ಒಟ್ಟು 28 ಕಡೆಗಳಲ್ಲಿ , 17 ದಾಸರು , 27 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯದೂರನೆ ಎನ್ನ ಮಾಯ ಬಿಡಿಸಯ್ಯ ಮಾಯದಲಿ ಸಿಲ್ಕಿ ಬಲು ಬಳಲುವೆನಭವ ಪ ಮಾಯದಿಂ ಜನಿಸಿ ನಾ ಮಾಯದಿಂ ಬೆಳೆದಿರುವೆ ಮಾಯವನೆ ಉಟ್ಟು ನಾ ಮಾಯ ತೊಟ್ಟಿರುವೆ ಮಾಯವನೆ ಹಾಸಿ ನಾ ಮಾಯವನೆ ಹೊದ್ದಿರುವೆ ಮಾಯದಲಿ ಬಿದ್ದು ಬಲು ಒದ್ದಾಡುತಿರುವೆ 1 ಮಾಯಕ್ಕೆ ಸತಿಯೆಂದು ಮಾಯಕ್ಕೆ ಸುತರೆಂದು ಮಾಯಕ್ಕೆ ಬಂಧೆಂದು ಮಾಯದ್ಹಿಗ್ಗಿದೆನೋ ಮಾಯಸಂಸಾರದ ಮಾಯನರಿಯದೆ ನಾನು ಮಾಯ ಮೋಹಿತನಾಗಿ ಬಾಯ್ಬಿಡುವೆ ಸತತ 2 ಮಾಯವನು ಕಲ್ಪಿಸಿ ಮಾಯವನೆ ಕುಣಿಸಾಡಿ ಮಾಯದಾಟಾಡುವಿಯೊ ಮಾಯವನು ತುಂಬಿ ಮಾಯಮಹಿಮನೆ ನಿನ್ನ ಮಾಯ ಬಲ್ಲವರಾರು ಮಾಯದಿಂದುಳಿಸೆನ್ನ ಕಾಯೊ ಶ್ರೀರಾಮ 3
--------------
ರಾಮದಾಸರು
ಯತಿಗಳು ಇರುವರ್ಯತಿಗಳ್ಹನ್ನೆರಡು ಮಂದಿ ರಘುವ(ರ) ಅಕ್ಷೋಭ್ಯತೀರ್ಥರ ನಡುವೆ ಕುಳಿತಿದ್ದಂಥ ಟೀಕೆ ಬರೆದ ಜಯ ಮಹರಾಯರಿವರು ಪಾಲಿಸೆನ್ನನು ಜಯರಾಯ ಪ ಎತ್ತಿನ ಜನ್ಮದಿ ಬಂದು ಶ್ರೀಮದಾನಂದತೀರ್ಥರಲ್ಲಿದ್ದು ಶಿಷ್ಯತ್ವ ವಹಿಸಿಕೊಂಡು ಬಿಟ್ಟು ಹರಿದಿನ ಮೇವು ನೀರನೆ ಪುಸ್ತಕದ ಗಂಟ್ಹೊತ್ತು ತಿರುಗುತ ತತ್ವಜ್ಞಾನವ ತಿಳಿದು ದ್ವಾದಶ ಸ್ತೋತ್ರ ಹೇ ಳುತ ಪ್ರಕಟವಾದರು 1 ಗೋವುಸುತನ ಜನ್ಮ ನೀಗಿ ಮಂಗಳವೇಡಿ ಸಾಹುಕಾರನ ಸುತನಾಗಿ ತೇಜಿಯನೇರಿ ಮಾ(ಮಹಾ?) ನದಿ ಮಧ್ಯದಲಿ ಮಂಡಿಬಾಗಿ ನೀರನು ಕುಡಿಯ- ಲಾಕ್ಷಣ ನೋಡಿ ಕರೆತರಲವರ ಗುರುಗಳ ಪಾದಕÀ್ವಂದನೆ ಮಾಡಿ ನಿಂತರು 2 ಅಕ್ಷೋಭ್ಯತೀರ್ಥರು ಆ ಮಹಿಮರ ನೋಡಿ ಕೊಟ್ಟು ಕಾಯ್ಕರದಲಿ ಜುಟ್ಟು ಜನಿವಾರವನು ಕಿತ್ತೆ ಕಾವಿಶಾಟಿಗಳನು ಉಟ್ಟು ದಂಡ ಕಾಷ್ಠವ್ಹಿಡಿದು ಶ್ರೇಷ್ಠಯತಿ ಆಶ್ರಮದಿ ಕುಳಿತಿರೆ ಹೆತ್ತವರು ಹುಡುಕುತ್ತ ಬಂದರು 3 ಕಂಡಕಂಡಂತೆ ಮಾತುಗಳಾಡಿ ಗುರುಗಳಿಗೆ ಧೋಂಡು ರಘುನಾಥನ ಕರಕೊಂಡು ಹಿಂದಕೆ ಹೋಗಿ ಹೆಂಡತಿ ಸಹಿತೆರೆದು ಪ್ರಸ್ತ ಮಂಡಿಗಿ ಮೃಷ್ಟಾನ್ನ ಉಣಿಸಿ ಚೆಂದದ್ವಸ್ತ್ರಾಭರಣ ಕೊಟ್ಟುರುಟಣೆಯ ಮಾಡಿಸ್ಯಾರತಿಯ ಬೆಳಗೋರು 4 ಸುಪ್ಪತ್ತಿಗೆಯು