ಒಟ್ಟು 202 ಕಡೆಗಳಲ್ಲಿ , 54 ದಾಸರು , 182 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮಶೋಧನೆ ಆದ ವಿಷಯಗಳು ಬಾಧಿಸದಂತೆನ್ನ ಮಾಧವ ನೀ ಪೊರೆಯೋ ದಯಾನಿಧೇ ಪ ಕ್ರೋಧವ ಬಹುತರ ಸಾಧಿಸಿ ಮನದಲಿ ಖೇದವ ಪೊಂದಿದೆನೊ ರಮಾಧವ ಅ.ಪ ಹೆಜ್ಜೆಯನರಿಯದೆ ಗೆಜ್ಜೆಕಟ್ಟಿಹೆನೆಂದು ಗರ್ಜಿಸುತಿರುವರು ದುರ್ಜನರೆಲ್ಲರು ಮರ್ಜಿಯನರಿಯುವ ಸಜ್ಜನರೆನ್ನನು ವರ್ಜಿಸ ಬಿಡದಿರೊ ಮೂರ್ಜಗದೊಡೆಯನೆ 1 ರೀತಿಯನರಿಯದೆ ಆತುರದಲಿ ಮನ ಸೋತೆನೆನ್ನುತಿಹರೋ ದುರಾತ್ಮರು ಖ್ಯಾತಿಗಾಗಿ ಧನ ಪ್ರೀತಿಗಾಗಿ ಸಭ್ಯ ನೀತಿಯ ಮಾರ್ಗದಿಂದ ಚಲಿಸದೆ ಪೊರೆಯೊ 2 ನಿನ್ನ ನಾನರಿತೆನೊ ಎನ್ನನರಿತು ನೀ ಪ್ರ ಸನ್ನನಾಗಿ ನಿನ್ನ ಸೇವೆಯ ನೀಡಲು ಅನ್ಯರಂತಿರಲಿ ನಿನ್ನ ಮನಕೆ ನಾ ಅನ್ಯನಾಗದಂತೆ ಸತತವು ಕರುಣಿಸೊ 3
--------------
ವಿದ್ಯಾಪ್ರಸನ್ನತೀರ್ಥರು
ಇಂದು ನಿನ್ನಪಾದ ಸನ್ನಿಧಿಯ ಘನ್ನ ದರುಶನದಿಂದಲಿಪ ಮುನ್ನ ದುರಿತಗಳೆಲ್ಲವು ಛಿನ್ನಛಿನ್ನವುಮಾಡಿ ಬನ್ನಬಡಿಸದೆ ಎಮ್ಮ ಸಲಹುವಸ್ವಾಮಿ ಅ.ಪ ಸುಮನಸರೊಡೆಯ ಕಾಲನಾಮಕನಾಗಿಪ್ಪ ಮೋದ ನಾಮ ವತ್ಸರದಿ ವಿಮ¯ ಚೈತ್ರಕೃಷ್ಣಪಕ್ಷದಶಮಿ ಸೌಮ್ಯವಾಸರದಿ ದ್ಯುಮಣಿ ಉದಯಕಾಲದಲಿ ಮಮಕುಲಸ್ವಾಮಿಯೆ ಎನ್ನ ವಂಶಜಾಪ್ತರ ಅಮಿತಶ್ರಮ ಪರಿಹರಿಸಿ ಈಗ ಶ್ರೀಮನೋಹರ ನಿನ್ನ ವಿಶ್ವರೂಪವ ತೋರ್ದೆ ಪ್ರೇಮ ಇಂದಿಗೆ ಆಯಿತೆ ಅಮಿತಜನ ಬಂಧು 1 ನಿನ್ನ ದರುಶನವೆಂದಿಗಂದಿಗಾಗಲಿ ಎಂದು ನಿನ್ನ ಧ್ಯಾನವನೆ ಮಾಡಲು ಸನ್ನುತಾಂಗನೆ ನೀನೆ ಘನ್ನ ಕರುಣವು ಮಾಡಿ ಎನ್ನ ಯತ್ನವು ಇಲ್ಲದೆ ನಿನ್ನ ದರುಶನಕ್ಕಾಗಿ ಅನ್ಯರಿಂದ ಪ್ರೇರಿಸಿ ಎನ್ನಲ್ಲಿ ಮನವು ಪುಟ್ಟಿಸಿದೆ ಪನ್ನಗಾಚಲನಿಲಯ ನಿನ್ನ ಮಹಿಮೆ ಎಂತುಂಟೋ ಎನ್ನನಿಲ್ಲಿಗೆ ತಂದು ಘನ್ನ ದರುಶನವಿತ್ತೆ 2 ಪಂಕಜೋದ್ಭವನಯ್ಯ ಮಂಕುಕವಿಸಿದೆ ಪಯಣ ಶಂಕೆಯ ಪರಿಹರಿಸಿ ಸಂಕಟಹರಿಸಿ ನಿನ್ನ ಕಿಂಕರರೊಳು ಸೇರಿಸಿ ಬಿಂಕದಲಿ ಗಿರಿಯನೇರಿಸಿ ಪಂಕಜನಾಭ ಮುಕುಂದ ಗೋವಿಂದ ಶಂಕರನುತಪೂಜಿತ ಶಂಖತೂರ್ಯಾದಿ ವಾದ್ಯಗಳಿಂದಲಿ ಶ್ರೀ ವೇಂಕಟೇಶ ನಿನ್ನ ನೋಡಿದೆ ಬಿಡದೇ 3
