ಒಟ್ಟು 22 ಕಡೆಗಳಲ್ಲಿ , 14 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿಯ ಮಧುರಾಪುರವು | ಎಲ್ಲಿಯ ತಾ ಬಿಲ್ಲು ಹಬ್ಬ |ಎಲ್ಲಿಯ ಸೋದರಮಾವನೆ ಪಎಲ್ಲಿಯ ಮಲ್ಲರಸಂಗ |ಖುಲ್ಲಕಂಸನು ನಮಗೆ |ಎಲ್ಲಿಯ ಜನ್ಮದ ವೈರಿಯೆ-ಸಖಿಯೆ ಅ.ಪವೃಂದಾವನದೊಳಗಿರುವ ವೃಕ್ಷಜಾತಿಗಳೆಲ್ಲ |ಒಂದೊಂದು ಫಲದಿಂದಲಿ ಸಂದಣಿತವೆ ||ಕುಂದಕುಸುಮದಲಿರುವ ಮಂದಿರದಲಿಚಕೋರ|ಒಂದೊಂದು ಸುಖಭರಿತವೆ ||ಅಂದುಮಾಧವನಮ್ಮ ಹೊಂದಿ ಕರವಿಡಿದ |ನಂದನ ಕಂದನ ಚರಿತವೆ ಸಖಿಯೆ 1ಅಕ್ರೂರ ತಾನೆಲ್ಲ ಅಚ್ಯುತಗೆಎಡೆಮಾಡಿ |ಆ ಕ್ರೂರನೆನಿಸಿದನೆ |ವಕ್ರಮಾರ್ಗವ ಕೂಡಿ ವನಿತೆಯರ ಉಸಿರೆಣಿಸಿ |ಚಕ್ರಧರನಗಲಿಸಿದನೆ ||ಆಕ್ರಮಿಸಿ ಸುರಲೋಕ ಪಾರಿಜಾತವನಂಬು-|ಜಾಕ್ಷಿಗೆ ತಂದಿತ್ತನೆ-ಸಖಿಯೆ 2ನೀರ ಚೆಲ್ಲಾಟದೊಳು ನಿಲಿಸಿ ನಮ್ಮೆಲ್ಲರ |ನಾರಿಯರಿಗೆ ಚಲ್ಲಿದನೆ ||ಮೋರೆ ಮೋರೆ ನೋಡಿ ಅಧರಾಮೃತಗಳ |ಸಾರಿ ಸಾರಿ ಸವಿದುಂಬನೆ ||ದ್ವಾರಕಾಪುರವಾಸ ಪುರಂದರವಿಠಲ |ಸೇರಿ ನಮ್ಮನು ಸಲಹುವನೆ-ಸಖಿಯೆ 3
--------------
ಪುರಂದರದಾಸರು
ಕೊಡುವಕರ್ತ ಬೇರೆ ಇರುತಿರೆ -<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬಿಡುಬಿಡು ಚಿಂತೆಯನು ಪ.ಒಡೆಯನಾಗಿ ಮೂಜಗವನು ಪಾಲಿಪ |ಬಡವರಾಧಾರಿಯು ಭಕ್ತರ ಪ್ರಿಯನು ಅಪಕಲ್ಲಿನೊಳಗೆ ಇರುವ - ಕಪ್ಪೆಗೆ - |ಅಲ್ಲೆ ಉದಕಕೊಡುವ |ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ವ |ವಲ್ಲಭಶ್ರೀಹರಿ ಎಲ್ಲಿಯು ಇರುತಿರೆ|1||ಆನೆಗೈದುಮಣದಾ - ಆಹಾರವ |ತಾನೆ ತಂದು ಕೊಡುವ |ದೀನರೊಡೆಯ ಶ್ರೀನಿವಾಸ ದಯಾನಿಧಿ |ಮಾನದಿಂದಲಿ ಕಾಯ್ವ ಭಾನುಕೋಟಿತೇಜ2ಸರಸಿಜಾಕ್ಷ ತನ್ನ - ಸೇರಿದ |ನರರನು ಬಿಡನಣ್ಣ |ಪರಮದಯಾನಿಧಿ ಭಕುತರ ಸಲಹುವ |ಪುರಂದರವಿಠಲನು ಪುಷ್ಪಶರನ ಪಿತ 3
--------------
ಪುರಂದರದಾಸರು