ಒಟ್ಟು 4842 ಕಡೆಗಳಲ್ಲಿ , 131 ದಾಸರು , 3185 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆಯದಿರು ಮನವೆ ಮಾಧವನ ನಮ್ಮದುರಿತದಾರಿದ್ರ್ರ್ಯವನು ಹರಿಸಿ ಹೊರೆವವನಪ.ಆಳರಿತು ಊಳಿಗವ ಕೊಂಡುಂಡು ದಣಿವಂತೆಮೇಲಾಗಿ ಜೀವವನು ಕೊಡುವ ದೇವನಕಾಲಕಾಲಕೆ ಮಾಳ್ಪ ನಡೆತಪ್ಪು ನುಡಿತಪ್ಪುಆಲೋಚಿಸದೆ ಕರುಣಿಸುವ ಕರುಣನ 1ಮೂಢನಾಗಲಿ ಮತಿಯುಳ್ಳ ನರನಾಗಲಿಪಾಡಿದಾಕ್ಷಣ ಭೃತ್ಯನೆಂದು ಒಲಿದುಕೂಡಿಕೊಂಬುವ ದೊರೆಗಳಿಲ್ಲ ಹರಿಯಲ್ಲದಾನಾಡಾಡಿಬಣಗುಕಲ್ಲುಗಳ ಬೇಡಿ2ಮುನ್ನಾರು ಅನ್ಯದೇವರ ಭಜಿಸಿ ಭವಗೆದ್ದರಿನ್ನಾರು ಹರಿಯೊಲುಮೆಯಲಿ ದಣಿದರುನಿನ್ನ ಗುರುಗಳಿಂದರಿತು ನೆರೆನಂಬು ಪ್ರಸನ್ನ ವೆಂಕಟಪತಿಯ ಪಾದವನಜವ 3
--------------
ಪ್ರಸನ್ನವೆಂಕಟದಾಸರು
ಮರೆಯದಿರು ಶ್ರೀ ಹರಿಯನು ಪ.ಮರೆಯದಿರು ಶ್ರೀ ಹರಿಯ ಮರಣಾತುರದಿ ಮಗನಕರೆದವಗೆ ಸಾಯುಜ್ಯವಿತ್ತ ನಾರಾಯಣನಸ್ಮರಣೆಯನು ಮಾಡುವರಚರಣ ಸೇವಕರಿಂಗೆಪರಮಪದವೀವ ಹರಿಯಅಪದೇವಕಿಯ ಬಂಧುವನು ಪರಿದವನ ಪೂತನಿಯಜೀವರಸವೀಂಟಿದನ ಮಾವನನು ಮಡುಹಿದನಪಾವನ ತರಂಗಿಣಿಯ ಪದನಖದಿ ಪಡೆದವನಗೋವರ್ಧನೋದ್ಧಾರನ ||ದಾವಾನಲನ ಪಿಡಿದು ನುಂಗಿದನ ಲೀಲೆಯಲಿಗೋವತ್ಸ ಗೋಪಾಲ ರೂಪವನು ತಾಳ್ದವನದೇವಮುನಿ ಮುಖ್ಯ ಸುರರಾರಾಧಿಸುವನ ಶ್ರೀ ಪಾದವನುಭಜಿಸು ಮನವೆ 1ಕಂಜಸಂಭವಪಿತನ ಕರುಣಾಪಯೋನಿಧಿಯಕುಂಜರನ ನುಡಿಕೇಳಿ ಒದಗಿದನ ರಣದೊಳು ಧ-ನಂಜಯನ ಜೀವವಂ ಕೃಪೆಯಿಂದ ಕಾಯ್ದವನಆಂಜನೇಯನ ನಾಳ್ದನ ||ರಂಜಿಸುವ ಕೌಸ್ತುಭವಿಭೂಷಣನ ಜಲಧಿಯಲಿನಂಜಿನೊಡೆಯನ ಮೇಲೆ ಮಲಗಿದನ ತಮದೊಳಗೆ ಪ -ರಂಜ್ಯೋತಿಮಯನಾಗಿ ಬೆಳಗುವನಶ್ರೀ ಚರಣಕಂಜವಂ ಭಜಿಸು ಮನವೆ 2ವಾರಿಧಿಯೊಳಾಡಿದನ ವರಗಿರಿಯ ತಾಳಿದನಧಾರಿಣಿಯ ತಂದವನ ದೈತ್ಯನನು ಕೊಂದವನಮೂರಡಿಯಲಳೆದವನ ಮೊನೆಗೊಡಲಿ ಪಿಡಿದವನ ನೀರಧಿಯಬಂಧಿಸಿದನ||ದ್ವಾರಕೆಯನಾಳ್ದವನ ತ್ರಿಪುರಗಳ ಜಗುಳ್ದವನಚಾರುಹಯವೇರಿದನ ಸಕಲ ಸುಜನರ ಪೊರೆವಧೀರ ಪುರಂದರವಿಠಲನ ಚರಣಕಮಲವನುನಂಬಿ ನೀ ಭಜಿಸು ಮನವೇ 3
--------------
ಪುರಂದರದಾಸರು
ಮರೆಯಬೇಡ ಮನವೆ ನೀನು |ಹರಿಯ ಚರಣವ ಪ.ಯಾಗ - ಯಜÕ ಮಾಡಲೇಕೆಯೋಗಿ - ಯತಿಯು ಆಗಲೇಕೆ |ನಾಗಶಯನ ನಾರದವಂದ್ಯನಕೂಗಿ ಭಜನೆಮಾಡುಮನುಜ1ಸತಿಯು ಸುತರು ಹಿತರು ಎಂದುಮತಿಯು ಕೆಟ್ಟು ತಿರುಗಲೇಕೆ |ಗತಿಯು ತಪ್ಪಿ ಹೋಗುವಾಗಸತಿಸುತರು ಬಾಹೊರೇನೊ ? 2ಹರಿಯ ಸ್ಮರಣೆ ಮಾತ್ರದಿಂದದುರಿತ ಘೋರವೆಲ್ಲ ನಾಶಪರಮಪುರುಷ ಪುರಂದರವಿಠಲಪರದಪದವಿಕೊಡುವನೊ3
--------------
ಪುರಂದರದಾಸರು
ಮಲಗಿ ಎದ್ದನು ರಂಗ, ಮಕ್ಕಳ ಮಾಣಿಕ ಕೃಷ್ಣ |ಛಲ ಹಿಡಿದನು ನೋಡೆ ಮೊಲೆಕೊಡೆ ಕೃಷ್ಣಗೆ ಪಜಲದೊಳು ತಮನ ಮರ್ದಿಸಿ ಅಂದು ಮತ್ಸ್ಯನಾಗಿ |ಬಲುಗಿರಿಯ ನೆಗಹಿ ಮರೆಮಾಡಿ ಕೂರ್ಮನಾಗಿ ||ನೆಲನ ಒಯ್ದವನ ಕೊಲುವೆನೆಂದು ವರಹನಾಗಿ |ಬಲುಭಕ್ತಿಗಾಗಿ ಕಂಬದಿ ನಾರಸಿಂಹನಾಗಿ 1ಚಿಕ್ಕ ರೂಪದಿಂದ ಬಲಿಯ ದಾನವ ಬೇಡಿ |ಉಕ್ಕಿನ ಕೊಡಲಿಯ ಪಿಡಿದ ಪರಶುರಾಮ ||ಮಿಕ್ಕಿದ ತಲೆಯ ಚೆಂಡಾಡಿದ ಶ್ರೀರಾಮ |ಸೊಕ್ಕಿದ ಕಂಸನ ಕೊಲುವೆನೆಂದ ಕೃಷ್ಣ 2ಬಲು ಪತಿವ್ರತೆಯರ ವ್ರತವನಳಿದಬುದ್ಧ|ಕಲಿಯಾಗಿ ಖಡಗುವ ಪಿಡಿದು ಕುದುರೆ ಏರಿ ||ಒಲಿದು ಭಕ್ತರನೆಲ್ಲ ಸಲಹುವೆನೆಂತೆಂದು |ಚೆಲುವ ಪುರಂದರವಿಠಲ ತೊಟ್ಟಿಲೊಳು 3
--------------
