ಒಟ್ಟು 33 ಕಡೆಗಳಲ್ಲಿ , 17 ದಾಸರು , 30 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವ ನೀನುವಾದಿರಾಜರ ಪೂಜಿಸೋ ಪ ಶಾರ್ವರಿ ವತ್ಸರದೀ | ಜನಿಸಿ ಗೌರಿಗರ್ಭ ಸುಧಾಂಬುಧಿಲೀ ||ಪುರಬಾಹ್ಯ ಪುಟ್ಟಿದ | ಕಾರಣದಿಂದಲಿವರಯತಿ ವಾಗೀಶ | ಕರಜನೆನಿಸಿ ಮೆರೆದ 1 ವಿನುತ ಸಿರಿ ಹರಿಯ ಪೂಜಿಸಿದ 2 ವಾಲಿ ಭಂಡಾರವನೂ | ಶೋಧಿಸೆ ಅಲ್ಲಿಶೀಲ ಇನಜಾರ್ಚಿಸಿದ ||ಲೀಲ ವಿಗ್ರಹ ರಾಮ | ವಿಠಲ ಮೂರ್ತಿಗಳನ್ನಕೋಲಾಹಲದಿ ತಂದು | ಭಾಳ ಪೂಜಿಸಿದ 3 ವ್ಯಾಸರಾಜಾರ್ಚಿತನಾ | ದೇವನವೇದವ್ಯಾಸರಿಂದಲಿ ಗಳಿಸಿದಾ |ವ್ಯಾಸಮುಷ್ಠಿಕೆಯ ವಿ | ಶ್ವಾಸದಿಂದಲಿ ಪೊಂದಿಶ್ರೀಶ ಉಡುಪಿನ ಕೃಷ್ಣ | ವಾಸ ಸ್ಥಾನಕೆ ಬಂದ 4 ಕವಿಕುಲ ಸಭೆಯೊಳಗೇ | ಪೂಣೆಯ ಪುರದಿನವರಸಲಂಕಾರದೀ ||ಕವನ ರಚಿಸಿ ರುಕ್ಮಿ | ಣೀಶ ವಿಜಯ ಗ್ರಂಥಕವಿ ಕುಲೋತ್ತಂಸ | ತಾನೆನಿಸುತ್ತ ಮೆರೆದಂಥ 5 ಪಂಢರಿ ಪುರ ಮಾರ್ಗವ | ಸವೆಸುತ ಬರೆಪುಂಡು ಸೈನಿಕರ್ ಬರಲೂ ||ಪುಂಡಲೀಕಗೆ ವರದ | ಪುಂಡರೀಕಾಕ್ಷನಹಿಂಡು ಶ್ವೇತಾಶ್ವಗಳಿಂದ ವಾರಿಸಿದಾ 6 ಹರಿವಾಣ ಪೂರಣವ ||ಹಯವದನನು ಬಂದು | ಜಯ ಘೋಷದಲಿ ಮೆದ್ದುದಯ ದೃಷ್ಟಿ ತೋರಿದ | ಭಾವಿ ಮಾರುತರ 7 ಪಾದ | ಬಿಸಜವ ಕಂಡರ 8 ಬೊಮ್ಮ ರಕ್ಕಸನಾಗೀ 9 ಸಕಲ ಶಿಷ್ಯರವೆರಸಿ | ರಾಜರು ಬರೆರಕ್ಕಸ ಕರೆದ ವಾದಕ್ಕೇ ||`ಆಕಾಮವೈ` ಕೋ ನಸ್ನಾತನೆಂದೆನೆ ಅವಕಾಕು ರಂಡೆಯ ಪುತ್ರ | ತೋಕ ನೀನೆಂದ 10 ಮೇನೆ ಪಾಲಕಿ ಹೊರುವ | ನರೆಯಣ ಭೂತಯಾನ ವಾಹಕನಾದನೂ ||ಆನೆಂತು ಬಣ್ಣಿಪೆ | ಮುನಿಕುಲ ದಿನಮಣಿವೇಣುಗಾನ ಪ್ರಿಯ | ಕೃಷ್ಣ ಸೇವಕರಾ 11 ಆ ಮಹ ನೇತ್ರಾವತಿ | ಸಂಗಮವೆನ್ನಕೌಮಾರ ನದಿ ಸನಿಯದಿ ||ಈ ಮಹಾ ಮಹಿಮರು | ಸಾಸಿರ ಲಿಂಗದನೇಮದ ಪೂಜೆಗೆ | ನಿರ್ಮಿಸಿದರು ತೀರ್ಥ 12 ಪಾದ್ಯ | ಸ್ವರ್ಣ ಗರ್ಭನ ಪಿತಪೂರ್ಣಗೆ ಸುಪ್ರೀಯ | ಗಸದಳವೇನಿದು13 ಗರಳ ಮಿಶ್ರಿತ ನೈವೇದ್ಯ | ಪಾಚಕತೆರೆಹರಿಗೆ ಸಮರ್ಪಿಸಿದಾ ||ಸಿರಿಪತಿ ಕಂಠದೋಳ್ | ಕರಿಯ ವರ್ಣವ ಕಂಡುಅರಿತು ಸೇವಿಸಿದನು | ಹರಿಯ ಪ್ರಸಾದವ 14 ಸಿರಿ ಕೃಷ್ಣ | ನಂಘ್ರಿಗರ್ಪಿಸಿದ 15 ಅರಿಯು ಮುತ್ತಲು ಪುರವ | ಸೋದಾಧಿಪಮೊರೆಯ ಹೊಕ್ಕನು ರಾಜರ ||ಭರದಿ ನಾರಾಯಣ | ವರ ಭೂತನನ ಕಳುಹಿಅರಿಭಯ ವಾರಿಸಿ | ಪೊರೆದ ನಾಯಕನಾ 16 ಸೋದೆಯಲ್ಲೋರ್ವ ಶೈವ | ಬಲುಗರ್ವದಿವಾದ ಮಾಡುತಲವನೂ ||ವೇದ ಮತವ ಬಲು | ವಿಧದಿ ದೂಷಿಸಿ ಕಡುಬಾಧೆ ಪಡಿಸುತಲಿದ್ದ | ಬುಧಜನ ವೃಂದವ 17 ಭೃತ್ಯ ಭಾವದಿ | ವಿಜಯ ಪತ್ರವನಿತ್ತುನಿಜ ಬಿರುದುಗಳವರ | ಪದಕೆ ಅರ್ಪಿಸಿದ 18 ತ್ರಿವಿಕ್ರಮಾಲಯ ಸ್ಥಾಪನೆ | ರಚಿಸಿ ಮೆರೆದ ದಿವ್ಯ ಶಾಲೀವಾಹನ್ನ ||ಸಾವಿರೈನೂರ್ನಾಲ್ಕು | ಚಿತ್ರ ಭಾನುವಿನಲ್ಲಿರವಿಯು ಮೇಷಾರ್ಧದಿ | ಚರಿಸುವ ದಿನದಿ 19 ರಥದಿಮೂರ್ತಿಯ ಸೇರಿಸಿ | ಬದರಿಯಿಂದಭೂತ ನರೆಯಣ ಬರುತಿರೆ ||ಪಥದಿ ರಕ್ಕಸ ಸೆಣೆಸೆ | ಪೃಥುಕು ಆಯುಧ ಬಿಟ್ಟುರಥದ ಗಾಲಿಯಲಿಂದ | ಹತಗೈದನವನ 20 ವೇದಾರ್ಥ ಬೃಂಹಿತದ | ಬಹು ಗ್ರಂಥಗಳ್‍ಪದ ಪದ್ಯ ಸೂಳ್ಹಾದಿಯ ||ಸೋದೆ ಮಠದಿ ನಿಂದು | ವಾದಿರಾಜರು ರಚಿಸಿಬುಧರಿಗಾನಂದವ | ಮುದದಿ ಪಾಲಿಸಿದ 21 ತ್ರಿವಿಕ್ರಮ ರಥೋತ್ಸವದಿ | ಕರೆಯಲು ಬಂದದಿವಿರಾಜ ಜನರು ಕಳುಹಿ ||ಭವ್ಯ ಸು ಪಂಚ ವೃಂದಾವನಗಳ ರಚಿಸಿದಿವಿರಾಜ ಗರುಹಿದರ್ ತಮ್ಮಯ ಬರವನು 22 ಶಾರ್ವರಿ ವತ್ಸರದೀ | ಫಾಲ್ಗುಣ ವದ್ಯಮೂರನೆ ದಿವಸದಲ್ಲೀ ||ವರ ವೃಂದಾವನ ಪೊಕ್ಕು | ಗುರು ಗೋವಿಂದ ವಿಠಲನನಿರುತ ಧ್ಯಾನದೊಳಲ್ಲಿ | ವರವ ಪಾಲಿಸುತಿಹರ 23
--------------
ಗುರುಗೋವಿಂದವಿಠಲರು
ವೀರಮಂಡಿ ಹೂಡಿರುವುದು | ಕಾರಣೇನು ವೀರ ಹನುಮ ಪೇಳು ನೀನಿದ ಪ. ರಾಮ ಹೆಗಲ ಏರಲೆನ್ನುತಾ | ಕುಳಿತಿಯೇನೊ ನೇಮದಿಂದ ದಾಸನಾಗುತ ಕಾಮಿನಿಯ ಚೋರನನ್ನು ಧೂಮಕೆಡಹಲೆಂದು ರಾಮ ಆ ಮಹಾರಣರಂಗದಲ್ಲಿ ಸ್ವಾಮಿಗೆ ಜಯವಿತ್ತು ಮೆರೆದೆ 1 ದ್ರೌಪದಿಯ ಮುಡಿಯನೆಳೆದನ | ಎದೆಯ ಮೇಲೆ ಕೋಪದಿಂದ ಕುಳಿತು ಕರುಳಿನ ಪಾಪಿ ಉರವ ಬಗೆದು ಘೋರ ರೂಪ ತೋರಿ ಶತ್ರುಗಳಿಗೆ ಶ್ರೀಪತಿಗೆ ಅರ್ಪಿಸಿದ್ದು ಈ ಪರಿಯೆ ಪೇಳು ಹನುಮ 2 ಅಭಯಹಸ್ತ ತೋರುತಿರುವುದು | ಭಕ್ತರಿಗೆ ಉಭಯ ತತ್ವಜ್ಞಾನ ಕೊಡುವುದು ಇಭವರದ ಗೋಪಾಲ ಕೃ- ಷ್ಣವಿಠಲನಂಘ್ರಿ ಕಮಲ ದೃಢದ ಬುದ್ಧಿ ಕೊಡುವ ತೆರವೊ 3
--------------
ಅಂಬಾಬಾಯಿ
ಶರಣು ಶರಣುರಾಯಾ | ಸರಸಿ-ಜಾಲಯ ಪ್ರೀಯಾ | ಶರಣು ಪಾವನಕಾಯಾ | ಸಲಹುನಮ್ಮಾ ಪ ಸ್ತುತಿಯ ಮಾಡಲರಿಯೇ | ಯತಿ ಛಲಗುಣ ವರಿಯೇ | ಪಾವನ ದೇವ ದಯಾನಿಧಿಯೇ 1 ಶಿರಿವಧು ರಮಣನಾ ಚರಿತವ ಪೇಳುವೆ | ಕರುಣದಿ ಶ್ರೀಹರಿ ನುಡಿಸಿದಂತೆ | ಕೇಳಿ | ಧರಿಯೊಳು ಭಾಗವತರು ಯಲ್ಲಾ 2 ಬನ್ನಿ ಸಾತ್ವಿಕ ಗುಣ ಸಂಪನ್ನ ಮುತ್ತೈದೇರು | ಅನ್ಯ ಭಾವನೆಗಳಿಗೆ ತೊಡಕದೇ | ಯನುತಲಿ | ಉನ್ನತ ಸಂಭ್ರಮದಿ ನೆರೆದರು 3 ದಿವ್ಯಾಂಬರವನುಟ್ಟು ದಿವ್ಯಾಭರಣನಿಟ್ಟು | ದಿವ್ಯಾಕೃತಿಯಲಿ ವಪ್ಪುತಿಹಾ | ಮುನಿ | ಮದನ ಲಾವಣ್ಯನು 4 ಅನಾದಿ ಮಹಿಮ ಮೋಹನನಾದ ಕೃಷ್ಣನು | ಜ್ಞಾನಾಂಗನೇ ರುಕ್ಮಣಿ ವಧುವಿನಾ | ಈರ್ವರಾ | ಅನುಭವ ದೂಟಣಿಯನ್ನು ಮಾಡಲಾರಿ 5 ಸಡಗರದಿಂದಾ ಹೃದಯಾ ಪೊಡವಿಯೊಳೊಪ್ಪುದಾ | ದೃಢ ವಜ್ರದಿಂದಲಿ ರಚಿಸಿದಾ | ಜಗದಲಿ | ಒಡನೆ ರತಿ ರತ್ನಾಸನ ಹಾಕಿ 6 ಮ್ಯಾಲ ಭಾವಕಿಯರು ಮೂಲೋಕವಂದ್ಯರಾ | ಲೋಲವಧು ವರರನು ಕುಳ್ಳಿರಿಸಿ | ಹರುಷದಿ | ಮೇಲೆನಿಸಿ ಊಟಣಿಯ ಮಾಡಿಸಲು 7 ಶುದ್ಧ ಮತಿವಂತಿಯರು ಅಧ್ಯಕ್ಷರತರಾಗಿ | ಸಿರಿ | ಮುದ್ದು ಶ್ರೀ ಕೃಷ್ಣನು ವಲಿವಂತೇ 8 ನಾನಾ ಗಂಟಗಳುಳ್ಳಾ ಕಠಿಣವಾದಾ ಅಭಿ | ಮಾನ ಅರಿಷಿಣವನು ಸಣ್ಣ ಮಾಡೀ | ಈಗಾ | ಏನುಳಿಯದ್ಹಾಂಗ ವಿವೇಕದಿಂದ 9 ಹಮ್ಮಿನರಿಷಿಣವನು ಸಮ್ಯಜ್ಞಾನದ ಕದಿ | ಕಮ್ಯ ದೋರುವಂತೆ ಕಲಿಸುತಾ | ಶ್ರೀವರ | ಬ್ರಹ್ಮನ ಪಾಪಕ ಅರ್ಪಿಸಿದರು 10 ತ್ವರಿತ ಲಕ್ಷ್ಮೀ ಕಾಲಾ ಪರವಾ ವಪ್ಪಿಲೆ ಹಚ್ಚಿ | ಭರದಿಂದಾಕ್ಷಣ ಕ್ಷಣಕ ರುಕ್ಮಣಿ ಯಾಮುಖದಿಂದ | ಹರಿಯಾ ನಾಮಗಳನು ನುಡಿಸುತಾ 11 ಭಾವನಿಂದ ರಂಜಿಸುವ ಕುಂಕುಮ ಮ್ಯಾಲೆ | ಆ ವಿಮಲ ಮುಕ್ತಿಯ ಶೇಶೇ ನಿಟ್ಟು ಧ್ಯಾನಾ | ಲೇವಿಗಂಧವಾ ಲೇಪಿಸಿದರು 12 ಪರಿಮಳ ಸುವಾಸನೆಯ ಬೇರದ ಸುಮನ ಸರವಾ | ಕೊರಳಿಗೆ ಹಾಕಿದೆ ಪರಿಯಿಂದಾ ಕೃಷ್ಣನಾ | ಕರದಿ ನೇಮಿಸಿದರು ರುಕ್ಮಣಿಗೆ 13 ಆರ್ತ ಜಿಜ್ಞಾಸನು ಧನಾರ್ಥಿಯು ಬೈಲಿ ಘಳಿಗೆ | ಅರ್ತು ಮುಖದಲಿ ಕೊಟ್ಟು ಬಿಸುಡಿದರು ಬುಧರು | ನಿರ್ತದಿಂದಲಿ ನೋಡಿ ಇಬ್ಬರಿಂದ 14 ಮಗುಳೆ ಸಂಕಲ್ಪಾದಾ ಬಗೆದಾ ಕುಪ್ಪಸಿನ | ಬಿಗಿ ಬಿಗಿದು ಕಟ್ಟಿದಾ ಗಂಟವನು ಒಂದೇ | ಜಗದೀಶನಾ ಕೈಯಿಂದ ಬಿಡಿಸಿದರು 15 ಹರಿಯಾ ತೊಡೆಯ ಮ್ಯಾಲ ನಿಂದಿರಿಸಿ ರುಕ್ಮಿಣಿಯನು | ಕರದಿ ಶಾಂತಿ ಅಂಬಿ ಬಿಂಬಿಸಿದರು | ನೋಡಿ | ಧರಿಯೊಳಾನಂದವ ತೋರುವಂತೆ 16 ತನುವಿನಾರತಿಯೊಳು ಘನದೆಚ್ಚರ ದೀಪದಿ | ಮನದಿಂದಾ ಜಯಾ ಜಯಾವೆಂದೂ ಬೆಳಗೀ | ಮರಹು | ಅನುವಾಗಿ ತಾವು ನಿವಾಳಿಸಿದರು 17 ಮರೆವಾ ಪ್ರಕೃತಿ ಪುರುಷರ ಶರಗಂಗಳಾ ಯರಡಾ | ಭರದಿಂದ ಕಟ್ಟಿ ಸುವೃತ್ತಿಂದಾ | ಬಳಿಕಾ | ತ್ವರಿತ ನಿಜ ಮಂದಿರವ ಸಾರಿದರು 18 ಇಂತಿ ಪರಿಯಾಗಿಹ ಅಂತರನು ಭವದಾ | ಕಂತುಪಿತ ಲಕ್ಷ್ಮಿಯ ಚರಿತವನು | ನೋಡಿ | ಸಂತತ ಸುಖವನು ಪಡೆದರೆಲ್ಲಾ 19 ಇನಿತು ಸುಖ ಕರವಾದಾ ಅನುಭವ ದೂಟಣಿಯನು | ಅನುವಾಗಿ ನುಡಿಸಿದಾ ಯನ್ನ ಮುಖದೀ | ಈಗಾ | ಘನ ಗುರು ಮಹಿತಪಿ ಸುತ ಸ್ವಾಮಿ 20 ತಂದೆ ತಾಯಿ ಮಿತ್ರ ಬಂಧು ಬಳಗನಾದಿ | ಎಂದೆಂದೂ ಶರಣರ ಸಲಹುವಾ | ದೇವನೇ | ಇಂದೆನ್ನ ನುದ್ಧರಿಸು ದತ್ತಾತ್ರೇಯಾ 21
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಶೇಷ ಚಂದ್ರಿಕಾರಾಯರ ಸಂಕ್ಷಿಪ್ತ ಚರಿತ್ರೆ (ವಾರ್ಧಿಕ ಷಟ್ಪದಿ) ರಘುನಾಥರಂ ಸೇವಿಸೀ |ರಘುನಾಥ ತೀರ್ಥರಂ ಮಿಗಿಲಾಗಿ ಸೇವಿಸುವಅಘಗಳನು ನೀಗಿ ಶ್ರೀ ರಘುವರನ ಪ್ರೀತಿಯನುಮಿಗೆ ಪೊಂದಿ ಭವದಾಟಿ ನಗಧರನ ಲೋಕದೊಳು ಬಗೆ ಬಗೆಯ ಸುಖದಿ ಬಾಳ್ವ ಪ ಏಕಮೇವನ ಚರಣ | ತೋಕರೆಂದೆನಿಸಿ ಸಾತ್ವೀಕರೆನಿಪ ತಾಯ್ತಂದೆಗಾಕುವರನೆನಿಸುತಏಕಋಷಿ ಶೌನಕ ಸುಗೋತ್ರದೊಳುವೆಂಕಟವರಮೃಗಾಭಿದನು ಎನಿಸೀ ||ನೂಕಿ ಪಂಚಾಬ್ದಗಳನಾ ಕುವರಗಾಗುಪನಯನಕೈಗೊಂಡು ಗುರು ಚರಣನೇಕ ವಿಧ ಸೇವಿಸುತವಾಕಾದಿ ಶಾಸ್ತ್ರಗಳ ಸಾಕಷ್ಟು ಅಭ್ಯಸಿಸಿ ಸ್ವೀಕರಿಸಿ ದ್ವಿತೀಯಾಶ್ರಮಾ 1 ಅನುಜ ಅಂಭ್ರಣಿಯ ರಮಣಪದಅಂಭುಜಗಳಂ ಭಜಿಸಿ ಸಂಭ್ರಮದಿ ಸತಿವೆರಸಿ ಉಂಬುಡುವ ಸರ್ವವೆಲ್ಲ |ಬಿಂಬನಲಿ ಅನ್ವಯಿಸಿ ಇಂಬುಗೊಂಡವರಾಗಿಸಂಭ್ರಮದ ಸಂತಾನದಂಬಲನೆ ತಾ ತೊರೆದುಹಂಬಲಿಸಿ ಹರಿಪಾದ ಗುಂಭದಿಂದಲಿ ಭಜಿಸಿ ಇಂಬಿಟ್ಟ ಸನ್ಯಾಸದೀ 2 ಹತ್ತು ಮೂರ್ಮತ್ತೈದು ವತ್ಸರದಿ ವಿಠಲ ಪದವರ್ತಿ ಲಕುಮಿನರೆಯಣ ತೀರ್ಥರಿಂ ಸನ್ಯಾಸದುತ್ತ ಮಾಶ್ರಮ ಪೊಂದಿ ಭೃತ್ಯರಿಗೆ ಶ್ರೀಮಧ್ವ ಶಾಸ್ತ್ರಗಳ ಬಿತ್ತರಿಸುತಾ |ಮತ್ತೆ ಬದರಿಯ ಸೇತು ಉತ್ತಮ ಕ್ಷೇತ್ರ ತ್ರೈರಾವರ್ತಿ ಸಂಚರಿಸಿ ಬಲು ಮತ್ತ ಮಾಯ್ಗಳನಳಿದುಕೃತ್ತಿ ವಾಸನ ತಾತ ಉತ್ತಮೋತ್ತಮನೆಂದು ವತ್ತಿ ಪೇಳ್ದರು ಸುಜನಕೇ 3 ಶೇಷನಾವೇಷದಿಂ ವ್ಯಾಸಾಭಿದಾನ ಸ ನ್ಯಾಸಿ ಎನಿಸುತಲಿ ದೀನೇಶನಂಶಜರಿಂದವಾಸಿಸುತ ಹಂಪೆಯಲಿ ಲೇಸು ಸುತ್ಸೂತ್ರಗಳ ಭಾಷ್ಯಾವ್ಯಾಖ್ಯಾ ಚಂದ್ರಿಕಾವ್ಯಾಸ ತ್ರಯಗಳು ಎಂದು ಭಾಸುರದ ಕೀರ್ತಿಯಲಿಕಾಶಿ ಗಧದರ ಮಿಶ್ರ ಏಸು ಮಾಯ್ಗಳ ಜಯಕೆಲೇಸು ಕಾರಣವೆನಿಪ ಆಸಿ ಗ್ರಂಥಗಳ್ರಚನೆ ಬೇಸರದೆ ನೆಡೆಯುತಿರಲೂ 4 ವರಶಿಷ್ಯರಿಂವರೆಸಿ ಇರುತಿರಲು ದಿನ ಒಂದುಅರೆವಾಸಿಯಾದಂಥವರ ಚಂದ್ರಿಕಾಗ್ರಂಥಎರಡು ಅಧ್ಯಾಯಗಳು ಪೂರಣವು ಯಾರಿಂದ ಒರೆವುದೆಂದೆನೆ ಪ್ರಾರ್ಥಿಸೀ ||ವರನರರ ಸಲಹುದಕೆ ಹರಿಯಾಜ್ಞೆಯಿಂ ಮತ್ತೆಎರಡು ಮೂರ್ಜನ್ಮಗಳ ಧರಿಸುವೆವು ನಾವು ಎರಡೈ-ದರಿಲ್ಲಿಂದ ನರಜನ್ಮದೊಳು ಗ್ರಂಥ ಪೂರಣವು ಆಹುದೆಂದರು 5 ಉಕ್ತಿಗನು ರಘುನಾಥ ತೀರ್ಥರೆಂದುರೆ ಮರೆದುಗ್ರಂಥ ಶೇಷವ ರಚಿಸಿ ತತ್ತರಭಿಧರು ಎನಿಸಿತತ್ವ ಕಣಿಕಾಖ್ಯವನು ತಂತ್ರಸಾರದ ವ್ಯಾಖ್ಯಮತ್ತಿತರ ಗ್ರಂಥಗಳನು ||ಬಿತ್ತರಿಸಿ ಹರಿಯನ್ನು ತೃಪ್ತಿಸುತ ಪೂರ್ವದಲಿಛಾತ್ರರಂ ಪಡೆದಂತೆ ಮತ್ತೆ ಈ ಜನ್ಮದಲಿಉತ್ತಮರು ಶಿಷ್ಯ ಸಂಪತ್ತಿನಿಂ ಮೆರೆದಿಹರು ತತ್ವಕೋವಿದರು 6 ತೈಜಸ ಪೇಳಿದ 7 ಮಹಿಷಿ ಕ್ಷೇತ್ರದೊಳುಸಿರಿ ಕೃಷ್ಣನಂ ನಿಲಿಸಿ ಹರಿರಥೋತ್ಸವ ಪೂಜೆವರುಷ ವರುಷದಿ ಗೈಯ್ಯೆವರ ಭೂಮಿ ಕಾಣೆ ಭೂಸುರರಿಗಿತ್ತಿಹರು ಅಯ್ಯಾ 8 ಆಷಾಢ ಸಿತ ತೃತಿಯ ಭಾಸಿಸುವ ಮಧ್ಯಾಹ್ನಕಾಶೀಗೇ ಮಿಗಿಲೆನಿಪ ತ್ರಿಮಕೂಟಗಾಗಮಿಸಿಭೂಸುರರಿಗೇ ತಮ್ಮ ಆಶ್ವಾಸ ತಿಳಿಸುತ್ತ ಲೇಸು ಸಂಗಮವೀಯತಾ ||ಶೇಷ ಚಂದ್ರಿಕಾಚಾರ್ಯ ಶ್ರೀಶನರ್ಚಿಸಿ ಕಾಯರಮೇಶ ಚರಣದಲೀಯ ಲೋಸುಗದಿ ಮನಮಾಡಿಆಸುಸತ್ತಿಥಿ ಚೌತಿ ಲೇಸೆನಿಸಿ ಉದಿಸುತಿರಲೀ ಶರೀರವನು ಅರ್ಪಿಸಿದರು 9 ಇವರ ವೃಂದಾವನವು ಅಶ್ವತ್ಥ ನರೆಯಣನಪವಿತರದ ಪದ ಧ್ರುವಕೆ ಬೀಳುವ ಸ್ಥಳದೊಳಗೆ ಸ್ಥಾಯವದು ಮಠಬಿರಿದುಗಳು ಅಶ್ವತ್ಥತರುಛಾಯವೇ ಛತ್ರಿಯೆನಿಸುತಿಹುದೂ ||ಕವೇರ ಕನ್ಯೆಯು ಕಪಿಲ ದಿವ ದೀವಟಿಗೆ ಸಮವುಇವರಿರುವ ಕ್ಷೇತ್ರವೇ ಪ್ರವರ ಗಯಪ್ರಯಾಗವಿಶ್ವೇಶ ಸನ್ನಿಧಿಯು ಇವರ ಗುಣ ಸ್ಥವನವೇಶಶ್ವದಾನಂದ ಸಂದೋಹವು 10 ವತ್ಸರವು ನೂರೆರಡು ಸತ್ಸಿದ್ದಿಗೇ ಪೊತ್ತಸತ್ಸರೀರವ ತ್ಯಜಿಸಿ ಮತ್ಸರಾದ್ವಿರಹಿತರುವತ್ಸಾರಿ ಸಿರಿಕೃಷ್ಣ ವತ್ಸರೆಂದೆನಿಸುತ್ತ ಸತ್ವ್ಸಭಾವದಿ ಮೆರೆಯುತಾ ||ಹೃತ್ಸರೋಜದಿ ಪವನ ಹೃತ್ಸರೂಜದಿ ಶಿರೀವತ್ಸಲಾಂಛನ ಗುರುಗೋವಿಂದ ವಿಠಲಪದಸತ್ಸರೋಜದ ಧ್ಯಾನ ಉತ್ಸುಕದಿ ಗೈದು ತನವತ್ಸರ್ಗ ಬೀಷ್ಟಗಳಗರೆವಾ 11
--------------
ಗುರುಗೋವಿಂದವಿಠಲರು
ಶ್ರೀಪತಿಯ ನೈವೇದ್ಯ ಕೊಡುವದು ಧೂಪದಾಂತರ ಭೂಮಿಶೋಧನ ಆಪದಿಂ ಮಂಡಲವ ಮಾಡುತ ರಂಗವಲಿ ಹಾಕಿ ಸೂಪ ಅನ್ನವು ಅಗ್ನಿಕೋಣದಿ ಆ ಪರಮ ಅನ್ನವನು ಈಶಾ ನ್ಯಾಪೆಯಾಲೇಹಗಳ ನೈರುತದಲಿ ಇಟ್ಟು ತಥಾ 1 ವಾಯುದಿಶದಲಿ ಉಪಸುಭೋಜ್ಯವು ವಾಯಸಾನ್ನದ ಮಧ್ಯ ಘೃತಸಂ ಸ್ತೂಯಮಾನ ನಿವೇದನವು ಈ ಕ್ರಮದಿ ಹೀಂಗಿಟ್ಟು ಬಾಯಿಯಿಂದಲಿ ದ್ವಾದಶ ಸ್ತುತಿ ಗಾಯನದಿ ನುಡಿಯುತಲಿ ಈ ಕಡೆ ಆಯಾ ಅಭಿಮಾನಿಗಳು ದೇವತೆಗಳನು ಚಿಂತಿಸುತ 2 ಓದನಕ ಅಭಿಮಾನಿ ಶಶಿಪರ ಮೋದನಕ ಅಭಿಮಾನಿ ಭಾರತಿ ಆದಿವಾಕರ ಭಕ್ಷ ಕ್ಷೀರಾಬ್ಧೀಜೆ ಸರ್ಪಿಯಲಿ ಸ್ವಾದುಕ್ಷೀರಕ ವಾಣಿ ಮಂಡಿಗಿ ಲೀ ದ್ರುಹಿಣನವನೀತ ಪವನಾ ದಾದಧಿಗೆ ಶಶಿವರುಣ ಸೂಪಕೆ ಗರುಡ ಅಭಿಮಾನಿ 3 ಶಾಕದಲಿ ಶೇಷಾಮ್ಲ ಗಿರಿಜಾ ನೇಕನಾಮ್ಲದಿ ರುದ್ರಸಿತದಲಿ ಪಾಕಶಾಸನ ಶೇಷುಪಸ್ಕರದಲ್ಲಿ ವಾಕ್ಪತಿಯೂ ಈ ಕಟು ಪದಾರ್ಥದಲಿ ಯಮ ಬಾ ಹ್ಲೀಕ ತಂತುಭದಲ್ಲಿ ಮನ್ಮಥ ನೇಕ ವ್ಯಂಜನ ತೈಲ ಪಕ್ವದಿ ಸೌಮ್ಯನಾಮಕನೂ 4 ಕೂಷುಮಾಂಡದ ಸಂಡಿಗಿಲಿ ಕುಲ ಮಾಷದಲಿ ದಕ್ಷ ಪ್ರಜಾಪತಿ ಮಾಷ ಭಕ್ಷದಿ ಬ್ರಹ್ಮಪುತ್ರನು ಲವಣದಲಿ ನಿಋತಿ ಈ ಸುಫಲ ಷಡ್ರಸದಿ ಪ್ರಾಣ ವಿ ಶೇಷ ತಾಂಬೂಲದಲಿ ಗಂಗಾ ಆ ಸುಕರ್ಮಕೆ ಪುಷ್ಕರನು ಅಭಿಮಾನಿ ದೇವತೆಯೂ 5 ಸಕಲ ಭಕ್ಷ್ಯಗಳಲ್ಲಿ ಉದಕದಿ ವಿಶ್ವ ಮೂರುತಿ ಮುಖದಲೀ ನುಡಿ ಅಂತಿಲೀ ಶ್ರೀ ಕೃಷ್ಣ ಮೂರುತಿಯ ನಖ ಚತು ಪದಾರ್ಥದಲಿ ಆ ಸ ಮ್ಯಕು ಚತುರವಿಂಶತಿ ಅಭಿಮಾ ನಿಕರ ಚಿಂತಿಸಿ ಸರ್ಪಿ ಸಹ ಶ್ರೀ ತುಳಸಿಯನು ಹಾಕಿ6 ಕ್ಷೀರ ದÀಧಿ ಕರ್ಪೂರ ಸಾಕ ರ್ಜೀರ ಪನಸ ಕಪಿಥ್ಥ ಪಣ್ಕದ ಳೀರಸಾಲ ದ್ರಾಕ್ಷ ತಾಂಬೂಲದಲಿ ಚಿಂತನೆಯೂ ಪೂರ ಶಂಖದಿ ಉದಕ ಓಂ ನಮೊ ನಾರೆಯಣಾ ಅಪ್ಟಾಕ್ಷರವು ತನ ಮೋರೆ ಮುಚ್ಚಿ ಶತಾಷ್ಟವರ್ತಿಲಿ ಮಂತರಿಸಿ ತೆರೆದೂ7 ಸೌರಭೀ ಮಂತ್ರದಲಿ ಪ್ರೇಕ್ಷಿಸಿ ಮೂರೆರಡು ಮೊದಲಾಗಿ ಶಂಖವು ಅಂತಿಮಾಡಿ ತಥಾ ಪೂರ್ವ ಆಪೋಶನವು ಹೇಳಿ ಅ ಪೂರ್ವ ನೈವೇದ್ಯವು ಸಮರ್ಪಿಸಿ ಸಾರ್ವಭೌಮಗ ಉತ್ತರಾಪೋಶನವು ಹೇಳಿ ತಥಾ 8 ಪೂಗ ಅರ್ಪಿಸಿದಂತರದಿ ಅತಿ ಬ್ಯಾಗದಲಿ ಲಕ್ಷ್ಯಾದಿ ನೈವೇ ದ್ಯಾಗ ಅರ್ಪಿಸಿ ತಾರತಮ್ಯದಿ ಉಳಿದ ದೇವರಿಗೆ ಸಾಗಿಸೀ ಶ್ರೀ ಹರಿಯ ಸಂಪುಟ ದಾಗ ನಿಲ್ಲಿಸಿ ವೈಶ್ವದೇವವು ಸಾಗಿಸೀ ಶ್ರೀ ವಿಜಯವಿಠಲನ ಧೇನಿಸುತ ಮುದದಿ9
--------------
ವಿಜಯದಾಸ
124-1ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜಯುಗ್ಮನಿತ್ಯಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿಹಯವಕ್ತ್ರಶ್ರೀರಾಮನಿಗೆ ಪ್ರಿಯತರಮಹಂತಪಸತ್ಯವರ್ಯ ತೀರ್ಥರು ಭಾವಿ ಸತ್ಯಪ್ರಿಯರುಗೋದಾವರಿಯಿಂದ ರಾಯಚೂರು ಪೋಗಿಆ ದೇಶ ಅಧಿಪತಿ ಪೀತಾಸಿಂಗನಿಗೆಒದಗಿ ಅನುಗ್ರಹಿಸಿ ಬಂದರು ಮೇಲುಕೋಟೆ 1ಮೇಲುಕೋಟೆ ರಾಜನು ಸ್ವಾಮಿಗಳಲಿ ಬಹುಭಕ್ತಿಯಿಂದಲಿ ಪೂಜೆ ಮಾಡಿದನು ಆಗ್ಗೆಮೇಲುಕೋಟೆ ಗಿರಿ ಮೇಲೆ ನರಸಿಂಹನ ಗುಡಿಬೀಗ ಹಾಕಿತ್ತು ಸ್ವಾಮಿಗಳು ಹೋದಾಗ 2ಶ್ರೀ ಸ್ವಾಮಿಗಳು ಬಾಗಿಲ ಸ್ಪರ್ಶ ಮಾಡಿದರುಸ್ಪರ್ಶಮಾತ್ರದಿ ಬಾಗಿಲು ತೆರೆಯಿತು ಆಗಶ್ರೀಸ್ವಾಮಿ ನರಸಿಂಹನ ಮುದದಿ ಪೂಜಿಸಲುಶ್ರೀ ಸ್ವಾಮಿಗಳ ಅರಸ ಪೂಜಿಸಿದನು 3ತರುವಾಯ ಶ್ರೀರಂಗಪಟ್ಟಣಕೆ ಬಂದುಶ್ರೀರಂಗನಾಥನ್ನ ಸೇವಿಸಲು ಮುದದಿಶ್ರೀರಂಗಪಟ್ಟಣದ ಅರಸನು ಭಕ್ತಿಯಿಂಪರಿಪರಿವಿಧದಿ ಕಾಣಿಕೆಗಳ ಅರ್ಪಿಸಿದ 4ರತ್ನ ಖಚಿತ ಪೂಜಾ ಸಾಧನಗಳು ಸ್ವರ್ಣರಜತ ದಂಡಗಳುಶ್ವೇತಛತ್ರಇಂಥಾವು ಸಂಸ್ಥಾನ ಚಿಹ್ನೆಗಳ ರಾಜನುಇತ್ತನು ಶ್ರೀಗಳಿಗೆ ಭಕ್ತಿಪೂರ್ವಕದಿ 5ನಂತರ ಸ್ವಾಮಿಗಳು ಶ್ರೀತುಂಗಭದ್ರಾದಿತೀರ್ಥಾಟನ ಮಾಡಿ ಗದ್ವಾಲು ಸೇರಿಮತ್ತೆತೋಂಡದೇಶದ ಆರ್ಕಾಟಿಗೆ ಹೋಗಿಆದೇಶ ಮಂತ್ರಿಯಿಂದ ಕೊಂಡರು ಸೇವ 6ಈ ಸಮಯ ಶ್ರೀ ಸತ್ಯವಿಜಯ ತೀರ್ಥಾರ್ಯರುಸಂಸ್ಥಾನ ಸಹ ಹತ್ತಿರ ಪ್ರಾಂತದಲ್ಲಿಶಿಷ್ಯೋದ್ಧಾರಕ್ಕೆವಿಜಯಮಾಡುತ್ತಿರಲುಶ್ರೀ ಸತ್ಯವರ್ಯರು ಬಂದರು ಆರಣಿಗೆ 7ಆರಣೀರಾಯನು ವೇಂಕಟನು ಸ್ವಾಮಿಗಳಚರಣಕ್ಕೆ ಎರಗಿ ಪೂಜೆಯನ್ನು ಸಲ್ಲಿಸೇವಸ್ತ್ರಾಭರಣ ಹೇಮಾಭೀಷೇಕಾದಿಗಳಅರ್ಪಿಸಿದ ಭಕ್ತಿಯಿಂ ಕೃಷ್ಣಾಜಿಪಂತ 8ಈ ರೀತಿ ಪೂಜೆ ಮರ್ಯಾದೆಗಳ ತಾ ಕೊಂಡುಹರಿಕೃಷ್ಣ ಶ್ರೀಶನಿಗೆ ಸಮಸ್ತ ಅರ್ಪಿಸುತಹೊರಟರು ಮುಂದಕ್ಕೆ ದಿಗ್ವಿಜಯ ಕ್ರಮದಲ್ಲಿಪುರಿ ಜನರು ಜಯ ಘೋಷ ಮಾಡುತಿರಲು 9ಎನ್ನ ಎನ್ನಂಥವರ ಅನಂತ ಅಪರಾಧಗಳಘನದಯದಿ ಕ್ಷಮಿಸಿ ಬಹು ಕೃಪದಿ ಪಾಹೀವನರುಹಾಸನಪಿತ ಮಧ್ವಸ್ಥ ಶ್ರೀಪತಿ`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 10 ಪ
--------------
ಪ್ರಸನ್ನ ಶ್ರೀನಿವಾಸದಾಸರು
139-5ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ವಿಠ್ಠಲನ ಮಂದಿರದಿ ತಪ್ಪದೇ ಪ್ರತಿದಿನಪಠಿಸಿ ಅರ್ಪಿಸುತ್ತಿದ್ದವಿಶ್ವವಿಷ್ಣುವಷಟ್ಕಾರ ಮೊದಲಾದ ಸಹಸ್ರನಾಮಗಳದಿಟ ಜ್ಞಾನ ಭಕ್ತಿಯಿಂ ಮಾರ್ಗದಿ ಸ್ಮರಿಸಿದರು 1ತನ್ನ ಹೊರ ಒಳಗೆ ಶ್ರೀಹರಿಯ ತಿಳಿಯುತ್ತಕಾಣುವುದು ಎಲ್ಲವೂ ಅನಘಹರಿ ಆವಾಸ್ಯತನಗೆ ಯದೃಚ್ಛದಿ ಲಭಿಸುವುವು ಹರಿಕೊಡುವುವುಎನ್ನುತ ಅನಪೇಕ್ಷಿ ನಿರ್ಭಯದಿ ನಡೆದರು 2ಮಾರ್ಗಸ್ಥ ಅಕ್ಷೋಭ್ಯ ಜಯಮುನಿಗಳಲಿಪೋಗಿ ಬಾಗಿ ಶಿರಸ್ಸಾಷ್ಠಾಂಗ ನಮಸÀ್ಕರಿಸಿ ಮುಂದುಪೋಗಿ ಕೃಷ್ಣಾ ತೀರ ಹನುಮನ್ನ ವಂದಿಸಿಚೀಕಲಪರಿವಿಗೆ ನಮಿಸಿ ಕರಮುಗಿದರು 3ಗುರುಗುಣಸ್ತವನಾದಿ ಗ್ರಂಥಗಳ ರಚಿಸಿರುವಸೂರಿವಾದೀಂದ್ರರ ನಮಿಸಿ ಅಪ್ಪಣೆಯಿಂಶ್ರೀರಾಘವೇಂದ್ರ ತೀರ್ಥರ ನಮಿಸಿ ಶರಣಾಗಿಸ್ತೋತ್ರ ಅರ್ಪಿಸಿದರು ಕವಿತಾರೂಪದಲಿ 4ಹರಿಶಿರಿ ಹನುಮ ಶಿವಗುರು ಅನುಗ್ರಹಕೊಂಡುದಾರಿಯಲ್ಲಿರುವಂಥ ಕ್ಷೇತ್ರ ಮೂರ್ತಿಗಳದರುಶನ ಮಾಡಿ ಗೋಪಾಲ ದಾಸಾರ್ಯರುಇರುವ ಸ್ಥಳ ಸೇರಿದರು ಜಗನ್ನಾಥದಾಸರು 5ಗುರುಗಳ ನೋಡಿ ಆನಂದ ಬಾಷ್ಪವ ಸುರಿಸಿಚರಣಪದ್ಮಗಳಲ್ಲಿ ನಮಿಸಿ ಶರಣಾಗಿಘೋರವ್ಯಾಧಿಹರಿಸಿ ಅಪಮೃತ್ಯು ತರಿದಂಥಕಾರುಣ್ಯ ನಿಧಿ ಉದ್ಧಾರಕರು ಎಂದರು 6ರಾಜೀವಾಲಯಪತಿವಿಜಯಗೋಪಾಲನುಭಜತರ ರಕ್ಷಿಸುವ ಕರುಣಾಸಮುದ್ರಈ ಜಗನ್ನಾಥನೇ ನಿನಗೆ ಒಲಿದಿಹನುಭುಜಗಾದ್ರಿವಾಸ ಫಂಡರಿ ವಿಠ್ಠಲ 7ನಿಜಭಕ್ತಾಗ್ರಣಿ ಗೋಪಾಲ ದಾಸಾರ್ಯರುನಿಜಭಾವದಲಿ ಈ ರೀತಿಯಲಿ ಹೇಳೆಐಜೀ ಮಹಾತ್ಮರು ಸೂಚಿಸಿದರು ಹರಿಯಭೋಜನ ಜಗನ್ನಾಥದಾಸಗೆ ಮಾಡಿಸಿದ್ದು 8ಜಗನ್ನಾಥದಾಸರು ನಡೆದ ವೃತ್ತಾಂತವಮುಗಿದು ಕರಗದ್ಗದ ಕಂಠದಲಿ ಪೇಳೆಚಕಿತರಾದರು ಅಲ್ಲಿ ನೆರೆದಿದ್ದ ಸಜ್ಜನರುಉದ್ಘೊಷ ಜಯ ಜಯ ಶಬ್ದ ಮಾಡಿದರು 9ಉತ್ತನೂರಿಗೆವೇಣಿಸೋಮಪುರದಿಂ ಪೋಗಿಮತ್ತೂವೇಣಿಸೋಮಪುರವನ್ನು ಯೈದಿಸತ್ತತ್ವ ಬ್ರಹ್ಮ ಜಿಜ್ಞಾಸವೂ ಭಾಗ -ವತ ಧರ್ಮ ಆಚರಿಸಿದರು ಮುದದಿಂದ 10ಗೋಪಾಲಕೃಷ್ಣ ಪ್ರಿಯ ಐಜೀಮಹಂತರುಗೋಪಾಲದಾಸಾರ್ಯ ªರದ ಗುರುತಂಗೋಪಾಲ ದಾಸಾರ್ಯರುಗಳ ಸಮೇತದಿಭೂಪಾಲ ಪ್ರಮುಖರು ಸಾಧುಜನಗುಂಪು 11ಶಿರಿವಾಸುದೇವಪ್ರಿಯವಾಸತತ್ವಜÕರಗುರುಗಳು ಗೋಪಾಲದಾಸರ ಅನುಗ್ರಹದಿವರದ ಗುರುತಂದೆ ಗೋಪಾಲರು ಮತ್ತೆಲ್ಲರಿಗೂಕರಮುಗಿದು ಹೊರಟರು ಅಪ್ಪಣೆಕೊಂಡು 12ಗದ್ವಾಲ ಮಾರ್ಗದಿ ಮಂತ್ರಾಲಯ ಪೋಗಿಮಧ್ವಮತ ದುಗ್ಧಾಬ್ಧಿ ಚಂದ್ರ ಶ್ರೀ ರಾಘವೇಂದ್ರ ವಾದೀಂದ್ರರ ನಮಿಸಿ ಅಲ್ಲಿಂದಯೈದಿಹರು ಪರಮಗುರುಗಳು ಇದ್ದ ಸ್ಥಳವ 13ಪರಮಗುರುಗಳು ವಿಜಯವಿಠ್ಠಲ ದಾಸಾರ್ಯರಚರಣಾರವಿಂದದಿ ಶರಣಾಗಿಅವರಕರದಿಂದ ನರಸಿಂಹ ವಿಜಯವಿಠ್ಠಲನಸುಪ್ರಸಾದವ ಕೊಂಡು ಮಾನವಿಗೆ ಹೋದರು 14ಮನುತೀರ್ಥ ತಟದಲಿ ಮನೆಯಲ್ಲಿ ವಾಸಿಸುತಹನುಮಂತಸ್ಥ ನರಹರಿ ಜಗನ್ನಾಥನ್ನಹನುಮನ್ನ ಪೂಜಿಸುತ ಗುರುಗಳ ಸ್ಮರಿಸುತ್ತಜ್ಞಾನಾರ್ಥಿ ವಿದ್ಯಾರ್ಥಿಗಳಿಗೆ ಒದಗಿಹರು 15ಇಷ್ಟರಲ್ಲೇ ಜಗನ್ನಾಥದಾಸರ ಕೀರ್ತಿಅಷ್ಟದಿಕ್ಕಲ್ಲು ಪ್ರಖ್ಯಾತಿಯ ಹೊಂದಿಇಷ್ಟಾರ್ಥ ಸಿದ್ಧಿಗೆ ಬರುವರಾದರು ಜನರುಕೃಷ್ಣನ ಒಲಿಮೆ ಈ ದಾಸರಲಿ ಪೂರ್ಣ 16ಮಾಧ್ವ ಮೂಲಗ್ರಂಥ ಟೀಕಾಟಿಪ್ಪಣಿಗಳುಸಾಧು ಹರಿದಾಸರ ಕೀರ್ತನೆಗಳುವೇದವ್ಯಾಸೋದಿತ ಪುರಾಣ ಇತಿಹಾಸವಿದ್ಯಾರ್ಥಿಗಳಿಗೆಲ್ಲ ಪಾಠ ಪ್ರವಚನವು 17ಯೋಗಿವರ ಪ್ರಾಣೇಶವಿಠ್ಠಲ ದಾಸಾರ್ಯರುಭಾಗವತವರಶ್ರೀಶ ವಿಠ್ಠಲದಾಸಾರ್ಯನಿಗಮವೇದ್ಯನ ಭಕ್ತಜನರು ಬಹುಮಂದಿಯುಬಾಗಿ ದಾಸಾರ್ಯರಿಗೆ ಶಿಷ್ಯ ಜನರಾದರು 18ಪ್ರಾಣೇಶ ದಾಸರಿಗೆ ಶರಣಾದೆ ಎಂದೆಂದುಪ್ರಾಣದೇವನು ಇವರೊಳ್ ಪ್ರಸನ್ನನಾಗಿಹನುಪ್ರಾಣದೇವಾಂತಸ್ಥ ಶ್ರಿಹರಿ ಕೇಶವನಕಾಣುತ ಭಜಿಸುವ ಭಾಗವತರೆಂದು 19ಜಗನ್ನಾಥದಾಸರ ಶಿಷ್ಯ ಸಜ್ಜನರಿಗೆಭಾಗವತವರಶ್ರೀಶ ಶ್ರೀದವಿಠ್ಠಲಾದಿಭಗವದ್ದಾಸರಿಗೆ ನಮಿಪೆ ಶ್ರೀ ಹರಿವಾಯುಝಗಝಗಿಪ ಇವರುಗಳೊಳ್ ಸಂತತ ಎಂದು 20ನೋಡಬೇಕಾಗಿದ್ದ ಕ್ಷೇತ್ರಗಳಿಗೆ ಪೋಗಿನಾಡಿನಲಿಭಾಗವತಧರ್ಮವ ಬೆಳೆಸೆಬೇಡುವ ಯೋಗ್ಯರಿಗೆ ಉಪದೇಶ ಕೊಡೆ ಶಿಷ್ಯರೊಡಗೂಡಿ ಹೊರಟರು ಜಗನ್ನಾಥದಾಸರು 21ಕರ್ಜಗಿ ಕ್ಷೇತ್ರದಲ್ಲಿ ಇರುವ ವರದಾ ನದಿಯುಸಜ್ಜನ ಸಮೂಹವು ಬಹಳ ಅಲ್ಲುಂಟುಶ್ರೀ ಜಗನ್ನಾಥನ್ನ ಭಜಿಸುತ್ತ ದಾಸರುಕರ್ಜಗಿ ಜಮೀನ್ದಾರ ಮನೆಯಲ್ಲಿ ಕುಳಿತರು 22ಸಾಧ್ವಿ ಶಿರೋಮಣಿ ಆ ಗೃಹಸ್ಥನ ಪತ್ನಿಪಾದನಮಿಸಿ ಪತಿಗೆ ಬಿನ್ನಹ ಮಾಡಿದಳುಇಂದುಲೌಕಿಕ ವಿಷಯಲಾಂಪಟ್ಯ ನಿಲ್ಲಿಸಿವಂದಿಸಿ ದಾಸರಿಗೆ ಪೂಜೆ ನೋಡೆಂದು 23ಅಹರ ಆರಾಧಿಸುವ ಕ್ರಮದಿ ದಾಸಾರ್ಯರುಸಾಯಾಹ್ನ ಸಾಮವಾಪ್ರತಿಪಾದ್ಯ ನರಸಿಂಹನವಿಹಿತದಿ ಅರ್ಚಿಸಿ ಕೀರ್ತನೆಗಳರ್ಪಿಸಿಮಹಾಹರ್ವ ಭಜಿಸುವರು ಶಿಷ್ಯರ ಸಮೇತ 24ಅಂದು ಈ ಗೃಹಸ್ಥನು ಹೆಂಡತಿ ಕೋರಿಕೆಯಂತೆಬಂದು ಕುಳಿತನು ದಾಸಾರ್ಯರ ಮುಂದೆಅಂದೇ ಆ ವಿಪ್ರನ ಅನಿಷ್ಠ ಪ್ರಾರಬ್ಧವುಚಂದದಿ ಪೋಪುವದೆಂದರಿತರು ದಾಸಾರ್ಯ 25ಪೂಜಾ ಆರಂಭ ಆಗಲಿಕೆ ಇರುವಾಗ ಆದ್ವಿಜನ ನೋಡಿ ಪ್ರಾಣೇಶ ದಾಸಾರ್ಯಗರ್ಜಿಸಿದರು ಇನ್ನಾದರೂ ಒಳ್ಳೆಋಜುಮಾರ್ಗ ಹಿಡಿ ಹರಿಯ ಒಲಿಸಿಕೊಳ್ಳೆಂದು 26ವಾಗ್ವಜ್ರಧಾರೆಯು ಪರಿಣಮಿಸಿ ವಿಪ್ರನತೀವ್ರ ಆ ಕ್ಷಣದಲ್ಲೆ ಮನಕಲುಷಕಳೆದುಶ್ರೀವರನ ಪ್ರಿಯತರ ಜಗನ್ನಾಥದಾಸರಿಗೆಸುವಿನಯದಿ ನಮಿಸಿ ಉದ್ಧರಿಸಿ ಎಂದ 27ಪ್ರಾಣೇಶ ದಾಸರಿಗು ಜಗನ್ನಾಥದಾಸರಿಗುತನ್ನ ಕೃತಜÕತೆಯನ್ನು ಚೆನ್ನಾಗಿ ತಿಳಿಸಿಮನ ಶುದ್ಧಿ ಭಕ್ತಿಯಿಂದಲಿ ಪೂಜೆ ನೋಡಲುಹನುಮಂತ ದೇವರು ಕುಳಿತಿದ್ದು ಕಂಡ 28ಶ್ರದ್ಧೆ ಭಕ್ತಿಯಿಂದ ಗೃಹಸ್ಥನುದಾಸರಪಾದಕೆರಗಿ ತನ್ನನ್ನು ಹರಿದಾಸವೃಂದದಲಿ ಸೇರಿಸಬೇಕೆಂದು ಪ್ರಾರ್ಥಿಸಿಶ್ರೀದವಿಠ್ಠಲನಾಮ ಅಂಕಿತವಕೊಂಡ29ಜಗನ್ನಾಥದಾಸಾರ್ಯಪರಮದಯಮಾಡಿಆ ಗೃಹಸ್ಥಗೆ ಶ್ರೀದವಿಠ್ಠಲಾಂಕಿತವುಭಕುತ ಜನರಿಗೆ ಫಲಮಂತ್ರಾಕ್ಷತೆ ಕೊಟ್ಟುಶ್ರೀಕರನ ಸ್ಮರಿಸಿ ಸವಣೂರಿಗೆ ಹೊರಟರು 30ವಾರಿಜಾಸನ ಪಿತನು ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 31- ಇತಿ ಷಷ್ಠ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಎಂಥಾ ಕಾಲವು ಬಂತು ಯಾತಕೀ ಭ್ರಾಂತುಪಿಂತೆ ಮಾಡಿದಕರ್ಮತೀರ್ಚಬೇಕಾಯ್ತು ಪಸಂತೋಷದಲಿ ಶ್ರೀಹರಿಯ ಧ್ಯಾನಿಸುತಿರೆಕಂತುಪಿತನು ಕಾಯಕರುಣ ಸಂಜೀವಾ ಅ.ಪವಿಪ್ರಕುಲದೊಳುದಿಸಿ ಸುಧಾಮನುತಾಪತ್ರಯವನುಭವಿಸಿಸರ್ಪಶಯನ ಕಾಯೆಂದೊಪ್ಪಿಸಿದವಲಕ್ಕಿಅರ್ಪಿಸಿದರೆ ತಿಂದು ವರವಿತ್ತ ಶ್ರೀಕೃಷ್ಣ 1ಶರಣರ ಕುಲತಿಲಕ ಪ್ರಹ್ಲಾದನುಶಿರಿಪತಿ ಪ್ರಿಯ ಭಜಕಸರಿಯಲ್ಲೆನುತ ದೈತ್ಯ ಮಗನನು ಬಾಧಿಸೆನರಹರಿಯ ರೂಪದಿ ತರಳನ ಕಾಯ್ದ 2ಮಂದರಗಿರಿಧರನೂ ಧ್ರುವನಿಗೆಷ್ಟುಚಂದದ ವರವನಿತ್ತನೂಒಂದು ದಿನ ವ್ಯೂಹ ಸುತೃಷೆಗಳಿಲ್ಲದ ಲೋಕವಂದ ಸೃಜಿಸಿ ಗೋವಿಂದನೆ ಪೊರೆದಾ 3
--------------
ಗೋವಿಂದದಾಸ