ಮಂಚ ಕುತ್ತಣಿ ಹಾಸಿಕೆಯಲ್ಲಿ ಇಟ್ಟು ತಾಂಬೂಲ ಬು- ಕ್ಕಿ ್ಹಟ್ಟು ಪರಿಮಳ ಗಂಧ ಸಕ್ಕರೆ ಕ್ಷೀರಗಳು ಲಡ್ಡಿಗೆ ಅಚ್ಚಮಲ್ಲಿಗೆ ಮಾಲೆ ಫಲಗಳು ರತ್ನ ಜ್ಯೋತಿ ಪ್ರಕಾಶದೊಳಗುತ್ತಮರು ಕುಳಿತಿರಲರ್ಥಿಯಿಂದಲಿ 5 ಮಡದಿ ಮಂಚಕೆ ಬಂದ ಸಡಗರವನು ನೋಡಿ ಹೆಡೆಯ ತೆಗೆದು ಕಣ್ಣು ಬಿಡುತ ವಿಷನಾಲಿಗೆಯ ಚಾಚುತಾರ್ಭಟಿಸಿ ಬರುತಿರಲ- ಸಾಧ್ಯಸರ್ಪವು ಕಡಿವುದೆನುತೆದೆ ಒಡೆದು ಕೂಗಲು ಹಡೆದವರು ಬಾಯ್ಬಿಡುತ ಬಂದರು 6 ಹಾವಾಗ್ಹರಿದು ಹುತ್ತವ ಸೇರಿಕೊಂಬುವೋದೀಗ ನಾವು ಮಾಡಿದಪರಾಧ ಕ್ಷಮಿಸಬೇಕೆನುತಲಿ ಬೇಡಿಕೊಂಡಾಕ್ಷಣದಿ ಮಗನ ನೋಡಿ ಕರೆತಂದಾಗ ಅಕ್ಷೋಭ್ಯರಾಯರಂಘ್ರಿಚರಣಕೊಪ್ಪಿಸಿ ನಾವು ಧನ್ಯರಾದೆವೆಂದರು 7 ಅತಿ ಬ್ಯಾಗದಿಂದವರಿಗ್ಯತಿ ಆಶ್ರಮವಕೊಟ್ಟು ದೇ- ವತಾ ಪೂಜೆಗಧಿಕಾರ ಮಾಡಲು ಗುರುಗಳು ಪಾಂಡಿತ್ಯದಿ (ಇ)ವರಿಗೆ ಪ್ರತಿಯು ಇಲ್ಲ- ವೆಂದೆನಿಸಿ ಮೆರೆವರು ಪತಿತರನೆ ಪಾವನವ ಮಾಡಿ ಸದ್ಗತಿಯ ಕೊಡುವ ಸಜ್ಜನ ಶಿರೋಮಣಿ 8 ಮಧ್ವರಾಯರು ಮಾಡಿದಂಥ ಗ್ರಂಥಗಳಿಗೆ ತಿದ್ದಿ ಟೀಕೆ ಟಿಪ್ಪಣಿ ಮಾಡಿ ಪದ್ಮನಾಭ ಭೀಮೇಶಕೃಷ್ಣಗೆ ಪರಮ ಭಕ್ತರೆನಿಸಿ ಮೆರೆವರು ವಿದ್ಯಾರಣ್ಯನ ಗರುವ ಮುರಿದು ಪ್ರಸಿದ್ಧರೆನಿಸೋರು ಸರುವ ಲೋಕದಿ 9
--------------
ಹರಪನಹಳ್ಳಿಭೀಮವ್ವ
ಲಾಲಿ ರಂಗನ ರಾಣಿ ಪರಮಕಲ್ಯಾಣಿ ಲಾಲಿ ಕೀರವಾಣಿ ಪಂಕಜಪಾಣಿ ಲಾಲಿ ಪ. ಕ್ಷೀರಸಾಗರದಲಿ ಜನಿಸಿ ತಾ ಬಂದು ವಾರಿಜಾಕ್ಷನ ವಕ್ಷಸ್ಥಳದಿ ತಾ ನಿಂದು ಘೋರ ಪಾತಕಿಗಳನು ಪೊರೆವೆನೆಂತೆಂದು ಶ್ರೀರಂಗಕ್ಷೇತ್ರದಲಿ ಬಂದು ತಾ ನಿಂದು 1 ಶುದ್ಧ ಪಾಡ್ಯ ತುಲಾ ಕಾರ್ತೀಕದಲಿ ಮುದ್ದು ಶ್ರೀರಂಗನ ರಾಣಿ ಹರುಷದಲಿ ದಂತದ ಉಯ್ಯಾಲೆಮಂಟಪದಲ್ಲಿ ಕಂತುಪಿತನರಸಿಯಾಡಿದಳೆ ಉಯ್ಯಾಲೆ 2 ಕಸ್ತೂರಿಯನಿಟ್ಟು ಮುತ್ತಿನ ಮೂಗುಬಟ್ಟು ಹಾರಪದಕಗಳು ಪೀತಾಂಬ್ರವನೆ ಉಟ್ಟು ಕುಂದಣದ ಒಡ್ಯಾಣವನ್ನು ಅಳವಟ್ಟು ಇಂದಿರಾದೇವಿ ಆಡಿದಳೆ ಉಯ್ಯಾಲೆ 3 ರತ್ನದಾ ಕಿರೀಟವನ್ನು ತಾ ಧರಿಸಿ ಕಮಲ ಸರಗಳಳವಡಿಸಿ ಮುತ್ತು ಸುತ್ತಿದ ರತ್ನದಸುಲಿಯನು ಧರಿಸಿ ಅ ಚ್ಚುತನರಾಣಿ ಆಡಿದಳೆ ಉಯ್ಯಾಲೆ 4 ದೋಸೆ ವಡೆ ನೈವೇದ್ಯ ಮೀಸಲನು ಸವಿದು ದಾಸರೆತ್ತಿದ ಪಿಷ್ಟದಾರತಿಯಲಿ ನಲಿದು ಲೇಸಾದ ಕರ್ಪೂರ ವೀಳ್ಯವನು ಸವಿದು ವಾಸುದೇವನರಾಣಿ ಆಡಿದಳೆ ಉಯ್ಯಾಲೆ 5 ವರರಂಗವಂಶದವರು ವರದಿಂದ ಪಾಡೆ ಕರುಣಾಕಟಾಕ್ಷದಿಂ ದೇವಿ ತಾ ನೋಡೆ ಪ್ರಜೆಗಳೆಲ್ಲರು ಬಂದು ವರಗಳನು ಬೇಡೆ ವಜ್ರದಭಯಹಸ್ತಗಳಿಂದ ವರಗಳನು ನೀಡೆ 6 ಕರ್ತ ಶ್ರೀ ಶ್ರೀನಿವಾಸ ರಂಗನಾರಾಣಿ ಸಪ್ತದಿನದುಯ್ಯಾಲೆಯನು ತಾ ರಚಿಸಿ ಭಕ್ತರಿಗೆ ತೀರ್ಥ ಪ್ರಸಾದಗಳನಿತ್ತು ಅರ್ಥಿಯಿಂ ತೆರಳಿದಳು ತನ್ನರಮನೆಗೆ 7
--------------
ಯದುಗಿರಿಯಮ್ಮ
ಶ್ವಾನ ಪ ಹೆಂಡತಿ ಉಟ್ಟು ತಿರುಗಾಡುವುದು ಹರಕು ಹರಕು ಚಿಂದಿಮಿಂಡಿತಿ ಉಟ್ಟು ಮೆರೆಯುವುದು ಮಿಸುನಿಯ ಮೇಲ್ಬಂದಿ 1 ಹೆಂಡತಿಯದು ತಾ ಕೊಳೆ ತುಂಬಿದ ಮಂಡೆಮಿಂಡತಿಯದು ಚೌರಿ ರಾಗಟೆ ಗೊಂಡೆ 2ಇದ್ದಲಿಯನು ಹಾಲೊಳ್ ತೊಳೆದರೆ ಶುಭ್ರವು ತಾನಹುದೆಶುದ್ಧ ಚಿದಾನಂದನ ಬೋಧೆಯಲಿ ದುರ್ಬುದ್ಧಿಗೆ ಬುದ್ಧಿಯು ಬಹುದೆ3
--------------
ಚಿದಾನಂದ ಅವಧೂತರು
(ಆ) ಇತರ ಹಾಡುಗಳು446ಕೃಪಣದಿ ಧನ್ಯರು ಎಂದಿಗೆ ಸುಖಿಕೃಪಣರವರುಪಕಾರಿಗಳೊ ನಿನ್ನ ವಾರಣರು ಕೃಷ್ಣಯ್ಯ ಪ.ಸಂಚಿತದ ಹೊನ್ನು ಬಂಡವಲ ಹೋಗಾಡಿಕಂಚು ಕಾಂಚನವಾಗೆ ನಿನ್ನವರುಕಿಂಚಿತ್ತು ವ್ರಯವಿಲ್ಲ ನಿಕ್ಷೇಪಾಕ್ಷಯಸಂಚಕಾರವ ಕೊಟ್ಟರೆಲ್ಲ ಮಂದಿರಕೆ 1ಅಂಗನೆತನೂಭವರಂಗದೆ ಮುಂಗೂಡೆಹಿಂಗಿ ನಿರ್ವಾಣದಿ ನಿನ್ನವರುಜಂಗುಳಿ ಧನಧಾನ್ಯ ಮಣಿಯಂತೆ ಬಚ್ಚಿಟ್ಟುಸಂಗಾತಿಯವರು ಸಂಸಾರ ಕಟ್ಟಿದರು 2ಮನ್ನಣೆನೀಗಿ ಪಾತ್ರೆ ಹುಟ್ಟು ಮಾರುತಸಣ್ಣರ ಕುಲ ಬಿಟ್ಟರು ನಿನ್ನವರುಬಣ್ಣ ಬಣ್ಣಗೆ ಉಟ್ಟು ಬಳಗ ಸಹಿತಭವವುಣ್ಣುತ ನಿನ್ನ ಮಗನ ಉದ್ಯಮದವರು 3ಹಿಂದೆ ಮುಂದಿಲ್ಲದೆ ಭಿನ್ನ ಭಿನ್ನಾತ್ಮರುನಿಂದ್ಯಾಸ್ತ್ತ್ರಕಳುಕುವ ನಿನ್ನವರುಬಂಧು ಬಲ್ಲಿದರು ಭಾಗ್ಯಾನ್ವಿತ ಚಪಲರುಎಂದೆಂದಂಜರು ಮದಮತ್ತ ಮಾನಿಸರು 4ಚೆನ್ನಿಗರಲ್ಲ ಚೆಲುವರಲ್ಲ ಜಗವ ಪಾವನ್ನ ಮಾಡುವರು ನಿನ್ನವರು ಪ್ರಸನ್ನ ವೆಂಕಟಪತಿ ನಿನ್ನ ಮದ್ದಾನೆಗಳುಕುನ್ನಿಗೂಗೆಗೆ ಕಡೆಗಾಹವೆ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
(ಒರಳುಕಲ್ಲು ಪೂಜೆಯ ಪದ)ಜಯ ಹನುಮಂತ ಭೀಮ | ಜಯ ಸರ್ವಜ್ಞಾಚಾರ್ಯ |ಜಯ ಭಾರತೀಶಾ ನಿರ್ದೋಷಾ || ನಿರ್ದೋಷ ಶ್ರೀ ವ್ಯಾಸಲಯನೆ ನಿನ್ನಂಘ್ರೀಗೆರಗೂವೆ | ಸುವ್ವಿ ಸುವ್ವೀ ಸುವ್ವಾಲಾಲೆ ಪಮುದದಿಂದಾ ಶ್ರೀ ಹರಿಯಾ | ಮದಿವಿ ಹಮ್ಮೀಕೊಂಡು |ಪದುಮಾಕ್ಷಿಯರೆಲ್ಲಾ ಒರಳೀಗೇ || ಒರಳಿಗಕ್ಕಿ ಹಾಕಿಪದ ಪಾಡಿದದನೂ ಬಣ್ಣೀಪೇ1ದೇವಕಿ ಯಶೋದೆ ಶ್ರೀ | ದೇವಭೂತೇ ಕೌಸಲ್ಯ ಸ- |ತ್ಯವತಿ ನೀವೆಂಥ ಧನ್ಯರೇ || ಧನ್ಯಾರೆ ಪಡದು ಶ್ರೀ |ದೇವೇಶಗೆ ಮೊಲಿಯಾ ಕೊಡುವೀರಿ 2ಅಕ್ಷರಳೆ ಪರಮಾತ್ಮನ | ವಕ್ಷ ಸ್ಥಳ ಮಂದಿರೆ |ಲಕ್ಷೂಮಿದೇವಿ ಜಯಶೀಲೆ || ಜಯಶೀಲೆ ಎಮ್ಮನು |ಪೇಕ್ಷಿಸಿದೆ ಕಾಯೇ ವರವೀಯೇ 3ಅಚ್ಛಿನ್ನ ಭಕ್ತರು ನೀವಚ್ಯುತಗೆ ಮುಕ್ತಿಯಾ |ತುಚ್ಛವೆಂಬುವಿರೆ ಸರಸ್ವತೀ || ಸರಸ್ವತಿಭಾರತಿ|ನಿಶ್ಚೈಸಿ ಒರಳೀಗೊದಗೀರೆ 4ಅಕ್ಕಿ ಥಳಿಸಲಿ ಬಾರೆ | ಅಕ್ಕ ಸೌಪರಣಿ ಶ್ರೀ |ರಕ್ಕಸಾ ವೈರೀ ಮದುವೀಗೇ || ಮದುವೀಗೆವಾರುಣಿತಕ್ಕೊಳ್ಳೆ ಕೈಲಿ ಒನಕೀಯಾ 5ಕೂಸಾಗಿ ಇದ್ದಾಗ ಆ ಶಿವನೆ ಬರಲೆಂದು |ಪೋಷಿಸಿದೆ ದೇಹಾ ತಪಸೀದೆ || ತಪಸೀದೆ ಪಾರ್ವತಿನೀ ಶೀಘ್ರ ಬಾರೇ ಒರಳೀಗೆ6ಇಂದ್ರ ಕಾಮನಸತಿಯಾರಿಂದು ಬನ್ನಿರಿ ನಮ್ಮ |ಮಂದರೋದ್ಧರನಾ ಮದಿವೀಗೇ || ಮದುವೀಗೆ ಒರಳಕ್ಕಿ |ಛಂದದಿಂದಲಿ ಪಾಡಿ ಥಳಿಸೀರೇ 7ಶತರೂಪಿ ನೀ ಪ್ರೀಯ ವ್ರತ ಮೊದಲಾದವರನ್ನ |ಪತಿಯಿಂದ ಪಡದೂ ಅವನೀಯಾ || ಅವನೀಯ ಪಾಲಿಸಿದಪತಿವ್ರತೀ ಒನಕೀ ಕೈಕೊಳ್ಳೇ8ದೇವರಂಗನಿಯರಿಗೆ ಸಾವಧಾನದಿ ಜ್ಞಾನ |ನೀ ವರದೇ ಎಂಥಾ ಗುಣವಂತೇ || ಗುಣವಂತೆ ಕರುಣಾಳೆಪ್ರಾವಹೀ ಪಿಡಿಯೇ ಒನಕೀಯಾ 9ಅರುವತ್ತು ಮಕ್ಕಳನಾ ಹರುಷದಿಂದಲಿ ಪಡದು |ವರನೋಡಿ ಕೊಟ್ಟೀ ಪ್ರಸೂತೀ || ಪ್ರಸೂತಿ ನೀನುಹಂದರದ ಮನಿಯೊಳೂ ಇರಬೇಕೂ 10ಗಂಗಾದೇವಿ ಯಂಥ ಇಂಗಿತಜÕಳೆ ನೀನು |ಹಿಂಗಿಸಿದೆ ವಸುಗಳಪವಾದಾ || ಅಪವಾದ ತ್ರಯ ಜಗ-ನ್ಮಂಗಳೇ ಪಿಡಿಯೇ ಒನಕೀಯಾ 11ಅನಿರುದ್ಧಾಶ್ವಿನಿ ಚಂದ್ರ ಇನಕಾಲಾ ಸುರಗುರು |ವನತಿಯರೆ ಉಳಿದಾ ನವಕೋಟೀ || ನವಕೋಟಿ ಸುರರಮಾನಿನಿಯೇರು ಬಂದೂ ಥಳಿಸೀರೇ 12ಅನ್ಯರನ ಪಾಡಿದರೆಬನ್ನಬಡಿಸುವ ಯಮನು |ವನ್ನಜಾಂಬಕನಾಶುಭನಾಮಾ || ಶುಭನಾಮ ಪಾಡಿದರೆಧನ್ಯರಿವರೆಂದೂ ಪೊಗಳೂವಾ13ಈ ವ್ಯಾಳ್ಯದಲಿ ನೋಡಿ ನಾವು ಥಳಿಸೀದಕ್ಕಿ |ಪಾಪನ್ನವಾಗೀ ತ್ವರದಿಂದಾ || ತ್ವರದಿಂದ ನಮ್ಮ ಶ್ರೀಗೋವಿಂದನ ಶಾಸೀಗೊದಗಲೀ 14ಹೆಚ್ಚಿನಂಬರ ಉಟ್ಟು ಅಚ್ಚಿನ ಕುಪ್ಪುಸ ತೊಟ್ಟು |ಪಚ್ಚಾದಿ ರತ್ನಾಭರಣಿಟ್ಟೂ || ಇಟ್ಟು ಸುಸ್ವರಗೈದುಅಚ್ಯುತನ ಪಾಡೋರಿನಿತೆಂದೂ 15ಲಕ್ಕೂಮಿ ಪತಿಯಾಗಿ ಬಹು ಮಕ್ಕಳನ ಪಡದಿದ್ದಿ |ಇಕ್ಕೊಳ್ಳಿ ಈಗಾ ಮದುವ್ಯಾಕೇ || ಯಾಕೊನತರಾನಂದಉಕ್ಕೀಸುವದಕೆ ರಚಿಸೀದ್ಯಾ16ಎಂಂದಾಗೆದೊ ಶ್ರೀ ಮುಕುಂದ ನಿನ್ನಾ ಮದುವಿ |ಹಿಂದಿನಾ ಬ್ರಹ್ಮರರಿತಿಲ್ಲಾ || ರರಿತಿಲ್ಲಅವಿಯೋಗಿಎಂದು ಕರಸುವಳು ಶೃತಿಯೋಳೂ 17ಶೀಲಿ ಸುಂದರಿ ನಿನ್ನ ಆಳಾಗಿ ಇರುವಳು |ಶ್ರೀ ಲಕ್ಷ್ಮೀ ನೀನು ಸ್ವರಮಣಾ || ಸ್ವರಮಣನಾಗೆವಳಮ್ಯಾಲೆ ಮದುಪ್ಯಾಕೊ ಭಗವಂತಾ18ಆರು ಮಹಿಷಿಯರು ಹದಿನಾರು ಸಾವಿರ ಮ್ಯಾಲೆ |ನೂರು ನಾರಿಯರೂ ಬಹುಕಾಲಾ || ಬಹುಕಾಲ ಬಯಸಿದ್ದುಪೂರೈಸಿ ಕೊಟ್ಯೋ ದಯಸಿಂಧು 19ವೇದನೆಂಥಾ ಪುತ್ರ ವೇದನಂತಾ ಬಲ್ಲ |ವೋದುವಾ ನಿರುತಾ ನಿನ ಪೌತ್ರಾ || ಪೌತ್ರೌ ನಿಮ್ಮಣ್ಣ ಸ್ವ-ರ್ಗಾಧಿಪತಿ ಎಂದೂ ಕರಸೂವ 20ಜಗವ ಪಾವನ ಮಾಳ್ಪ ಮಗಳೆಂಥ ಗುಣವಂತಿ |ಅಗಣಿತಜ್ಞಾನವಂತಾರೊ || ಜ್ಞಾನವಂತರೊ ನಿನ್ನಯುಗಳಸೊಸಿಯರೂ ಪರಮಾತ್ಮಾ21ಈ ವಸುಧಿಯೊಳಗೆಲ್ಲಾ ಆವಶುಭಕಾರ್ಯಕ್ಕೂ |ದೇವೇಶ ನಿನ್ನಾ ಸ್ಮರಿಸೋರೋ || ಸ್ಮರಿಸುವರೊ ನಿನ ಮದುವಿ-ಗಾಂವೀಗ ನಿನ್ನೇ ನೆನೆವೇವೊ 22ಅಕ್ಲೇಶಾ ಅಸಮಂಧಾ ಶುಕ್ಲಶೋಣಿತದೂರಾ |ಹಕ್ಲಾಸುರಾರೀ ದುರಿತಾರೀ || ದುರಿತಾರಿ ಅಸಮ ನಿ-ನ್ನೊಕ್ಲಾದವರಗಲೀ ಇರಲಾರೀ 23ವೇದವೆಂಬದು ಬಿಟ್ಟು ಭೂ ದಿವಿಜಾರಮರಾರು |ಮಾಧವನ ಗುಣವಾ ಪೊಗಳೂವಾ || ಪೊಗಳುವಾ ಸುಸ್ವರವಾಶೋಧಿಸೀ ಕೇಳೂತಿರುವಾರೂ 24ಕಾಮಾದಿಗಳ ಬಿಟ್ಟು ಸೋಮಪರ ರಾಣಿಯರು |ಸ್ವಾಮಿಯ ವಿವಾಹಾ ನಾಳೆಂದೂ || ನಾಳೆಂದರಿಷಿಣದಕ್ಕೀಹೇಮಾಧರಿವಾಣಕ್ಕಿರಿಸೋರೂ25ಜಯ ಮತ್ಸ್ಯಾ ಕೂರ್ಮಾಕಿಟಿಜಯ ನರಸಿಂಹಾ ಋಷಿಜ |ಜಯ ರಾಮಕೃಷ್ಣಾ ಶ್ರೀ ಬುದ್ಧಾ || ಶ್ರೀಬುದ್ಧಕಲ್ಕಿ ಜಯಜಯ ದತ್ತಾತ್ರಯಶುಭಕಾಯಾ 26ಆನಂದಾದಿಂದಾ ಸುರ ಮಾನಿನಿಯಾರಾಡೀದ |ಈ ನುಡಿಯಾ ಪಾಡೀದವರೀಗೆ || ಅವರಿಗಿಹಪರದಲ್ಲಿಪ್ರಾಣೇಶ ವಿಠಲಾ ಒಲಿವೋನೂ 27
--------------
ಪ್ರಾಣೇಶದಾಸರು
ತು0ಟನಿವನು ಕಾಣಮ್ಮ ಗೋಪಾಲನು|ಉಂಟೋ ಇಲ್ಲವೊ ಕೇಳಮ್ಮ ಪಎಂತೆರಡು ಸಾವಿರ ನಂತರ ಹೆಂಗಳತುಂಟು ಮಾಡಿ ರವಿಕೆಗಂಟು ಬಿಚ್ಚಿ ನಿಂತ ಅ.ಪಹಸಿರು ಪಟ್ಟೆಯನು ಉಟ್ಟು - ನಮ್ಮನೆ ಹೆಣ್ಣು|ಮೊಸರು ಕಡೆಯುತಿರಲು||ನಸುನಗುತಲಿ ಬಂದುಕುಸುಮಮಲ್ಲಿಗೆ ಮುಡಿಸಿ|ಬಸಿರುಮಾಡಿದನೆಂಥ ಹಸುಳನೆಗೋಪಿ||1ಮುದ್ದುನಾರಿಯರು ಕೂಡಿ-ನಮ್ಮನೆಯಲಿ|ಉದ್ದಿನ ವಡೆಯ ಮಾಡಲು||ಸದ್ದು ಮಾಡದೆ ಎಂದು ಎದ್ದೆದ್ದು ನೋಡುತ|ಇದ್ದ ವಡೆಯನೆಲ್ಲ ಕದ್ದು ಮೆದ್ದೋಡಿದ 2ಗೊಲ್ಲ ಬಾಲಕರ ಕೂಡಿ-ಮನೆಯಲಿದ್ದ |ಎಲ್ಲ ಬೆಣ್ಣೆಯ ಮೆಲ್ಲಲು ||ಗುಲ್ಲು ಮಾಡದೆ ನಾವು ಎಲ್ಲರು ಒಂದಾಗಿ |ತಳ್ಳ ಹೋದರೆ ನಮಗೆ ಬೆಲ್ಲವ ತೋರಿದ 3ಹೊತ್ತು ಮುಳುಗುವ ಸಮಯದಿ-ನಮ್ಮನೆ ಹೆಣ್ಣು |ಹತ್ತಿ ಹೊಸೆಯುತಿರಲು |ಮುತ್ತು ಹವಳ ಸರ ಕತ್ತಿಗೆ ಹಾಕಿ ಸೀರೆ |ಎತ್ತಿ ನೋಡಿದನು ತಾ ಬತ್ತಲೆ ನಿಂತ 4ತಿಲಕ ಕತ್ತುರಿಯನಿಟ್ಟು-ನಮ್ಮನೆ ಹೆಣ್ಣು |ಗಿಲುಕು ಮಂಚದಲಿರಲು ||ತಿಲಕ ತಿದ್ದುತ ಕುಚಕಲಶ ಪಿಡಿದು ತನ್ನ |ಕೆಲಸವ ತೀರಿಸಿದ ಪುರಂದರವಿಠಲ 5
--------------
ಪುರಂದರದಾಸರು
ನಂಬಿರೈ ಕರುಣಾಂಬುಧಿ ಕೋಮಲಕಂಬುಕಂಧರಹರಿಯಪ.ಯೋಗಿಮನಮುದ ರಾಗ ಮೂರುತಿಯ ದೊರೆಯಪಾಲಿತ ಕೌಂತೇಯಭಾಗವತತನಕಾಗಿ ತಾ ದಯವಗೈದ ಭರದಿಂದ ತೋರ್ವಯೋಗ ಮಾಯಾಧೀಶ ಸತ್ಸಕಲಾಗಮಾರ್ಚಿತಭೋಗಿಶಯನಸ-ರಾಗಕಪ್ಪನಿಯೋಗಿಸುವರೆ ಮಹಾಗಿರಿಯಿಂದಲಿ ಸಾಗಿ ಬಂದನ 1ಮಂದವಾರದಿ ಮಿಂದು ಮಡಿಗಳನು ಉಟ್ಟು ಕಾಣಿಕೆಯನಿಟ್ಟುಮಂದರಾಧರ ನೀನೆ ಗತಿಯೆಂದು ಬಂದು ಕೈಮುಗಿದುನಿಂದುವಂದಿಸುತ ಬಲ ಬಂದು ಚರಣದ್ವಂದ್ವಸೇವೆಯ ಕುಂದದರ್ಚಿಸಿದಂದುಗವ ಬಿಡಿಸೆಂದು ಪೇಳ್ದರೆ ಮಂದಹಾಸಾನಂದವೀವನು 2ಕಾಸುವೀಸದ ಬಡ್ಡಿ ಭಾಷೆಯನು ಬಿಡನು