ಪುರಂದರದಾಸರು
ಮಹಾಪುರುಷನೆತ್ತ ತಾನೆತ್ತಮಹಾಪುರುಷರ ಶ್ರೇಷ್ಠವೇನೆಂದು ಅರಿಯನುಪಕುದುರೆ ತಾನಹೆನೆಂದು ಕತ್ತೆ ಬೀದಿಯೊಳು ನಿಂತುಕುದುರೆ ಕುಣಿತವನು ಕುಣಿದ ತೆರದಿವಿಧವಿಧದ ಓದುವೋದಿ ಮಹಾಪುರುಷನಹೆನೆಂದರೆಸದಮಲಾನಂದರ ಸರಿತಾನು ಬಹನೇ1ಹುಲಿಯು ತಾನಹೆನೆಂದು ಹುರುಡಿರಿಗೆ ನರಿ ಮೈಯ್ಯಬಲವಂತದಿ ಸುಟ್ಟುಕೊಂಡ ತೆರದಿಹಲವು ಶಾಸ್ತ್ರವನೋದಿ ಮಹಾಪುರುಷನಹೆನೆಂದರೆಬಲು ಮಹಾತ್ಮರ ಸರಿತಾನು ಬಹನೇ2ಮಹಾಪುರುಷನೆಂಬಾತ ಮಹಾಸಮಾಧಿಯಲಿ ಮುಳುಗಿಮಹಾ ಚಿದಾನಂದಗುರುತಾನಾಗಿ ಇಹನುಮಹಾಪುರುಷತಾನೆಂದು ಕಾಪುರುಷ ಪೇಳಿದಡೆಮಹಾಪುರುಷ ಸರಿತಾನು ಬಹನೇ3
--------------
ಚಿದಾನಂದ ಅವಧೂತರು
ಮಹಾಮಾಯೆಗೌರಿ ಮಾಹೇಶ್ವರಿಪ.ವiಹಾದೇವಮನೋಹಾರಿ ಶಂಕರಿಮಹಾಪಾಪಧ್ವಂಸಕಾರಿ ಶ್ರೀಕರಿಮಾಂಪಾಹಿಪಾಹಿ ಶೌರಿಸೋದರಿಅ.ಪ.ಕಾಮಕೋಟಿಸುಂದರಿ ಶುಭಕರಿ ಕರಿಕುಂಭಪಯೋಧರಿಕಾಮಿತಪ್ರದೆ ಕಂಬುಕಂಧರಿಹೇಮಾಲಂಕಾರಿ ಹೈಮವತಿ ಕುವರಿ 1ಭಾನುಕೋಟಿಭಾಸ್ಕರಿ ಭವಹರಿ ಭಜಕಾಮೃತಲಹರಿಸ್ಥಾಣುವಲ್ಲಭೆ ದನುಜಸಂಹಾರಿಜ್ಞಾನಾಗೋಚರಿ ಜಗತ್ರಯೇಶ್ವರಿ 2ಪೂರ್ವದೇವಭೀಕರಿ ಭ್ರಾಮರಿ ಪುಳಿನಾಖ್ಯ ಪುರೇಶ್ವರಿಸರ್ವಲಕ್ಷ್ಮೀನಾರಾಯಣೇಶ್ವರಿಸರ್ವಸಹಚರಿ ಶಶಾಂಕಶೇಖರಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಾಡಿದನೆನ್ನ ಫಕೀರನಾಗಿ ಸದ್ಗುರುಮಾಡಿದನೆನ್ನ ಫಕೀರನ ನೋಡಲಿಕ್ಕಾಶ್ಚರ್ಯಪ್ರಪಂಚ ಕಳೆದೆ ನಾಮರೂಪಕೆ ದೂರಪಅನುಭವಕಪ್ಪರ ಹೃದಯದ ಜೋಳಿಗೆಎನ್ನುವ ಕಂಕುಳೊಳಿಟ್ಟುಅನಿಮಿಷದೃಷ್ಟಿ ಅರುಹಿನಕಪನಿಅಮೃತ ಕಮಂಡಲು ಕೊಟ್ಟು1ನಾದದ ಕಿನ್ನರಿ ಕೈಯೊಳಗಿಟ್ಟುಟೊಪ್ಪಿಗೆ ಪೆಟ್ಟಿಗೆಯಿಟ್ಟಬೋಧದ ಅಂಗಿಯು ನಿರ್ಗುಣಲುಂಗಿಯ ಸೈರಣೆಲುಟಿಕೆಯ ಕೊಟ್ಟ2ಈಪರಿಮಾಡಿಯೆ ಬಯಲನುಹಿಡಿ ಎಂದು ಕರವನು ನೆತ್ತಿಯಲಿಟ್ಟಭೂಪ ಚಿದಾನಂದ ಫಕೀರನಾಗಿಯೆತಿರುಗೆಂದಪ್ಪಣೆ ಕೊಟ್ಟ3
--------------
ಚಿದಾನಂದ ಅವಧೂತರು
ಮಾಡುತಿಹ ಸಂಸಾರ ಮಲಿನ ಹೊದ್ದೆದೆಯೋಗಿಆಡಲೇನವ ಆನಂದವಿಹ ಸುಖವಪಬಾಲ ಶಿಶುಲೇಲೆಗಳ ಬಗೆ ಬಗೆಯ ಲಾಲಿಸುತಶೂಲಧರಸುತರೀಗ ಬಂದರೆನುತ್ತಕಾಲು ಕೈ ಮೋರೆಗಳ ತೊಳೆದುಣಿಸಿ ರಕ್ಷಿಸುತಮೂಲೋಕಕೆನ್ನ ಭಾಗ್ಯ ಮಿಗಿಲು ಮಿಗಿಲೆನುತ1ಸತಿವಿನೋದವ ಮಾಡೆ ಸರಸವನೆ ಮಾಡುತ್ತಅತಿ ಆದಿವಸ್ತು ತಾನೀಕೆಯನುತಾಮತಿಭ್ರಾಂತನಾಗದಲೆ ಮಂಗಳನು ತಾನೆನುತಮತಿಯಾಟ ಬ್ರಹ್ಮವಿದು ಇದುವೆ ಎನ್ನುತ್ತ2ಬಡತನವು ಬಂದು ಕಾಡುತ್ತಲಿರೆ ನೋಡುತ್ತದೃಢಬುದ್ಧಿಯಾಗಿ ತಾನೀಗಲಿರುತಬಿಡದೆ ರಕ್ಷಿಪ ವಿಶ್ವಕುಟುಂಬಿಯಹನೆನುತಪಡದೆ ಆಯಾಸ ಸುಖವಾಸಿಯಾಗಿರುತ3ಬಡಿದಾಡುತಿಹ ಗೃಹದ ಜನರುಗಳ ನೋಡುತ್ತಬಿಡು ನಿನ್ನ ಬುದ್ಧಿಯನು ಎಂದು ಹೇಳುತ್ತಕಡೆಗಣಿಸಿದವರ ಅತ್ತಿತ್ತ ಮಾಡುತ್ತಕಡಹನಿಶ್ಚಲದಿಂದ ಮತಿಶಾಂತವಿರುತ4ನಿಂದ್ಯದೂರಪವಾದವನು ಕೇಳುತ್ತಮಂದಶ್ರವಣನೋ ಎಂಬ ತರದಲಿರುತನಿಂದುದೃಢ ಚಿತ್ತದಲಿ ನಿರ್ಲೇಪ ತಾನೆನುತಬಂಧಹರ ಚಿದಾನಂದ ತಾನಾದಗೆನುತ5
--------------
ಚಿದಾನಂದ ಅವಧೂತರು
ಮಾಡುದಾನಧರ್ಮಪರಉಪಕಾರವ ಮರೆಯದಿರೆಚ್ಚರಿಕೆಪ.ಕೇಡ ನೆನೆಯಬೇಡ ನಂಬಿದವರ ಮೇಲೆ ಕೆಡುವೆ ನೀನೆಚ್ಚರಿಕೆ ||ಅ||ಬಾಳು ಬದುಕುಸಿರಿ ಇರುವಾಗ ಬಂಧು ಬಳಗಗಳೆಚ್ಚರಿಕೆ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಹಾಲು ಸಂಸಾರಕ್ಕೆ ಹಲವರ ಬಾಯ್ಗಳ ಬಡಿಯದಿರೆಚ್ಚರಿಕೆ 1ಮೂಢರ ಒಡನಾಡಿ ಮುಂದೆ ಕೆಡಲು ಬೇಡಮೋಸ ನೋಡೆಚ್ಚರಿಕೆನಾಡೊಳು ಸುಜನರ ನೋಡಿ ನಡೆಕಂಡ್ಯ ನಟನೆ ಬೇಡೆಚ್ಚರಿಕೆ 2ಚೆನ್ನಾಗಿ ಬದುಕಿದೆ ಗಳಿಸಿದೆ ನಾನೆಂಬ ಹೆಮ್ಮೆ ಬೇಡೆಚ್ಚರಿಕೆ |ನಿನ್ನಾಯು ಮುಗಿದಿರಲು ಯಮದೂತರುಬಂದು ಎಳೆಯುವರೆಚ್ಚರಿಕೆ 3ಒಬ್ಬರಂತೆಲ್ಲರ ನೋಡಿ ಸತ್ಕರ್ಮದಿ ಉಬ್ಬಬೇಡೆಚ್ಚರಿಕೆ |ಕಬ್ಬು ಬಿಲ್ಲನ ಪಿತನ ಏಕಾಂತ ಭಾವದಿಂನೆರೆನಂಬು ಎಚ್ಚರಿಕೆ 4ಹೆಣ್ಣು ಹೊನ್ನು ಮಣ್ಣು ನಿನ್ನನಗಲಿಸಿ ಹೋಗುವರೆಚ್ಚರಿಕೆ |ಮುನ್ನಮಾಡಿದ ಪುಣ್ಯ ಬೆನ್ಹತ್ತಿ ಬರುವುದುಮುಂದೆ ನೋಡೆಚ್ಚರಿಕೆ 5ತಿಂದೋಡಿ ಬಂಧುಬಳಗ ತಪ್ಪಿಸಿ ಕೊಂಬರೆಂದು ನೋಡೆಚ್ಚರಿಕೆ |ಎಂದೆಂದು ಅಗಲದ ಬಂಧು ಶ್ರೀಹರಿನಮಗೆಂದು ನೋಡೆಚ್ಚರಿಕೆ 6ಕಾಲನ ದೂತರು ಯಾವಾಗ ಎಳೆವರೋ ಕಾಣದು ಎಚ್ಚರಿಕೆ |ಬೇಲೂರು ಪುರವಾಸ ಪುರಂದರವಿಠಲನ ಆಳಾಗು ಎಚ್ಚರಿಕೆ 7
--------------
ಪುರಂದರದಾಸರು
ಮಾಡುವ ಬನ್ನಿ ನಾವು ನೀವು ಎಲ್ಲರು ಏಕಾರತಿಯಗೂಢ ಚಿದಾನಂದನೊಳು ಕೂಡಿಕೊಂಬರ್ಥಿಯಪನೀರು ಲವಣ ಕೂಡಿ ಒಂದೇ ನೀರು ನಿಜವೆ ಆದಂತೆಕಾರಣಾತ್ಮಕನೆಲ್ಲ ಕರಗಿಹೋಗುವ ಏಕಾರತಿ1ಉರಿಯುವ ಕರ್ಪೂರವ ತಗುಲಿ ಉರಿಯು ತಾನಾಗಿ ಬೆಳಗಿದಂತೆನರನು ತಾನೇ ಸಾಕ್ಷಾತ್ ಹರನಾದುದೇ ಏಕಾರತಿ2ಕೀಟಭೃಂಗ ಧ್ಯಾನದಿಂದ ಕೀಟ ಭೃಂಗವಾದ ತೆರದಿಪಾಡಿ ಚಿದಾನಂದ ತಾನೇ ತಾನಾದುದೇ ಏಕಾರತಿ3
--------------
ಚಿದಾನಂದ ಅವಧೂತರು
ಮಾನವಜನ್ಮ ದೊಡ್ಡದು - ಇದ |ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಪ.ಕಣ್ಣು ಕೈಕಾಲ್ಕಿವಿ ನಾಲಗೆ ಇರಲಿಕ್ಕೆ |ಮಣ್ಣುಮುಕ್ಕಿ ಮರುಳಾಗುವರೆ ||ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನು |ಉಣ್ಣದೆ ಉಪವಾಸವಿರುವರೇನೋ 1ಕಾಲನವರು ಬಂದು ಕರಪಿಡಿದೆಳೆವಾಗ |ತಾಳು ತಾಳೆಂದರೆ ಕೇಳುವರೆ ? ||ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ |ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ 2ಏನು ಕಾರಣ ಯದುಪತಿಯನು ಮರೆತಿರಿ |ಧ್ಯಾನ್ಯ - ಧನ -ಸತಿ - ಸುತರಿವು ನಿತ್ಯವೆ? ||ಇನ್ನಾದರು ಶ್ರೀ ಪುರಂದರವಿಠಲನ |ಚೆನ್ನಾಗಿ ಭಜಿಸಿ ನೀವ್ ಸುಖಿಯಾಗಿರಯ್ಯ 3
--------------
ಪುರಂದರದಾಸರು
ಮಾಯೆಯು ಎಂತಿಹುದೆಂಬೆಯ ಮಗನೆಮಾಯೆಯು ಸ್ತ್ರೀಯೇಮಾಯೆಮಾಯೆಯಗುರುಕರುಣದಿ ತಾಗೆ ಅದರೆಮಾಯೆಯೆಲ್ಲವೂ ನಿರ್ಮಾಯೆಪಎಸಳಿನ ಕಂಗಳ ಓರೆನೋಟಕೆಎದೆಗುಂದುವುದೇಮಾಯೆಮುಸುಕನೇ ಹಾಕಿ ಹಲ್ಲನು ತೆರೆಯಲುಮುಂದುಗೆಡಿದುವುದೇಮಾಯೆಕುಸುಮದ ಸೂಡಿದ ಮುಡಿಯಾಭಾವಕೆಕುಸಿಯುತಲಿಹುದೇಮಾಯೆಮುಸಿ ಮುಸಿ ನಗುತ ಮುದ್ದು ಮಾತಾಡಲುಮರುಳಾಗುವುದೇಮಾಯೆ1ಚೆಳ್ಳು ಪುಳ್ಳು ಎಂದೆಂಬ ಅಂದುಗೆಗೆಚಿತ್ತುಡುಗುವುದದೇಮಾಯೆಬಳ್ಳಿಯ ತೆರದಲಿ ಬಳುಕುವ ತನುವಿಗೆಬಾಯಿ ಬಿಡುವುದೇಮಾಯೆಮೆಲ್ಲನೆ ಹೆಜ್ಜೆಗೆ ಜಗ್ಗುವ ನಡಿಗೆಗೆಮರುಗುತಲಿಹುದೇಮಾಯೆಗಲ್ಲದ ನುಣುಪಿಗೆ ಚಿಬುಕದ ಸಿರಿಗೆವಶವಾಗುವುದೇಮಾಯೆ2ಮೋರೆಯ ಮುರುಕಿಸೆ ಹುಬ್ಬನು ಏರಿಸೆಮುಳುಗಿಹೋಗುವುದೇಮಾಯೆತೋರ ಹರಡಿಯ ತಿರುಹುವ ಬಗೆಗೆದೃಢಗೆಡುವುದೆಮಾಯೆಸೀರೆ ಸಿಂಗಾರಕೆ ಒಲವು ಒಯ್ಯಾರಕೆಸಿಕ್ಕಿಹೋಗುವುದೇಮಾಯೆಹಾರವ ಎತ್ತಿ ಎದೆ ಬದಿ ತೋರಿಸೆಹುಚ್ಚನಾಗುವುದೇಮಾಯೆ3ಕಂಚುಕಿ ತೆರೆದು ನಡುವನು ಸಡಿಲಿಸೆಕಾಲುಡುಗುವುದೇಮಾಯೆಚಂಚಲ ದೃಷ್ಟಿಯ ಆಲಿಯ ಹೊರಳಿಸೆಚೇತನಗುಂದುವುದುಮಾಯೆಗೊಂಚಲ ನಾಗೋತ್ತರ ಚಳತುಂಬಿಗೆ ಮಾರುಹೋಗುವುನೇಮಾಯೆಮಿಂಚುವ ಮೋರೆಯ ಮೀಟಿನ ಬಣ್ಣಕೆಮುಳುಗಿಯಾಡುವುದೇಮಾಯೆ4ಸತಿಯಿಂದಲಿಸುತ ಸುತನಿಂದಲಿ ಸೊಸೆಸರಗೊಳಿಸುವುದೇಮಾಯೆಮಿತಿಯಿಲ್ಲದೆ ವಾಸನೆಯಲಿ ಜನ್ಮವಮುಂದುವರಿಸುವುದೇಮಾಯೆಪಥಗಾಣದೆ ಅನಂತ ಯೋನಿಯಲಿಪುಡಿಯಾಗುವುದೇಮಾಯೆಚಿದಾನಂದನ ತಿಳುವಿಗೆ ಮುಳುಗಿಸಿಪಸರಿಸಿ ಇಹುದೆಮಾಯೆ5
--------------
ಚಿದಾನಂದ ಅವಧೂತರು
ಮಾರಮದಘನಸಮೀರಮಧ್ವಮತೋ-ಮುನಿ ನಿಮ್ಮ ಮಹಿಮೆಯನು ತಿಳಿಯದಲೆ ದಂಡೆತ್ತಿಕುಸುಮಾಸ್ತ್ರಾನÀಂಗನಾಗಲು ಉಡುಸಹಿತ (ಹಿಮಗು-ಮಾರನಪಜಯಕಂಡು ಕ್ರೋಧಾದಿವರ್ಗಗಳು
--------------
ಗೋಪಾಲದಾಸರು
ಮಾರಿತೋರೆ ನೀರೆ ಕರೆಯ ಬಾರೆ ಪ.ನಾಗವೇಣಿಯರು ನಿನ್ನ ಬಾಗಿಲಿಗೆ ಬಂದರೆಹ್ಯಾಂಗ ಮಾಡಲಿಯೆಂದುಹೋಗಿ ಕೋಣಿಯನ್ಹೊಕ್ಕೆ 1ಚದುರೆ ನಮ್ಮನೆಗೆ ಬಂದು ಒದರಿ ಆಣಿಯನಿಟ್ಟೆಒದರಿ ಆಣಿಯನಿಟ್ಟೆಕದನತೆಗೆದ್ಹೋಗಿ ಗದಗದ ನಡಗುವಿ2ವಾಸುದೇವರ ತಂಗಿ ಸೋಸಿಲಾಣಿಯನಿಟ್ಟುಸೋಸಿಲಾಣಿಯನಿಟ್ಟ ಶ್ರೀಶನಸತಿಯರು ದಾಸಿ ಎನಿಸುವರೇನ 3ಸರ್ಪಶಯನನ ತಂಗಿ ಒಪ್ಪಾಗಿ ಆಣಿಯನಿಟ್ಟುಒಪ್ಪಾಗಿ ಆಣಿಯನಿಟ್ಟು ಗಪ್ಪಾಗಿ ಕುಳಿತಿಯಾಕತಪ್ಪು ತಪ್ಪೆನ ಬಾರ 4ಉಲ್ಲಾಸದಿಂದ ಆಣೆಗುಲ್ಲು ಮಾಡುತ ಇಟ್ಟೆಗುಲ್ಲುಮಾಡುತಲಿಟ್ಟೆ ನಲ್ಲೆಯರು ಬರಲುಎದೆ ಝಲ್ಲು ಝಲ್ಲೆನುತಿರೆ 5ಚಿಕ್ಕ ಬುದ್ದಿಂದ ಆಣೆ ಇಕ್ಕಿ ಇಲ್ಲಿಗೆ ಬಂದೆಇಲ್ಲಿಗೆಬಂದ ಪುಟ್ಟ ಸುಭದ್ರಾಒಳಗೆ ಹೊಕ್ಕು ಹೊರಗೆ ಹೊರಡಲೊಲ್ಲೆ 6ಪೋರಬುದ್ದಿಯಿಂದ ಸಾರಿ ಆಣೆಯನಿಟ್ಟೆಸಾರಿ ಆಣಿಯನಿಟ್ಟೆನಾರಿರುಕ್ಮಿಣಿ ಬರಲು ಹಾರುತಿದೆ ಎದೆ 7ನಕ್ಕರೆಂಬೋ ಭೀತಿ ಇಕ್ಕಿ ಮೂಲೆಗೆ ಬಂದೆಇಕ್ಕಿ ಮೂಲೆಗೆ ಅಕ್ಕ ರುಕ್ಮಿಣಿಗೆಆಣಿಸೊಕ್ಕಿನಿಂದÀಲೆ ಇಟ್ಟೆ 8ರಮಿ ಅರಸನ ತಂಗಿ ಹೆಮ್ಮಿಲಾಣಿಯನಿಟ್ಟೆಆಣಿಯನಿಟ್ಟೆ ನಮ್ಮ ಕಾಣುತಒಳಗೆ ಗುಮ್ಮನಂತಡಗಿದಿ 9
--------------
ಗಲಗಲಿಅವ್ವನವರು
ಮಾರ್ತಾಂಡಕುಲದೀಶ ದಶರಥನುದರದಿಪುತ್ರನಾಗಿಯೆ ಜನಿಸಿ ರಾಘವ ವಿಶ್ವಾಮಿತ್ರರೆಜÕವಪಾಲಿಸಿ ತಾಟಕೀ ಮುಖ್ಯಧೂರ್ತದೈತ್ಯರ ಮಥಿಸಿಅಹಲ್ಯೆದೇವಿಯ ಪಾಲಿಸಿ ಅರ್ಥಿಯಲಿ ವಿಥಿಲೇಖೆಗೆಗಮಿಸುತ ಪೃಥ್ವಿಜಾತೆಯನೊಲಿಸಿ ಮಾರ್ಗದಿ ಕಾರ್ತವೀರ್ಯಾಂತಕನ ಭಂಗಿಸಿ ತ್ವರಿತದಿಂದಯೋಧ್ಯೆಗೈಸಿದ ರಾಮಸೀತೆಗೆ ಮುತ್ತಿನಾರತೀಯ ಬೆಳಗೀರೆ ಶೋಭಾನೆ 1ಮಲತಾಯಿ ಕೈಕೆಯ ಮಾತಿಗೋಸುಗ ಪೋಗಿ ನೆಲಸಿದನಾರಣ್ಯದಿ ಪೋಗಿಮೃಗರಾಮ ತರಲುಪೋಗಲು ಭರದಿ ಸೀತೆಯ ರಾವಣೇಶನೊಯ್ಯಲುಮಾಯದೀ ರಾಮಲಕ್ಷ್ಮಣರ ವನದಿ ಚಲಿಸುತಲಿಕಪಿವರರ ಸ್ನೇಹದಿಜಲಧಿಬಂಧಿಸಿ ರಾವಣಾದ್ಯರಗೆಲಿದು ಶರಣಗೆ ಪಟ್ಟಗಟ್ಟುತ ಲಲನೆಸಹ ನಡೆತಂದಯೋಧ್ಯೆಗೆ ರಾಮಸೀತೆಗೆ ಹರಳಿನಾರತೀಯಾ ಬೆಳಗೀರೇ ಶೋಭಾನೆ 2ಚಂದದಿ ಧರಣಿಯ ಪಾಲಿಸುತಿರೆ ರಾಮನೊಂದಪವಾದವಕೇಳಿಸೀತೆಯ ಘೋರಾರಣ್ಯದಿ ಬಿಡಲು ಪೇಳಿ ಗರ್ಭಿಣಿ ಸೀತೆಬಂದ್ವಾಲ್ಮೀಕಿಯರೊಳು ಬಾಳಿ ಪಡೆದು ಲವಕುಶರನಲ್ಲಿಚಂದದಲಿ ಪಾಲಿಸುತಿರೆ ಗೋವಿಂದನೆಜ್ಞಾಶ್ವವನು ಬಂಧಿಸಿಬಂದು ಕಲಹದಿ ನಿಜವನರಿತಾ ನಂದನರ ಕರೆತಂದಯೋಧ್ಯೆಗೆರಾಮಸೀತೆಗೆ ಕುಂದಣದಾರತೀಂiÀi್ಞ ಬೆಳಗೀರೆ ಶೋಭಾನೆ 3
--------------
ಗೋವಿಂದದಾಸ