ಕೂಡಲ ಮಾಣಿಕ್ಯ ಕ್ಷೇತ್ರಸ್ಥ ಭರತ ಪ್ರದ್ಯುಮ್ನ60ಶ್ರೀ ರಾಮಚಂದ್ರಾನುಜ ಭರತರಾಜಶರಣಾದೆ ತವಚರಣಯುಗಳ ತೋಯಜಕೆ ಪಉರು ಪರಾಕ್ರಮಿ ದುರ್ಗೆರಮಣ ಹರಿಚಕ್ರದಲಿಇರುವೆ ನೀ ತದ್ರೂಪದಲಿ ಸೇವಿಸುತಲಿಮಾರಶ್ರೀ ಕೃಷ್ಣಸುತ ಸ್ಕಂಧಾದಿರೂಪಿ ನೀಧೀರ ನಿನ್ನಲಿ ಕೃತೀಪತಿಯು ಪ್ರಜ್ವಲಿಪ 1ಉಡುಪಶೇಖರ ಕೊಟ್ಟ ವರಬಲದಿ ಪೌಲಸ್ತ್ಯಕಡು ಕಷ್ಟ ಕೊಡಲಾಗಸುರರುಮೊರೆಯಿಡಲುಕಡಲಶಯನನು ರಾಮ ಪ್ರಾದುರ್ಭವಿಸಲು ನೀನುಹೆಡೆರಾಜ ಅನಿರುದ್ಧಸಹ ಬಂದೆ ಬುವಿಯೊಳ್ 2ಕೇಕಯಕೆ ನೀ ಪೋಗೆ ಕೈಕೇಯಿ ವರದಿಂದರಾಕೇಂದುನಿಭಮುಖನು ನಿಷ್ಕಳ ಶ್ರೀರಾಮನನೂಕಲು ವನಕೆ ನೀ ಬಂದರಿತು ಧಿಕ್ಕರಿಸಿಏಕಾತ್ಮ ರಾಮನಲಿ ಪೋಗಿ ಬೇಡಿದೆಯೊ 3ಸ್ವೀಕರಿಸಿ ರಾಜ್ಯವಾಳೆಂದು ನೀ ಬೇಡಲುಅಖಿಲಾಂಡಕೋಟಿ ಬ್ರಹ್ಮಾಂಡಪತಿ ರಾಮನಾಕಿ ಭೂಸುರರೊಡೆಯ ಹದಿನಾಲ್ಕು ವರ್ಷಗಳುಆಗೆ ತಾ ಬರುವೆನು ಎಂದು ಪೇಳಿದನು 4ದೇವ ಶ್ರೀ ರಾಮನ ಸುಖಜ್ಞಾನಮಯಪಾದಸೇವಿಸಿ ಪ್ರೇಮಪ್ರವಾಹದಲಿ ನೀನುಬುವಿಯನು ಪವಿತ್ರ ಮಾಡುವ ಪಾದಪೀಠವನುನವವಿಧ ಭಕ್ತಿಯಲಿ ತಂದು ಪೂಜಿಸಿದೆ 5ನಂದಿಗ್ರಾಮದಲಿ ನೀ ತಪಶ್ಚರ್ಯದಲಿ ಇದ್ದುಬಂದಿಲ್ಲ ರಾಮನೆಂದಗ್ನಿ ಮುಖದಲಿ ನಿಲ್ಲೆಬಂದ ಇಕ್ಕೋ ಸ್ವಾಮಿ ರಾಮಚಂದ್ರನು ಎಂದಇಂದಿರೇಶನ ಪ್ರಥಮ ದೂತ ಶ್ರೀ ಹನುಮ 6ಅಖಿಲೇಶ ಸುಖಮಯನು ಶ್ರೀ ರಾಮಚಂದ್ರನುಸುಖ ಪೂರ್ಣ ಸೀತಾಸಮೇತ ಬರುವುದನುನೀಕೇಳಿಮುದದಲಿ1 ಮಾತೇರು ಶತ್ರುಘ್ನಭಕುತ ಪುರಜನ ಕೂಡ ಪೋದೆ ಕರೆತರಲು 7ಕಮಲೆ ಜಾನಕಿಪತಿಯ ಮೇಲೆ ಪೂಮಳೆ ಕರೆದುನಮಿಸೆ ನೀ ಭಕ್ತಿಯಲಿ ಕೃತಕೃತ್ಯ ಮನದಿಸ್ವಾಮಿ ರಾಮನು ನಿನ್ನಅಚಲಭಕ್ತಿಯ ಮೆಚ್ಚಿಪ್ರೇಮದಿಂದಲಿ ನಿನಗಾಲಿಂಗನವನಿತ್ತ 8ಸುರರ ನಗರೋಪಮವು ಸರೆಯೂ ತಟಿನಿಯಲ್ಲಿಇರುವುದು ಅಯೋಧ್ಯಾ ಆ ಪುರಿಜನರು ಎಲ್ಲಾಶ್ರೀರಾಮ ಸೀತಾಸಮೇತ ಪರಿವಾರ ಸಹಪುರಿಯೊಳು ಬರಲು ಆನಂದ ಹೊಂದಿದರು 9ಅಘದೂರ ಪೂರ್ಣಕಾಮನ ಮಂದಹಾಸವನುನರಜನರು ನೋಡಿ ಹಿಗ್ಗಿ ಘೋಷಿಸಲುಜಗಜ್ಜನ್ಮ ಸ್ಥಿತ್ಯಾದಿಕರ್ತ ಭೂಕಾಂತ ಶ್ರೀರಾಘವಗೆ ಮಾಡಿಸಿದೆ ರಾಜ್ಯಾಭಿಷೇಕ 10ಶ್ರೀ ರಾಮಭದ್ರನಿಗೆ ಯುವರಾಜನಾಗಿದ್ದುಭರತರಾಯನೆ ನೀನು ಸೇವೆ ಅರ್ಪಿಸಿದೆಸರಸಿಜೋದ್ಭವ ಲೋಕದಂತಾಯಿತೀ ಲೋಕವರವಿಷ್ಣು ಭಕ್ತಿಯು ಸೌಖ್ಯ ಎಲ್ಲೆಲ್ಲೂ11ಶರದಿಂದ ನೀನು ಗಂಧರ್ವರೂಪದಲಿದ್ದಮೂರು ಕೋಟಿ ಕ್ರೂರ ಅಸುರರನು ಕೊಂದೆಕರುಣಿಸಿ ನೀ ಎನ್ನ ಕಷ್ಟಗಳ ಪರಿಹರಿಸೊಶ್ರೀ ರಾಮಪ್ರಿಯ ಭರತ ಎನ್ನ ಗುರುಗಳ ರಾಜ 12ಶ್ರೀ ರಾಮ ಅವತಾರ ಕಾರ್ಯ ತಾ ಪೂರೈಸಿಸುರರುಮುನಿಗಣ ಮುಕ್ತಿಯೋಗ್ಯರ ಸಮೇತತೆರಳೆ ಸ್ವಧಾಮಕ್ಕೆ ಚಕ್ರ ನೀ ಚಕ್ರವನುಶ್ರೀರಾಮನಿಗೆ ದಕ್ಷಪಾಶ್ರ್ವದಲಿ ಪಿಡಿದೆ 13ಗರುಡಮೃಡಶೇಷಸ್ಥ ಭಾರತೀಪತಿ ಹೃಸ್ಥಪರಮಪೂರುಷ ಕೃತೀಪತಿಯು ಪ್ರದ್ಯುಮ್ನಹರಿರಾಮನಲಿ ಸದಾ ಭಕ್ತಿಭರಿತನೆ ಭರತವರನೀನು ಅಹಂಕಾರಿಕ ಪ್ರಾಣಾದ್ಯರಿಗೆ14ಸರಸಿಜಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸನವರಭಕ್ತ ವೃಂದ ಶಿರಮಾಣಿಕ್ಯ ಭರತಧರೆಯೊಳುತ್ತಮ ಕೂಡಲ್ ಮಾಣಿಕ್ಕವೆಂಬುವಕ್ಷೇತ್ರದಲಿ ನಿಂತು ಹರಿಭಕ್ತರನು ಪೊರೆವೆ 15
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಥಮ ಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪಹಂಸನಾಮಕ ವಿಷ್ಣು ವನರುಹಾಸನಸನಕದೂರ್ವಾಸಮೊದಲಾದಗುರುವಂಶಜಾತದಶಪ್ರಮತಿಸರಸಿಜನಾಭನರಹರಿತೀರ್ಥಬಿಸಜಚರಣಂಗಳಲಿ ಸತತ ನಾ ಶರಣು |1ಮಾಧವಅಕ್ಷೋಭ್ಯ ಜಯವಿದ್ಯಾಧಿರಾಜ ರಾ-ಜೇಂದ್ರ ಕವೀಂದ್ರವಾಗೀಶರಾಮಚಂದ್ರವಿಭುದೇಂದ್ರ ವಿದ್ಯಾನಿಧಿಗಳು ಈ ಸರ್ವಸತಪೋನಿಧಿ ಯತಿವರ್ಯರಿಗೆ ನಮಿಪೆ 2ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯತತ್ವಜÕ ರಘೂತ್ತಮಾರ್ಯರಿಗೆವೇದವ್ಯಾಸ ಯತಿಗಳಿಗೆ ವಿದ್ಯಾಧೀಶರಿಗೆವೇದನಿಧಿಗಳಿಗೆ ನಾ ಬಾಗುವೆ ಶಿರವ 3ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಭಿನವ ಸತ್ಯ ಪೂರ್ಣರಿಗೆ ನಮಿಪೆಸತ್ಯವಿಜಯರಿಗೆ ಸತ್ಯಪ್ರಿಯ ಸತ್ಯಬೋಧರಿಗೆಭೃತ್ಯನಾ ಎನ್ನ ವಂದನೆಗಳರ್ಪಿಸುವೆ4ಸತ್ಯಬೋಧರ ಮಹಿಮೆ ಬಹು ಬಹು ಬಹುಳವುವೇದ್ಯ ಎನಗೆ ಅತಿ ಸ್ವಲ್ಪ ಮಾತ್ರಆದರಲ್ಲೂ ಬಿಟ್ಟದ್ದು ಬಹು ಇಲ್ಲಿ ಪೇಳಿಹುದುಅತಿ ಕಿಂಚಿತ್ ಅಣುಮಾತ್ರ ಸುಜನರು ಲಾಲಿಪುದು 5ರಾಮಾಚಾರ್ಯರು ಸಣ್ಣ ವಯಸ್ಸಿನವರುನೇಮದಿಂದಾಶ್ರಮೋಚಿತ ಕರ್ಮಪರರುರಾಮ ಹಯಶೀರ್ಷ ನರಸಿಂಹನ ಗುಣರೂಪಸಮ್ಮುದದಿ ಜ್ಞಾನಭಕ್ತಿಯಲಿ ಧ್ಯಾನಿಪರು 6ಈ ರಾಯಚೂರು ರಾಮಾಚಾರ್ಯರೇ ಸತ್ಯಪ್ರಿಯಗುರುಗಳ ಸಂಸ್ಥಾನ ಪೀಠಕ್ಕೆ ಬಂದುಸೂರಿವರ್ಯರು ಸತ್ಯಬೋಧ ತೀರ್ಥರು ಎಂದುಧರೆಯಲ್ಲಿ ಪ್ರಖ್ಯಾತರಾಗಿಹರು ಕರುಣಿ 7ಬಾದರಾಯಣಮಾಧ್ವ ಸಚ್ಛಾಸ್ತ್ರ ಬೋಧಿಸಿಅಧಿಕಾರಿಗಳ ಉದ್ಧರಿಸಿ ಅಲ್ಲಲ್ಲಿವೇದ ವಿರುದ್ದ ದುರ್ವಾದಗಳ ಕತ್ತರಿಸಿಮೇದಿನಿಸಜ್ಜನರ ಪೊರೆದಂಥ ಧೀರ 8ಪೀಠ ಆರೋಹಿಸಿದ ಪೂರ್ವಗುರುಗಳ ಪೋಲುಮಠಕ್ಕೆ ಮಾನ್ಯಗಳ ಅಭರಣಗಳನ್ನಪಟ್ಟಣ ಪ್ರಮುಖರು ಧನಿಕರು ಭೂಪಾಲರುಕೊಟ್ಟದ್ದು ಅಲ್ಲಲ್ಲಿ ಸ್ವೀಕರಿಸಿದರು 9ಸತ್ಯಪ್ರಿಯರಾರಾಧನೆಗಾಗಿ ಬಂದಿದ್ದಸತ್ಯಬೋಧರ ಮಹಿಮೆಯನ್ನು ಲೆಕ್ಕಿಸದೆಬಂಧಿಸಿದ ಶ್ರೀಮಠವ ರಾಮೇಶ್ವರ ರಾಜಬಂತು ಸೈನ್ಯವು ತಿರುಚಿನಾಪಳ್ಳಿಯಿಂದ 10ತಿರುಚಿನಾಪಳ್ಳಿಯಿಂದ ಜಾನೋಜಿರಾವ್ ನಿಂಬಳ್ಕಾರನು ಸೈನ್ಯವನು ಕಳುಹಿಸಿದನುವಿರೋಧ ಬಿಡುಗಡೆ ಮಾಡಿ ಆ ರಾಜನ್ನ ಶಿಕ್ಷಿಸಿಗುರುಗಳ ಕರೆತಂದ ತಿರುಚಿನಾಪಳ್ಳಿಗೆ 11ತಿರುಚಿನಾಪಳ್ಳಿಯ ಮ್ಲೇಛ್ಬರಾಜನು ಈಗುರುಗಳ ಪ್ರಭಾವವ ಅರಿಯದೆ ಮೌಢ್ಯದಲಿವರಧನಾಪಹಾರಿಯು ಎಂದು ಆಪಾದಿಸಿನಿರೋಧಿಸಿದ ಶೋಧನೆ ಮಾಡುವ ನೆವದಿ 12ಪರಿಶೋಧನೆಯಲ್ಲಿ ಮೈಲಿಗೆ ಆಗದಿರೆಗುರುಗಳು ರಾಮದೇವರ ಪೆಟ್ಟಿಗೆಯತಿರುಕಾಟ್ಟು ಪಳ್ಳೀಗೆ ಕಳುಹಿಸಿ ಉಪೋಷಣದಿಹರಿಯ ಮಾನಸ ಪೂಜೆ ಮಾಡುತ ಕುಳಿತರು 13ಜಾನೋಜಿರಾಯನು ವಾದಿಸೆ ಸುಲ್ತಾನತನ್ನ ಸರ್ಕಾರ ಶೋಧಕರ ಕಳುಹಿಸಿದತನ್ನ ಹಿರಿಯರ ಮತ್ತು ಇತರ ರಾಜರುಗಳಚಿಹ್ನೆ ಮುದ್ರಿತ ಒಡವೆ ಮಾತ್ರವೆ ಕಂಡ 14ವಿರೋಧ ನೀಗಿಸಿ ನಿಂಬಳ್ಕರನ ಕೈಯಿಂದಹರಿಪೂಜೆಗುರುಪೂಜೆ ಮಾಡಿಸಿ ಕಾಣಿಕೆಯುಗುರುತರದಿ ಅರ್ಪಿಸಿದ ಆ ಮ್ಲೇಛ್ಭರಾಜನುಗುರುಸತ್ಯಬೋಧರ ಕೀರ್ತಿವರ್ಧಿಸಿತು15ತಿರುಕಾಟ್ಟುಪಳ್ಳಿಯಿಂದಲಿ ಪೂಜೆ ಪೆಟ್ಟಿಗೆಯತರಿಸಿ ಹರಿಪೂಜೆಯ ಮಾಡಿ ಮುದದಿಂದಮರ್ಯಾದೆ ಕಾಣಿಕೆಗಳಕೊಂಡು ದಿಗ್ವಿಜಯಚರಿಸಿದರು ಹರಿಗುರು ತೀರ್ಥಸ್ಥಳಗಳಿಗೆ 16ಮಾರ್ಗದಲಿ ತಂಜಾವೂರಿನ ರಾಜನುಶ್ರೀ ಗುರುಗಳಿಗೆ ಸೇವೆಸÀಲ್ಲಿಸಿದನಗರದಲಿ ಪ್ರಮುಖಪಂಡಿತಗೋಸಾಯಿಯನಿಗಮಾಂತ ವಾದದಲಿ ಸೋಲಿಸಿದರು 17ಕುಂಭಕೋಣದಿ ಬ್ರಾಹ್ಮಣರ ಬೀದಿಯಲ್ಲಿಗಂಭೀರತರ ದೊಡ್ಡ ಮಂಟಪಕಟ್ಟಿಸಂಭ್ರಮದಿ ಹರಿಪೂಜೆಗೈದು ವಿದ್ವಜ್ಜನಸಭೆಯಕೂಡಿ ವಾಕ್ಯಾರ್ಥ ನಡೆಸಿದರು 18ಶ್ರೀರಂಗ ಕ್ಷೇತ್ರ ತಂಜಾವೂರು ತರುವಾಯಸಾರಂಗಪಾಣಿ ಕುಂಭೇಶ್ವರ ಕ್ಷೇತ್ರಪರಿಕಲ್ಲು ತಿರುಕೋಯಿಲೂರು ಮಾರ್ಗದಿ ಬಂದುಸೇರಿದರು ತಿರುಪತಿ ವೇಂಕಟಾಚಲಕ್ಕೆ 19ಶ್ರೀರಂಗನಾಥನಿಗೆ ಶ್ರೀರಂಗನಾಯಕಿಗೆಕ್ಷೀರಾಬ್ಧಿಯಲಿತೋರ್ದ ಧನ್ವಂತರಿಗೆನೀರುಮಧ್ಯದಿ ಇರುವ ಜಂಬುಕೇಶ್ವರನಿಗೆಭಾರಿ ಪುಣ್ಯದೆ ಕಾವೇರಿಗೆ ನಮಿಪೆ 20ಶಾಙ್ರ್ಗಧರಚಕ್ರಧರಕುಂಭೇಶ್ವರಅಂಬಮಂಗಳನಾಯಕಿ ವಿಜಯೀಂದ್ರರಿಗೆನಾಗೇಶ್ವರನಿಗೆ ವಿದ್ಯುಪುರಿ ಶ್ರೀಶನಿಗೆಭೃಗುಸುತಪತಿ ಶ್ರೀನಿವಾಸನಿಗೆ ನಮಿಪೆ 21ಪರಿಕಲ್ಲು ಎಂಬುವ ಗ್ರಾಮದಲಿ ನರಸಿಂಹಶ್ರೀರಮಾಪತಿ ಇಹನು ಸರ್ವೇಷ್ಟದಾತಪರಿಪರಿ ಭಕ್ತರ ಪೀಡೆಗಳ ಪರಿಹರಿಪಶರಣಾದೆ ಶ್ರೀ ಲಕ್ಷ್ಮಿ ನರಸಿಂಹನಲ್ಲಿ 22ತಿರುಕೋಯಿಲೂರಲ್ಲಿ ಮೂರ್ಲೋಕ ಅಳೆದವನಭಾರಿಆಲಯಉಂಟು ಶಿವಕುಮಾರರಿಗೂಪಾತ್ರ ವಿಶಾಲವು ದಕ್ಷಿಣ ಪಿನಾಕಿನಿಯತೀರದಲಿ ಶ್ರೀರಘೂತ್ತಮರು ಕುಳಿತಿಹರು 23ಪಿನಾಕಜಾ ಈ ಪಿನಾಕಿಯಲ್ಲಿಹನುಅನಿಮಿತ್ತ ಬಂಧುಶ್ರೀಕೇಶವ ಸರ್ವೇಶಸ್ನಾನ ಜಪದಾನಗಳು ಪಣ್ಯಪ್ರದತತ್ತೀರವನದಲ್ಲಿ ಶ್ರೀ ರಘೂತ್ತಮರ ವೃಂದಾವನ 24ಶ್ರೀಯುತ ತ್ರಿವಿಕ್ರಮ ವಿಶ್ವರೂಪಗೆ ನಮೋಕಾತ್ಯಾಯನಿ ಶಿವಗೂ ಸ್ಕಂಧವಲ್ಲಿಗೂಕಾಯವಾಕ್ಕು ಮನದಿ ಟೀಕಾಭಾವಬೋಧರಿಗೂಕಾಯಮನ ಶುದ್ಧಿಕರ ಪಿನಾಕಿನಿಗೂ ನಮಿಪೆ 25ತಿರುಕೋಯಿಲೂರಿಗೆ ಕ್ರೋಶತ್ರಯದೊಳಗೇವೆವೀರ ಚೋಳಪುರದಲ್ಲಿ ಶ್ರೀ ಸತ್ಯನಾಥತೀರ್ಥರು ಅಭಿನವ ಚಂದ್ರಿಕಾಕಾರರುಇರುತಿಹರು ವೃಂದಾವನದಲ್ಲಿ ವಂದೇ 26ತಿರುಕೋಯಿಲೂರಿಂದ ತಿರುವಣ್ಣಾಮಲೆಯೆಂಬಅರುಣಾಚಲಕೆ ಪೋಗಿ ಅಲ್ಲಿ ರಾಜಿಸುವಕರುಣಾಬ್ಧಿ ಗಿರಿಜಾರಮಣನ್ನ ವಂದಿಸಿತಿರುಪತಿಗೆ ಹೊರಟರು ಗುರುಸರ್ವಭೌಮ 27ಹೇಮಗರ್ಭನತಾತಶ್ರಿಪತಿ ಜಗನ್ನಾಥಆಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 28 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ವಾಮನಪ್ರಥಮ ಅಧ್ಯಾಯಶ್ರೀ ವಾಮನಪ್ರಾದುರ್ಭಾವಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಉದಿತಭಾಸ್ಕರ ನಿಭ ಸ್ವಕಾಂತಿಯಲಿ ಜ್ವಲಿಸುತಿಸುದರ್ಶನ ಗದಾ ಜ್ಞಾನಪ್ರದ ದರಾಹಸ್ತಪದುಮೆ ಸಹ ಅಜುವಿಷ್ಣು ಮಂತವ್ಯ ಸರ್ವಸ್ಥಶೃತಿವೇದ್ಯ ಅಜಸೇವ್ಯಪ್ರಣವಪ್ರತಿಪಾದ್ಯ1ಸರ್ವ ಸೃಷ್ಟಿ ಸ್ಥಿತಿ ಲಯ ನಿಯಮನ ಜ್ಞಾನಆವೃತಿ ಬಂಧ ಮೋಕ್ಷಕೆ ಮುಖ್ಯಕರ್ತಸುವರ್ಣಾಂಡವ ಪಡೆದು ವ್ಯಾಪಿಸಿ ಅದರೊಳುಅವತಾರಗಳ ಮಾಡಿ ಸಜ್ಜನರ ಕಾಯುವಿ 2ವೇದೋದ್ಧರಮತ್ಸ್ಯಸತ್ಯವ್ರತನಿಗೆ ಒಲಿದಿಮಂದರವ ಪಾಲ್ಗಡಲಲಿ ಪೊತ್ತಕೂರ್ಮಇಂದಿರಾಪತಿ ಅಜಿತ ಮೋಹಿನಿ ಧನ್ವಂತರಿದೈತ್ಯಹರ ಭೂಮಿ ಉದ್ಧರ ಭೂವರಾಹ 3ಪಾಪಘ್ನ ಪ್ರಹ್ಲಾದ ರಕ್ಷಕ ನೃಸಿಂಹನೇವಿಷ್ಟ ವಾಮನ ತ್ರಿವೃತ್ ಗೋಪಬಾಲಸುಪವಿತ್ರ ಜಮದಗ್ನಿಸುತ ಪರುಶುರಾಮಪ್ರಭಂಜನಸೇವ್ಯಶ್ರೀರಾಮಚಂದ್ರ4ಅಜ್ಞಾನ ಹೃತ್ತಿಮಿರಸೂರ್ಯವೇದವ್ಯಾಸನಿಜಭಕ್ತಜನ ಪಾಂಡವಪ್ರಿಯ ಕೃಷ್ಣದುರ್ಜನ ವಿಮೋಹಕ ಸುರಸುಬೋಧಕ ಬುಧ್ಧಸುಜನವಂದ್ಯನೆ ಧರ್ಮಸ್ಥಾಪಕನೆÀ ಕಲ್ಕಿ 5ಷಡ್ರೂಪ ಹಯವದನ ಮಹಿದಾಸ ತಾಪಸಕ್ಷಿಪ್ರವಸುಪ್ರದ ಶ್ರೀಕರ ಯಜÕ್ಯ ಕಪಿಲಅತ್ರಿಸುತ ವೃಷಭಾದಿ ಅನಂತಸುಖ ಚಿದ್ರೂಪಅಪ್ರತಿ ಮಹೈಶ್ವರ್ಯ ಪೂರ್ಣ ಏಕಾತ್ಮ 6ನಿವ್ರ್ಯಾಜ ಭಕ್ತಾಗ್ರಣಿಯು ಪ್ರಹ್ಲಾದನುಆ ಆರ್ಯನ ಸುತ ವಿರೋಚನನೆಂಬುವನುಆ ದೈತ್ಯನ ಪುತ್ರ ಬಲಿಮಹಾರಾಜನುಆಧಿಕ್ಯ ಹೊಂದಿದನು ಬಲಪೌರುಷದಲಿ 7ದೈತ್ಯೇಯ ಬಲಿರಾಜ ಬಲಉನ್ನಾಹದಿಂಜಗತ್ರಯವ ತನ್ನ ವಶ ಮಾಡಿಕೊಂಡಇಂದ್ರಾದಿಗಳು ಐಶ್ವರ್ಯ ಶ್ರೀಯಶಸ್ಥಾನವಿದುರರಾಗಲು ದೇವಮಾತೆ ಯೋಚಿಸಿದಳು 8ಸರ್ವಭೂತ ಗುಹಾವಾಸವಾಸುದೇವಜಗದ್ಗುರುಸರ್ವ ಜಗತ್ಪತಿ ಕೇಶವನಿಗೆ ಪ್ರಿಯವಾದಪಯೋವ್ರತವ ಭಕ್ತಿಯಿಂದಲಿ ಮಾಡುವುದೆಂದುದೇವಮಾತೆಗೆಪತಿಕಶ್ಯಪ ಪೇಳಿದನು9ಆದಿವರಾಹನೇ ಮಹಾಪುರುಷ ಸರ್ವ -ಭೂತ ನಿವಾಸನೇವಾಸುದೇವಸದಾ ಸರ್ವ ಸಚ್ಛಕ್ತಿ ಪರಿಪೂರ್ಣ ಸರ್ವವಿದ್ಯಾಧಿಪತಿ ಶುಭಮಂಗಳ ಸ್ವರೂಪ 10ಸರ್ವ ಜಗಜ್ಜ£್ಮ್ಞದಿಕರ್ತನೇ ಜಗದೀಶಸರ್ವ ಜಗತ್ರಾಣ ಚೇಷ್ಟಕ ನಿಯಾಮಕನೇವಿಶ್ವತೋ ಮುಖ ಆದಿದೇವ ನಿನಗೆ ನಮೋಶ್ರೀವರ ನಾರಾಯಣ ನರಹರೇ ಸ್ವಾಮಿ 11ಮರಗದ ಶ್ಯಾಮ ಅನಿರುದ್ಧ ಪ್ರದ್ಯುಮ್ನಸಿರಿಕಾಂತ ಸರ್ವೇಶ ಕೇಶವ ನಮಸ್ತೆಪುರುಟಾಂಬರಧಾರಿ ಸುರವರೇಣ್ಯನೇ ನಮೋಸರ್ವ ವರದನೇ ಶ್ರೀದ ಕರುಣಾಂಬುನಿಧಿಯೇ 12ಅದಿತಿ ದೇವಿಯು ಪಯೋವ್ರತವ ಮಾಡಿದಳುವಿಧಿಪೂರ್ವಕ ಭಕ್ತಿ ಶ್ರಧ್ಧೆಯಿಂದಆದಿ ಪೂರುಷ ಭಗವಂತ ಶಂಖ ಚಕ್ರಗದಾಧರನೇ ಅದಿತಿಗೆ ಪ್ರತ್ಯಕ್ಷನಾದಿ 13ಕಣ್ಣೆದುರಿಗೆ ನಿಂತ ನಿನ್ನ ನೋಡಿ ಅದಿತಿಆನಂದ ಬಾಷ್ಪವ ಸುರಿಸುತ್ತ ದೀರ್ಘಪ್ರಣಾಮವ ಮಾಡಿದಳು ಗದ್ಗದ ಕಂಠದಿಂನಿನ್ನ ಸ್ತುತಿಸಿದಳು ಆ ದೇವಮಾತೆ 14ತೀರ್ಥಪಾದನೇ ತೀರ್ಥಶ್ರವ ಶ್ರವಣ ಮಂಗಳನಾಮಧೇಯನೇ ಯಜÉÕೀಶ ಯಜÕಪುರುಷಅಚ್ಯುತನೇ ರಕ್ಷಿಸುವಿ ಪ್ರಪನ್ನಪಾಲಕ ನಮೋಶ್ರೀದ ಶ್ರೀಪತೇ ವಿಷ್ಣೋ ಧೀನನಾಥ 15ಅಖಂಡೈಕ ಸಾರಾತ್ಮ ವಿಶ್ವವ್ಯಾಪಕವಿಶ್ವಅಕಳಂಕ ಸರ್ವೋರು ಸಚ್ಚಕ್ತಿಪೂರ್ಣಏಕಾತ್ಮ ಸರ್ವಜÕ ಸುಖಜ್ಞಾನಪ್ರದ ಭೂಮನ್ನಿಖಿಳಗುಣ ಐಶ್ವರ್ಯಪೂರ್ಣ ಹರೇ ಶ್ರೀಶ 16ಅದಿತಿಯ ವ್ರತಾಚರಣೆ ಮೆಚ್ಚಿ ಕಮಲಾಕ್ಷ ನೀಅದಿತಿಯ ಸುತನೆನಿಸಿ ಭವಿಸುವಿ ಎಂದಿಮುದದಿ ಈ ರಹಸ್ಯವ ಪತಿಗೆ ಪೇಳ್ದಳು ಅದಿತಿಆ ದಂಪತಿ ಕೂಡಿ ನಿರೀಕ್ಷಿಸಿದರು ನಿನ್ನ 17ಜಗನ್ನಿವಾಸನೆ ನೀನು ದೇವಮಾತೆಯೊಳುಝಗಝಗಿಸಿಪೊಳೆದಿಯೋ ಉರು ಮಹಾತೇಜಪೊಗಳಲಳವೇ ನಿನ್ನ ಲೀಲಾವತಾರಗಳಅಗಣಿತಮಹಿಮೆಗಳ ದೇವ ದೇವೇಶ18ಸನಾತನನೇ ಅನಘನೇ ಅಜನೇ ಭಗವಂತನೇನೀನು ಅದಿತಿಯಲಿ ಅವತರಿಪುದರಿತುವನರುಹಾಸನ ಹಿರಣ್ಯಗರ್ಭನು ಬಂದುಶ್ರೀನಿಧಿಯೇ ಶ್ರೀಶ ನಿನ್ನನ್ನು ಸ್ತುತಿಸಿದನು 19ಜಯೋರುಗಾಯ ಭಗವನ್ ಉರುಕ್ರಮ ನಮೋಸ್ತುತೇತೋಯಜಾಸನ ಹೀಗೆ ಇನ್ನೂ ಬಹುವಿಧದಿ ಸ್ತುತಿಸಿದತೋಯಜಾಕ್ಷಶಿಪಿವಿಷ್ಟ ವಿಷ್ಣು ಸರ್ವೋತ್ತಮಅಚ್ಯುತಾನಂತೋರು ಶಕ್ತಿಮಯ ನಿನ್ನ 20ಪದುಮಭವ ಸನ್ನುತನೇಆನಂದಮಯನೀನುಪ್ರಾದುರ್ಭವಿಸಿದಿ ಅದಿತಿ ದೇವಮಾತೆಯಲಿಚತುರ್ಭುಜವು ಶಂಖಗದಾಅಬ್ಜಚಕ್ರಪೀತ ಕೆಂಪು ವಸನವನ್ನ ಧರಿಸಿದ್ದಿ 21ಅನುಪಮ ಸುಸೌಂದರ್ಯ ಚಾರ್ವಾಂಗ ಕಾಂತಿಯುನಳಿನಾಯತೇಕ್ಷಣ ಮಕರಕುಂಡಲವುಆನಂದ ಸುಪ್ರಚುರ ವದನಾರವಿಂದವುಏನೆಂಬೆ ಗಂಭೀರವಕ್ಷ ಶ್ರೀವಕ್ಷ 22ವನಮಾಲೆ ಸುಸ್ಫುರತ್ ಕಿರೀಟಾಂಗದಾದಿಗಳುವನಜಾಸನಾಶ್ರಿತ ಕೌಸ್ತುಭಮಣಿಯುಸುನೂಪುರ ತೊಟ್ಟ ಶುಭಮಂಗಳಪಾದನಿನ್ನ ಪ್ರಾದುರ್ಭಾವ ವರ್ಣಿಸಲು ಅರಿಯೆ 23ಸೌರಶ್ರಾವಣಸಿಂಹ ಚಾಂದ್ರ ಭಾದ್ರಪದನೀ ಪ್ರಾದುರ್ಭವಿಸಿದ್ದು ಸಿತಶ್ರಾವಣದ್ವಾದಶಿಚಿತ್ರ ವಾದ್ಯಗಳ ಘೋಷ ಸಿದ್ಧಿ ವಿದ್ಯಾಧರರುಸುರಗಾಯಕರುಗಳ ಗಾಯನ ನೃತ್ಯ 24ಜಯ ಜಯತು ಜಯ ಜಯ ವಾಮನ ವಟುರೂಪಜಯ ಜಯತು ಶಾಶ್ವತ ಸರ್ವಸ್ಥ ವಿಷ್ಣೋಜಯ ಜಯತು ಸರ್ವ ಜಗಜ್ಜನ್ಮಾದಿಕರ್ತಜಯ ಜಯಪರಮಪೂರ್ಣೈಶ್ವರ್ಯ ಜಯತು25ಸುಂದರವಟುವಾಮನ ನಿನ್ನ ನೋಡಿಮಂದಜಾಸನಮಹಾ ಋಷಿವರ್ಯರು ಬಹುಆನಂದಭರಿತರು ಆಗಿ ಸಂಸ್ಕಾರಅಂದದಿ ಚರಿಸಿದರು ವೈದೀಕ ರೀತಿಯಲಿ 26ಬ್ರಹ್ಮಾದಿದೇವರು ಮಹಾಋಷಿಗಳುಪರ-ಬ್ರಹ್ಮ ವಾಮನ ನಿನಗೆ ಉಪನಯನರೂಪಮಹಾಪೂಜೆ ಚರಿಸಿದರು ಮುದಭಕ್ತಿಯಿಂದಲಿಮಹಾರ್ಹನೇ ನಿನಗಿದು ಅವತಾರ ಲೀಲ 27ದೇವವರೇಣ್ಯ ಬ್ರಹ್ಮಣ್ಯದೇವನೇ ನಿನಗೆದೇವತಾವೃಂದವು ನೆರದಿದ್ದ ಮುನಿಗಳುಸಾವಿತ್ರೀಂ ಸವಿತಾ ಭ್ರವೀತ್ ಬೃಹಸ್ಪತಿ ಬ್ರಹ್ಮಸೂತ್ರಂಈ ವಿಧದಿ ಮುದಮನದಿ ಅರ್ಪಿಸಿದರು 28ಕಮಂಡಲ ವೇದಗರ್ಭನು, ಕೃಷ್ಣಾಜಿನಭೂಮಿ, ದಂಡ, ಸೋಮ,ಕುಶಸಪ್ತ ಋಷಿಗಳುಸುಮೇಖಳ ಕಶ್ಯಪ,ಕೌಪೀನಅದಿತಿಯುಉಮಾ ಭಗವತಿಬಿಕ್ಷಾಪಾತ್ರೆ ವಿತ್ತಪನು 29ಈ ರೀತಿ ಮೇಖಳಸೂತ್ರಆಚ್ಛಾದನಛತ್ರ ಕೃಷ್ಣಾಜಿನ ಕಮಂಡಲು ದಂಡಪಾತ್ರೆ ಅಕ್ಷಮಾಲಾದಿ ವಸ್ತುಗಳು ದರ್ಭೆಪರಿಪರಿ ದೇವತೆಗಳು ಅರ್ಪಿಸಿದರು 30ಮಹಾಪೂರುಷ ಶಿಪಿವಿಷ್ಟ ವಾಮನ ವಿಷ್ಣೋಮಹಾದುರ್ಗ ಭೂ ಶ್ರೀಶ ನಿನ್ನ ಉಪನಯನಮಹೋತ್ಸವದ ವೈಭವವು ಹೋಮ ಪೂಜಾದಿಗಳುಮಹಿಯಲ್ಲಿ ಅಸದೃಶವು ಸರ್ವಕಾಲದಲು 31ಸೂತ್ರಮೇಖಳಕೌಪೀನಆಚ್ಛಾದನಛತ್ರಮಾಲಾ ಕಮಂಡಲು ದಂಡಹಸ್ತಚಂದ್ರಾರ್ಕ ಕೋಟ್ಯಮಿತ ಜ್ಯೋತಿರ್ಮಯ ವಟುರೂಪಶ್ರೀರಮಣಪದ್ಮಭವರುದ್ರಾದಿವಂದ್ಯ32ಮಧ್ವಸ್ಥ ಪರ್ವಸ್ಥ ಮತ್‍ಸ್ಥ ವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 33-ಇತಿ ಪ್ರಥಮಾಧ್ಯಾಯ ಸಂಪೂರ್ಣಂ -ದ್ವಿತೀಯ ಅಧ್ಯಾಯದಾನಪ್ರಕರಣಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಸರಸಿಜೋದ್ಭವ ಸುರವೃಂದ ಮಹಾಋಷಿಗಳುಮರೀಚಿಸುತ ಮೊದಲಾದ ಸುಧೀಗಳು ನಿನಗೆಚರಿಸಿದ ಉಪನಯನ ರೂಪಮಹೋತ್ಸವವಸ್ವೀಕರಿಸಿ ಜ್ವಲಿಸಿದಿ ಬ್ರಹ್ಮಣ್ಯದೇವ 1ನೋಡಿದ ಮಾತ್ರದಲೆಸುಜನವಿಶ್ವಾಸಿಗಳುಮಾಡಿದ ಪಾಪ ಪರಿಹರಿಪ ನರ್ಮದೆಯದಡ ಉತ್ತರದಲಿ ಯಜÕ ಶಾಲೆಕಟ್ಟಿದೊಡ್ಡಕ್ರತುಮಾಡುತ್ತಿದ್ದನು ಬಲಿರಾಜ2ಮೌಂಜಿಮೇಖಳ ಸೂತ್ರದಿಂದ ಬೆಳಗುತ್ತಸಜಲ ಕಮಂಡಲು ಸುದಂಡ ಛತ್ರಪ್ರಜ್ವಲಿಪ ಚಿನ್ಮಯ ಜಟಿಲ ವಾಮನವಿಪ್ರಯಜÕ ಶಾಲೆಯೊಳು ಪ್ರವೇಶ ಮಾಡಿದಿಯೋ 3ಜ್ವಲಿಸುವ ಸ್ವಕಾಂತಿಯುಕ್ಮಾಯಾಮಾಣವಕಬಾಲ ಸುಂದರ ಬ್ರಹ್ಮಚಾರಿಹರಿನಿನ್ನಬಲಿರಾಜ ಆಚಾರ್ಯ ಶುಕ್ರಾದಿಗಳು ನೋಡಿಬಲುಹರುಷದಲಿ ಎದ್ದು ಸ್ವಾಗತಮಾಡಿದರು 4ಭಗವಂತ ವಾಮನ ನಿನ್ನ ಪಾದದಿಬಲಿಬಾಗಿ ನಮಿಸಿ ಸ್ವಾಗತಂ ತೇ ನಮಸ್ತುಭ್ಯಂಹೀಗೆಂದು ತನ್ನ ಪಿತೃಗಳು ತೃಪ್ತರಾದರುತನ್ನ ಕುಲ ಪಾವಿತವಾಯ್ತೆಂದು ಪೇಳ್ದ 5ವನಜಜಾಂಡದ ಒಡೆಯ ರಾಜರಾಜೇಶ್ವರನೇನಿನ್ನ ಮುಂದೆಕರಮುಗಿದು ಬಲಿರಾಜಧೇನುಕಾಂಚನ ಗ್ರಾಮವಿಪ್ರಕನ್ಯಾದಿಗಳುಏನು ನೀ ವಾಂಛಿಸಿದರೂ ಕೊಳ್ಳಬಹುದೆಂದ 6ಸುಗಮಸುಹೃತ್ ಧರ್ಮಯುಕ್ ಈ ಮಾತಲ್ಲಿಭಗವಂತ ನೀ ಪ್ರೀತನಾದದ್ದು ಪ್ರಕಟಿಸಿಲೋಕದಲಿ ಪ್ರಖ್ಯಾತ ಬಲಿಯ ಕುಲಕೀರ್ತಿಯಪೊಗಳಿದಿಯೋ ಬ್ರಾಹ್ಮಣ ಮಹೇಜ್ಯ ಪರಮೇಶ 7ಆಕಾಶದಲಿ ಆಹ್ಲಾದಕರ ಉಡುಪನುಪ್ರಕಾಶಿಸುವಂತೆ ಪ್ರಹ್ಲಾದನ ಯಶಸ್ಸುಉತ್ಕøಷ್ಟವಾದದ್ದು ವ್ಯಾಪಿಸಿ ಜಗತ್ತಲ್ಲಿಪ್ರಕಾಶಿಸುತೆ ಆ ಕುಲೋತ್ಪನ್ನನು ಬಲಿಯು 8ಮಹಾ ಗದಾಯುಧದಾರಿ ದಿಗ್ವಿಜಯ ಶೂರನುಆ ಹಿರಣ್ಯಾಕ್ಷನ ಅಣ್ಣನು ಆದಪ್ರಹ್ಲಾದಪಿತ ಹಿರಣ್ಯಕಶಿಪು ವೀರನುಮಹೀಯಲ್ಲಿ ಖ್ಯಾತವು ಈ ದೈತ್ಯ ಕುಲವು 9ಆ ಜಗತ್ ಪ್ರಖ್ಯಾತ ಪ್ರದ್ಲಾದನಸುತದ್ವಿಜವತ್ಸಲ ತನ್ನ ಆಯುಷ್ಯವದ್ವಿಜವೇಷದಿ ಬಂದ ಸುರರಿಗೆ ಕೊಟ್ಟಿದ್ದುಮೂರ್ಜಗ ಅರಿವುದುಬಲಿಆ ಕುಲೀನ10ಇಂಥ ಕುಲದಲಿ ಬಂದ ಪ್ರಹ್ಲಾದ ಪೌತ್ರಈ ಧರ್ಮವಂತಬಲಿಎಂದು ನೀ ಪೇಳಿಪದಾನಿ ತ್ರೀಣಿ ದೈತ್ಯೇಂದ್ರ ಸಂಹಿತಾನಿಪದಾಮಮ ಎಂದು ಭೂಮಿ ಯಾಚಿಸಿದಿ 11ನಳಿನಜಾಂಡದ ದೊರೆಹರಿನಿನ್ನ ಮಾಯೆಯಿಂಬಾಲಿಶಮತಿಯೇ ಮೂರಡಿ ಯಾಕೆ ಕೇಳುತಿ ಎಂದಬಲಿಯು ತನ್ನಲಿ ಕೊಂಡವ ಪೂರ್ಣನಾಗುವಮತ್ತೆಲ್ಲೂ ಪುನರ್ಯಾಚಿಸನು ಎಂದು ಪೇಳಿದನು 12ಕರ್ಮಜ ದೇವತಾ ಕಕ್ಷದವ ಬಲಿರಾಜಕರ್ಮನಿಮಿತ್ತದಿ ಸಂಸಾರ ಸುಳಿಯಊರ್ಮಿಗಳಿಗೊಳಗಾದ ಭಕ್ತನಲಿ ಕರುಣಿಸಿದಿಧರ್ಮನೀತಿ ಪೇಳಿದಿ ಶ್ರೀಶ ಮುಕುಂದ 13ಇಂದ್ರಿಯ ಅಭಿಲಾಷೆ ಜಯಿಸದವನ ಆಶೆಗೆಮಿತಿಯಿಲ್ಲ ಬೆಳೆಯುವುದು ಮೇಲು ಮೇಲುಯದೃಚ್ಛಾಲಾಭ ಸಂತುಷ್ಟ ವಿಪ್ರನತೇಜಸ್ಸುವರ್ಧಿಸುವುದು ಮತ್ತು ಸುಖವೀವುದೆಂದಿ 14ಈ ರೀತಿ ಬಲಿರಾಜನಿಗೆ ಇನ್ನೂ ಪೇಳಿಮೂರಡಿ ಮಾತ್ರವೇ ಕೊಳ್ಳುವಿ ಎನಲುಧಾರೆ ಎರೆದು ಕೊಡಲು ಬಲಿಯು ನಿಶ್ಚೈಸಲುಅರಿತು ಶಿಷ್ಯನ ಎಚ್ಚರಿಸಿದ ಶುಕ್ರ 15ವೇದ ವೇದಾಂತಕೋವಿದಶುಕ್ರಾಚಾರ್ಯರುಬುದ್ಧಿ ವಿದ್ಯಾ ನಿಪುಣರು ಕುಶಲ ಕವಿವರರುದೈತ್ಯರಿಗೆ ಕುಲಗುರು ಶ್ರೀದ ಶ್ರೀಹರಿ ನಿನ್ನಭಕ್ತವರ್ಯರು ಎಂದು ನಮಿಪೆ ಸಂತೈಸು 16ಶಿಷ್ಯ ವೈರೋಚನನಿಗೆ ಪೇಳಿದನು ಶುಕ್ರಶ್ರೀಶ ಭಗವಂತನು ವಿಷ್ಣು ಅವ್ಯಯನೆಕಶ್ಯಪ ಅದಿತಿಯಲಿ ಭವಿಸಿ ದೇವತೆಗಳಕಾರ್ಯಸಾಧನಕಾಗಿ ಬಂದಿರುವ ಎಂದ 17ಮತ್ತು ಪೇಳಿದ ಈ ದಾನ ಕೊಡುವುದರಿಂದದೈತ್ಯರಿಗೆ ಅಕ್ಷೇಮ ಬಲಿಯ ಶ್ರೀ ಸ್ಥಾನ ಯಶಸ್ಸುಮೊದಲಾದ ಸರ್ವವೂ ಪೋಗುವವು ಸ್ವರ್ಗ ಸಂ -ಪತ್ತು ಅಧಿಪತ್ಯವ ಶಕ್ರನಿಗೆ ಕೊಡುವ 18ಇಂಥಾಮಾಯಾಮಾಣವಕಹರಿವಾಮನನುಪಾದಎರಡಲಿಧರೆದಿವಿ ಅಳೆದು ಮೂರ-ನೇದನುಬಲಿಕೊಡಲು ಆಗದೆ ನರಕ ಪೋಗು-ವದು ತಪ್ಪಿಸೆ ದಾನ ಕೊಡಬೇಡ ಎಂದ 19ಇನ್ನೂ ಬಹು ವಿಧದಲಿ ದಾನ ಬಗೆ ಶುಕ್ರತನ್ನ ಶಿಷ್ಯನಿಗೆ ಬೋಧಿಸಿದರೂ ಸಹಮನ ಸೋಲದೆ ಬಲಿರಾಜ ಧಾರೆ ಎರೆದುದಾನವ ಕೊಡುವೆನು ಎಂದ ವಿನಯದಲಿ 20ಗುರುಗಳ ಮಾತಲ್ಲಿ ಅನಾದರವ ತೋರಿಸಿದಆ ರಾಜನಿಗೆ ಶಾಪ ಇತ್ತರು ಶುಕ್ರರುಸಿರಿಸ್ಥಾನಾದಿಗಳು ನÀಷ್ಟವಾಗುವದೆಂದುಗುರು ಶಪಿಸಿದರೂ ಬಲಿಯ ಮನ ಚಲಿಸಲಿಲ್ಲ 21ಪ್ರತ್ಯಗಾತ್ಮನೇ ಈಶ ಸರ್ವಪ್ರೇರಕ ಸ್ವಾಮಿಭೃತ್ಯವತ್ಸಲ ನೀನು ಬಲಿಯ ಉತ್ಕಷ್ಟಭಕ್ತಿ ಶ್ರದ್ಧೆ ಸತ್ಯ ಧರ್ಮ ತೋರ್ಪಡಿಸಿದಿಅಂತಃ ಪ್ರೇರಕನಾಗಿಬಲಿಶುಕ್ರರಲ್ಲಿ22ಒಳ್ಳೇ ಮೌಕ್ತಿಕ ಆಭರಣ ಮಾಲಾಧರಳುಶೀಲೆ ಪತ್ನಿ ವಿದ್ಯಾವಳಿ ದೇವಿ ಸಹಿತಬಲಿಸ್ವರ್ಣ ಕಲಶ ಜಲದಿಂದ ನಿನ್ನನಳಿನಪದಯುಗವ ಅವನಿಜಿಸಿದ ಮುದದಿ23ಅಚಲಿತ ಭಕ್ತಿಮಾನ್ ಈ ಮಹಾನ್ ಬಲಿರಾಜಅರ್ಚಿಸಿ ಉದಕದಿಂದಲಿ ಧಾರೆ ಎರೆದುಅಚ್ಯುತನೇ ಶ್ರೀಯಃಪತೇ ವಾಮನ ನಿನಗೆ ನೀಇಚ್ಚೈಸಿದ ದಾನ ಹರುಷದಿ ಕೊಟ್ಟ 24ಮುದಾನ್ವಿತರಾದ ದೇವಗಣ ಗಂಧರ್ವವಿದ್ಯಾದರ ಸಿದ್ಧ ಚಾರಣ ಕಿನ್ನರಾದಿಗಳುದೈತ್ಯೇಂದ್ರಬಲಿಕರ್ತೃಕದಾನ ಆರ್ಜವವಉದ್ಗಾಯನ ಮಾಡಿ ಪುಷ್ಪಮಳೆ ಕರೆದರು 25ಬಲಿನಿನ್ನ ಜಗತ್ಪಾವನ ಪಾದೋದಕವತಲೆಯಲಿ ತಾ ಧರಿಸಿ ಕೊಟ್ಟ ಮೂರಡಿದಾನಮಾಲೋಲ ಸರ್ವೇಶ ವಿಶ್ವರೂಪನೇ ವಿಷ್ಣುಲೀಲೆಯಿಂದಲಿ ಕೈ ನೀಡಿ ವಾಮನ ಸ್ವೀಕರಿಸಿದಿ 26ಮಧ್ವಸ್ಥ ಸರ್ವಸ್ಥ ಮತ್‍ಸ್ಥ ವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 27-ಇತಿದ್ವಿತೀಯಅಧ್ಯಾಯ ಸಂಪೂರ್ಣಂ-ತೃತೀಯ ಆಧ್ಯಾಯಶ್ರೀ ತ್ರಿವಿಕ್ರಮವಿಜಯಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಕಿಂಪುರುಷಕಿನ್ನರಚಾರಣ ಗಂಧರ್ವಾದಿಸುಪರ್ವಾಣ ಗಾಯಕರ ಗೀತೆ ವಾದ್ಯಗಳುಶುಭಘೋಷ ಮಾಡುತಿರೆ ಬಲಿರಾಯ ದಾನವಅರ್ಪಿಸಿ ಕೃತಕೃತ್ಯದಿ ನೋಡಿದ ನಿನ್ನ 1ಉರು ಗುಣಾರ್ಣವ ಮಹೈಶ್ವರ್ಯ ನಿಜಸಚ್ಛಕ್ತಿಹರಿವಾಮನ ನೀನು ವರ್ಧಿಸಿ ಅದ್ಭುತದಿಸುಬೃಹತ್ ವಿಶ್ವರೂಪವ ಕಾಣಿಸಿ ನಿಂತಿನೀರುರುಹ ಜಾಂಡಾಂತರ್ ಬಹಿವ್ರ್ಯಾಪ್ತ ವಿಷ್ಣೋ 2ದೋಷದೂರ ನಿನ್ನ ಒಂದು ರೂಪದಿ ಉಂಟುದೋಷವಿಲ್ಲದ ಪೂರ್ಣ ಅಭಿನ್ನ ಅನಂತನಿನ್ನೀಶಶಕ್ತಿಯಿಂ ಎಲ್ಲವ ಅಡಗಿಸಿಅಕ್ಷೋಭ್ಯ ನೀ ಪ್ರಕಟ ಮಾಡುವಿ ಆಗಾಗ 3ಉತ್ತಮ ಮಹಾಮಹಿಮ ನಿನ್ನ ಈ ರೂಪದಿಭೂ ದಿವಿ ದಿಕ್ ಸರ್ವ ಅಧೋಧ್ರ್ವ ಲೋಕಸುತಪಸ್ವಿ ಮುನಿಗಳು ದೇವನರತ್ರಿರ್ಯಗ್ ಸರ್ವಪ್ರತಿಷ್ಠತವಾಗಿರುವುದು ಕಂಡನು ಬಲಿಯು 4ಈ ಮಹಾವಿಭೂತಿ ರೂಪದಿ ಕಂಡ ತನ್ನಆ ಮಹಾಕ್ರತು ಋತ್ವಿಕ್ಕುಗಳಾಚಾರ್ಯಆ ಮುಖದಿ ನೆರೆದಿದ್ದ ಸದಸ್ಯರನ್ನು ಕಂಡತನ್ಮಾತ್ರ ಭೂತೇಂದ್ರಿಯ ಜೀವಯುಕ್ತ 5ಅನಘಾಂಘ್ರಿ ಪದಯುಗದಿ ಜಲಮೇಘ ಅಧಸ್ ಭೂಮಿಕಣುಕಾಲು ಜಾನೂಲಿ ಮಹಾದ್ರಿ ಪಕ್ಷಿಗಳುಘನಉರುದ್ವಯದಿ ಮಾರುತಅಂಬುಕಣಗಳುವರ್ಣಜಾಲ ಮಿಂಚು ಗುಹ್ಯದಲಿ ಸಂಧ್ಯಾ 6ಜಘನದಲಿ ದೈತ್ಯರ ಗುಂಪುಗಳುಹೊಕ್ಕುಳಲಿನಭಕುಕ್ಷಿಯಲಿ ಸಪ್ತಸಿಂಧುನಕ್ಷತ್ರ ಜ್ಯೋತಿರ್ಮಯಮಾಲಾ ಉರದಲಿಅಕಳಂಕ ಹೃದಯದಲಿ ಧರ್ಮ 7ಸ್ತನದಲಿ ಸತ್ಯವು ಮನಸ್ಸಲಿ ಚಂದ್ರನುಅನುಪಮ ವಕ್ಷದಲಿ ಶ್ರೀ ಪದ್ಮಹಸ್ತಕಂಠದಲಿ ಸುಸ್ವರ ಶಬ್ದ ಸಾಮಾದಿಗಳುಕರ್ಣದಲಿ ದಿಕ್‍ಭುಜದಿ ಇಂದ್ರಾದಿಸುರರು 8ನಾಸಿಕ್ಕದಲಿ ಶ್ವಾಸವಾಯು ಕಣ್ಣಲಿಸೂರ್ಯಶಿರಸ್ಸಲಿ ಮೇಘವು ವದನದಲಿ ªಹ್ನಿರಸನದಿ ಜಲೇಶನು ವಾಣಿಯಲಿ ವೇದಗಳುನಿಷೇಧವಿಧಿಶಾಸನ ಹುಬ್ಬು ಎರಡಲ್ಲೂ9ರೆಪ್ಪೆಯಲಿ ಅಹೋರಾತ್ರಿ ಕ್ರಮಣದಲಿ ಯಜÕವುಸುಪುಷ್ಟದಿ ಅಧರ್ಮ ಸ್ಪರ್ಶದಿ ಕಾಮಲೋಭವು ಅದsÀರದಿ ಮಾಯೆಯು ಹಾಸದಲಿಕೋಪ ಲಲಾಟದಲಿಅಂಬುರೇತಸಲಿ10ಮೃತ್ಯು ಛಾಯೆಯಲ್ಲಿ ಓಷಧಿ ರೋಮದಲಿನದಿಗಳು ನಾಡಿಯಲಿ ಕಲ್ಲು ನಖದಲಿಇಂದ್ರಿಯಗಳಲ್ಲಿ ದೇವಗಣ ಋಷಿ ಸಮೂಹವುಬುದ್ಧಿಯಲ್ಲಿಅಜಗಾತ್ರದಲಿ ಚರಾಚರವು11ಉರುಕ್ರಮ ವಿಶ್ವಮೂರ್ತಿ ವಾಮನ ವಿಭೋಪರಮಪೂರುಷ ನೀನೀರೂಪತೋರಿಸಲುನೆರೆದಿದ್ದ ಅಸುರರು ವಿಸ್ಮಯದಿ ನೋಡುತ್ತಬೆರಗಾಗಿ ನಿಂತರು ಏನೂ ತೋರದಲೆ 12ಸುದರ್ಶನ ಚಕ್ರ ಪಾಂಚಜನ್ಯವು ಶಂಖಕೌಮೋದಕೀ ಗದಾಶಾಙ್ರ್ಗ ಮಹಾಧನುಸ್ಸುಬತ್ತಳಿಕೆಗಳುಅಕ್ಷಯಸಾಯಕವುಕತ್ತಿಖೇಟಕಮುಖ್ಯ ವಿಷ್ಣು ಆಯುಧಗಳು13ಅಸಹ್ಯ ತೇಜೋಯುತ ಚಕ್ರ ಮೊದಲಾದಈಶ ನಿನ್ನಯ ಆಯುಧಗಳು ಇರಲುಪಾಶ್ರ್ವದಿ ನಿಂತಿದ್ದರು ಆನಂದಾದಿಪಾರ್ಷದರು ಸಹ ಲೋಕಪಾಲಕರು ಎಲ್ಲಾ 14ಸ್ಫುರದ್ ಕಿರೀಟಾಂಗದ ಮೀನ ಕುಂಡಲವುಉರದಿ ಶ್ರೀವತ್ಸ ರತ್ನೋಜ್ವಲ ಮೇಖಳಾದಿಗಳುಪೀತಾಂಬರ ಮಾಲೆ ಧರಿಸಿ ಪ್ರಜ್ವಲಿಸಿದಿಉರುಕ್ರಮ ಹರೇ ಶ್ರೀಶ ಭಗವಂತ ವಿಷ್ಣೋ 15ರಾಜರಾಜೇಶ್ವರ ತ್ರಿವಿಕ್ರಮ ನಿನ್ನೊಂದುರಾಜೀವಪಾದದಿಂದಕ್ಷಿತಿಸರ್ವ ಅಳೆದಿಭುಜ ಶರೀರದಿ ಆಕ್ರಮಿಸಿದಿನಭದಿಕ್ಕುಹೇ ಜಗದೀಶನೇ ನಮೋ ನಮೋ ಶರಣು 16ದ್ವಿತೀಯಪಾದದಿ ನೀನು ದ್ಯುಲೋಕ ಸ್ವರ್ಗಾದಿಸತ್ಯ ಲೋಕೋ¥ರಿ ವ್ಯಾಪಿಸಿ ನಿಲ್ಲಲುತೃತೀಯ ಪಾದಕೆ ಸ್ಥಳ ಅಣ್ವತಿ ಇಲ್ಲವುಎಂದರಿತ ಆ ಮಹಾಬಲಿ ದಾನಶೂರ 17ತ್ರಿವಿಷ್ಟಪ ಮಹರ್ಜನೋ ತಪ ಸತ್ಯಲೋಕಗಳತ್ರಿವಿಕ್ರಮ ನಿನ್ನಯ ಪಾದವು ವ್ಯಾಪಿಸಿತೀವ್ರ ಸರಸಿಜಜಾಂಡಕಟಾಹಭೇದಿಸೆ ಬ್ರಹ್ಮಅವನಿಜಸಲಾ ಪಾದದಿಂ ಗಂಗೆ ಪಡೆದಿ 18ಸತ್ಯಲೋಕವು ನಿನ್ನನಖಕಾಂತಿಯಿಂದಜ್ಯೋತಿಯಲಿ ಮುಳುಗಲು ಬ್ರಹ್ಮದೇವಎದ್ದು ಬಂದು ಪಿತ ನಿನ್ನ ಪಾದವ ಕಂಡುಅತಿ ಮುದದಿ ಪೂಜಿಸಿದ ಪರಿವಾರ ಸಹಿತ 19ಬ್ರಹ್ಮಸಹ ವಂದಿಸಿದರು ನಿನ್ನ ಮರೀಜಾದಿಮಹಂತರು ಸನಕಾದಿಯೋಗಿಗಳು ಸರ್ವಮಹಾಪುರಾಣ ಸಂಹಿತ ವೇದ ವೇದಾಂಗದಿಮಹಾಸದಾಗಮ ದೇವತಾ ಸಮೂಹ 20ಕಮಂಡಲದಿ ಜಲ ಪೂರೈಸಿಹರಿನಿನ್ನಕಮಲಪಾದಕೆ ಆಘ್ರ್ಯಪಾದ್ಯಾದಿ ಪೂಜೆನೇಮದಿ ಅತಿಮುದ ಭಕ್ತಿಯಿಂದಲಿ ಜೀವೋ -ತ್ತಮ ಬ್ರಹ್ಮ ಮಾಡಿದನು ನಿಜ ಪುಣ್ಯಶ್ಲೋಕ 21ತ್ರಿವಿಕ್ರಮನೇ ನಿನ್ನಯ ಪಾದತೀರ್ಥವೇ ಗಂಗಾಪವಿತ್ರತಮವೆಂದು ತ್ರಿಲೋಕದಲಿ ಪ್ರಸಿದ್ಧದೇವ ದೇವೋತ್ತಮನೇ ಅದ್ಭುತ ಮಹಾಮಹಿಮಪೂರ್ವವೋಲ್ ನಿಂತಿ ವಾಮನ ರೂಪದಲಿ 22ಕಮಲಾಸನಾದಿಗಳು ಲೋಕಪಾಲಕರೆಲ್ಲತಮ್ಮ ತಮ್ಮ ಅನುಚರ ಸುರರ ಸಮೇತನರ್ಮದಾ ತೀರಸ್ಥ ಬಲಿಯಕ್ರತುಶಾಲೆಯಲಿವಾಮನನೆ ನಿನ್ನ ಬಳಿ ಬಂದು ತುಂಬಿದರು 23ಜಯ ಜಯ ಜಯತು ಅನಂತ ಮಹಿಮನೆ ನಿನ್ನತೋಯಜೋದ್ಭವ ಮೊದಲಾಗಿ ಸುರವರರುಅಘ್ರ್ಯಪಾದ್ಯ ಗಂಧ ಧೂಪ ದೀಪಮಾಲಾನೃತ್ಯಗಾಯನದಿ ಪೂಜಿಸಿದರು ಮುದದಿ 24ಆನಂದ ಉಕ್ಕುವ ಭಕ್ತಿಯಿಂದಲಿ ನಿನ್ನಅನಂತ ಮಹಾತ್ಮ್ಯ ಕೊಂಡಾಡಿ ಸುತ್ತಿಸಿಸುಧ್ವನಿಯಲಿ ಜಯಘೋಷ ಮಾಡಿದರುದುಂದುಭಿಭೇರಿಶಂಖಗಳ ಬಾರಿಸುತ25ಬ್ರಹ್ಮದೇವನ ಸುತ ಜಾಂಬವಂತನು ಆಗಮಹಾಭೇರಿ ಶಬ್ದಿಸಿ ದಿಕ್ಕು ವಿದಿಕ್ಕುಮಹಾರ್ಹ ವಾಮನ ನಿನ್ನ ವೈಭವ ಕೊಂಡಾಡಿದ್ದುಮಹೋತ್ಸವ ಎಂದರು ಮುದದಿ ಸಜ್ಜನರು 26ಸಜ್ಜನರು ಸುರರೆಲ್ಲಾನಂದ ಭರಿತರು ಆಗೆದುರ್ಜನ ದೈತ್ಯರು ನಿಂದಿಸಿ ವಾಮನನುದ್ವಿಜರೂಪಿ ಮಾಯಾವಿ ವಿಷ್ಣು ಸುರಕ್ಷಪಕ್ಷನುವಂಚಕನು ಎನ್ನುತ್ತ ಅರ್ಭಟಮಾಡಿದರು 27ಸತ್ಯಧರ್ಮನುಬಲಿತಡೆದರೂ ಮೀರಿದೈತ್ಯರು ಅಚ್ಯುತನ ಕೊಲ್ಲಲು ಬಾರೆಜಯವಿಜಯವಿಷಕ್ಸೇನಾದಿಸುರರುದೈತ್ಯರಲಿ ಬಹು ಜನರ ಕೊಂದುಹಾಕಿದರು 28ನಂದ ಸುನಂದಜಯವಿಜಯಬಲಪ್ರಬಲಪತತ್ರಿಪಕುಮುದಕುಮುದಾಕ್ಷ ಜಯಂತಶೃತದೇವ ಪುಷ್ಪದಂತ ವಿಷಕ್ಸೇನಸಾತ್ವತಾದಿ ಸರ್ವರ ಶೌರ್ಯ ಏನೆಂಬೆ 29ವಿಪ್ರಚಿತ್‍ಯಾದಿ ದೈತ್ಯರಿಗೆ ಪೇಳಿದಬಲಿಪ್ರಭು ಭಗವಂತನ ಇಚ್ಛಾನುಸಾರವೇಲಭಿಸುವುದು ಸರ್ವವು ಜಯವು ಅಪಜಯವುಲಭಿಸಲು ಜಯ ಈಗಕಾಲಅಲ್ಲವೆಂದು30ಸಾತ್ವಿಕ ಧರ್ಮವಾನ್ಬಲಿಇನ್ನೂ ಬೋಧಿಸಲುಯುದ್ಧದಲಿ ತಾಡಿತ ದೈತ್ಯರು ಪಾತಾಳಯೈದಿದರು ಬೇಗನೆ ಏನೆಂದು ವರ್ಣಿಸುವೆಸದ್ಧರ್ಮ ಸುಜ್ಞÕನಿ ಭಕ್ತಬಲಿಗುಣವ31ಪದುಮಜಾಂಡದ ಪ್ರಭುವೇ ನಿನ್ನಾಜÉÕಯಿಂ ಗರುಡಬಂಧಿಸಿದ ವರುಣ ಪಾಶದಲಿ ಬಲಿಯಬಂಧಿಸಲು ಮಹಾಧ್ವನಿ ಹಾಹಾಕಾರವುಎದ್ದಿತು ದಿಕ್ಕು ವಿದಿಕ್ಕು ಸರ್ವತ್ರ 32ಬ್ರಷ್ಟ ಶ್ರೀ ಸ್ಥಿರಪ್ರಜÕ ಮಹಾಯಶಸ್ವಿ ಬಲಿಯವಿಷ್ಣು ಪ್ರಭವಿಷ್ಣು ವಾಮನ ನೀ ಕೇಳ್ದಿಅಷ್ಟು ಸ್ಥಳಗಳು ಎರಡು ಪಾದದಲಿ ಅಡಗಿದವುಕೊಟ್ಟು ಪೂರೈಸು ಮೂರನೇಪಾದಎಂದು33ಹೇಳಿದಂತೆ ಕೊಡದಿದ್ದರೆ ನಿರಯದಲಿಬೀಳ ಬೇಕೆಂಬುವುದು ಗುರುಗಳೊಪ್ಪುವರುಹೇಳಿದಂತೆ ಕೊಡು ಮೂರನೇಪಾದಸ್ಥಳಇಲ್ಲದಿದ್ದರೆ ನರಕ ಹೋಗು ಎಂದಿ ಬಲಿಗೆ 34ಪದಂ ತೃತೀಯಂ ಕುರು ಸೀಷ್ರ್ಣ ಮೇ ನಿಜಂಎಂದು ಪೇಳುತಬಲಿವರುಣಪಾಶಬಂಧಕೂ ನಿರಯಕೂ ಶೋಕದಿ ಅಂಜುವನಲ್ಲಸಾಧುಸತ್ಯದ ಕೊರತೆಗೇವೆ ಅಂಜುವೆನೆಂದ 35ನೈವಾರ್ಥ ಕೃಛ್‍ರಾಧ್ ಭವತೋ ವಿನಿಗ್ರಹಾದ ಸಾಧು ವಾದಾದ್ ಭೃಷ ಮೃದ್ವಿಜೇಯಥಾಎನ್ನುತಬಲಿಮತ್ತು ತನ್ನ ಕುಲಹಿರಿಯರುನಿನ್ನೊಲಿಸಿಕೊಂಡ ವಿಧ ಸ್ಮರಿಸಿ ಪೇಳಿದನು 36ಉತ್ತಮ ಶ್ಲೋಕ ಹರೇ ಪರಮಗುರು ನಿನ್ನಭಕ್ತವರ್ಯನು ಸಾಧು ಪ್ರಿಯ ಸತ್ಯಧರ್ಮಪ್ರಹ್ಲಾದ ಸರ್ವ ಐಹಿಕ ವಸ್ತು ಸಂಸೃತಿಹೇತುಎಂದು ನಿನ್ನ ಪದ್ಮಾಂಘ್ರಿಯಲ್ಲೇ ರತನಾದ37ಇನ್ನೂ ಬಹುವಾಗಿಬಲಿಭಕ್ತಿಯಿಂ ಮಾತಾಡೆಶ್ರೀನಿಧಿ ನಿನ್ನ ಪ್ರಿಯ ಪ್ರೇಮಿ ಪ್ರಹ್ಲಾದಪೂರ್ಣೇಂದು ಉದಿಸಿದಂದದಿ ಬಂದು ನಿಂತನುಹೊನ್ನು ವಸನಾಬ್ಜಾಕ್ಷ ಸುಂದರ ವಿಗ್ರಹನು 38ಬಂಧಿತಬಲಿಪಿತಾಮಹ ಪ್ರಹ್ಲಾದನಿಗೆಮೂಧ್ರ್ನಾ ನಮಿಸಿದನು ನೇತ್ರಾಂಬು ತುಳಕೆಪದ್ಮಜ ಸುನಂದೇಶನಂದಾದ್ಯುಪಾಸಿತಇಂದಿರೇಶನೆ ನಿನಗೆ ನಮಿಸಿದ ಪ್ರಹ್ಲಾದ 39ಮೋದಬಾಷ್ಪದಿ ನಮಿಸಿ ಪೇಳಿದನು ನೀಬಲಿಗೆಇಂದ್ರಪದ ಕೊಟ್ಟಿದ್ದಿ ಕೊಂಡೀಗ ಅದನ್ನೇಘಾತಕ ಮೋಹಕ ಶ್ರೀ ಕಳೆದು ಅನುಗ್ರಹ ಮಾಡಿದಿಎಂದು ನಮಿಸಿದ ಜಗದೀಶ್ವರನೇ ನಿನಗೆ 40ನಾರಾಯಣಅಖಿಳಲೋಕ ಸಾಕ್ಷಿಯೇ ನಿನಗೆಈ ರೀತಿ ಪ್ರಹ್ಲಾದ ಪೇಳಿದ ತರುವಾಯವಾರುಣದಿ ತನ್ನಪತಿಕಟ್ಟಿಲ್ಪಟ್ಟಿದ್ದು ಕಂಡುಕರಮುಗಿದು ನಮಿಸಿದಳು ನಿನಗೆಬಲಿಜಾಯಾ41ಇಂದ್ರಸೇನ ಎಂಬ ಮತ್ತೊಂದು ಹೆಸರುಂಟುಬಂಧಿತ ಬಲಿರಾಜನಿಗೆ ತತ್ಪತ್ನಿವಿಂದ್ಯಾವಳಿ ದೇವಿ ಭಯ ಭಕ್ತಿಯಿಂದಉಪೇಂದ್ರ ನಿನಗೆ ಬಿನ್ನೈಸಿದಳು ನಮಿಸಿ 42ಆನಂದಮಯಪೂರ್ಣಕಾಮ ಪ್ರಭು ನೀನುವನರುಹಭವಾಂಡವ ಕ್ರೀಡಾರ್ಥ ಪಡೆದಿಅನನ್ಯಾಧೀನ ಸ್ವತಂತ್ರ ಸರ್ವೇಶನುನೀನೇವೆ ಸರ್ವಕರ್ತನು ಅನ್ಯರಲ್ಲ 43ನೀನೇವೇ ಬ್ರಹ್ಮಾಂಡ ದೊರೆಕರ್ತಆಗಿರಲುಅನ್ಯರಿಗೆ ಕರ್ತೃತ್ವ ಸ್ವಾಮಿತ್ವವಿಲ್ಲತಾನು ದೊರೆ ಕೊಂಡಿಹೆ ಕೊಟ್ಟಿಹೆ ಬಿಟ್ಟಿಹೆ ಎಂಬಹೀನ ಅಹಂಕಾರ ಮಾತು ಅಸಂಗತವು 44ದೇವ ದೇವನೇ ನಿನ್ನ ನಾಭಿಜ ಬಿನ್ನೈಸಿದಅವಿಕ್ಲವ ಮನದಿಂದ ಸರ್ವಸ್ಥ ನಿನಗೆನಿವೇದಿಸಿದಬಲಿರಕ್ಷಣಾರ್ಹನಾಗಿಹನುಸರ್ವಸ್ವಾಮಿಯೇ ಭೂತಭಾವನಭೂತೇಶ45ಮಂದನಾದರು ಅರ್ಪಿಸೆ ನಿನ್ನ ಪದಯುಗದಿಭಕ್ತಿಯಿಂ ದೂರ್ವಾಂಕುರ ಸಲೀಲವಾದರೂಉತ್ತಮ ಸೌಭಾಗ್ಯಗತಿ ಈವಿ ಅಂಥವಗೆಂದುಖ್ಯಾತ ಮೂರ್ಜಗದಿ ಕೊಂಡಾಡುತಿಹರೆಂದು 46ಪದ್ಮಜಗೆ ನೀ ಪೇಳ್ದಿ ಈಬಲಿಮಹಾರಾಜಅತಿ ಕಷ್ಟಕೊಳಗಾದ ಶತ್ರು ಪೀಡಿತನುಶಪ್ತನಾಗಿ ಸ್ಥಾನ ಕಳಕೊಂಡರೂ ಸಹಸತ್ಯವಾಕ್ ತ್ಯಜಿಸದ ಸದ್ಧರ್ಮವಂತ 47ಸುವ್ರತ ಈ ಬಲಿಗೆ ಅಮರರಿಗೂ ದುಷ್ಪ್ಮಾಪ್ಯಸಾವರ್ಣಿ ಮನು ಕಲ್ಪದಿ ಇಂದ್ರ ಪದವಈವಿ ನೀ ಎಂದು ಅವ ಆ ಕಾಲದವರೆಗಿರಲಿವಿಶ್ವಕರ್ಮ ನಿರ್ಮಿತ ಸುತಲಿದಿ ಎಂದಿ 48ಆಧಿ ವ್ಯಾಧಿ ಶ್ರಮ ಉಪದ್ರವಗಳಿಲ್ಲ -ದಂಥ ಸುತಲದಲಿ ಸುಖದಿಂದಿರಲಿಎಂದು ನೀ ಬ್ರಹ್ಮನಿಗೆ ಪೇಳಿ ಬಲಿಯನು ನೋಡಿಇಂದ್ರಸೇನ ಮಹಾರಾಜ ಭದ್ರಮಸ್ತುತೆ ಎಂದಿ 49ಸುತಲದಲಿ ಪರಿವಾರ ಸ್ವಜನರಿಂದೊಡಗೂಡಿಭದ್ರದಿ ಸೌಭಾಗ್ಯದಿ ವಾಸಮಾಡುದೈತ್ಯಶತ್ರುಗಳು ಕಾಟಕೊಟ್ಟರೆಅವರಕತ್ತರಿಸುವುದು ಸುದರ್ಶನವು ಎಂದಿ 50ಸದಾ ಸನ್ನಿಹಿತನಾಗಿದ್ದು ರಕ್ಷಿಸುವಿಸದಾ ನಿನ್ನ ದರ್ಶನ ಮಾಡಬಹುದುದೈತ್ಯರ ಸಂಗದಿಂ ಅಸುರಭಾವ ಬಂದರೆ ನಿನ್ನಸುದರ್ಶನದಿ ಅದು ಪೋಪುದು ಎಂದಿ 51ಮಹೈಶ್ವರ್ಯಪೂರ್ಣಹರಿನಿನ್ನ ಮಾತುಕೇಳಿಮಹಾನುಭಾವನು ಸಾಧುಪ್ರಿಯ ಬಲಿರಾಯಮಹಾನಂದ ಬಾಷ್ಪವ ಸುರಿಸುತ್ತ ಸ್ತುತಿಸಿದಮಹಾಕೃಪಾಂಬುಧೇ ಭಕ್ತವತ್ಸಲ ನಿನ್ನ 52ಅನತೇಷ್ಟಪ್ರದ ಪ್ರಪನ್ನಪಾಲಕ ವಿಭೋತನಗೆ ಪೂರ್ವದಿ ಲೋಕಪಾಲಕರ್ಗೆ ಸಿಕ್ಕದಅನುಗ್ರಹ ಮಾಡಿರುವಿ ಅಸುರನು ತಾನುಎನ್ನುವದು ಎಣಿಸದೆÀ ಕೃಪೆ ಮಾಡಿದಿ ಎಂದ 53ಕೃತಜÕ ಭಕ್ತನುಬಲಿಹರಿನಿನಗೆ ನಮಿಸಿದನುಪದುಮಭವಗೂ ಸದಾಶಿವಗೂ ನಮಿಸಿದನುಬಂಧಿಸಿದ ವರುಣಪಾಶವು ಬಿಟ್ಟು ಹೋಯಿತುಹೇ ದಯಾನಿಧೇ ನಿನ್ನ ಕರುಣದಿಂದಲ್ಲೆ 54ಈ ರೀತಿ ಹರಿವಾಮನ ನೀನು ಕ್ರೀಡಿಸಿದಿಶಕ್ತನಿಗೆ ಸ್ವರ್ಗಾಧಿಪತ್ಯ ಪುನರಿತ್ತಿಸುರಮಾತೆ ಅದಿತಿಗೆ ಪಯೋವ್ರತ ಫಲವಿತ್ತಿಸರ್ವಜಗತ್ತಿಗೆ ಸುಕ್ಷೇಮಒದಗಿಸಿದಿ 55ಸಿರಿಧರಾಪತಿ ವಿಷ್ಣು ಶಿಪಿವಿಷ್ಣು ವಾಮನಹರಿನಿನಗೆ ಮೂರಡಿ ಸ್ಥಳ ದಾನ ಕೊಟ್ಟುಮೂರನೇಪಾದತನ್ನ ಶಿರ ಮೇಲೆ ಇಡು ಎಂದಧೀರ ಬಲಿಗೆ ಭಾವಿ ಇಂದ್ರಪದವಿತ್ತಿ 56ಇನ್ನಾರಿಗೂ ಈ ಸಮಯದಿ ಸಿಕ್ಕದನಿನ್ನಯ ಮಹವಿಶೇಷ ಪ್ರಸಾದ ಕೊಟ್ಟಿರುವಿವನಜಭವ ಶಿವ ವಂದ್ಯಹರಿನೀನು ರಕ್ಷಕನುನೀನೆಲ್ಲಿ ನಾವು ಅಸುರರು ಎಲ್ಲಿ ಸ್ವಾಮಿ 57ಜಗತ್ ಸೃಷ್ಟ್ಯಾದಿಗಳ ಲೀಲೇಯಿಂದಲಿ ಮಾಳ್ಪಿಸರ್ವಗ ಸಮ ಅವಿಕ್ರಯ ವಿವಿಧಫಲದಹೀಗೆ ಇನ್ನೂ ಬಹು ತತ್ವನಿಬಿಡ ಸ್ತೋತ್ರಉಕ್ಕುವ ಭಕ್ತಿಯಲಿ ಮಾಡಿದ ಪ್ರಹ್ಲಾದ 58ವತ್ಸಪ್ರಹ್ಲಾದ ಭದ್ರಂತೇ ಎನ್ನುತಸುತಲಕೆಬಲಿಸಹ ಪೋಗಿ ಸುಖಿಸುವುದುಗದಾಪಾಣಿ ನಿನ್ನನ್ನುನಿತ್ಯನೋಡಿ ಮಹಾ-ನಂದ ಹೊಂದಿಕರ್ಮಕಳೆಎಂದು ಪೇಳ್ದಿ59ಸಾಧುಪ್ರಿಯ ಪ್ರಖ್ಯಾತ ಪ್ರಹ್ಲಾದ ಬಲಿರಾಜಪ್ರದಕ್ಷಿಣಿ ನಮಸ್ಕಾರ ಭಕ್ತಿಯಿಂ ಮಾಡಿಆದಿ ಪೂರಷ ನಿನ್ನ ಅನುಜÉÕೀಯ ಕೊಂಡುಪೋದರು ಸುತಲಕ್ಕೆ ಮಹಾಬಿಲ ದ್ವಾರ 60ಮಧ್ಯದಲೆ ತಡೆಯಾದ ಬಲಿಯಜÕ ಪೂರೈಸೆಯಜÉÕೀಶ ಯಜÕ ಪೂರುಷ ಭೂಮ ನೀನುಆಜÉÕ ಮಾಡಲು ಶುಕ್ರಾಚಾರ್ಯ ಬ್ರಾಹ್ಮಣರೊಡೆಯಜÕ ಕರ್ಮವ ಸಾಂಗ ಪೂರ್ಣ ಮಾಡಿದರು 60ಬ್ರಹ್ಮ ಶಿವ ದಕ್ಷ ಮನು ಬೃಗ್ ವಾಂಗೀರಾದಿಗಳುಕುಮಾರ ದೇವರ್ಷಿಗಳು ಪಿತೃ ಭೂಮಿಪ ಸರ್ವರುವಾಮನನೇ ಲೋಕೈಕಪತಿಪಾಲಕನೆನುತ ನಿನಗೆನಮಿಸಿ ತೋಷಿಸಿದನು ಅದಿತಿ ಕಶ್ಯಪರು 62ಸರ್ವಲೋಕಂಗಳಿಗೂ ಸರ್ವವೇದಂಗಳಿಗೂಸರ್ವದೇವತೆಗಳಿಗೂ ಧರ್ಮ ಯಶಸ್‍ಸಿರಿಗೂಸರ್ವಸುವ್ರತಗಳಿಗೂ ಸ್ವರ್ಗಾಪವರ್ಗಕ್ಕೂಸರ್ವವಿಭೂತಿಪತಿಮಂಗಳ ಉಪೇಂದ್ರ63ಪದುಮಜನು ಅನುಮೋದಿಸಿ ಇಂದ್ರ ಬೇಡಲುನೀ ದೇವಯಾನದಿ ಇಂದ್ರ ಸಹ ಕುಳಿತುತ್ರಿದಿವ ಸೇರಿದಿ ಇಂದ್ರೇಂದ್ರ ಉಪೇಂದ್ರ ಆ -ನಂದಮಯ ಜಗದೀಶ ಶ್ರೀಪತೇ ಭೂಮನ್ 64ಅದಿತಿ ದೇವಿಯ ಹೊಗಳಿ ವಿಷ್ಣು ವಾಮನ ನಿನ್ನಅದ್ಭುತ ಮಹಿಮೆ ಕೊಂಡಾಡಿ ಕೀರ್ತಿಸುತಪದುಮಭವ ಶಂಕರ ಭೃಗ್‍ವಾದಿಮುನಿಪಿತೃ ಸಿದ್ಧರು ಸ್ವಸ್ವಸ್ಥಾನಯೈದಿದರು 65ವಾಮನನು ವಿಶ್ವರೂಪ ಪ್ರಕಟಿಸಿ ದಾನವಸ್ತುಭೂಮಿ ದಿವಿಯ ಈರಡಿಗಳ ವ್ಯಾಪಿಸಿದ್ದುನೇಮಿ ವಿಪ್ರಚಿತ್ತಿ ಪೇಳಿದ ಮಾಯಾಜಾಲವು ಅಲ್ಲವಿಷಮ ವಸ್ತುವ ದೋಷ ಕಿಂಚಿತ್ತೂ ಅಲ್ಲ 66ಪ್ರಾಥಮಿಕವಾಗಿ ಶ್ರೀ ವಿಷ್ಣುರೂಪಒಂದೊಂದಲೂಅನಂತರೂಪಗಳು ಸುಖಜ್ಞಾನಾದಿ ಪೂರ್ಣವಾಗಿಶಶ್ವದೇಕ ಪ್ರಕಾರವಾಗಿ ಇಹುದೆಂದು ಶಾಸ್ತ್ರ ಸಾರುತಿವÉಸ್ವತಃ ಅವ್ಯಕ್ತಹರಿಪ್ರಕಟಿಸುವ ಸ್ವೇಚ್ಛೆಯಿಂ ಆಗಾಗ67ಅಣೋರಣಿಯಾನ್ ಮಹತೋ ಮಹೀಯಾನ್ತನ್ನ ವಾಮನ ರೂಪದಲ್ಲೇ ತನ್ನ ವಿಶ್ವರೂಪತಾನೇ ವ್ಯಕ್ತ ಮಾಡಿದನು ವಿಷ್ಣು ವ್ಯಾಪನಶೀಲಗುಣರೂಪ ಅಭಿನ್ನ ಅವ್ಯಯನು 68ಮತ್ತೂ ಬಲಿರಾಜನಿಗೆ ಶ್ರುಕ್ರಾಚಾರ್ಯರುಮೊದಲೇವೇ ಹೇಳಿದರು ವಾಮನನು ವಿಷ್ಣು ಅವ್ಯಯನುಇಂದ್ರನಿಗೆ ಪುನಃ ರಾಜ್ಯ ಕೊಡಲಿಕ್ಕೆ ದಾನಕೇಳಿಕ್ಷಿತಿದಿವಿ ಸರ್ವವ ಎರಡು ಪಾದದಿಂ ಅಳೆವನೆಂದು69ಈ ರೀತಿ ಬಲಿರಾಜ ದಾನಕೊಡುವ ಪೂರ್ವದಲೆಹರಿವ್ಯಾಪನಶೀಲ ವಿಷ್ಣುವೇವೇ ವಾಮನನೆಂದುಅರಿತೇವೇಶಕ್ರಸಾಧಕ ದಾನ ಕೊಟ್ಟಿಹನುಮುಚ್ಚುಮರೆ ವಿಷಯ ವಂಚನೆಗೆ ಸಿಲುಕಲಿಲ್ಲ 70ಮೋಸಕ್ಕೆ ಒಳಗಾಗಿ ಅಲ್ಲ ಮನಸಾ ತಿಳಿದೇಅಸುರರಿಪು ವಿಷ್ಣುಗೆ ಬಲಿರಾಜ ತಾನೇಈಶಾರ್ಪಣಜಗತ್ರಯದಾನ ಕೊಟ್ಟಿಹನುಎಂದು ಹೇಳಿ ಕೀರ್ತಿಸಿದರು ದೇವಗಾಯಕರು 71ಕಿನ್ನರಕಿಂಪುರುಷಗಂಧರ್ವರು ಕೊಂಡಾಡಿದರುಮನಸ್ವಿನಾನೇನ ಕೃತಂ ಸುದುಷ್ಕರಂವಿದ್ವಾನ್ ಅದಾದ್ ಯದ್ರಿಪವೇ ಜಗತ್ರಯಂಏಕೋನ ವಿಂಶತ್ ಅಧ್ಯಾಯ ಶ್ಲೋಕ ಇಪ್ಪತ್ತು 72ಬಲಿರಾಜನು ರಾಣಿ ವಿಂದ್ಯಾವಳಿಯುಅಲ್ಲಿ ಬಂದ ಪ್ರಹ್ಲಾದ ಮಹಾರಾಜನುಪ್ರಲಂಭನ ವೈಷಮ್ಯ ವಾಮನ ಮಾಡಲಿಲ್ಲಬಲಿಗೆ ಮಹಾ ಅನುಗ್ರಹ ಮಾಡಿದಿ ಎಂದು ತಿಳಿದಿಹರು 73ಶಿಪಿವಿಷ್ಟ ವಾಮನ ತ್ರಿವಿಕ್ರಮನೆ ನಿನ್ನಸುಪವಿತ್ರ ಚರಿತೆ ಇದುಕೇಳಿಪಠಿಸುವರ್ಗೆಪಾಪ ಪರಿಹಾರವುಶುಭಮಂಗಳವಿತ್ತುಸೌಭಾಗ್ಯಪ್ರದ ಶ್ರೀಶ ಸದ್ಗತಿ ಈವಿ 74ಮಧ್ವಸ್ಥ ಸರ್ವಸ್ಥ ಮತ್‍ಸ್ಥವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 75- ಇತಿ ತೃತೀಯ ಅಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀಕೂರ್ಮ5ಪ್ರಥಮ ಅಧ್ಯಾಯಶ್ರೀಕೂರ್ಮಪ್ರಾದುರ್ಭಾವಲೀಲಾವತಾರನೇ ಸರ್ವ ಲೋಕಾಧಾರಮಾಲೋಲ ಸುಖಚಿತ್ ತನು ಕೂರ್ಮರೂಪಪಾಲಾಬ್ಧಿಜಾಪತಿಅನಘಅಜಿತ ಧನ್ವಂತರಿಲೀಲಾ ಮೋಹಿನಿಅನಘಶರಣು ಮಾಂಪಾಹಿಪವೇದಾದಿ ಸಚ್ಛಾಶ್ರ(ಪ್ರ)ಮೇಯ ವೇದವತೀಶಪದುಮಜಾಂಡವ ಪಡೆದ ಜಗದೇಕಭರ್ತಾಅದ್ವಿತೀಯನು ಸ್ವಾಮಿ ಸಮರಧಿಕರಿಲ್ಲದವವೇಧಮುಕ್ಕಣ್ಣಾದಿ ಸುರಸೇವ್ಯಪಾಹಿ1ಸತ್ಯ ಜ್ಞÕನಾನಂತ ಭೂಮಾದಿ ಗುಣನಿಧಿಯೇಸತ್ಯಸೃಷ್ಟಿ ಮಾಳ್ಪಿ ಸತ್ಯನಾಮಾಪ್ರತ್ಯಕ್ಷ ಪ್ರಮಾಣ ಸಿದ್ಧವು ಈ ಜಗತ್ತುತತ್ಸøಷ್ಟಿ ಪಾಲನಾದಿಗಳೆಲ್ಲ ಸತ್ಯ 2ಸೃಷ್ಟಿ ಪ್ರವಾಹವು ಅನಾದಿಯೂ ನಿತ್ಯವೂಘಟಾದಿ ಕಾರ್ಯಗಳ ಉಪಾದಾನ ಕಾರಣಮೂಲ ಜಡಪ್ರಕೃತಿಯೂ ಅನಾದಿಯೂ ನಿತ್ಯವೂಸೃಷ್ಟ್ಯಾದಿಕರ್ತಾ ನಿನ್ನಾಧೀನವು ಎಲ್ಲಾ 3ಕಾರ್ಯಕಾರಣಾತ್ಮಕ ಜಗತ್ತು ಸರ್ವಕ್ಕೂತೋಯಜಾಕ್ಷನೇ ನೀನು ನಿಮಿತ್ತ ಕಾರಣನುನಿಯಾಮಕನು ನೀನೇವೇ ಚಿದಚಿತ್ ಅಖಿಳಕ್ಕೂಅನ್ಯರಿಗೆ ಸ್ವಾತಂತ್ರ್ಯ ಸಾಮಥ್ರ್ಯವಿಲ್ಲ 4ವಿಧಿಶಿವಾದಿ ಸರ್ವ ಸುರಾಸುರರುಗಳಿಗೆಸತ್ತಾಪ್ರತೀತಿ ಪ್ರವೃತ್ತಿಪ್ರದ ಹರಿಯೇಭೂತಭವ್ಯ ಭವತ್ಪ್ರಭುವು ವಿಷ್ಣು ನೀನೇವೇಚೇತನಾ ಚೇತನಾಧಾರ ಸರ್ವತ್ರ 5ದೂರ್ವಾಸರ ಶಾಪ ನಿಮಿತ್ತದಿ ಸ್ವರ್ಗದಐಶ್ವರ್ಯವು ಕ್ಷಿಣವು ಆಗಿ ಬಹುವಿಧದಿದೇವಶತೃಗಳ ಬಲ ಉನ್ನಾಹವಾಗಲುದೇವರಾಜನು