ಒಟ್ಟು 44 ಕಡೆಗಳಲ್ಲಿ , 23 ದಾಸರು , 42 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಶವಿಧ ಬ್ರಹ್ಮರ ಮನೆಯಲಿ ಭಿಕ್ಷವ ಕೊಳುತಿಹ ಅವಧೂತದಶವಿಧ ಬ್ರಹ್ಮರ ವಿವರವನೀಗಲೆ ಪೇಳುವೆ ಪ್ರಖ್ಯಾತ ಪ ಸತ್ಯವು ಶೌಚವು ಸಮಸ್ತ ಬ್ರಹ್ಮವು ಸರ್ವದಿ ದಯವಿಟ್ಟಿಹನುನಿತ್ಯವು ತತ್ವವು ಈತನು ಬ್ರಾಹ್ಮಣರೊಳಗೆ ಬ್ರಾಹ್ಮಣನು 1 ಮಾಯೆಯು ಇಲ್ಲವು ಸ್ನಾನಕರ್ಮದಲಿ ದೇವಗೋವು ಪ್ರಿಯನುಆಯುಧದಿಂ ರಣ ಜಯಿಸುವನೀತನು ಬ್ರಾಹ್ಮಣ ಕ್ಷತ್ರಿಯನು2 ಸಿದ್ಧವು ಕರ್ಮದಿ ದೇವಗೋವುಗಳ ಪೂಜಿಸುತಿಹನೀತಉದ್ದಿಮೆ ಮಾಡುವ ನಾನಾ ಬ್ರಹ್ಮರೊಳು ವೈಶ್ಯನೆ ಇವನೀತ 3 ಚಲ್ಲಣ ಹಾಕಿಯೆ ಮಿಣಿನೊಗ ಹೊತ್ತಿಹನೀತಎಲ್ಲ ಕೃಷಿಯ ವ್ಯವಹಾರವನು ಮಾಡುವ ಬ್ರಾಹ್ಮಣರೊಳು ಇವ ಶೂದ್ರ 4 ಹಲಬರು ಇಹೆವೆಂದು ಸ್ವಯಂಪಾಕಕೆತ್ತುವ ಮಾಡುತ ಬಹುಜಾಲಆಚಾರದ ಸೋಗಿನಲಿ ಹೊರಗುಂಬುವರು ಬ್ರಾಹ್ಮಣಮಾರ್ಜಾಲ 5 ಎಡಗೈ ಅರಿಯನು ಬಲಗೈ ಅರಿಯನು ನುಡಿವನು ಬಿರುಮಾತಉಡುವನು ಹಬ್ಬಕೆ ಧೋತ್ರವ ಬ್ರಾಹ್ಮಣರೊಳಿವನೀಗ ಕುರುಬ 6 ಚೋರರ ಕೂಡಿಯೆ ಪಾಲನೆಕೊಂಬನು ಮಾಡುತ ಬಲು ಘಾತಆರಾದರನು ಅರಿಯನು ಬ್ರಾಹ್ಮಣರೊಳವ ಕಿರಾತ 7 ಕಾಣನು ಭೇದವ ತಂದೆ-ತಾಯಿಯಲಿ ಜೀವರುಗಳ ನೋಡಪ್ರಾಣವ ಕೊಂಬನು ಬ್ರಹ್ಮೆಂತೆನ್ನದೆ ಬ್ರಾಹ್ಮಣರೊಳಿವ ಕಟುಕಾ 8 ಬಗೆ ಬಗೆ ನಾಮವು ನಿರಿವುಡಿಧೋತ್ರವು ಸಂಧ್ಯಾಧಿಗಳವ ದೃಶ್ಯಸೊಗಸನೆ ಮಾಡಿಯೆ ಕಣ್ಣನೆ ಹಾರಿಪ ಬ್ರಾಹ್ಮಣರೊಳಿವ ವೇಶ್ಯಾ9 ಸಹೋದರಿ ರಜಕೀಪರಿಭಾಳಾಮಾಯಾದಿ ಸ್ವಪಚಳ ಹೋಗುವ ಬ್ರಾಹ್ಮಣರೊಳಿವ ಚಂಡಾಲ10 ಪರಿ ದಶವಿಧ ಬ್ರಹ್ಮರುಗಳಲಿ ಭಿಕ್ಷೆಯ ಬೇಡುತಭೂಪ ಚಿದಾನಂದ ಅವಧೂತ ಸದ್ಗುರು ಮನವೊಪ್ಪಿಯೆ ಉಂಬ 11
--------------
ಚಿದಾನಂದ ಅವಧೂತರು
ದಾಸರ ಭಾಗ್ಯವಿದು-ಪುರಂದರ-ದಾಸರ ಭಾಗ್ಯವಿದು ಪ ತುಂಬಿ ಸೂಸುತಲಿದೆ ಅ.ಪ ಭೂಸುರ ಜನುಮದಿ ಬಂದು ಬೆಳೆದು ಉಪ- ದೇಶಗೊಂಡು ಮಧ್ವಮತ ಪೊಂದಿ ಲೇಸಾಗಿ ಭಕ್ತಿ ವಿರಕ್ತಿ ಜ್ಞಾನದ ವಿ- ಶೇಷವಾಗಿ ನಾ ಬಾಳುವದೆಲ್ಲ 1 ಸಜ್ಜನ ಸಂಗತಿ ಮಾಡಿ ದುರುಳಜನ ವರ್ಜನಗೈದು ಸತ್ಕರ್ಮಗಳ ಆರ್ಜಿಸಿ ನಾಮ ಮುದ್ರೆ ಹಗಲು ಇರಳು ನಿ ರ್ಲಜ್ಜನಾಗಿ ನಾ ಬಾಳುವುದೆಲ್ಲ 2 ಶ್ರವಣ ಕೀರ್ತನೆ ವಂದನೆ ಸ್ತೋತ್ರ ಹರಿನಾಮ ತವಕದಿಂದ ನುಡಿಯುವ ಕವನ ನವನವ ವಚನವು ಮಂತ್ರ ಸಂಕಲ್ಪವು ಸವಿದು ಸ್ಮರಿಸಿ ನಾ ಬಾಳುವುದೆಲ್ಲ 3 ಯಾತ್ರೆ ತೀರ್ಥ ದಿವ್ಯ ದಾನಧರ್ಮಂಗಳು ಕ್ಷೇತ್ರ ಮೆಟ್ಟಿ ಬಹ ಸಂಭ್ರಮವು ಮಿತ್ರರ ಕೂಡಾಡಿ ಹರಿಪರನೆಂದು ಸ- ತ್ಪಾತ್ರನಾಗಿ ನಾ ಬಾಳುವುದೆಲ್ಲ 4 ಹರಿದಿನದುಪವಾಸ ಜಾಗರಣೆ ಪಾರಣಿ ಗುರು ಹಿರಿಯರಲಿ ವಿಹಿತಸೇವೆ ಹಿರಿದಾಗಿ ಮಾಡೋಡು ಪರಿಪರಿಯಿಂದಲಿ ಹರುಷದಿಂದಲಿ ನಲಿದಾಡುವುದೆಲ್ಲ 5 ಷಡುರಸಭೋಜನ ದಿವ್ಯವಸನ ನಿತ್ಯ ಉಡುವುದು ಹೊದೆವುದು ಹಸನಾಗಿ ತಡೆಯದೆ ಜನರಿಂದ ಪೂಜೆಗೊಂಡು ಸುಖ- ಬಡಿಸುತಿರುವ ವಿಚಿತ್ರಗಳೆಲ್ಲ 6 ಮನವೆ ಹಿಗ್ಗದಿರು ಹಿಯ್ಯಾಳಿಕೆಯಿಂದ ಗುಣಿಸಿಕೊ ಸುಖವಾವುದು ಲೇಶ ನಿನಗೆ ಸ್ವತಂತ್ರ ಎಂಬುದು ಕಾಣೆನೆಂದಿಗು ಗುಣನಿಧಿ ವಿಜಯವಿಠ್ಠಲನ ಪ್ರೇರಣೆಯೆಲ್ಲ 7
