ಒಟ್ಟು 39 ಕಡೆಗಳಲ್ಲಿ , 24 ದಾಸರು , 37 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನನಗಲಿ ಪೋಗಲಾರೆವೋ ನೀರಜಾಕ್ಷ ನಿನ್ನ ಸೇರಿ ಸುಖಿಸ ಬಂದೆವೊ ಪ ಮನ್ನಿಸದೆ ಮಮತೆಯಿಂದ ಭಿನ್ನ ನುಡಿಗಳಾಡಿ ನಮಗೆ ಹಣ್ಣು ತೋರಿ ಕಾಳಕೂಟವನ್ನು ಕೊಡುವರೇನೊ ಕೃಷ್ಣ ಅ ಐದುವದಕೆ ಶಕ್ಯವಲ್ಲದ ಅಪ್ರಮೇಯ ಆದಿಪುರುಷ ಅಮರಸನ್ನುತ ಶ್ರೀದ ನಮ್ಮ ಕೈಯ ಬಿಡದೆ ಆದರಿಸಬೇಕು ಪರವ- ರಾದರೇನು ನಿನ್ನ ಶರಣರಾದ ಮೇಲೆ ಬಿಡುವುದುಂಟೆ1 ಬಂಧುವರ್ಗವನ್ನು ಬಿಡುವುದು ಸ್ತ್ರೀಯರಿಗೆ ನಿಂದ್ಯವೆಂದು ಶಾಸ್ತ್ರ ಪೇಳ್ವುದು ಎಂದೆಗೆಂದಿಗೆಮಗೆ ನೀನೆ ಬಂಧುವೆಂದು ಬಂದಿಹೆವೊ ಇಂದು ಹೋಗಿರೆಂಬೆ ನೀನು2 ಶಮದಮಾದಿ ಗುಣಗಳಿಂದಲಿ ಸಜ್ಜನರು ಮೂರ್ತಿ ಮನದಲಿ ಮಮತೆಯಿಂದ ಪೂಜಿಸುತ್ತ ಗಮಿಸುವರೊ ನಿನ್ನ ಪುರಕೆ ನಮಗೆ ಮಾತ್ರ ಪತಿಸುತಾದ್ಯರಮಿತ ಸುಖವ ಕೊಡುವರೇನೊ 3 ಮೋಕ್ಷ ಇಚ್ಛೆಯಿಂದ ನಿನ್ನನು ಭಜಿಪ ಜನರಾ ಪಕ್ಷ ವಹಿಸಿದಂತೆ ನಮ್ಮನು ರಕ್ಷಿಸದೆ ಬಿಡುವರೇ ಕಟಾಕ್ಷದಿಂದ ಈಕ್ಷಿಸದೆ ಲಕ್ಷ್ಮೀದೇವಿ ನಿಮಗೆ ಬಹಳಾಪೇಕ್ಷೆಯಿಂದ ಮೋಹಿಸಿದಳೆ 4 ಅನಘ ನಿನ್ನ ನೋಡಿ ಮೋಹಿಸಿ ಅಂತರಾತ್ಮ ತನುವು ಮನವು ನಿನಗೆ ಅರ್ಪಿಸಿ ಜನನ ಮರಣದಿಂದ ಜನರು ದಣಿವರೇನೂ ಕಾಂತ ನಮ್ಮ ಮನಸಿನಂತೆ ಒಲಿದು ಸಲಹೊ ವನಜನಾಭ ವಿಜಯವಿಠ್ಠಲ 5
--------------
ವಿಜಯದಾಸ
ನಿರವಧಿ ಬಲ ಲಾವಣ್ಯ ಸಂಪನ್ನ ಪ ಚರಣ ಸೇವಕನೆಂದೆನಿಸಲೋ ಎನ್ನ ಅ.ಪ ನಿಖಿಲ ಜಗಂಗಳ ಜನನಾದಿಗಳಿಗೆ ಅಖಿಲ ಕಾರಣನೇ ಸುಖಮಯನೇ ಶುಕಭಾಷಣದಿಂ ಪೊಗಳುತಿಹನೋ ನಿನ್ನ ಭಕುತಿಯ ಮಾರ್ಗವ ತೋರಿ ಪೊರೆಯೆಲೋ 1 ಹೆಚ್ಚಿನ ಜ್ಞಾನದ ಕೆಚ್ಚೆನಗಿಲ್ಲವೊ ಉಚ್ಚಪದವು ನಿನ್ನ ಇಚ್ಛೆಯಿಂದಲ್ಲವೇ ಹುಚ್ಚನಾದೆನೊ ಜನಮೆಚ್ಚುಗೆ ಬಯಸುತ ಅಚ್ಯುತ ಎನ್ನ ಉಪೇಕ್ಷಿಸದಿರೆಲೊ 2 ನಿನ್ನನು ಪೂಜಿಸಿ ಧನ್ಯ ನಾನಾದೆನೊ ಎನ್ನ ಸತ್ಕಾಲವು ಮಾನ್ಯವಾಯಿತೊ ಇನ್ನು ನಿನ್ನಯ ಪ್ರಸನ್ನತೆಯಲ್ಲದೆ ಅನ್ಯ ವಿಷಯಗಳ ಬಯಸುವುದಿಲ್ಲವೊ 3
--------------
ವಿದ್ಯಾಪ್ರಸನ್ನತೀರ್ಥರು
ಪಂಚೀಕರಣಮಾಡಿ ತಾ ಸಂಚರಿಸುವ ಪ ಪಂಚೀಕರಣತಿಳಿಯದೆ ಪ್ರಪಂಚದೊಳು ಮುಳುಗಿ ನಾ ವಂಚಿತನಾದೆ ವಿರಿಂಚಿಭಕ್ತಿಗೆ ಅ.ಪ ಸಚ್ಚಿದಾನಂದ ರೂಪ ವ್ಯಾಪ್ತರೂಪಿ ನಾರಾಯಣ ಅಪ- ಅಚ್ಯುತ ತನ್ನಿಚ್ಛೆಯಿಂದ ವೈಕೃತಾಕಾಶಕ್ಕೆ ಅಂಭ್ರಣಿದೇವಿಯರನೆ ಮುಖ್ಯ ಮಾಡಿದಾ 1 ಗುಣರಾಶಿಯೊಳು ಸತ್ವಕ್ಕೆ ಶ್ರೀದೇವಿಯರು ಮುಖ್ಯ ರಜಕೆ ಭೂದೇವಿ ತಮಕೆ ದುರ್ಗಾದೇವೇರು ಸತ್ಯಜ್ಞಾನಾನಂದದಯೆ ಮೌನಪಂಚೇಂದ್ರಿಯ ಜಯ ಅಕ್ರೌರ್ಯಗುರು ಸೇವೆಯೇ ಸತ್ವಕಾರ್ಯವು2 ತಮಕ್ರೋಧ ಅಹಂಕಾರ ಮದೋನ್ಮಾದ ಚಪಲೋದ್ಯೋಗ ಡಂಭ ಸ್ವಚ್ಛಂದರಜದ ಕಾರ್ಯವು ತಮದ ಕಾರ್ಯ ಅಜ್ಞಾನ ಮೋಹ ನಿದ್ರಾಲಸ್ಯ ಬುದ್ಧಿಶೂನ್ಯ ತಾಪವಾದಿ ಹಿಂಸಾಕಾರ್ಯವು 3 ಸತ್ವಪ್ರಾಚುರ್ಯದಿ ಮದ ಗುಣತ್ರಯವೈಷಮ್ಯಹೊಂದಿ ಶ್ರೇಷ್ಠಕಾರ್ಯಕೆ ಮಹತ್ತತ್ವವಾಯಿತು ಸಾತ್ವತಾಂಪತಿಯ ಇಚ್ಛೆಯಿಂದ ಮಹತ್ತತ್ವದಿ ಅಹಂಕಾರ ತತ್ವವೆಂಬುದೇರ್ಪಟ್ಟಿತು 4 ತೈಜಸ ತಾಮಸ ಅಹಂಕಾರ ವೆನುತಲಿ ಮೂರಹಂ- ಕಾರದಿ ಮೂರು ರುದ್ರರೂಪಗಳು ಬ್ರಹ್ಮವಾಯು ಶೇಷರಿಂದುದಯಿಸಿದರು5 ವೈಕಾರಿಕ ಅಹಂಕಾರದಿ ದೇವತಾ ದೇಹ ಮನಸು ತೈಜಸದಿಂದ ದಶೇಂದ್ರಿಯ ಹುಟ್ಟಿತು ತಾಮಸಾಹಂಕಾರದಿಂದುತ್ಪನ್ನವಾದುವು6 ಸರ್ವ ಮಿಳಿತಮಾಡಿ ಬ್ರಹ್ಮಾಂಡವನೆ ಸೇರಿ ಹರಿಯು ಪದ್ಮನಾಭರೂಪದಿಂದ ಶಯನಗೈದನು ಸರ್ವಲೋಕೋದ್ಧಾರ ಹರಿಯು ನಾಭಿಯೊಳು ಪದ್ಮ ತೋರಿ ಪದುಮದಲ್ಲಿ ಪದ್ಮಸಂಭವನಾಸೃಜಿಸಿದ 7 ಸರ್ವರಂತರ್ಯಾಮಿ ಸಕಲಜೀವರನ್ನು ಸೃಷ್ಟಿಗೈಸಿ ಜೀವಯೋಗ್ಯತಾ ಕಾರ್ಯ ನಡೆಸುತಿರುವನು ಸರ್ವಜೀವಕಾರ್ಯವು ಪಂಚವಿಂಶತಿತತ್ವ ಈ- ಶರಿಂದಲೆ ಕಾರ್ಯನಡೆಯತಿರುವುದು8 ಶಬ್ದತನ್ಮಾತ್ರದಿಂದ ಆಕಾಶ ಹುಟ್ಟಿತು ವಾಯುಹುಟ್ಟಿತು ಸ್ಪರ್ಶತನ್ಮಾತ್ರದಿ ರೂಪತನ್ಮಾತ್ರದಿ ಅಗ್ನಿಭೂತ ಹುಟ್ಟಿತು ಆಗ ರಸತನ್ಮಾತ್ರದಿ ಅಷ್ಟು ಹುಟ್ಟಿತು 9 ಈ ಪರಿವಿರಾಟದಿಂದುಯಿಸಿದವು ಆಕಾಶ ಕೊಂದೆ ಶಬ್ದಗುಣವು ಮಾತ್ರ ಇರುವುದು ಅಹುದು ವಾಯವಿಗೆ ಶಬ್ದ ಸ್ಪರ್ಶವೆರಡುಗುಣಗಳು10 ತೋರುತಿರ್ಪುದಗ್ನಿ ಶಬ್ದಸ್ಪರ್ಶರೂಪ ಗುಣಗಳು ಗುಣ ಶಬ್ದ ಸ್ಪರ್ಶ ರೂಪ ರಸ ಗಂಧವೈದು ಪರಿ ಭೂತಪಂಚಕಗಳ ಅರಿವುದು 11 ಪಂಚಭೂತಗಳು ತಮ್ಮ ಸ್ವಾಂಶಗಳ ಭಾಗಗೈಸಿ ಪ್ರ- ಪಂಚ ಕಾರ್ಯಕಿತ್ತ ಪರಿಯದೆಂತೆನೆ ಆಕಾಶ ದರ್ಧಭಾಗ ಭೂತ ಪ್ರೇತ ಪಿಶಾಚಿಗಳಿಗೂ ಉಳಿ ಪಾದ ಪಾದವೆನ್ನೆ ಜೀವಕೋಟಿಗೂ12 ವಾಯು ತನ್ನರ್ಧಭಾಗ ಪಕ್ಷಿ ಪನ್ನಗಾದಿಳಿಗೂ ಪಾದ ಭಾಗ ಜೀವಕೋಟಿಗೂ ಅಗ್ನಿತನ್ನರ್ಧಭಾಗ ದೇವ ಋಷಿಗಳಿಗೂ ಮಿಕ್ಕಧರ್Àದೊಳ್ ಪಾದಭಾಗ ಜೀವಕೋಟಿಗೂ13 ಅಪ್ಪುತನ್ನರ್ಧಂಶ ಜಲಚರಪ್ರಾಣಿಗಳಿಗು ಮಿಕ್ಕರ್ಧದೊಳು ಪಾದಭಾಗ ಜೀವಕೋಟಿಗೂ ಪೃಥ್ವಿ ತನ್ನರ್ಧಂಶ ಜಡಜೀವಕೋಟಿಗೂ ಮಿಕ್ಕ ರ್ಧದೊಳ್ ಪಾದಭಾಗ ಜೀವಕೋಟಿಗೂ14 ಪೃಥ್ವಿ ಅಪ್ಪು ತೇಜೋ ವಾಯು ಆಕಾಶಗಳು ಸೂಕ್ಷ್ಮರೂಪದಿಂದೆರಡೆರಡಾದವು ಆಕಾಶತನ್ನರ್ಧಾಂಶದಲ್ಲಿ ವಾಯ್ವಗ್ನಿ ಅಪ್ಪು ಪೃಥ್ವಿಗಳಿ ಗೆ ಕೊಟ್ಟು ಸ್ವಾಂಶ ಅಂತಃಕರಣವೆನಿಸಿತು 15 ವಾಯು ಸ್ವಾಂಶದಿಂದುದಾನವೆಂದೆನಿಸಿ ಮಿಕ್ಕ ಪೃಥ್ವೈ ಪ್ತೇಜಾಕಾಶಗಳಿಗೆ ತನ್ನ ಚಲನ ಕೊಟ್ಟಿತು ಅಗ್ನಿ ತನ್ನಸ್ವಾಂಶದಿಂದ ಚಕ್ಷುಸೇಂದ್ರಿಯ ವೆನಿಸಿ ವಾಯ್ವಾಕಾಶಅಪ್ಪು ಪೃಥ್ವಿಗುಷ್ಣ ಕೊಟ್ಟಿತು 16 ಅಪ್ಪು ತನ್ನ ಸ್ವಾಂಶದಿಂ ರಸವೆಂದೆನಿಸಿ ಮಿಕ್ಕ ವಾಯ್ವಾಕಾಶಾಗ್ನಿ ಪೃಥ್ವಿಗೆ ದ್ರವವ ಕೊಟ್ಟಿತು ಪೃಥ್ವಿತನ್ನ ಸ್ವಾಂಶದಿಂ ಗಂಧವೆಂದೆನಿಸಿ ಮಿಕ್ಕ ಅಪ್ತೇಜವಾಯ್ವಾಕಾಶಕೆ ಕಠಿಣ ಕೊಟ್ಟಿತು 17 ಭೂತಪಂಚಕಗಳಿಗೆ ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ ರೂಪವು ಅಧಿಷ್ಠಾನರಾಗಿ ಅವರಂತರ್ಯಾಮಿಯಾಗಿ ಅನಿರುದ್ಧಾದಿ ಐದು ಭಗವನ್ಮೂರ್ತಿ ಇರುವುದು 18 ನಾಮರೂಪ ವರ್ಣಗುಣ ಸ್ವಭಾವ ತೇಜ ಸುಮುಖ ದೇವರಶಕ್ತಿ ಅಕ್ಷರ ಕ್ರಿಯಾ ಎಂಬೀ ಹತ್ತು ಗುಣಗಳು ಭೂತ ಒಂದಕ್ಕೆ ತಿಳಿದು ಉಪಾಸನ ಮಾಳ್ಪಾದೂ ಬುಧರು ಎಲ್ಲರು 19 ನಾಮವೇ ಆಕಾಶ ರೂಪ ಒಟ್ಟು ಭಾವ ಬಯಲು ವರ್ಣ ಕಪ್ಪು ಗುಣಶಬ್ದ ಕ್ರಿಯ ಅನುಗ್ರಹ ಮುಖವೇ ಈಶಾನ ದೇವತೆ ಪರಶಿವಶಕ್ತಿ ಪರಾಶಕ್ತಿ ಅಕ್ಷರವೇ ನಾದವು20 ನಾಮ ವಾಯುರೂಪ ಷಟ್ಕೋಣ ವರ್ಣನೀಲ ಮುಖ ತತ್ಪುರುಷ ದೇವತೆ ಸದಾಶಿವ ಶಕ್ತಿ ಅಕ್ಷರ ಬಿಂದುವೆನಿಪುದು 21 ನಾಮ ಅಗ್ನಿರೂಪ ಮುಕ್ಕೋಣವರ್ಣ ರಕ್ತವರ್ಣ ಮುಖ ಅಘೋರ ದೇವತೆ ರುದ್ರಶಕ್ತಿ ಪಾರ್ವತಿ ಅಕ್ಷರ ಮಕಾರ 22 ನಾಮ ಅಪ್ಪುರೂಪ ಅಧರ್Éೀಂದು ಶ್ವೇತವರ್ಣ ಸ್ವಭಾವದ್ರವ ಗುಣ ಮಾಧುರ್ಯ ವಿಷ್ಣುಶಕ್ತಿ ಅಕ್ಷರಉಕಾರ ಎಂದು ಪೇಳ್ವರು 23 ನಾಮವೇ ಪೃಥ್ವಿರೂಪ ಚತುಷ್ಕೋಣ ವರ್ಣ ಹೇಮ ಸ್ವಭಾವವೇಕಠಿಣ ಕ್ರಿಯ ಸೃಷ್ಟಿ ಗುಣವೆ ಗಂಧವು ಮುಖಸದ್ಯೋಜಾತ ದೇವತೆ ಬ್ರಹ್ಮಶಕ್ತಿ ಸರಸ್ವತಿ ಅಕ್ಷರ ಅಕಾರವು 24 ಉಕ್ತರೀತಿ ಹತ್ತು ಗುಣಗಳೊಳ್ ಭೂತ ಒಂದ- ಕ್ಕೆತಿಳಿದು ಈ ಜ್ಞಾನೇಂದ್ರಿಯಗಳೆಂತಾದವು ಎಂದರಿವುದು ಆಕಾಶಸಮಾನಾಂಶ ಅಗ್ನಿಯು ಮುಖ್ಯಾಂಶದಿರೆ ಶ್ರೋತ್ರೇಂದ್ರಿಯ ಹುಟ್ಟಿ ತೋರುತಿರುವುದು25 ವಾಯುಸಮಾನಾಂಶ ಬಂದು ಅಗ್ನಿ ಮುಖ್ಯಾಂಶದಿರೆ ತ್ವಗೇಂದ್ರಿಯವು ತಾನೆ ತೋರುತಿರುವುದು ಜಿಹ್ವೇಂದ್ರಿಯವು ತೋರುತಿರುವುದು26 ಘ್ರಾಣೇಂದ್ರಿಯವು ತಾನೆ ತೋರುತಿರುವುದು ಅಗ್ನಿ ಸ್ವಾಂಶದಿಂದ ಚಕ್ಷುಷೇಂದ್ರಿಯವೆಂದು ಹಿಂದೆಯೇ ಈ ವಿವರ ಪೇಳಿರುವುದು27 ಪೃಥ್ವಿಸಮಾನಾಂಶದೊಡನೆ ಆಕಾಶ ಸಮಾಂಶಸೇರೆ ವಾಗೇಂದ್ರಿಯವೆ ತಾನೆ ತೋರುತಿರುವುದು ಪೃಥ್ವಿ ಮುಖ್ಯಾಂಶದೊಡನೆ ವಾಯು ಸಮಾಂಶಸೇರೆ ಘ್ರಾಣೇಂದ್ರಿಯವು ತಾನೆ ತೋರುವುದು 28 ಪೃಥ್ವಿಮುಖ್ಯಾಂಶದೊಡನೆ ಅಗ್ನಿ ಸಮಾಂಶಸೇರೆ ಪಾದೇಂದ್ರಿಯವು ತಾನೆತೋರುತಿರ್ಪದು ಪೃಥ್ವಿ ಮುಖ್ಯಾಂಶರೊಡನೆ ಅಪ್ಪು ಸಮಾವಾಂಶ ಸೇರೆ ಪಾಯೇಂದ್ರಿಯವೆಂದು ತೋರುತಿರ್ಪುದು29 ಪೃಥ್ವಿಸ್ವಾಂಶವೇ ಗುಹ್ಯೇಂದ್ರಿಯವೆಂದು ಪೂ ರ್ವೋಕ್ತ ರೀತಿಗಣನೆ ತರುವುದು ಈ ರೀತಿ ಕರ್ಮೇಂದ್ರಿಯಗಳೆಲ್ಲ ಪೃಥ್ವಿ ತತ್ವದಿಂದಲೇ- ರ್ಪಟ್ಟು ಬೆಳಗುತಿರುವುದು30 ಆಕಾಶ ಸಮಾನಾಂಶ ಅಪ್ಪು ಮುಖ್ಯಾಂಶದಿರೆ ಶಬ್ದ ವಾಯು ಸ್ವಯಾಂಶದಿ ಅಪ್ಪು ಮುಖ್ಯಾಂಶದಿ ಸ್ಪರ್ಶತೋರ್ಪುದು ಅಗ್ನಿ ಸಮಾನಾಂಶ ಅಪ್ಪು ಮು ಅಪ್ಪು ಮುಖ್ಯಾಂಶದಿಂದಲೆ31 ಅಪ್ಪುಸ್ವಯಾಂಶವೇ ರಸವು ಎಂದೆನಿಸಿತು ತನ್ಮಾತ್ರಪಂಚಕಕ್ಕೆ ಮೂಲ ಅಪ್ಪುತತ್ವವು ಪ್ರಾಣಾದಿಪಂಚಗಳ ಮುಂದೆ ವಿವರಿಸಿಹುದು ವಾಯುತತ್ವವೇ ಅದಕೆ ಮುಖ್ಯಕಾರಣ32 ವಾಯು ಮುಖ್ಯಾಂಶದೊಳು ಆಕಾಶ ಸಮಾನಾಂಶ ಸೇರೆ ಸಮಾನ ವಾಯುವೆಂತೆಂದೇರ್ಪಟ್ಟಿತು ವ್ಯಾನ ವಾಯು ಎಂತೆಂದೇರ್ಪಟ್ಟಿತು 33 ವಾಯು ಮುಖ್ಯಾಂಶದೊಳು ಅಪ್ಪು ಸಮಾನಾಂಶ ಸೇರೆ ಅಪಾನವಾಯುವೆಂತೆಂದೇರ್ಪಟ್ಟಿತು ವಾಯು ಮುಖ್ಯಾಂಶದೊಡನೆ ಪೃಥ್ವಿಸಮಾನಾಂಶ ಸೇರಲು ಪ್ರಾಣ ವಾಯು ಉತ್ಪನ್ನವಾಯಿತು34 ವಾಯುವಿನ ಸ್ವಯಾಂಶವೇ ಉದಾನವಾಯುವೆನಿಸಿತು ಮುಂದೆ ವಿವರಿಸುವುದು ಜ್ಞಾನ ಪಂಚಕ ಈ ಜ್ಞಾನ ಪಂಚಕಕ್ಕೆ ಆಕಾಶ ತತ್ವವೇ ಮುಖ್ಯಕಾರಣವೆಂದು ಬುಧರು ಪೇಳ್ವರು35 ಆಕಾಶ ಮುಖ್ಯಾಂಶದಿ ವಾಯು ಸಮಾನಾಂಶ ಸೇರಿ ದಾಗಲೆ ಮನಸು ಎಂಬುವುದು ಹುಟ್ಟಿತು ಆಕಾಶ ಮುಖ್ಯಾಂಶದಿ ಅಗ್ನಿ ಸಮಾನಾಂಶ ಸೇರಿ ದಾಗಲೆ ಬುದ್ಧಿ ಎಂಬುದು ಗೋಚರವಾಯಿತು 36 ಸೇರೆ ಚಿತ್ತವೆಂಬುದು ವ್ಯಕ್ತವಾಯಿತು ಆಕಾಶ ಮುಖ್ಯಾಂಶದೊಳು ಪೃಥ್ವಿಸಮಾನಾಂಶ ಸೇರಿ ಅಹಂಕಾರವೆಂಬುದೇರ್ಪಟ್ಟಿತು 37 ಆಕಾಶ ಸ್ವಾಂಶವೇ ಕತೃತ್ವವೆಂದೆನಿಸಿತು ಈಪರಿಯ ತಿಳಿವುದು ಜ್ಞಾನಪಂಚಕ ಜ್ಞಾನೇಂದ್ರಿಯ ಕರ್ಮೇಂದ್ರಿಯ ಪಂಚತನ್ಮಾ ತ್ರಗಳಿಗೆ ಆಧ್ಯಾತ್ಮಿಕಾದಿಭೌತಿಕದೇವತೆಗಳ ತಿಳಿವುದು 38
--------------
ಉರಗಾದ್ರಿವಾಸವಿಠಲದಾಸರು
ಪತಿಯೆ ಪರದೇವತೆಯು ಸತಿಯರಿಗೆ ಜಗದಿ ಮತಿಯರಿತು ಭಜಿಸಿ ಪರಗತಿಯ ಸಾರುವುದು ಪ. ಉದಯಕಾಲದೊಳೆದ್ದು ಸದಮಲ ಶುಧ್ಧಿಯಲಿ ಪಾದ ಮನದಿ ಸ್ಮರಿಸುತಲಿ ಪತಿ ಹೃದಯದಲಿರುವನು ಎಂದು ಪತಿ ಪದಕರ್ಪಿಸುವುದು 1 ಆದರದಲಿ ಪತಿಯ ಪಾದವನೆ ತೊಳೆದು ಆ ಸ್ವಾದೋದಕವ ಪಾನಗೈದು ಸುಖಿಸುವುದು ವೇದಗೋಚರ ಹರಿಯೆ ನೀ ದಯವ ಮಾಡೆಂದು ಆದರದಿ ಪತಿಯ ಮನವರಿತು ನುಡಿಯುವುದು 2 ಸ್ವಚ್ಛದಲ್ಲಿ ಮನದ ತುಚ್ಛ ವಿಷಯವ ತೊರೆದು ಇಚ್ಛೆಯಿಂದಲಿ ಹರಿಯ ನಾಮಗಳ ಭಜಿಸಿ ಅಚ್ಯುತಾನಂತ ಗೋವಿಂದನೆನ್ನುತ ಸತತ ಮಚ್ಚಾದ್ಯನೇಕ ಅವತಾರ ನೆನೆಯುವುದು 3 ಪತಿಯೆ ಹರಿಯೆಂದರಿತು ಪತಿಯೆ ಗುರುವೆಂದರಿತು ಪತಿಯ ಪೂಜೆಯನು ಅತಿ ಹಿತದಿ ಗೈಯ್ಯುವುದು ಪತಿಯಂತರ್ಗತನೆ ಎನ್ನತಿಶಯದಿ ಪೊರೆಯೆಂದು ಪತಿವ್ರತವ ನಡೆಸುತಲಿ ಹಿತದಿ ಬಾಳುವುದು 4 ಪತಿಯ ನಿಂದಕಳಿಗೆ ಗತಿಯಿಲ್ಲ ಪರದಲ್ಲಿ ಅತಿ ಬಾಧೆಪಡಿಸುವನು ಯಮನು ನಿರ್ದಯದಿ ಪತಿವ್ರತವ ಸಾಧಿಸುವ ಸತಿಯರಿಗೆ ಅನವರತ ಚ್ಯುತರಹಿತ ಪದವೀವ ಗೋಪಾಲಕೃಷ್ಣವಿಠಲ5
--------------
ಅಂಬಾಬಾಯಿ
ಪವಮಾನ ಪಾಲಿಸೆನ್ನ ಸದ್ಗುಣಘನ್ನ ಪ ಪವಮಾನ ಪೊರಿಯೆನ್ನ ಕವಿಭಿರೀಡಿತ ನಿನ್ನ ಸ್ತವನಗೈಯುವ ಮಾನವರೊಳಧಮ ನಾನು ಪವಮಾನ ಪಾಲಿಸೆನ್ನ ಅ.ಪ ಪತಿ ಶಿವ ಮುಖ ದಿತಿಜಾರಿತತಿನುತ ಶ್ರುತಿ ಪ್ರತಿಪಾದ್ಯ ಆ ನತ ಬಂಧು ತತ್ವಾಧಿ ಪತಿಗಳೊಳುತ್ತಮ ಪ್ರಥಮಾಂಗ ಹರಿ ಪ್ರೀಯ ದ್ವಿತಿಯುಗದಲಿ ಕಪಿ - ನೀರಜ ಪತಿಯಪಾದದ್ವಯ ಅತಿಹಿತದಲಿ ಸೇವಿಸಿ ಲವಣಾರ್ಣವ ಶತಯೋಜನವ ಲಂಘಿಸಿ ರಾಕ್ಷಸಕುಲ ಹತಗೈಸಿ ಪುರದಹಿಸಿ ದೇವಿಯ ಸುವಾರುತಿಯ ತಿಳಿಸಿ ಭಾವಿದ್ರುಹಿಣನೆಂದೆನಿಸಿ 1 ಕುರುಕುಲದಲಿ ಕುಂತಿ ತರುಳನೆನಿಸೆ ಯುಧಿ ಷ್ಟರನನುಜ ವೃಕೋದರ ನಾಮದಲಿಯವ ತರಿಸಿ ಬಕಾದಿ ದುಷ್ಟರ ಶಿಕ್ಷೆಯನು ಗೈಸಿ ಹರಿಇಚ್ಛೆಯಲಿ ವನಚರಿಸಿ ಕೀಚಕನ ಸಂ ಹರಿಸಿ ದುಶ್ಯಾಸÀನಾದ್ಯರನೆಲ್ಲರಣದೊಳು ದುರುಳದುರ್ಯೋಧನನಸಾನುಜಗಣ ತ್ವರಿತಗೈಸಿ ಹನನ ವಿಜಯನಾಗಿ ಪೊರೆದೆ ಧರ್ಮಾರ್ಜುನನ ತ್ರಿಭುವನದಿ ಸರಿಗಾಣೆ ದ್ವಿಜರಿಪು ಪದುಪಂಚಾನನ 2 ಮಣಿಮಂತ ಮೊದಲಾದದನುಜರು ಹರಿದ್ವೇಷ - ವನು ಮಾಡಲೋಸುಗವನಿಯೊಳುದ್ಭವಿಸಿ ನಿ - ರ್ಗುಣರೂಪ ಕ್ರೀಯ ಬ್ರಹ್ಮನೆನುತ ಹರಿಯತಾ ನೆನಿಪ ದುರ್ಮತವನ್ನು ಘನವಾಗಿ ಪ್ರಬಲಿಸಿ ದನುಜಾರಿಯಾಙÁ್ಞದಿ ಮುನಿಮಧ್ಯ ಸತಿಯಲ್ಲಿ ಮುನಿಮಧ್ವನೆಂದೆನಿಸಿ ಜನಿಸಿ ಕುಮತವನು ಶಾಸ್ತ್ರದಿ ಖಂಡಿಸಿ ಹರಿಯೆ ಪರನೆನಿಪ ಮತವಸ್ಥಾಪಿಸಿ ಮೆರೆದೆ ಈ ಧಾರುಣಿಯೊಳು ವರದೇಶ ವಿಠಲನ ವಲಿಸೆ 3
--------------
ವರದೇಶವಿಠಲ
ಪಾವಮಾನಿಯೆ ತವ | ಯಾವ ಮಹಿಮೆಯೊಳೇಕಭಾವ ಪೊಗಳಲು ಆವ | ದೇವತೆಗಳಿಗಳವೇ ಪ ಶ್ರೀವರನಂಘ್ರಿಯ | ಸೇವೆಗೈವಲಿ ಬಹು | ಧಾವಿಸೀ |ಬಹು ಎಚ್ಚರದಿ ಸೇವಿಸೀ ||ನಿರುತ ಭಕ್ತಿಯ | ಭಾವದಲಿ ದುರಿ | ತಾವಳಿ ವಿಭಾವಸುನೀ ವೊಲಿದು ಭೃ | ತ್ಯಾವಳಿಯ ಪಾಲಿಪೆ | ಸಾರ್ವಕಾಲ ಮ-ತ್ತೋರ್ವರಿಲ್ಲವೊ | ದೇವರೊತ್ತಮ | ದೇವ ನೀನೇ ಅ.ಪ. ಸೂರ್ಯ ಮೋಚನ |ಆಶಿಸುತಲಿ ಹಾರಿ | ದೋಷವ ಕಳೆಯಲು | ಯತ್ನೀಸೆ ಆ ಸುಮಹದಾಕಾರ ಶೃಣಗೈದೀವಾಸವನು ನಿನ ಘಾತಿಸಲು ಕುಲಿಶದೀ ಅದಕಂಡು ತವ ಪಿತಶ್ವಾಸಗಳ ಬಲು ಪರಿಯ ರುದ್ಧಿಸಲು | ಮೂರ್ಲೋಕ ತಪಿಸೇಅಸುರರು ವಿಧಿವಿಧದಿ ಮೊರೆ ಇಡಲೂ | ಆಲೈಸ ನಾಲ್ಮೊಗಶ್ವಾಸ ಸತಿಯನು ಸೂಸಿ ಸೂಚಿಸಲೂ | ಅದಕೇಳಿ ಮತ್ತೆಲೇಸುಗೈಯ್ಯಲು ಮನವ ಮಾಡಲೂ ವಾಸವಾದ್ಯರಶ್ವಾಸ ಮಾಡುವ ತೆರನ ಮಾಡೆಯ್ದೊಕ್ಲೇಶನಾಶನ ಶ್ವಾಸಮಾನಿ ಮಹಾ ಕೃಪಾಳೊ 1 ವ್ರಾತ ಮಣಿ ರಘು | ಜಾತಗಿತ್ತೆಯೊ | ಮಾತರಿಶ್ವಾ 2 ಪುಂಡರೀಕಾಕ್ಷ ಉರ ಬಗೆದು ಕರುಳಕೊಂಡು ಕೊರಳಲಿ ಧರಿಸೀ | ನರ ಮೃಗನ ಲೀಲೆಕಂಡು ದ್ವಯೆ ಬಲ ತಪಿಸೀ | ಅರಕ್ಷೌಹಿಣಿ ಮುಂ-ಕೊಂಡು ನೀನೆ ಸಂಹರಿಸೀ | ಕೌರವನ ತೊಡೆಖಂಡಿಸುತವನ ಛೇದಿಸೀ |ಅಂಡಜಾಧಿಪವಹಗೆ ಅರ್ಪಿಸಿ | ನಿಂದೆ ಭೀಮಾ 3 ಅದ್ವೈತ ಸಿದ್ಧಿಲಿಹೇಯ ಬಹಳವ ನೀನೆ ತೋರಿಸೀ | ಬದರಿಯಲಿ ಬಾದರಾಯಣರಿಂದ ಉಪದೇಶೀಸಿ | ಮತ್ತಿಲ್ಲಿ ಬರುತಲಿಧೇಯ ಸಾಧಿಸೆ ಗ್ರಂಥ ಬಹು ರಚಿಸೀ | ಕುಭಾಷ್ಯಗಳ ಬಹುಹೇಯತ್ವವನೆ ಸಾಧಿಸೀ | ವಾದ ಕಥೆಯಲಿಮಾಯಿಗಳ ಬಲುಪರಿಯ ಸೋಲಿಸೀ |ಕಾರ್ಯ ಸರ್ವವ | ರಾಯ ಕೃಷ್ಣಗೆ ಅರ್ಪಿಸಿದೆ ಮಧ್ವಾ 4 ಪರಿ ವ್ಯಾಪ್ತನೆ | ಅಧ್ಯರ್ಥ ರೂಪಿಅಪ್ರಾಪ್ಯ ಅಶಕ್ತಿ ರಹಿತಾನೇ |ವ್ಯಾಪಿಸುತ ಜಗ | ವೀಪರೀಯಲಿ | ಮಾಳ್ಪೆ ಪ್ರಾಣಾ 5 ಮೋಕ್ಷಾಧೀಚ್ಛೆಯ ವರ್ಜ | ಅಚ್ಛಿನ್ನ ಭಕುತಾನೇದಕ್ಷಿಣಾಕ್ಷಿ ಗೋ | ವತ್ಸ ರೂಪಾನೇ ||ಅಕ್ಷಿಯೋಳಿಹ ತ್ರಿದಶಾ | ದ್ಯಕ್ಷರಿಂದಲಿ ಸಂ | ಸೇವ್ಯಾನೇ |ಕಂಠದಲಿ ನೀ ಹಂಸೋಪಾಸಕನೇ |ಶಬ್ದಗಳ ನುಡಿದು ನುಡಿಸುತಿರುವಾನೆ | ಕೂರ್ಮರೂಪಿ ಸಲಕ್ಷಣದಿ ಬ್ರಹ್ಮಾಂಡ ಧಾರಕನೆ | ಸಪುತ ಸ್ಕಂದಗತಇಚ್ಛೆಯಲಿ ಲೋಕಧಾರಕನೆ | ಬೃಹತಿ ಸಾಸಿರವಾಚ್ಯನೆಂದೆನಿಸುತ್ತ ಸ್ತುತ್ಯಾನೆ | ಪತ್ಯಬಿಂಬ ಮುಖ್ಯನೆಈಕ್ಷಿಸುವೆ ಸರ್ವತ್ರ ಹರಿಯನ್ನೆ | ಮುಂದಿನಜ ಅಪರೋಕ್ಷವನು ಪಾಲಿಸೆಂಬೇನೆ ||ಮೋಕ್ಷದನೆ ಕರುಣಾ ಕಟಾಕ್ಷದಿ | ಈಕ್ಷಿಪುದು ಪವನ 6 ಜೇಷ್ಠ ಶ್ರೇಷ್ಠನೆ ಸ | ಮಷ್ಟಿ ರೂಪನೆ ಪವನ |ವ್ಯಷ್ಟಿರೂಪದಿ ಜಗದಿ | ವರೀಷ್ಟನೇ ||ನಿಷ್ಠೇಲಿ ಭಜಿಪರಿ | ಗಿಷ್ಟಾರ್ಥವನೆ | ಸಲಿಸೂವೇ |ಅತಿರೋಹಿತ ವಿಜ್ಞಾನಿ ಎನಿಸಿರುವೆ ||ಸಕಲ ಗುಣಗಣ ಭೋಕ್ತøವೆನಿಸಿರುವೆ | ಸಕಲ ಜ್ಞಾನೋಪದೇಷ್ಟನೆಂದೆನಿಸಿ ಕರೆಸೂವೆ | ಶಿವ ಶೇಷ ಖಗಪರಿನಿಷ್ಟ ಗುರು ನೀನೆ ಎನಿಸಿರುವೆ ಸಜಾತಿ ಗುಣ ಅಯುತವರಿಷ್ಟನು ನೀನು ಆಗಿರುವೆ | ವಿಜಾತ್ಯನಂತ ಗುಣಗರಿಷ್ಟ ರೂಪಿ ಎನಿಸಿರುವೇ | ವೇದಾನುಕ್ತ ಗುಣವಿಶಿಷ್ಟ ರೂಪದಲಿಂದ ಮೆರೆಯುವೇ ||ಇಷ್ಟ ಗುರು ಗೋವಿಂದ ವಿಠ್ಠಲ | ಪ್ರೀತಿ ಪಾತ್ರನು ಆದ ಪ್ರಾಣ 7
--------------
ಗುರುಗೋವಿಂದವಿಠಲರು
ಪೂರ್ಣರೂಪನೆ ಎನ್ನ ಪೂರ್ಣ ಮನದಲಿ ನಿಂತು ಪೂರ್ಣಗೊಳಿಸಭಿಲಾಷೆಯ ಪ. ಪೂರ್ಣ ಚಂದ್ರನ ಕಾಂತಿ ಪೂರ್ಣಧಿಕ್ಕರಿಸುವೊ ಪೂರ್ಣ ಪ್ರಕಾಶ ಹರಿಯೆ | ನೀ ಪೊರೆಯೊ ದೊರೆಯೆ ಅ.ಪ. ಪೂರ್ಣಕಾಮನೆ ಸ್ವಾಮಿ ಪೂರ್ಣ ಆನಂದ ಸಂ- ಪೂರ್ಣ ಗುಣಗಣನಿಲಯನೆ ಪೂರ್ಣ ಭಕ್ತರದಾತ ಪೂರ್ಣ ಲಕ್ಷ್ಮೀಶಪ್ರೀತ ಪೂರ್ಣಭೋಧರ ವರದನೆ ಪೂರ್ಣ ಪ್ರಕಾಶ ನಿನ್ನ ಕಾಣದೆಲೆ ಕಂಗೆಡುವೆ ಪಾದ ನೀಡೋ 1 ಚಕೋರ ಪೂರ್ಣಚಂದ್ರನೆ ಭಕ್ತಿ ಪೂರ್ಣ ಶರಧಿಗೆ ಚಂದ್ರನೆ ಪೂರ್ಣ ಬಾಧೆಯಪಡುವೆ ಪೂರ್ಣಗೈಸೆನ್ನಭವ ಪೂರ್ಣಚಂದ್ರನೆ ತಾಪಕೆ ಪೂರ್ಣ ನಂಬಿರುವೆನೊ ಪೂರ್ಣದಯವನೆಗರೆಯೊ ಪೂರ್ಣ ಕೃಪೆ ಚಂದ್ರಿಕೆ ಈಗಲೇ | ಬೀರೆನ್ನ ಮೇಲೆ 2 ಪೂರ್ಣಚಂದ್ರನ ವಂಶ ಪಾವನವಗೈಯಲು ಪೂರ್ಣ ಯದುಕುಲದಿ ಜನಿಸಿ ಪೂರ್ಣ ಯುದ್ಧದಲಿ ಗೆಲಿಸಿ ಪೂರ್ಣ ರಾಜ್ಯವನಿತ್ತೆ ಪ್ರಾಣಿ ಹೃದ್ಗುಹವಾಸಿ ಪೂರ್ಣ ಶ್ರೀ ವೆಂಕಟೇಶ | ಶ್ರೀ ಶ್ರೀನಿವಾಸ 3 ಪೂರ್ಣತತ್ವಗಳಿಗೆ ಪೂರ್ಣ ಶಕ್ತಿಯನಿತ್ತು ಪೂರ್ಣಗೊಳಿಸಿದೆ ಸೃಷ್ಟಿಯ ಪೂರ್ಣತತ್ವಾಧಿಪತಿ ಪ್ರಾಣದೇವನ ಪ್ರಿಯ ಪೂರ್ಣ ಭಕ್ತರ ರಕ್ಷಕ ಪೂರ್ಣ ಮನೋರಥದಾತ ಜೀವನಂತರ ವ್ಯಾಪ್ತ ಜ್ಞಾನ ವಿಜ್ಞಾನದಾತ | ಸುಜನರಿಗೆ ಪ್ರೀತ 4 ಪೂರ್ಣ ಭೂಮಂಡಲಕೆ ಪೂರ್ಣ ಪ್ರಭು ನೀನೆಂದು ಪೂರ್ಣಬೋಧರು ನುಡಿವರೊ ಪೂರ್ಣ ದೇವತೆಗಳು ಪೂರ್ಣ ನಿನ್ನನು ಭಜಿಸಿ ಪೂರ್ಣ ಪದ ಪಡೆದಿರುವರೊ ಪೂರ್ಣ ಹರಿ ಗೋಪಾಲಕೃಷ್ಣವಿಠ್ಠಲ ಎನ್ನ ಪೂರ್ಣ ಇಚ್ಛೆಯನೆ ಸಲಿಸೊ | ನೀ ಮನದಿ ನೆಲಸೊ5
--------------
ಅಂಬಾಬಾಯಿ
ಬಾ ಬಾ ರಾಘವ ಬಾ ವೀರ ರಾಘವ ಪ ಮತ್ಸ್ಯರೂಪನಾಗಿ ಹೆಚ್ಚಿದ ದೈತ್ಯನ ಇಚ್ಛೆಯಿಂದಲಿ ಕೊಂದ ಅಚ್ಯುತರಾಯನೆ 1 ಕೂರ್ಮರೂಪನಾಗಿ ಅಮರರಿಗೊಲಿದು ನೀ ಕಾಮಜನಕ ಸುಪ್ರೇಮಾವನಿತ್ಯಂತೆ4 2 ವರಹರೂಪನಾಗಿ ಧರಣಿಯ ಚೋರನ ಶಿರವ ತಂದು ನೀ ಜಗವ ಪೊರೆದ್ಯಂತೆ 3 ದುರುಳ ರಕ್ಕಸನ ಕರುಳ ತೆಗೆದು ನಿನ್ನ ಕೊರಳೊಳಗಿಟ್ಯಂತೆ 4 ಚೆಲುವತನದಿ ಪೋಗಿ ಬಲಿಯದಾನವ ಬೇಡಿ ಕಲುಷ ಹರಿಸಿ ಅವನ ಪಾತಾಳಕ್ಕೊತ್ತಿದ್ಯಂತೆ 5 ಕೊಡಲಿಯ ಪಿಡಿಯುತ ದುಗುಡ ರಾಯರುಗಳ ಸೊ ಗಡು ಮುರಿದು ನೀ ಸಡಗರ ಪಟ್ಯಂತೆ 6 ಸೀತೆಗೋಸ್ಕರ ಪೋಗಿ ಸೇತುವೆಯನೆ ಕಟ್ಟಿ ಭೂತ ರಾವಣನ ಖ್ಯಾತಿಯಿಂದಲಿ ಕೊಂದ 7 ವಾರಿಜಾಕ್ಷಿಯರ ಕೂಡಿ ನೀರಾಟದೊಳು ಪೊಕ್ಕು ನೀರೆಯರ1 ಮನ ಅಪಹಾರಮಾಡಿದ ಕೃಷ್ಣ 8 ಚಿತ್ತಜಪಿತ ನೀನು ಬತ್ತಲೆಯೊಳು ಬಂದು ಉತ್ತಮ ಸ್ತ್ರೀಯರ ವ್ರತಗಳಳಿದ್ಯಂತೆ 9 ಸುಂದರ ವಾಜಿಯ ಚೆಂದಾದಿಂದೇರುತ ಮಂದಗಮನೆಯರ ನಂದವಳಿದ್ಯಂತೆ 10 ದೋಷರಹಿತ ನಮ್ಮ ಶೇಷವಿಠ್ಠಲನೆ ಬ್ಯಾಸರವಿಲ್ಲದೆ ಪೋಷಿಸಿ ಸಲಹಲು 11
--------------
ಬಾಗೇಪಲ್ಲಿ ಶೇಷದಾಸರು
ಭದ್ರ ಮೂಜಗದಂತರ್ಯಾಮಿ ಪ ಸಾರ ಸಾಕ್ಷಿಯರೆಲ್ಲಾ ಮುದ್ದು ಸೀತೆ ಸಹಿತ ಹುವ್ವಿನ ಮಂಚದಿ ಮಲಗಿ ಅ.ಪ ಪೋಗಿ ನಿಮ್ಮಯ ಸದನಗಳಿಗೇ | ಉದಯ ವಾಗೋದು ಬನ್ನಿ ಸನ್ನಿಧಿಗೇ ಯೋಗೀ ಜಾಣರು ಪರಮ ಭಾಗವತೋತ್ತಮರು ಸಾಗಿ ಪೋದರು ನಿಜಾಶ್ರಮಗಳಿಗೆಲ್ಲರು 1 ತುಂಬುರಾ ನಾರದಾದಿಗಳು | ವೀಣೆ ತಂಬೂರಿ ದಿವ್ಯನಾದದೊಳು ಗಂಭೀರಾ ಸ್ವರದಿಂದಾಗಾಯನಗಳ ಮಾಡೆ ಸಂಭ್ರಮದಲಿ ಇತರ ಹಂಬಲ ಮರೆತೀಗ 2 ಹದಿನಾಲ್ಕು ಲೋಕಾವನಾಳಿ | ತಾದ- ಣಿದೆನೆಂದು ಜನರಿಗೆ ಪೇಳಿ ಸದಮಲಾತ್ಮಕ ಶ್ರೀ ಗುರುರಾಮ ವಿಠಲ ನಂ-ಬಿದವರಿಗಭಯವ ಕೊಡುವ ಇಚ್ಛೆಯಿಂದ 3
--------------
ಗುರುರಾಮವಿಠಲ
ಮೋದದಲಿರಬೇಕಮ್ಮ | ಸುಮ್ಮನೆ ನೀನು ಮೋದದಲಿರಬೇಕಮ್ಮ ಪ. ಮೋದ ಶ್ರೀ ಗುರುಗಳ ಚರಣ ಕಮಲವನ್ನು ಮೋದದಿಂದಾಶ್ರಯಿಸಿ ಸುಖದಲಿರಲಿಬೇಕು ಲೋಕದ ಜನಗಳ ನುಡಿಗಳ ಲೆಕ್ಕಿಸದೆ ಲೋಕವಂದ್ಯನ ಚರಣ ಕಮಲವ ಸ್ಮರಿಸುತ ಅ.ಪ. ಪರಮಾತ್ಮನ ಕೃಪೆಗೆ ಕಾರಣವಿದು ಗುರುಕರುಣದ ಬಲವು ಅರಿಯದ ಮನುಜರ ಬಿರುನುಡಿಗೆ ಮನ ಕೊರಗಿಸದಂದದಿ ಹರುಷಪಡಲಿಬೇಕು 1 ಎಚ್ಚತ್ತು ನಡಿಯಬೇಕು | ಶ್ರೀ ಗುರುಸೇವೆ ಇಚ್ಛೆಯಿಂ ಮಾಡಬೇಕು ತುಚ್ಛ ಮಾತುಗಳಿಗೆ ಮನಕೊಡದೆ ಹರಿ ಮೆಚ್ಚುವಂದದಿ ಗುರು ಇಚ್ಛೆಯನರಿತು ನಡೆದು 2 ವಂದನೆ ನಿಂದ್ಯಗಳ | ಮೋಕ್ಷಾರ್ಥಿಯು ಒಂದಾಗಿ ಭಾವಿಸುತ ಮಂದರೋದ್ಧರನ ಮಾಯಕೆ ಮನದಿ ಮೋದಿಸುತ ಮಂದರಂದದಿ ಮನುಜರಿಗೆ ತೋರುತಲಿದ್ದು 3 ಮಾನವ ಜನ್ಮ ಸಾಧನ ಜನ್ಮವಮ್ಮ ಸಾಧಾರಣವಲ್ಲ ಸಾಧು ಸಜ್ಜನಸಂಗ ಸಾಧಿಸಿ ದುಷ್ಕರ್ಮ ಛೇದಿಸಬೇಕಮ್ಮ 4 ಚಿಂತೆಯನಳಿಯಬೇಕು | ಶ್ರೀ ಗುರು ಕರುಣ ಅಂತರ ತಿಳಿಯಬೇಕು ಸಂತತ ಗೋಪಾಲಕೃಷ್ಣವಿಠ್ಠಲನ ಅಂತರಂಗದಿ ಭಜಿಸಿ ಮುಕ್ತಿ ಸಾಧಿಸಬೇಕು 5
--------------
ಅಂಬಾಬಾಯಿ
ಶ್ರೀಪತೀ-ಎನಗೇನು ಗತೀ ನನಗಾಗಲಿ ನಿನ್ನಲಿ ರತೀ ಪ ಚಪಲ ತನದಿ ಬಹು ಕಪಟಭಕುತಿನಟಿಸಿ ಗುಪಿತ ದೋಷಿಯು ಆದೆ ಅ.ಪ. ಬಟ್ಟೆ ನೋಡಲು ಬಹು ಛಂಧ-ಮೇಲೆ ಘಟ್ಟಿ ಬಣ್ಣದ ಕಾವಿ ಶಾಟಿ ಹಾಗೆ ಪಟ್ಟೆಮಡಿಗಳ ಭಾರೀ ಥಳಕೊ-ಬಹಳ ದಟ್ಟ ತುಳಸೀಸರಗಳ ಹೊಳಪೂ ಆಹಾ ಸೃಷ್ಠಿಗೊಡೆಯನೆ ಎನ್ನ ಕೆಟ್ಟ ತನಗಳನ್ನು ಎಷ್ಟೆಂದು ಬಣ್ಣಿಪೆ ನಿಟ್ಟ ನೆನೆಯದೆ ಪರರ ದೃಷ್ಟಿನೋಡುತ ಹಿಗ್ಗಿ ಅಟ್ಟಹಾಸದಿ ಕುಣಿದು ಮಾನವ ನನಗೇ 1 ವೇದ ವಾದಗಳೇನು ಕಾಣೆ-ಶುದ್ಧ ಸಾಧು ಕರ್ಮಗಳೊಂದು ಇಲ್ಲ-ಜನರ ಮೋದಗೋಸುಗವೇನೆ ಎಲ್ಲ_ಕಾಮ ಕ್ರೋಧವ ನಿಬಿಡಿತೇನೇ ಬಿಚ್ಚೆಹೃದಯಾ ಆಹಾ ಮಧ್ವರಾಯರ ಶಾಸ್ತ್ರ ಗ್ರಂಥ ಸಹ ತಿಳಿಯದೆಲೆ ಸಿದ್ಧ ಸಾಧಕನಂತೆ ಸಾಧುಲಿಂಗವ ತೋರಿ ಮುಗ್ಧಗೈಯ್ಯುತ ಮಂದಿ ಮೆದ್ದು ಪಕ್ವಾನ್ನಗಳ ಗೆದ್ದುಕೊಳ್ಳುವೆ ಬಹಳ ದಕ್ಷಿಣೆ ಬಹುಮಾನ 2 ನೇಮನಿಷ್ಠೆಗಳಾಟ ಹೊರಗೆ-ಗೃಹದಿ ಪ್ರೇಮವಿಲಾಸ ಆಟ ಕೂಟಜನ ಸ್ತೋಮರೆಲ್ಲವ ನುಡಿವ ನೀತಿ ಖ್ಯಾತಿ ಕಾಮುಕನಾಗಿ ಚರಿಸಿದೆ ಜಗದೀ ಆಹಾ ಹೇಮದಾಸೆಗೆ ಸೂಳೆ ಪ್ರೇಮವ ತೋರ್ಪಂತೆ ಕಾಮಿತಪ್ರದ ನಿನ್ನ ನಾಮ ಸವಿಯನುಣ್ಣದೆ ತಾಮಸರಿಗೆ ಉಪದೇಶ ನೀಡುತ ಸತ್ಯ- ಭಾಮೆಯರಸ ನಿನಗೆ ದೂರನಾದೆನಲ್ಲಾ 3 ಹಾಡಿಹಾಡುವೆ ಎತ್ತಿ ಸುತ್ತ ಜನರು ನೋಡಿ ಹಿಗ್ಗುತ ಬಾಪು ಬಾಪು ನುಡಿಗೆ ಹಾಡಿನಲ್ಲಿಹ ಸವಿಯುಣ್ಣ ದೇನೆ ಆಡಿ ಆಡಿಪೆ ಶಿರವ ಜ್ಞಾನಿಯಂತೆ ಆಹಾ ಕೇಡು ಚಿಂತಿಸಿ ಪರರ ಸ್ವಾರ್ಥಗೋಸುಗನಿತ್ಯ ಕಾಡಿ ಬೇಡುತ ಜನರ ದೂಡುತಿಹೆ ಸಂಸಾರ ಪ್ರೌಢ ಭಕ್ತರ ಗೋಷ್ಠಿಕೂಡಿ ಭಜಿಸದ ಎನ್ನ ಗಾಢ ಡಂಭಕೆ ಜಗದಿ ಈಡು ಕಾಣಿಸು ಸ್ವಾಮಿ4 ಭಾರಿ ಶಾಲುಗಳನ್ನೆ ಹೊದ್ದು-ನಿತ್ಯ ಕೇರಿಕೇರಿ ಪುರಾಣಗಳನ್ನು ಮೆದ್ದು-ಹಾರಿ ಹಾರುತ ತತ್ವರಾಶಿ ನುಡಿದು-ಊರು ಜ- ನರಮುಂದೆ ಪಾಂಡಿತ್ಯ ತೋರ್ಪೆ ಆಹಾ ತೋರಿ ತೋರುವೆ ಪರಮವೈರಾಗ್ಯ ಭಕ್ತಿಯ ದೂರಿ ದೂಡುವೆ ಪರರ ಹುಳುಕುಗಳನು ಎತ್ತಿ ಪಾರುಗಾಣದ ಕರುಣ ತೋರದಿದ್ದರೆ ಇನ್ನು 5 ಗುಡಿಗೆ ಹೋಗುವೆ ನಾನು-ನಿತ್ಯ ಅಲ್ಲಿ ಬೆಡಗು ಸ್ತ್ರೀಯರ ಹುಡುಕುವುದೇನೆ ಕೃತ್ಯ ದೃಢಭಕುತಿಯನು ಮಾಡಲೊಲ್ಲೆ ಸತ್ಯ-ನ ಮಡದಿ ಮಕ್ಕಳಿಗಿಲ್ಲ ಭೃತ್ಯಾನುಭೃತ್ಯಾ ಆಹಾ ಹುಡುಕೀ ನೋಡಿದಾಗ್ಯೂ ವಿರಕ್ತಿ ಭಕ್ತಿಗಳಿಲ್ಲ ಬಿಡಲು ಪೊರೆಯೆ ಪುರಾಣಶಾಸ್ತ್ರಗಳನ್ನು ನಿತ್ಯ ಎನ್ನ ಅನಾದಿ ನೀ ಕಲಿಸದಿದ್ದರೆ ಈಗ 6 ದೊಡ್ಡ ಪಂಡಿತ ನಾನೆಂಬ ಹೆಮ್ಮೆ-ಶುದ್ಧ ದಡ್ಡನೆಂಬುದ ಬಲ್ಲೆ ಮನದಿ-ಹಾಗೂ ಅಡ್ಡ ಬೀಳೆನು ಭಕ್ತ ಗಣಕೆ ಸುಳ್ಳು ವೊಡ್ಡುತವರನು ಹಳಿದೂ-ಕುದಿದೇ ಮನದೀ ಆಹಾ ದುಡ್ಡುಗೋಸುಗ ಬಹಳ ದೊಡ್ಡ ದಾಸನು ಎನಿಸೀ ಹೆಡ್ಡಮಂದಿಯ ಮುಂದೆ ದೊಡ್ಡ ಭಾಷಣ ಮಾಳ್ವೆ ಗುಡ್ಡದೊಡೆಯನೆ ಭಕ್ತಜಿಡ್ಡುಲೇಶವು ಕಾಣೆ ದೊಡ್ಡ ನಾಮವ ಹಾಕಿ ಸಡ್ಡೆ ಮಾಡದೆ ತಿರಿವ 7 ಕಚ್ಚಿ ಬಿಡದಿಹ ತುಚ್ಛ ಕಲಿಯು-ಬಹಳ ಮೆಚ್ಚಿ ಬಂದಿಹ ನವನು ಬಿಡುವನೇನು ಇಚ್ಛೆ ನನ್ನದು ನಡೆಯದೇ ನೊಂದು ತುಚ್ಛ ವಿಷಯದಿ ಸೆಳೆದು ಸೆಳೆಯುತಿಹನು ಆಹಾ ಇಚ್ಛೆಯಿಂದಲಿ ಜಗವ ಸೃಜಿಸಿ ಪಾಲಿಪಲೀಲೆ ಹಚ್ಚಿಕೊಂಡಿಹ ನಿನಗೆ ನನ್ನ ಪಾಲಿಪುದೇನು ಹೆಚ್ಚು ಕಾರ್ಯವೆ ಜೀಯ ಮುಚ್ಚಿಕೊಂಡಹ ನಿನ್ನ ಸ್ವಚ್ಛ ಬಿಂಬವ ತೊರಿ ಮೆಚ್ಚಿ ಕೊಡದಿರೆ ಜ್ಞಾನ 8 ಶ್ವಾಸಮತದಲಿ ಜನ್ಮ ವಿತ್ತೆ-ವಿಜಯ ದಾಸರ ಪ್ರಿಯ ಮೋಹನ್ನ ಪರಂಪರೆಯ ದಾಸನೆನಿಸಿ ಯೆನ್ನ ಮೆರೆಸಿ ಹೀಗೆ ದೋಷಿಗೈವುದು ಥರವೆ ಶ್ರೀಭಕ್ತಪ್ರಿಯ ಆಹಾ ವಾಸುದೇವನೆ ತುರ್ಯಲೇಸು ದೃಷ್ಟಿಯ ಬೀರೆ ನಾಶವಾಗದೆ ದೋಷ ಭಾಸವಾಗದೆ ಜ್ಞಾನ ಕಾಸುಬೀಡೆನು ಹಿರಿಯ ದಾಸರ ಗುಣ ನೋಡಿ ಲೇಸು ನೀಡೆಂತೆಂಬೆ ಶ್ರೀಕೃಷ್ಣವಿಠಲಾ9
--------------
ಕೃಷ್ಣವಿಠಲದಾಸರು
ಸತ್ರಾಜಿತ ಕುಮಾರಿ ಗೃಹಕೆ ಪಕ್ಷಿವಾಹನ ತನ್ನ ಅಚ್ಛದ ಸತಿಯ ಕಾರಣನೆಲ್ಲೂ ಭಾಮೆ ಇಚ್ಛೆಯಿಂದಲಿ ಬಂದನಿಲ್ಲೆ 1 ಮಚ್ಛಲೋಚನೆ ನಗುತ ಅಚ್ಚಮುತ್ತಿನ ದ್ವಾರ್ಯ ಮುಚ್ಚುಕದವ ತೆಗೆಯದೆ ಭಾಮೆ ಅಚ್ಚುತನ ಕೂಡ ವಿನಯದಿ 2 ಮದಗಜಗಮನೆ ಕೇಳೆ ಗಜವರದನು ನಾನೆ ಕದವ ತೆಗೆಯೆ ಕಮಲಾಕ್ಷಿ ಭಾಮೆ ಮುದದಿ ನೋಡೆನ್ನ ನಿರೀಕ್ಷೆ 3 ಗಜವರದನೆ ಗಜವ ವಧೆ ಮಾಡಿದವನು ನಿನ್ನ ನೆಲೆಯ ಬಲ್ಲವರು ನಾವಲ್ಲ ಕೃಷ್ಣ ಕದವ ತೆಗೆಯೋರ್ಯಾರಿಲ್ಲ4 ಉದಕÀದೊಳು ಮುಣುಗಿ ಬ್ಯಾಗ ಮದಕದಿಂದ್ಹಯನ ಕೊಂದು ತವಕದಿ ವೇದವ ತಂದೆ ನಾನು ಭಾಮೆ ಮತ್ಸ್ಯ ನಾನೆ 5 ಹೊಳೆವೊ ಮತ್ಸ್ಯನಾದರೆ ಶರಧಿ ಹುಡುಕುತ ಹೋಗೊ ನಿನಗಾವಾಸಸ್ಥಾನಯಿದಲ್ಲ ಕೃಷ್ಣ ಜಲವೆನ್ನ ಮನೆಯೊಳಗಿಲ್ಲ 6 ಅಂಬುಧಿ ಮಥಿಸಿ ಅಮೃತ ತಂದು ಸುರರಿಗಿಟ್ಟು ಮಂದರವ ಬೆನ್ನಲಿ ತಾಳಿದೆನೆ ಭಾಮೆ ಸುಂದರ ಕೂರ್ಮನು ನಾನೆ 7 ಸುರರಸುರರ ಯುದ್ಧ ಬಿಟ್ಟು ಮೋಹಿನ್ಯಾಗಲ್ಲಿ ನಡೆ ನಾ ಸ್ತ್ರೀರೂಪ ನೋಡೋಳಲ್ಲ ಕೃಷ್ಣ ಛಲದಿಂದ್ವಂಚಿಸು ಹೋಗವರನೆಲ್ಲ 8 ಮಣ್ಣು ಕೆದರುತಲ್ಹೋಗ್ಹಿ- ರಣ್ಯಾಕ್ಷನ್ನ ಸೀಳಿ ಮನ್ನಿಸ್ಯವನಿಯ ತಂದೆ ನಾನೆ ಭಾಮೆ ವರಾಹ ನಾ ಬಂದೀನೆ 9 ವರಾಹ ನೀನಾದರೆ ಗರಿಗಂಹರವ ಸೇರೊ ಮನೆಗೆ ಬರುವೋದುಚಿತಲ್ಲ ಕೃಷ್ಣ ಮೆಲುವ ಬೇರೆನ್ನ ಮನೆಯೊಳಿಲ್ಲ 10 ತರಳ ಕರೆಯಲು ಕಂಬ ಒಡೆದಸುರನ ಒಡಲ ಕಡು ಕೋಪವನ್ನು ತಾಳಿದನೆ ಭಾಮೆ ವರಲಕ್ಷ್ಮೀನರಸಿಂಹ ನಾನೆ 11 ಕರುಳಾಧಾರಕ ಕೇಳೊ ಕರಾಳವದನಕ್ಕಂಜುವೆನು ಕಡುಕೋಪ ಎನ್ನೊಳು ತರವಲ್ಲ ಕೃಷ್ಣ ತರಳರಂಜುವರು ಲಕ್ಷ್ಮೀನಲ್ಲ 12 ಅಂಜೋದ್ಯಾತಕೆ ಚಿಕ್ಕ ಕÀಂದ ವಟುವು ಚೆಲ್ವ ಸುಂದರ ವಾಮನನು ನೋಡೆ ಭಾಮೆ ಬಂದೆನ್ನ ಗುಣವ ಕೊಂಡಾಡೆ 13 ಕಪಟ ರೂಪದಿ ದಾನ ತ್ರಿಪಾದ ಭೂಮಿ ಬೇಡಿದ ವಿಪರೀತ ಮಾಯವ ಕಂಡವಳಲ್ಲ ಕೃಷ್ಣ ಅಪರ್ಮಿತ ಗುಣ ಬಲಿ ಬಲ್ಲ 14 ಸರಸಿಜಮುಖಿ ಕೇಳೆ ನಿರುತ ಜಪತಪಾಚರಿಸಿ ಪರಶುರಾಮನು ನಾ ಬಂದೆನೆ ಭಾಮೆ ಶರಥ ಮಾಡದಿರೆನ್ನೊಳು ನೀನೆ 15 ನಿರುತ ನಿಷ್ಠೆಯ ಬಲ್ಲೆ ಗುರುತು ಮಾತೆಯ ಕೊಂದೆ ಸರಸವಾಡುವೋಳು ನಾನಲ್ಲ ಕೃಷ್ಣ ಶರಥÀ ಕ್ಷತ್ರಿಯರಲ್ಲಿದು ಹೋಗೆಲ್ಲ 16 ಎರಡೈದು ಶಿರಗಳ ಕಡಿದು ಜಾನಕಿದೇವಿ ಒಡಗೊಂಡಯೋಧ್ಯವನಾಳಿದೆನೆ ಭಾಮೆ ಪೊಡವಿಗೊಡೆಯ ರಾಮ ನಾನೆ 17 ಅಡವಿ ಅರಣ್ಯ ತಿರುಗಿ ಮಡದಿಗಪನಿಂದ್ಯವ ಕಟ್ಟಿ ಅಡವಿಗಟ್ಟ್ಯಂತಃಕರಣವಿಲ್ಲ ಕೃಷ್ಣ ಬಿಡು ನಿನ್ನ ಸುಳ್ಳು ವಚನವಿದೆಲ್ಲ 18 ಯದುವಂಶದೊಳು ಜನಿಸಿ ವಧೆಮಾಡಿ ದೈತ್ಯರ ನಿರ್ಭಯದಿಂದ ಬೆಳೆದೆನೆ ಭಾಮೆ ಮಧು ಮುರಾಂತಕÀ ಕೃಷ್ಣ ನಾನೆ 19 ಕಲಹ ಮಾಡುತ ಕಾಲ- ಯಮನಿಂದಲೋಡಿ ಬಂದು ನಿರ್ಭಯದಿಂದ ಬೆಳೆಯಲು ನಿಂದೆಲ್ಲ ಕೃಷ್ಣ ಮಲಗಿದ ಮುಚುಕುಂದ ಬಲ್ಲ 20 ನಿಗಮ ನಿಂದ್ಯವ ಮಾಡಿ ಬಗೆಯಿಂದ ತ್ರಿಪುರರ ಚೆದುರೆಯರನು ಒಲಿಸಿದೆನೆ ಭಾಮೆ ಸುಗುಣ ಶರೀರ ಬೌದ್ಧ ನಾನೆ 21 ತ್ರಿಪುರ ಸತಿಯರನೆಲ್ಲ ವಶಮಾಡಿದಂಥ ಶೂರ ವಸನರಹಿತಾಗಿ ತಿರುಗೋದÀಲ್ಲ ಕೃಷ್ಣ ಶಶಿಮುಖಿಯರು ನಗುವರೆಲ್ಲ 22 ಚೆಲುವ ತುರುಗನೇರಿ ಹೊಳೆವೋ ಕತ್ತಿಯ ಶೂರ ಖಳರ ಮರ್ದನ ಮಾಡುವೆನೆ ಭಾಮೆ ಥಳಥಳಿಸುವ ಕಲ್ಕ್ಯ ನಾನೆ23 ಕಲಿಯ ಸಂಹಾರ ಕೇಳೊ ನಿನ್ನ ಕತ್ತಿಗಂಜುವರ್ಯಾರೊ ಕಟಿಪಿಟ್ಯೆನ್ನೊಳು ತರವಲ್ಲ ಕೃಷ್ಣ ಕಲಿಗಳೆನ್ನರಮನೆಯೊಳಿಲ್ಲ 24 ಜಾಂಬವಂತನ್ನ ಗೆದ್ದು ತಂದೆ <
--------------
ಹರಪನಹಳ್ಳಿಭೀಮವ್ವ
ಸಮೀರನ ಮಹಿಮೆ ಪೇಳುವೆವಾಸುದೇವ ವಿಧೀರ ಮುಖಸುರರಾಶಿತಸ್ತ್ರೀ ಮುನಿಯತೀಶ ಸು-ದಾಸರಭಿ ನಮಿಪೆ ಪ ವಾರಿಧಿಯನು ದಾಟುಲೋಸುಗಶ್ರೀ ರಮೇಶನ ನಮಿಸಿ ಗಿರಿಯನುಚಾರು ಚರಣದಿ ಮೆಚ್ಚಿ ಮೇಲಕೆ ಹಾರಿದನು ಹನುಮಾ 1 ಹರಿಯ ಬಲವನು ಸರಿಸಿ ಪೋದುವುತರುಗಳಬ್ಧಿಯು ಯಾದಸಂಗಳುಶರಧಿ ತಳಗತ ಕಪಿಯಗೋಸುಗಗಿರಿಯು ಎದ್ದಿಹನು 2 ಧರಣಿಧರ ಪಕ ನಾಶ ಕಾಲದಿಮರುತ ರಕ್ಷಿತ ಪಕ್ಷ ಹೈಮನುಶರಧಿ ಭೇದಿಸಿ ಹನುಮ ವಿಹೃತಿಗೆತ್ವರದಿ ಬಂದಿಹನು 3 ಪರಮ ಪೌರುಷ ಬ ಲನು ಕಪಿವರಚರಿಸದಲೆ ವಿಶ್ರಮವನದರೊಳುಹರುಷದಿಂದಪ್ಯವನ ಕಂಡನುಉರಗ ಮಾತೆಯನು 4 ಸುರಸೆಯೆಂಬುವ ನಾಗಮಾತೆಗೆವರವ ನೀಡುತ ಕಪಿಯ ಬಲವನುಅರಿಯಲೋಸುಗ ಕಳುಹಿಸೀದರುಸುರರು ಶರಧಿಯಲಿ 5 ಯಾವ ವಸ್ತುವ ತಿನ್ನೋ ಇಚ್ಛೆಯು ೀವಿ ನಿನಗಾಗುವದೊ ಅದು ತವಬಾಯಿಗನ್ನಾಗಿರಲಿ ಎಂದರುದೇವತೋತ್ತುಮರು 6 ಸುರರ ವರವನು ಕಾಯೊಗೋಸುಗಸುರಸೆ ಮುಖದೊಳು ಹೊಕ್ಕು ಹೊರಡುತಪರಮಮಣು ರೂಪದಲಿ ದಿವಿಜರಹರುಷ ಬಡಿಸಿದನು 7 ಅಸುವರಾತ್ಮಜನುರು ಪರಾಕ್ರಮಹೃಷಿತರಾಗುತ ನೋಡಿ ದಿವಿಜರುಕುಸುಮವೃಷ್ಟಿಯ ಮಾಡುತವನಲಿಯಶಸು ಪಾಡಿದರು 8 ಛಾಯಾ ಪ್ರಾಣಿಗಳನ್ನು ಹಿಡಿಯುವಮಾಯಾ ಸಿಂಹಕೆ ನಾಮ ಕಸುರಿಯವಾಯುಸುತ ನೋಡಿದನು ಎದುರೆ ವಿಹಾಯ ಮಾರ್ಗದಲಿ 9 ವಿಧಿಯು ಲಂಕೆಯ ಕಾಯಲೋಸುಗಸುತಿಗ್ವರಗಳನಿತ್ತು ಕಾದಿಹಾಮದದಿ ಅಸುರಿಯು ತನ್ನ ಛಾಯವವದಗಿ ಪಿಡಿದಿಹಳು 10 ಆಗ ಆಕೆಯ ಪೊಕ್ಕು ಪೊಟ್ಟೆಯಯೋಗದಿಂದಲಿ ಪಾವಮಾನಿಯುಬೇಗ ಬಂದನು ಹೊರಗೆ ತತ್ತನುಭಾಗ ಮಾಡುತಲೆ 11 ಆತ್ಮಬಲವಮಿತೆಂದು ತೋರಿವಿಧಾತೃ ವರವುಳ್ಳವಳ ಕೊಲ್ಲುತವಾತನಂತೆ ತ್ರಿಕೂಟ ಪರ್ವತಕೀತ ಹಾರಿದನು 12 ಬೆಕ್ಕಿನಂದದಿ ಹನುಮ ತನ್ನಯಚಿಕ್ಕ ರೂಪವ ಮಾಡಿ ಲಂಕೆಯಪೊಕ್ಕು ನಿಶಿಯಲಿ ಮಧ್ಯಮಾರ್ಗದಿರಕ್ಕಸಿಯ ಕಂಡಾ 13 ಬಟ್ಟಿಯಲಿ ಬಂದಡ್ಡಗಟ್ಟುವದುಷ್ಟ ರಾಕ್ಷಸೀಯನ್ನು ಗೆಲ್ಲುತಮುಷ್ಟಿಯಿಂದಲಿ ಹೊಡೆದು ಲಂಕಾಪಟ್ಟಣವ ಪೊಕ್ಕಾ 14 ಪುರದ ಹೊರಗೊಳಗ್ಹೊಕ್ಕು ರಾಮನತರುಳೆ ಕಾಣದೆ ಹನುಮ ಶಿಂಶುಪತರುನ ಮೂಲದಿ ಕಂಡ ಸೀತೆಯಉರುತರಾಕೃತಿಯಾ 15 ನರಜನಂಗಳ ಮೋಹ ಮಾಡುವಪರಮ ಪುರುಷನ ಚೇಷ್ಟೆಗಳನನುಸರಿಸಿ ನಡೆಯುವ ದೇವಿ ಚರಿಯನುಸರಿಸಿ ಚೇಷ್ಟಿಸಿದಾ 16 ರಾಮನಿಂದಲಿ ಅಂಗುಲಿಯನುಪ್ರೇಮದಿಂದಲಿ ಕೇಸರಿಯ ಸುತಾಭೂಮಿ ಜಾತೆಗೆ ಕೊಟ್ಟು ಸುಖಿಸಿದಾನಾಮ ಹದ್ದನದಿ 17 ರುಚಿ ನೀಡಿದವು ರಾವಣನ್ಹರಣ ಕಾಲದಲಿ 18 ಧರಣಿದೇವಿಯ ಸುತೆಯ ತನ್ನಯಪರಮ ಚೂಡಾಮಣಿಯನಿತ್ತಳುಗುರುತು ತೋರಿಸು ರಾಮದೇವಗೆಮರುತಾ ಸುತನೆಂದು 19 ಸೀತೆ ಹನುಮರದೀ ವಿಡಂಬನಯಾತು ಧಾನರಿಗಲ್ಲಾ ನಾಕಗಭೂತ ವಿಡಂಬನ ಧೈತ್ಯವಂಚನಹೇತು ಆಗುವದು 20 ಇಂಥ ಕಾರ್ಯವ ಮಾಡಿ ತನ್ನಯಾನಂಥ ಪೌರುಷ ಪ್ರಕಟ ಮಾಡುವದಿಂತು ಮನವನು ಮಾಡಿದನು ಮತಿವಂತ ವಾನರನು 21 ಚಾರು ಶಿಂಶುಪ ಬಿಟ್ಟು ರಾಕ್ಷಸವಾರ ವಳಿಸುವ ಮನದಿ ಹನುಮನುಭೂರಿವನವನು ಮುರಿದು ಲಂಕೆಯತೋರಣೇರಿದನು 22 ಭೃತ್ಯ ಜನರಿಗೆಕಟ್ಟಿ ಹಾಕಿರಿ ಕಪಿಯನೆಂದನುರುಷ್ಟನಾಗುತಲೆ 23 ಹರನ ವರದಲಿ ಮರಣ ವರ್ಜಿತಸರವ ಭೃತ್ಯರು ರಾಕ್ಷಸೇಶನಮರುತ ಸೂನುನ ಮೇಲೆ ಬಂದರುಪರಮ ವೇಗದಲಿ 24 ಹತ್ತು ಒಂದು ಕೋಟಿ ಯೂಥವತತ್ಸಮಾನ ಪುರಃ ಸರಾನ್ವಿತಎತ್ತಿ ಆಯುಧ ಸೈನ್ಯ ಹನುಮನಸುತ್ತಿಕೊಂಡಿಹುದು 25 ಹಿಡಿದು ಕರದಲಿ ಆಯುಧಂಗಳಹೊಡೆವ ಸೈನ್ಯವ ನೋಡಿ ಹನುಮನುಹೊಡೆದು ಕರತಳದಿಂದಲೆಲ್ಲರಪುಡಿಯ ಮಾಡಿದನು 26 ನೀಲಕಂಠನ ವರಗಿರಿಪ್ರಭಏಳುಮಂದಿಯ ಮಂದಿ ಪುತ್ರರಕಾಲಿನಿಂದಲಿ ಒದ್ದು ಕೆಡಹಿದನಾಳು ಮಾಧವನಾ 27 ಧುರದಿ ಮುಂಭಾಗದಲಿ ಪೋಗುವಗರುವ ಮಾಡುವ ರಾಕ್ಷಸಂಗಳಮುರಿದು ಸೈನ್ಯದ ತೃತೀಯ ಭಾಗವಹರಿಯು ಕೊಂದಿಹನು 28 ಪೋರ ಬಲವನು ಕೇಳಿ ಹನುಮನಚಾರ ಮುಖದಲಿ ಸ್ವಾತ್ಮ ಸದೃಶರುಮಾರ ಕಾಕ್ಷಾಭಿಧನ ಕಳುಹಿದ ವೀರ ರಾವಣನು 29 ಉತ್ತುಮಾಸ್ತ್ರಗಳಿಂದ ಮಂತ್ರಿತವೆತ್ತಿ ಬಾಣಗಳ್ಹೊಡೆದು ಹನುಮನಕೆತ್ತಿ ಹಾಕಲು ಅಕ್ಷ ಸಾಲದೆಶಕ್ತಿ ನಿಂತಿಹನು 30 ಮಂಡ ಮಧ್ಯೆಯ ತನಯ ಅಕ್ಷನುಪುಂಡ ರಾವಣ ಸಮನು ಸೈನ್ಯದಹಿಂಡಿನೊಳು ತೃತೀಯಾಂಶ ಯಂದುದ್ದಂಡ ಚಿಂತಿಸಿದಾ 31 ಹತ್ತು ತಲೆಯವನನ್ನೆ ಕೊಲ್ಲುವದುತ್ತಮಾತ್ಮವು ಆದರೀತನುತುತ್ತು ರಾಮಗೆ ಕಾರಣಿಂಥಾಕೃತ್ಯ ಥರವಲ್ಲಾ 32 ಇಂದ್ರಜಿತನನು ನಾನು ಈಗಲೆಕೊಂದು ಹಾಕಿದರಿವನ ಕೃತಿಗಳಛಂದ ನೋಡುವುದಿಲ್ಲಾ ಕಪಿಗಳವೃಂದ ಯುದ್ಧದಲಿ 33 ತತ್ಸಮಾಗಿಹ ಮೂರನೆಯವನ್ಹತ್ಯೆ ಮಾಡುವೆನೆಂದು ಹನುಮನುಚಿತ್ತದಲಿ ಚಿಂತಿಸುತ ತತ್ವದ ವೆತ್ತಿ ಹಾರಿದನು 34 ತಿರುಹಿ ಚಕ್ರದ ತೆರನೆ ರಾಕ್ಷಸರರಸೀನಾತ್ಮಜನನ್ನು ಕ್ಷಣದಲಿಧರಿಯ ಮೇಲಪ್ಪಳಿಸಿ ಒಗೆದನುಮರುತನಾತ್ಮಜನು 35 ಹನುಮನಿಂದಲಿ ತನ್ನ ಕುವರನುಹನನ ಪೊಂದಲು ನೋಡಿ ರಾವಣಮನದಿ ಶೋಕಿಸುತಾತನಣ್ಣನರಣಕೆ ಕಳುಹಿದನು36 ಇಂದ್ರಜಿತು ಪರಮಾಸ್ತ್ರಯುತ ಶರವೃಂದದಲಿ ಹೊಡೆದು ಹನುಮನಹಿಂದಕಟ್ಟಲು ಶಕ್ತಿ ಸಾಲದೆನಿಂದು ಚಿಂತಿಸಿದಾ 37 ಸರವ ದುಃಸಹವಾದ ಬ್ರಹ್ಮನಪರಮಮಸ್ತ್ರವ ಬಿಡಲು ರಾವಣಿಹರಿಯು ವ್ಯಾಕುಲನಾಗದಲೆ ಈಪರಿಯ ಚಿಂತಿಸಿದಾ 38 ವಾಣಿನಾಥನ ಎಷ್ಟೊ ವರಗಳನಾನು ಮೀರಿದೆ ದುಷ್ಟ ಜನದಲಿಮಾನಿನೀಯನು ಕಾರಣಾತನಮಾನ ಮಾಡುವೆನು 39 ದುಷ್ಟ ರಾಕ್ಷಸರೆಲ್ಲ ಎನ್ನನುಕಟ್ಟಿ ಮಾಡುವದೇನು ಪುರಿವಳಗಿಷ್ಟು ಪೋಗಲು ರಾಕ್ಷಸೇಶನಭೆಟ್ಟಿಯಾಗುವದು 40 ಹೀಗೆ ಚಿಂತಿಸಿ ಹನುಮನಸ್ತ್ರಕೆಬಾಗಿ ನಿಲ್ಲಲು ಅನ್ಯ ಪಾಶಗಳಾಗೆ ಬಿಗಿದರು ಬ್ರಹ್ಮನಸ್ತ್ರವುಸಾಗಿತಾಕ್ಷಣದಿ 41 ಕಟ್ಟಿ ಕಪಿಯನು ರಾಕ್ಷಸೇಶನ ಭೆಟ್ಟಿಗೊಯ್ಯಲು ಆತನೀತನದೃಷ್ಟಿಯಿಂದಲೆ ನೋಡಿ ಪ್ರಶವನೆಷ್ಟೊ ಮಾಡಿದನು 42 ಕಪಿಯೆ ನೀನು ಕುತೋಸಿ ಕಸ್ಯವಾಕೃತಿಯ ಮಾಡಿದಿ ಯಾತಕೀಪರಿಕಿತವ ಕೇಳಲು ರಾಮನೊಂದಿಸಿ ಚತುರ ನುಡಿದಿಹನು 43 ಹೀನ ರಾವಣ ತಿಳಿಯೇ ಎನ್ನನು ಮಾನವೇಶ್ವರ ರಾಮದೂತನುಹಾನಿಮಾಡಲು ನಿನ್ನ ಕುಲವನುನಾನು ಬಂದಿಹೆನು 44 ಜಾನಕೀಯನು ರಾಮದೇವಗೆಮಾನದಿಂದಲಿ ಕೊಡದೆ ಹೋದರೆಹಾನಿ ಪೊಂದುವಿ ಕೇಳೊ ನೀ ನಿಜಮಾನವರ ನೀ ಕೂಡಿ 45 ಶಕ್ತರಾಗರು ಸರ್ವ ದಿವಿಜರುಮತ್ರ್ಯನಾತನ ಬಾಣ ಧರಿಸಲುಎತ್ತೋ ನಿನಗಿವಗಿನ್ನು ಧರಿಸಲುಹತ್ತು ತಲೆಯವನೆ 46 ಸಿಟ್ಟು ಬಂದರೆ ಆತನೆದುರಿಲಿಘಟ್ಟಿನಿಲ್ಲುವನಾವ ರಾಕ್ಷಸಇಷ್ಟು ಸುರದಾನವರೊಳಾತನದೃಷ್ಟಿಸಲು ಕಾಣೆ 47 ಇಂಥಾ ಮಾತನು ಕೇಳುತಾತನಅಂತ ಮಾಡಿರಿಯನ್ನೆ ವಿಭೀಷಣಶಾಂತ ಮಾಡಲು ಪುಚ್ಛ ದಹಿಸಿರಿಯಂತ ನುಡಿದಿಹನು 48 ಅರಿವೆಯಿಂದಲಿ ಸುತ್ತಿ ಬಾಲಕೆಉರಿಯನ್ಹಚ್ಚಲು ಯಾತುಧಾನರುಮರುತ ಮಿತ್ರನು ಸುಡದೆ ಹನುಮಗೆಹರುಷ ನೀಡಿದನು 49 ಯಾತುಧಾನರು ಮಾಡಿದಂಥಪಘಾತವೆಲ್ಲವ ಸಹನ ಮಾಡಿದವಾತಪೋತನು ಲಂಕೆ ದಹಿಸುವಕೌತುಕಾತ್ಮದಲಿ 50 