ಬ್ರಹ್ಮನಲ್ಲಿ ಪೋದ 6ವಾಸವವರುಣಾದಿ ಸುರರ ಮೊರೆಕೇಳಿಬಿಸಜಸಂಭವ ಶಿವ ಶಕ್ರಾದಿಗಳ ಕೂಡಿಶ್ರೀಶನೇ ರಕ್ಷಕನು ಎಂದು ನಿನ್ನಲ್ಲಿ ಬಂದುಸಂಸ್ತುತಿಸಿದನುಪರಮಪೂರುಷ ನಿನ್ನನ್ನ7ಅವ್ಯಯನೇ ಸತ್ಯನೇ ಅನಂತನೇ ಅನಘನೇಶ್ರೀವರನೇ ಪೂರ್ಣೈಶ್ವರ್ಯ ಮಹಾಪುರುಷದೇವವರೇಣ್ಯ ನಿನ್ನಲ್ಲಿ ಸ್ತುತಿ ಬ್ರಹ್ಮಸುವಿನಯದಿ ಮಾಡಿದ ವೇದಾರ್ಥಸಾರ 8ಸಹಸ್ರಾರ್ಕೋದಯ ದ್ಯುತಿ ಸುಂದರರೂಪಮಹಾರ್ಹ ಭಗವಂತಹರಿಈಶ್ವರನೇ ನೀನುಬ್ರಹ್ಮಾದಿಗಳ ಸ್ತುತಿಗೆ ಪ್ರಸನ್ನನು ಆಗಿಮಹಾನುಭಾವ ನೀ ಒಲಿದಿ ಕೃಪೆಯಿಂದ 9ಪದುಮನಾಭನೇನಿರ್ವಾಣಸುಖಾರ್ಣವನೇಪದುಮಭವ ಸನ್ನಮಿಸಿ ಪೇಳಿದ್ದಕೇಳಿಸಿಂಧುವಮಥನಮಾಡಲಿಕೆ ಬೇಕು ಎಂದಿಅದರ ಬಗ್ಗೆ ಉಪಾಯವ ಅರುಹಿದಿ ವಿಭುವೇ 10ಕ್ಷೀರಾಬ್ಧಿಯಲಿ ವೀರು ತೃಣ ಲತೌಷಧಿ ಇಟ್ಟುಗಿರಿಶ್ರೇಷ್ಠ ಮಂದರವ ಕಡೆಗೋಲು ಮಾಡಿವರಸರ್ಪ ವಾಸುಕಿಯ ಹಗ್ಗ ಮಾಡಿ ಮಥಿಸಿಅಮೃತೋತ್ಪಾದನ ಯತ್ನಿಪುದು ಎಂದಿ 11ದೈತ್ಯ ದಾನವರೆಲ್ಲ ಶತೃಗಳು ಆದರೂಸಂಧಿಯ ಅವರೊಡೆ ಮಾಡಿ ಕೂಡಿಮಂದರವ ಸಿಂಧುವಲಿ ತಂದಿಟ್ಟು ಮಥಿಸುವುದುಸುಧೆಯ ಉತ್ಪಾದನಕೆ ಉಪಾಯ ಇದು ಎಂದಿ 12ದೈತ್ಯರ ಸಹಕಾರ ಬಗೆ ಯುಕ್ತಿಗಳ ಪೇಳಿಭೀತಿ ಪಡಬೇಡ ವಿಷ ಉಕ್ಕಿ ಬರುವಾಗಅದಿತಜರಿಗೇವೇ ಫಲ ಲಭಿಸುವುದು ಎಂದುದಿತಿಜರಿಗೆಕ್ಲೇಶಭವಿಸುವುದು ಎಂದಿ13ಪುರುಷೋತ್ತಮ ಜಗತಃಪತಿ ಅಜಿತನಾಮಾಸುರರಿಗೆ ಬೋಧಿಸಿದ ರೀತಿ ಅನುಸರಿಸಿಶಕ್ರಾದಿಗಳು ವೈರೋಚನಾದಿಗಳೊಡೆತ್ವರಿತ ಯತ್ನಿಸಿದರು ಕಡಲ ಮಥನಕ್ಕೆ 14ದೂರದಲ್ಲಿ ಇದ್ದ ಆ ಅತಿಭಾರ ಗಿರಿಯನ್ನಸುರರುದಾನವರೆತ್ತಿ ಸಮುದ್ರ ತಟಕೆತರಲು ಬಹು ಯತ್ನಿಸಿದರು ವ್ಯರ್ಥದಿಗಿರಿಯ ಭೂ ಮೇಲೆತ್ತೆ ಅಸಮರ್ಥರು 15ಮೇರುಗಿರಿ ಬದಿ ಇದ್ದ ಮಂದರಾಚಲವುರುದ್ರ ರುದ್ರವರ ಬಲಯುತವು ಎತ್ತಲು ಅಶಕ್ಯಸುರದಾನವರು ಬೆರಗಾಗೇ ಒಂದೇ ಕರದಿಂಗಿರಿಯ ನೀ ಎತ್ತಿ ಗರುಡನ ಮೇಲೆ ಇಟ್ಟಿ 16ಗರುಡನಿಂದ ತಮ್ಮ ಮೇಲೆ ಇರಿಸೆ ಪರಿಕ್ಷಾರ್ಥಭಾರತಾಳದೇ ಸುರಾಸುರರು ಹತರಾಗೇಕಾರುಣ್ಯ ನೋಟದಿ ಬದುಕಿಸಿದಿ ಮೃತರನ್ನತೀವ್ರ ಗಾಯಗಳನ್ನ ಸೌಖ್ಯ ಮಾಡಿದಿಯೋ 17ಲೀಲೆಯಿಂದಲಿ ಪುನಃ ಒಂದೇ ಹಸ್ತದಿ ಗಿರಿಯಮೇಲೆತ್ತಿ ಗರುಡನ ಹೆಗಲಲಿಟ್ಟು ಕುಳಿತುಪಾಲಸಾಗರದಲ್ಲಿ ಸ್ಥಾಪಿಸಿ ಮಥನಕ್ಕೆವ್ಯಾಳನ ಹಗ್ಗದಂದದಿ ಸುತ್ತಿಸಿದಿಯೋ 18ಪುಚ್ಛಭಾಗವು ಅಮಂಗಳವು ಬೇಡವೆಂದುಅಸುರರ ವಾದಾ ಮುಖಭಾಗ ಹಿಡಿಯೇವಾಸುಕಿಯ ಪುಚ್ಛಾಂಗ ದೇವತೆಗಳು ಹಿಡಿದುಶ್ರೀಶ ನೀ ಸಹಕರಿಸೆ ಮಥನವ ಮಾಡಿದರು 19ಪರಮಯತ್ನದಿ ಅಮೃತಾರ್ಥ ಪಯೋನಿಧಿಯಗಿರಿಯಿಂದ ಮಂಥನ ಸುರಾಸುರರು ಮಾಡೆಪರಮಗುರುತರಅದ್ರಿಆಧಾರವಿಲ್ಲದೆಸರಿದು ಮುಳುಗಿ ಬೇಗ ಕೆಳಗಡೆ ಹೋಯಿತು 20ಶೈಲವು ಮುಳುಗಲು ಸುಧಾಕಾಂಕ್ಷಿಗಳ ಮನವ್ಯಾಕುಲದಿ ಮುಖಕಾಂತಿ ಮ್ಲೌನವು ಆಯಿತುಎಲ್ಲಾ ಶ್ರಮವು ವ್ಯರ್ಥ ಎಂದು ಬೆರಗಾಗಿರೆಬಲು ಕೃಪೆಯಲಿ ನೀನು ಒದಗಿದಿ ಆಗ 21ಅದ್ಭುತ್ ಮಹತ್ ಕಚ್ಛಪ ರೂಪದಲಿ ನೀಅಬ್ಧಿಯಲಿ ಬೇಗನೇ ಬಂದು ಮೇಲೆಎಬ್ಬಿಸಿದಿ ಆ ಮಂದರಾಚಲಗಿರಿಯಸುಬಲ ಪೂರುಷ ನಮೋ ಚಿನ್ಮೋದಗಾತ್ರ 22ಚನ್ಮೋದಮಯ ಮಹಾಕೂರ್ಮರೂಪನೇ ನಿನ್ನಅಮಿತ ಸುಬಲ ಲಕ್ಷ ಯೋಜನ ವಿಸ್ತಾರಸುಮಹಾ ದ್ವೀಪದಂದಿರುವ ಪೃಷ್ಠದ ಮೇಲೆಆ ಮಹಾದ್ರಿಯ ಹೊತ್ತಿ ಪುನರ್ ಮಥಿಸಲೊದಗಿದಿ 23ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧೀಶಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀಪ್ರಸನ್ನ ಶ್ರೀನಿವಾಸಧನ್ವಂತರೀ ಶರಣು ಅಜಿತ ಸ್ತ್ರೀಕೂರ್ಮ24-ಇತಿ ಪ್ರಥಮಾಧ್ಯಾಯ ಸಂಪೂರ್ಣಂ-ದ್ವಿತೀಯ ಅಧ್ಯಾಯನೀಲಕಂಠವೃತ್ತಾಂತಲೀಲಾವತಾರನೇ ಸರ್ವಲೋಕಾಧಾರಮಾಲೋಲ ಸುಖಚಿತ್ ಕೂರ್ಮರೂಪಪಾಲಾಬ್ಧಿಜಾಪತಿ ಅಜಿತ ಧನ್ವಂತರೀಲೀಲಾ ಮೋಹಿನಿಅನಘಶರಣು ಮಾಂಪಾಹಿಪಸಿರಿವರಹರಿಕೂರ್ಮನ ಪೃಷ್ಠೋಪರಿನಿಂತಗಿರಿಯಿಂದ ಅಸುರರುಸುರರುಪುನರ್ಮಥಿಸೆಗಿರ್ಗಿರಿ ಗಿರಿ ಗಿರಿ ಎಂದು ಭ್ರಮಿಸಿತು ಗಿರಿಯುಪರಿಮಳ ಪೂ ಸುರಿಸಿದರು ಬ್ರಹ್ಮಾದಿಗಳು 1ವಾಸುಕಿತಾಳದೇ ಬುಸು ಬುಸು ಎಂದು ಮೇಲ್ಶ್ವಾಸದಿ ವಿಷಜ್ವಾಲೆ ಹೊರಗೆ ಬಿಡಲುಅಸುರಬಲಿಇಲ್ವಾದಿಗಳು ಬಿಸಿ ಸಹಿಸದೇಘಾಸಿಹೊಂದಿದರುದಾವಾಗ್ನಿಪೀಡಿತರ ಪÉೂೀಲ್2ದಿತಿಜರು ಅದಿತಿಜರು ಎಷ್ಟೇ ಯತ್ನಿಸಿದರೂಸುಧಾ ಇನ್ನೂ ಪುಟ್ಟದೇ ಇರುವುದ ಕಂಡುದಂತ ಶೂಕವ ಆಗ ಸ್ವಯಂ ನೀನೇ ಹಿಡಿದುಮಥನಮಾಡಿದಿ ಸ್ವಾಮಿ ಕಾರುಣ್ಯದಿಂದ3ಪೀತಾಂಬರಿ ಸುಖ ಚಿನ್ಮಾತ್ರ ಚಾರ್ವಾಂಗಸದಾ ನಮೋ ಶರಣಾದೆ ಲೋಹಿತಾಕ್ಷದಿತಿಜಾ ಅದಿತಿಜಾರೊಡೆ ನೀನು ಸಹಮಥಿಸಲುಲತಾ ಓಷಧಿ ಕಲುಕಿ ಉಕ್ಕಿತುಸಿಂಧು4ಹಾಹಾ ಭಯಂಕರವು ಇದೇನು ಲೋಕಗಳದಹಿಸುವಂದದಿ ಫೇಣ ಉಕ್ಕಿ ಬರುತಿದೆಯುಮಹಾ ವೀರ್ಯತರ ಹಾಲಾಹಲವೆಂಬ ವಿಷ ಇದುಮಹೀಭರ್ತಾ ಮಹಾದೇವ ಮಹಾದ್ರಿದೃತ್ಪಾಹಿ5ಅಸಮ ಸ್ವಾತಂತ್ರ್ಯ ನಿಜಶಕ್ತಿ ಪರಿಪೂರ್ಣವಿಶ್ವರಕ್ಷಕ ನೀ ವಿಷಭಯ ನಿವಾರಿಸೆಸ್ವಸಮರ್ಥನಾದರೂ ಭೃತ್ಯರ ಕೀರ್ತಿಯಪ್ರಸರಿಸೆ ಒದಗಿದಿ ಮಹಾದೇವ ಶಾಸ್ತ 6ಮಹತ್ ಎಂಬ ಬ್ರಹ್ಮನ ಸ್ವಾಮಿ ಆದುದರಿಂದಮಹಾದೇವ ಎಂಬುವ ನಾಮ ನಿನ್ನದೇವೇಮಹಾದೇವ ಶಿವ ಈಶ ರುದ್ರಾದಿ ಶಬ್ದಗಳುಮಹಾಮುಖ್ಯ ವೃತ್ತಿಯಲಿ ನಿನಗೇವೇ ವಾಚಕವು 7ಭಸ್ಮಧರ ದೇವನಿಗೆ ಮಹಾದೇವ ಎಂಬುವನಾಮ ಔಪಚಾರಿಕದಲ್ಲೇವೇ ರೂಢಬ್ರಹ್ಮನಾಮನು ನೀನೇ ಬ್ರಹ್ಮಾಂತರ್ಯಾಮಿಯುಬ್ರಹ್ಮನೊಳು ಇದ್ದು ನೀ ಭುವನಂಗಳ ಪಡೆವಿ 8ರುದ್ರ ನಾಮನು ನೀನೇ ರುದ್ರಾಂತರ್ಯಾಮಿಯುರುದ್ರನೊಳು ಇದ್ದು ನೀ ಸಂಹಾರವ ಮಾಡುವಿತತ್‍ತತ್ರಸ್ಥಿತೋ ವಿಷ್ಣುಃ ತತ್‍ಚ್ಛಕ್ತಿ ಪ್ರಬೋಧÀಯನ್ರುದ್ರನಿಂ ವಿಷಪಾನ ನಿನ್ನ ನಿಯಮನವೇ 9ಶಕ್ರಾದಿ ಸರ್ವರಿಗೂಗುರುಆಶ್ರಯನು ಶಂಕರನುಶಂಕರನಿಗೆ ಆಶ್ರಯನು ಗುರುಮುಖ್ಯವಾಯುಮುಖ್ಯವಾಯುಗಾಶ್ರಯ ಶ್ರೀಕಾಂತ ನೀನುಶ್ರೀಕಾಂತ ನೀನೇವೇ ಸರ್ವಾಶ್ರಯ ಅನೀಶ 10ಯಾವ ಮಹಾದೇವನೊಲಿಯದೇ ವಾಯು ಒಲಿಯಆ ವಾಯು ಒಲಿಯದೇಹರಿತಾನೂ ಒಲಿಯಆ ವಾಯು ಹರಿಒಲಿಯದಿರೆ ಬೇರೆ ಗತಿಇಲ್ಲಆ ವಾಯು ಹರಿಧಾಮ ಮಹಾದೇವ ಸ್ತುತ್ಯ 11ಸರ್ವಾಂತರ್ಯಾಮಿ ಯಾವನಲಿ ಪ್ರಸನ್ನನು ಆಗಿಯಾವನ ಮೂಲಕ ಶಕ್ರಾದಿಗಳ ಕಷ್ಟತೀವ್ರದಿ ಪೋಗುವುದೋ ಆ ಮಹಾದೇವನ ಸ್ತುತಿಸಿದರುಸುರರುಶಿವಾಂತರ್ಯಾಮಿ ಶ್ರೀಹರಿ ಮಹಿಮೆಗಳ ಕೂಡಿ 12ಕರತಲೀಕೃತ್ಯಹಾಲಾಹಲವಿಷವಶಕ್ರಾದಿ ಜನರಲ್ಲಿ ಕೃಪೆ ಮಾಡಿ ಉಂಡುಕರುಣಾಳು ಮಹಾದೇವ ಭೂತದಯಾಪರನು ಈಹರಿಭಕ್ತಾಗ್ರಣಿ ಶಿವ ಉಮೇಶನಿಗೆ ಶರಣು 13ಹರಿಬ್ರಹ್ಮ ಪಾರ್ವತಿ ಪ್ರಜೇಶ್ವರರುಹರನ ಈ ಮಹತ್ಸೇವೆ ಬಹು ಶ್ಲಾಘಿಸಿದರುಕರದಿಂದ ಕೆಳಗೆ ಪ್ರಸ್ಕನ್ನ ಗರವಾದ್ದುಸರೀಸೃಪ ವೃಶ್ಚಿಕಾದಿಗಳೊಳು ಸೇರಿತು 14ಗರವು ಭೂಷಣವಾಯಿತು ವೈರಾಗ್ಯಾಧಿಪ ಶಿವಗೆಸುಪ್ರಸಿದ್ಧನು ಆದ ನೀಲಕಂಠನೆಂದುಧೀರ ಕರುಣಾಂಬುನಿಧಿ ನಂಜುಂಡೇಶ್ವರನು ಈಗಿರಿಜೇಶನಿಗೆ ನಾ ನಮಿಪೆ ಶರಣೆಂದು 15ಈ ಕೃಪಾಕರ ನೀಲಕಂಠ ಕರತಲೀಕೃತ್ಯಆ ಕಾಲಕೂಟವಿಷ ಉಂಡ ಮಹತ್ಕಾರ್ಯಸಂಕೀರ್ತಿ ಪೇಳಿರುವುದು ಶ್ರೀ ಭಾಗವತದಿಬಾಕಿ ಬಹು ಮಹೋಲ್ಪಣ ವಿಷ ವಿಷಯ ಶೃತಿ ವೇದ್ಯ 16ಉರಗಭೂಷಣ ವಿಪ ಉರಗಪರುಗಳಿಗಿಂತನೂರುಗುಣ ಎಂಬುದಕೆ ಅತ್ಯಧಿಕ ಬಲಿಯುವರಮುಖ್ಯ ಪ್ರಾಣ ಜಗತ್ ಪ್ರಾಣಗೆ ಸಮರಿಲ್ಲನೀರಜಜಾಂಡದಿ ಎಲ್ಲೂ ಶರಣೆಂಬೆ ಇವಗೆ 17ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧಾರಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸಧನ್ವಂತರಿ ಶರಣು ಅಜಿತ ಸ್ತ್ರೀಕೂರ್ಮ18-ಇತಿ ದ್ವಿತೀಯಾಧ್ಯಾಯಂ ಸಂಪೂರ್ಣಂ -ತೃತೀಯ ಅಧ್ಯಾಯಶ್ರೀ ಇಂದಿರಾ ಆವಿರ್ಭಾವಸಾರಲೀಲಾವತಾರನೇ ಸರ್ವ ಲೋಕಾಧಾರಮಾಲೋಲ ಸುಖಚಿತ್ ಕೂರ್ಮರೂಪಪಾಲಾಬ್ಧಿಜಾಪತಿ ಅಜಿತ ಧನ್ವಂತರೀಲೀಲಾ ಮೋಹಿನಿಅನಘಶರಣು ಮಾಂಪಾಹಿಪಗರಪಾನವ ವೃಷಾಂಕನು ಮಾಡೆ ಇಂದ್ರಾದಿಸುರರುದಾನವರು ಪುನರ್‍ಮಥನವ ಚರಿಸೆಕ್ಷೀರಸಾಗರದಿಂದ ಉತ್ಪನ್ನವಾದವುಪರಿಪರಿ ವಸ್ತುಗಳ್ ಒಂದರ ಮೇಲೊಂದು 1ಯಜÉೂÕೀಪಯೋಗಿಗಳಪ್ರದ ಕಾಮಧೇನುಉಚ್ಛೈಶ್ರವನಾಮ ಸುಲಕ್ಷಣ ಅಶ್ವಸಚ್ಛಕ್ತಿ ಶ್ರೇಷ್ಠತರ ಐರಾವತನಾಮಗಜೇಂದ್ರ ನಾಲ್ಕು ಚಂದದಂತ ಭೂಷಿತವು 2ಸರಸಿಜೋದ್ಭವಸೇವ್ಯಶ್ರೀಶವರಾಹಹರಿನಿನ್ನ ವಕ್ಷ ಸಂಬಂಧದಿ ಹೊಳೆವಸುಶ್ರೇಷ್ಠ ಕೌಸ್ತುಭರತ್ನ ಎಂಬುವಂತಹಸುಭ್ರಾಜಮಣಿ ಬಂತು ಆ ಸಿಂಧುವಿನಿಂದ 3ಸುರಲೋಕ ವಿಭೂಷಣವು ಸರ್ವವಾಂಛಿತ ಪ್ರದವುಪಾರಿಜಾತವು ಉದ್ಭವವಾಯಿತು ತರುವಾಯಸ್ಫುರದ್ರೂಪ ರಮಣೀಯ ಸುಂದರಾಂಗಿಗಳುಹಾರವಸನಭೂಷಿತ ಅಪ್ಸರಸರು 4ಸೌದಾಮಿನಿಗಮಿತ ವಿದ್ಯುತ್ ಕಾಂತಿಯಿಂದದಿಕ್‍ವಿದಿಕ್ಕುಗಳ ರಂಜಿಸುವರೂಪ -ದಿಂದ ಆವಿರ್ಭವಿಸಿದಳು ಸಾಕ್ಷಾತ್ ಶ್ರೀಇಂದಿರೆಅಲೌಕಿಕ ಸೌಂದರ್ಯಪೂರ್ಣೆ5ಸರ್ವದಾ ಸರ್ವವಿಧದಿ ನಿನ್ನ ಸೇವಿಸಿ ನುತಿಪಸರ್ವಜಗಜ್ಜನನಿಯೇಸಿಂಧುಕನ್ಯಾದೇವ ದೇವೋತ್ತಮ ರಾಜರಾಜೇಶ್ವರ ನಿನಗೆದೇವ ಶ್ರೀ ರಾಜರಾಜೇಶ್ವರಿನಿತ್ಯನಿಜಸತಿಯು6ಇಂದ್ರಾದಿ ದೇವತೆಗಳು ಮುನಿಜನರುಇಂದಿರೆಯನ್ನು ವಿಧಿಯುಕ್ತ ಪೂಜಿಸಿದರುಸಿಂಧುರಾಜನು ವರುಣ ಏನು ಧನ್ಯನೋ ಜಗನ್ -ಮಾತೆ ನಿರ್ದೋಷೆ ರಮಾ ಮಗಳಾಗಿ ತೋರಿಹಳು 7ಅಲೌಕಿಕ ಮುತ್ತು ನವರತ್ನದ ಮುಕುಟಒಳ್ಳೇ ಪರಿಮಳ ಹೂವು ಮುಡಿದ ತುರುಬುಪಾಲದಲಿ ಶ್ರೇಷ್ಠತಮ ಕಸ್ತೂರಿತಿಲಕವುಪೊಳೆವ ಪೂರ್ಣೇಂದು ನಿಭ ಮೂಗುಬಟ್ಟು 8ಅಂಬುಜಾಕ್ಷಗಳು ದಿವ್ಯ ಮುತ್ತಿನ ತೋಡುಗಳುಗಂಭೀರ ಸೌಭಾಗ್ಯಪ್ರದ ಕೃಪಾನೋಟಕಂಬುಕಂಠದಿ ಮಂಗಳಸೂತ್ರ ಕರಯುಗದಿಅಂಬುಜಾವರಕೊಡುವ ಅಭಯಹಸ್ತಗಳು9ಕಂದರದಿ ಎಂದೂ ಬಾಡದಕಮಲಮಾಲಾಪೀತಾಂಬರ ದಿವ್ಯ ಕುಪ್ಪಸ ಮೇಲ್ಪಟ್ಟಿವಸ್ತ್ರ ರಾಜಿಸುವಂತಹ ಸ್ವರ್ಣಹಾರಗಳುಕಾಂತಿಯುಕ್ ಭಂಗಾರ ಸರ್ವಾಭರಣಗಳು 10ಆನಂದಮಯಅಜಿತನಾಮಾ ನಿನ್ನನು ಮನ-ಮಂದಿರದಿ ಪೂಜಿಸುತ ಇಂದಿರಾದೇವಿಬಂದು ಸಭೆಯಲಿ ಸಾಲು ಸಾಲಾಗಿ ಕುಳಿತಿದ್ದವೃಂದಾರಕರನ್ನ ಮಂದಹಾಸದಿ ನೋಡಿದಳು 11ಒಬ್ಬೊಬ್ಬ ದೇವತೆಯಲೂ ಗುಣವಿದ್ದರೂಅಬ್ಬಬ್ಬ ಏನೆಂಬೆ ದೋಷಗಳೂ ಉಂಟುಅದ್ಭುತ ಗುಣನಿಧಿನಿರ್ದೋಷಸರ್ವೇಶ-ಅಂಬುಜನಾಭ ನೀನೇವೇ ಎಂದು ನಮಿಸಿದಳು 12ಕ್ಷರರಿಗೂ ಅಕ್ಷರರಿಗೂ ಎಂದೆಂದೂ ಆಶ್ರಯನುಪುರುಷೋತ್ತಮಹರಿವಿಷ್ಣು ಸ್ವತಂತ್ರಸರಿ ಅಧಿಕರು ಇಲ್ಲದ ಅನಘನು ಸರ್ವಗುಣಪರಿಪೂರ್ಣನಿಗೇವೇ ಅರ್ಪಿಸಿದಳು ಮಾಲೆ 13ಉತ್ತಮ ಸುತೀರ್ಥಗಳಿಂದ ಅಘ್ರ್ಯ ಚಮನಪಾದ್ಯಾದಿ ಅರ್ಚನೆ ವಿಧಿಯುಕ್ತವಾಗಿಸುತಪೂನಿಧಿ ವಸಿಷ್ಠಾದೀಯರು ವೇದೋಕ್ತಮಂತ್ರ ಪಠಿಸೆ ವರುಣ ಹರಿಯ ಪೂಜಿಸಿದ 14ಆನಂದಪೂರ್ಣಅಜನಿತ್ಯಮುಕ್ತೆ ಮಗಳುಇಂದಿರೆಯಆನಂದಮಯಹರಿನಿನಗೆಸಿಂಧುಧಾರೆ ಎರೆದು ಮದುವೆ ಮಾಡಿಕೊಟ್ಟಆನಂದ ನಿತ್ಯದಂಪತಿ ರಮಾ ಮಾಧವರು 15ಪೀತಾಂಬರ ದಿವ್ಯ ಆಭರಣ ಪೊಳೆಯುತ್ತಮೋದಮಯ ನೀ ಸಿಂಧುಜಾ ಸಹ ದಿವ್ಯರತ್ನ ಖಚಿತ ಮಂಟಪದಲಿ ಕುಳಿತರೆಮುದದಿ ವರ್ಷಿಸಿದರು ಪೂಮಳೆಸುರರು16ಸಂಭ್ರಮದಿ ಮಂಗಳವಾದ್ಯ ಸುಧ್ವನಿಗಳುತುಂಬಿತುಅಂಬರಅಂಬುಧಿಎಲ್ಲೂಗಂಭೀರ ಸುಸ್ವರ ವೇದಘೋಷಗಳುತುಂಬರ ನಾರದಾದಿಗಳ ಗಾಯನವು 17ದೇವಗಾಯಕರುಗಳ ದಿವ್ಯ ಕೀರ್ತನೆಗಳುದೇವನರ್ತಕ ನರ್ತಕಿಯರ ನರ್ತನವುದೇವತೆಗಳ ಆಭರಣಾದಿ ಕಾಣಿಕೆಗಳದೇವಿ ರಮೆಗೂ ನಿನಗೂ ಅರ್ಪಿಸಿದರು ಮುದದಿಂ 18ವನಜಭವ ರುದ್ರಾದಿಗಳು ಮುನಿವೃಂದವುಸನ್ನುತಿಸುತ ಸರ್ವ ಕೀರ್ತನವನ್ನುಆನಂದ ಭಕ್ತಿಯಂ ಶ್ರೀ ಲಕ್ಷ್ಮೀಯನ್ನು ನೋಡಿಧನ್ಯರಾದರು ನಮೋ ವಿಷ್ಣುಗೆ ಶ್ರೀರಮೆಗೆ 19ಜ್ಞಾನ ಸುಖಪೂರ್ಣ ಸ್ವತಂತ್ರ ಸರ್ವಾಧಾರಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸಧನ್ವಂತರಿ ಶರಣು ಅಜಿತ ಸ್ತ್ರೀಕೂರ್ಮ20- ಇತಿ ತೃತೀಯ ಅಧ್ಯಾಯ ಪೂರ್ಣಂ -ಚತುರ್ಥ ಅಧ್ಯಾಯಶ್ರೀ ಧನ್ವಂತರಿ ಹಾಗೂ ಮೋಹಿನಿವೃತ್ತಾಂತಸಾರಲೀಲಾವತಾರನೇ ಸರ್ವಲೋಕಾಧಾರಮಾಲೋಲ ಸುಖಚಿತ್ ಕೂರ್ಮರೂಪಪಾಲಾಬ್ಧಿಜಾಪತಿ ಅಜಿತ ಧನ್ವಂತರೀಲೀಲಾ ಮೋಹಿನಿಅನಘಶರಣು ಮಾಂಪಾಹಿಪವಿಸ್ತಾರವಾಗಿ ಫೇಣವು ವ್ಯಾಪಿಸಿರುವಆ ಸಮುದ್ರದಿಂದ ವಾರುಣಿಯು ಬರಲಾಗಅಸುರರನು ತಮಗೇವೆ ಬೇಕೆಂದು ಕೊಂಡರುಈಶ ನೀ ಅವರಿಗೆ ಅನುಮತಿ ಕೊಡಲು 1ಸುಧೆಗಾಗಿ ಸಿಂಧುವ ಮತ್ತೂ ಮಥನಮಾಡೆಉದಿಸಿದನುಪರಮಅದ್ಭುತ ಪುರುಷನುಸುಂದರ ವಿಗ್ರಹ ಕಂಬುಗ್ರೀವ ಅರುಣೇಕ್ಷಣಅಂದ ಸುದೀರ್ಘ ಪೀವರದೋರ್ದಂಡ 2ಸಗ್ನಧರ ಶ್ಯಾಮಲಸ್ತರುಣ ಸರ್ವಾಭರಣ -ದಿಂದ ಒಪ್ಪುವ ರತ್ನಖಚಿತ ಕುಂಡಲವುಪೀತವಾಸ ಮಹಾಸ್ಕಂಧ ಸುಶುಭಾಂಗನುಸ್ನಿಗ್ದ ಕುಂಚಿತ ಕೇಶ ಸಿಂಹ ವಿಕ್ರಮನು 3ಅನುಪಮಾದ್ಭುತ ಈ ಮಹಾಪುರುಷ ಸಾಕ್ಷಾತ್ವಿಷ್ಣು ನೀನೇವೆ ಮತ್ತೊಂದವತಾರಆನಂದ ಚಿನ್ಮಾತ್ರ ಹಸ್ತದಲಿ ಹಿಡಿದಿರುವಿಪೂರ್ಣವಾಗಿ ಅಮೃತ ತುಂಬಿರುವ ಕಳಸ 4ಆಯುರ್ವೇದ ಮಹಾಭಿಷಕ್ ಶ್ರೀ ಧನ್ವಂತರಿ ನೀನುಕೈಯಲ್ಲಿ ಪಿಡಿದ ಪಿಯೂಷ ಕುಂಭವನುದೈತ್ಯರು ನೋಡಿ ಬಹು ಇಚ್ಛೈಸಿ ಅಪಹರಿಸೆಶ್ರೀಯಃಪತಿಯೇಸುರರುನಿನ್ನಲ್ಲಿ ಮೊರೆಇಟ್ಟರು5ದೇವತಾವೃಂದವಿಷ್ಣಮನಸ್ಸಿಂದಲಿದೇವವರೇಣ್ಯಹರಿನಿನ್ನ ಶರಣು ಹೋಗಲುಯಾವ ಮನಖೇದವೂ ಬೇಡ ಅನುಕೂಲವನೇಮಾಡುವಿ ಎಂದು ನೀ ಅಭಯವನ್ನಿತ್ತಿ 6ಅಮೃತಕಲಶವು ಎಂದು ನೆನೆದು ಆ ಅಸುರರುನಾಮುಂಚಿ(ಚೆ) ನಾಮುಂಚಿ (ಚೆ) ನೀ ಮುಂಚಿ (ಚೆ) ಅಲಲ್ತಮ್ಮೊಳಗೆ ಈ ರೀತಿ ಪರಸ್ಪರ ಕಾದಾಡೇನೀ ಮೋಹಿನಿ ರೂಪದಲಿ ತೋರಿ ನಿಂತಿ 7ಪರಮಅದ್ಭುತ ಅನಿರ್ದೇಶ್ಯ ಸ್ತ್ರೀರೂಪವಧರಿಸಿ ನಿಂತಿಯೋ ಆ ಅಸುರರ ಮುಂದೆಅರಳಿದಮಲ್ಲಿಗೆ ಮುಡಿದ ಕುಂತಳವುವರಾನನ ಕರ್ಣಕುಂಡಲಕಪೋಲ8ಸುಗ್ರೀವ ಕಂಠಾಭರಣ ಸುಭುಜಾಂಗದಸ್ಫುರತ್ ನವ ಯೌವನಗಾತ್ರ ಸೌಂದರ್ಯಉರದಿ ಪೊಳೆಯುವ ನವರತ್ನಪದಕಗಳುಭಾರಿ ಪೀತಾಂಬರವುದಿವ್ಯಒಡ್ಯಾಣ9ಸರ್ವಅವಯವಗಳು ಅನುಪಮ ಸುಂದರವುಸರ್ವಾಭರಣ ವಿಭೂಷಿತ ಸೊಬಗುಸರ್ವಾಕರ್ಷಕ ಮಂದಗತಿ ನೋಟವುಸರ್ವ ಆ ದೈತ್ಯರೊಳು ಕಾಮ ಪುಟ್ಟಿಸಿತು 10ಅಮರರೊಳು ದೈತ್ಯರೊಳು ಗಂಧರ್ವ ನರರೊಳುಈ ಮಹಾ ಸೌಂದರ್ಯರೂಪ ಕಂಡಿಲ್ಲಸುಮೋಹಿತ ದೈತ್ಯರು ಸುಧಾ ವಿಷಯದಲಿತಮಗೂ ಸುರರಿಗೂ ನ್ಯಾಯಮಾಡೆ ಕೋರಿದರು 11ಮಾಯಾಯೋಷಿದ್ವಪುಷಅಮೃತ ವಿನಿಯೋಗನ್ಯಾಯವೋ ಸರಿಯೋ ಸರಿಯಲ್ಲವೋನೀ ಹ್ಯಾಗಾದರೂ ಮಾಡಲಿಕೆ ಒಪ್ಪಿದರುಮಾಯಾಮೋಹವೃತ ಆ ದೈತ್ಯಜನರು12ಉಪವಾಸ ಸ್ನಾನ ಹೋಮಾದಿಗಳು ಆಗಿದೀಪಾವಳಿಗಳ ಹಚ್ಚಿಟ್ಟು ಮುದದಿತಪ್ಪದೇಮುಕ್ತಆಚರಣೆ ತರುವಾಯಸುಪವಿತ್ರ ಸುಧೆಗೆ ಕಾದರು ಸುರಾಸುರರು 13ಸುಧೆಗೆ ಕಾದಿರುವ ಸುರಾಸುರರ ನೋಡಿಸುಧಾ ಕಲಶ ನಿಜವಾದ್ದನ್ನ ಹಿಡಿದಿಮಂದಗಜ ಗತಿಯಲ್ಲಿ ಶೃಂಗಾರ ಸುರಿಸುತ್ತಬಂದಳು ಮೋಹಿನಿ ಚಂದ ನವಯುವತಿ 14ಅಸುರರು ಅರಿಯರು ಯೋಷಿದ್ ವಪುಹರಿಯೇವೇಆ ಸ್ಫುರದ್ರೂಪಿಣಿ ಮೋಹಿನಿ ಎಂತಅಸುರರು ಲೋಲುಪಮರು ಸುಧಾ ಅನರ್ಹರು ಎಂದುಶ್ರೀಶ ನೀ ನಿಶ್ಚಯಿಸಿದಿ ದೇವ ದೇವ 15ದೇವತೆಗಳ ಪಂಕ್ತಿ ಒಂದು ಸಾಲು ಮತ್ತುದೇವಶತೃಗಳ ಪಂಕ್ತಿ ಮತ್ತೊಂದು ಸಾಲುದೇವತೆಗಳಿಗೇವೇ ನೀ ಸುಧ ಉಣಿಸಿದಿದೇವಶತೃಗಳಿಗೆ ಸುಧಾ ಉಣಿಸಲಿಲ್ಲ 16ಕೂರ್ಮರೂಪದಲಿ ನೀ ಮಂದರಾಗಿರಿ ಪೊತ್ತುಅಮರರ ಸಹಿತಸಿಂಧುಮಥಿಸಿದಿ ಅಜಿತಅಮೃತ ಕಲಶವ ತಂದಿ ಶ್ರೀಶ ಧನ್ವಂತರಿಸುಮನಸಸುಧಾಪ್ರದ ಮೋಹಿನಿರೂಪ17ಹರಿಪಾದಾಶ್ರಿತರಾಗಿರುವ ಸುರರಿಗೆ ಅಮೃತಹರಿಪರಾನ್ಮುಖ ದ್ವೇಷಿ ದೈತ್ಯರಿಗೆ ಇಲ್ಲಸುರಾಸುರಗಣಕೆ ಸಮ ಕರ್ಮೋಪಕರಣಗಳುಆದರೂ ಯೋಗ್ಯತೆಯಿಂದ ಫಲ ಬೇರೆ ಬೇರೆ 18ಜ್ಞಾನಸುಖಪೂರ್ಣ ಸ್ವತಂತ್ರ ಸರ್ವಾಧಾರಪೂರ್ಣ ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸಧನ್ವಂತರಿ ಶರಣು ಅಜಿತ ಸ್ತ್ರೀಕೂರ್ಮ19- ಇತಿ ಚತುರ್ಥ ಅಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ವೃಂದಾವನದೇವಿ ನಮೋನಮೋ-ಚೆಲ್ವ-|ಮಂದರಧರನ ಮನಃ ಪ್ರಿಯಳೆ ಪನಿನ್ನ ಸೇವಿಸಿ ಉದಕವನು ಎರೆಯಲು |ಮುನ್ನ ಮಾಡಿದ ಪಾಪವಳಿಯುವುದು ||ಎನ್ನ ಇಪ್ಪತ್ತೊಂದು ಕುಲದವರಿಗೆ ಎಲ್ಲ |ಉನ್ನತ ವೈಕುಂಠಪದವೀವಳೆ 1ಒಂದೊಂದು ದಳದಲಿ ಒಂದೊಂದು ಮೂರುತಿ |ಸಂದಣಿನೆವೆ ಬಹು ಗುಪಿತದಲಿ ||ಬಂದು ಕುಂಕುಮ ಶಂಖಚಕ್ರವಿರಿಸಿದರೆ |ತಂದೆ ನಾರಾಯಣ ಕರೆದೊಯ್ಯುವ 2ಹರಿಗೆ ಅರ್ಪಿಸಿದ ತುಳಸಿ ನಿರ್ಮಾಲ್ಯವ |ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ||ದುರಿತರಾಶಿಗಳೆಲ್ಲ ಅಂಜಿ ಓಡುವುವು ಶ್ರೀ-|ಹರಿಯು ತನ್ನವರೆಂದು ಕೈಪಿಡಿವ 3ಹತ್ತು ಪ್ರದಕ್ಷಿಣಿ ಹತ್ತು ವಂದನೆ ಮಾಡೆ |ಉತ್ತಮ ವೈಕುಂಠ ಪದವೀವಳು ||ಭಕ್ತಿಯಿಂದಲಿ ಬಂದು ಕೈಮುಗಿದವರನು |ಕರ್ತೃನಾರಾಯಣ ಕರೆದೊಯ್ವನು 4ಆವಾವ ಪರಿಯಲಿ ಸೇವೆಯ ಮಾಡಲು |ಪಾವನ ವೈಕುಂಠಪದವೀವಳೆ ||ದೇವ ಶ್ರೀಪುರಂದರವಿಠಲರಾಯನ |ದೇವಿ ನಿನ್ನ ಮುಟ್ಟಿತ್ರಾಹಿಎಂಬೆ5
--------------
ಪುರಂದರದಾಸರು
ಶ್ರೀ ನರಹರಿ ತೀರ್ಥವಿಜಯ99ಪ್ರಥಮ ಕೀರ್ತನೆಯೋಗಾನಂದ ನರಹರಿ ರಾಮಪ್ರಿಯತಮರುಯೋಗಿವರ ನರಹರಿತೀರ್ಥರಪಾದಯುಗ್ಮವನರುಹದಿ ನಾ ಶರಣಾದೆ ಸಂತತಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪಅಶೇಷ ಗುಣಗಣಾಧಾರ ವಿಭು ಶ್ರೀ ರಮಣಹಂಸ ನಾಮಕ ಪರಮಾತ್ಮನಿಗೆ ನಮಿಪೆಹಂಸ ಬೋಧಿತ ವಿಧಿಗೆ ತತ್ ಶಿಷ್ಯ ಸನಕಾದಿವಂಶಜ ಗುರುಗಳು ಸರ್ವರಿಗು ನಮಿಪೆ 1ಅಚ್ಯುತಪ್ರೇಕ್ಷಾಖ್ಯ ಪುರುಷೋತ್ತಮಾರ್ಯಕರತೋಯಜೋತ್ಪನ್ನ ಆನಂದ ತೀರ್ಥರಿಗೆಕಾಯವಾಙÕನದಿಂದ ಶರಣಾದೆ ಸಂತತತೋಯಜಭವಾಂಡದ ಸಜ್ಜನೋದ್ಧಾರ2ಶ್ರೀವರ ವೇದವ್ಯಾಸನವತಾರಕನುಸರಿಸಿಭಾವಿ ಬ್ರಹ್ಮನು ಮುಖ್ಯ ವಾಯುದೇವದೇವೀಜಯಾಸಂಕರ್ಷಣಾತ್ಮಜನು ಈಭುವಿಯಲ್ಲಿ ತೋರಿಹ ಆನಂದ ತೀರ್ಥ 3ಮಾಲೋಲ ಶ್ರೀ ರಾಮಕೃಷ್ಣ ಪ್ರೀತಿಗಾಗಿಯೇಬಲ ಕಾರ್ಯ ಮಾಡಿದ ಹನುಮಂತ ಭೀಮಕಲಿಯುಗದಿ ಈ ಭೀಮ ಅವತಾರ ಮಾಡಿಹನುಕಲಿಮಲಾಪಹ ಜಗದ್ಗುರು ಮಧ್ವನಾಗಿ4ಶ್ರೀ ಮಧ್ವ ಅನಂತ ತೀರ್ಥಕರ ಅಬ್ಜಜರುಪದ್ಮನಾಭನೃಹರಿ ಮಾಧವಾಕ್ಷೋಭ್ಯಈ ಮಹಾ ಗುರುಗಳು ಸರ್ವರಿಗು ಆ ನಮಿಪೆಸುಮನಸಶ್ರೇಷ್ಠರು ಮಹಿಯಲ್ಲಿ ಪುಟ್ಟಿಹರು5ಶ್ರೀ ಮಹಾ ಪುರುಷೋತ್ತಮದಾಸರೆಂದೆನಿಪಶ್ರೀ ಮಧ್ವ ಮುನಿಗಳ ಶಿಷ್ಯ ಸಂತತಿಗೂಸುಮಹಿಮ ಹರಿದಾಸವರ್ಯರು ಸರ್ವರಿಗುಸನ್ಮನದಿ ಆ ನಮಿಪೆ ಸಂತೈಪರೆಮ್ಮ 6ಆ ಸೇತು ಹಿಮಗಿರಿ ಬದರಿಕಾಶ್ರಮಕ್ಷೇತ್ರವಸುಧೆಯ ಸಮಸ್ತಕಡೆ ಪೋಗಿ ಅಲ್ಲಲ್ಲಿದುಸ್ತರ್ಕ ದುರ್ಮತ ಅಟವಿಗಳ ಛೇದಿಸಿದಶಪ್ರಮತಿ ಮಧ್ವಮುನಿ ಒಲಿದರು ಸುಜನರ್ಗೆ 7ಈ ರೀತಿ ದಿಗ್ವಿಜಯ ಮಾರ್ಗದಲಿ ಮಧ್ವರಾಯರ ಸಂಗಡ ವಾದಕ್ಕೆ ನಿಂತು |ಭಾರಿಪಂಡಿತರತ್ನಶೋಭನ ಭಟ್ಟನುಶರಣಾಗಿ ಮಧ್ವರಾಯರ ಶಿಷ್ಯನಾದ 8ಶೋಭನ ಭಟ್ಟಾಖ್ಯ ಈಗುಣಗ್ರಾಹಿಯುಶುಭಪ್ರದೆ ಲೋಕಪಾವನಿವೃದ್ಧ ಗಂಗೆಎಂಬುವ ಗೋದಾವರೀ ತೀರದಲಿ ಮಧ್ವಅಬ್ಜಹಸ್ತದಿಕೊಂಡ ತುರ್ಯಾಶ್ರಮ 9ಸತ್ತತ್ವವಾದದ ಸೊಬಗನ್ನ ಮಧ್ವವದನಾಂಬುಜದಿಂದಕೇಳಿಸುಪವಿತ್ರಪದ್ಮನಾಭತೀರ್ಥಾಖ್ಯ ನಾಮವ ಹೊಂದಿದಮುದದಿಂದ ಈ ಮಹಾತ್ಮನು ಶೋಭನನು 10ಕಳಿಂಗ ರಾಜನ ಮಂತ್ರಿಯ ಕುಮಾರನುಶೀಲತಮ ಹರಿಭಕ್ತಸ್ವಾಮಿ ಶಾಸ್ತ್ರಿಬಾಲ ವಯಸ್ಸಲ್ಲೇವೆ ಸಿರಿತನದಾಮೋಹಾದಿಲೀಲಾವಿನೋದ ಚಟುವಟಿಕೆ ತೊರೆದವನು 11ವಿಧಿಯುಕ್ತ ಉಪನಯನ ಶಾಸ್ತ್ರಾಭ್ಯಾಸವವೇದ ವೇದಾಂತವಿದ್ಯೆಸರ್ವ ಹೊಂದಿಗೋದಾವರಿ ಕ್ಷೇತ್ರ ಎಲ್ಲೆಲ್ಲೂ ಈತನುವಿದ್ವಚ್ಛಿರೋಮಣಿ ಎಂದೆನಿಸಿಕೊಂಡ 12ರಾಮ ಮಹೇಂದ್ರಪುರಪ್ರಾಂತ್ಯಸ್ಥವಾದಿಗಜಸಿಂಹ ಶೋಭನ ಭಟ್ಟನು ಈಗತ್ರಿಜಗದ್ಗುರು ಮಧ್ವರಿಂ ಅನುಗ್ರಹವಕೊಂಡದ್ದುನಿಜ ಹರುಷದಿ ಕೇಳಿದ ಶ್ಯಾಮ ಶಾಸ್ತ್ರಿ 13ಹಿತಕರ ಈಸುದ್ದಿ ಕೇಳಲಿಕ್ಕೇವೆಕಾದಿದ್ದ ಶ್ರೀಮಂತ ಈ ಶ್ಯಾಮ ಶಾಸ್ತ್ರಿಬಂದು ಶ್ರೀಮಧ್ವರಲಿ ಕರಮುಗಿದು ಸನ್ನಮಿಸಿಒದಗಿ ಪಾಲಿಸಿ ಸೇವೆ ಕೊಳ್ಳಬೇಕೆಂದ 14ಉತ್ತಮ ದೇವಾಂಶನು ನಿಜ ಸಹಜ ಭಕ್ತಿಮಾನ್ಸುದೃಢ ಜ್ಞಾನಿಯು ಋಜುಮಾರ್ಗ ಚರಿಪಕ್ಷಿತಿಯಲ್ಲಿ ಜನಿಸಿಹ ವೈರಾಗ್ಯನಿಧಿ ಇವಹೊಂದಿದ ತುರ್ಯಾಶ್ರಮ ಮಧ್ವ ಮುನಿದಯದಿ 15ನರಹರಿ ತೀರ್ಥಾಖ್ಯ ಶುಭತಮನಾಮವಶಾಸ್ತ್ರಿಗೆ ಇತ್ತರು ಆನಂದ ಮುನಿಯುಹರಿಸೇವಾ ಕಾರ್ಯಸಿದ್ಯರ್ಥ ಆದೇಶದಲೆಇರುವುದು ಎಂದರು ಸರ್ವಜÕ ಮುನಿಯು 16ಸಾಮ್ರಾಜ್ಯ ಅಧಿಪತ್ಯ ಕಳಿಂಗ ದೇಶದಲಿಚರಿಸುವ ಕಾಲವು ಬರಲಿಕ್ಕೆ ಇದೆಯುಶ್ರೀರಾಮ ಸೀತಾ ಮೂರ್ತಿಗಳ ಅಲ್ಲಿಂದತರಲಿಕ್ಕೆ ಇರಬೇಕು ಅಲ್ಲಿಯೇ ಎಂದರು 17ಗಜಪತಿ ರಾಜನ ಅರಮನೆಯಲ್ಲಿರಾಜೀವೇಕ್ಷಣ ಮೂಲರಾಮನು ಸೀತಾರಾಜಭಂಡಾರದಲ್ಲಿ ಮಂಜೂಷದಲಿರಾಜಿಸುತ ಇಹರುಮೂರ್ತಿರೂಪದಲಿ18ಕಳಿಂಗದೇಶಾಧಿಪ ಗಜಪತಿಯ ವಂಶದಲಿಬಾಲರಾಜನು ಅವನ ಪ್ರತಿನಿಧಿಯಾಗಿಆಳುವುದು ರಾಜ್ಯವ ಎಂದು ಆಚಾರ್ಯರುಪೇಳಿದರು ನರಹರಿ ತೀರ್ಥ ಆರ್ಯರಿಗೆ 19ಬಾಲರಾಜನು ಯುವಕನಾಗಿ ರಾಜ್ಯವನ್ನುಆಳುವ ಯೋಗ್ಯತೆ ಹೊಂದಿದ ಮೇಲೆಅಲ್ಲಿಂದ ರಾಮ ಸೀತಾ ಮೂರ್ತಿರಾಜನ್ನಕೇಳಿತರಬೇಕು ಎಂದರು ಲೋಕ ಗುರುವು 20ಗೋದಾವರಿ ಕ್ಷೇತ್ರದೇಶ ಸುತ್ತು ಮುತ್ತುಸಾಧುಜನ ಉದ್ಧಾರ ಬೋಧಕ್ಕೆಪದ್ಮನಾಭತೀರ್ಥರ ತತ್ಕಾಲ ನಿಲ್ಲಿರಿಸಿಬಂದರು ಉಡುಪಿಗೆ ಪೂರ್ಣ ಪ್ರಮತಿಗಳು 21ಶ್ರೀ ಮಧ್ವಾಚಾರ್ಯರು ಅರುಹಿದ ಪ್ರಕಾರದಲೇಸಮಯ ಒದಗಿತು ರಾಣಿ ಬಿನ್ನೈಸಿದಳುಸ್ವಾಮಿ ತಾವೇ ರಾಜ್ಯ ಆಳಬೇಕೆಂದಳುಸಮ್ಮತಿಸಿದರು ಶ್ರೀ ನರಹರಿ ಮುನಿಯು 22ಮಂತ್ರಿಪದವಿಪರಂಪರೆ ಪ್ರಾಪ್ತವಾಗಿತಂದೆ ವಹಿಸಿದ್ದರುಅವರಮುಖದಿಂದಹಿಂದೆ ಪೂರ್ವಾಶ್ರಮದಿ ರಾಜ್ಯ ಆಡಳಿತದರೀತಿಯ ಅರಿತವರು ಈ ಹೊಸಯತಿಯು 23ನರಹರಿ ತೀರ್ಥರ ರಾಜ್ಯ ಆಡಳಿತದಲಿಪರಿಪರಿ ರಾಜತಂತ್ರಗಳ ಕೌಶಲ್ಯಸರಿಯಾದ ಧಾರ್ಮಿಕ ರಾಜನೀತಿಯ ದುಷ್ಟಶತ್ರು ನಿಗ್ರಹ ಶಿಷ್ಟಪಾಲನಏನೆಂಬೆ24ದಂಡೆತ್ತಿ ಆಗಾಗ ಬರುತಿದ್ದ ಶಬರಾದಿತುಂಟ ಶತ್ರುಗಳನ್ನ ಜಯಿಸಿ ರಾಜ್ಯವನ್ನಕಂಟಕದುರ್ಮತಿಗಳಿಂದ ಕಾಪಾಡಿದರುಎಂಟು ದಿಕ್ಕಲು ಹಬ್ಬಿತಿವರ ಕೀರ್ತಿ 25ಆಶ್ರಮೋಚಿತನಿತ್ಯಜಪಪೂಜ ಕಾರ್ಯಗಳುಶಿಷ್ಯ ಸಜ್ಜನರಿಗೆ ಉಪದೇಶಾನುಗ್ರಹಲೇಶವೂ ಕೊರತೆ ಇಲ್ಲದೆ ಮುದದಿಈಶನ ಪ್ರೀತಿಗೆ ರಾಜಕಾರ್ಯಗಳ ಮಾಡಿದರು 26ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸಯೋಗಾನಂದ ನರಹರಿ ಮೂಲ ರಾಮನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 27- ಇತಿ ಶ್ರೀ ಪ್ರಸನ್ನ ನರಹರಿತೀರ್ಥವಿಜಯಪ್ರಥಮೋದ್ಯಾಯಃ -ದ್ವಿತೀಯಕೀರ್ತನೆಯೋಗಾನಂದ ನರಹರಿ ರಾಮಪ್ರಿಯತಮರುಯೋಗಿವರ ನರಹರಿತೀರ್ಥರಪಾದಯುಗ್ಮವನರುಹದಿ ನಾ ಶರಣಾದೆ ಸಂತತಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪಶ್ರೀಕೂರ್ಮಕ್ಷೇತ್ರದಲಿ ಕೂರ್ಮೇಶ್ವರಾಲಯದಿಯೋಗಾನಂದ ನರಸಿಂಹಗೆ ಗುಡಿಯಯೋಗಿವರ ನರಹರಿತೀರ್ಥರು ಕಟ್ಟಿಸಿಯೋಗಾನಂದ ನರಸಿಂಹನ ಸ್ಥಾಪಿಸಿದರು 1ಯುಕ್ತ ಕಾಲದಿ ರಾಜನಿಗೆ ರಾಜ್ಯ ಒಪ್ಪಿಸಲುಕೃತಜÕ ಮನದಿಂದ ಆ ಯುವಕರಾಜಇತ್ತನು ಸನ್ನಮಿಸಿ ನರಹರಿತೀರ್ಥರಿಗೆಸೀತಾರಾಮ ವಿಗ್ರಹದ ಮಂಜೂಷ 2ನರಹರಿತೀರ್ಥರು ಶ್ರೀಮದಾಚಾರ್ಯರಲಿನೇರವಾಗಿ ಪೋಗಿ ಸಮರ್ಪಿಸಲು ಆಗಶ್ರೀರಾಮ ಸೀತಾದೇವಿಯ ಮಧ್ವಮುನಿಕ್ಷೀರಾದಿ ಪಂಚಾಮೃತದಿ ಪೂಜಿಸಿದರು 3ಶ್ರೀರಾಮಸೀತಾ ಪ್ರತಿಮೆಗಳೊಳು ಹರಿರಮಾಆರಾಧನಾರ್ಚನೆ ಮೂರು ತಿಂಗಳು ಹದಿ -ನಾರುದಿನ ತಾಮಾಡಿ ಪದ್ಮನಾಭತೀರ್ಥರುತರುವಾಯ ಪೂಜಿಸಲು ಆಜೆÕ ಮಾಡಿದರು 4ಮೂರನೇಬಾರಿ ಬದರಿಗೆ ಆಚಾರ್ಯರುತೆರಳಲು ಪದ್ಮನಾಭರು ತಾವು ಪೂಜೆಚರಿಸಿ ನಿಯಮನದಂತೆ ಆರು ವರ್ಷ ತರುವಾಯನರಹರಿತೀರ್ಥರಿಗೆ ಇತ್ತರು ಮೂರ್ತಿಗಳ 5ಈ ಮೂರ್ತಿಗಳೊಳ್ ಇರುವ ಸೀತಾರಾಮಾರ್ಚನೆಬ್ರಹ್ಮದೇವರು ಮಾಡಿ ಸೂರ್ಯವಂಶಭೂಮಿಪಾಲಕ ಕೈಯಿಂದ ಪೂಜೆಯ ಕೊಂಡುಕ್ರಮದಿ ದಶರಥರಾಜ ಕರಕೆ ಲಭಿಸಿದವು 6ಶ್ರೀ ರಾಮಚಂದ್ರ ಪ್ರಾದುರ್ಭಾವಕು ಮೊದಲೇದಶರಥ ಆರಾಧಿಸಿದ ತರುವಾಯಶ್ರೀ ರಾಮತಾನೇ ಸ್ವಯಂ ಪೂಜೆ ಮಾಡಿದನುಶಿರಿಸೀತ ತಾ ಕೊಂಡಳು ಪೂಜೆಗಾಗಿ 7ರಾಮಚಂದ್ರನು ಸೇವೆ ಸಾಕ್ಷಾತ್ ಮಾಡುವಸೌಮಿತ್ರಿ ಆ ಮೂರ್ತಿಗಳನ್ನು ತಾನುಸಮ್ಮುದದಿ ತನ್ನ ಅರಮನೆಯಲ್ಲಿಟ್ಟುಕೊಂಡುನೇಮದಿ ಪೂಜಿಸುತ್ತಿದ್ದನು ಬಹುಕಾಲ 8ದ್ವಿಜನರ ಶ್ರೇಷ್ಠನು ರಾಮನಲಿ ಬಹುಭಕ್ತಿನಿಜಭಾವದಲಿ ಮಾಳ್ಪಅನುದಿನಅವನುರಾಜೀವೇಕ್ಷಣ ರಾಮನನ್ನು ತಾ ನೋಡದಲೆಭೋಜನ ಮಾಡಲಾರನು ಅಂಥಭಕ್ತ 9ವಿಪ್ರವರ ಅವಾತ ವೃದ್ಧಾಪ್ಯದಲಿಅರಮನೆ ದರ್ಬಾರ ಮಂಟಪಕೆ ಬಂದಶ್ರೀರಾಮಚಂದ್ರನು ರಾಜಕಾರ್ಯೋದ್ದೇಶಹೊರಗೆ ಹೋಗಿದ್ದನು ಏಳುದಿನ ಹೀಗೆ 10ಏಳು ದಿನವೂ ಆ ವಿಪ್ರೋತ್ತಮ ಊಟಕೊಳ್ಳದೇ ದೇಹಬಲ ಬಹು ಬಹುಕುಗ್ಗಿಮೆಲ್ಲನೆ ಎಂಟನೆ ದಿನ ಬಂದುಕುಳಿತಿದ್ದ ಶ್ರೀ ರಾಮಚಂದ್ರ ಸಭೆಯಲ್ಲಿ 11ಕಣ್ಣಿಗೆ ಏಳುದಿನ ಕಾಣದ ಶ್ರೀರಾಮಆನಂದಮಯಶ್ರೀನಿಧಿಯ ಕಂಡಲ್ಲೇಬ್ರಾಹ್ಮಣನು ಆನಂದ್ರೋದೇಕವು ಉಕ್ಕಿಸನ್ನಮಿಸುವಲ್ಲೇಯೇ ಬಿದ್ದನು ಕೆಳಗೆ 12ಏಳುದಿನ ಉಪವಾಸದಿಂದಲೇ ತನುವಿನಬಲಹೀನತೆ ಹೊಂದಿ ಆ ಬ್ರಾಹ್ಮಣ ಬೀಳೆ ಕೆಳಗೆಕನಕಆಸನದಿಂದಲಿ ರಾಮಇಳಿದುಬಂದು ಆಶ್ವಾಸಿಸಿದ ವಿಪ್ರನÀನ್ನ 13ವಿಪ್ರಶ್ರೇಷ್ಠನ ನಿವ್ರ್ಯಾಜ ಭಕ್ತಿಯ ಮೆಚ್ಚಿಕರುಣಾಬ್ಧಿ ಭಕ್ತವತ್ಸಲ ರಾಮಚಂದ್ರಕ್ಷಿಪ್ರದಲೆ ಲಕ್ಷ್ಮಣನ ಕಡೆಯಿಂದ ಪ್ರತಿಮೆಗಳತರಿಸಿಕೊಟ್ಟನು ಆ ದ್ವಿಜಶ್ರೇಷ್ಠನಿಗೆ 14ಅನುದಿನವೃದ್ಧ ದೆಶೆಯಲ್ಲಿ ಬರಬೇಡವುಅನಾಯಾಸದಿ ತನ್ನ ಪ್ರತಿಮೆಯಲ್ಲಿಕಾಣಬಹುದು ಎಂದು ಶ್ರೀರಾಮ ಪೇಳಿದನುಆನಂದದಿಕೊಂಡಬ್ರಾಹ್ಮಣ ಮೂರ್ತಿಗಳ15ಪ್ರತಿನಿತ್ಯ ವಿಧಿಪೂರ್ವಕ ಅರ್ಚಿಸಿದವಿಪ್ರಯುಕ್ತ ಕಾಲದಿ ತನು ಬಿಡುವ ಸಮಯದಲಿವಾಯುಸುತ ಹನುಮನ ಕೈಯಲ್ಲಿ ಅರ್ಪಿಸಿದಸೀತಾರಾಮ ಪ್ರತಿಮೆಗಳ ಭಕ್ತಿಯಲಿ 16ಸಮಸ್ತ ಜೀವರುಮಾಳ್ಪ ಭಕ್ತಿಗೆ ಅಧಿಕಸುಮಹಾಭಕ್ತಿಯ ಮಾಳ್ಪ ಹನುಮಂತಈ ಮೂರ್ತಿಗಳ ತಾಕೊಂಡು ಮುದದಲಿ ಕುಣಿದಸಮ್ಮುದದಿ ಅರ್ಚಿಸಿದ ಸೀತಾರಾಮನ್ನ 17ಸೌಗಂಧಿಕಾಪುಷ್ಪತರಲು ಭೀಮನು ಪೋಗಿಮಾರ್ಗದಲಿ ತನ್ನಯ ಪ್ರಥಮಾವತಾರಸಾಕೇತರಾಮಪ್ರಿಯತಮ ಅಂಜನಾಸುತನಸಂಗಡವಾದಿಸಿದ ಲೋಕರೀತಿಯಲ್ಲಿ 18ನರಾಧಮರ ಮೋಹಿಸುವ ಸಜ್ಜನರ ಮೋದಿಸುವಚರ್ಯಸಂವಾದ ತೋರಿಸಿ ರೂಪದ್ವಯದಿತರುವಾಯು ಹನುಮನು ಭೀಮನಿಗೆ ಕೊಟ್ಟನುಶ್ರೀರಾಮಸೀತಾ ಮೂಲಪ್ರತಿಮೆಗಳ 19ಭೀಮಸೇನನು ಆನಂದದಿ ಅರ್ಚಿಸಿದಸುಮನೋಹರ ರಾಮಸೀತಾದೇವಿಯನ್ನಈ ಮಹಾಹರಿಭಕ್ತ ಪಾಂಡವರ ವಂಶದಿಕ್ಷೇಮಕ ರಾಜನು ಕಡೆಯಾಗಿ ಬಂದ 20ಮೂಲರಾಮಸೀತೆಯ ಮುದದಿಂದ ಪೂಜಿಸಿದಶೀಲಭಾವದಲಿ ಆ ಕ್ಷೇಮಕಾಂತಮೂಲ ವಿಗ್ರಹಗಳು ತರುವಾಯ ಲಭಿಸಿದವುಕಳಿಂಗ ದೇಶಾಧಿಪ ಭಕ್ತನ ಕೈಯಲ್ಲಿ 21ಆಗಿನಕಾಲದಲ್ಲಿಪೀತಾಪುರವಿಜಯನಗರಎಂಬುವ ಪಟ್ಟಣದ ಮತ್ತುಜಗನ್ನಾಥಕ್ಷೇತ್ರ ದಕ್ಷಿಣ ಕಳಿಂಗಾಧಿಪರುಭಕುತಿ ಬೆಳೆಸಿದರು ಶ್ರೀರಾಮನಲ್ಲಿ 22ಆಗಾಗ ಹಸ್ತಿನಾಪುರ ಪೋಗುತಿದ್ದರುಗಂಗಾದಿಸ್ನಾನ ಕ್ಷೇತ್ರಾಟನ ಮಾಡಿಭಕ್ತಿಯಿಂ ಶ್ರೀರಾಮಚರಿತೆ ಕೇಳುವವರಲ್ಲಿವಿಗ್ರಹಗಳು ಲಭಿಸಿದವು ರಾಮನ ಕೃಪದಿ 23ಕಳಿಂಗದೇಶಾಧಿಪ ಗಜಪತಿ ರಾಜನುಬಲುಶ್ರದ್ಧೆ ಭಕ್ತಿಯಲಿ ಆರಾಧಿಸಿಕಾಲದೀರ್ಘದಿ ಸಂತತಿ ಪೂಜಿಸದಲೆಕೀಲುಹಾಕಿ ರಕ್ಷಿಸಿದರು ಬೊಕ್ಕಸದಿ 24ಹಿಂದೆ ತಾ ಭೀಮಾವತಾರದಲಿ ಪೂಜಿಸಿದ್ದುಎಂದು ಆನಂದಮುನಿಇಂದುವಿಗ್ರಹಗಳಹೊಂದಲು ನರಹರಿ ತೀರ್ಥರ ಕಳಿಂಗದಿನಿಂದಿರಿಸಿ ತರಿಸಿಕೊಂಡರು ಮೂರ್ತಿಗಳನು 25ಶ್ರೀಮದಾಚಾರ್ಯರು ಆರ್ಚಿಸಿ ತರುವಾಯಪದ್ಮನಾಭತೀರ್ಥರು ಆರುವರ್ಷಗಳು ಆರಾಧಿಸಿ ನರಹರಿ ತೀರ್ಥರು ಒಂಭತ್ತು ವರ್ಷಗಳುಮುದದಿಂ ಪೂಜಿಸಿದರು ಮೂಲ ರಾಮನ್ನ 26ಒಂಭತ್ತು ವರ್ಷಗಳು ಒಂದು ತಿಂಗಳು ದಿನಇಪ್ಪತ್ತ ಮೂರು ಈಕಾಲಸಂಸ್ಥಾನಶ್ರೀಪನಿಗೆ ಪ್ರಿಯತರದಿ ಆಡಳಿತ ಮಾಡಿಶ್ರೀಪನ್ನ ಧ್ಯಾನಿಸುತ ಹರಿಪುರ ಐದಿದರು 27ಶಾಲಿಶಕ ಹನ್ನೊಂದು ನೂರು ಮೂವತ್ತಾರುಶೀಲತಮ ಶ್ರೀಮುಖ ಪುಷ್ಯ ಕೃಷ್ಣಏಳನೇ ದಿನದಲ್ಲಿ ಹರಿಪುರ ಯೈದಿದರುಮಾಲೋಲ ಪ್ರಿಯತಮ ನರಹರಿ ತೀರ್ಥರು 28ಮತ್ತೊಂದು ಅಂಶದಲಿ ವೃಂದಾವನದಲಿವೃತತಿಜನಾಭ ತೀರ್ಥರ ಸಮೀಪಉತ್ತುಂಗಮಹಿಮ ತುಂಗಾನದಿ ಚಕ್ರತೀರ್ಥದಹತ್ತಿರ ಕುಳಿತಿಹರು ಸ್ಮರಿಸೆ ರಕ್ಷಿಪರು 29ಶ್ರೀರಾಮನರಹರಿ ಶ್ರೀ ಶ್ರೀನಿವಾಸನುನೇರಲ್ಲಿ ಪ್ರಸನ್ನನಾಗಿ ಈಗ ಈ ನುಡಿಗಳ್ಬರೆಸಿಹನು ಸಜ್ಜನರು ಓದಲು ಕೇಳಲುಗುರುಗಳಂತರ್ಯಾಮಿ ವಾಂಛಿತಗಳೀವ 30ಅರಸಿಕರಿಗೂ ಅಧಮ ಮಂದರಿಗು ಈವಿಜಯಬರೆಯಲಿಕು ಕೇಳಲಿಕು ಅವಕಾಶ ಕೊಡದೆಭಾರಿ ಪಂಡಿತರುಗಳೂ ಸಾಮಾನ್ಯ ಸುಜನರೂಸುಶ್ರಮಣ ಮಾಳ್ಪುದು ಹರಿಪ್ರೀತಿಗಾಗಿ 31ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸಯೋಗಾನಂದ ನರಹರಿ ಮೂಲ ರಾಮನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 32ಶ್ರೀ ನರಹರಿತೀರ್ಥವಿಜಯಸಂಪೂರ್ಣಂ|| ಶ್ರೀ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸೌಭಾಗ್ಯ ಸಪ್ತತ್ರಿಂಶತಿ71ಶರಣುವಿಧಿವಾಣೀಶ ಶರಣು ಧೃತಿ ಶ್ರಧ್ದೇಶ |ಶರಣು ಋಜುವರ್ಯರಲಿ ಶರಣು ಶರಣಾದೆ ಪಮೀನಕೂರ್ಮಕ್ರೋಡನರಸಿಂಹ ವಟುರೂಪರೇಣುಕಾತ್ಮಜ ರಾಮ ಶ್ರೀ ಕೃಷ್ಣ ಜಿನಜ ||ವಿಷ್ಣು ಯಶಸ್ಸುತ ಅಜಿತ ಶ್ರೀಶನಿಗೆ ಪ್ರಿಯತಮ |ಅನುಪಮ ಜೀವೋತ್ತಮರ ಚರಣಕಾನಮಿಪೇ 1ಪುರುಷವಿಧಿ ಕಾಲವಿಧಿ ವಾಸುದೇವೋತ್ಪನ್ನ |ವಿರಿಂಚ ಮಹತ್ತತ್ವತನು ಅನಿರುದ್ಧ ಜಾತ ||ನಾರಾಯಣ ನಾಭಿ ಕಮಲಜ ಚತುರ್ಮುಖನು |ಸರಸ್ವತೀಪತಿ ರುದ್ರ ತಾತನಿಗೆ ನಮಿಪೆ 2ಈ ನಾಲ್ಕು ಬ್ರಹ್ಮನ ಅವತಾರದಲಿ ಶುಕ್ಲ |ಶೋಣಿತಸಂಬಂಧ ಇಲ್ಲವೇ ಇಲ್ಲ ||ಜ್ಞಾನಾದಿ ಐಶ್ವರ್ಯದಲಿ ಯಾರು ನಾಲ್ಮುಗಗೆ |ಎಣೆ ಇಲ್ಲ ಹದಿನಾಲ್ಕು ಲೋಕದಲಿ ಎಲ್ಲೂ 3ಭಯವು ಅಜ್ಞಾನವು ಸಂಶಯವು ಇವಗಿಲ್ಲಸತ್ಯ ಲೋಕಾಧಿಪನ ಸುರರ ಅಧ್ಯಕ್ಷ ||ಹಯಮುಖ ತ್ರಿವೃತ್ತುರೀಯ ಹಂಸ ಇತರಾಸೂನು |ತೋಯಜಾಕ್ಷಕೇಶವನ ಪ್ರಥಮ ಪ್ರತಿಬಿಂಬ4ಜಗಜ್ಜನ್ಮಾದ್ಯಷ್ಟಕ ಕರ್ತನ ನಿಯಮನದಿ |ಜಗವ ಪಡೆದಿಹ ಬ್ರಹ್ಮಸತ್ವವಿಗ್ರಹನು ||ಖಗಪ ಭುಜಗಪ ಶಿವಾದ್ಯನಂತ ಜೀವೋತ್ತಮನು |ಅಘರಹಿತತಾರಕಗುರುಶತಾನಂದ5ಅವನಿಯಲಿ ಅವತಾರ ಬ್ರಹ್ಮದೇವನಿಗಿಲ್ಲ |ಭಾವಿ ಬ್ರಹ್ಮನು ಮುಖ್ಯವಾಯುದೇವ ||ದೇವೀಜಯಾ ಸಂಕರುಷಣಾತ್ಮಜನು ಈ |ಭುವಿಯಲ್ಲಿ ತೋರಿಹನು ಹರಿಯಪ್ರಥಮಾಂಗ6ಧೃತಿಪ್ರಭಂಜನವಾಯುಸ್ಮರಭರತ ಗುರುವರನು |ಮಾತರಿಶ್ವನುಸೂತ್ರಪವಮಾನ ಪ್ರಾಣ ||ಎದುರು ಸಮರಿಲ್ಲ ಈ ಬ್ರಹ್ಮ ಧಾಮನಿಗೆಲ್ಲೂ |ಸದಾ ನಮೋ ಭಾರತೀರಮಣ ಮಾಂಪಾಹಿ 7ರಥನಾಭಿಯಲಿ ಅರವೋಲ್ ಪ್ರಾಣನಲಿ ಸರ್ವವೂ |ಪ್ರತಿಷ್ಠಿತವೂ ಜೀವರ ದೇಹಕಾಧಾರ ||ತ್ರಾತಪೋಷಕ ಸರ್ವವಶಿ ಪ್ರಜ್ಞಾಶ್ರೀದನು |ತತ್ವಾದಿ ದೇವ ವರಿಷ್ಠ ಚೇಷ್ಟಕನು 8ಶ್ರೀಶ ಹಂಸಗೆ ಪ್ರಿಯಶ್ವಾಸಜಪ ಪ್ರವೃತ್ತಿಸುವ |ಬಿಸಜಜಾಂಡವ ಹೊತ್ತು ಕೊಂಡು ಇರುತಿಹನು ||ಅಸಮ ಸಾಮಥ್ರ್ಯದಿ ಸರ್ವ ಕ್ರಿಯೆ ಮಾಡಿಸುವ |ಶಾಸ್ತನಾಗಿಹ ಪಂಚಅವರಪ್ರಾಣರಿಗೆ9ಬಲ ಜ್ಞಾನಾದಿಗಳಲ್ಲಿ ಹ್ರಾಸವಿಲ್ಲವು ಇವಗೆ |ಎಲ್ಲ ಅವತಾರಗಳು ಸಮವು ಅನ್ಯೂನ ||ಶುಕ್ಲಶೋಣಿತಸಂಬಂಧ ಇಲ್ಲವೇ ಇಲ್ಲ |ಇಳೆಯಲಿ ಜನಿಸಿಹ ಹನುಮ ಭೀಮ ಮಧ್ವ 10ವಾಯುದೇವನ ಒಲಿಸಿಕೊಳ್ಳದ ಜನರಿಗೆ |ಭಯ ಬಂಧ ನಿವೃತ್ತಿಯು ಸದ್ಗತಿಯು ಇಲ್ಲ ||ಮಾಯಾಜಯೇಶನಪರಮಪ್ರಸಾದವು |ವಾಯು ಒಲಿದರೆ ಉಂಟು ಅನ್ಯಥಾ ಇಲ್ಲ 11ಶ್ರೀರಾಮಚಂದ್ರನು ಒಲಿದ ಸುಗ್ರೀವಗೆ |ಮಾರುತಿಯ ಒಲಿಸಿಕೊಂಡವನವನೆಂದು ||ಮಾರುತಿಯ ಒಲಿಸಿಕೊಳ್ಳದ ವಾಲಿ ಬಿದ್ದನು |ಕರ್ಣನೂ ಹಾಗೇವೇ ಅರ್ಜುನನು ಗೆದ್ದ 12ರಾಮನಿಗೆ ಸನ್ನಮಿಸಿ ವನದಿ ದಾಟುತ ಹನುಮ |ಶ್ರಮರಹಿತನು ಸುರಸೆಯನು ಜಯಿಸೆಸುರರು||ಪೂಮಳೆ ಕರೆಯಲು ಸಿಂಹಿಕೆಯನು ಸೀಳಿ |ಧುಮುಕಿದ ಲಂಕೆಯಲಿ ಲಂಕಿಣಿಯ ಬಡಿದ 13ರಾಮ ಪ್ರಿಯೆಗುಂಗುರವ ಕೊಟ್ಟು ಚೂಡಾರತ್ನ |ರಾಮಗೋಸ್ಕರ ಕೊಂಡು ವನವ ಕೆಡಹಿ ||ಶ್ರಮ ಇಲ್ಲದೆ ಅಕ್ಷಯಾದಿ ಅಧಮರ ಕೊಂದು |ರಾಮ ದೂತನು ಹನುಮ ಲಂಕೆಯ ಸುಟ್ಟ 14ಶ್ರೀರಾಮನಲಿ ಬಂದು ನಮಿಸಿ ಚೂಡಾಮಣಿಯ |ಚರಣದಿ ಇಡೆ ರಾಮ ಹನುಮನ ಕೊಂಡಾಡಿ ||ಸರಿಯಾದ ಬಹುಮಾನ ಯಾವುದು ಇಲ್ಲೆಂದು |ಶ್ರೀರಾಮ ತನ್ನನ್ನೇ ಇತ್ತಾಲಿಂಗನದಿ 15ಮೂಲ ರೂಪವನೆನೆದ ಲಕ್ಷ್ಮಣನ ಎತ್ತಲು |ಕೈಲಾಗದೆ ರಾವಣನು ಸೆಳೆಯೆ ಆಗ ||ಲೀಲೆಯಿಂದಲಿ ಎತ್ತಿ ರಾಮನಲಿ ತಂದನು |ಬಲವಂತ ಹನುಮ ಶೇಷಗುತ್ತಮತಮನು 16ಮೃತ ಸಂಜೀವಿನಿಯಾದಿ ಔಷಧಿ ಶೈಲವನು |ತಂದು ಸೌಮಿತ್ರಿ ಕಪಿಗಳಿಗೆಅಸುಇತ್ತ ||ಮುಂದಾಗಿ ಪೋಗಿ ಶ್ರೀರಾಮ ಬರುವುದು ಪೇಳಿ |ಕಾಯ್ದ ರಾಮಾನುಜನ ಅಗ್ನಿ ಮುಖದಿಂದ 17ಇತರರು ಮಾಡಲು ಅಶಕ್ಯ ಸೇವೆ ಹನುಮ |ಗೈದಿ ಮೋಕ್ಷವು ಸಾಲ್ದು ಏನು ಕೊಡಲೆನ್ನೆ ||ಸದಾ ಸರ್ವ ಜೀವರಿಂದಧಿಕ ಭಕ್ತಿ ಒಂದೇ |ಕೇಳ್ದ ಶ್ರೀರಾಮನ್ನ ವೈರಾಗ್ಯ ನಿಧಿಯು 18ಗಂಡು ಶಿಶು ಬೀಳಲು ಗುಂಡು ಪರ್ವತ ಒಡೆದು |ತುಂಡು ನೂರಾಯಿತು ಕಂಡಿಹರು ಅಂದು ಬೋ - ||ಮ್ಮಾಂಡದಲಿ ಪ್ರಚಂಡ ಭೀಮಗೆ ಸಮ |ಕಂಡಿಲ್ಲ ಕೇಳಿಲ್ಲ ನೋಡಿ ಭಾರತವ 19ಉಂಡು ತೇಗಿದಗರಳತಿಂಡಿಯ ಭೀಮನು |ಉಂಡು ಹಾಲಾಹಲವ ಹಿಂದೆ ಈ ವಾಯು ||ಹಿಂಡಿ ಸ್ವಲ್ಪವ ಮುಕ್ಕಣ್ಣಗೆ ಕೊಟ್ಟನು |ಬಂಡುಮಾತಲ್ಲವಿದುಕೇಳಿವೇದವನು20ಅರಗು ಮನೆಯಿಂದ್ಹೊರಟು ಸೇರಿ ವನವನು ಅಲ್ಲಿ |ಕ್ರೂರ ಹಿಡಿಂಬನ ಕೊಂದವನ ಸೋದರಿ ||ಭಾರತೀ ಯಕ್ಸ ್ವರ್ಗ ಶಿಕಿಯು ಹಿಡಿಂಬಿಯಕರಪಿಡಿದ ಭೀಮನು ಅನುಪಮ ಬಲಾಢ್ಯ 21ಬಕ ಕೀಚಕ ಜರಾಸಂಧಾದಿ ಅಸುರರು |ಲೋಕ ಕಂಟಕರನ್ನ ಕೊಂದು ಬಿಸುಟು ||ಲೋಕಕ್ಕೆ ಕ್ಷೇಮವ ಒದಗಿಸಿದ ಈ ಅಮಿತ |ವಿಕ್ರಮಭೀಮನಿಗೆ ಸಮರಾರು ಇಲ್ಲ22ಕಲಿಕಲಿಪರಿವಾರ ದುರ್ಯೋಧನಾದಿಗಳ |ಬಲವಂತ ಭೀಮನು ಬಡಿದು ಸಂಹರಿಸಿದ ||ಕಲಿಹರ ಸುಜನಪಾಲ ಭೀಮ ಸಮ್ರಾಟನ |ಕಾಲಿಗೆ ಎರಗುವೆ ದ್ರೌಪದೀ ಪತಿಗೆ 23ಮಾಲೋಲ ಕೃಷ್ಣನ ಸುಪ್ರೀತಿಗಾಗಿಯೇ |ಬಲ ಕಾರ್ಯಗಳ ಮಾಡಿ ಅರ್ಪಿಸಿದ ಭೀಮ ||ಕಲಿಯುಗದಿ ಈ ಭೀಮ ಅವತಾರ ಮಾಡಿಹನು |ಕಲಿಮಲಾಪಹ ಜಗದ್ಗುರು ಮಧ್ವನಾಗಿ 24ಹನುಮಂತನ ಮುಷ್ಠಿ ಭೀಮಸೇನನ ಗದೆ |ದಾನವಾರಾಣ್ಯವ ಕೆಡಹಿದ ತೆರದಿ ||ಆಮ್ನಾ ಯಸ್ಮøತಿ ಯುಕ್ತಿಯುತ ಮಧ್ವ ಶಾಸ್ತ್ರವು |ವೇನಾದಿಗಳ ಕುಮತ ತರಿದು ಸುಜನರ ಕಾಯ್ತು 25ಇಳೆಯ ಸುಜನರ ಭಾಗ್ಯಶ್ರುತಿಪುರಾಣಂಗಳು |ಪೇಳಿದಂತೆಕೊಂಡಯತಿರೂಪ ವಾಯು ||ಮೇಲಾಗಿ ಇದ್ದ ನಮ್ಮ ಅಜ್ಞಾನ ಕತ್ತಲೆಯ |ತೊಲಗಿಸಿದನು ಈ ಮಧ್ವಾಖ್ಯಸೂರ್ಯ26ದುರ್ವಾದ ಕುಮತಗಳು ಸಜ್ಜನರ ಮನ ಕೆಡಿಸೆ |ತತ್ವವಾದವ ಅರುಪಿ ಸಜ್ಜನರ ಪೊರೆದ ||ಮೂವತ್ತು ಮೇಲೇಳು ಗ್ರಂಥ ಚಿಂತಾಮಣಿ |ಸುವರ್ಣಕುಂದಣಪದಕ ಯೋಗ್ಯರಿಗೆ ಇತ್ತ27ದುಸ್ತರ್ಕ ದುರ್ಮತ ಬಿಸಿಲಿಲ್ಲಿ ಬಾಡುವ |ಸಸಿಗಳು ಸಾತ್ವಿಕ ಅಧಿಕಾರಿಗಳಿಗೆ ||ಹಸಿ ನೀರು ನೆರಳು ಈ ಮಾಧ್ವ ಮೂವತ್ತೇಳು |ಸಚ್ಛಾಸ್ತ್ರಪೀಯೂಷಗೋಕಲ್ಪ ತರುವು28ಮೂಢ ಅಧಮರ ದುಷ್ಟ ಮತಗಳ ಸಂಪರ್ಕದಿ |ಈಡಿಲ್ಲದ ಮೋದಪ್ರದ ಜ್ಞಾನ ಕಳಕೊಂಡು ||ಬಡತನದಿ ನರಳುವ ಸಜ್ಜನರ ಪೋಷಿಪುದು |ನೋಡಿ ಈಸುರಧೇನುಮಾಧ್ವ ಮೂವತ್ತೇಳ29ಬಿಲ್ವಪ್ರಿಯ ಶಿವ ಈಡ್ಯ ಸಾರಾತ್ಮ ಕೃಷ್ಣನ |ಚೆಲ್ವಉಡುಪಿಕ್ಷೇತ್ರದಲಿ ನಿಲ್ಲಿರಿಸಿ ||ಎಲ್ಲ ಭಕ್ತರಕಾವಸುಖಮಯ ಜಗತ್ಕರ್ತ |ಮೂಲ ರಾಮನ ಸಾಧು ಜನರಿಗೆ ಕಾಣಿಸಿದ 30ಮಹಿದಾಸ ಬೋಧಿಸಿದ ತತ್ವವನು ವಿವರಿಸುತ |ಮಹಂತಪೂರ್ಣಪ್ರಜÕಬದರೀಗೆ ತೆರಳಿ ||ಮಹಿಶಿರಿಕಾಂತ ಶ್ರೀ ವ್ಯಾಸನ ಬಳಿ ಇಹನು |ಅಹರಹ ಪ್ರೇಮದಿಂಸಂಸ್ಮರಿಸೆತೋರ್ವ 31ರಾಮ ಕೃಷ್ಣವ್ಯಾಸ ಜಾನಕೀಸತ್ಯಾ |ರುಕ್ಮಿಣೀಅಂಭ್ರಣಿಪ್ರಿಯತಮ ಹನುಮ ||ಭೀಮ ಮಹಾ ಪುರುಷೋತ್ತಮ ದಾಸರಿಗೆ |ನಮಿಪೆ ವಿಪಶೇಷ ಶಿವಾದ್ಯಮರ ಸನ್ನತರ್ಗೆ 32ಚತುರ್ಮುಖ ವರವಾಯು ಸರಸ್ವತಿ ಭಾರತಿಗೆ |ಸದಾ ಶ್ರೀಹರಿಯಲ್ಲಿ ಭಕ್ತಿ ಅಚ್ಛಿನ್ನ ||ಅತಿರೋಹಿತ ಜ್ಞಾನ ಪ್ರಾಚುರ್ಯರಾಗಿಹರು |ಸಾಧಾರಣವಲ್ಲ ಋಜುಗಳ ಮಹಿಮೆ 33ಋಜುಗಳರಾಜೀವಚರಣಗಳಿಗಾ ನಮಿಪೆ |ಭುಜಗಶಯ್ಯನಲಿ ಭಕ್ತಿ ಸಹಜ ಇವರಲ್ಲಿ ||ಭುಜಗಭೂಷಣಾದಿಗಳಿಗಧಿಕತಮ ಬಲಜ್ಞಾನ |ತ್ರಿಜಗಮಾನ್ಯರು ತ್ರಿಗುಣ ತಾಪವರ್ಜಿತರು 34ಅಪರೋಕ್ಷಋಜುಗಣಕೆ ಅನಾದಿಯಾಗಿಯೇ ಉಂಟು |ತಪ್ಪದೇ ಶತಕಲ್ಪ ಸಾಧನವ ಗೈದು ||ಶ್ರೀಪನಅಪರೋಕ್ಷಇನ್ನೂ ವಿಶೇಷದಿ |ಲಭಿಸಿ ಕಲ್ಕ್ಯಾದಿಸುನಾಮಧರಿಸುವರು35ಕಲ್ಕ್ಯಾದಿ ಪೆಸರಲ್ಲಿಪ್ರತಿಒಂದು ಕಲ್ಪದಲು |ಅಕಳಂಕ ಇವರು ಬಹು ಸುವಿಶೇಷ ಸಾಧನದಿ ||ಭಕ್ತ್ಯಾದಿ ಗುಣಕ್ರಮದಿ ಅಧಿಕ ಅಭಿವ್ಯಕ್ತಿಯಿಂ |ಮುಖ್ಯ ವಾಯು ಬ್ರಹ್ಮಪದವ ಪೊಂದುವರು 36ಈ ಬ್ರಹ್ಮಾದಿಗಳೊಳು ಇದ್ದು ಕೃತಿಮಾಡಿಸುವ |ಶಿರಿಸಹ ತ್ರಿವೃನ್ನಾಮ ಪ್ರಸನ್ನ ಶ್ರೀನಿವಾಸ ||ಸುಹೃದ ಸೌಭಾಗ್ಯದಗೆ ಜಯ ಜಯತು ಅರ್ಪಿತವು |ಹರಿವಾಯು ನುಡಿಸಿದಿದು ಜಯತು ಹರಿವಾಯ 37
--------------
ಪ್ರಸನ್ನ ಶ್ರೀನಿವಾಸದಾಸರು