--------------
ವಿಜಯದಾಸ
ದೇಶಾಧಿಪತಿ ನರಹರಿಯೆ ನಿನ್ನಯ ಪಾದದಾಸರ ದಾಸನೆಂದೆನಿಸಬೇಕೆನ್ನ ಪ ರಜತಮೋಗುಣ ಪ್ರವರ್ತಕ ಮೂಲಾಂತರದಿಂಯಜಮಾನತನದಹಂಕಾರವನು ಒಲ್ಲೆಭುಜ ಚಕ್ರ ಧರಿಸಿ ಸಾತ್ತ್ವಿಕರ ಪಾದಾಂಬುಜರಜ ಭಜಕರ ಭಜಕನೆಂದೆನಿಸೆನ್ನ1 ಸಿರಿಗಂಧ ಕುಂಕುಮ ಸಾದು ಜವ್ವಾಜಿ ಕ-ಸ್ತೂರಿ ತಿಲಕವನಿಡುವುದ ನಾನೊಲ್ಲೆಸಿರಿ ಊಧ್ರ್ವಪುಂಡ್ರ ದ್ವಾದಶನಾಮವಿಡುವವರಪರಿಚಾರಕರ ಪರಿಚಾರಕನೆನಿಸೆನ್ನ 2 ಸ್ವಾದು ಕಲ್ಪಿತವಾದ ಭಕ್ಷ್ಯ ಭೋಜ್ಯಗಳನುಆದರದ ಅಮೃತಾನ್ನ ಉಣುವುದನೊಲ್ಲೆಬೋಧೆಯನು ಹೇಳುವ ಕೇಳುವ ಹರಿದಾಸರಪಾದತೀರ್ಥ ಪ್ರಸಾದವನುಣಿಸೆನ್ನ3 ಕಾಲ ಕರ್ಮದೊಳುಪೇಕ್ಷೆಯ ಮಾಡಿ ಹರಿಭಕುತಿಶೀಲರಹಿತ ಬ್ರಾಹ್ಮಣನಾಗಲೊಲ್ಲೆಕೀಲನರಿತು ಹರಿಭಕುತಿಯನು ಮಾಳ್ಪ ಪರಚಾಂ-ಡಾಲನ ಮನೆ ಬಾಗಿಲ ಕಾಯಿಸೆನ್ನ 4 ಕ್ರೂರಶಾಸ್ತ್ರವನೋದಿ ಕುರಿ ಕೋಣವನೆ ಕಡಿದುಘೋರ ನರಕದಿ ಬೀಳುವುದನು ನಾನೊಲ್ಲೆವಾರಿಜಾಕ್ಷ ನಿನ್ನ ಚರಣ ಸೇವಕರ ಮನೆಯದ್ವಾರಪಾಲಕನೆಂದೆನಿಸೆನ್ನ 5 ಪಟ್ಟೆಪಟ್ಟಾವಳಿ ದಿವ್ಯ ದುಕೂಲ ಮಿಂ-ಚಿಟ್ಟ ವಸ್ತ್ರ ಉಡುವುದನೊಲ್ಲೆನೆಟ್ಟನೆ ಕಾವಿ ಕಾಷಾಯಾಂಬರಗಳನುಉಟ್ಟವರ ಬಂಟನೆಂದೆನಿಸೆನ್ನ 6 ಅರ್ಥ ವಿಷಯಂಗಳ ಫಲಾಪೇಕ್ಷೆಯಿಂ ಪುಣ್ಯತೀರ್ಥಯಾತ್ರೆಯ ಮಾಡಲೊಲ್ಲೆದೈತ್ಯ ಮರ್ದನ ಬಾಡದಾದಿಕೇಶವ ನಿನ್ನಕೀರ್ತನಗೈವರ ಸ್ತುತಿಕನೆನಿಸೆನ್ನ 7
--------------
ಕನಕದಾಸ
ನಿನ್ನ ಪೂಜೆ ಮಾಡುವುದಕನಾನುಕೂಲವು ಪ ಎನ್ನದೇಹ ಪೋಷಣೆಗೆ ಎಲ್ಲ ಇರುವದು ಅ.ಪ ತಾನು ಉಡುವುದಕ್ಕೆ ಹೆಚ್ಚುಧನದ ವಸ್ತ್ರವು ದಾನ ಮಾಡುವುದಕೆ ನೀಚÀತರದ ಅರುವೆಯೂ 1 ಘನ್ನಲೋಕ ಮಾತೆಗೆ ಗಿಲೀಟು ನಗಗಳು 2 ಯಜಮಾನಗೆ ಘೃತದ ಪಕ್ವ ಭಕ್ಷ್ಯ ಭೋಜ್ಯವು ಇತರ ಜನರಿಗೆಲ್ಲ ಎಣ್ಣೆಕರಿದ ಭಕ್ಷ್ಯವು 3 ದೇಹ ಸಂಬಂಧಿಗಳಿಗೋಸುಗ ಸಾಲಗೈವುದು ಶ್ರೀಹರಿ ನಿನ್ನವರು ಕೇಳೆ ಇದ್ದರು ಇಲ್ಲವೂ 4 ಅನ್ಯಜನರೊಳಿದ್ದಗುಣವು ದೋಷವೆಣಿಪುದು 5 ಪರಿ ತಿಳಿದು ಕೊನೆಗೆ ನರಕ ಹೊಂದುತ 6 ಘನಮಹಿಮೆ ಗುರುರಾಮವಿಠಲ ನಿನ್ನ ಮರೆವರು 7
--------------
ಗುರುರಾಮವಿಠಲ