ನಮ್ಮೊಡೆಯನುದೇಶದೇಶದಿ ಕಷ್ಟ ತರಿಸುವನು ತಾನು ಭಕ್ತರ ಕಾಯುವನುಘಾಸಿಯಾಗದೆ ಧನಿಯ ಹಣವನುಸೂಸಿ ಕರುಣಾರಾಸ ರಾಜ್ಯದವಾಸವಾಗಿಹ ಒಕ್ಕಲಿಗರೆಂಬೀ ಸುಮನದಿಂ ಕೇಶವನ ಪದವ 3ಕಷ್ಟವಿಲ್ಲದೆ ಇಷ್ಟ ದೊರಕುವದು ನೆನೆದುಸುಖದಿಂ ಬಾಳುವದುದೃಷ್ಟಿಯಿಂದಲಿನೋಡುನಮ್ಮ ದೊರೆಯ ಹರಿಯಪರಿಯ ನೀನರಿಯಾಸಿಟ್ಟುಮಾಡುವ ಸ್ವಾಮಿನಿನ್ನೊಳಗಿಟ್ಟುಕೊಂಡರೆ ಕೆಟ್ಟು ಹೋಗುವಿಒಟ್ಟುಗೂಡಿಸಿ ತಟ್ಟನೆಲ್ಲ ಮುಂದಿಟ್ಟುಯಿರೆ ಕೈಗೊಟ್ಟು ಕಾಯುವ 4ಮಾನನಿಧಿ ಭಕ್ತರನು ಮನ್ನಿಸುವ ನಲಿವ ಕರುಣವ ಗೈವಭಾನುಕೋಟಿಪ್ರಕಾಶದಿಂದಿರುವ ಮೆರೆವ ಮಹಾನುಭಾವಏನನೆಂಬೆನು ಆದಿ ಶ್ರೀಲಕ್ಷ್ಮೀನಾರಾಯಣ ತಾನೆ ಕಾರ್ಕಳಸ್ಥಾನ ರಾಜಧಾನಿಯಲಿ ಮೆರೆವನನವರತದಿ ಶ್ರೀನಿವಾಸನ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಭೃಂಗಕುಂತಳೆ ಶ್ರೀರಂಗನಸತಿಸ-ರ್ವಾಂಗದಿ ಶೃಂಗಾರೆತುಂಗವಿಕ್ರಮೆತುರಂಗಗಮನೆಭವಭೃಂಗವು ನಿವಾರೆಪಚರಣದಂದುಗೆ ನಡುಪಟ್ಟಿಯಉಡಿಗೆಜ್ಜೆಕರದಲಿ ಕಂಕಣ ಕಡಗ ಬಳೆಕೊರಳೊಳು ಮುತ್ತು ರತ್ನದಿ ಶೋಭಿಪತರತರ ಪದಕದ ಸರಮಾಲೆ1ಬಾಲಚಂದ್ರನವೋಲು ದೇವಿ ಕ-ಪೋಲವು ಪೊಳೆಯುವುದುಲೋಲಾಡುವ ಗಿಳಿವಾಲೆಯು ಕರ್ಣಕೆ ವಿ-ಶಾಲದಿ ಶೋಭಿಪುದು2ಪಟ್ಟೆ ಪೀತಾಂಬರ ಉಟ್ಟು ದೇವಿನೆರಿ ಚೆಲ್ಲುತ ನಡೆತಂದೂಸೃಷ್ಟಿಯೊಳ್ ಸುಜನರ ಪಾಲಿಸಿ ಲಕ್ಷುಮೀಕ್ಷುಲ್ಲರ ಮುರಿದಂದುಅರಿಸಿನ ಕುಂಕುಮ ಚಂದ್ರ ಕಸ್ತೂರಿಯುನಯನದಿ ಕಾಡಿಗೆಯುಶಿರದಿ ಮುಂದಲೆ ಬೊಟ್ಟು ಜಡೆಗೊಂಡೆ ಪುಷ್ಪವುಚರಣದಿ ಮಿಂಚಿಕೆಯೂ3ಹಸ್ತದಿ ಪದ್ಮಾವು ಬೆರಳೊಳು ಉಂಗುರತಿತ್ತಿಗೆ ಮೂಗುತಿ ಮುಖರಗಳೂನಿತ್ಯವು ಸ್ಮರಿಸೆ ಗೋವಿಂದನ ದಾಸನಅರ್ಥಿಯೊಳ್ ದೇವಿಯ ಪೊರೆಯುವಳು4
--------------
ಗೋವಿಂದದಾಸ
ಶ್ರೀ ಮದುರೈ ಮೀನಾಕ್ಷಿ ಸ್ತೋತ್ರ81ಮೀನಲೋಚನೆ ಅಂಬಾ ದೀನಪಾಲಕೆನಿಂತಲ್ಲಿ ಶರಣೆಂದೆ ಎನ್ನ ಪೊರೆವಭಾರನಿನ್ನದೇ ಮಾತೆಪಕಣ್ಣು ಕಿವಿ ನಾಲ್ಕು ಕುದುರೆ ದೇಹವೆಂಬ ಹರಿಯರಥಕೆನಿನ್ನಧೀನ ಅಶ್ವಗತಿ ಸನ್ಮಾರ್ಗದಿ ನಡೆಸಿ ಕಾಯೆ 1ಕಂಡುಕೇಳಿನುಡಿವದೆಲ್ಲ ಉಂಡು ಉಟ್ಟು ಮಾಳ್ಪುದೆಲ್ಲಪುಂಡರೀಕನಯನ ಶ್ರೀಶ ರಥಿಕ ಪ್ರೀತಿ ಆಗೆ ಮಾಡೆ2ಮಂದಜಾಸನತಾತಪ್ರಸನ್ನ ಶ್ರೀನಿವಾಸನಿಗೆ ಪ್ರಿಯಇಂದುಧರÀ ಸತಿಯೇ ಶರಣು ಸ್ಕಂಧ ವಿಘ್ನರಾಜರ ಮಾತೆ 3
