ಒಟ್ಟು 132 ಕಡೆಗಳಲ್ಲಿ , 40 ದಾಸರು , 121 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಗತಿ ಎನಗಾಗುವದೊ ಶ್ರೀ | ಕಾಂತ ನಿನ್ನ ಭಕುತಿಯ ಕಾಣೆ ಪ ಸಂಸಾರ ಎಂಬುದು ಸುಖವೆಂದು ನಾನು | ಹಂಸನಂತೆ ನಲಿಯುತ್ತಲಿದ್ದೆ | ಕಂಸಾರಿ ನಿನ್ನ ನಾಮಸ್ಮರಣೆ ಒಳ್ಳೆ | ವಂಶರ ಕೂಡ ನಲಿಯಲಿಲ್ಲಾ 1 ಪಾತ್ರರ ಕಂಡರ ಪರಿಹಾಸ್ಯ ಕು | ಪಾತ್ರರ ನೋಡಲವರ ಶಿಷ್ಯಾ | ಕ್ಲೇಶ ಎನ್ನ | ಗಾತ್ರಗೋಸುಗ ಪೋಗೆ ಬಲು ತೋಷಾ 2 ವಿರಕ್ತಿ ಕೇಳಲು ತಲೆಶೂಲೆ ವಿ | ಹಾರ ಮಾಡುವಲ್ಲಿ ಅನುಕೂಲೆ | ವಾರಿಜಾಕ್ಷ ನಿನ್ನ ಕಥೆ ಬಿಡುವೆ ಬಹು | ಚಾರುವಾಕರ ಕೂಡ ಸುಖಬಡುವೆ 3 ಕಾಸು ಪ್ರಾಪುತವಾಗಿ ಬಚ್ಚಿಡುವೆ ಅದೆ | ಕಾಸು ಬೇಡಿದರೆ ಪ್ರಾಣವ ಕೊಡುವೆ | ಮೋಸ ಬುರುವದು ಕಾಣೆನಲ್ಲಾ ದು | ರಾಶೆಯಿಂದಲಿ ಬಾಳಿದೆನಲ್ಲಾ 4 ವೈಕುಂಠದಾಸರು ಬರೆ ಕುಗ್ಗುವೆನೊ | ಕುಂಟತನಕೆ ಬಹು ನಲಿದಾಟಾ ಗತಿ | ಉಂಟಾದದಕೆ ಉಚ್ಚಾಟ5 ತಂದೆ ತಾಯಿಗಳಲ್ಲಿ ವಂಚನೆ ಹೀನ | ಮಂದಿಕೂಡಾಪ್ತಾಲೋಚನೆ | ಕುಂದು ನುಡಿದೆ ಸಜ್ಜನರಿಗೆ ಆ | ನಂದ ಬಡಿಸುವೆ ದುರ್ಜನರಿಗೆ 6 ಹೆಂಡತಿ ಮುನಿದರೆ ಬೇಡಿಕೊಂಬೆ ಹರಿ | ಕೊಂಡರು ಮುನಿದರೆ ಪೋಗಲೆಂಬೆ | ಕೊಂಡು ಬಾಹ್ಯನೆ ಪರರವಡಿವೆ | ಪರರ ಕಂಡರೆ ಬೇಡವೆಂದು ನುಡಿವೆ 7 ಮಕ್ಕಳು ಹಸ್ತರೆ ಬಳಲುವೆನೊ ಭೂದೇ | ವಕ್ಕಳು ಹಸ್ತರೆ ನಗುವೆನೊ | ಮುಕ್ತಿಗಾಗುವ ನಾನಾ ಶ್ರವಣ ನೀಚ | ಉಕ್ತಿಗೆ ಮಾಡಿದೆ ಅನುದಿನಾ 8 ಜೀವನಕ್ಕೆ ಬೇಕಾದದೆ ಮಾಣಿದು | ಅಭಾವಾ ಮಾಡೆನು ನೀಚರ ಸೊಲ್ಲು9 ಹರಿ ನಿನ್ನ ಶುಚಿಮಾಡೆ ಹೀನ ನರರ ದೊಂಬಲು ತೆಗಿಯದೆ ಬಿಡೆ | ಅಗ್ರೋದಕ ತಾರೆ ನೀರು | ಹೊರುವೆನೊ ಹಣವೆಂದರೆ ಮಾರೆ 10 ಗಂಡಿಕಿಸಿಲಿ ತೊಳೆಯಲಿ ಮಿಡಿಕಿ ನಾನು | ಅಂಡವಲಿವೆ ಅಶನ ಹುಡುಕಿ | ಅಂಡಜವಾಹನ ನಿನ್ನ ಸೇವೆ ಕೈ | ಕೊಂಡು ಮಾಡದೆ ಪೋದೆ ಹೀಗೆವೆ11 ಗಂಧವ ತೆಗೆ ಎಂದರೆ ಅಳುವೆ | ಬಿದ್ದ | ಮಂದಿರಕೆ ಕದಡುತಳುವೆ | ಒಂದು ತುಲಸಿದಳ ತರಲಾರೆನೆಂದು | ಸಂದಿಗೊಂದಿ ಸುತ್ತಿದೆನೊ ದೊರೆ 12 ಧೂಪಾರತಿ ಏಕಾರುತಿ | ಮೂರ್ತಿ | ಪಾಪಾತಿಶಯದಿಂದಾ ನೋಡಲಿಲ್ಲ ಬಹು | ತಾಪತ್ರಯದಿಂದ ನೊಂದೆನಲ್ಲಾ 13 ಸಿರಿ | ದೇವನಿಗೆ ಯಿತ್ತು ಸುಖಬಟ್ಟು | ಆವಾವ ರುಚಿಗಳ ಭುಂಜಿಸದೆ ನಾನು | ಪಾವನಮತಿಯಾಗದೆ ಪೋದೆ 14 ಎಳೆದುಲಸಿ ನಿರ್ಮಾಲ್ಯವಾಸವಾ || ಬಳಿಯಲ್ಲಿಯಿಟ್ಟು ಕೈವಲ್ಯವಾ | ಘಳಿಸಿಕೊಳ್ಳದೆ ಬಲು ದುರ್ಗಂಧ ಬಂದು | ಭವ ಬಂಧಾ 15 ಹರಿಕಥೆಗೆ ಮೊಗ ತಿರುಹುವೆನೊ | ................................................... ಸ್ಮರಣೆ ಮಾಡುವಲ್ಲಿ ಅತಿ ಹೇಯಾ ದುರಾ | ಚರಿತೆಯ ಮಾಡುವಲ್ಲಿ ಬಲು ನ್ಯಾಯಾ 16 ಹರಿದಾಸರನಪ್ಪಿಕೊಳ್ಳದೆ ಪಾ | ಮರ ಸತಿಯೊಳನಪ್ಪ ತಾ ಪೊಳದೆ | ಧರೆಯೊಳು ನಾನು ನಡಿವಂಥ ಇಂಥಾ | ದುರುಳಾಟಕೇನೆಂಬೆ ಗುಣವಂತಾ 17 ನಿನ್ನಂಘ್ರಿಗೆ ಅಡ್ಡಬೀಳದೆ ತುತ್ತು | ಅನ್ನಕೆ ಎರಗುವೆ ಸೋಲದೆ | ಅನ್ಯಾಯ ಮಾಡುವಲ್ಲಿ ಆನಂದಾ ಸತಿಸ | ತ್ಪುಣ್ಯ ಮಾಡುವಲಿ ನಿಭಂಧಾ 18 ಸಾಧುಗಳೊಡನೆ ತಾಳುವೆ ದ್ವೇಷಾನಿತ್ಯ | ಕ್ರೋಧರ ಕಂಡರೆ ಬಲು ಹರುಷಾ | ಓದನಕೆ ವೇದವನೋದಿ ತಂದು | ವಾದಿಸುವೆನು ಸಭೆಯಲಿ ಕಾದಿ 19 ಸತಿಯಳ ಸಂಬಂಧಿಗಳ ಸಾಕುವೆನೊ ಮಾತಾ | ಪಿತರ ಕಡೆಯವರ ನೂಕುವೆನೊ | ಕರ್ಮ ಮಾಡೋರ ನೋಡಿ ಹೀನ | ವಕ್ರದವರು ಕಂಡು ಬಲು ಪಾಡಿ 20 ಪರಿ ಪರಿ ಹೊಸ | ಕೌತುಕ ಪೇಳೂವೆ ನೋಡಿರಿ | ಶ್ರಾತಾದಿಗಳು ಎಲ್ಲಿ ಧಿಕ್ಕರಿಸಿ ಯಿಂಥ | ಭೌತಿಕ ನೆಚ್ಚಿದೆ ಅನುಕರಿಸಿ 21 ಒಡಿವಿ ಮಾಡಿಸಿ ಮಡದಿಗೆ ಇಡದೆ ಅನ್ಯ | ಮಡದಿಯರಿಗೆ ಧನ ಸೂರೆವಿಡಿದೆ | ಬಡವರ ಕಂಡರೆ ಅಣಕಿಸುವ ಭಾಗ್ಯ | ಪಡದವರಿಗೆ ಬಾಗಿ ನಮಿಸುವೆ 22 ಧರ್ಮಕ್ಕೆ ಅಸೂಯಾ ಬಡುವೆ ಅ | ಧರ್ಮಕೆ ಹಿಗ್ಗಿ ಸುಖವ ಬಡುವೆ | ಷ್ಕರ್ಮಿಗಳ ಕೂಡಾಮಾನತನಾ 23 ವಿಧಿ ನಿಷೇದವನೆಣಿಸದಲೆ ನಾನು | ಉದರ ತುಂಬಿದೆ ಭೀತಿ ಗಣಸದಲೆ | ವದಗಿ ಬೀಳುವ ನರಕದ ಬಾಧೆ ಕೇಳಿ | ಹದುಳಕ್ಕೆ ಮನಮಾಡದೆ ಪೋದೆ 24 ಯಜಮಾನ ನಾನೆಂದು ಪೇಳಿಕೊಂಡು ದೋಷ | ವ್ರಜದಲಿ ಚರಿಸದೆ ದು:ಖವುಂಡು | ಇಂದು | ಸಿಂಧು 25
--------------
ವಿಜಯದಾಸ
ಏನು ಇಲ್ಲದ ಎರಡು ದಿನದ ಸಂಸಾರಜ್ಞಾನದಲಿ ದಾನಧರ್ಮವ ಮಾಡಿರಯ್ಯ ಪ ಹಸಿದು ಬಂದವರಿಗೆ ಅಶನವೀಯಲು ಬೇಕುಶಿಶುವಿಗೆ ಪಾಲ್ಬೆಣ್ಣೆಯನುಣಿಸಬೇಕುಹಸನಾದ ಭೂಮಿಯನು ಧಾರೆಯೆರೆಯಲು ಬೇಕುಪುಸಿಯಾಡದಲೆ ಭಾಷೆ ನಡೆಸಲೇ ಬೇಕು1 ಹೊರೆಯಲು ಬೇಡಕುಳ್ಳಿರ್ದ ಸಭೆಯೊಳಗೆ ಕುತ್ಸಿತವು ಬೇಡಒಳ್ಳೆಯವ ನಾನೆಂದು ಬಲು ಹೆಮ್ಮೆಪಡಬೇಡಬಾಳ್ವೆ ಸ್ಥಿರವೆಂದು ನೀ ನಂಬಿ ಕೆಡಬೇಡ 2 ದೊರೆತನವು ಬಂದಾಗ ಕೆಟ್ಟುದ ನುಡಿಯಬೇಡಸಿರಿ ಬಂದ ಕಾಲಕ್ಕೆ ಬಲು ಮೆರೆಯಬೇಡಸಿರಿವಂತ ಶ್ರೀ ಕಾಗಿನೆಲೆಯಾದಿಕೇಶವನಚರಣ ಕಮಲವ ಸೇರಿ ಸುಖಿಯಾಗು ಮನುಜ 3 * ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.
--------------
ಕನಕದಾಸ
ಏನೆ ನಾರಿ ಕನಸುತೋರಿ ಹಾರಿತಲ್ಲೆ ಪ ಫೋರ ಪಾತಕವ ಕೊಂದೂ ಒಳ್ಳೆ ತಾರೆಬೆಳಕಿನ ಚಂದಾ ಅ.ಪ ಇಂದಿರಾಪತಿ ತಾ ಮಂದಹಾಸದೊಳು ಕುಂದರದನೆಯ ಕೂಡಿ ನನ್ನ ನಿಂದೆ ತಂದ ಸರಿಮಾಡಿ ಕಳ್ಳ ಬಂದು ಪೋದ ಕರತಂದು ತೋರೆಮತ್ತೆ ನಿಂದು ಭಜನೆಯ ಮಾಡಿ 1 ಬಾರೊ ಧೀರ ಅಂದ್ರೆ ನೀರ ಆಟದೊಳು ತೋರಿ ಮಾಡಿದನು ಮೋಸಾ ಭವ ದೂರನಾದ ವೆಂಕಟೇಶಾ ರಂಗ ದಾರಿಕಾಣೆ ಕಂಡು ತೋರೋ ನಿನ್ನ ಪಾದ ಗುರುವು ತುಲಸಿ ರಾಮದಾಸ 2
--------------
ಚನ್ನಪಟ್ಟಣದ ಅಹೋಬಲದಾಸರು