ನೋಡಿ ನೋಡಿನೊ ರಂಗಾ ನಿನ್ನ ನೋಡಿನೊ ಆಡಲೇನಯ್ಯಾ ಪರಸತಿಯರ ಮೋಹಕ್ಕೆ ಸಿಲುಕಿ ಪ ಹೆಣ್ಣ ನಾ ಕಾಣುತ ಮನಸು ದ್ರವಿಸುವದು ದೃಢವಾಗಿ ಮುನ್ನೆ ದಾರಿದ್ರತನ ಯೆಣಿಸಿಕೊಳದೆ ಕಣ್ಣು ಹೋಗುವ ಸುದ್ದಿ ತಿಳಿಯದಲೆ ನೀಕ್ಷಿಸಿ ನಿತ್ಯ 1 ಜಲ್ಪಸಿಲ್ಪಿಗಳಿಂದ ಮಂತ್ರ ಮಾಡುವೆ ಅವಳಾ ಬಲ್ಪು ವಯ್ಯಾರ ಗುಣಗುಣಿಸಿಕೊಳುತಾ ತಲ್ಪಮಿಕ್ಕಾದ ಭೋಗದ್ರವ್ಯ ಬಯಸಿ ವಿ ಕಲ್ಪ ಸಂಕಲ್ಪದಲ್ಲಿ ಬಳುಲುವೆನುಬ್ಬಸವಳಿದು 2 ವ್ಯಾಖ್ಯಾತ ಪಂಡಿತದ್ವ್ಯಾಪಕ ಪಾಠಕ ಮಹಾ ಪ್ರಖ್ಯಾತ ವೇದವೇದಾಂತ ಪ್ರೌಢ ಸೌಖ್ಯ ಪುಸ್ತಕ ಪಾಣಿ ಜ್ಞಾನಿ ಎನಿಸಲು ಅವಳ ಆಖ್ಯಾನ ಕೇಳುತಲೆ ಕಿವಿಗೊಟ್ಟು ಲಾಲಿಸುವೆ 3 ಬೀದಿಯೊಳು ಪೋಗುವವಾಳೊಂದು ಪ್ರಯೋಜನಕೆ ಹಾದಿಯನು ಹಿಡಿದು ಸಮೀಪ ಬರಲು ಪಾದಕಾದರು ಬಿದ್ದು ಮಾತಾಡುವೆನೆಂಬೊ ಮೋದವನು ತಾಳಿ ಏಕಾಂತ ಹುಡುಕುವೆ 4 ಅಂಧಕ ಮೂಕಿ ಬಧಿರೆ ಹೀನಾಂಗ ಅವರೋತ್ತಮ ಜಾತಿ ವಿಧಿ ನಿಷೇಧವನು ಚಿಂತಿಸದೆ ತೀವರದಿಂದ ಅಧೋಗತಿಗೆ ಇಳುವೆನು ಸತ್ಕರ್ಮವನು ತೊರೆದು 5 ನೀರು ಸೀರೆವೊಗಿವಾಗ ಮೈ ತೊಳೆದು ಉಡುವಾಗ ಉರು ಕುಚ ಕಚ ನೋಳ್ಪ ಆಶೆಯಲ್ಲಿ ಮೂರು ಹತ್ತನೆ ತತ್ವ ನೆನೆನೆನೆದು ಯೋಚಿಸಿ ವಾರಿತಿಯ ಕೇಳಿ ತಲೆದೂಗುವೆನೊ ಲೇಸಾಗಿ 6 ಕಣ್ಣುಯಿದ್ದದಕೆ ಸಾರ್ಥಕವಾಗಲಿಲ್ಲ ಪ್ರ ಸನ್ನ ಮೂರುತಿ ಯೆನ್ನ ಸಾಧನವೇನೊ ಘನ್ನ ಏಲ್ಲೆಲ್ಲಿ ನಾ ನೋಡಿದರೆ ಅಲ್ಲಲ್ಲಿ ನಿನ್ನ ರೂಪವ ತೋರೊ ವಿಜಯವಿಠ್ಠಲ ಒಲಿದು 7
--------------
ವಿಜಯದಾಸ
ಪಾಲಿಸು ಪರಮಪಾವನ ಪದ್ಮಾವತೀರಮಣ ಪಾಲಿಸು ಪಯವಾರಿಧಿವಾಸ ಪದ್ಮಗದಾಧರ ಕೌಸ್ತುಭಭೂಷ ಪ. ಪಾಹಿಪಾರ್ಥಸಾರಥಿಅ.ಪ. ಮದನಜನಕ ಮಹಿಮಾಂಬುಧಿ ನಿನ್ನ ಪದಕಮಲವ ನಾ ಸ್ಮರಿಸದೆ ಎನ್ನ ಮದಮುಖತನವನು ಒದರುವದೆನ್ನ ಪದುಮನಾಭ ರಕ್ಷಿಸು ನೀ ಮುನ್ನ ಸದಯಾಂಬುಧಿ ನೀನಲ್ಲವೆ ನಿನ್ನೊಳು ಕ್ರೋಧ ಉದುಭವಿಸುವುದು ನಿಜವೇ ಭಕ್ತವಾತ್ಸಲ್ಯ ಇದಕೆ ನೀ ಊನ ತರುವೆ ಸಾಕು ಈ ಮರವೆ ಒದಗಿಸು ಸರ್ವಮನಸಿನೊಳ್ ಪುದು- ಗಿದಿಷ್ಟಾರ್ಥಗಳ ನೀ ದಯವಿಡುತ ಇಹಪರಗತಿಗಾ- ಸ್ಪದವಾದ ಸಂಪದವ ನೀ ಕೊಡು ತ್ವರಿತ ತ್ರೈಲೋಕ್ಯದಾತ ಮಧುಸೂದನ ಮಂದರಗಿರಿಧರ ನೀ- ರದ ನಿಭ ನಿರ್ಮಲ ನಿಜರೂಪ ಗುಣ ಸದನಾಚ್ಯುತ ರವಿಕುಲದೀಪ ನಿರ- ವಧಿ ಆನಂದ ರಸಾಲಾಪ ಬುಧಜನೋಪಲಾಲಿತ ಲೀಲಾಯತ ಉದಧಿಶಾಯಿ ಮಾನದ ಮಧುಸೂದನ1 ನಾಮಸ್ಮರಣೆಯೆ ನರಕೋದ್ಧಾರ ನೇಮವಿಲ್ಲೆಂಬುದು ನಿನ್ನ ವಿಚಾರ ಸಾಮಾರ್ಥದ ಗುಣಕೆಲ್ಲನುಸಾರ ಪಾಮರ ಮನಕಿದು ಈ ಗುಣಭಾರ ಶ್ರೀಮನೋಹರನೆ ಲಾಲಿಸೊ ಚಾತುರ್ಥಿಕ ಜ್ವರದಿ ಭ್ರಾಮಕನಾದೆ ಪಾಲಿಸೊ ದಾರಿದ್ರ್ಯವೆಂಬ ಸೀಮೆಯಿಂದಲಿ ದಾಟಿಸೊ ಸುಕೀರ್ತಿಯ ಮೆರೆಸೊ ಸಾಮಗಾನಲೋಲ ಸುಜನ ಸ್ತೋಮ ಭಾಗ್ಯನಿಧಿಯೆ ಎನ್ನ ಮನದ ಅಜ್ಞಾನವೆಂಬ ತಾಮಸ ಪರಿಹರಿಸಿ ಜ್ಞಾನೋದಯದ ಸದಾನಂದ ಈ ಮಹಾಭಾಗ್ಯಗಳೆಲ್ಲ ನೀನಿತ್ತಿರೆ ನೀ ಮಾಡುವುದೆಲ್ಲವು ಸಹಜ ಗುಣ ಧಾಮಾಶ್ರಿತ ನಿರ್ಜರಭೂಜ ಸುಜನ ಸ್ತೋಮಾರ್ಕಾಮಿತ ವಿಭ್ರಾಜ ಶ್ರೀಮಚ್ಛೇಷಾಚಲ ಮಂದಿರ ಸು- ತ್ರಾಮಾರ್ಚಿತ ಸದ್ರಾಮ ಶ್ರೀರಾಮ2 ಉಡುವ ಸೀರೆಯ ಸೆಳೆಯಲು ದ್ರುಪಜೆಯ ಕೊಡಲಿಲ್ಲವೆ ಬಹುವಸನ ಸಂತತಿಯ ಹಿಡಿಯವಲಕ್ಕಿಗೆ ದ್ವಾರಕ ಪತಿಯ ಕಡು ಸರಾಗವಾಯ್ತಿಂದಿನ ಪರಿಯ ಬಿಡುತ ಬೆಟ್ಟದ ಮಧ್ಯದಿ ನಿಂತರೆ ನಿನ್ನ ಬಿಡುವರ್ಯಾರಯ್ಯ ಶೀಘ್ರದಿ ಮನಸಿನಿಷ್ಟ ಕೊಡು ದಯವಿಟ್ಟು ಮುದದಿ ಕರುಣಾವುದಧಿ ಕಡುಲೋಭಿತನ ಬಿಡು ಮಹರಾಯ ಅಡಿಗಳಿಗೆರಗುವೆನು ಜಗದಯ್ಯ ಪೂರ್ವಾರ್ಜಿತ ಕರ್ಮ ವಡಂಬಡಿಸಿ ರಕ್ಷಿಸು ದಮ್ಮಯ್ಯ ಪಂಢರಿರಾಯ ಒಡೆಯ ಶ್ರೀ ಲಕ್ಷ್ಮೀನಾರಾಯಣ ನಡುನೀರೊಳು ಕೈಬಿಡುವೆಯ ನೀ ತೊಡಕೊಂಡ ಬಿರುದೇನಯ್ಯ ಈ ಕಡು ಕೃಪಣತನ ಸಾಕಯ್ಯ ಪೊಡವಿಯೊಳಗೆ ಪಡುತಿರುಪತಿಯೆಂಬ ದೃಢಕಾರ್ಕಳದೊಡೆಯ ಶ್ರೀನಿವಾಸನೆ3
--------------
ತುಪಾಕಿ ವೆಂಕಟರಮಣಾಚಾರ್ಯ
ಬಾಲಗೋಪಾಲ ಬಲುಜಾಣನೆ ಗೋಪಮ್ಮ ನೀಲ ಮೇಘಶ್ಯಾಮನೆ ಬಹುಶೂರನೇ ಜಾರನೇಚೋರನೇ ಪ ನಾರಿಯರೆಲ್ಲರು ನೀರ ತರುತಲಿರೆ ನೀರ ಕೊಡವನೆಲ್ಲ ಒಡೆದ ಗೋಪಮ್ಮ 1 ಸಣ್ಣ ಸಣ್ಣ ಹುಡುಗರ ಬಣ್ಣಿಸಿ ಕರೆತಂದು ಕಣ್ಣ ಬಿಡಿರೆನುತಲೆ ಸುಣ್ಣ ತೊಡೆದು ಪೋದ 2 ಅಂಗನೆಯರು ಪುಣ್ಯಗಂಗೆ ಮೀಯುತಲಿರೆ ರಂಗನಾಗ ದಿವ್ಯಾಂಗ ವಸ್ತುವ ನೊಯ್ದ ಗೋಪಮ್ಮ 3 ದಡದ ಮರವನೇರಿ ಉಡುವ ಸೀರೆಯನೆಲ್ಲ ಕೊಡದೆ ಕಾಡಿದ ಕೃಷ್ಣ ಮಾನ ಭಂಗವ ಮಾಡಿ 4 ತಾಳಲಾರೆವು ನಿಮ್ಮ ಮಗನ ಲೂಟಿಯ ನಾವು ಹೇಳೆ ಭೀಮನ ಕೋಣೆ ಲಕ್ಷ್ಮೀಲೋಲನಿಗೊಮ್ಮೆ ಗೋಪಮ್ಮ 5
--------------
ಕವಿ ಪರಮದೇವದಾಸರು
ಭಕ್ತಿ ಗೀತಾವಳಿ ಸರಸ್ವತಿ ಸ್ತುತಿಗಳು 1 ಜಯ ಜಯ ಜನನಿ ಜಗದುಜ್ಜೀವಿನಿ ಪ ಜಯ ಬ್ರಹ್ಮಾಣಿ ಅ.ಪ ಆವಳ ಕೃಪೆಯಿಂ ಜೀವಿಪೆಮೋ ಮ ತ್ತಾವಳ ವ್ಯಾಪನೆಯಿಂ ದೈವಿಕ ಗುಣಸಂಭಾವಿತರಪ್ಪೆವೋ ಭಾವಿಪೆವಾದೇವಿಯ ನಾವ್ 1 ಉಡುವುದು ತೊಡುವುದು ಕೊಡುವುದು ಹಿಡಿವುದದಾರಿಂದಂ ನುಡಿವೆಣ್ಣೆನಿಸಿದವಳಾವಳೋ ನಾವವ ಳೆಡಬಿಡದೆರೆವೋಂ 2 ತಾಯೆಮಗರಿವಂ ಕಾಯಕೆಬಲಮಂ ಮಾಯೆಯೆ ಬಿಡಿಸಿನ್ನು ಕಾಯಜಪಿತ ಶೇಷಾದ್ರೀಶನೆ ನೆನೆವಾಸನ್ಮತಿಯೆಂದೆಂದುಂ 3
--------------
ನಂಜನಗೂಡು ತಿರುಮಲಾಂಬಾ
ಮರಳುತನವು ಬಂದು ಎನ್ನ ಕೊರಳ ಕೊಯ್ವುದು ದುರುಳನಾಗಿ ಇರುಳು ಹಗಲು ಒರಲುತಿಪ್ಪುದು ಪ ಮಾರಿಯನ್ನು ಮನೆಗೆ ತಂದು ತೋರಿಯಿಡುವುದು ಚೋರರನ್ನು ತಂದು ತನಗೆ ಸೇರಿ ಕೊಡುವುದು ದೂರುಬಪ್ಪ ದಾರಿಯನ್ನು ಸೇರಿ ನಡೆವುದು ಸಾರಿ ಪರನಾರಿಯನ್ನು ಸೂರೆಗೊಂಬುದು 1 ಹೆಂಡತಿಯ ಸುಲಿದು ತನ್ನ ಮಿಂಡಿಗಿಡುವುದು ಕಂಡು ಕಂಡು ಹರುಷ ತಾಳಿ ಕೊಂಡುಯಿರುವುದು ಭಂಡತನದಿ ಕೊಂದು ದೂರ ಕೊಂಡು ಪೋಪುದು ಉಂಡು ಉಡುವ ಹರುಷ ಸರಿಯ ಮಿಂಡಿಗಪ್ಪುದು 2 ಸೂಳೆಯನ್ನು ಕಂಡು ಹರುಷ ತಾಳಿಯಿರುವುದು ವೇಳೆಗವಳು