--------------
ಉರಗಾದ್ರಿವಾಸವಿಠಲದಾಸರು
ಇದು ನಿನಗೆ ಧರ್ಮವೇ ಇಂದಿರೇಶ ಬದಿಗ ನೀನಾಗಿದ್ದು ಭೀತಿ ಪಡಿಸುವುದು ಪ ನಿನ್ನ ಗುಣಗಳ ತುತಿಸಿ ನಿನ್ನನ್ನೇ ಹಾರೈಸಿ ನಿನ್ನವರ ಪ್ರೀತಿಯನು ಸಂಪಾದಿಸಿ ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ ಮಾನ್ನವರನ ಈ ಪರಿಯ ಬನ್ನಬಡಿಸುವುದು 1 ದುರುಳನಲ್ಲವೊ ನಿನ್ನ ಚರಣ ಸೇವಕರವನೊ ಪರಿಪಾಲಿಸುವುದು ನಿನ್ನ ಪರಮ ಧರ್ಮ ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ ಶರಣ ರಕ್ಷಕನೆಂಬೊ ಬಿರಿದು ಸುಳ್ಳಾಗುತಿದೆ 2 ಶೋಕನಾಶಕ ವಿಗತಶೋಕನೆಂಬೋ ನಾಮ ನಾ ಕೇಳಿ ಮೊರೆಹೊಕ್ಕೆ ಲೋಕಬಂಧು ನಿ ರಾಕರಿಸದೆಮ್ಮ ನೀ ಸಾಕಬೇಕನುದಿನವು ವಾಕು ಮನ್ನಿಪುದು ಲೋಕೈಕ ರಕ್ಷಾಮಣಿಯೆ 3 ಗುಣವೆ ನಿನಗಿದು ಬರಿದೆ ದಣಿಸುವುದು ಶರಣರನು ಪ್ರಣತಾರ್ತಿಹರ ವಿಭೀಷಣ ಪಾಲಕ ಕ್ಷಣಕನಂತಪರಾಧವೆಣಿಸುವರೆ ಕಡೆಯುಂಟೆ ಮಣಿದು ಬಿನ್ನಹ ಮಾಳ್ಪೆ ದನುಜದಲ್ಲಣನೆ 4 ನಮೋ ನಮೋ ಬ್ರಹ್ಮಣ್ಯ ದೇವರ ದೇವ ದುರಿತ ನಮೋ ನಮೋ ಕಾರುಣ್ಯ ಶೀಲ ಸಜ್ಜನ ಪಾಲಾ ನಮೋ ನಮೋ ಜಗನ್ನಾಥವಿಠಲ ವಿಖ್ಯಾತ 5
--------------
ಜಗನ್ನಾಥದಾಸರು
ಇದುವೇ ಸಾಧಕ ವೃತ್ತಿಗಳು | ಇದೇ ಅಬಾಧಕ ಯುಕ್ತಿಗಳು ಪ ಸದ್ಗುರು ಪಾದಕ ಸದ್ಭಾವದಿ ನಂಬಿ | ಹೃದ್ಗತ ಗುಜವನು ಪಡೆದಿಹನು | ಸದ್ಗತಿಕಾಂಕ್ಷಿತ ಹರಿ ಕೀರ್ತನೆಗಳ | ಉದ್ಗಾರ ಪ್ರೇಮದ ಮಾಡುವನು 1 ಬಲ್ಲವನು ಕಂಡೆರಗಿ ಸಿದ್ಧಾಂತದಾ | ಉಳ್ಳಸದ್ಭೋಧವ ಕೇಳುವನು | ಮೆಲ್ಲನೆ ಮನನದಿ ಧ್ಯಾಸವು ಬಲಿಯುತ | ಕ್ಷುಲ್ಲರ ಮಾತಿಗೆ ಮನ-ವಿದನು 2 ಅನ್ಯರ ಸದ್ಗುಣ ವಾರಿಸಿ ಕೊಳುತಲಿ | ತನ್ನವಗುಣಗಳ ಜರಿಸಿದವನು | ಸನ್ನುಡಿ ಬಿರುನುಡಿಗಳಕದೆ ಕುಜನರ | ಮನ್ನಿಸಿ ಶಾಂತಿಯನು ಜಡಿದಿಹನು 3 ಬುದ್ಧಿಯ ಹೇಳಿದರೆ ನೀ ಹಿತ ಬಗೆಯದೆ | ತಿದ್ದುದರಂದದಿ ತಿದ್ದುವನು | ಇದ್ದಷ್ಟರೊಳಗೆ ಸಾರ್ಥಕದಲಿ ದಿನ | ಗದ್ದಿರ ಹೊರಿಯಲು ಉದರವನು 4 ಸರ್ವರೊಳಗೆ ಬಾಗಿ ಶಮೆ ದಮೆಯಿಂದಲಿ | ಗರ್ವವ ತ್ಯಜಿಸಿಹ ಜನರೊಳಗೆ | ಸರ್ವಭಾವದಿ ಗುರು ಮಹಿಪತಿ ಸ್ವಾಮಿಯು | ಅರ್ವವ ಜಗಸನ್ಮತನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದ್ದರೇನು ಇಲ್ಲದಿದ್ದರೇನು ಬುದ್ಧಿಯಿಲ್ಲದವನು ಬಾಳಿದ್ದರೇನು ಪ ಮಕ್ಕಳಿಲ್ಲದ ಮನೆಯು ಅರಮನೆ ಆದರೇನು ತಕ್ಕ ದಾನವ ಕೊಡದ ಧನವಿದ್ದರೇನು ದುಃಖ ಸುಖಗಳನು ಕೇಳದ ನೆಂಟರಿದ್ದರೇನು ಅಕ್ಕರದಿ ತಾನೊಬ್ಬ ಉಂಡರಾಗುವುದೇನು 1 ನರಜನ್ಮ ದೊರೆತಾಗ ಹರಿಯ ನೆನೆಯದಿರೇನು ಪಾತಕಿ ಆಗಿ ಬಾಳಿದ್ದರೇನು ದುರಿತ ಕಾರ್ಯದೊಳಿದ್ದ ಬುದ್ಧಿಹಾಕಿದರೇನು ಕರುಣರಹಿತನು ತಾನು ಅರಸಾದರೇನು 2 ಮಾತು ಕೇಳದ ಮಗನು ಮನೆಯಲ್ಲಿ ಇದ್ದರೇನು ಸೋತು ನಡೆಯದ ಬಂಟತನವಿದ್ದರೇನು ನೀತಿ ತಿಳಿಯದೆ ಹರಿಯ ಕಥೆಯ ಕೇಳಿದರೇನು ಹೋತಿನ ಕೊರಳೊಳಗೆ ಮೊಲೆ ಇದ್ದರೇನು 3 ವೇದವನೋದದಾ ವಿಪ್ರನಾದರು ತಾನು ದ್ವಾದಶಿ ನಾಮವನು ಬಡಕೊಂಡರೇನು ಹಾದರಕೆ ಮೆಚ್ಚಿದಾ ಚಲ್ವೆ ಆದರೇನು ಆದಿ ತಿಳಿಯದೆ ಬೂದಿ ಬಡಕೊಂಡರೇನು 4 ಶರಣು ಬಂದವರ ಅನ್ಯರಿಗೊಪ್ಪಿಸದೇ ತಾನು ಕೊರಳ ಕೊಯಿದವನ ಧನ ಸೆಳೆದರೇನು ವರದ ಹನುಮೇಶ ವಿಠಲನಂಘ್ರಿಗಳ ನುತಾ ಸ್ಮರಿಸದಲೇ ನೂರೊರುಷ ಬಾಳಿದರೇನು 5
--------------
ಹನುಮೇಶವಿಠಲ
ಇನ್ನೂ ಭ್ರಾಂತಿಯ ಮಾಡುವರೆ | ನನ್ನದೆಂದು ಆಡುವರೆ |ತನ್ನ ತಾ ತಿಳಿಯದೆ | ಅನ್ಯರ ಗುಣದೋಷ ನೋಡುವರೆ ಪ ಸ್ತುತಿಸುತ ಬಂದರೇನು | ಮತ್ತೆ ಜಲವ ಮಿಂದರೇನು | ಎತ್ತ ಹೋದರೂ ದಣಿವಿಕೆಯಿಲ್ಲದೆ | ನಿತ್ಯಾನಿತ್ಯ ವಿವರಿಸಲಿಲ್ಲ 1 ಮಾತಿನ ಬಣವಿಯನೊಟ್ಟಿ | ಸ್ವಂತ ವಿಷಯಂಗಳ ಮುಟ್ಟಿ |ಯಾತಕೆ ವೈರಾಗ್ಯದ ಮಾತು | ಮಾತಿನಂತೆ ನಡೆದರಾಯಿತು 2 ನಾನು ದೊಡ್ಡವ ನನ್ನವರೆಂದು | ಜ್ಞಾನ ಗರ್ವದ ಮನೆಗೆ ಬಂದು | ಜ್ಞಾನಬೋಧನ ಪ್ರಭುವ ಕೂಡದೆ ದೀನನಾಗಿ ಬಳಲುವದೇನೊ 3
--------------
ಜ್ಞಾನಬೋದಕರು
ಎಂಥ ಪಾಪಿ ನಾನು ಹರಿ ಹರಿ ಪ ಕರ್ಮ ತಿಂತಿಣಿಗಳ ಬಾಧೆಗಳನು | ಅಂತ್ಯಗಾಣದಾದೆನಯ್ಯ ಅ.ಪ ಪರಹಿತಾರ್ಥ ಮನದೊಳೆಣಿಸದೆ || ನರಕದುಃಖದೊಳು ಗೋಳಿಡಲು | ಬರುವರಾರು ಕಾಣದಿರಲು 1 ಪರ ಇರುತ ಮಾಯಾಬಲೆಯೊಳಗೆ ಬಿದ್ದೆ || ಕರೆದರಾರು ಬಾರದಿನಿತು | ಪರಿಯ ಭವಕಿಲ್ಬಿಷವನುಣುವ 2 ಶ್ವಾನನಂತೆ ನಾನು ತೊಳಲಿದೆ || ತಾನು ತನ್ನದೆಂದಧರ್ಮ ನಾ | ಏನನೆಂದರು ಕೇಳರಯ್ಯ 3 ಅನ್ಯರೆಂದು ಪರರ ನಿಂದಿಸಿ | ಪುಣ್ಯಹೀನನಾದೆನಯ್ಯ 4 ಸರ್ವವಿಧದಿ ಭಜಿಸಿ ನಿಜ | ಸರ್ವೇಶ ಶ್ರೀನಿವಾಸನೆನದೆ 5
--------------
ಸದಾನಂದರು
ಎಂದಿಗೆ ಪಾಲಿಪೆ ಎನ್ನ ಗೋ- ಪ ವಿಂದ ಮುಕುಂದ ಆ- ನಂದ ಮೂರುತಿಅ.ಪ ಚರಣಸೇವೆಯ ಕೊಡಿಸಿ ಪರಮಭಕ್ತರೊಳಿರಿಸಿ ದುರಿತರಾಸಿಗಳ ಪರಿಹರಿಸಿ 1 ತಾರದೆ ಸಂತೋಷದಿ ಮಾರಜನಕ ನಿನ್ನ ಧೇನಿಸುವಂತ 2 ಗುರುರಾಮವಿಠ್ಠಲ ನಿನ್ನ ಹೊರತು ಅನ್ಯರಿಲ್ಲ ಸಿರಿನಲ್ಲ 3
--------------
ಗುರುರಾಮವಿಠಲ
ಎಂದೆಂದಿಗೂ ಕುಂದದೆ ಸಲಹು ಎನ್ನ ಪ ಮಂದರಧರಸುರ ನರ ಹರಿಯೇಇಂದಿರೆಯರಸರವಿಂದ ಲೋಚನಮಂದನು ನಾನೆಂದರಿಯೆ ಅ.ಪ ಶಿರಿಗರುವದ ಭರದಿಂದ ಬರಸಿ |ಅನ್ಯರೊಳಿರಲು ಬಲು ನಾ ಚರಿಸಿ |ಶಿರಿಕರ ಕರಿವರ ವರದನ ವಿರುದ್ಧವ |ನಿರುವರ ನೆರೆಯಲಿ ಮೆರಿಸಿ 1 ಕರುಣಾಘನ ಕರುಣಾಲಯ ವರ್ಣ ಸು - |ಪರ್ಣಯಾನ ಯದುಕುಲ ಮಣಿಯೇ ||ಶರಣಾಗತ ಪರಿಪಾಲಿಪನೆಂದು |ಪರಿಪರಿ ಪಾಡುತ ನಾ ದಣಿಯೆ 2 ಭವ ಭವ ಬಿಡಿಸಿ3
--------------
ರುಕ್ಮಾಂಗದರು
ಎನ್ನಪಾಪವೇ ಎನ್ನ ಕಾಡುವುದು ಎನ್ನಯ್ಯ ಹರಿಯೆ ನಿನ್ನದಿದರೊಳನ್ಯವೇನಿಹ್ಯದು ಪ ಮುನ್ನಮಾಡಿದ ಪಾಪಕರ್ಮವು ಬೆನ್ನಬಿಡದೆ ಕಾಡುತಿರಲು ನಿನ್ನಗನ್ನುವುದಾವ ನ್ಯಾಯವು ಪನ್ನಂಗಶಾಯಿ ಸನ್ನುತಾಂಗ ಅ.