ರಿಗೆ ದಾಸದಾಸರ ದಾಸ ನಾನು ದಯಾಶರಧಿಯರ6 ಸತತ ಸದ್ಯತಿಧರ್ಮದ ಪರಿಪಾಲಿಸಿ ಕ್ಷಿತಿಗತಿ ಪ್ರತಿವಾಸವನಂತೆಸೆವುತಾ ಮಿತ ಭಾಗ್ಯಸಂಪದವ ವಿಖ್ಯಾತವ ರತಿಪತಿಯ ಪಿತ ಕ್ರುತುಪಾಲಿತ ಸೂ- ನೃತಭಾಷಿತ ಲಕ್ಷ್ಮೀನಾರಾಯಣ ಸತತ ವೇದವ್ಯಾಸ ಶ್ರೀರಘು ಪತೀಚರಣಪೂಜಿತರ ಪದವನು7
--------------
ತುಪಾಕಿ ವೆಂಕಟರಮಣಾಚಾರ್ಯ
ಸಮೀರಜ ಹನುಮ ಎನ್ನ ಪ್ರಾಣಾಪದಕಾ ಪ ಶಿರಿಚರಣದಲಿ ಮಸ್ತಕವನಿಟ್ಟ ಹೊಂತಕಾರಿ ಸುರಪನಂದನನ ಕೊಲ್ಲಿಸಿದ ನಿರುತ ಉದಾರಿ ಪರಮ ನಿನ್ನಂಘ್ರಿಯವಾರಿ ಸತತ ಶಿರದಲಿ ಧರಿಸುವೆನು ರಿಪುನಿಕರ ಮಾರೀ1 ಉಂಗುರುವ ಕೊಂಡು ಸರ್ರನೆ ಸಾಗರ ಹಾರಿ ತುಂಗ ಮಹಿಮಳಿಗೆ ವಂದಿಸಿ ಗುರುತನೆ ತೋರಿ ಸಂಗಡಲೆ ಯಿತ್ತು ನಂದನ ಕಿತ್ತೆ ಬಲು ಮೀರಿ ಸಂಗರಕೆ ಬಂದ ವಿಕಾರಿಗಳ ನೋಡಿ ಭಂಗಬಡಿಸಿದೆ ಅವರ ಬಲವೆಲ್ಲ ತೂರಿ 2 ನಭಚರರು ಕೊಂಡಾಡೆ ಪುರವೆಲ್ಲ ದಹಿಸಿದೆ ಅಭಿವಂದಿಸಿ ಕುರುಹವರಿಯನ ಮುಂದುವರಿಸಿದೆ ಅಬುಧಿಯನು ವೇಗ ಬಂಧಿಸಿದೆ ಪರ್ವತವ ರಭಸ ಮಿಗೆ ತಂದು ಕಪಿಬಲವನೆಬ್ಬಿಸದೆ 3 ದಾತನಿಗೆ ರಥವಾಗಿ ಚಲ್ಲಿರಿದು ಬೊಬ್ಬಿರಿದೆ ಭೂತಳಕೆ ನೆಗ್ಗೊತ್ತಿ ಎದುರಾದವರ ತರಿದೆ ನೀ ತಡೆಯದೆ ಪೋಗಿ ಮೈರಾವಣನ ಮುರಿದೆ ಕೋತಿಗಳೊಳಗೆ ನೀ ಮೆರೆದೆ ವೇದ ವಿಖ್ಯಾತನೆ ರಾಮ ಸಹಭೋಜದಲಿ ನೆರೆದೆ 4 ಬಲವನು ಬೆಳಿಸಿ ವಾರಿಧಿಯ ಆಚೆಗೆ ಬಲವ ಆಲಸÀಗೈಸದಲೆ ದಾಟಿಸಿದೆ ಬಲು ಛಲವಾ ವಾಲಯದಲಿ ಮಾಡಿ ವೈರಿದಳವನು ಗೆಲುವಾ ಕಾಳಗದೊಳು ನಿನ್ನ ಬಲವ ಕೊಂಡಾಡಿದವರು ಮೂಲೋಕದೊಳಗೆ ಸವಿಯದು ಬಲು ಚೆಲುವಾ 5 ಶತಮೌಳಿಯನು ಕೊಲಿಸಿ ಸತ್ಕೀರ್ತಿಯನು ಪಡೆದೆ ಪ್ರತಿಕಕ್ಷಿ ನಿನಗಿಲ್ಲವೆಂದು ಸತ್ಯವ ನುಡಿದೆ ಸತತದಲಿ ಕಾಪಾಡು ಎನುತ ಪಾದವ ಪಿಡಿದೆ ಮತಿಯಲಿಡು ಎಂದು ಬೇಡಿದೆ ಅಭಯವ ಚತುರ ಫಲದಾಯಕನೆ ದಯಮಾಡು ಬಿಡದೆ 6 ಕಿಂಪುರುಷ ಖಂಡದಲಿ ನಿಜಮೂರುತಿಯ ಧ್ಯಾನ ಇಂಪಾಗಿ ಮಾಡುವ ಅಂಜನೆಯನಂದನಾ ಲಂಪಟವೆ ಸಾಕು ನಿನ್ನಯ ಸುರದ್ರುಮ ಚರಣ ಸಂಪಿನಲಿ ಪೊಂದಿಸನುದಿನ ಎನ್ನ ಗುರುಸಂಪತ್ತು ವಿಜಯವಿಠ್ಠಲನಲ್ಲಿ ಪ್ರಾಣಾ7
--------------
ವಿಜಯದಾಸ
ಸುತ್ತಬೇಕು ಜನ್ಮವೆತ್ತಬೇಕು ಪ ಕತ್ತಲೆ ಸಂಸಾರದೊಳು ಹೊತ್ತು ಹೊರೆಯ ನಿತ್ಯ ಅ.ಪ ಭರತಖಂಡದೊಳು ಪುಟ್ಟಿ ಮರುತ ಮತವ ಪೊಂದಿಕೊಂಡು ಗುರುಕೃಪೆಯನು ಪಡೆದು ಹರಿ ಸರ್ವೋತ್ತಮನೆಂದರಿಯೋ ತನಕ 1 ಅರಿಷಡ್ವರ್ಗವನ್ನೆ ತ್ಯಜಿಸಿ ದುರುಳರ ಸಂಗ ಕತ್ತರಿಸಿ ಪರಿ ಕಾರ್ಯ ಕರ್ಮದೊಳು ಹರಿಯು ತೋರುವ ತನಕ 2 ಬಿಂಬ ವಿಜಯ ರಾಮಚಂದ್ರ - ವಿಠಲರಾಯನು ಹೃದಯ ಅಂಬರದೊಳಗೆ ಪೊಳೆದು ಅಂಬವಿರಜೆಯಲಿ ಮುಳುಗೊ ತನಕ 3
--------------
ವಿಜಯ ರಾಮಚಂದ್ರವಿಠಲ
ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿತ್ಯದಲಿ ಅರಣೋದಯದಲೆದ್ದು ಭಕ್ತಿಪೂರ್ವಕವಾಗಿ ಕಠಿಣಶ್ರಮದಿ ಮಾಳ್ಪ ಪಾಪರಾಶಿಗಳ ಪರಿಹರಿಸುತ್ತ ಸಂತ್ಯೆಸುವಾ ಪ ಭಾಗೀರಥಿ ಸರಸ್ವತಿ ಯಮುನಾ ವಾರಾಣಾ ಶ್ರೀ ಗೋದ ಫಲ್ಗುಣಿ ಶೋಣಭದ್ರಾ ನರ್ಮ ದಾ ಗಂಡಕಿ ಭಿಮರಥಿ ತುಂಗಭದ್ರೆ ಪ್ರಯಾಗ ತ್ರಿವೇಣಿ ಹೇಮಾ ವೇಗವತಿ ಗಾಯತ್ರೀ ಕಾಶಿಮಣಿಕರ್ಣಿ ಕಾ ಗೌತಮಿ ವಿಯದ್ಗಂಗಾ ಕುಮುದ್ವತೀ ಸಿಂಧು ಪಾಪಾಘನಾಶಿನೀ 1 ಸರಯು ಜಯಮಂಗಳ ಜಮದಗ್ನಿ ವರತಾಮ್ರ ಪರಣಿ ಯೋಗಾನಂದ ಕೃತಮಾಲಕುಹು ಮಹೇ ಧುನಾಶಿ ಗರುಡ ಮದಿರಾ ಮರುದ್ವತಿ ಸ್ವರ್ಣಮುಖರಿ ವರ ಝರತಾಪಿನಿ ಕಾಳಿ ಸೌ ಪರಣಿ ದಕ್ಷಿಣೋತ್ತರಪಿನಾಕಿ ಕಪಿಲ ಶೀತಳ ಕಾನಂದ ಕುರಮುಖಿ ಪ್ರಣವಸಿದ್ಧ 2 ಕಾವೇರಿ ಸಿಧು ಮಾಲತಿ ಗಾರ್ಗಿಣಿ ಹರಿ ಕುಂದ ಕುಂದಿನಿ ಶೈವ ದೇವವತಿ ಪಾತಾಳ ಗಂಗಾ ಪುನಹ ನೀರಾ ಕುಮಾರಧಾರಾ ಸಾವಿತ್ರಿ ದಾನ್ಯಮಾಲಾ ಪುಷ್ಪವತಿ ಲೋಕ ಸಿಂಧು ಧರ್ಮಕು ಭವ ನಾಶಿನಿ ವರದಾ ಮಲಾಪಹಾರಿ 3 ಸ್ವಾಮಿ ಪುಷ್ಕರಣಿ ಮಾನಸ ಚಂದ್ರ ಪುಷ್ಕರಣಿ ಭೂಮಂಡಲದೊಳುತ್ತಮೋತ್ತಮ ತ್ರಿಪುಷ್ಕರಣಿ ನಿತ್ಯ ಪದ್ಮಸರ ಚಂದ್ರಭಾಗತೀರ್ಥ ವಾಮನ ಮಯೂರ ಪಂಪಾಸರೋವರ ಪುಣ್ಯ ಧಾಮ ವ್ಯಾಸ ಸಮುದ್ರ ಧವಳಗಂಗಾ ಸುಸಾ ರೋಮಹರ್ಷತೀರ್ಥ 4 ದ್ವಾರಕಾನಗರ ಸಾಲಗ್ರಾಮ ಟರರ ಬದರಿ ಕೇ ದಾರ ನರನಾರಾಯಣ ಶ್ರೀ ಮಜ್ಜಗನ್ನಾಥ ಶ್ರೀ ಮುಷ್ಣ ಮಂದರ ಮೈನಾಕ ಕೈಲಾಸ ಕಂಚಿ ಶ್ರೀರಂಗನಾಥ ನೈಮಿಷ ದ್ವೈತವನ ಚಂಪ ಕಾರುಣ್ಯ ಕಾಶಿ ಪಂಪಾವಂತಿಕಾ ಪುರಿ ಹರಿದ್ವಾರ ಛಾಯಾಪಿಪ್ಪಲ 5 ಕೇದಾರ ಸಾಗರ ಮಂದಾಕಿನಿ ಕುಸುಮವತಿ ಆದಿಸುಬ್ರಹ್ಮಣ್ಯ ಕೋಟೇಶ್ವರ ನಂದಿ ವೇದಪಾದ ಯಯಾತಿ ಗಿರಿ ಕಾಲಹಸ್ತಿ ಕೌ ಮೋದಕೀ ಪಾಡುರಂಗ ಕ್ಷೇತ್ರ ಶ್ರೀ ವಿಷ್ಣು ಪಾಟಲೀ ಮಂತ್ರಾಲಯ6 ಮಂದರ ಮಲಯ ಕೈವಲ್ಯನಾಥ ಕಾಶೀರ ಜಾಂಬವತಿ ವೃಂ ಶ್ರೀ ವಿರೂಪಾಕ್ಷ ಕುಂದರ ನಂದಪುರಿ ಮಾಯಾ ಶ್ರೀವತ್ಸ ಗಂಧಮಾದನ ಚಿತ್ರಕೂಟ ದ್ವಾ ನರಾಚಲಾಸೌಭದ್ರಿ ಆದಿನಾಥ 7 ಈ ಮಹಿಮಂಡಲದೊಳಿಪ್ಪ ತೀರ್ಥಕ್ಷೇತ್ರ ನಾಮಗಳ ಕಾಲತ್ರಯದಲ್ಲಿ ಸರಿಸುತಿಹ ಧೀಮಂತರಿಗೆ ಸಂಚಿತಾಪ ಪರಿಹರದಾನಂತರದಲಿ ಸೋಮಾರ್ಕರುಳನಕ ಸಕಲ ಭೋಗಗಳ ಸು ತ್ರಾಮಲೊಕದ ಲುಣಿಸಿ ಕರುಣಾಳು ಪ್ರಾತ್ಯಕೆ ಸ್ವ ಅಹುದೆಂದು ಸೂತ ಶೌನಕಣೆ ಪೇಳ್ದ8 ಈ ಭರತ ಖಂಡದೊಳಗುಳ್ಳ ತೀರ್ಥಕ್ಷೇತ್ರ ವೈಭವಾಬ್ಜ ಭವಾಂಡ ಪಾರನದೊಳಗೆ ಹರಿ ಪರಮಕಾರುಣ ದಿಂದ ಸ್ತ್ರೀಬಾಲ ಗೋವಿಪ್ರಮಾತ ಪಿತೃಗಳ ಧನ ಲೋಭದಿಂದಲಿಕೊಂದ ಪಾತಕವ ಪರಿಹರಿಸಿ ಬೇಡಿದಿಷ್ಟಾರ್ಥಗಳನು 9
--------------
ಜಗನ್ನಾಥದಾಸರು
ಹನುಮಂತಾ | ಮದ್ಗುರುವೆ | ಹನುಮಂತ ಪ ಹನುಮಂತ - ಗುಣಗಣ ನಿಲಯ | ಮುನಿಸನಕಾದಿ ಜನ ಮನಾಲಯ | ಆಹಮನ ಆದೀಂದ್ರಿಯ ನಿಯ | ಮನವನೆ ಮಾಡುತ್ತಅನುನಯದಿಂದಲಿ | ಪಾಲಿಪೆ ಸರ್ವರ ಅ.ಪ. ಅಂಜನೆ ಕುವರನೆ ಹನುಮ | ಚಿಣ್ಣಕಂಜ ಸಖಗೆ ಹಾರ್ದನಮ್ಮಾ | ಇಂದ್ರಸಂಜಯನನ ಹೊಡೆದನಮ್ಮಾ | ಶಿಶುಅಂಜಲಿಲ್ಲವು ನೀ ನೋಡಮ್ಮಾ | ಆಹಸಂಜಯಪಿತ ತನ್ನ | ಶ್ವಾಸ ನಿರೋಧಿಸೆಅಂಜಲು ಮೂರ್ಜಗ | ಕಂಜಾಕ್ಷ ಸಲಹೀದ 1 ರಾಮರ ಭಂಟ ಧೀಮಂತಾ | ಬಲಭೀಮ ಭಯಂಕರ ಅಮಿತಾ | ರೂಪನಾಮಗಳ್ ಪೊಂದುವ ಸತತಾ | ನೋಡುಕಾಮನಯ್ಯನ ಕಾಣ್ವ ನಿರತಾ | ಆಹಭೀಮ ಪ್ರಾಣಾನಂದ | ಮುನಿಯೆಂದು ಕರೆಸುತ್ತಬೊಮ್ಮನ ಪದವಿಯ | ಸಮ್ಮುದದಿ ಪಡೆವಂಥ 2 ಹರಿಯೆ ನೀನು ಪ್ರತಿಬಿಂಬಾ | ಪುರಹರಿಗೆ ನೀನು ಗುರು ಬಿಂಬಾ | ಸುರಾಸುರರ ನೀದಂಡಿಪಾ ಡಿಂಬಾ | ನಿನ್ನವರಣ ವರ್ಣಿಸುವುದು ಗುಂಭಾ | ಆಹಹರ ಮುಖಾದ್ಯರು ನಿನ್ನ | ನಿರುತದಿ ಸುತ್ತಿಸುತ್ತಪರಿಪರಿ ಗುಣರೂಪ | ಕ್ರಿಯೆಗಳ ನೋಳ್ಪರು 3 ನಿನಗೆಣೆ ಯಾರೊ ಸಮೀರ | ಮಹವನಧಿಯ ದಾಟಿದ ಧೀರ | ದೈತ್ಯಜನರ ನೀ ಸವರಿದ್ಯೋ ವೀರ | ದಶಾನನನ ನೀ ಸದದೆಯಾ ಶೂರ | ಆಹಜನಕಜ ರಮಣನ | ನೆನೆ ನೆನೆ ನೆನೆಯುತಅನುಗಾಲ ಕಿಂಪುರುಷ | ಖಂಡದಲಿರುವಂಥ 4 ಕುರುಕುಲ ವನಕೆ ಕುಠಾರ | ದುಷ್ಟಜರೆಯ ಸುತನ ಸೀಳ್ದ ಧೀರ | ಸತಿತರಳೆ ದ್ರೌಪದಿ ಕಾಯ್ದ ವೀರ | ದುರುಳದುರ್ಯೋಧನನ ಅಸು ಹರ | ಆಹಕುರುವಂಶಕನಳನೆ | ಧರಣಿ ಭಾರವ ನಿಳುಹನರಮೃಗ ಲೀಲೆಯಂ | ದರಿಗಳ ತರಿದಂಥ 5 ಯತಿಕುಲ ಕುಮುದಕೆ ಸೋಮ | ದಶಮತಿಯೆ ಮಾಯ್ಗಳ ತರಿದ ಭೀಮ | ಅಹಂಮತಿಯ ಕಳೆ ಸಾರ್ವಭೌಮ | ಜಗತ್ಪತಿಗೆ ನೀ ಸುಪವಿತ್ರ ಧಾಮಾ | ಆಹವಿತತ ಶ್ರೀ ಹರಿಯೆ ಸ | ರ್ವೋತ್ತಮನೆಂಬಂಥಸೂತ್ರಾರ್ಥ ರಚಿಸಿ ಸ | ಚ್ಛಾಸ್ತ್ರವನರುಹಿದ 6 ಪವಮಾನ ಪೊಗಳುವೆ ನಿನ್ನ | ಭವಭವಣೆಯ ಪಡಲಾರೆ ಘನ್ನ | ಗುರುಗೋವಿಂದ ವಿಠಲಾನ | ಚರಣ | ತೋರೊತವಕದಿ ನಿನ್ನೊಳು ಪವನ | ಆಹನವ ವಿಧ ಭಕುತಿಗೆ | ನೆಲೆಯು ನೀನಾಗಿಹೆತವಕೀರ್ತಿ ಪೊಗಳಲು | ಶಿವನಿಗು ಅಳವಲ್ಲ 7
--------------
ಗುರುಗೋವಿಂದವಿಠಲರು
ಹಾದಿಯ ಕೊಡುಹರಿ ಪರಗತಿಯಾ ಸಾಧಿಸಿ ಬಂದೇ ಕೇಳಿ ಕೀರುತಿಯಾ ಪ ಕ್ಷಿತಿಯೊಳು ಭರತ-ಖಂಡದ ದೇಶದ ಪತಿತರ ತಾಂಡೆಯದ ನಾಯಕನು ಮತಿ ಹೀನ ಕಾಮಕ್ರೋಧರಾಗಿಹ ಪುಂಡರು ಪಥ ನಡೆಗುಡಿಸರು ಅತಿಬಲರು 1 ಆದಿಲಿ ಅಜಮಿಳಾ ತಾಂಡ್ಯ ಹೋದ ಬಳಿಕಾ ಹಾದಿ ಮುಗ್ಗಿತಿ ಕಡೆ ಬಹುದಿನದೀ | ಸಾದರಲೆನಗನಿ ಅಭಯವ ಕೊಟ್ಟರ | ಭೇದಿಸಿ ಜನರನು ನೆರಹುವೆನು 2 ಏನಾರೆ ಗೋಣಿಗೆ ಭಾವದ ಲಹರೆ ಕÉೂಂಡು ಮಾನು ಭಾವರ ಪ್ಯಾಟಿ ಹೋಗಿಸುವುದು ಘನಗುರು ಮಹಿಪತಿ ನಂದನ ಸಾರಥೀ ದೀನ ವತ್ಸಲನೆಂಬ ಬಿರುದಹುದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಊರ್ವಶಿ :ಸಿಂಧುಶಯನ ವನದಿಂದಇಂದಿರೇಶ ಮುದದಿಂದ ಮೌನಿಮುನಿ-ವೃಂದದಿಂದ ಸ್ತುತಿವಂದನೆಗೊಳ್ಳುತ 1ಏಸುಲೋಭಿಯೊ ತಿಮ್ಮಶೆಟ್ಟಿ ಒಂದುಕಾಸಿಗೆ ಮಾರುವ ರೊಟ್ಟಿದಾಸರ ಕೂಡಿ ಜಗಜಟ್ಟಿ ಬಹುದೇಶವ ತಿರುಗುವ ಶೆಟ್ಟಿದೂಷಣಾರಿ ಪಾದಾಶ್ರಿತಜನರಭಿ-ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ 2ದೊಡ್ಡವನೈ ಮಹಾರಾಯ ಹಳೆದುಡ್ಡಿಗೆ ನೀಡುವ ಕೈಯಅಡ್ಡಿಗೈದರೆ ಬಿಡನಯ್ಯ ಇವಬಡ್ಡಿಕೇಳುವ ತಿಮ್ಮಯ್ಯದಡ್ಡುಕೇಸಕ್ಕಿಯ ಮಡ್ಡಿಪ್ರಸಾದವಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ 3ತಿರುಪತಿಗೆ ಪ್ರತಿಯಾಗಿ ಪಡುತಿರುಪತಿಯೆಂದಿಹಯೋಗಿಮೆರಸುವನೈ ಸ್ಥಿರವಾಗಿ ಶ್ರೀವರವೆಂಕಟ ಲೇಸಾಗಿಶರಣರು ಏನೆಂದು ಸಂತೋಷಿಪಕರುಣಾಕರ ಚಪ್ಪರ ಶ್ರೀನಿವಾಸನು 4ಈ ಪರಿಯಲಿ ಒಲಿದಿಪ್ಪಾ ಬಹುವ್ಯಾಪಾರಿ ತಿಮ್ಮಪ್ಪಾಕಾಪಟ್ಯರಿಗೆ ತಾನೊಪ್ಪನಮ್ಮಗೋಪಾಲಕಜಗದಪ್ಪಶ್ರೀಪರಮಾತ್ಮ ನಾನಾಪರಿ ವಿಭವದಿಗೋಪುರದಲಿ ತಾ ವ್ಯಾಪಿಸಿ ನಿಂದನು 5ರಂಭೆ : ನಾರೀವರ್ಯಾರಮ್ಮ ನೋಡಲುಸಾರಹೃದಯರಮ್ಮತೋರಣಛತ್ರಚಾಮರ ಬಿರುದುಗಳಿಂದಭೂರಿವಿಭವದಿಂದ ಸಾರಿಬರುವರಮ್ಮ1ಕರದಿ ಕಲಶವಿಹುದು ಶಾಲಿನನಿರಿ ಮುಂದಿರುತಿಹುದುಬೆರಳಿನೊಳುಂಗುರುವರದ್ವಾದಶನಾಮಧರಿಸಿ ಸಮಂತ್ರೋಚ್ಚರಿಸುತ ಬರುವರು 2ಮಂದಿಗಳೊಡ್ಡಿನಲಿ ಬರುವರುಮಂದಸ್ಮಿತದಲಿಚಂದದಿ ಜನಗಳಸಂದಣಿಮಧ್ಯದಿಇಂದಿರೆಯರಸನ ಧ್ಯಾನದಿ ಬರುವರು 3ಹಿಂಗದೆ ಬರುತಿಲ್ಲಿ ಮನಸಿನಇಂಗಿತವರಿತಿಲ್ಲಿಬಂಗಾರದ ಭೂಷಣಸಮುದಾಯದಿಅಂಗಜಪಿತನಿಗೆ ಶೃಂಗಾರಗೈವರು 4ವಿಪ್ರೋತ್ತಮರ ಗುಣ-ಕೆಂತು ಸೈರಣೆಯಾಂತು ನಾನಿರಲಿಚಿಂತಿತಾರ್ಥವನೀವ ಲಕ್ಷ್ಮೀ-ಕಾಂತ ಶ್ರೀನಿವಾಸನಂಘ್ರಿಯಸಂತಸದಿ ಪೂಜಾದಿ ಸತತಿ-ಯಾಂತಕೊಂಡಿಹೇಕಾಂತಭಕ್ತರು 1ಒಂದು ಭಾಗ ಪುರಾಣಿಕರು ತಾವೆಂದುಕೀರ್ತಿಯನು ಧರಿಸಿ ಮ-ತ್ತೊಂದು ಭಾಗದಿ ಜೋಯಿಸರುತಾವೆಂದು ಧರ್ಮವನು ಪಾಲಿಸಿಸಿಂಧುಶಯನನ ಚಾರುಚರಣ-ದ್ವಂದ್ವಕಾನತರಾಗಿ ಲೋಕದಿವಂದ್ಯರೆನಿಸಿಯಾನಂದ ಪರರಿವ-ರೆಂದು ಶ್ರೀಗೋವಿಂದ ನಡೆಸುವ 2ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿವಾದಗೈವ ಕುವಾದಿಗಳ ಮನ-ಭೇದಿಸುತ ನಿಜವಾದ ಮಾರ್ಗವಶೋಧನೆಗೆ ತಾವೈದಿಸುವ ಮಹಾಸಾಧುಗಳಿಂದ ದೃಢವಾದ ಮಾತಿದು 3ಅಂಬುಜಾಕ್ಷಿಯೇನೆಂಬೆಮೇಗರೆಡಂಭಮಾತಲ್ಲ ಧನಿಯ ಕು-ಟುಂಬವೆನುತಲಿ ತುಂಬ ಕೀರ್ತಿಯಗೊಂಬರೆ ಎಲ್ಲ ಸಂತಸಸಂಭ್ರಮದಿ ವೇದ್ಯಾಂಬುನಿಧಿಯಲಿತುಂಬಿರುವರೀ ಕುಂಭಿನಿಯೊಳು ಜ-ಸಂಬಡುವುದು ವಾಸಿಷ್ಠಗೋತ್ರಜ-ರೆಂಬ ವಿಪ್ರಕದಂಬಪೂಜ್ಯರು 4ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆಆಲೋಚಿಸಲರಿದಾ ಕಮಲಾಲೋಲನಮಹಾಲೀಲೆ 2ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇಮೂರ್ಲೋಕದೊಳಗೆ ಇಂಥಲೀಲೆಯ ನಾನರಿಯೆ 3ಫಾಲೇಂದು ಕುಂದದ ವರ್ಣಕೋಲು ಚಾಮರಗಳನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು 4ಚಂಡವೈಶ್ವಾನರನ ತೇಜಾಖಂಡದಿಂದೋರಂತೆಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ 5ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿಆದಿನಾರಾಯಣ ಮದುಸೂದನನೆ ಮುದದಿ 6ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರುನಾದಿನಿ ಕೇಳಿದರ ಪರಿಯನೀ ದಯದಿಂದುಸುರು 7ದೇವನಾಗಮನವೆಲ್ಲನೂದೀವಟಿಗೆ ಸೇವೆಯೆಂದು ಪೇಳುವರುಭಾವುಕರು ಮನದೊಳಂದು 1ಕೇಳಿದರೆ ಆಲಸಾಯನವನು ಸುರಿದುಆಯತವನು ವರ್ಣಿಸುವಡೆ ಬಾಯಿಯುಸಾವಿರ ಸಾಲದುಶ್ರೀಯರಸನ ಮಹಿಮೆಯರಿವದಾರಿಗಳವಲ್ಲ 3ಜಯಜಯ ಭಕ್ತಸುಪೋಷಣ ಜಯಜಯದೈತ್ಯವಿನಾಶನಜಯಜಯ ಜಾಹ್ನವಿತಾತ ಜಯಜಯ ಜಗದಾತಜಯಜಯ ರವಿಶತತೇಜ ಜಯಜಯಆಶ್ರಿತ ಸುರಭೂಜಜಯಜಯ ನಾದದಿಯೇರ್ದ ನಿರ್ಭಯತೋರುತ ಒಲಿದು 4* * *ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ-ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ 1ಸೇವೆಯ ಕೈಕೊಳ್ಳು ಎನುತಡ್ಡಬಿದ್ದರು ನೋಡೆ ತಂಗಿ ಭಕ್ತಿಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ-ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ 3ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ-ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ 4ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥಮೌರಿಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ-ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ 6ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ-ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ 7ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ-ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ 8ಚಿತ್ತೈಸಿದನಿಲ್ಲಿನಿತ್ಯಉತ್ಸಹಲೋಲ ನೋಡೆ ತಂಗಿ ಭಕ್ತ-ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ 9ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ 10ಯಾವಾಗಲು ಬರುವವನಲ್ಲ ಧನಿಯೆಂದುನೋಡೆ ತಂಗಿ ನಮ್ಮದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ 11ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ-ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12ಭೂರಿಕದಳಿಚೂತಪನಸ ಫಲಗಳನ್ನುನೋಡೆ ತಂಗಿ ಮಹಾ-ಮೇರುವಿಗೆಣೆಯಾದ ಮೇರ್ವೆಶೃಂಗಾರವ ನೋಡೆ ತಂಗಿ 13ಸುತ್ತುಮುತ್ತಲು ಝಲ್ಲಿಗಳಾನಂದವ ನೋಡೆ ತಂಗಿ ಅದ-ರೊತ್ತಿಲಿರುವ ಪಲ್ಲವ ಪೂಗಳ ಮಾಲೆ ನೋಡೆ ತಂಗಿ 14ಮೇಲೆ ಕಟ್ಟಿರುವ ಪತಾಕೆನಿಶಾನಿಯ ನೋಡೆ ತಂಗಿ ಸಾಲು-ಸಾಲಿನ ಅಂಕಣದೊಳಗಿಹ ಬೊಂಬೆಯ ನೋಡೆ ತಂಗಿ 15ಬಾಣಬಿರುಸು ಜೇನುಂಡೆಯ ಶಬ್ದವ ನೋಡೆ ತಂಗಿ ವೀಣಾ-ವೇಣುಸುಗಾನ ಸಂಗೀತ ಮನೋಹರ ನೋಡೆ ತಂಗಿ16ತಾಳಮೃದಂಗ ಸುಸ್ವರ ರಂಜಿತದಿಂದ ನೋಡೆ ತಂಗಿ ಗಣಿ-ಕಾಲತಾಂಗಿಯರ ಗಾಯನದಭಿನಯನ್ನು ನೋಡೆ ತಂಗಿ 17ಕಾಲುಂಗುರ ಗೆಜ್ಜೆಗಳಕಟ್ಟಿಕುಣಿವರು ನೋಡೆ ತಂಗಿ ತಮ್ಮಮೇಲುದನೋಸರಿಸುತ್ತ ಮೋಹಿಸುವರು ನೋಡೆ ತಂಗಿ 18ಕಂತುಪಿತನು ಇಲ್ಲಿ ನಿಂತನು ವಿಭವದಿ ನೋಡೆ ತಂಗಿ ತದ-ನಂತರದಲಿ ಆರತಿಯನುಗೊಂಡನು ನೋಡೆ ತಂಗಿ 19ಭೂತಪದೊಳಗೀ ನೂತನವೆಲ್ಲುಂಟು ನೋಡೆ ತಂಗಿ ಹರಿ-ಪ್ರೀತರಾಗಿರುವನಾಥರ ಸೇವೆಯ ನೋಡೆ ತಂಗಿ 20ವೇದೋದ್ಧಾರಕ ನಿನ್ನ ಪಾದವೇ ಗತಿಯೆಂದುನೋಡೆ ತಂಗಿ ಮಹಾ-ಸಾಧುಗಳತ್ತಲು ಕಾದುಕೊಂಡಿರುವರು ನೋಡೆ ತಂಗಿ 21ಚರಣನಂಬಿದ ತನ್ನ ಶರಣರ ಪೊರೆಯೆಂದುನೋಡೆ ತಂಗಿ ತಾನುತ್ವರಿತದಿ ಬಂದನು ಉರುತರ ತೋಷದಿ ನೋಡೆ ತಂಗಿ 22ಮನೆಮನೆಗಳ ಸಮ್ಮುಖದಲ್ಲಿ ದೀಪವ ನೋಡೆ ತಂಗಿ ಎಲ್ಲಾಜನಗಳು ಕೈಗಳ ಮುಗಿದು ನಿಂದಿರುವರು ನೋಡೆ ತಂಗಿ 23ರಾಜ ಬೀದಿಯೊಳು ವಿರಾಜಿಪ ತೋರಣನೋಡೆ ತಂಗಿ ಸುರ-ಭೂಜದಂತಿಹ ಮಹಾಸೋಜಿಗಕುರುಜವ ನೋಡೆ ತಂಗಿ24ಕಂತುಜನಕನಿಲ್ಲಿ ನಿಂತು ಪೂಜೆಯಗೊಂಡನೋಡೆ ತಂಗಿ ತದ-ನಂತರದಲಿ ಮನಸಂತೋಷಪಡಿಸಿದ ನೋಡೆ ತಂಗಿ 25ಮುಂದೆ ಬರುವ ಜನಸಂದಣಿಗಳ ಮಧ್ಯ ನೋಡೆ ತಂಗಿ ಇ-ನ್ನೊಂದು ಗೂಡಿನ ಪರಿಯಂದವ ನೀನಿತ್ತ ನೋಡೆ ತಂಗಿ 26ಮಾಣಿಕ್ಯರಾಸಿಯಮಾಣದೆಇಟ್ಟರೊ ನೋಡೆ ತಂಗಿ ಸರಿ-ಗಾಣೆ ಈ ಗುಡಿಗೆ ಜಾಣೆ ನೀ ಮನವಿಟ್ಟು ನೋಡೆ ತಂಗಿ 27ಮೂಡಿತೊ ಸೂರ್ಯನ ಕಿರಣಗಳೆಂಬಂತೆನೋಡೆ ತಂಗಿ ಇಂಥಗೂಡಿನೊಳಗೆ ದಯಮಾಡಿ ಸೇವೆಯಗೊಂಡ ನೋಡೆ ತಂಗಿ28ತರುಣಿಯರನ್ನಳೆಯಿತ್ತ ಶರಧಿಯಂತುಕ್ಕುತನೋಡೆ ತಂಗಿ ಭೂರಿ-ಹರುಷದಿಂ ಬರುವ ಭಕ್ತರನೇಕರು ನೋಡೆ ತಂಗಿ 29ಹರಿಯೇ ನೀ ಎಮ್ಮಯ ಪೊರೆಯೆಂದು ಭಕ್ತಿಯೊಳ್ನೋಡೆ ತಂಗಿ ಬಂದುಚರಣಕಾನತರಾಗಿ ಅರಿಕೆಯ ಗೈವರು ನೋಡೆ ತಂಗಿ 30ಮಕ್ಕಳನರಸಿ ಮಾತೆಯು ಪೋಗುವಂದದಿನೋಡೆ ತಂಗಿ ಮಹಾ-ರಕ್ಕಸವೈರಿಯು ದಯಮಾಡಿ ಪೊರಟನು ನೋಡೆ ತಂಗಿ 31ಪರಮಪುರುಷ ಭೂರಿವಿಭವದಿ ಬರುವುದನೋಡೆ ತಂಗಿ ಬಾಣಬಿರುಸುಗಳೆಲ್ಲವು ಸುರುಸುರುಯೆಂಬುದು ನೋಡೆ ತಂಗಿ 32ಫಲ್ಲನೆ ಹೊಳೆಯುವ ಹಿಮಕರಜ್ಯೋತಿಯನೋಡೆ ತಂಗಿ ಮನಘಲ್ಲೆನಿಸುತ್ತಿಹ ಬೆಡಿಖಂಬಧ್ವನಿಯನು ನೋಡೆ ತಂಗಿ 33ಭುಗಿಲು ಭುಗಿಲು ಧಗಧಗಲೆನ್ನುತಲಿದೆ ನೋಡೆ ತಂಗಿ ಕಿ-ಡಿಗಳನುಗುಳುವ ವಸನಪ್ರಕಾಶವ ನೋಡೆ ತಂಗಿ 34ಈ ರೀತಿಯ ವಿಭವದಿ ಏರಿದ ಮೇರ್ವೆಯ ನೋಡೆ ತಂಗಿ ರತ್ನ-ದಾರತಿಯಗೊಂಡನು ಶ್ರೀನಿವಾಸನು ನೋಡೆ ತಂಗಿ 35ಲೋಕದೊಳಗೆ ನೂತನವಿದೊಂದನು ನೋಡೆ ತಂಗಿ ಅ-ನೇಕ ಮಕ್ಕಳುಗಳ ನೇತಾಡಿಸುವದ ನೋಡೆ ತಂಗಿ 36ಪುತ್ರೋತ್ಸವ ಫಲಗಳು ದೊರಕಿದ ಕಾರಣ ನೋಡೆ ತಂಗಿ ಇದು-ಪುತ್ರ ಫಲಾವಳಿ ಹರಕೆಯಂಬರು ಕಾಣೆ ನೋಡೆ ತಂಗಿ 37ಇಳಿದನು ಇಂದಿರೆಯರಸನು ಮೇರ್ವೆಯ ನೋಡೆ ತಂಗಿ ರಥ-ದೊಳಗಿದ್ದ ಪರತತ್ವರೂಪನು ಸಹಿತಲಿ ನೋಡೆ ತಂಗಿ 38ಮಾಣದೆಭಕ್ತರ ಮಮತೆಯ ಕಾರಣ ನೋಡೆ ತಂಗಿ ಮುಖ್ಯ-ಪ್ರಾಣರಲ್ಲಿಗೆ ಪೋದರಿಬ್ಬರು ಒಂದಾಗಿ ನೋಡೆ ತಂಗಿ 39ಅವರಿವರಂತಲ್ಲ ದೊರೆ ಹನುಮಂತನು ನೋಡೆ ತಂಗಿ ಪಟ್ಟ-ದರಸನ ಸಹಿತಿಲ್ಲಿ ಇಳಿಸಿದನಲ್ಲವೆ ನೋಡೆ ತಂಗಿ 40ಹನುಮನ ಸೇವೆಯ ಕೈಕೊಂಡು ಕರುಣದಿನೋಡೆ ತಂಗಿ ಮತಘನವಾದ ಶೇಷತೀರ್ಥವ ನೋಡಿ ಬಂದನು ನೋಡೆ ತಂಗಿ41* * *ಬಂದನು ತ್ರೈಜಗದೀಶ ನಡೆ-ತಂದನು ರವಿಕೋಟಿಭಾಸ ಸರ್ವೇಶ ಪ.ಪಲ್ಲಂಕಿಯಲಿ ತಾನೇರಿ ಭಕ್ತ-ಸುಲ್ಲಭ ಸುತ್ತುಬರುವನೆಲೆ ನಾರಿಸಲ್ಲಲಿತಾರ್ಥ ಋಗ್ವೇದ್ಯಜುರ್ವೇದವ-ನೆಲ್ಲವ ಲಾಲಿಸಿ ಉಲ್ಲಾಸದೊಳಗೆ 1ಸಂಗೀತನರ್ತನಗಳನು ಪೂರ್ಣ-ಮಂಗಲಕರ ವೀಣಾವೇಣುಗಾನವನುಶೃಂಗಾರ ಪದ್ಮಮೃದಂಗ ಸರ್ವಾದ್ಯಪ್ರ-ಸಂಗದಿ ಒಲಿಯುತಗಜನಕನು 2ಕಪಟನಾಟಕಸೂತ್ರಧಾರಿ ಸರೀ-ಸೃಪಗಿರಿರಾಜ ದಾನವಕುಲವೈರಿಅಪರೂಪವಾದ ಮಂಟಪದಲಿ ಮಂಡಿಸಿಕೃಪೆಯ ಬೀರಿದನು ಸೇವಿಪ ಭಕ್ತರಿಂಗೆ 3ಭಕುತರಾಯಾಸವನೆಲ್ಲ ತನಶಕುತಿಯಿಂದಲಿ ಬಿಡಿಸಿದನದನ್ನೆಲ್ಲಅಖಿಳಭಯಗಳ ನಿವಾರಿಸಿ ತೆಗೆಯುತ್ತಮುಕುತಿದಾಯಕನು ಗೃಹಾಂತರಕ್ಕೈದಿದನು 4ಇಂದ್ರಾದಿ ದೇವತೆಯರನು ಅರ್ಧ-ಚಂದ್ರಶೇಖರಪ್ರಮಥಾದಿ ಗಣವನುಇಂದುಗೋವಿಂದನು ಚಂದದಿ ಸಂತುಷ್ಟಿ-ಹೊಂದಿಸಿ ಸರ್ವಾನಂದವ ತೋರ್ದನು 5ಆದ್ಯಂತ ಭಕ್ತರ ನೋಡಿ ಶ್ರೀಪ್ರ-ಸಾದವ ನೀಡಿ ಭಕ್ತರ ಒಡನಾಡಿಮುದ್ದುಮೋಹದ ಮಡದಿಯರ ಸಮೇತದಿಗದ್ದುಗೆಯಲಿ ಸಾನ್ನಿಧ್ಯ ತೋರಿದ ಕಾಣೆ 6ಈ ರೀತಿಯಲಿ ಶ್ರೀಹರಿಯು ನಾನಾಭೂರಿವಿಭವದ ಶೃಂಗಾರ ಶೋಭಿತವುನೀರೆ ಪಂಚಮಿ ಶುಭವಾರದ ದಿವಸದಸಾರಉತ್ಸಹ ಪೂರ್ಣ ತೋರಿಸಿ ಪೊರೆದನು7ಆರತಿಯನು ಎತ್ತಿದಳು ಜಯ-ಭೇರಿರವದಿ ಆಕಾಶನ ಮಗಳುವಾರಿಧಿಶಯನ ಮುರಾರಿ ಶ್ರೀಲಕ್ಷ್ಮೀ-ನಾರಾಯಣನ ಸಾಕಾರವನ್ನು ನೋಡಿ 8
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀಪುರಂದರದಾಸಾರ್ಯ ಸ್ತೋತ್ರ133ಹರಿದಾಸ ಶ್ರೇಷ್ಠ ಶ್ರೀಪುರಂದರದಾಸಾರ್ಯರಸರಸೀರುಹಾಂಘ್ರಿಯಲಿ ಶರಣಾದೆ ಸತತ ||ವೈರಾಗ್ಯ ಯುಕ್‍ಜ್ಞಾನ ಭಕ್ತ್ಯಾದಿ ಸಂಪತ್ತುಕರುಣದಲಿ ಒದಗಿಸಿ ಶ್ರೀಕೃಷ್ಣ ನ್ನೊಲಿಸುವರು ||ಈ ಪುಣ್ಯತಮ ಭರತಖಂಡದಲಿ ಪ್ರಖ್ಯಾತ ||ಕೃಪಾಂಬುಧಿ ಜಗನ್ನಾಥವಿಠ್ಠಲ ರುಕ್ಮಿಣೀಶ ||ರೂಪಗುಣ ಭೇಧವಿಲ್ಲದ ಪೂರ್ಣನಿರ್ದೋಷಶ್ರೀಪ್ರಸನ್ನ ವೇಂಕಟನೇ ನಮೋ ಪದ್ಮಾವತೀಶ 1ಪುರುಷರೂಪತ್ರಯ ಕ್ಷರಾ ಕ್ಷರೋತ್ತಮ ಭೂಮ |ಅರದೂರಗುಣನಿಧಿ ನಾರಾಯಣಗೆ ಶರಣು |ಸುಪ್ರೇಮಾತಿಶಯದಲಿ ಸದಾ ಪತಿಯ ಸೇವಿಸುವನಿರಾಮಯಳು ಸುಖಪೂರ್ಣಲಕ್ಷ್ಮಿಗೆ ಶರಣು 2ದ್ವಿಷೋಡಶ ಲಕ್ಷಣದಿ ರಾಜಿಪವಿಧಿದಶಪ್ರಮತಿಗು ವಾಣಿ ಭಾರತಿಯರಿಗು ನಮಿಪೆಶ್ರೀಶನ ಪೂರ್ಣಾನುಗ್ರಹ ಪೂರ್ಣಪಾತ್ರರುಉತ್ಕøಷ್ಟರಜುಸ್ತೋಮಚರಣಕಾನಮಿಪೆ3ಉತ್ತಮ ಶ್ಲೋಕನ್ನ ಜಪಿಸಿ ಪೂಜಿಪ ಶಿವಹೊತ್ತು ಸೇವಿಪಗರುಡಪರ್ಯಂಕಶೇಷಭಕ್ತಾಗ್ರಣಿ ಈ ಸರ್ವರಿಗು ನಮಿಸುವೆನುಮಾಧವನ ಷಣ್ಮುಹಿಷಿಯರಿಗು ನಮಿಪೆ 4ವಿಮಲ ಚರಿತರು ಉಮಾಸೌಪರ್ಣಿ ವಾರುಣಿಗು |ಅಮರೇಂದ್ರ ಮನ್ಮಥಮುನಿಗು ನಮನಮಾಡಿನಮಿಸುವೆ ಅಹುಪ್ರಾಣದೇವನಿಗೆಗುರುಶಚಿಕಾಮಸತಿ ಸುತದತ್ತ ಸ್ವಾಯಂಭುವಗೆ 5
