ಒಟ್ಟು 6003 ಕಡೆಗಳಲ್ಲಿ , 130 ದಾಸರು , 3822 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ವವು ಹರಿಗೊಪ್ಪಿಸಿದರೆ ನಿಶ್ಚಿಂತೆ ಗರ್ವದಿಂದಲಿ ವ್ಯರ್ಥ ಕೆಡದಿರು ಭ್ರಾಂತೆ ಪ. ಲೇಶ ಸ್ವತಂತ್ರವನಿತ್ತದ ನಂಬೀ ಶಾಭಿಮಾನದಿ ಮಾಡುವ ಡೊಂಬಿ ದೋಷಗಳಿಂದಾಹ ಫಲವೆ ನೀನುಂಬಿ ವಾಸುದೇವನ ಮೂರ್ತಿಯನೆಂತು ಕಾಂಬಿ 1 ಹಸುತೃಷೆ ನಿದ್ರೆ ತಡೆಯಲೊಲ್ಲಿ ಯಾಕೆ ದಶಕರಣಗಳು ದುರ್ವಿಷಯದಿ ನೂಕೆ ವಶವಿಲ್ಲದಲೆ ಬಿದ್ದು ಬಳಲುವಿ ಯಾಕೆ ವಸುದೇವ ಸುತನ ಮರೆಯದಿರು ಜೋಕೆ 2 ಸತ್ಯ ಸಂಕಲ್ಪನಲ್ಲದೆ ಕರ್ತನಾವ ತತ್ವೇಶರರಿತು ಕರ್ಮವ ಮಾಳ್ಪ ಸೋವ ನಿತ್ಯ ನೀ ವರಿತ ಹಮ್ಮಮತೆಯ ಭಾವ ಹತ್ತದಂತಿರೆ ಕಾವ ಕರುಣಾಳು ದೇವ 3 ಒಡೆಯರಿಲ್ಲದೆ ಪೋದ ವೃಕ್ಷದ ಫಲವ ಬಡಿದು ತಿಂಬುವರು ಕಂಡವರೆಲ್ಲ ನೋಡು ಕರ್ಮ ಮಡದಿ ಮೊದಲುಗೊಂಡು ಕಡಲಶಯನಗರ್ಪಿಸುತ ಕಷ್ಟ ದೂಡು 4 ವಹಿಸು ಭಾರವ ಲಕ್ಷ್ಮೀಕಾಂತನ ಮೇಲೆ ಇಹರಹರಾದರದಿಂದ ತಲ್ಲೀಲೆ ಮಹಿಮೆಯ ಪೊಗಳಿ ತೂಗಾತನೂಯ್ಯಾಲೆ ಅಹಿಪತಿ ಗಿರಿರಾಜ ಎತ್ತುವ ಮೇಲೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸರ್ವಸಾರಭೋಕ್ತ ಸಕಲ ಮಂಗಲದಾಯಿ ವೆಂಕಟೇಶ ನಿರ್ವಹಿಸುವವ ನೀನೆ ನಿತ್ಯಕರ್ಮಗಳಿಂದ ವೆಂಕಟೇಶ ಪ. ದೇವರ್ಷಿ ಪಿತೃಗಣರೊಳಗಿದ್ದು ರಾಜಿಪ ವೆಂಕಟೇಶ ಭೂವರರಲ್ಲಿ ವಿಭೂತಿರೂಪನು ನೀನೆ ವೆಂಕಟೇಶ ಸೇವಕ ಜನರನು ಸುಲಭದಿ ಸಲಹುವ ವೆಂಕಟೇಶ ಪಾದ ಪದ್ಮವೆ ಗತಿ ಎಂಬೆ ವೆಂಕಟೇಶ 1 ಇಂದಿರಾಧವ ಯದುನಂದನನೆನಿಸಿದೆ ವೆಂಕಟೇಶ ಸುಂದರ ವಿಗ್ರಹ ಸುಗುಣೇರ ಒಲಿಸಿದೆ ವೆಂಕಟೇಶ ಹಿಂದೆ ಮುನ್ನ ಭವದಂದವನರಿಯೆನು ವೆಂಕಟೇಶ ಮಂದಮತಿಯ ಕರ್ಮಕುಂದನು ಕ್ಷಮಿಸಯ್ಯ ವೆಂಕಟೇಶ 2 ಸ್ವೋದರಗತ ಜಗದಾಧಾರಗುಣನಿಧಿ ವೆಂಕಟೇಶ ಭೂಧರಗಿರಿವರ ಶೋಭಿತ ಮೂರುತಿ ವೆಂಕಟೇಶ ಶ್ರೀಧರಾಕಾಂತ ನಿನ್ನಾಧಾರ ನಂಬಿದೆ ವೆಂಕಟೇಶ3
--------------
ತುಪಾಕಿ ವೆಂಕಟರಮಣಾಚಾರ್ಯ
ಸರ್ವಾಂತರ್ಯಾಮಿ ಸರ್ವೇಶ ಬಾರೊ ಸರ್ವಸ್ವತಂತ್ರನೆ ಸರ್ವಭಯನಾಶ ಪ ಸರ್ವತಂತ್ರನೆ ಸರ್ವವೇದದಿ ಸರ್ವತತ್ತ್ವದಿ ಸರ್ವಸಾಕ್ಷಿ ನೀ ಸರ್ವವ್ಯಾಪಕ ಸರ್ವದೇವರ ಸಾರ್ವಭೌಮ ಅ.ಪ ಜಡಬೊಂಬೆ ನಾಟಕರಚಿಸಿ ಎಡಬಿಡದೆ ಕುಣಿಸ್ಯಾಡುವಿ ಕಡುಮೋಹಗೊಳಿಸಿ ಕಡುಗೌಪ್ಯದದರೊಳು ನೆಲೆಸಿ ನೀನೆ ಅಗಣಿತ ಕಲ್ಪನೆವೆರಸಿ ಜಡಕೆ ಜಡವಾದ ತೊಡರಿನಾಟದ ಕೆಡಕು ತಪ್ಪಿಸಿ ಪಿಡಿದು ಎನ್ನನು ಒಡೆಯ ನಿನ್ನಡಿ ಭಕ್ತರಾವಾಸ ದಿಡು ಎಂದೆರಗುವೆ ಪಾಲಿಸಭಯ 1 ನಾನಾವಿಧದ ಸೃಷ್ಟಿಗಳ ಸೃಜಿಸಿ ಪೋಣಿಸಿ ಮಾಡಿಟ್ಟ ಭವವೆಂಬ ಮಾಲೆ ಏಳು ಮೋಹವ ತುಂಬಿದೆಲ ಪುಸಿ ಕಾಣದಂತೊಗೆದಿ ಮಹಾಮಾಯದ ಜಾಲ ನಾನು ನೀನೆಂಬ ಜಾಣರೆಲ್ಲ ಬಿದ್ದು ಏನುಕಾಣದೆ ತ್ರಾಣಗೆಟ್ಟರು ಹೀನಮತಿ ನಾನೇನು ಬಲ್ಲೆನು ನೀನೆ ಸಲಹೆನ್ನ ದೀನರಕ್ಷಕ 2 ಪಾವನ ಪರಮಪ್ರಕಾಶ ದೇವ ಭಾವಜನಯ್ಯ ನಿಜಭಾವಿಗಳರಸ ಕೇವಲಸುಗುಣಾಂತರ್ವಾಸ ನಿನ್ನ ಸೇವಕನೆನಿಸೆನ್ನ ಕಾಯೊ ನುತಪೋಷ ಜೀವಜೀವರಜೀವ ಚೈತ್ಯನದೇವ ದೇವರ ದೇವ ನಂಬಿದೆ ಜಾವ ಜಾವಕೆ ಒದಗುತಿಹ್ಯ ಮಹ ನೋವು ಗೆಲಿಸೆನ್ನಯ್ಯ ಶ್ರೀರಾಮ 3
--------------
ರಾಮದಾಸರು
ಸರ್ವಾಂತರ್ಯಾಮಿ ಸಲಹೊ ಎನ್ನ ಸರ್ವಕಾಲದಲಿ ಭಕ್ತರ ಅಂತರಂಗದಿ ನಲಿವೆ ಪ ಭಕ್ತರನು ತೋಷಿಸಲು ಹತ್ತವತಾರದಿ ಯುಕ್ತಿಯಲಿ ಖಳರ ವಧಿಸಿದೆಯಲ್ಲವೆ ಭಕ್ತವತ್ಸಲನೆಂಬೊ ಬಿರುದು ಹೊತ್ತಿಹೆ ದೇವ ಭಕ್ತರಾಧೀನ ನಾನೆಂದು ನಿನ್ನ ಭಕ್ತರೊಳು ನಲಿವೆ 1 ಅಂತ್ಯದೊಳು ಅಜಮಿಳನ ಅಂತರಂಗದಿ ಪೊಕ್ಕು ಸಂತ ಆತ್ಮಜನ ಸಾರಗನೆಂದು ನುಡಿಶಿ ನಿನ್ನ ಸ್ವಂತ ಲೋಕಕೆ ಕಳಿಸಿ ಅಜಭವಾದಿಗಳಿಂದ ಅ ತ್ಯಂತ ಹೆಚ್ಚಿನ ಸ್ತುತ್ಯನಾದೆ ಗೋವಿಂದ 2 ಆವಾವ ಕಾಲದೊಳು ಆವಪರಿ ಕಷ್ಟದೊಳು ಕಾವ ನಿನ್ನಯ ನಾಮ ಮರೆಯದಂತೆ ದೇವ ಶ್ರೀ ಶ್ರೀನಿವಾಸ ಝಾಮಝಾಮದಿ ನುಡಿಸೊ ಶ್ರೀವರ ನೀನಲ್ಲದೆ ಮತ್ತಾರಿಹರೊ ದೇವ 3
--------------
ಸರಸ್ವತಿ ಬಾಯಿ
ಸರ್ವಾಧಾರ ವಿಠಲ | ಶರ್ವ ನೊಡೆಯ ಪ ಸರ್ವವಿಧದಲ್ಲಿವನ | ಪೊರೆಯ ಬೇಕಯ್ಯ ಅ.ಪ. ಮಧ್ವಸಿದ್ದಾಂತದಲಿ | ಅಂಕುರವ ಪುಟ್ಟಿಹುದುಶುದ್ಧಭಾವದಲದನ | ವೃದ್ಧಿಗೈಸುತಲೀಮಧ್ವಸನ್ಮಾರ್ಗದಲಿ | ಪದ್ಮನಾಭನ ಪಾದಪದ್ಮವನೆ ಭಜಿಪಂಥ | ಅಧ್ಯಾನ ತೋರೋ 1 ಲೇಸು ಸಾಧನ ಹರಿಯ | ದಾಸ್ಯದಲಿ ಮನವಿರಿಸಿಆಶೆ ಪೂರೈಸಲ್ಕೆ | ಆಶಿಸುತ್ತಿಹನೋ |ವಸುದೇವಭಿದ ತೈ | ಜಸನ ರೂಪದಲಿ ಉಪದೇಶವಿತ್ತಂತೆ ಉಪ | ದೇಶವಿತ್ತಿಹೆನೋ 2 ಹರಿಗುರು ಸದ್ಭಕ್ತಿ | ವೈರಾಗ್ಯ ವಿಷಯದಲಿಕರುಣಿಸಿ ಪೊರೆಯೊ ಹರಿ | ಮರುತಂತರಾತ್ಮನಿರುತ ಸಜ್ಜನ ಸೇವೆ | ದೊರಕಿಸುತ ಸಾಧನವಪರಿಪರಿಯಲಿಂಗೈಸಿ | ಪೊರೆಯೊ ಸರ್ವೇಶಾ 3 ಕಂಸಾರಿ ಮನಮಾಡಿವಂಶ ಉದ್ದರಿಸಿವಗೆ | ಹಂಸಜನ ವಂದ್ಯಹಂಸೋಪಸನೆ ಮಾಳ್ವ | ಶ್ವಾಸ ಮಾನೀ ವಾಯುಶಂಸನವ ಕೈಗೊಂಡು | ಜೀವರೋದ್ಧಾರೀ 4 ಕ್ಲೇಶಮೋದದಿ ಸಮತೆ | ಲೇಸಾಗಿ ಕೊಟ್ಟಿವಗೆಪೋಷಿಸೋ ಹಯವದನ | ಬಾಸುರಾಂಗ ಹರೀಮೇಶ ಮಧ್ವೇಶ ಉಪ | ದೇಶ ಸಾರ್ಥಕ್ಯವನುಆಶಿಸುವೆ ಕರುಣಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸರ್ವಾಮಯ ಹರ ವಿಠಲನೇ | ಸರ್ವದಾನೀನಿವರ ಸಲಹ ಬೇಕೊ ಪ ಶರ್ವಾದಿ ಸುರವಂದ್ಯ ಸಾರ್ವಭೌಮ ಸ್ವಾಮೀಅ.ಪ. ತ್ರಿವಿಧ ಭವ ಹಾರೀ 1 ಸರ್ವಸೃಷ್ಟೀಶನೇ ಸರ್ವಪಾಲಕ ಹರಿಯೇಸರ್ವ ಸಂಹಾರಕನೇ ಸರ್ವೋತ್ತಮಾಸರ್ವಾಂತರಾತ್ಮ ಶ್ರೀ ವೆಂಕಟೇಶನೆ ನಿನ್ನಸರ್ವದಾ ಭಜಿಸುವಗೆ ಸರ್ವಮಂಗಳವೀಯೋ 2 ಭಾವಿಮರುತಲೀತ | ಭಾವ ಭಕುತಿಗಳಿಂದಸೇವಿಸುವ ಹಯಮೊಗನ | ತವ ದಿವ್ಯ ರೂಪಾಆವ ತನುಕರಣ ಮನ | ಸರ್ವಾರ್ಪಣೆಂಬ ಮತಿಓವಿನೀನಿವಗಿತ್ತು | ಪಾವನವಗೈಯ್ಯೊ 3 ಪಂಚಬೇಧದ ಜ್ಞಾನ | ಸಂಚಿಂತನೇ ಇತ್ತುಅಂಚೆವಹ ಮತ್ತೆ ಹರಿ | ಮಂಚವಿಪಗೇಂದ್ರಾ |ಮುಂಚೆ ತರತಮ ತಿಳಿಸಿ | ವಾಂಛಿತಾರ್ಥದ ನಿನ್ನಸಂಚಿಂತನೆಯಲೇ ಇರಿಸೊ ಪಂಚಾಸ್ಯ ಪ್ರಿಯನೆ 4 ಅದ್ವೈತ ಚಿಂತನೆಯನೀವೊಲಿದು ಇವಗಿತ್ತು | ಭಾವದಲಿ ತೋರೊ ತವರೂಪ |ಈ ವಿಧದಿ ಬಿನೈಪೆ ಪವನಾಂತರಾತ್ಮ ಗುರುಗೋವಿಂದ ವಿಠಲಯ್ಯ ಪಾಲಿಸೋ ಜೀಯಾ 5
--------------
ಗುರುಗೋವಿಂದವಿಠಲರು
ಸರ್ವೋತ್ತಮ ಸರ್ವಜೀವನ ಪ್ರಾಣ ಸರ್ವೋತ್ತಮ ಪರಿಪೂರ್ಣ ಸರ್ವೋತ್ತಮ ಧ್ರುವ ಸತ್ಯಜ್ಞಾನ ಅನಂತ ಬ್ರಹ್ಮ ಶ್ರುತಿ ಸಾರುತಲ್ಯದೆ ನೇಮ ಮತ್ಪಾತಕ ಹಿಡಿವುದು ಬರಿ ಭ್ರಮೆ ನಿತ್ಯನಾಗಿರೋ ಘನಮಹಿಮ 1 ಸರ್ವೋತ್ತಮ ಶ್ರೀ ಹರಿ ಸಾಕ್ಷಾತ ಪೂರ್ವಾಪರ ಪ್ರಖ್ಯಾತ ದೋರ್ವನು ತಾ ಘನಮಯ ಸದೋದಿತ ಸರ್ವಾನಂದಭರಿತ 2 ವಾಸುದೇವನೊಬ್ಬನೆ ಸರ್ವೇಶ ಭಾಸ್ಕರಕೋಟಿ ಪ್ರಕಾಶ ಭಾಸುತಲೀಹ್ಯ ವರ ಗುರುದೇವೇಶ ದಾಸ ಮಹಿಪತಿ ಪ್ರಾಣೇಶ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಲಹಯ್ಯಾ ಲಕ್ಷೀರಮಣ ಸರುವದ ನಮ್ಮನು ನೀ ಪ ಊರೊಳಗಿರಲಿ ಊರು ಬಿಟ್ಟಿರಲಿ ದಾರಿಯ ಬಿಟ್ಟು ನಾ ಸಂಚರಿಸುತಿರಲಿ ಮಾರಮಣ ಮುರಾರಿ ನಿನ್ನಯ ಪಾದ ವಾರಿಜನ ನಂಬಿ ಸೇರಿದ ಭಕುತರ 1 