ಪ ನಾನಾಜೀವಿಗಳ ಪ್ರಾಣಹಾರಿಸಿದೆ ಅನ್ಯರಿಗೆ ಬಿಡದೆ ಜಾಣನುಡಿ ಪೇಳಿ ಹಾನಿ ಬಯಸಿದೆ ದುಗ್ಗಾಣಿ ರಿಣಕಾ ಗೇನುಯಿಲ್ಲೆಂದಾಣೆ ಮಾಡಿದೆ ನಾ ನಿನ್ನ ಮರೆದೆ ಏನು ತಿಳಿಯದೆ ಜ್ಞಾನ ಪೇಳಿದೆ ಜ್ಞಾನವಂತರಿಗ್ಹೀನ ನುಡಿದೆ ಮಾನವಂತರ ಮಾನ ಕಳೆದೆ ಹೀನಬವಣೆಯೋಳ್ಬಿದ್ದೆನಭವ 1 ಅಂಗನೆಯರ ಸಂಗ ಬಯಸಿದೆ ದುರಿತಕ್ಕೆ ಹೇಸದೆ ಅಂಗನೆಯರ ಗರ್ಭ ಭಂಗಿಸಿದೆ ಅನ್ಯರ ಒಡವೆಗೆ ಕಂಗಳಿರೆ ಭಂಗಕೊಳಗಾದೆ ಮಂಗ ನಾನಾದೆ ನಿತ್ಯ ನೇವಹಕೆ ಅಂಗನೆನಿಸದೆ ಬಡವರ್ವಿಮಹಕೆ ನುಂಗಿ ಕೂತೆನು ಪರರ ದ್ರವ್ಯಿ ನ್ನ್ಹ್ಯಾಂಗೆ ನಿನ್ನೊಲಿಮೆನಗೆ ಅಭವ 2 ಕೊಟ್ಟ ಒಡೆಯರಿಗೆರಡನೆಯ ಬಗೆದೆ ನಂಬಿ ಎನ್ನೊ ಳಿಟ್ಟ ಗಂಟನು ಎತ್ತಿಹಾಕಿದೆ ಪಡೆದ ಮಾತೆಯ ಬಿಟ್ಟು ಬೇಸರ ಮಾಡಿನೋಡಿದೆ ಭ್ರಷ್ಟನಾನಾದೆ ದುಷ್ಟಗುಣಗಳನೊಂದುಬಿಡದೆ ಶಿಷ್ಟಪದ್ಧತಿ ಜನಕೆ ಉಸುರಿದೆ ಕೊಟ್ಟವಚನೊಂದು ನಡೆಸದಿಂದುಳಿದು ಕೃತಿ ಪೇಳೆನಭವ 3 ಒಂದೆ ಮನದವನಂತೆ ತೋರಿದೆ ಮತ್ರ್ಯದವರಿಗೆ ಮುಂದೆ ಭಲಾಯೆಂದು ಹಿಂದೆ ನಿಂದಿಸಿದೆ ದೋಷವಿನಿತು ಹೊಂದದವರಿಗೆ ಕುಂದು ಹೊರೆಸಿದೆ ನಾನೇ ಅಹುದಾದೆ ಸಿಂಧುಶಯನ ಭಕ್ತರನ್ನು ಕಂ ಡೊಂದಿಸದೆ ಮುಖವೆತ್ತಿ ನಡೆದೆ ಮುಂದುಗಾಣದೆ ದೋಷ ಮಾಡಿದೆ- ನೊಂದು ಪುಣ್ಯವನರಿಯೆನಭವ 4 ಕೊಡುವ ಧರ್ಮಕೆ ಕಿಡಿಯನ್ಹಾಕಿದೆ ಕೂಡಿದ್ದವರಿಗೆ ಕೆಡಕು ಬೋಧಿಸಿ ಒಡಕು ಹುಟ್ಟಿಸಿದೆ ಅಡಿಗೆ ಬಾಗಿ ಮಿಡುಕುವವರಿಗೆ ದುಡುಕನಾಡಿದೆ ಕಡುಪಾಮರಾದೆ ಪಿಡಿದು ಕಾಯುವ ಒಡೆಯನ್ಹೆಸರಿನ ಮುಡಿಪು ನುಂಗಿ ಕಡುಪಾಪಾತ್ಮಾದೆನು ಸುಡುಸುಡೆನ್ನಯ ಜನ್ಮವ್ಯಾಕಿನ್ನು ಒಡೆಯ ಶ್ರೀರಾಮ ಸಾಕುಮಾಡೋ 5
--------------
ರಾಮದಾಸರು
ಎನ್ನಲ್ಲಿ ಅವಗುಣ ಶತಸಾವಿರವಿರೆ | ಅನ್ಯರ ಕರೆದಾನು ನಡತೆ ಇದೇನೆಂಬೆ ಪ ವೇದವನೋದಿದೆ ಪರರಿ | ಗಾದÀರಿಸಿ ಮುಕುತಿಗೆ | ಹಾದರಹಳು ನಾರಿ | ಮಾದಿಗÀನ ಪೋದಂತೆ 1 ಧನದಾಸೆಯಿಂದ ಸಾಧನವಾಗದೆಂದು | ಜನರಿಗೆ ಉಪದೇಶವನು ಮಾಡುವೆ | ತೃಣ ಹತ್ತದಿದ್ದ | ವಧನರಾಶಿ ಕದ್ದಂತೆ2 