ಒಬ್ಬರ ಮಾತ್ಯಾಕೆ ನಾಲಗೆ ನೀನು ಉಬ್ಬದೆ ಸುಮ್ಮನಿರು ನಾಲಗೆ ಪ ಮಬ್ಬಿನಿಂದ ನೀ ಒಬ್ಬರ ಮಾತಾಡಿ ಕೊಬ್ಬನಿಂ ಕೆಡಬೇಡ ನಾಲಗೆ ಅ.ಪ ಮಂದಿ ಮಾತಾಡಲು ನಾಲಗೆ ನಿನಗೆ ಬಂದ ಭಾಗ್ಯವೇನು ನಾಲಗೆ ಒಂದು ಅರಿಯದೆ ಮನಬಂದಂತೆ ಮಾತಾಡಿ ಅಂದಗೆಡಲಿ ಬ್ಯಾಡ ನಾಲಗೆ 1 ನಿಂದೆಯಾಡಬೇಡ ನಾಲಗೆ ನೀನು ಕುಂದುವಡೆಯ ಬೇಡ ನಾಲಗೆ ಒಂದಿನ್ಹೋಗ್ವುದು ನಿನಗೆಂದಿಗೆ ತಪ್ಪದು ಮುಂದಿನ ಸುಖ ನೋಡು ನಾಲಗೆ 2 ಸತ್ಯ ತಪ್ಪಬೇಡ ನಾಲಗೆ ನೀನ ಸತ್ಯ ನುಡಿಯ ಬೇಡ ನಾಲಗೆ ಮೃತ್ಯುಗೀಡಾಗ ಬ್ಯಾಡ ನಾಲಗೆ 3 ಸುಳ್ಳನಾಡಬೇಡ ನಾಲಗೆ ಸದಾ ಒಳ್ಳೆ ಮಾತಾಡು ಕಂಡ್ಯ ನಾಲಗೆ ಸುಳ್ಳು ಈ ಜಗಕೆ ಮಳ್ಳನಾಗಿ ಯಮ ಕೊಳ್ಳಕೆ ಬೀಳ ಬ್ಯಾಡ ನಾಲಗೆ 4 ಹಾಳುಗೋಜ್ಯಾಕೆ ಕಂಡ್ಯ ನಾಲಗೆ ಕಾಲ ಹೇಳಿ ಬರದು ನಿನಗೆ ನಾಲಗೆ ಶೀಲಮನಸಿನಿಂದ ಪಾಲ ಶ್ರೀರಾಮಪಾದ ಕಾಲತ್ರಂiÀiದಿ ನೆನೆ ನಾಲಗೆ 5
--------------
ರಾಮದಾಸರು
ಒಳ್ಳೆವಾಜಿಯ ಕಲಿತಿದ್ದಿತಾಳೊ ಬುದ್ಧಿಲ್ಲ ಕೇಳೊಒಳ್ಳೆ ವಾಜಿಯ ಕಲಿತಿ ತಾಳೊಸುಳ್ಳು ಕೆಲಸವ ಹೇಳಿ ಸುಳಿಯುವಿ ನೆರೆಮನೆಯಚಲುವನರಿಯುತ ಚಲುವೆರಿಬ್ಬರ ಕುಚೋದ್ಯದಲಿ ಪ. ಹೆಣ್ಣು ಕೊಟ್ಟವನಿಗೆ ಕಣ್ಣು ಕಾಣದು ಏನೊಇನ್ನೆಲ್ಲಿ ವರನ ಕಾಣದೆ ಇನ್ನೆಲ್ಲಿ ವರನ ಕಾಣದೆ ಇಂಥವಗೆಹೆಣ್ಣು ಕೊಟ್ಟವನು ಬಲು ಹೇಡಿ 1 ಕೊಟ್ಟರೇನಾಯಿತು ಅಟ್ಟುಣಲು ಬಲ್ಲಹುಟ್ಟು ಗತಿಯಂತು ಮೊದಲಿಲ್ಲಹುಟ್ಟು ಗತಿಯಂತು ಮೊದಲಿಲ್ಲ ದಾನವಕೊಟ್ಟ ಬಲೀಂದ್ರ ಇದು ಬಲ್ಲ 2 ಕುಲವಿಲ್ಲಗೋತ್ರವಿಲ್ಲ ನೆಲೆಯಿಲ್ಲ ಆಚಾರವಿಲ್ಲಬಲುದೈತ್ಯರೊಳು ಹಗೆಯಾದ ಬಲುದೈತ್ಯರೊಳು ಹಗೆಯಾದ ಇಂಥವಗೆ ಜಲನಿಧಿ ಮಗಳ ಕೊಡಬಹುದೆ 3 ಮೂರು ಗುಣಗಳ ಮೀರಿದವ ನೀಚನೆನಿಸುವ ಇವನು ನೀಚನೆನಿಸುವಇವನ ಗುಣಯಾರು ಅರಿಯರು ಧರೆ ಮ್ಯಾಲೆ4 ಹಾಲು ಕೆನೆಯ ಕದ್ದು ಬಾಲೆರೆಲ್ಲರಪೀಡಿಸಿಬಾಲನಾಗಿ ಒರಳ ಎಳೆಯುತಬಾಲನಾಗಿ ಒರಳ ಎಳೆಯುತಜನನಿಗೆ ಚಾಲವರೆದದ್ದು ಮರೆತೇನೊ5 ಬೆಣ್ಣಿ ಮೊಸರು ಕದ್ದು ಹೆಣ್ಣುಮಕ್ಕಳ ಕಾಡಿಸಿ ಮುನ್ನ ತೊತ್ತಿನ ಮನೆಯಲ್ಲಿಮುನ್ನ ತೊತ್ತಿನ ಮನೆಯಲ್ಲಿ ಉಂಡುನೀ ಹೆಣ್ಣಾಗಿದ್ಯಲ್ಲೊ ರಮಿಯರಸು6
--------------
ಗಲಗಲಿಅವ್ವನವರು
ಕಥನಕಾವ್ಯಗಳು ಶ್ರೀ ವೆಂಕಟೇಶ ಪಾರಿಜಾತ ಅಧ್ಯಾಯ ಒಂದು ಶ್ರೀಪತಿರ್ಭೃಗುಣಾ ಸರ್ವಲೋಕೋತ್ಕøಷ್ಟ ಇತೀ ಪಿತ: ಗೋಕ್ಷೀರ ಸಿಕ್ತ ಸರ್ವಾಂಗೋ ವಲ್ಮೀಕಸ್ಥ: ಶುಭಂ ದಿಶೇತ | ಶ್ರೀಸಹಿತ ಶ್ರೀವೆಂಕಟೇಶಗೆ ಸಾಸಿನಾರತಿ ಮಾಡಿ ಬೇಡುವೆ ಭಾಷೆ ಭಾಷೆಗೆ ಎನಗೆ ಬುದ್ಧಿವಿಕಾಸ ಕೊಡುಯಂದು ಕರಮುಗಿದು ಬೇಡುವೆ ದಾಶರಥಿ ನಿಜದಾಸ ಕಲ್ಲೊಳ್ಳೀಶಗೊಂದಿಸುವೆ 1 ಸಂತತಿಗೆ ನತಿಸುವೆ ಐಜಿ ವೆಂಕಟರಾಮವರ್ಯರ ಪೂಜೆಯಲ್ಲಿರುವೆ ಜಗತಿಯಲಿ ಜನಿಸಿ ಅವರಾ ಪೂಜಿತಾಖ್ಯವು ವಹಿಸಿದವರನು ಪೂಜಿಸುವೆ ಬಿಡದೆ2 ಪೊಂದಿ ಆ ಗುರು ಪುತ್ರರಾಗಿರುವ ವಿಷ್ಣುತೀರ್ಥರನು ನಮಿಪೆ ಮತ್ತೆ ಸ್ವೋತ್ತಮರಾಗಿ ಇರುವ ಗುರುಗಳಿಗೊಂದಿಸುತ ಸ ರ್ವೋತ್ತಮಾನಂತಾದ್ರಿ ರಮಣನ ಮಹಿಮೆ ಪೇಳುವೆನು3 ವಚನ ಬುದ್ಧಿ ಪೂರ್ವಕ್ಹಿಂ ಸಂಪೂರ್ಣ ಸರ್ವ ದೇವೋತ್ತಮನು ಇರುವನ್ಯಾರೆಂದು