ಸಿರಿಯೆನಗಿರಲಿ ಎಡರೆನಗಿರಲಿ ಮರುಳುತನವೆನಗೇ ಆವರಿಸಿರಲಿ ನರಹರಿ ನಿನ್ನಯ ಚರಣದ ಮಹಿಮೆಯ ಪರಿಪರಿಯಿಂದ ಪೊಗಳುವ ಮತಿಯಿತ್ತು 2 ದೊರೆತನ ಬರಲಿ ತಿರುಕನು ಆಗಲಿ ಬಂದೆ ಡಂಭದೊಳು ತಿರುಗುತಲಿರಲಿ ಕರಿವರದ ಶ್ರೀ ರಂಗೇಶವಿಠಲ ನಿನಮರೆಯದೆ ಹರುಷದಿ ನೆನೆವಂತೆ ಮಾಡಿ3
--------------
ರಂಗೇಶವಿಠಲದಾಸರು
ಸಲಹು ಸಲಹು ಸಲಿಲಜನಯನಾ|ಎನ್ನಾ| ಇಳೆಯೊಳು ಮೊರೆಯ ಹೊಕ್ಕಿಹೆ ನಿನ್ನಾ ಪ ಕರುಣ ನೋಟಗಳಿಂದಲಿ ನೋಡಿ|ಸರ್ವ| ಭಾರ ಒಪ್ಪಿಸಿಕೊಂಡು ನಿಜ ನೀಡಿ| ದಾರಿದೋರುವ ಸುಮತಿಯ ನಿಲಿಸಿ|ಅತಿ| ತರಳನೆನುತ ಭಯವನೆ ಹರಿಸಿ 1 ಹರಿದುರಿತದ ಬಂಧನ ಬಲಿಯಾ|ತವ| ಚರಣದ ಭಕುತಿ ಕೊಡಲಿ ದೊರಿಯಾ| ಹರಿಗುಡದರಸನ ದಶಮುಖದಾ ಸಂಗ| ಲಿರಿಸು ದಾಸರ ಸಗಟವನೊದೆದಾ2 ತ್ರಿಪುಟಿಯ ಸಂಗ ಬಿಡಿಸು ಮನದಿ|ಎನ್ನ| ವಿಪುಳ ವಾಜಿಯೊಳಿರಿಸು ಧೃಡದಿ ಕೃಪೆಯಲಿ ಮಹಿಪತಿ ಸುತ ಪ್ರಾಣಾ|ಎನ್ನ| ಅಪರಾಧ ಕ್ಷಮಿಸಿ ಹೊರಿಯೊ ಪೂರ್ಣಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲಹು ಸಲಹು ಸಲಿಲಜಾಂಬಕ ಸಲಹು ತ್ರಿಭುವನ ಜೀವನಾ| ವಿನುತ ಪದಪಾವನಾ| ನೆಲಿಗೆ ಪಡೆದಿಹೆ ಕಾವನಾ| ಸುಲಭನಾಗ್ಯತಿ ಸಲಿಸುತಿರುತಿಹ|ಒಲಿದು ಭಕ್ತರ ಭಾವನಾ 1 ಕರವ ದರಿತು ಶರಣವ ಬಂದೆನಾ| ಕೊರತೆ ನೋಡದೆ ಹಿಂದಿನಾ| ಅರಹು ಮತಿಯಲಿ ಮಂದನಾ| ಹರಿಯ ಸಾರ್ಥಕ ನರಜನುಮವನು | ಭರದಿ ಮಾಡು ನೀ ಇಂದಿನಾ 2 ಪತಿ ಸಖಗತಿಗೆಳೆಯ ಸುತ|ಪಿತನ ಪರಿಯಲಿ ಲಾಲಿಸಿ| ಶೃತಿ ವಿಹಿತ ತವ ಸ್ತುತಿಸ್ತವ ಪಾಡುತಿಹೆ ನೆರೆಯಲಿ ಬಾಳಸೀ| ಹಿತವನರಿಯದ ಮತಿ ವಿಹೀನೋ|ನ್ಮತರ ಸಂಗವ ಜಾಳಿಸೀ| ಪತಿತನು ದ್ಧರಿಸ್ಸತುಳ ಮಹಿಪತಿ | ಸುತ ಪ್ರಭುವೇ ದಯಪಾಲಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲಹು ಸಲಹು ಹರಿಯೇ ದಯದಿಂದಲಿ| ಇಳೆಯೊಳು ನಾನತಿ ದೀನನು ಪ ಸನ್ಮತಿದಾಯಕ ಸನ್ಮನ ಮುನಿಜನ|ಸನ್ಮತ ಮಾ ಮನೋಹಾರಿ| ಮನ್ಮಥನಯ್ಯನೇ ಉನ್ಮತ ಸುರಹರ| ಚಿನ್ಮಯ ರೂಪ ಉದಾರಿ1 ನಿವಾರಣ ಮಾಡಿದೆ ಶೌರಿ| ಹರಣ ಸಹದಾರುಣ ವಲ್ಲಭ ಕಾರುಣ ಸುರಸಹಕಾರಿ2 ತುಹಿನ ಕಿರಣ ಕುಲಮೌಳಿ| ಮಹಿಪತಿ ನಂದನ ಹೃದಯ ಸರೋವರ| ಹಂಸಪರಮ ವನಮಾಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲಹೊ ಸಂತತ ಸಂತಿಕೆಲವೂರ ನಿಲಯ ಸಲೆ ನಂಬಿದೆನು ನಿನ್ನ ಜಲಜಾಂಘ್ರಿ ಪಿಡಿಕೈಯ್ಯ ಪ ಸೂನು ವೃಕೋದರ ಮೋದ ಮೌನಿ ನಾಮತ್ರಯದಿ ಅವತರಿಸುತಾ ದಾನವರ ಗರ್ವಾಖ್ಯ ಕಾನನಕೆ ಶಿಖಿ ಎನಿಸಿ ಪತಿ ಕೃಷ್ಣ ವ್ಯಾಸರನುಗ್ರಹಪಾತ್ರ 1 ವರದೇಶ ವಿಠಲನ ಚರಣ ಸೇವಕನಿಗೆ ಸ್ಥಿರವಾದ ವೃರಾಗ್ಯ ಜ್ಞಾನ ಭಕುತಿ ಗರೆದು ಪೊರೆಯುವದಕ್ಕೆ ಪುರದ ಹಿಂಭಾಗದಲಿ ಇರುವ ಕಾರಣ ನಿನ್ನ ಮೊರೆ ಹೊಕ್ಕೆ ಮರೆಯದಲೆ 2 ಇಂದು ಬೆಂದು ಪೋದವು ಎನ್ನ ಪಾಪವೆಲ್ಲ ಸಿಂಧುಜಾವರ ಶಾಮಸುಂದರನ ದಾಸರೊಳು ಪೊಂದಿಸೆಂದಡಿಗಡಿಗೆ ವಂದಿಸುವೆ ತ್ವತ್ವದಕೆ 3
--------------
ಶಾಮಸುಂದರ ವಿಠಲ
ಸಲ್ಲದೋ ಎಲೋ ಮಾಯಿ ಸಲ್ಲದೊ ಎಲೊ ಮಾಯಿ ಎಲ್ಲಾ ಒಂದೆಂಬೋದು ಸೊಲ್ಲನಾಡಲು ಯಮ ಕೊಲ್ಲದಲೆ ಬಿಡಾ ಪ ಉಕ್ಕಿನ ಮಳಿಯ ರೋಮರೋಮದಲಿ ಬಡಿದು ಬೆಸಸಿ ಸದಾ ಗಂಡುತಗಲಿ ಗಟ್ಟಿ ಪಕ್ಕಿಯ ತಿವಿದು ಪಾಶದಲಿ ಬಿಗಿದು ಕಾ ಲಿಕ್ಕಿ ನೆಲಕೆ ವರಿಸಿ ಕೆಂಪಗೆ ಕಾಸಿ ಇಕ್ಕಳದಲಿ ಉಚ್ಚಿ ಕರುಳು ಬೈಲಿಗೆ ಹಾಕಿ ಪೊಕ್ಕಳಿಗೆ ತೇಳಾರು ಪೊಗಿಸಿ ಕಟ್ಟಿ ಕರ ಹೊಯಿದು ನಕ್ಕು ಯಮದೂತರು ನಿನ್ನ ಬಾಧಿಪÀರು 1 