ರಸನೇಂದ್ರಿಯಗಳ ಬಂ | ಧಿಸಬೇಕೆಂದು ನಾನು | ಉಸುರುವೆ ಅಲ್ಲಲ್ಲಿ ಕುಶಲನಾಗಿ | ಅಮೃತ | ರಸವಲ್ಲೆನೆಂದಾವ ಮುಸುರಿಯ ಮೆದ್ದಂತೆ 3 ಒಡಿವೆ ವಸ್ತುಗಳು ಸಂಗಡ ಬಾರವು ಮಮತೆ | ಬಿಡು ಸಂಸಾರವಿದು ಕಡಿಗೆ ಭವದ | ಮಡವು ಸಿದ್ಧವೆಂದು ನುಡಿವೆನೊ ಪರರಿಗೆ | ಯಡಹಿಯೊ ಎಂದಾವ ಗಿಡನೇರಿ ಬಿದ್ದಂತೆ 4 ಭಕುತಿ ಕೂಡಿದ ವಿರಕುತಿ ಲೇಶವಿಲ್ಲಾ | ಯುಕುತಿ ಬಾಯಲಿ ನಾರಕಕೆ ಸಾಧನಾ | ಲಕುಮಿವಲ್ಲಭ ನಮ್ಮ ವಿಜಯವಿಠ್ಠಲ ನಿನ್ನ ಅ | ರ್ಚಕನಾಗಿ ಬದುಕತಕ್ಕದ್ದು ಮಾರ್ಗವ ತೋರೊ 5
--------------
ವಿಜಯದಾಸ
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿಪ ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ 1 ಚಂಡಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದುಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 2 ಅಂಗಡಿ ಮುಂಗಟ್ಟನ್ಹೂಡಿ ವ್ಯಂಗ್ಯ ಮಾತುಗಳನ್ನಾಡಿಭಂಗ ಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 3 ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿರೆಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 4 ಬೆಲ್ಲದಂತೆ ಮಾತಾನಾಡಿ ಎಲ್ಲರನ್ನು ಮರುಳು ಮಾಡಿಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 5 ಕೊಟ್ಟಣವನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡುಕಷ್ಟ ಮಾಡಿ ಉಣ್ಣುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 6 ತಾಳ ದಂಡಿಗೆ ಶ್ರುತಿ ಮೇಳ ತಂಬೂರಿಯ ಹಿಡಿದುಕೊಂಡುಸೂಳೆಯಂತೆ ಕುಣಿಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 7 ಸಂನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 8 