ತಿಳಿ ಸರ್ವಲೋಕದಲಿ ಕೇಳಿ ಪೂರ್ವದಲ್ಲಿ ಪೋದ ಪೂರ್ವಿಕನÀ ಮನೆಯಲ್ಲಿ ಗರ್ವ ಅವನಲ್ಲಿ ಕಂಡು ಇರುವ ನಡೆದನಲ್ಲಿ 1 ನೋಡಿದನು ಆಗಲ್ಲಿ ಪ್ರೌಢೆ ಪಾರ್ವತಿಯು ಮಾತಾಡಿದಳು ನಾಚುತಲಿ ಬೇಡಬಿಡು ಪ್ರಾಣೇಶ ನೋಡು ಭೃಗು ಮುನಿಬಂದ ಬೇಡಿಕೊಂಬುವೆನೊ ಗಾಢನೆ ಕಣ್ಕೆಂಪು ಮಾಡಿ ಮುನಿಯಿದ್ದಲ್ಲಿ ಓಡಿಬಂದನು ಪೂಜೆಯ ಬೇಡ ಈ ಲೋಕದಲಿ ನೋಡಿ ಲಿಂಗವ ಪೂಜೆ ಮಾಡಲಿ ಜನರು 2 ಪರಿ ಶಾಪ ಮೆಟ್ಟಿದನು ವೈಕುಂಠ ಥಟ್ಟನೆ ಮತ್ತಲ್ಲಿ ದಿಟ್ಟ ದೇವನ ಕಂಡ ಪಟ್ಟದರಸಿಯಕೂಡಿ ಧಿಟ್ಟಾಗಿ ಮಲಗಿರಲು ಸಿಟ್ಟಿಲÉೂದ್ದನು ಒಳ್ಳೆ ಪೆಟ್ಟು ಅವನೆದಿಗೆ ಮುಟ್ಟಿ ಮುನಿ ಪಾದವನು ತುಷ್ಟನಾಗಿ 3 ಧ್ವನಿ ಮೇಲಿಷ್ಟು ಸಿಟ್ಟು ಕಾರಣ ಪೇಳಿಷ್ಟು ತಪ್ಪಿತು ಕ್ಷಮಿಸಿಷ್ಟು 1 ಎಳ್ಳುಕಾಳಷ್ಟು ನೊಂದು ಕೊಂಡಿದ್ದಾವು ಎಷ್ಟೋ 2 ಧರೆಯೊಳಗೆ ದ್ವಿಜರಿಗೆ ಸರಿಯಾರು ಇಲ್ಲೆಂದು ಬರುವುದು ಭಯ ಬಹಳಷ್ಟು ವರದಾನಂತಾ ದ್ರೀಶನ ಪರಮ ಭಕ್ತರಿಗೆ ಬರಬಾರದೆಂದಿಗೂ ಸಿಟ್ಟು 3 ವಚನ ಇಂದಿರಾಪತಿಯು ಹೀಗೆಂದು ಮುನಿಪಾದಂಗಳÀÀÀ ಚಂದದಿಂದಲಿ ಒತ್ತಿತ್ವರದಿಂದ ಉಷ್ಣೋದಕವನು ತಂದು ತೊಳೆಯುತ ಇಂದು ಪಾವಿತನಾದೆನೆಂದು ಹರುಷದಲ್ಲಿ ಮುಂದೆ ಭೃಗುಮುನಿಯು ಮುಕುಂದನ ಸರ್ವರಿಂದಧಿಕ ಸತ್ಯತಿಳಿರೆಂದ ಮುನಿಗಳೆಲ್ಲ ಮುಂದೆ ವೈಕುಂಠದಲಿ ಇಂದಿರಾದೇವಿ ಗೋವಿಂದನಾಟವ ಕಂಡಂದಳೀ ಪರಿಯು1 ರಾಗ:ಮೋಹನ ಕಲ್ಯಾಣಿ ಆದಿತಾಳ ಹರಿಯೆ ಪೋಗುವೆ ನಾನು ಮುನ್ನಿರುತಿರು ಒಬ್ಬನೇ ನೀನು ತಿರುಕನಾಗಿ ಇರುತಿರುವ ಭೂಸುರನು ಭರದೊಳೊದ್ದ ನಿನ್ಹಿರಿಯತನವೇನು ಪ ನಿನ್ನ ಶ್ರೀವತ್ಸವಿದು ಬಹು ಮಾನ್ಯವು ಎಂದೆನಿಸುವುದು ಮಾನ್ಯ ವಾಗಿಹುದು 1 ಬಡವ ಬ್ರಾಹ್ಮಣರಿಂದ ನೀ ಕಡೆಗೆ ಕೂಡಿರು ಚಂದಾ ಮಡದಿಯ ಹಂಬಲ ಬಿಡುದೂರದಿಂದ ತಡಮಾಡದೆ ನಾ ನಡದೆ ಗೋವಿಂದಾ 2 ಇನ್ನೆನ್ನ ಗೊಡವ್ಯಾಕೊ ಬಿಡು ನಿನ್ನ ಸಂಗತಿ ಸಾಕು 3 ಎನ್ನ ವೈರಿಗಳ ಮನ್ನಿಸುವ್ಯಾಕೋ ನನ್ನಿಚ್ಛೆಯಲಿ ನಾ ಇನ್ನಿರಬೇಕೊ 4 ಹಿಂದಕೆ ಕುಂಭೋದ್ಭವನು ಎನ್ನ ತಂದೆಯ ನುಂಗಿದ ತಾನು ಅಂದಿಗೆ ಎನಗಾನಂದವು ಏನು 5 ಮತ್ತೆನ್ನ ಸೊಸೆಗವರು ಬಹು ಭಕ್ತಿಯಲಿ ಪೂಜಿಸುವರು ವೈರಿಯವರ್ಹೊರತು ಇನ್ಯಾರು 6 ಹುಡುಗ ಬುದ್ಧಿಯು ಎಂದು ನಾ ಕಡೆಗೆ ಬಲ್ಲೆನು ನಿಂದು ಮಡುವ ಧುಮುಕಿ ಕಲ್ಪಡೆಯ ಪೊತ್ತಿಹುದು ಪಿಡಿದು ಭೂಮಿಯ ಕಂಭ ಒಡೆದು ಬಂದಿಹುದು 7 ಬಡವ ಬ್ರಾಹ್ಮಣನಾದಿ ಚಪಗೊಡಲಿಯ ಕೈಯಲಿ ಪಿಡಿದಿ ಮಡದಿಯ ಕಳಕೊಂಡು ತುಡುಗ ನೀನಾದಿ ಹಿಡಿದು ಬತ್ತಲೆ ಖೊಟ್ಟಿ ಕಡವನೇರಿದಿ 8 ಎಷ್ಟು ಪೇಳಲೆ ನಿನಗೆ ನೀನೆಷ್ಟು ಮಾಡಿದಿ ಹೀಗೆ ಅಷ್ಟು ಮನಸಿನೊಳಗಿಟ್ಟುನೂ ಆಗ ಕಟ್ಟಕಡಿಗೆ ಬಲು ಸಿಟ್ಟು ಬಂತೆನಗೆ 9 ಎಲ್ಲರಿಗುತ್ತಮ ನೀನು ಎಂದಿಲ್ಲಿದ್ದೆ ಮೋಹಿಸಿನಾನು ಬಲ್ಲಿದನಂತಾದ್ರಿಯೊಳಿರು ನೀನೆ 10 ರಾಗ:ಸಾರಂಗ ಆದಿತಾಳ ಪರಿ ಕಲಹ ಮಾಡಿ ತ್ವರಿತದಿಂದ ನಡೆದಳು ಕರವೀರಪುರಕೆ ಪ ಪರಮಾತ್ಮನು ತಾ ಮುಂದೀಪರಿ ಚಿಂತಿಸುತಿಹನು ಸಿರಿಯಿಲ್ಲದ ವೈಕುಂಠ ಸರಿಬಾರದು ಎನಗೆ1 ದೀನನಾದೆನು ಹಾ ನಾನು ಕಾಣುವೆನೆಂದು ಪ್ರಾಣ ನಿಲ್ಲದು ಪಟ್ಟದ ರಾಣಿಯ ಬಿಟ್ಟು 2 ಇನ್ಹ್ಯಾಂಗೆ ಇರಲಿ ಇನ್ನಾಕೆಯ ಹೊರತು ಕಣ್ಣಿಗೆ ವೈಕುಂಠಾರಣ್ಯ ತೋರುವುದು ಇನ್ನೆಲ್ಹೋಗಲಿ ಎಂದು ಬಂದ ತನ್ನಿಂದ ತಾನು3 ಶ್ರೀ ವೈಕುಂಠಕಿಂತ ಶ್ರೀ ವೆಂಕಟಗಿರಿಯು ಅಧಿಕವೆಂದು ಭಾವಿಸೀ ಪರಿಯು ಆವತ್ತಿಗೆ ಬೇಗಲ್ಲೇ ತಾ ವಾಸಕೆ ನಡೆದ ದೇವ ತಿಂತ್ರಿಣೆಯೆಂಬೋ ಆ ವೃಕ್ಷವಕಂಡ 4 ಅಡಗಿದ ಮೆಲ್ಲನೆ ಪೋಗಿ ಅಲ್ಲ್ಯಾದೇಶದಲೊಬ್ಬ ಜೋಳಾಖ್ಯನು ಎಲ್ಲರಿಂದಲಿ ತನ್ನ ಪುರದಲ್ಲೆ ಇರುವಾ5 ಶಿವನ ಕರುವಿನ ಮಾಡಿ ತಾನಾಕಳಾಗಿ ಅವನ ತಾಯಿಯು ಲಕ್ಷ್ಮೀ ಅವನ ಮಾರಿದಳು ಕೊಂಡ 6 ನಿತ್ಯ ವರಸಾಧು ಗುಣದಿಂದ ಸರಸಾಗಿ ಕೂಡಿ ಚರಿಸಿ ಬರುವುದು ವೇಂಕಟಗಿರಿಗ್ಹೋಗಿ ನಿತ್ಯ7 ಬಂದ ಕಾರಣವೇನು ಎಂದು ಸ್ಮರಿಸುತಲಿ ಇಂದಿರೇಶಗೆ ಭಕ್ತಿಯಿಂದ ಕ್ಷೀರವನು ಚಂದಾಗಿ ಕರೆವುದು ಬಂದು ಹುತ್ತಿನಲಿ 8 ಹಿಂಡದು ತನ್ನ ಕರುವಿನ ಪರಿ ರಾಜನ ಹೆಂಡತಿಯ ಆಗ ಚಂಡ ಕೋಪದಿ ಗೋಪನ ಕಂಡಂದಳು ಹೀಗೆ 9 ವಚನ ನೀ ಏನು ಮಾಡುವಿನಿತ್ಯ ಕುಡಿವುದೋ ವತ್ಸ ಏನುಮಾಡು ಪ್ರಾಣಕೊಂಬುವೇನು ತಾನು ಗಾಭರಿಗೊಂಡು ಧ್ಯಾನಿಸುತ ಆ ರಾಜ ಮಾನಿನಿಗೆ ನುಡಿದ ಬಹು ದೀನನಾಗಿ 1 ರಾಗ:ದಂತಿ ಆದಿತಾಳ ಅರಿಯೆ ತುರುಗಳ ಕಾಯ್ಕೊಂಡು ಬರುವೆ ನಾ ಇದಹೊರ್ತು ಪ ಕಟ್ಟುವರ್ಯಾರೊ ಅರಿಯೆ ಬರಿದೆ ನೀ ಎನ್ನ ಮೇಲೆ ಹರಿಹಾಯುವದ್ಯಾಕೆ ಅರಿಯೆ 1 ಪಾಲಾಗುವುದೊ ಅರಿಯೆ ಸರಸಾಗಿ ತಿಳಿನೀನು ನೆರೆಯೊರೆಯವರನಾ ಅರಿಯೆ 2
--------------
ಅನಂತಾದ್ರೀಶ - ಕಥನಕಾವ್ಯಗಳು
ಕಂದ||ಗುರುವಾಸುದೇವರಂಘ್ರಿಸ್ಮರಣೆಗೆ ಸಂತೋಷ'ೀವ ಒಬ್ಬಟ್ಟಿನ ನುತಿವೆರಸಿದ ಕೀರ್ತನೆ ಪೇಳುವೆಹರುಷದಿ ಲಾಲಿಪುದು ಸುಜನರ್ಬಾಲೋಕ್ತಿಯನೂ1ಬೆಲ್ಲವು ಗೋಧಿಯು ತೊಗರಿಯುಒಳ್ಳೆಣ್ಣೆಯು ತುಪ್ಪವೆಂಬೀಯೈದ ನುತಿಯಲುಎಲ್ಲಾ ಲೋಕವ ನಿರ್'ುಸಿಚಲ್ಲಿದಭೂತಗಳು ತತ್ವಾರ್ಥಕ್ಕಾಸ್ಪದ'ಲ್ಲ 2ಹರುಷದಲಿದರೊಳು ಬೆರೆದಿಹಪರಮನು 'ಂಗಡಿಸಿ ದೂಸಿ ಮತ್ತೊಡಗೂಡಿಸಿಕರಗುತ ಪ್ರಮದರಿದರೊಳುನೆರೆಪೊಂದುವನೀಗ ಜೀವನಿದು ತತ್ವಾರ್ಥವೂ 3
--------------
ತಿಮ್ಮಪ್ಪದಾಸರು
ಕನಸು ಕಂಡೆನು ಕೇಳೇ ಪ್ರಾಣ ಸಖೀ ಒಳ್ಳೆ ಪ ಕನಸು ಕಂಡೆನು ಕೇಳು ಘನತರ ಸುಖದೊಳೂ ಮನದೊಳಗನುದಿನ ನೆನೆಸೇ ಸಖಿಅ.ಪ ಎಳೆಯ ಚಂದ್ರನ ಚೆಲ್ವ ಪೊಳೆವ ಬೆಳಕಿನೊಳು ಝಳಿಪಾ ಚೆಂದುಟಿಯಂ ತಿಳಿವೇ ಸಖಿ 1 ವಾಸವಾರ್ಚಿತ ಹರಿದಾಸ ತುಲಸಿರಾಮಾ ದೇಶಿಕನಾದಾನು ತಾನಹುದೇ ಸಖಿ ಅಸ್ಮದ್ದೇಶಿಕನಾದಾನು 2 ಯಾತರ ಸುಖ ಬರಿ ಮಾತಿನೊಳಿಗೆ ಜಾಣೆ ಪ್ರಿತಿಯಿಲ್ಲದೆಲೇ ತಾಮಾತರಮಳಿವುದೇನೇ 3 ಬರಿಯ ಮಾತಿನೊಳೆನ್ನಾ ಬೆರಗು ಮಾಡಲಿಬೇಡಾ ಸುರತಕೇಳಿಗೆ ಬಂದೂ ಸರಸವನಾಡೆಲೆ 4 ವಾಸವನುತ ಹರಿ ದಾಸತುಲಸಿರಾಮಾ ಆಸೆಯ ತೋರಿಯೀಪರಿಯೋಳ್ ಮೋಸಗೈವುದು ಸರಿಯೆ 5
