ಒಟ್ಟು 29 ಕಡೆಗಳಲ್ಲಿ , 11 ದಾಸರು , 25 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವರೋಗ ಹರವಾದೊಂದೌಷಧಿತ್ರೈಭುವನ ವಿಖ್ಯಾತವಾಗಿದೆ ಬುದ್ಧಿವಂತರಿಗೆ ಪ ಚತುರ ವೇದಶಾಸ್ತ್ರ ಮೇಣಷ್ಟಾದಶವಾದಸ್ಮøತಿತರ್ಕ ಪೌರಾಣದಡವಿಯಲ್ಲಿಮತಿವಂತ ಮುನಿಗಳಾರಿಸಿ ತಂದು ತಾವುಪ್ರತಿಗಂಡು ಲೋಕಕ್ಕೆ ಹಿತವಾಗಿ ತೋರುವ 1 ಅಡವಿಯೊಳರಸಿ ಅಗಿಯಲಿಲ್ಲ ತಂದುಇಡಿದು ಚೂರ್ಣವಮಾಡಿ ಒಣಗಿಸಲಿಲ್ಲಕುಡಿದು ಕಹಿಖಾರವೆಂದೆನಲಿಲ್ಲ ನೋಡೆಬಡವ ಬಲ್ಲಿದರೆಲ್ಲರಿಗೆ ಸಾಧ್ಯವಾಗಿಪ್ಪ 2 ಪಥ್ಯಪಾನದ ನೇಮಗಳಿಲ್ಲ ಹೋಗಿಸ್ತೋತ್ರ ಮಾಡಿ ವೈದ್ಯನ ಬೇಡಲಿಲ್ಲನಿತ್ಯಸೇವಿಸೆ ಆಲಸ್ಯಗಳಿಲ್ಲ ನೋಡೆಮತ್ಯಾರ ಮಾತ ನಡೆಸುವ ಬಗೆಯಿಲ್ಲ3 ರಸಪಾಷಾಣಾದಿ ಮೂಲಿಕೆಯನು ತಂದುಕುಶಲದಿ ಶೋಧಿಪ ಕೋಟಲೆಯಿಲ್ಲಮಿಸುಣಿ ವರ್ಣದ ಭಸ್ಮ ತೈಲಗಳೆಂತೆಂಬಫಸಣೆಯಿಲ್ಲದೆ ಗಾಂಧರ್ವರು ಸೇವಿಪ 4 ಒಮ್ಮೆ ಸೇವಿಸೆ ಜನ್ಮ ಜನ್ಮಂಗಳ ದು-ಷ್ಕರ್ಮ ಸವೆದು ಸಕಲಾನಂದವೀವಘಮ್ಮನೆ ಕೃಷ್ಣರಾಯನ ಪುರದಲಿ ಬಿಡದÉಮ್ಮ ರಕ್ಷಿಪ ಮುದ್ದುಕೃಷ್ಣ ಕೃಷ್ಣಯೆಂಬ 5
--------------
ವ್ಯಾಸರಾಯರು
ಯಾಕೆಲೊ ರಂಗ ನಿನಗಿಂತು ನಟನೆಯ ಮಾತು ಪ ಮಾಕಾಂತ ಕರೆಸಿದರೆ ಬಾರದಿಹ ಪೊಗರುಅ ತಸ್ಕರ ಬುದ್ಧಿ ಕಡೆಗೆ ಇರಿಸಿಬಾಲಕನ ವಂದರಿಸಿ ಬಹುಭಾಗ್ಯವಂತನೆನಿಸಿಎಲ್ಲರೊಳು ಸಲಿಗೆ ನಿಲಿಸಿದಳೊ ನಿಮ್ಮರಸಿ 1 ಕೆಸರ ಚೊಗೆಯಂ ಬಿಡಿಸಿ ಗುಂಜ ಸರವಂ ತೆಗೆಸಿಬಿಸರುಹ ಮಣಿಮಾಲೆ ಕಡೆಗೆ ಇಡಿಸಿಪೊಸ ಪೀತಾಂಬರ ಉಡಿಸಿ ನವರತ್ನವಂ ತೊಡಿಸಿವಸುಧೆಯೊಳು ಮಿಗಿಲಾಗಿ ನಿಲಿಸಿದಳೊ ನಮಿಸಿ 2 ಎನ್ನ ಮಾತನು ಕೇಳು ಮುನಿಸು ಕೃತ್ಯವ ಸೀಳುಇನ್ಯಾಕೆ ಯೋಚನೆ ಫಲವ ಪೇಳುಬಿನ್ನಹವನು ಕೇಳು ನೆರೆಗೂಡಿ ಸುಖಬಾಳುಚೆನ್ನ ಬಾಡದಾದಿಕೇಶವ ದಯಾಳು 3