ಹಳ್ಳದಲ್ಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡುಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 9 ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 10 ಉನ್ನತ ಕಾಗಿನೆಲೆಯಾದಿಕೇಶವನಾ ಧ್ಯಾನವನ್ನುಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ 11
--------------
ಕನಕದಾಸ
ಎಷ್ಟು ಕೂಗಲು ದಯ | ಪುಟ್ಟಲಿಲ್ಲವೊ ನಿನಗೆ ಬೆಟ್ಟದೊಡೆಯ ಹರಿಯೆ ಪ. ಸಿಟ್ಟೇಕೆ ಎನ್ನೊಳು ಕೃಷ್ಣಮೂರುತಿ ನಿನಗೆ ಬಿಟ್ಟರೆ ನೀ ಎನ್ನ ಸೃಷ್ಟಿಯೊಳಾರುಂಟೊ ಅ.ಪ. ಪರಮ ಪಾತಕಿಯೆಂದು | ತೊರೆದರೆ ನೀ ಎನ್ನ ಮೊರೆಬೀಳಲಿನ್ನಾರಿಗೆ ಕರುಣಾಮೂರುತಿ ಎಂಬೊ ಬಿರುದು ಪೊತ್ತಿಲ್ಲವೆ ಸರಿಯೆ ನಿನಗಿದು ಕೊರಗಿಸುವುದು ಜರಿದು ಬಳಲುವೆ ಧರೆಯೊಳೀಗ ನಾ ಸುರರ ರಕ್ಷಕ ಪರಮಪಾವನ ಕರವ ಮುಗಿವೆ ದರುಶನವ ನೀಡೊ 1 ನೀನಲ್ಲದೆ ಇನ್ನು | ನಾನಾರ ಭಜಿಸಲೊ ಗಾನವಿಲೋಲ ಹರಿ ಕಾನನದೊಳು ಕಣ್ಣು ಕಾಣದಂತಾಗಿದೆ ಧ್ಯಾನಕೆ ಸಿಲುಕದೆ ನೀನೆನ್ನ ಕಾಡುವೆ ಮಾನ ಪ್ರಾಣ ಶರೀರ ನಿನ್ನದೊ ನಾನು ಅನ್ಯರ ಭಜಿಸಲಾರೆನೊ ಹೀನಬುದ್ಧಿಯ ಬಿಡಿಸಿ ಗುರುಗಳ ಧ್ಯಾನವೆನಗಿತ್ತು ನೀನು ಕಾಯೊ 2 ಅನ್ನಪಾನವ ಬಿಟ್ಟು | ನಿನ್ನನು ಸ್ತುತಿಸಲು ಇನ್ನು ಕರುಣವಿಲ್ಲವೆ ಇನ್ನು ಸೈರಿಸಲಾರೆ ಘನ್ನ ಮಹಿಮನೆ ದುಃಖ ನಿನ್ನ ಮನಸು ಕರಗಲಿನ್ನೇನಗೈಯ್ಯಲೊ ಎನ್ನ ಯತ್ನವು ವ್ಯರ್ಥವಾಯಿತು ಇನ್ನು ನೀ ದಯೆಗೆಯ್ಯಬೇಕೊ ಮುನ್ನ ಮಾಡಿದ ತಪ್ಪನೆಣಿಸದೆ ಎನ್ನ ದೃಷ್ಟಿಗೆ ನಿನ್ನ ತೋರೊ 3 ಸುತನ ಮೊರೆಯನೆ ಕೇಳಿ | ಹಿತದಿ ವೇದವನಿತ್ತೆ ಶರಧಿ ಅಮೃತ ಸುರರಿಗಿತ್ತೆ ಕ್ಷಿತಿಯ ಬಾಧೆಯ ಬಿಡಿಸಿ ಸುತನ ಬಾಧಿಸೊವೊನ ಹತಮಾಡಿ ಇಂದ್ರಗೆ ಗತಿಸಿದ ಪದವಿತ್ತೆ ಕ್ಷಿತಿಯನಾಳ್ವರ ಹತವಗೈಸಿದೆ ಕ್ಷಿತಿಸುತೆಯ ಪ್ರೇಮದಲಿ ತಂದೆ ಹಿತದಿ ಪಾಂಡವ ಸುತರ ಕಾಯ್ದೆ ವ್ರತವ ಕೆಡಿಸಿ ಕಲಿಹತವಗೈದೆ 4 ಕಂತು ಜನಕನೆ ನಿನಗೆ ನ್ನಂತರ ತಿಳಿಯದೇನೋ ಸಂತತ ಗೋಪಾಲಕೃಷ್ಣವಿಠ್ಠಲ ನಿನ್ನ ಶಾಂತರೂಪವ ಎನ್ನ ಅಂತರಂಗದಿ ತೋರೊ ಚಿಂತಿತಾರ್ಥ ಪಂಥಗಾರನೆ ಎಂತು ದಿನಗಳು ಸಂದು ಹೋದುವೊ ಸಂತತಾನಂದನಂತಶಯನ 5