ಬಾರದಿರಲು ಚೀ[ರಿ]1ಯಳುವುದು ಹಾಳು ಬದುಕಿನೊಳಗೆ ಬಹಳ ಚಾಳು ತೋರ್ಪುದು ಖೂಳರನ್ನು ಕರೆದು ಅನ್ನ ಪಾಲನೆರೆವುದು 3 ಇಲಿಯು ಹೆಚ್ಚಿತೆಂದು ಮನೆಗೆ ಉರಿಯನಿಡುವುದು ಚಳಿಯು ಹೋಯಿತೆಂದು ಮನದಿ ನಲಿವುತಿರುವುದು ಬಿಳಿದು ಬೂದಿಯನ್ನು ಕೊಂಡು ಹೊಳೆಗೆ ಬಿಡುವುದು ಸ್ಥಳವ ಕೆಡಿಸಿ ಕುಲವನೆಲ್ಲ ಬಳಕೆ ತೀರ್ಪುದು 4 ಹೆತ್ತ ಮಗನ ತೊರೆದು ತಾನು ದತ್ತ ತಪ್ಪುದು ಸತ್ತ ಎಮ್ಮೆ ಹಾಲು ಹತ್ತು ಸೇರಿಗಳವುದು ಕತ್ತಿಯನ್ನು ಬಿಸುಟು ಒರೆಯ ಹತ್ತಿರಿಡುವುದು ಶತ್ರುವಾಗ ಬಂದ ತನ್ನ ಒತ್ತಿ ನಿಲುವುದು 5 ಗಾಳವಿಲ್ಲದೆ ಮೀನುಗಳ ಮೇಲೆ ತೆಗೆವುದು ಕೋಲುಯಿಲ್ಲದ ಕೊಲೆಗಳೆನ್ನ ಮೇಲೆ ಬೀಳ್ವುದು ಸಾಲವನ್ನು ಕೊಟ್ಟವರು ಸಾಯಲೆಂಬುದು ಕಾಲನೊಳು ಕೈಯ ಕಟ್ಟಿ ಶೂಲೆ ತಪ್ಪುದು 6 ಸರ್ವತಂತ್ರವೆಲ್ಲ ಹರಿಯ ಹತ್ತಿರಿಡುವುದು ಗರ್ವವನ್ನು ತೋರಲವನ ಸುತ್ತಿ ಬರುವುದು ಇರುವೆಯಂತೆ ಮೈಯನೆಲ್ಲ ಕುತ್ತಿ ತರಿವುದು ತೋರ ವರಾಹತಿಮ್ಮಪ್ಪನ ಎತ್ತಿ ನೆನೆವುದು 7
--------------
ವರಹತಿಮ್ಮಪ್ಪ
ಮಾಧವ ಮುಕುಂದ ಹರಿ ದನುಜಾರಿದಯಾವಾರಿಧಿ ಅನುದಿನದಿ ನಿಮ್ಮ ಚರಣವ ನಂಬಿದವರಿಗಿಂಥ ಬಿನುಗುದುರಿತಗಳು ಬಾಧಿಸುವುದ್ಯಾತಕೊ ಸ್ವಾಮಿ ಪ. ತರುಣಿಕುಲರಾಮನೊಳು ತೊಡಕು ಬೇಡವು ಸೀತೆ(ಯ) ಹರಿಗೆ ಒಪ್ಪಿಸು ಎನಲು ಊರ ಹೊರಗೋಡಿಸಿರಲು ಭರದಿಂದ ಬಂದು ಮರೆಹೊಗಲು ವಿಭೀಷಣನು ಚರಣಕಮಲಕೆ ಎರಗಲು ಕರವ ಪಿಡಿದೆತ್ತಿ ಅಭಯವನಿತ್ತು ಲಂಕೆಯ ಸ್ಥಿರಪಟ್ಟಕಟ್ಟಿದ ಕರುಣಾಳುಗಳ ದೇವ 1 ಒದೆದೆಳೆದು ಪತಿಗಳೈವರ ಮುಂದೆ ದ್ರೌಪದಿಯ ನಡುಸಭೆಯೊಳು ನಿಲ್ಲಿಸಲು ಉಡುವ ಸೀರೆಯ ಸೆಳೆವೆನೆಂದು ದುಶ್ಯಾಸ(ನ) ಕೈ ದುಡುಕುತಿರಲಾಕ್ಷಣದಲಿ ಕೆಡುವದಭಿಮಾನ ಶ್ರೀ ಹರಿ ನೀನೆ ಕಾಯೊ ಎನ್ನೆಂ- ದೊದರುತಿರಲು ನುಡಿಯಲಾಲಿಸಿ ನಾನಾಪರಿಯ ವಸ್ತ್ರವನಿತ್ತು ಉಡಿಸಿ ಅಭಿಮಾನ ರಕ್ಷಿಸಿದಂಥ ಶ್ರೀಕಾಂತ 2 ಉತ್ತಾನಪಾದರಾಜ (ನ)ಣುಗ ತಮ್ಮಯ್ಯನ ಮತ್ತ ತೊಡೆಯೇರಿಇರಲು ನಿತ್ಯದಲಿ ಸುರುಚಿ ಸುನೀತಿ ಕುಮಾರಕನ ಎತ್ತಿ ಕಡೆಯಕ್ಕೆ ನೂಕಲು ನಿತ್ತ ವಿಚಾರವಿಲ್ಲದಂತೆ ಸತ್ಯಮೂರುತಿ ಹೆಳವನಕಟ್ಟೆರಂಗಯ್ಯ ಭಕ್ತವತ್ಸಲನೆಂಬೊ ಬಿರುದು ನಿನ್ನದು ಸ್ವಾಮಿ 3
--------------
ಹೆಳವನಕಟ್ಟೆ ಗಿರಿಯಮ್ಮ
ಯೋಗಿ ಯೋಗಿ ಪ ಉಡುವರ ಕಂಡು ಉಡುವನು ತಾನುತೊಡುವರ ಕಂಡು ತೊಡುವನು ತಾನುಕೊಡುವರ ಕಂಡು ಕೊಡುವನು ತಾನಾಗಿ 1 ನಡೆವರ ಕಂಡು ನಡೆವನು ತಾನುಹಿಡಿವರ ಕಂಡು ಹಿಡಿವನು ತಾನುಬಿಡುವರ ಕಂಡು ಬಿಡುವನು ತಾನು 2 ಪೇಳ್ವರ ಕಂಡು ಪೇಳ್ವನು ತಾನುಕೇಳ್ವರ ಕಂಡು ಕೇಳ್ವನು ತಾನುತಿಳಿವರ ಕಂಡು ತಿಳಿವನು ತಾನಾಗಿ3 ಆಡುವರ ಕಂಡು ಆಡುವನು ತಾನುಕಾಡುವರ ಕಂಡು ಕಾಡುವನು ತಾನುಓಡುವರ ಕಂಡು ಓಡುವನು ತಾನಾಗಿ 4 ಹಿರಿಯರ ಕಂಡು ಹಿರಿಯನೆ ತಾನಾಗಿಕಿರಿಯರ ಕಂಡು ಕಿರಿಯನೆ ತಾನಾಗಿಗುರು ಚಿದಾನಂದನೆ ತಾನಾಗಿ 5