--------------
ಕನಕದಾಸ
ಸಕಲಕ್ಕೆ ನೀನೆ ಸ್ವತಂತ್ರನಾಗಿರ್ದು ಅಖಿಲೇಶ ಎನ್ನ ಸ್ವತಂತ್ರನೆನಿಸಿ ಕೊಲ್ಲುವರೆ ಪ ನೀನೆ ನಡೆಸಲು ನಡೆವೆ ನೀನೆ ನುಡಿಸಲು ನುಡಿವೆ ಸೂತ್ರ ಬೊಂಬ್ಯಂತೆ ನಾನಾಪರಿಯಲಿ ಎನಗೆ ಹೀನ ಬವಣ್ಯಾತಕೊ ದೀನಜನ ಭಂಧುವೆ ನೀನೆ ನೀಖಿಲೇಶ 1 ಅಡವಿ ಮಹದಾರಣ್ಯ ಗಿಡ ಗುಡ್ಡ ಗಂಹ್ವರ ಕಡುಕ್ಷೇತ್ರ ಮೊದಲಾದ ಇಡಿ ಬ್ರಹ್ಮಾಂಡಗಳ ಬಿಡದೆ ಉದರದೊಳಿಟ್ಟು ಅಡಗಿ ಮತ್ತದರೊಳಗೆ ನಡೆಸುವಿಯೆಲೊ ಸೃಷ್ಟಿ ಕಡುಚಿತ್ರಮಹಿಮ 2 ನಿನ್ನ ಮಹಿಮಿದು ಎಲ್ಲ ಭಿನ್ನವಿದರೊಳೊಂದು ಪರಿ ಬನ್ನ ಬಡಿಸುವುದು ಇನ್ನಿದು ತರವಲ್ಲ ಪನ್ನಂಗಶಯನನೆ ಮನ್ನಿಸಿ ಪೊರೆ ದಯದಿ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು
ಸಾಧಿಸಿದೇ ನೋಡಿ ಪೂರ್ಣ ಆದಿ ತತ್ವದ ಸುಸ್ಥಾನ ಭೇದಿಸುವದನುದಿನ ಸದಾನಂದ ಗುರುಜ್ಞಾನ ಧ್ರುವ ಮಾತಿನಂತಲ್ಲವಿದು ಸ್ವಾತ್ಮಸುಖದ ಸಾಧನ ಶ್ರುತಿಗಗೋಚರ ನೋಡಿ ಪ್ರತ್ಯೇಕದನುಸಂಧಾನ ಅತಿಗುಹ್ಯಗೂಢವಿದು ಹಿತೋಪಾಯದ ಖೂನ ರತಿಗೊಟ್ಟುನೋಡಿ ಪ್ರತ್ಯಕ್ಷ ಇಹ್ಯ ನಿಧಾನ 1 ನಡಿನೋಟ ನೀಟಮಾಡಿ ಪಡಕೊಳ್ಳದೆ ಸ್ವಹಿತ ನುಡಿಆಟದೋರಬ್ಯಾಡಿ ಕೂಡಿ ಸುಜ್ಞಾನÀಸನ್ಮತ ಬಡಬ್ಯಾಡಿ ನಾನಾಶ್ರಮವಿಡಿಯದೆ ಸುಗಮ ತಾ ಇಡಿದು ತುಂಬೇದ ಸಾಂದ್ರ ನೋಡಿ ಅನಂದೋಭರಿತ 2 ಸಾಧನಕಿದೇ ಮುಖ್ಯ ಸಾಧಿಸಿದೆ ಗುರುದಯ ಇದಕಿಲ್ಲ್ಲಿನ್ನೊಂದಧಿಕ ಬುಧಜನರ ಉಪಾಯ ಅದರಿಂದೊಲುವ ತಾನು ಸದ್ಗುರು ಭಾನುಕೋಟ್ಯುದಯ ಸದ್ಗೈಸಿ ಮಹಿಪತಿಯ ಸದೋದಿತ ಉದಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾರಿ ಚೆಲ್ಯದ ನೋಡಿ ಹರಿರೂಪದ ಮಹಿಮ ಧ್ರುವ ತುಂಬಿ ತುಳುಕುತದೆ ಕುಂಭಿನಿಯೊಳು ಪೂರ್ಣ ಇಂಬುದೋರುತಲ್ಯದೇ ಡಿಂಬಿನೊಳಗೆ ತನ್ನ ಹಂಬಲಿಸಿ ನೋಡಿರ್ಯೋ ಗುಂಭ ಗುರುತವ 1 ಬಳೆದುಕೊಂಬುವಂತೆ ಹೊಳೆವುತದೆಲ್ಲ ಕಡಿಯ ಥಳಥಳಗುಡುತ ಸುಳುವು ತೋರುತಲ್ಯದೆ ಝಳಝಳಿಸುವ ಪ್ರಭೆ ಮಳೆಮಿಂಚುಗಳು 2 ಇಡಿದು ತುಂಬೇದ ನೋಡಿ ಅಡಿಗಡಿಗಾನಂದದಲಿ ಅಡಿಮೇಲು ತಿಳಿಯದೆ ಎಡಬಲದೊಳಾದ ಮೂಢ ಮಹಿಪತಿ ಪ್ರಾಣ ಬಿಡದೆ ಸಲಹುತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಳಿ ಮೊದಲಾದವರು ಭಾಳೆ ವಸ್ತಗಳಿಟ್ಟುವ್ಯಾಳಾಶಯನÀನ ಮಡದಿಯರು ಪ.ಬಂದು ಶ್ರೀ ಪ್ರದ್ಯುಮ್ನ ಗಂಧಹಚ್ಚಿ ಐವರಿಗೆಅಂದದಲಿಬುಕ್ಕಿಟ್ಟುಸೂರಾಡಿಮಂದಾರಮಲ್ಲಿಗೆ ತಂದು ಕೊರಳಿಗೆ ಹಾಕಿಆನಂದ ಬಟ್ಟನು ನೋಡಕೆಲದಿ1ಅಚ್ಯುತನ ಮಡದಿಯರುಹಚ್ಚಿಅರಿಷಿಣ ಕುಂಕುಮಮಚ್ಚನೇತ್ರಿಯರು ದ್ರೌಪತಿಗೆಅಚ್ಛಾದ ಸುಭದ್ರೆಗೆಹಚ್ಚಿಅರಿಷಿಣ ಕುಂಕುಮಅಚ್ಚ ಮಲ್ಲಿಗೆಯನ್ನೆ ಮುಡಿಸಿ 2ಶಂಬರಾರಿಪಿತನ ಗಂಭೀರ ತಂಗಿಯರಿಗೆತಾಂಬೂಲ ಅಡಿಕೆಯನೆ ಕೊಟ್ಟುಸಂಭ್ರಮದಿ ರಮಿ ಅರಸು ಅಂಬರಗಳ ಉಡಿಸಿಮೈತುಂಬ ವಸ್ತಗಳ ಇಡಿಸಿ 3
--------------
ಗಲಗಲಿಅವ್ವನವರು
ಜಯಮಂಗಳಂನಿತ್ಯಶುಭಮಂಗಳಂಪ.ಗುರುಭಕ್ತಿಯೆಂತೆಂಬ ಗಮಕದೋಲೆಯನಿಟ್ಟುಹರಿಧ್ಯಾನವೆಂಬ ಆಭರಣವಿಟ್ಟು ||ಪರತತ್ತ್ವವೆಂತೆಂಬ ಪಾರಿಜಾತವ ಮುಡಿದುಪರಮಾತ್ಮ ಹರಿಗೆ ಆರತಿಯೆತ್ತಿರೆ 1ಆದಿ ಮೂರತಿಯೆಂಬ ಅಚ್ಚ ಅರಿಸಿಣ ಬಳೆದುವೇದ ಮುಖವೆಂಬ ಕುಂಕುಮವನಿಟ್ಟು ||ಸಾಧು - ಸಜ್ಜನ ಸೇವೆಯೆಂಬ ಸಂಪಿಗೆ ಮುಡಿದುಮೋದದಿಂ ಲಕ್ಷ್ಮೀಗಾರತಿಯೆತ್ತಿರೆ 2ತನುವೆಂಬ ತಟ್ಟಿಯಲಿ ಮನದ ಸೊಡರನು ಇಡಿಸಿಘನಶಾಂತಿಯೆಂಬ ಆಜ್ಯವನುತುಂಬಿ ||ಆನಂದವೆಂತೆಂಬ ಜ್ಯೋತಿಯನು ಹಚ್ಚಿತುಚಿನುಮಯ ಹರಿಗೆ ಆರತಿಯೆತ್ತಿರೆ 3ಕಾಮಾಂಧವಳಿದಂತ ಕಮಲದ ತಟ್ಟೆಯಲಿನೇಮವೆಂತೆಂಬ ಹರಿದ್ರವನು ಕದಡಿ ||ಆ ಮಹಾಸುಜ್ಞಾನವೆಂಬ ಸುಣ್ಣವ ಬೆರಸಿಸೋಮಧರವರದಗಾರತಿಯೆತ್ತಿರೆ 4ನಾರದವಂದ್ಯಗೆನವನೀತ ಚೋರಗೆನಾರಾಯಣಗೆ ಶ್ರೀ ವರಲಕ್ಷ್ಮೀಗೆ ||ಸಾರಿದವರನು ಪೊರೆವ ಪುರಂದರವಿಠಲಗೆನೀರಜಮುಖಿಯರಾರತಿಯೆತ್ತಿರೆ5
--------------
ಪುರಂದರದಾಸರು
ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿದಿವ್ಯ ಷಡುರಸಾನ್ನವನಿಟ್ಟೆನೊ ಪ.ಘಮಘಮಿಸುವ ಶಾಲ್ಯನ್ನ ಪಂಚಭಕ್ಷ್ಯಅಮೃತಕೂಡಿದ ದಿವ್ಯ ಪರಮಾನ್ನವು ||ರಮಾದೇವಿಯು ಸ್ವಹಸ್ತದಿ ಮಾಡಿದ ಪಾಕಭೂಮಿ ಮೊದಲಾದ ದೇವಿಯರ ಸಹಿತ ತಾನು 1ಅರವತ್ತು ಶಾಕ ಲವಣ ಶಾಕ ಮೊದಲಾದಸರಸ ಮೊಸರುಬುತ್ತಿ ಚಿತ್ರಾನ್ನವಪರಮ ಮಂಗಳ ಅಪ್ಪಾಲು ಅತಿರಸಗಳಹರುಷದಿಂದಲಿ ಇಟ್ಟ ಹೊಸ ತುಪ್ಪವ 2ವಡೆಯಂಬೋಡಿಯು ದಧಿವಡೆಯ ತಿಂಢಿಣಿಒಡೆಯಸೆ ಬಡಿಸಿದೆ ಅಧಿಕವಾಗಿ ||ದೃಢವಾದ ಪಡಿಪದಾರ್ಥವನೆಲ್ಲ ಇಡಿಸಿದೆಒಡೆಯ ಶ್ರೀ ಪುರಂದರವಿಠಲ ನೀನುಣ್ಣೊ 3
--------------
ಪುರಂದರದಾಸರು
ರಂಗರಾಯರ ಮುಂದೆಇವರಕೊಂಗಬುದ್ಧಿಕೋಲಹೊಯ್ಸಿಹಂಗಿನ ಮುಯ್ಯ ಕಳೆದೆವಇವರ ತಂಗಿಯರಮಾರಿಭಂಗಿಸಿ ನಾವುಪ.ಅಪ್ಪ ಅರಸು ಆಗೊ ಇವರತಪ್ಪಿನ ಮಾತಿಲೆ ಸೋಲಿಸಿನಿಮ್ಮಪ್ಪ ನಿಮ್ಮರಸನೆಂಬೊಚಪ್ಪಾಳೆಯನಿಕ್ಕಿಸಿ ನಾವು 1ಒಡ ಹುಟ್ಟಿದಣ್ಣನ ದ್ರೌಪತಿಒಡಗೂಡುತಲಿ ತಾ ಇಡುವರೆಈ ಆಣೆ ನಮಗೆನುಡಿದ ಆ ನುಡಿಗೆ ನಾಚಿಸಿ ಇವರನು 2ಹುಟ್ಟು ಹೊಂದೊದೆಂಬೋದಿವರಬಿಟ್ಟು ಕಡೆಗೆ ಮಾಡಿಸಿನಾವುಶ್ರೀ ಕೃಷ್ಣನಂಫ್ರಿ ಕಮಲವನ್ನುಎಷ್ಟು ದಯದಿ ತೋರಿಸಿ 