--------------
ಪ್ರಸನ್ನ ಶ್ರೀನಿವಾಸದಾಸರು
ಷಷ್ಠಿಯ ದಿವಸ(ಶ್ರೀ ವೆಂಕಟೇಶನ ಅವಭೃಥ ಸ್ನಾನ)ಮುಕುತಿದಾಯಕ ಮೂಲಪುರುಷಗೆ 1ಭೇರಿಶಬ್ದವು ನಗಾರಿಘರ್ಜನೆಮೌರಿತಾಳವು ಮೃದಂಗಶಬ್ದವು 2ಉದಯಕಾಲದಿ ಒದಗಿ ಭಕುತರುಪದುಮನಾಭನ ಪಾಡಿ ಪೊಗಳ್ವರು 3ಭೂರಿಮಂಗಲಕರದ ಶಬ್ದವುಸೇರಿ ಕಿವಿಯೊಳು ತೋರುವುದಲ್ಲೆ 4ನಿದ್ದೆಬಾರದು ನಿಮಿಷಮಾತ್ರಕೆಎದ್ದು ಪೇಳೆಲೆ ಏಣಲೋಚನೆ 5ಸುಮ್ಮನೀನಿರು ಸುಳಿಯಬೇಡೆಲೆಎಮ್ಮುವುದು ನಿದ್ರೆ ಏನ ಪೇಳಲಿ 6ಬೊಮ್ಮಸುರರಿಗು ಪೊಗಳತೀರದುತಿಮ್ಮರಾಯನ ಮಹಿಮೆ ದೊಡ್ಡಿತು 7ನಿನ್ನೆ ದಿವಸದ ನಿದ್ರೆವಿಹುದೆಲೆಕಣ್ಣಿಗಾಲಸ್ಯ ಕಾಂಬುವದಲ್ಲೇ 8ಬಣ್ಣಿಸುವದೆಲೆ ಬಹಳವಿಹುದಲೆಪನ್ನಗವೇಣಿ ಪವಡಿಸೆ ನೀನು 9ಏಳು ಏಳಮ್ಮ ಅಲಸ್ಯವ್ಯಾತಕೆಕಾಲಿಗೆರಗುವೆ ಹೇಳಬೇಕಮ್ಮ 10ಜಯಜಯ ವಾಧಿಶಯನಜಯಜಯ ದೈತ್ಯವಿನಾಶ ಜಯಜಯ ಶ್ರೀನಿವಾಸ 1ಗಂಧಕಸ್ತೂರಿಪುಣುಗಚಂದನಪನ್ನೀರುಗಳಹೊಂದಿಸಿ ತೋಷದಿ ಮಂದರಧರಗೆ 2ಆಕಾಶರಾಯನ ಮಗಳು ಹರುಷದಿಂದೊಡಗೂಡಿಶ್ರೀಕರ ವೆಂಕಟಪತಿಯು ಸರಸವಾಡಿ 3ಶ್ರೀದೇವಿ ಭೂದೇವಿಮಾಧವಸಹಿತಲಿಸಾದರದಿಂದಲಿ ಸರಸವಾಡಿ 4ಬಡನಡು ಬಳುಕುತಲಿ ಎಡಬಲದಲಿ ಸುಳಿದುಕಡಲೊಡೆಯಗೆ ಲಕ್ಷ್ಮಿ ಚೆಲ್ಲಿದಳಾಗ 5ಛಲದಿ ಪದ್ಮಾವತಿಯು ಜಲಜನಾಭನ ಮೇಲೆಒಲವಿನಿಂದಲಿ ಬಂದು ಚೆಲ್ಲಿದಳಾಗ 6ಭರದಿ ಶ್ರೀದೇವಿಯು ಸರಸಿಜಮುಖದಲ್ಲಿಪರಮಸುಸ್ನೇಹದಿ ಬೆರಸಿದಳಾಗ7ಭೂದೇವಿ ಭುಲ್ಲವಿಸಿ ಮಾಧವನ ಮುಖದೊಳಗೆಮೋದದಿಂದಲಿ ಬಂದು ಚೆಲ್ಲಿದಳಾಗ 8ಸುತ್ತುಮುತ್ತಲು ಇವರ ಆರ್ತಿಯಿಂದಲಿ ಹರಿಯುವೃತ್ತಕುಚವ ನೋಡಿ ಚೆಲ್ಲಿದನಾಗ 9ಝಣಝಣಾಕೃತಿಯಿಂದ ಮಿನುಗುವಾಭರಣದಧ್ವನಿಯ ತೋರುತ ಬಲು ಸರಸವಾಡಿ 10ಓಕುಳಿಯಾಡಿದ ನೀರಾನೇಕಭಕ್ತರು ಮಿಂದುಏಕಮಾನಸರಾಗಿ ಪೊರಟರು ಕಾಣೆ 11* * *ಆಡಿದರೋಕುಳಿಯ ಶರಣರೆಲ್ಲಆಡಿದರೋಕುಳಿಯ ಪ.ಕಾಡುವ ಪಾಪವ ಓಜಿಸಿ ಹರಿಯೊಳ-ಗಾಡಿನಿತ್ಯಸುಖಬೀಡಿನ ಮಧ್ಯದಿ1ಅಬ್ಬರದಿಂದಲಿ ಉಬ್ಬಿ ಸಂತೋಷದಿಒಬ್ಬರ ಮೈಗಿನ್ನೊಬ್ಬರು ಚೆಲ್ಲುತ 2ಚೆಂಡು ಬುಗರಿನೀರುಂಡೆಗಳಿಂದಲಿಹಿಂಡುಕೂಡಿ ಮುಂಕೊಂಡು ಪಿಡಿಯುವರು3ಸುತ್ತುಮುತ್ತ ಒತ್ತೊತ್ತಿ ಮುತ್ತಿ ಜಲ-ವೆತ್ತಿ ಚಿತ್ತತನುನೆತ್ತಿಗೆ ಸೂಸುತ್ತ 4ರಂಭೆ : ನಾರಿ ಕೇಳೀಗ ಭೂರಿಭಕುತರುಶ್ರೀರಮಾಧವ ಸಹಿತ ಬಂದರು 1ಭಾವಶ್ರೀಹರಿ ಪ್ರತಿರೂಪದೋರುತದೇವ ತಾನೆ ನಿದ್ರ್ವಂದ್ವನೆನ್ನುತ 2ಹೇಮಖಚಿತವಾದಂದಣವೇರಿಪ್ರೇಮಿಯಾಗುತ ಪೊರಟು ಬರುವನು 3ವಲ್ಲಭೆಯರ ಕೂಡಿ ಈ ದಿನಫುಲ್ಲನಾಭನು ಪೊರಟನೆತ್ತಲು 4ಊರ್ವಶಿ : ನಾರಿ ನೀ ಕೇಳಿದರಿಂದ ಈಗಭೂರಿಭಕುತರಾನಂದಶ್ರೀರಮಾಧವ ಮಿಂದ ನೀರಿನೊಳಾಡುತ್ತಓರಂತೆ ತುಳಸಿಮಾಲೆಯ ಧರಿಸುತ್ತಭೇರಿಡಂಕನಗಾರಿಶಬ್ದ ಗಂ-ಭೀರದೆಸಕವ ತೋರಿಸುತ್ತ ವೈ-ಯಾರದಿಂದಲಿ ರಾಮವಾರ್ಧಿಯತೀರದೆಡೆಗೆಲೆ ಸಾರಿ ಬಂದರು 1ವರದಭಿಷೇಕವ ರಚಿಸಿ ಬಕು-ತರ ಸ್ನಾನವನನುಕರಿಸಿಭರದಿಂದ ಪೂಜಾಸತ್ಕಾರ ಸೇವೆ ಕೈಗೊಂಡುತ್ವರಿತದಿ ನಗರಾಂತರಕನುವಾದನುಬರುತ ದಿವ್ಯಾರತಿಗೊಳ್ಳುತಚರಣಸೇರಿದ ಭಕ್ತರಿಷ್ಟವನಿರುತ ಪಾಲಿಸಿ ಮೆರೆವ ಕರುಣಾ-ಕರಮನೋಹರ ಗರುಡವಾಹನ2ರಂಭೆ : ಸರಸಿಜಾನನೆ ಈ ಸೊಲ್ಲ ಲಾಲಿಸೆಕರವಮುಗಿಯುತ್ತಕೈಯ ತೋರುತ1ಪರಮಪುರುಷ ಗೋವಿಂದ ಎನುತಲಿಹೊರಳುತುರಳುತ ಬರುವದೇನಿದು 2ಭಂಗಿಪ ಸೇವೆಯೆಂಬುದನುಅಂಗಜಪಿತಚರಣಂಗಳ ರಜದಲಿ 1ಹೊಂಗಿ ಧರಿಸಿ ಲೋಟಾಂಗಣ ಎಂಬರುರಂಗನಾಥನ ಸೇವೆಗೈದ ಜ-ನಂಗಳಿಗೆ ಭಯವಿಲ್ಲವದರಿಂ-ದಂಗವಿಪ ಲೋಲೋಪ್ತಿ ಕೋಲಾ-ಟಂಗಳನು ನೀನೋಡುಸುಮನದಿ2* * *ಕೋಲು ಕೋಲೆನ್ನಿರೊ ರನ್ನದಕೋಲು ಕೋಲೆನ್ನಿರೊ ಪ .ಪಾಲಾಬ್ಧಿಶಯನ ನಮ್ಮಾಲಯಕೆದ್ದು ಬಂದಲೀಲೆಗಳಿಂದ ಜನಜಾಲಗಳೆಲ್ಲರು 1ಗುಂಗಾಡಿತಮನನ್ನು ಕೊಂದು ವೇದವ ತಂದುಬಂಗಾರದೊಡಲನಿಗಿಟ್ಟನು ನಮ್ಮ ದೇವ 2ಅಡ್ಡಿಮಾಡದೆ ಸುರವಡ್ಡಿಗೆ ಸುಧೆಯಿತ್ತುಗುಡ್ಡೆಯ ಬೆನ್ನಿಲಿ ಧರಿಸಿದ ನಮ್ಮ ದೇವ 3ರೂಢಿಯ ಕದ್ದನ ಓಡಿಸಿ ತನ್ನಯದಾಡೆಯಿಂದಲೆ ಸೀಳ್ದ ಕಾಡವರಾಹನಮ್ಮ 4ಸಿಂಗನ ರೂಪತಾಳಿ ಹೊಂಗಿ ಕಂಬದಿ ಬಂದುಬಂಗಾರಕಶ್ಯಪುವಂಗವ ಕೆಡಹಿದ 5ಗಿಡ್ಡನಾಗುತ ಕೈಯೊಡ್ಡಿ ದಾನಕೆ ಮನ-ಸಡ್ಡಿಮಾಡದೆ ಮೇಣು ದೊಡ್ಡವನಾದನಮ್ಮ 6ಕಾಮಧೇನುವಿಗಾಗಿ ಕಾರ್ತವೀರ್ಯನ ಕೊಂದುಭೂಮಿಯ ಬುಧರಿಗೆ ಪ್ರೇಮದಿನಿತ್ತನಮ್ಮ 7ಬೆಟ್ಟಗಳೆಲ್ಲ ತಂದೊಟ್ಟಿಸಿ ಶರಧಿಯಕಟ್ಟಿದೈತ್ಯರ ತಲೆ ಕುಟ್ಟಿದ ನಮ್ಮ ದೇವ8ಚಂಡಗೊಲ್ಲತಿಯರ ಹಿಂಡುಗಳೊಳು ಕೂಡಿಉಂಡ ಪಾಲ್‍ಬೆಣ್ಣೆಯ ಪುಂಡ ಗೋಪಾಲನಮ್ಮ 9ಯುವತಿಯರ ವ್ರತವ ತವಕದಿ ಖಂಡಿಸಿಶಿವನ ರಕ್ಷಿಸಿ ತ್ರಿಪುರವನು ಕೆಡಹಿಸಿದ 10ಕುದುರೆಯ ಮೇಲೇರಿ ಕುಮತಿ ಮ್ಲೇಂಛರನೆಲ್ಲಸದೆಬಡಿಯುವ ನಮ್ಮ ಮಧುಕೈಟಭಾರಿ ದೇವ 11ಕಲಿಯುಗದೊಳು ಬಂದು ನೆಲೆಯಾಗಿ ತಿರುಪತಿ-ಯೊಳಗೆ ಭಕ್ತರನೆಲ್ಲ ಸಲಹುವ ನಮ್ಮ ದೇವ 12ದುಷ್ಟರ ಬೇಗ ಕಂಗೆಟ್ಟು ಓಡುವ ಭಕ್ತ-ರಿಷ್ಟವ ಕೊಡುವರೆ ದೃಷ್ಟಿಗೋಚರನಾದ 13ತಪ್ಪದೆ ಸ್ವಪ್ನದಿ ಬಪ್ಪೆನೆನ್ನುತ ಪೇಳಿಸರ್ಪಪರ್ವತದಿಂದ ಒಪ್ಪಿಲ್ಲಿ ಬಂದನಮ್ಮ 14ಸೃಷ್ಟಿಯೊಳುತ್ತಮ ಶ್ರೇಷ್ಠ ಕಾರ್ಕಳದಲ್ಲಿಪಟ್ಟದರಸ ತಿಮ್ಮ ಸೆಟ್ಟಿಯೆಂದೆನಿಸಿದ 15ಊರ್ವಶಿ :ನಾರೀರನ್ನಳೆ ಕೇಳಿದ್ಯಾ ಶ್ರೀಹರಿನಿತ್ಯಭೂರಿಸೇವೆಗೆ ಸಾನ್ನಿಧ್ಯತೋರುತ ಆರತಿಯ ಶೃಂಗಾರದೋರುತ ಕಾಣಿಕೆಯ ಕಪ್ಪುವು ಸೇರಿತುಸೇರಿದಾನತಜನರ ಮನಸಿನಕೋರಿಕೆಗಳನ್ನಿತ್ತು ಸಲಹುವವೀರವೆಂಕಟಪತಿಯ ಸದನ-ದ್ವಾರ ದಾಟುತ ಸಾರಿಬಂದನು 1ಬಳಿಕಲ್ಲಿ ತುಲಾಭಾರದ ಹರಕೆಯನ್ನು ಕೈ-ಗೊಳುತಲೀಪರಿ ಮೋದವನಲವಿನಲಿ ಮಂಗಲದ ವಿಭವದಗೆಲುವಿನಲಿ ವಿಧಕಲಶ ವೇದದನಲವಿನಲಿ ಸುಲಲಿತಭಿಷೇಕವನು ಕೊಳುತಲಿಜಲಜನಾಭನು ಸುರಚಿರದ ನಿ-ಶ್ಚಲಿತ ಸಿಂಹಾಸನದಿ ಮಂಡಿಸಿಒಲಿದ ವಂದಿತ ಜನರ ಭಕ್ತಿಗೆ 2ವಲ್ಲಭೆಯರ ಸಹಿತ ಸಮರ್ಪಿಸಿ-ದೆಲ್ಲ ಸ್ವೀಕರಿಸಿ ಮತ್ತಾಪಲ್ಲವಪಾದಗಳ ತೋರಿಸಿಎಲ್ಲವ ರಕ್ಷಿಸಿ ದಯಾರಸವುಳ್ಳವಫುಲ್ಲನಾಭನು ಪೂರ್ಣಕಾಮ ಶ್ರೀ-ವಲ್ಲಭನು ನರನಾಟಕದಿ ಜಗ-ಎಲ್ಲ ರಕ್ಷಿಸಿ ಮೆರೆವ ಭಕ್ತರಸುಲ್ಲಭನು ಸುಮನೋನುರಾಗನು 3ಶರದಿಯೇಳರ ಮಧ್ಯದ ಧಾರಿಣಿಯೊಳುಮೆರೆವ ಹೇಮಾಚಲದಸ್ಫುರಿತದಾ ಮಹಾಜಂಬುದ್ವೀಪ ವಿ-ಸ್ತರಿತದಾ ಭರತಾಖ್ಯ ಖಂಡದಿಹರುಷದಿ ನಿರುತ ತೌಳವದೇಶಮಧ್ಯದಿಮೆರೆವ ಕಾರ್ಕಳಪುರವರವೆ ಪಡುತಿರುಪತಿಯು ಎಂದೆನಿಸಿ ಭಕುತರನೆರವಿಯನು ಪರಿಪಾಲಿಸುವನೆಲೆ 4ಈಪರಿವಿಭವದಲಿ ಪ್ರತಿವರುಷಕೆಶ್ರೀಪರಮ್ಮಾತನಲ್ಲಿವ್ಯಾಪಿಸಿ ಭಕ್ತರನುಕಾವನಿ-ರೂಪಿಸಿ ಸೇವೆಯನು ಕೈಕೊಂಡೊಪ್ಪಿಸಿಪಾಪವೆಲ್ಲವ ಪರಿಹರಿಸಿ ಚಿ-ದ್ರೂಪನಂದದಿ ಹೊಳೆವ ಪರತರ-ರೂಪಕರುಣಾಲಾಪ ಸದ್ಗುಣ-ದೀಪ ಚಪ್ಪರ ಶ್ರೀನಿವಾಸನು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