--------------
ಚಿದಾನಂದ ಅವಧೂತರು
ರುದ್ರದೇವರು ಪರಿ ವೈರಾಗ್ಯವು ವೀರ ವೈಷ್ಣವ ಭಕ್ತಾಗ್ರಣಿಯೆ ಪ ಮಾರಹರನೆ ಮನ್ಮಥನ ವೈರಿಯೆ ಮನ- ಸಾರ ಶ್ರೀರಾಮ ನಾಮವ ಜಪಿಸುವದಿದು ಅ,ಪ ಮುತ್ತು ಮಾಣಿಕ್ಯದ ಕಿರೀಟವು ಧರಿಸದೆ ನೆತ್ತಿಲಿ ಕೆಂಜೆಡೆ ಸುತ್ತಿಹುದು ಹಸ್ತದಿ ಶಂಖು ಚಕ್ರಗದೆ ಪದುಮವು ಬಿಟ್ಟು ಉತ್ತಮ ಡಮರು ತ್ರಿಶೂಲ ಪಿಡಿವುದಿದು 1 ನೊಸಲಲಿ ಕಸ್ತೂರಿ ತಿಲಕವನಿಡದಲೆ ಭಸುಮವ ಲೇಪಿಸುವುದು ತರವೆ ಕುಸುಮಲೋಚನೆ ಪ್ರಿಯ ಸಖನಾಗಿರುತಿರೆ ಎಸೆವ ಕಪಾಲ ಪಿಡಿದು ಬೇಡುವದಿದು 2 ದುಂಡು ಮುತ್ತಿನ ಹಾರ ಪದಕಗಳಿರುತಿರೆ ರುಂಡಮಾಲೆಯ ಕೊರಳೊಳು ತರವೆ ತಂಡ ತಂಡ ಪರಮಾನ್ನ ಭಕ್ಷಗಳಿರೆ ಉಂಡು ತೇಗದೇ ವಿಷಪಾನ ಮಾಡುವದಿದು3 ಭರ್ಜರಿ ಪೀತಾಂಬರ ಉಡುವುದು ಬಿಟ್ಟು ಕರಿಯ ಚರ್ಮನುಡುವುದು ತರವೆ ಪರಿ ರತ್ನಾಭರಣಗಳಿರುತಿರೆ ಉರಗಗಳಿಂದಲಂಕೃತನಾಗಿರುವದು 4 ಭೃತ್ಯರು ಸೇವೆಗೆ ಬೇಕಾದವರಿರೆ ಮತ್ತೆ ಪಿಶಾಚ ಗಣಗಳೇತಕೆ ಹಸ್ತಿ ತುರಗ ಪಲ್ಲಕ್ಕಿ ಪುಷ್ಪಕವಿರೆ ಎತ್ತನೇರಿ ಚರಿಸುವುದುಚಿತವೆ ಶಂಭೊ 5 ಸಿರದಲಿ ಗಂಗೆಯು ಸ್ಥಿರವಾಗಿರುತಿರೆ ಪರ್ವತರಾಜಕುವರಿಯೇತಕೆ ಅರಮನೆ ವಾಸಕೆ ಯೋಗ್ಯವಾಗಿರುತಿರೆ ಗಿರಿ ಕೈಲಾಸ ಪರ್ವತದಿ ವಾಸಿಸುವದು 6 ಭಕ್ತರು ಭಕುತಿಲಿ ಪಾಡಿ ಕೊಂಡಾಡಲು ನೃತ್ಯವ ಮಾಡುತ ಹರುಷದಲಿ ಕರ್ತೃ ಶ್ರೀ ಕಮಲನಾಭ ವಿಠ್ಠಲನೆಂದು ಪತ್ನಿಗೆ ಉಪದೇಶ ಮಾಡುವದಿದು 7
--------------
ನಿಡಗುರುಕಿ ಜೀವೂಬಾಯಿ
ಶ್ರೀಧರಾಕರ ಕಂಜ ಸೇವಿತ ಪಾದ ಪದ್ಮಜ ಪದದ ಪುರು ಕರು- ಣೋದಧಿಯೆ ಲಾಲಿಪುದು ಪಾಮರನೆಂಬ ಬಿನ್ನಪವ ಸೋದರ ಸ್ಥಿತ ಸಕಲ ಬ್ರಹ್ಮಾಂ- ಪತಿ ನೀನರಿವಿಯಾದರು ಮಾಧವನೆ ಮನದಿರವ ಪೇಳ್ವೆನು ಮನುಜಭಾವದಲಿ 1 ಸುಕೃತ ಫಲವೋ ದೋಷದೂರನೆ ನಿನ್ನ ಪದವನು ಮೀಸಲಳಿಯದೆ ಸೇವೆ ಮಾಳ್ವದು ಲೇಸುಲೇಸೆಂದು ದಾಸಕೂಟದಿ ಸೇರಿ ಮನೆಯಲಿ ವಾಸವಾಗಿರಲಿದರ ಮಧ್ಯಮ ರಾಶೆ ಬಲೆಯಲಿ ಸಿಲುಕಿದೆನು ಕರುಣಾ ಸಮುದ್ರಹರಿ 2 ತನ್ನಿಕೃಷ್ಟ ಮನೋವಿಕಾರಗ- ಳಿನ್ನು ಬಿಡದಲೆ ಪೀಡಿಸುವ ಪರಿ ಯನ್ನು ಪರಮ ಕೃಪಾಳು ನೀನೆಂದೊರವೆನಖಿಳೇಶ ಮಾನ್ನವರ ಮಧ್ಯದಲಿ ಮಾನದಿ ಎನ್ನ ಕಾಪಾಡುವದು ಭಾರವೆ ತನ್ನ ಫಲಗಳ ತಾನೆ ಕೆಡಹುವದುಚಿತವೇ ತೆಗೆ 3 ಯುಕ್ತಿಯಲಿ ನಿನ್ನಂಥ ದೇವರ ರೆತ್ತಿ ವೈದಮೃತವನು ಸುಲಭದೊಳಿತ್ತೆ ದಿವಿಜರಿಗೆ ಔತ್ತರೇಯನ ಕಾಯ್ದ ದ್ರೌಣಿಯ ನೆತ್ತಿಯೊಳಗಿನ ರತ್ನ ಭೀಮನಿ ಗಿತ್ತ ಪರಿಯನು ಪಠಿಸಿ ತಿಳಿದೆನು ಪಾವನಾತ್ಮಕನೆ 4 ಬ್ರಹ್ಮತೇಜೋ ವೃದ್ಧಿ ಬಲಿಯೊಳು ಬ್ಯಾಡ ಸಂಗರ ನಮಗೆನುತ ನಿ- ಮ್ಮಮ್ಮನೊಳ್ ನುಡಿದಂದು ಕಶ್ಯಪನಿಂದಲವತರಿಸಿ ಬ್ರಹ್ಮಚಾರಿಯ ರೂಪದಿಂದೀ ಕ್ಷಮ್ಮೆಯನು ಸೆಳೆದಿಂದ್ರಗಿತ್ತಮ- ಹಾನ್ಮಹಿಮ ನಿನಗಾವದಘಟಿತ ನೀರಜಾರಮಣ5 ನಾರದರ ನುಡಿ ನಿಜವೆನುತ ಮೂ- ರಾರು ಭಕ್ತಿಯ ತಾಳ್ದ ಮನುವಿನೊ- ಳಾರುಭಟಿಸುತ ಕಾಶ್ಯಪನು ಮದವೇರಿ ನಿಂದಿರಲು ಯಾರು ತಿಳಿಯದ ತೆರದಿ ಕಂಭದಿ ಮೃಗ ರೂಪವನು ಹೆ- ಮ್ಮಾರಿ ದೈತ್ಯನ ತರಿದು ತ್ವತ್ಪದವಿತ್ತೆ ದಾಸನಿಗೆ 6 ಏನು ಶ್ರಮವಿಲ್ಲದಲೆ ಪಿಡಿದು ದ- ಶಾನನನ ತೊಟ್ಟಿಲಿಗೆ ಕಟ್ಟಿ ಪ್ರ- ವೀಣತೆಯ ತೋರಿಸಿದ ವಾಲಿಯ ಪಕ್ಷವನು ತ್ಯಜಿಸಿ ದೀನ ಬಾಂಧವನೆಂಬ ಬಿರುದನು ದಿಟವೆ ನಿಶಿತದ್ರಾಜ್ಯ ಪದವಿಯ ಭಾನುಜನಿಗೊಲಿದಿತ್ತ ಭಕ್ತಜನಾರ್ತಿ ಭಂಜನನೆ 7 ಶಬ್ದಗೋಚರವಾದ ಕಥೆಗಳು ಬದ್ಧವೆಂಬುದು ಪೂರ್ವದನುಭವ ಸಿದ್ಧವಾಗಿಹುದೆನಗೆ ಸಜ್ಜನಲಬ್ಧಪದ ಪದ್ಮ ಬುದ್ಧಿಹೀನತೆಯಿಂದ ನುಡಿದರು ಮಧ್ವವಲ್ಲಭ ನಿನ್ನ ದಾಸನ- ನುದ್ಧರಿಸು ನೀನಲ್ಲದೆನಗಿನ್ನಾರು ಗತಿ ಹರಿಯೆ8 ಒಡೆಯರೆಂಬರನೆಲ್ಯುಕಾಣದೆ ಉಡುವದುಂಬುದಕೇನು ದೊರೆಯದೆ ಗಿಡವ ನಿಲುಕದ ಬಳ್ಳಿಯಂದದಿ ಬಡುವ ಕಷ್ಟವನು ತಡೆಯಲಾರದೆ ತಳಮಳಿಸುತಿರೆ ಪಿಡಿದು ಕರವನು ಕಾಯ್ದೆಯೆನ್ನನು ನುಡಿವದೇನಖಿಳಾಂಡ ನಾಯಕ ನಿನ್ನ ಮಹಿಮೆಯನು 9 ಮಾರಿಯಂದದಿ ಮಧ್ಯದೊಳಗೊ- ಬ್ಯಾರುವೇನೆಂಬಧಮ ಹೂಣನು ತೀರಿಸುವೆನೆಂದೆನ್ನೊಳಿಲ್ಲದ ದೂರ ಸಂಗ್ರಹಿಸಿ ಗಾರಗೊಳಿಸುವದರಿತು ಕಕ್ಷವ ಹಾರಿಸುತ ಸುರವಂದ್ಯ ಮೂರ್ತಿಯ ತೋರಿ ತಂದಿಲ್ಲಿರಿಸಿ ಪೊರೆದವನ್ಯಾರು ಪೇಳ್ದೊರೆಯೆ 10 ಶ್ರೀಶ ನಿನ್ನ ಪದಾಬ್ಜ ಪೊಗಳುವ ದಾಸ ಕೂಟದಿ ಸೇರಿ ಸೇವೆಯ ಬ್ಯಾಸರದೆ ನಡೆಸುತಿರೆ ಮತ್ತೊಬ್ಬಾಸುರನ ತೆರದಿ ದ್ವೇಷದಿಂದಿರೆ ದೂರ ಓಡಿಸಿ ದುರಿತ ಭಯಗಳ ಪರಿಹರಿಸಿದ ಮ- ದೀಶ ನೀನೆಂದನವರತ ನಂಬಿರುವೆ ಶ್ರೀಪತಿಯ 11 ಇಷ್ಟು ಪರಿಯಿಂದೆನ್ನ ರಕ್ಷಿಸು- ತಿಷ್ಟ ಫಲಗಳನೀವ ವೆಂಕಟ ಬೆಟ್ಟದೊಡೆಯನೆ ಬೇಡಿಕೊಂಬುವೆ ಒಂದು ಕೃತ್ಯವನು ಮಾನವ ನುಡಿಯಕಾಡನು ಸುಟ್ಟು ಸೂರೆಯಗೈದು ನಾ ಮನ ಸಿಟ್ಟ ತೆರದಲಿ ತೋರು ಚಿತ್ತವ ಸೃಷ್ಟಿಕರ ಶ್ರೀಶ 12
--------------
ತುಪಾಕಿ ವೆಂಕಟರಮಣಾಚಾರ್ಯ
ಸಕಲವೆಲ್ಲವು ಹರಿಸೇವೆ ಎನ್ನಿ ಯಕುತಿವಂತರು ಹರಿಭಕುತಿ ಯೆನ್ನಿ ಧ್ರುವ ಹುಟ್ಟಿ ಬಂದಿಹ್ಯದೆ ವಿಠ್ಠಲನ ಸುಸೇವೆಗೆನ್ನಿ ಸೃಷ್ಟಿಯೊಳಿಹ್ಯದೆ ಶ್ರೀ ವಿಷ್ಣು ಸಹವಾಸವೆನ್ನಿ 1 ಬದುಕಿ ಬಾಳುದೇ ಇದು ಶ್ರೀಧರ ಉದ್ದೇಶವೆನ್ನಿ ಸಾಧನ ಸಂಪತ್ತು ಶ್ರೀ ಮಾಧವನದು ಎನ್ನಿ 2 ಉಂಬುಂತಿಂಬುದೆಲ್ಲ ಅಂಬುಜಾಕ್ಷನ ನೈವೇದ್ಯವೆನ್ನಿ ಕೊಂಬುಕೊಡುವ ಹಂಬಲ ಶ್ರೀ ಹರಿಯದೆನ್ನಿ 3 ಇಡುವ ತೊಡುವದೆಲ್ಲ ಪೊಡವಿಧರನಾಭರಣವೆನ್ನಿ ಉಡುವ ಮುಡಿವದೆಲ್ಲ ಹರಿಯ ಸಡಗರವೆನ್ನಿ 4 ನುಡಿವ ನುಡಿಗಳೇ ಹರಿಬಿಡದೆ ಕೊಂಡಾಡುದೆನ್ನಿ ಬಡುವ ಹರುಷವೆಲ್ಲ ವಸ್ತುದೇ ಎನ್ನಿ 5 ನಡೆವ ನಡಿಗೆಯಿಲ್ಲ ಹರಿಯ ಪ್ರದಕ್ಷಿಣಿ ಎನ್ನಿ ಎಡವಿ ಬೀಳುದು ಹರಿನಮವೆನ್ನಿ 6 ಏಳುವ ಕೂಡುವದೆಲ್ಲ ಹರಿಯ ಊಳಿಗವೆನ್ನಿ ಹೇಳಿ ಕೇಳುದೆಲ್ಲ ಹರಿಪುರಾಣವೆನ್ನಿ 7 ನೋಡುವ ನೋಟಗಳೆಲ್ಲ ಹರಿ ಸುಲಕ್ಷಣವೆನ್ನಿ ಮಾಡುವ ಮಾಟಗಳೆಲ್ಲ ಹರಿಯದೆನ್ನಿ 8 ಮಲಗಿ ನಿದ್ರೆಗೈವದೇ ಹರಿಯ ಕಾಲಿಗೆರಗುದೆನ್ನಿ ಬಲಕ ಎಡಕ ಹೊರಳುದೇ ಲೋಟಾಂಗಣ(?) ವೆನ್ನಿ 9 ವನಿತೇರ ಸಂಗವೇ ತಾ ಹರಿಯ ಲೀಲೆಯು ಎನ್ನಿ ತನುಮನವೆಲ್ಲಾ ಹರಿಸ್ಥಾನವೆ ಎನ್ನಿ 10 ಸತಿಸುತ ಮಿತ್ರರೆಲ್ಲ ಹರಿಸೇವೆ ದೂತರೆನ್ನಿ ಮತ್ತೆ ಬಂಧುಬಳಗೆಲ್ಲ ಹರಿಯದೆನ್ನಿ11 ಸುಖದು:ಖವೆಂಬುದೇ ಶ್ರೀಹರಿಯ ಸಂಕಲ್ಪವೆನ್ನಿ ನಕ್ಕು ನುಡುವುದೆಲ್ಲ ಹರಿ ಆಖರವೆನ್ನಿ 12 ಹೆಣ್ಣು ಹೊನ್ನಾರ್ಜಿತವೆಲ್ಲ ಹರಿಯ ಕಾಣಿಕೆ ಎನ್ನಿ ನಾನೀನೆಂಬುದೆಲ್ಲ ಹರಿಚೇತನವೆನ್ನಿ 13 ಸ್ವಾರ್ಥ ಹಿಡಿವದೆಲ್ಲ ಪಾರ್ಥನ ಸ್ವಾಮಿಗೆ ಎನ್ನಿ ಅರ್ತು ಮರ್ತು ನಡೆವ ಹರಿಕರ್ತೃತ್ವವೆನ್ನಿ 14 ಅಂತ್ರಬಾಹ್ಯವೆಲ್ಲ ಹರಿಗುರು ಮಾತೃಪಿತೃವೆನ್ನಿ ಗುರ್ತುವಾದದ್ದೆಲ್ಲ ತೀರ್ಥಕ್ಷೇತ್ರವೆನ್ನಿ 15 ಲಾಭಾಲಾಭವೆಲ್ಲ ಹರಿಪಾದಕರ್ಪಿತವೆನ್ನಿ ಶುಭಾ ಶುಭವೆಲ್ಲ ಹರಿಶೋಭೆಯು ಎನ್ನಿ 16 ಕನಸು ಮನಸುಗಳೆಲ್ಲ ಹರಿಯ ನೆನೆವ ಸೇವೆನ್ನಿ ಧೇನಿಸಿ ಬಯಸುದೇ ಹರಿಧ್ಯಾನವೆನ್ನಿ 17 ನಿತ್ಯಕರ್ಮವೆಲ್ಲ ಹರಿಪಾದಕ ಸಮರ್ಪಣವೆನ್ನಿ ಸತ್ಯಾಸತ್ಯವೆಲ್ಲ ಹರಿ ಅಗತ್ಯವೆನ್ನಿ 18 ಹೆಜ್ಜೆಗೊಮ್ಮೆ ಬೆಜ್ಜರ್ಹಿಡಿದು ರಾಜೀವನಯನನೆನ್ನಿ ಸಜ್ಜನರೊಡೆಯ ಗಜವರದ ಎನ್ನಿ 19 ಸೋಹ್ಯ ಸೂತ್ರವೆಲ್ಲ ಹರಿಯ ಮಹಾಮಹಿಮೆ ಎನ್ನಿ ಗುಹ್ಯಗೂಢವೆಲ್ಲ ಹರಿಯಗುರುತ ಎನ್ನಿ 20 ಇಹಪವೆಲ್ಲ ಹರಿಸೇವೆಗನುಕೂಲ ವೆನ್ನಿ ಸೋಹ್ಯ ಮಾಡುದೆಲ್ಲ ಹರಿಯ ದಯವೆನ್ನಿ 21 ಸಕಲ ಧರ್ಮಗಳೆಲ್ಲ ಹರಿಯ ಶಿಖಾಮಣಿಯೆನ್ನಿ ಪ್ರಕಟವಾಗಿ ದೋರುದೇ ಪ್ರತ್ಯಕ್ಷವೆನ್ನಿ 22 ನೇಮನಿತ್ಯ ಇದೇ ಮಹಿಪತಿಯ ಸ್ವಾಮಿಯದೆನ್ನಿ ಪ್ರೇಮದಿಂದ ಒಪ್ಪಿಸಿಕೊಂಬ ದಯಾಳುವೆನ್ನಿ 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತಿ | ಹರಿ ಸ್ತುತಿಯ ಮತಿಈಯೆ ಪಾರ್ವತಿಯೇ || (ಮನ ಕಲ್ಮಷವ ಕಳೆಯೆ) ಪ ಮೃಡ ಪ್ರಿಯೆಳೆ ಪಾಹಿ 1 ಸತಿ | ಅಂಬೆ ಶಚಿಪತಿಬಿಂಬೆ ಹರಿಯನು | ಕಾಂಬ ಸುಜ್ಞಾನ ||ಉಂಬ ಉಡುವದ | ಕೊಂಬ ಕೊಡುವದ ಬಿಂಬ ಕ್ರಿಯೆಗಳ | ಹಂಬಲವ ಕೊಡು 2 ಸರ್ವ ಮಂಗಳೆ | ದರ್ವಿ ಜೀವಗೆನಿರ್ವಿಕಾರನ | ದುರ್ವಿಭಾವ್ಯನನ ||ಸರ್ವೇಶ ಗುರು | ಗೋವಿಂದ ವಿಠಲನಸರ್ವಕಾಲದಿ | ಸ್ಮರಣೆ ಸುಖ ಕೊಡು 3
--------------
ಗುರುಗೋವಿಂದವಿಠಲರು