--------------
ಪ್ರಸನ್ನ ಶ್ರೀನಿವಾಸದಾಸರು
ಸಲಹು ವೆಂಕಟರಮಣ ದಯಾಂಬುಧಿಸಲಹು ವೆಂಕಟರಮಣ ಪ.ಮಸ್ತಕದೊಳೊಪ್ಪುವ ಮಾಣಿಕ ಮಕುಟದಕಸ್ತೂರಿನಾಮದ ಚೆಲುವವಿಸ್ತರ ಕದಪಿಲಿ ಹೊಳೆವಕುಂಡಲಪ್ರಶಸ್ತವದನಜಗಜೀವ1ಎಳೆನಗೆ ತಿಂಗಳ ಕಾಂತಿಲಿಹೃತ್ತಾಪಕಳೆವ ಕರುಣಿ ಸಿರಿಕಾಂತಗಳದೊಳು ವನಮಾಲೆವೈಜಯಂತಿಪದಕಗಳೊಲೆವ ಮಂಗಳಮೂರ್ತಿಮಂತ 2ಮುತ್ತಿನ ಸರ ಸರಪಳಿ ಭುಜಕೀರ್ತಿಯುಎತ್ತಿದ ಶಂಖಾರಿಪಾಣೆರತ್ತುನ ಮೇಲೊಡ್ಯಾಣ ಕಂಕಣ ಮುದ್ರೆಒತ್ತೆ ಅಭಯವರದನೆ 3ಉಟ್ಟು ಪೊಂದಟ್ಟಿ ಕಠಾರಿ ಕಟ್ಟಿರುವದುಷ್ಟರ ರಣಜಿತವೀರಇಟ್ಟ ವಜ್ರದ ಕಾಲಂದಿಗೆ ಪಾವುಗೆಮೆಟ್ಟಿದ ಸುರರಮಂದಾರ4ಅಗರುಚಂದನಕಪ್ಪುರ ಕೇಶರ ಸುರಭಿಗಳಿಗೆ ಅತಿಪ್ರಿಯ ಅಂಗಮಘಮಘಿಸುವ ಮಲ್ಲಿಗೆ ಸಂಪಿಗೆಯಮಾಲೆಗಳ ಪ್ರಸನ್ವೆಂಕಟ ರಂಗ 5
--------------
ಪ್ರಸನ್ನವೆಂಕಟದಾಸರು
ಸ್ಥಿರವಲ್ಲೀಕಾಯಸ್ಥಿರವಲ್ಲ ಹೀಗರಿವಿದ್ದು ಹರಿಪಾದ ಮರೆವರೆ ಪ್ರಾಣಿ ಪ.ಅಟ್ಟಡಿಗೆಎರವುಉಟ್ಟುಡುಗೆಎರವುಇಟ್ಟರೆ ಸಂತತಿಸಿರಿಎರವುಕಟ್ಟೊಡೆದು ಬೆಮರಿಡಿಸಿ ಜವನವರೊಯ್ಯೆಇಟ್ಟಿರುವ ಧಾನ್ಯ ಧನವೆಲ್ಲೊ ಪ್ರಾಣಿ 1ಕೃಪಣತೆಯೊಳಗಿನ ನಿಪುಣತೆ ಬಾರದುಸ್ವಪನ ಸುಖ ಭೋಗಕೆ ಬಾರದುವಿಪಿನದಹನ ಮೃಗದಂತಾಪ್ತರು ಬರರುನೃಪನಾರಾಧನೆ ಫಲವು ಸ್ಥಿರವೆಲೊ ಪ್ರಾಣಿ 2ಹರಿಕೊಟ್ಟಾಗಲೆ ಧರ್ಮ ದೊರಕಿಸಬೇಕುಸರಕಿದ್ದು ತಿರುಕಬುದ್ಧಿಯನು ಬಿಡುಅರಿವುಳ್ಳವರ ಕೂಡಿ ಕೋಟೆಜತನಮಾಡುಮರುಗಲಿ ಬೇಡ ಮುತ್ತಿಗೆ ಬಂತು ಪ್ರಾಣಿ 3ಹವಳ ಮುತ್ತಿನಂಥ ಅವಳಿ ಮಕ್ಕಳ ನಂಬಿಕುವಲಯೇಶನ ಪ್ರಿಯಕುಲೇಶನ ಪುರದಲವಲವಿಕೆಯಲಿ ನಿರಯವಾರ್ತೆ ಜರೆವರೆ ತನ್ನವಳೆ ತನಗೆ ಓಕರಿಸುವಳೊ ಪ್ರಾಣಿ 4ಫಣಿತಲ್ಪಗೊಪ್ಪಿಸಿ ಹಣ ತೃಣ ಮಾಡದಹೆಣ ತನ್ನ ತಾನೆ ಹೊಗಳಿಕೊಂಡರೆಎನಿತುಕಾಲಕೆ ಮೆಚ್ಚ ಪ್ರಸನ್ವೆಂಕಟಪತಿಘನತಪ್ಪ ಕಾಯೆ ತನ್ನವರನು ಪ್ರಾಣಿ5
--------------
ಪ್ರಸನ್ನವೆಂಕಟದಾಸರು