--------------
ಅಂಬಾಬಾಯಿ
ಏನು ಕಾರಣ ಹರಿಯೆ ಅನುಮಾನಿಸಿದಿ ದೊರೆಯೆ ಘನವಲ್ಲ ನಿನಗಿದು ತೆರೆದ ಬೀಗ ಜೋಡಿಸುವುದು ಪ ವದನದಿಂದಲಿ ನಿನ್ನ ಮಹಿಮೆ ಪೊಗಳಲರಿಯದೆ ಸದನದಿ ಅನ್ಯರ ಪಾಡುತ್ತಿದ್ದೆನೇನೋ 1 ಪಾಡದಿದ್ದರೆ ನಾನೊಬ್ಬ ನೋಡಿ ಬಂದದ್ದೇನೊ ನಿನಗೆ ಬೇಡಿಕೊಂಬೆನೊ ಬಾಯ ಬೀಗ ತÉಗೆಸೊ ಹರಿಯೆ 2 ವೇದ ಪೊಗಳಲರಿಯದ ವಿಜಯ ರಾಮಚಂದ್ರವಿಠಲನ್ನ ಮೋದಮಯ ದೇವ 3
--------------
ವಿಜಯ ರಾಮಚಂದ್ರವಿಠಲ
ಒಲ್ಲೆ ಒಲ್ಲೆ ಸ್ವಾಮಿ ಒಲ್ಲೆ ಒಲ್ಲೆ ಪ ವಲ್ಲಭ ಶ್ರೀ ಕೃಷ್ಣವಿಠಲನಲ್ಲದೆ ಬೇರೆ ವಲ್ಲಭನನು ನಾ ಅ.ಪ. ಹರಿ ನಿಮ್ಮ ಗುಣಗಳ ಪಾಡದೆ ಇರಲೊಲ್ಲೆ ನಿತ್ಯ ಕೇಳದೆ ಇರಲೊಲ್ಲೆ ಚರಣ ಪೂಜೆಯನಿರುತ ಮಾಡದೆ ಇರಲೊಲ್ಲೆ ದೊರೆಯೆ ನಿಮ್ಮನು ಬಿಟ್ಟು ಬೇಡೆ ಅನ್ಯರ ನಾನು 1 ದುಷ್ಟಜನರ ಸಂಗ ಎಂದೆಂದಿಗುವಲ್ಲೆ ಶಿಷ್ಟಜನರ ಸಂಗ ಎಂದಿಗು ಬಿಡಲೊಲ್ಲೆ ಅಷ್ಟಕರ್ತನು ಜಗಕೆ ವಿಷ್ಣು ಒಬ್ಬನೆ ಬಲ್ಲೆ ಕಷ್ಟ ನೀಡುವ ಭವವ ಎಂದೆಂದಿಗು ಮುಂದೆ 2 ದುರಿತ ರಾಶಿಯ ಮತ್ತೆ ಮಾಡಲು ನಾನೊಲ್ಲೆ ಅರಿಷಡ್ವರ್ಗಂಗಳ ಜಯಿಸದೆ ಬಿಡಲೊಲ್ಲೆ ಗುರುಪಾದ ಪದ್ಮಗಳ ಒಲೆಸದೆ ಬಿಡಲೊಲ್ಲೆ ಪರನಾರಿಯರ ಸಂಗ ಎಂದೆಂದಿಗು ಒಲ್ಲೆ 3 ಉತ್ತಮೋತ್ತುಮ ಕೃಷ್ಣಸಾರದೆ ಇರಲೊಲ್ಲೆ ಭೃತ್ಯ ನಿನ್ನವನೆಂದು ಸಾರದೆ ಇರಲೊಲ್ಲೆ ನಿತ್ಯ ಶೃತಿಯ ಆಜ್ಞೆ ನಡಿಸದೆ ಬಿಡಲೊಲ್ಲೆ ಸುತ್ತಿ ಕಾಯುವೆ ನಮ್ಮ ಬಲ್ಲೆಬಲ್ಲೆನು ಸತ್ಯ 4 “ಶ್ರೀ ಕೃಷ್ಣವಿಠಲ”ನೆ ಪರಮಾಪ್ತ ಸರಿಬಲ್ಲೆ ವಾಕು ಸತ್ಯವೆಂಬುದ ಬಲ್ಲೆ ಏಕ ಭಕ್ತಿಯ ಬಿಟ್ಟು ಏನೇನು ನಾನೊಲ್ಲೆ ಶ್ರೀಕಾಂತನನು ಬಿಟ್ಟು ಕ್ಷಣವು ಜೀವಿಸಲೊಲ್ಲೆ5
--------------
ಕೃಷ್ಣವಿಠಲದಾಸರು