--------------
ಚನ್ನಪಟ್ಟಣದ ಅಹೋಬಲದಾಸರು
ಕರುಣಿಸೊ ಶ್ರೀ ಗುರುರಾಜ ಬರದ್ಯಾಕೆ ಎನ್ನೊಳು ದಯ ಪ ದಯಮಾಡೊ ಶ್ರೀ ಗುರುರಾಜ ಹಯವದನನಿಗತಿ ಪ್ರಿಯ ಅ.ಪ ಒಲಿಸಾದೆ ವಿದ್ಯೆಗಳನ್ನು ಬಾಲತನದಿ ಬಹುಕಾಲ ಕಳೆದೆ ಕುಲೀಲೆಗಳಲ್ಲಿ ಛಲವ್ಯಾಕೆ ಎನ್ನೊಳು ಬಲ್ಲಿ 1 ಜ್ಞಾನರಹಿತ ಪ್ರಾಯದಿ ಮಾನಾಪೇಕ್ಷೆಯನೆ ಮಾಡಿ ಮೌನಿ ವೇಷವನೆ ಧರಿಸಿ ಹೀನಾಚರಣೆಯಲ್ಲಿರುವೆ 2 ಪತಿತಾಗ್ರಣಿಯು ನಾ ಬಲ್ಲಿ ಪತಿತಪಾವನ ನೀ ಬಲ್ಲೆ ಗತಿಪದ ಮತಿಯನಿತ್ತು ರತಿಪತಿಪಿತನ ತೋರಿ3 ಬಲ್ಲವರನು ರಕ್ಷಿಪುದು ಅಲ್ಲ ಬಿರುದು ಘನವಾದ್ದು ಅಲ್ಪನ ಪೊರೆಯಲು ನಿನಗೆ ಒಳ್ಳೆ ಕೀರುತಿ ಬರುವುದು 4 ಸರ್ವಜ್ಞ ನಿನಗೆ ನಾನೆಂತೋ ಉರ್ವೀಭಾರನು ನಾ ಪೇಳ್ವೆ ಪರ್ವ ಪಂಚಕಗಳ ಕಳೆ ಶ್ರೀ ನರಹರಿಯನೆ ಪೊಂದಿಸಿ 5
--------------
ಪ್ರದ್ಯುಮ್ನತೀರ್ಥರು
ಕಲಿಯುಗದ ಮಹಿಮೆಯನು ಕಂಡಷ್ಟು ಪೇಳುವೆನು ಪ ಜಲಜನಾಭನ ಕೃಪೆಯ ಪಡೆದವರು ಕೇಳಿ ಅ ಸತ್ಯಧರ್ಮಗಳೆಲ್ಲ ಎತ್ತ ಪೋದವೊ ಕಾಣೆಉತ್ತಮರ ಜೀವನಕೆ ದಾರಿಯಿಲ್ಲನಿತ್ಯದಲಿ ಕಳವು ವ್ಯಭಿಚಾರವುಳ್ಳವರೆಲ್ಲಅರ್ಥ ಸಂಪನ್ನರಾಗನುಭವಿಸುತಿಹರು1 ಅತ್ತೆಯೇ ಸೊಸೆಯಾಗಿ ಸೊಸೆಯು ಅತ್ತೆಯು ಆಗಿಪುತ್ರ ಪಿತನಾಗಿ ಪಿತ ಪುತ್ರನಾಗಿಮತ್ತೆ ಗಂಡನಿಗೆ ಹೆಂಡತಿಯೆ ಗಂಡಳು ಆಗಿವರ್ತಿಸುವರಯ್ಯ ತಮಗೆದುರಿಲ್ಲವೆಂದು 2 ವೈರಿ ಸಿರಿ ಮದದಿ ಸೊಕ್ಕಿದರುಕಾವರಾರೈ ಸಾಧು ಸಜ್ಜನರನೀಗ3 ವೇದ ವಿಪ್ರರು ತಮ್ಮ ವೃತ್ತಿ ಸ್ವಾಸ್ಥ್ಯವ ಕಳೆದುಆಧಾರವಿಲ್ಲದೆ ತಿರಿದು ತಿಂಬುವರುಕಾದುವ ಶೂರರಿಗೆ ಕಾಸು ಕೊಡುವವರಿಲ್ಲಮೇದಿನಿಗೆ ಬೀಳ್ವ ಮಳೆ ಖಂಡಮಂಡಲವು 4 ಅನ್ನವಸ್ತ್ರಗಳಿಂದ ಚೆನ್ನಾಗಿ ಬಾಳುವರಭಿನ್ನ ತಂತ್ರವ ಮಾಡಿ ಕೆಡಿಸುತಿಹರುಗನ್ನಗತಕವ ಮಾಳ್ಪ ಗ್ರಾಮಣ್ಯಗಳ ಕಲಿತುಕುನ್ನಿಗಳು ಹೆಚ್ಚಿದರು ಕ್ರೂರ ಫಣಿಯಂತೆ 5 ಆಳಿದೊಡೆಯಂಗೆರಡು ಬಗೆಯುವಾತಗೆ ಒಳ್ಳೆಮಾಳಿಗೆಯ ಮನೆ ತುರುವು ಧನಧಾನ್ಯವುವೇಳೆವೇಳೆಗೆ ಬರುವ ಹೆಂಡತಿಯ ಲೆಕ್ಕಿಸದೆಸೂಳೆಯನು ನೆಚ್ಚಿ ಕಾಲವ ಕಳೆವರಯ್ಯ6 ಸೇರಿ ದ್ರೋಹವ ಮಾಳ್ಪ ಕ್ರೂರಕರ್ಮಿಗಳ ಮತಪೂರೈಸಿ ಕೊಡುವರರಸುಗಳೆಲ್ಲರುಧಾರಿಣಿಯ ಭಾರವನು ತಾಳಲಾರದೆ ದೇವಿಶ್ರೀರಾಮ ರಾಮೆಂದು ಶಿರವ ತೂಗುವಳು7 ಪತಿ ನೀನೆ ಗತಿಯೆನಲುಮುತ್ತೈದೆಗುಡುವುದಕೆ ವಸ್ತ್ರವಿಲ್ಲಮತ್ತೆ ವ್ಯಭಿಚಾರಿಣಿಗೆ ತೊಡಿಗೆ ಬಂಗಾರಗಳುವರ್ತನೆಯಿದೇನಯ್ಯ ಕಲಿಯುಗದ ಮಹಿಮೆ 8 ಪತಿವ್ರತೆಯರೆಂಬುವರು ಶತಸಹಸ್ರಕೊಬ್ಬರುಮಿತಿಮೀರಿ ಇಹರಯ್ಯ ಇತರ ಜನರುಮತಿಗೆಟ್ಟು ಮನಸೋತು ಅನ್ಯ ಪುರುಷರ ಕೂಡಿಗತಿಗೆಟ್ಟು ಹೋಗುವರು ಮೂರು ತೊರೆದು 9 ಹರಿಹರರ ಪೂಜೆಗಳು ಹಗರಣಗಳಾದವುಉರಿ ಮಾರಿ ಚಾಮುಂಡಿ ಶಕ್ತಿಗಳಿಗೆಕುರಿ ಕೋಣ ನೈವೇದ್ಯ ಧೂಪದೀಪಗಳಿಂದಪರಮ ಭಕ್ತಿಯ ಸಲಿಸಿ ಪೂಜಿಸುವರಯ್ಯ10 ನಡೆವ ಕಾರ್ಯಗಳೆಲ್ಲ ನುಡಿಯಲೆನ್ನಳವಲ್ಲಒಡೆಯ ನೀನೇ ಬಲ್ಲೆ ಕಲಿಯುಗದ ಮಹಿಮೆತಡವ ಮಾಡಲಿ ಬೇಡ ತಾಳಲಾರದು ಲೋಕಮೃಡನ ವೈರಿಯ ಪೆತ್ತ ಆದಿಕೇಶವನೆ11
--------------
ಕನಕದಾಸ
ಕಲ್ಲಿನಿಂದ ಸರ್ವ ಫಲ ಬಾಹುದೊ | ಪ ಕೈವಲ್ಯ ತೋರುವುದೊ ಅ.ಪ ಕಲ್ಲು ಕಡೆಯುತ್ತಿರಲು ಅಮೃತವೆ ಪುಟ್ಟಿತು | ಕಲ್ಲು ಎತ್ತಲು ಮಳೆಯೊಳೆಲ್ಲವರು ಉಳಿದರು | ಕಲ್ಲು ಹರಿಪಾದವನು ಸೋಕೆ ಹೆಣ್ಣಾಯಿತು | ಕಲ್ಲು ಲಂಕೆಗೆ ಮಾರ್ಗ ಚೆನ್ನಾಗಿ ಶೋಭಿಸಿತು1 ಕಲ್ಲಿನೊಳಗೆ ದೇವನೊಡಮೂಡಿ ಕಾಣಿಸುವ | ಮೂರ್ತಿ ಮಂತಾಹುದು | ಕಲ್ಲು ದೇವರ ಗುಡಿಗೆ ಗರುಡ ಗಂಬವು ಆಯ್ತು | ಕಲ್ಲು ಕೋಟ್ಯಾನು ಕೋಟಿಗೆಲ್ಲ ಬೆಲೆಯಾಯ್ತು2 ಕಲ್ಲೆಂದುಪೇಕ್ಷಿಸದೆ ಕಾಲಕಾಲದಿ ನಿಮ್ಮ | ಕಲ್ಲು ಮನಸನು ಬಿಟ್ಟು ಪೂಜೆಮಾಡಿ | ಸಿರಿ ವಿಜಯವಿಠ್ಠಲ ಒಳ್ಳೆ | ಕಲ್ಲು ಪದವಿಯ ಕೊಟ್ಟು ಸತತ ಪಾಲಿಪನೊ 3
--------------
ವಿಜಯದಾಸ
ಕೆಡಬ್ಯಾಡೆಲೊ ಪ್ರಾಣಿ ಕೆಡಬ್ಯಾಡಾ ನಮ್ಮ ಕಡಲಶಯನನ ಭಜನೆ ಬಿಡಬ್ಯಾಡಾ ಪ ಪರನಿಂದೆ ಮಾಡಿ ಕೆಡಬ್ಯಾಡಾ ನನ್ನ ಸರಿಯಾರಿಲ್ಲೆಂದು ಮೆರೆಯ ಬ್ಯಾಡಾ ಪರಹೀನತಾ ಮಾಡಿ ನೀ ಕೆಡಬ್ಯಾಡಾ ಶ್ರೀ ಹರಿ ಸರ್ವೋತ್ತಮನೆನದೆ ಕೆಡಬ್ಯಾಡಾ 1 ಪರದ್ರವ್ಯವನಪಹರಿಸಲಿ ಬ್ಯಾಡಾ ದಿವ್ಯ ಪರಸತಿಯರ ಮೋಹಕ್ಕೊಳಗಾಗ ಬ್ಯಾಡಾ ದುರಿತ ಕಾರ್ಯಕೆ ಮನಕೊಡಬ್ಯಾಡಾ ಒಳ್ಳೆ ಪರ ಉಪಕಾರ ಮಾಡದೇ ಕೆಡಬ್ಯಾಡಾ 2 ಮಾತಾಪಿತರ ಸೇವೆ ಬಿಡಬ್ಯಾಡಾ ಯಮ ದೂತರಂದದಿ ಅವರನು ಕಾಡಬ್ಯಾಡಾ ಕೆಟ್ಟ ಮಾರ್ಗವ ಹಿಡಿದು ಹೋಗಬ್ಯಾಡಾ ನಿನ್ನ ಸತಿಸಂತರಾಮೋಹಕ್ಕೊಳಗಾಗಬ್ಯಾಡಾ 3 ದುಷ್ಟ ಮಾತುಗಳಾಡಬ್ಯಾಡಾ ನೀನು ಕಳ್ಳರ ಸಹವಾಸ ಮಾಡಲಿ ಬ್ಯಾಡಾ ಒಳ್ಳೆತನವ ಬಿಡಬ್ಯಾಡಾ ನಮ್ಮ ಫುಲ್ಲನಾಭನ ದಾಸನಾಗದಿರಬ್ಯಾಡಾ 4 ಸತ್ಯ ಮಾತಾಡದೇ ಕೆಡಬ್ಯಾಡಾ ಸರ್ವೋತ್ತಮ ಹನುಮೇಶ ವಿಠಲನ ನಾಮಾ ಪಾದ ಬಿಡಬ್ಯಾಡಾ ಒಳ್ಳೆ ಉತ್ತಮ ಪದಕೆ ವೈದಿಡುವನೋ ಮೂಢಾ 5
--------------
ಹನುಮೇಶವಿಠಲ
ಕೇಳಕ್ಕಯ್ಯ ನಾ ಮಾಡಿದ ಮದುವೆ ಮನಸಿಗೆ ಬರುತ್ತದೆಕೇಳಕ್ಕಯ್ಯ ನಾ ಮಾಡಿದ ಮದುವೆ ಮನಸ್ಸಿಗೆ ಬರುತ್ತದೆ ಪ ಮುಂಡಕೆ ದಂಡೆಯ ಮಾಡಿಸಿದೆ ಮುಸುಕಲಿ ಸೋಭಾನ ಮಾಡಿದೆಮುಂಡಕೆ ರುಂಡವ ಕೂಡಿಸಿದೆ ಮಂಗಳಾರತಿ ಬೆಳಗಿಸಿದೆ 1 ಕೋತಿಯು ಅಲ್ಲಿ ಕುಣಿಯುತ್ತಿತ್ತು ಕೋಣವು ಮದ್ದಲೆ ಬಾರಿಸುತ್ತಿತ್ತುಕೋತಿಯ ಕಾಲನೆ ಮುರಿದೆ ಕೋಣನ ಮದ್ದಲೆ ಮುರಿದೆ2 ಹಾರುವವನನು ಕಟ್ಟಿ ಹಾಕಿಸಿದೆ ಹಾದಿಲಿ ದೀಪವ ಹಿಡಿಸಿದೆಮೂರು ಮನೆಯ ಮೇಲಟ್ಟದಲ್ಲಿ ಮೆರವಣಿಗೆಯನೆ ಮಾಡಿಸಿದೆ3 ಒಳ್ಳೆ ಬೀಗರ ಬೆಳ್ಳಿ ತಳಿಗೆಯಲ್ಲಿ ಎಲ್ಲರ ಒತ್ತೊತ್ತಾಗಿ ಕೂರಿಸಿದೆಬೆಲ್ಲದ ಪರಮಾನ್ನವನೆ ಉಣಿಸಿದೆ ಬೆಳ್ಳನೆ ಉಡುಗೊರೆ ಹೊದಿಸಿದೆ 4 ಗುಡ್ಡ ಮೂರ ಕೊನೆಯಲಿದ್ದ ಅಡ್ಡಗಲದೆ ದೇವರ ಮನೆಗೊಯ್ದುದೊಡ್ಡ ಚಿದಾನಂದ ಗುರುವಿಗೆ ನಾ ಅಡ್ಡಗೆಡವಿ ಮದುವೆ ಮಾಡಿಸಿದೆ5
--------------
ಚಿದಾನಂದ ಅವಧೂತರು
ಕೇಳು ಒಳ್ಳೆವರ ಕೂಡಾ ನಿನ್ನ ಹಿತವ ಪ್ರಾಣೀ | ತಾಳಿ ನರದೇಹದಿಂದ ಮಾಡುವರೇ ಹಾನಿ ಪ ಮುತ್ತಿನಂಥಾ ದಿನವಿದು | ಸಿಕ್ಕದಣ್ಣಾ ಮುಂದ | ಚಿತ್ತ ಸ್ಥಿರವಾ ಮಾಡಿ ಹರಿಯ ನೆನೆಯಬೇಕು ಇಂದ 1 ಬಾಲನಾಗಿ ಕೆಲವು | ದಿನದಿಂದ ಯೌವನದಿ | ಮ್ಯಾಲ ಯೆಚ್ಚರವ ಬಿಟ್ಟು | ಹರಿಗೆ ವಿಮುಖನಾದಿ 2 ಜರೆಯು ಬಂದ ಕಾಲದಲ್ಲಿ | ತನುವು ತನ್ನದಲ್ಲಾ | ಸರಕು ಮನೆಯೊಳಿಲ್ಲಾ 3 ಈಗಳವೆ ಯಚ್ಚರಿತು | ಹರಿಯಾ ಬಲಗೊಂಡು | ಹಿಂಡು 4 ಶರಣು ಹೋಗುವಾ | ಭಾವಭಕ್ತಿಯಲ್ಲಿ ದಾವಪ್ರೇಮಿ | ತಾರಿಸುವಾ ಗುರು ಮಹಿಪತಿಸುತ ಸ್ವಾಮಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೋಲ ಕೋಲೆನ್ನ ಕೋಲ ಕೋಲೆನ್ನ ಕೋಲ ಕೋಲ ಶ್ರೀ ಹರಿಯ ನೆನದೇವ ಕೋಲ ಪ. ನಾರಿಯರಿಬ್ಬರಿಗೆ ಹರಿಯು ಕರೆದು ಮಾತಾಡದ್ಹಾಂಗೆ ನೀರೊಳಗೆ ಹೋಗಿ ಅಡಗಿದ ಕೋಲನೀರೊಳಗೆ ಹೋಗಿ ಅಡಗಿದ ರುಕ್ಮಿಣಿಪೋರತನವೆಂದು ಬಿಡಬೇಕು ಕೋಲ 1 ಕೃಷ್ಣ ನಮ್ಮರಮನೆ ಬಿಟ್ಹೋಗ ಬಾರದೆಂದು ಬೆಟ್ಟವ ಮ್ಯಾಲೆ ಹೊರೆಸಿದ ಕೋಲ ಬೆಟ್ಟವ ಮ್ಯಾಲೆ ಹೊರೆಸಿದ ಸತ್ಯಭಾಮೆಗಟ್ಟಿ ಎದೆಯವಳು ಹೌದು ಹೌದು ಕೋಲ 2 ನೀರಜನಯ್ಯಗೆರಡುಕ್ವಾರಿ ಚಿನ್ಹವ ಮಾಡಿ ಮಾರಿಯ ಗುರುತು ಮರೆಸಿದಿ ಕೋಲ ಮಾರಿಯ ಗುರುತು ಮರೆಸಿದಿ ನೀಲಾದೇವಿಧೈರ್ಯ ವಿನ್ನೆಷ್ಟು ಧಮಕೆಷ್ಟು ಕೋಲ 3 ಹರದೆಯರಿಬ್ಬರು ಹರಿಯ ಕರೆದು ಮಾತಾಡದ್ಹಾಂಗೆ ಉರಿಮಾರಿಮಾಡಿ ನಿಲ್ಲಿಸಿದಿ ಕೋಲಉರಿಮಾರಿ ಮಾಡಿನಿಲ್ಲಿಸಿದಿಭದ್ರಾದೇವಿಸರಿಯವರು ನೋಡಿ ನಗುತಾರೆ ಕೋಲ 4 ಕರ ಕರಿಯೆಂದು ಬಿಡಬೇಕು ಕೋಲ 5 ಮಡದಿಯರಿಬ್ಬರು ಹರಿಯ ಕರೆದು ಮಾತಾಡದ್ಹಾಂಗೆ ಕೊಡಲಿಯ ಕೊಟ್ಟು ಬಡವನೆ ಕೋಲ ಕೊಡಲಿಯ ಕೊಟ್ಟು ಬಡವನೆ ಮಾಡಿದ ಕಿಡಿಗೇಡಿತನವ ಬಿಡು ಕಾಳಿ ಕೋಲ 6 ನಲ್ಲೆಯರಿಬ್ಬರು ಹರಿಯ ಎಲ್ಲೆಲ್ಲೂ ಬಿಡದ್ಹಾಂಗೆ ಬಿಲ್ಲನೆ ಕೊಟ್ಟು ನಿಲ್ಲಿಸಿದಿಬಿಲ್ಲನೆ ಕೊಟ್ಟು ನಿಲ್ಲಿಸಿದಿ ಲಕ್ಷಣಾಕಲ್ಲೆದೆಯವಳು ಹೌದ ಹೌದ ಕೋಲ 7 ಒಳ್ಳೆಗುಣಪೂರ್ಣಗೆ ಕಳ್ಳನಂತೆ ಹೆಸರಿಟ್ಟಿಸುಳ್ಳು ನೋಡಿದರೆ ವಿಪರೀತ ಕೋಲ ಸುಳ್ಳು ನೋಡಿದರೆ ವಿಪರೀತ ಜಾಂಬವಂತಿಕೊಳ್ಳಿಯ ಗುಮ್ಮಗುರುವೇನ ಕೋಲ 8 ಮುದ್ದು ಹದಿನಾರು ಸಾವಿರ ಬುದ್ದಿವಂತರ ಕೂಡಿಹದ್ದೆರ್ದಬೌದ್ಧ ಎನುತಲೆ ಕೋಲ ಹದ್ದೆರ್ದಬೌದ್ಧ ಎನುತಲೆ ಬೆನ್ನ ಹತ್ತಲು ಇದ್ದಜನರೆಲ್ಲ ನಗುತಾರೆ ಕೋಲ 9 ನೂರು ಮಂದಿ ಹರಿಯ ದಾರಿಯ ಕಟ್ಟಲು ಹಾರಿದ ಕೃಷ್ಣ ಕುದರಿಯ ಕೋಲ ಹಾರಿದ ಕೃಷ್ಣ ಕುದುರೆ ಏರಿಕೊಂಡುಮಾರಿ ತೋರದಲೆ ಬರಲಿಲ್ಲ ಕೋಲ10 ಚಲ್ವ ರಾಮೇಶ ಎಲ್ಲ ಲಲನೆಯರಿಗೆ ಅಂಜಿಕೊಂಡುಬಲಿಯ ಮನೆ ಮುಂದೆ ಕುಳಿತಾನೆ ಕೋಲ ಬಲಿಯ ಮನೆ ಮುಂದೆ ಕುಳಿತಾನೆ ರುಕ್ಮಿಣಿಕಲಹವ ಬಿಟ್ಟು ಕರೆತಾರೆ ಕೋಲ 11
--------------
ಗಲಗಲಿಅವ್ವನವರು