3ಅಷ್ಟ ಮದದ ತಮವು ಎಂಬೊಕುಟ್ಟಿ ಹಿಟ್ಟು ಮಾಡಿಸಿ ನಾವುಸಿಟ್ಟು ಕೋಪವೆಂಬೊ ಬಣವಿ ಒಟ್ಟಿಕೆಂಡ ಹೇರಿಸಿ ನಾವು 4ಸತ್ವರಜ ತಮವು ಎಂಬೊಕತ್ತಲೆಯ ಅಡಗಿಸಿ ನಾವುಮತ್ತೆ ಜ್ಞಾನ ಸೂರ್ಯನಪ್ರಶಸ್ತ ಉದಯ ಮಾಡಿಸಿ 5ನೀತಿ ತಪ್ಪಿದ ಬಾಲೆಯರಭೂತ ಹೊರಗೆ ಹೊರಡಿಸಿನಾವುಮಾತ್ರಗಳೆಂಬೊ ಇವರಗಾತ್ರಬಿಟ್ಟು ದೂರ ಇಡಿಸಿ6ಸಂಚಿತಗಾಮಿಯು ಇವರಕಿಂಚಿತುಳಿಯದಲೆ ಹಾರಿಸಿ ನಾವುಪಂಚ ಪಾಂಡವರ ಮಡದಿಪಾಂಚಾಲಿಯ ನಾಚಿಸಿ 7ದಶೇಂದ್ರಿಯಗಳೆಂಬೊ ಕುದುರೆಗಳದಶ ದಿಕ್ಕಿಗೆ ಓಡಿಸಿ ನಾವುಮುಸುಕು ಹಾಕಿದ ಅಂಗವನುಕೊಸರಿ ಕೊಸರಿ ಝೂಡಿಸಿ 8ನಿಂದ್ಯವಾದಪಟಲುವಿದ್ಯೆಚಿಂದಿ ಚಿಂದಿ ಮಾಡಿಸಿ ನಾವುತಂದೆ ರಾಮೇಶನ ಪಾದಕೆತಂದು ಇವರ ಹೊಂದಿಸಿ 9
--------------
ಗಲಗಲಿಅವ್ವನವರು
ಹಿಡಿಸುವೆ ಹುಚ್ಚನೆ ಹಿಡಿಸುವೆರಂಗನರಸಿಯರ ಪಾಟ ಬಡಿಸುವೆ ಪ.ತಮವೆಂಬ ಭಂಗಿಯ ಕುಡಿಸುವೆಬುದ್ಧಿಭ್ರಮೆಗೊಂಡ ಮಾತು ನುಡಿಸುವೆಸುಮನಸರಿಗೆ ಹೆಂಡ ಕುಡಿಸುವೆಯಾರೂ ನಮಿಸದಂತೆ ದೂರ ಇಡಿಸುವೆ 1ರಜವೆಂಬೋದ್ರವ್ಯ ಬಚ್ಚಿಡಿಸುವೆಇವರ ರಾಜ ಲಕ್ಷಣಕಟ್ಟಿಇಡಿಸುವೆಗಜಗಮನೆಯರ ಗರ್ವ ಮುರಿಸುವೆನಮ್ಮತ್ರಿಜಗವಂದನ ಹಾಸ್ಯ ಮಾಡಿಸುವೆ2ಸತ್ಯ ಸಾಮಿತ್ಯವತೆಗೆಸುವೆಉನ್ಮತ್ತೆಯರ ಮಾಡಿ ಮೆರೆಸುವೆಕತ್ತಲೆ ಮನೆÀಯೊಳಗೆ ಹೊಗಿಸುವೆಇನ್ನೆತ್ತ ಹೋಗಲೆಂದು ಎನಿಸುವೆ 3ಯಾರೂ ಇಲ್ಲದಲಿ ಇಡಿಸುವೆಇವರ ನೀರು ಕಂಡು ಭಯಬಡಿಸುವೆಓರೆಂದು ಗಾಬರಿಗೆಡಿಸುವೆಕಾಯೋ ಶ್ರೀನಿವಾಸಾನೆಂದೆನಿಸುವೆ 4ಒಬ್ಬರಿÉಲ್ಲದಲಿ ಇಡಿಸುವೆಇವರನು ಗುಬ್ಬಿಯ ಹಾಂಗೆ ಭಯ ಪಡಿಸುವೆತಬ್ಬಿಬ್ಬುಗೊಂಡು ತಳವೆಳಸುವೆಅರ್ಥಿಲೊಬ್ಬ ರಾಮೇಶನ ನೋಡಿಸುವೆ 5
--------------
ಗಲಗಲಿಅವ್ವನವರು