ತನ್ನ ತೇಜದಿ ವಿಶ್ವಕರ್ಮಜಘನ್ನಪುರಿಯನು ಸುಟ್ಟು ಬಾಲಗವನ್ಹಿಯಿಂದಲೆ ಸರ್ವತಃ ಕಪಿಧನ್ಯ ಚರಿಸುತಲೆ 51 ಹೇಮರತ್ನಗಳಿಂದ ನಿರ್ಮಿಸಿದಾಮಹಾ ಪುರಿಯನ್ನು ರಾಕ್ಷಸಸ್ತೋಮದಿಂದಲಿ ಸಹಿತ ಸುಟ್ಟುಸುಧಾಮ ಗರ್ಜಿಸಿದಾ 52 ಹನುಮಸಾತ್ಮಜ ರಾಕ್ಷಶೇಶನತೃಣ ಸಮಾನವ ಮಾಡಿ ನೋಡಲುದನುಜರೆಲ್ಲರ ಭಸ್ಮ ಮಾಡುತಕ್ಷಣದಿ ಹಾರಿದನು 53 ಕಡಲ ದಾಟುತ ಕಪಿಗಳಿಂದಲಿಧಡದಿ ಪೂಜಿತನಾಗಿ ಮಧುವನುಕುಡಿದು ರವಿಜನ ವನದಿ ರಾಘವನಡಿಗೆ ಬಂದಿಹನು 54 ಸೀತೆ ನೀಡಿದ ಚೂಡಾರತ್ನವನಾಥನಂಘ್ರಿಯೊಳಿತ್ತು ಸರ್ವಶಗಾತ್ರದಿಂದಲಿ ನಮಿಸಿ ರಾಮಗೆಶಾತ ನೀಡಿದನು 55 ರಾಮನಾದರು ಇವಗೆ ನೀಡುವಕಾಮ ನೋಡದೆ ಭಕ್ತಿಭರಿತಗೆಪ್ರೇಮದಿಂದಲಿ ಅಪ್ಪಿಕೊಂಡನುಶ್ರೀ ಮನೋಹರನು 56 ಇಂದಿರೇಶನೆ ಎನ್ನ ಚಿತ್ತದಿನಿಂದುಮಾಡಿದ ನೀಸುಕವನವನಿಂದು ಭಕ್ತಿಲಿ ತತ್ಪುದಾಂಬುಜದ್ವಂದ್ವಕರ್ಪಿಸುವೆ 57 ಇತಿ ಶ್ರೀ ಸುಂದರ ಕಾಂಡಃ ಸಮಾಪ್ತಃ (ಪ್ರಾಕೃತ)ಶ್ರೀ ಗುರುವರದ ಇಂದಿರೇಶಾರ್ಪಣಮಸ್ತು ನೋಡುವೆನು ನೋಡುವೆನು ತೋರಿಸುನಿಮ್ಮ ನೋಡುವೆ ಪ ನೋಡುವೆ ಮಾಡು ದಯ ಎನ್ನೊಳುರೂಢಿಯೊಳಗೆ ನಿಮ್ಮ ಪಾಡುತ ಮಹಿಮೆ ಅ.ಪ. ಮದನ ಜನಕನೊಳು ಕದನ ಮಾಡಿದ ದು-ರ್ಯೋಧನನ ಶಿರದೊಳಿಟ್ಟ ಪದುಮ ಪಾದಗಳನು 1 ನೂರುಗಾವುದ ಜಲ ಹಾರುವಾಗಲೆ ದಿವ್ಯಭೂರುಹ ಕೆಡದಿಹ ಊರುಗಳನ್ನು ಸ್ವಾಮಿ 2 ಕೆಟ್ಟ ಬಕನ ಕೊಂದು ಅಷ್ಟು ಅನ್ನವನುಂಡಹೊಟ್ಟಿ ನೋಡುವೆ ದಿವ್ಯ ದೃಷ್ಟಿ ನೀಡಿರಿ ಸ್ವಾಮಿ 3 ಭೂಮಿ ಸುತೆಯ ವಾರ್ತೆ ರಾಮನು ಕೇಳಿದಾಪ್ರೇಮಾಲಿಂಗನವಿತ್ತ ಆ ಮಹಾವುರವನ್ನೆ 4 ಮದಗಜಗಳ ಕೂಡ ಕದನ ಮಾಡಿದ ದಿವ್ಯಗದೆಯ ಪಿಡಿದ ಕರವದು ಮಗಳನು ಸ್ವಾಮಿ 5 ಅಜಗರ ನಹುಷನ ವಿಜಯ ಸಹೋದರ ಪದುಮನಾಭನ ಗುಣಮುದದಿ ಸಾರುತ ದೈತ್ಯ ಕದನಗೆಳೆದ ನಿನ್ನ ವದನಕಮಲವನ್ನು 6 ವೇದ ಶಾಸ್ತ್ರಗಳನ್ನು ಓದಿ ಹೇಳುತ ಶಿಷ್ಯಮೋದಗರೆವ ನಿನ್ನ ವಾಣಿ ಸ್ವಾದು ಕೇಳುವೆ ನಿನ್ನ 7 ಇಂದಿರೇಶನ ದಯದಿಂದ ಗೆಲಿದಿ ಇಪ್ಪ-ತ್ತೊಂದು ಮತವ ಆನಂದ ತೀರ್ಥರೆ ನಿಮ್ಮ 8
--------------
ಇಂದಿರೇಶರು
ಹಚ್ಚಡವಗೆಯ ಬೇಕಮ್ಮಾ | ಬಹುಕೊಳೆ ಮುಚ್ಚಿ ಕೊಂಡಿಹುದು ನೋಡಮ್ಮಾ ಪ. ಸ್ವಚ್ಛವ ಮಾಡುತ ಅಚ್ಯುತನಂಘ್ರಿಗೆ ಬೆಚ್ಚಗೆ ಹೊದಿಸಲು ಇಚ್ಛೆಯ ಮಾಡುತ ಅ.ಪ. ಏಳು ಪದರವಿಹುದೊ | ಬಹು ಕಾಲದಿಂ ಬಾಳುತ ಬಂದಿಹುದೂ ಕಾಲಕಾಲಕೆ ಬದಲಾವಣೆ ಪೊಂದುತ ಬೀಳುತೇಳುತ ಬೆನ್ನು ಬಿಡದಿರುತಿಹುದೊ 1 ಹೊರಗಡೆ ನವ ದುರ್ಗಂಧಾ | ಒಳಗಡೆ ಇನ್ನು ಅರುಹಲಾರದ ಕಲ್ಮಷಾ ಸುರರೆಲ್ಲ ಇದಕಿನ್ನು ಸರಿ ಇಲ್ಲವೆಂಬೋರು ಮರುತಾಂತರ್ಯಾಮಿಗೆ ಸರಿತೋರುವಂದದಿ 2 ಎಪ್ಪತ್ತೆರಡು ಸಾಸಿರಾ | ನೂಲುಗಳಿಂದ ವಪ್ಪಾಗಿ ಹೊಲಿದ ಪಾರ ಕಪ್ಪು ಕೆಂಪು ಬಿಳಿ ವಪ್ಪೆ ಬಣ್ಣಗಳಿಂದ ಸರ್ಪಶಯನ ಸತತ ಸಲಹಿ ಕೊಡುವಂಥ 3 ನಿರ್ಮಲೋದಕವ್ಯಾವುದೇ | ಇದನೊಗೆಯಲು ಸಮ್ಮತ ಶಿಲೆಯಾವುದೇ ಬೊಮ್ಮನೈಯ್ಯನ ಸುಜ್ಞಾನ ಸುಕೊಳದೊಳು ವಮ್ಮನಸಿನೊಳದ್ದಿ ವದ್ದೆ ಮಾಡುತಲಿನ್ನು 4 ವ್ಯಕ್ತಿ ವೈರಾಗ್ಯ ಶಿಲೇ | ಶ್ರೀ ಹರಿಗುರು ಭಕ್ತಿ ಎರಡು ಕೈಗಳೇ ಎತ್ತಿ ವಗೆದು ಎಲ್ಲಾ ಕಶ್ಮಲ ಕಳೆಯುತ ಮತ್ತೆ ಜಾಲಾಡಿ ಹಿಂಡಿಕೆ ಮಾಡಿ ಶುಭ್ರದಿ 5 ಎತ್ತಿ ತಂದು ಕೊಡುವುತಾ | ಮತ್ತೆ ಕೊಳೆ ಹತ್ತದಂದದಿ ನೋಡುತಾ ಉತ್ತಮವಾದ ಮೈದಾನದೊಳಗೆ ಹರಹಿ ನೆತ್ತಿ ಜ್ಯೋತಿಯ ಘನ ದೀಪ್ತಿಯಲ್ಲೊಣಗಿಸು 6 ಶುದ್ಧ ಸಾತ್ವಿಕವರ್ಣದೀ | ಹೊಳೆವಂಥ ಈ ಶುದ್ಧ ಹೊದ್ದಿಕೆ ಸ್ಥಾನದೀ ಮುದ್ದುಕೃಷ್ಣನು ತನ್ನ ಪರಿವಾರ ಸಹಿತದಿ ಪೊದ್ದಿಕೊಂಡಿಪ್ಪ ಬಲು ಭದ್ರವ ಮಾಡುತ 7 ಹಿಂದೆ ಮುಂದಿನ ಭಯವೆಲ್ಲಾ | ತಪ್ಪುವುದಿನ್ನು ಸಂದೇಹಪಡಲು ಸಲ್ಲಾ ತಂದೆ ಮುದ್ದುಮೋಹನ್ನ ಗುರುಗಳು ಪೇಳಿದ ಒಂದೆ ವಾಕ್ಯವ ಆನಂದದಿ ನಂಬುತ 8 ನೂತನ ಹಚ್ಚಡವೂ | ನೂಲುಗಾರ ಜಾತಿಯರರಿಯರಿವೂ ಪ್ರೀತಿಯೋಳ್ ಗೋಪಾಲಕೃಷ್ಣವಿಠ್ಠಲ ಕೊಟ್ಟ ಖ್ಯಾತಿಯೊಳ್ ಬಾಳಿ ಶ್ರೀನಾಥನ್ನ ಪೊಂದುವೋ 9
--------------
ಅಂಬಾಬಾಯಿ
ಹನುಮ ಅಣಿಯಾರೊ ನಿನಗೆ ಈ ತ್ರಿಭುವನದೊಳಗೆಹಣಮಂತ ಗುಣವಂತ ಮಣಿಯುವೆನೊ ನಿನಗೆ ಪ ಗಡ್ ಗಡ್‍ಗಡನೆ ರಾಮನ ಪಾದಾಂಬುಜಕೆ ವಂದಿಸುತಖಡ್ ಖಡ್ ಖಡನೆ ಸಿಡಿಲಂತೆ ನಭದೊಳಗೆ ಗರ್ಜಿಸುತಧಡ್ ಧಡ್ ಧಡನೆ ಕಡಲನ್ನೆ ಜಿಗಿಯುತ್ತ ಭಡ್ ಭಡ್ ಭಡನೆ ಸೀತೆಯನು ಶೋಧಿಸುತ ಬಂದಿಯೋ 1 ಬರಬರನೆ ಬಿಂಕದಲಿ ಉರಿಯುತಿಹ ರಕ್ಕಸರದರ್ ದರ್ ದರನೆ ರಣರಂಗಕೊಬ್ಬನೇ ಎಳೆತಂದುಕರ್ ಕರ್ ಕರನೆ ಹಲ್ಗಿಡಿದು ತರಿಯುತ್ತ ಧರೆಯೊಳಗೆಭರ್ ಭರನೆ ಸಿರಿವರನ ಇಚ್ಛೆಯನು ಪೂರ್ತಿಸಿದಿ 2 ಖುದ್ ಖುದ್ ಖುದನೆ ನಗುತ ರಘುರಾಮನನು ಹೃದಯದೊಳುಖುದ್ ಖುದ್ ಖುದನೆ ಬಿಡದೇಳ್ವ ಭಕುತಿಯಲಿ ಸೇವಿಸುತಗದ್ ಗದ್ ಗದುಗಿನೊಳು ವೀರನಾರಾಯಣನಮುದ್ ಮುದ್ ವಂದಿಸಿ ಪರಬ್ರಹ್ಮನ ಪದವಿಯನೆ ಪಡೆಯೊ3
--------------
ವೀರನಾರಾಯಣ