ನಿನ್ನ ಕಾಲಲಿ ಒದ್ದೊದ್ದು ಹೆಡಗುಡಿಯನು ಕಟ್ಟಿ ಗಾರ್ಧಭದ ಲದ್ದಿಯೊಳಡಿಗಿಸಿ ಸುತ್ತ ಉರಿಯನಿಕ್ಕಿ ಮದ್ದು ಮೈಯಿಗೆ ಮುಚ್ಚಿ ಮುದದಿಂದ ಬೇಯಿಸಿ ಹದ್ದು ಕಾಗೆಗೆ ನಿನ್ನ ಯೆಡೆ ಮಾಡುವರು ಅ ಮೇಧ್ಯವ ತಿನಿಸುವರು ಅರಗಲ್ಲಿಗೆ ಉದ್ದಿ ಉರುಳ ಬಿಡುವರು ಕೆಂಡದ ಮೇಲೆ ವೊದ್ದಿಸಿ ಪರಿಪರಿ ಭಂಗವಪಡಿಸುವರು 2 ವೈತರಣಿಯೊಳಗದ್ದಿ ಅದ್ರಿಯ ಹರಿ ಮಾತು ಪೊರಡದಂತೆ ಮಾಡಿ ಮುದ್ರೆ ಬಾಯಿಗೆ ಹಾಕಿ ತೂತು ಮೈಯಿಗೆ ತಂತಿಯ ಪೋಣಿಸಿ ಪೂತಿ ಗಂಧದೊಳು ಹೊರಳಿಸಿ ತಡಿಯದೆ ಯಾತಣೆಯಿಂದ ಬಿಸುಟು ಮೊಟ್ಟೆಯ ಕಟ್ಟಿ ಮೂತರ ಕುಡಿಸುವರು ಮೀಸಿಯನು ಕಿತ್ತಿ ಘಾತಿಸಿ ನೋಡುವರು ಮಹಾ ಪಾತಕನೆಂದು ವಿಧಿಯ ಮೇಲೆ ಗುದ್ದೋರು 3 ಹೆಡತಲೆಯಿಂದ ನಾಲಿಗೆಯ ತೆಗೆದು ಕ ಕ್ಕಾಡಿ ಮಾಡಿ ನವನಾರು ಸಂದುಗಳು ಸುಟ್ಟು ಕೈಕಾಲನು ಕಟ್ಟಿಸಿ ಸಾಸವಿ ಸುಣ್ಣ ತೊಡೆದು ಬೋರಿಗೆಯಿಂದ ಬಡಿದು ಬಸಿಗೆ ಹಾಕಿ ಒಡಲೊಳು ಸೀಸವರೆದು ಮರದ ಬೇಲೆಯಲಿ ಹೊಡೆದು ಸರ್ರನೆ ಸೀಳೋರು ಕುರಿಯಂತೆ ಕಡಿದು ಈ ಬಗೆ ಮಾಡೋರು ಕೀವಿನ ಮಡುವಿನೊಳಗೆ ಇಟ್ಟು ತಲೆಮೆಟ್ಟಿ ಕುಣಿವರೊ 4 ಮೂಗನು ಕೊಯಿದು ಕವಡಿಯ ಪೋಣಿಸಿ ಚೆ ನ್ನಾಗಿ ಅತ್ತರಾಟದಲ್ಲಿ ತಲೆಕೆಳಕಾಗಿ ಜೋಲುವಂತೆ ಝೋಲಿಯ ಹೊಡೆದು ಮಾತುಗಾಲೆ ನಿನ್ನ ತೂಗಹಾಕಿ ಬಾಗಿಸಿ ಇನ್ನೊಮ್ಮೆ ಬೊಗಳೆಂದು ಕುಡಕಾಸಿ ವೇಗನೆ ಬರೆ ಇಡುವರು ದು:ಖದ ಸಾಗರ ಉಣಿಸುವರು ಬೆಕ್ಕಿನಂತೆ ಕೂಗಲು ಕೇಳಿ ಸೈರಿಸದಲೆ ಇಪ್ಪರು 5 ಘಾಯವಡೆದಲ್ಲಿ ಇರಿದು ಉಪ್ಪನೆ ತುಂಬಿ ಬಾಯಿವರಳು ಮಾಡಿ ಭತ್ತವ ಥಳಿಸಿ ಕ್ರೂ ರಾಯುಧ ಕಿವಿಗೆ ಬಿರಿಯಿಟ್ಟು ಬಂಧಿಸಿ ಖೋಯೆಂದು ಕೆಡಹಿ ಬೊಬ್ಬಿರಿಯೇ ಚಿಂದಿ ಮಾಡಿ ನಾಯಿಗಳಿಂದ ಕಚ್ಚಿಸಿ ಸೂಜೀಯ ಆಯಕ್ಕೆ ಊರುವರು ಮರಕ್ಕೆ ಕಟ್ಟಿ ಊಯಾಲೆ ಆಡುವರು ಇಪ್ಪತ್ತೆಂಟು ನಾಯಕ ನರಕದಲ್ಲಿಟ್ಟು ತೆಗೆಯುವರು6 ಪರಿ ಬಾಧಿಗೆ ಇರೆ ನರಕ ನರಕದಲ್ಲಿ ಹೂಳಿ ಉಬ್ಬಸಗೈಸಿ ಉರ ಕಾಲದಲ್ಲಿಟ್ಟು ತರುವಾಯ ತೆಗೆದು ಪಾ ಮರ ದುರುಳನೆಂದು ಮಿಡುಕಿಸಿ ಮಹಾನಿತ್ಯ ನರಕದೊಳಗೆ ನೂಕಿ ಕಡೆಗಾಣದಂತೆ ವರಲುತಿರೆ ನಗುವರು ನಿರ್ಮಲವಾದ ಮರುತ ಮತದವರು ಪ್ರತಿದಿನ ಸಿರಿಪತಿ ವಿಜಯವಿಠ್ಠಲನ ನಂಬದ ಮಿಥ್ಯಾ 7
--------------
ವಿಜಯದಾಸ
ಸಂಸಾರ ಚಿಂತೆ ನಮ್ಮ ಸ್ವಾಮಿ ಶ್ರೀ ಹರಿಗುಂಟು ಸಂಸಾರಿ ಕೃಷ್ಣ ಕರುಣಿಸುವ ಇದರಿಟ್ಟು ಧ್ರುವ ತುತ್ತಾಯತವ ಮಾಡಿ ಹೊತ್ತು ನಡೆಸುವ ಒಡಿಯ ಮತ್ತೆ ಚಿಂತಿಸಲ್ಯಾಕೆ ಹತ್ತು ಕಡೆಯ ಭಕ್ತವತ್ಸಲ ಸ್ವಾಮಿ ಚಿಂತ್ಯಾಕೆನ್ನೊಡಿಯ ಗ್ರಾಸ ಭಕ್ತರೊಡಿಯ 1 ಅನೆ ಮೊದಲಿರುವೆ ಕಡೆ ತಾಂ ನಡೆಸುತಿರಲಿಕ್ಕೆ ಜನಕೊಡ್ಡಿ ಕೈಯ ನಾ ದಣಿಯಲೇಕೆ ಅನುದಿನ ಹರಿವಾಕ್ಯ ಅನುಭವಿಸುತಿರಲಿಕ್ಕೆ ಅನುಮಾನವಿಡಿದು ನಾ ಹೆಣಗಲ್ಯಾಕೆ 2 ಭಾರ ವಹಿಸಿ ಕೊಂಡಿರಲು ಮಾರಪಿತ ಪರಿಪೂರ್ಣ ಸಾರಾಂಶ ವಿತ್ತು ವರಕೃಪೆಯ ಙÁ್ಞನ ಆರ್ಹಂಗವೆನಗ್ಯಾಕೆ ತೋರುತಿದೆ ನಿಧಾನ ತರಳ ಮಹಿಪತಿ ಹೊರೆವ ಗುರು ಕರುಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಸಾರದೊಳ್ ಪ ನಾನುನನ್ನದೆಂದು ವೃಥಾ ನರಳಿಬಳಲುವೆ ಅ.ಪ ತಂದೆ ತಾಯಿಯು ಬಂಧು ಬಳಗವು ಸಂ ಬಂಧಿಗಳೆಲ್ಲರು ಸತಿಸುತರೂ ಎಂದಿಗು ರಕ್ಷಕರೆಂದು ನೀ ತಿಳಿದು ಮಂದಮತಿಯೆ ಮುಂದೇ ಕೆಡುವೆಯೊ 1 ದುರ್ವಿದಗ್ಧ ವಿಜ್ಞಾನನಾಗಿ ಗರ್ವಪಡಲೂ ಸುಪರ್ವರ್ ನಗರೇ 2 ಸತ್ಯವೆಂಬುವದು ಮಾತೃ ಪಿತನು ಸ- ರ್ವೋತ್ತಮ ಜ್ಞಾನವು ಭೂತದಯೆಯು ಸ- ನ್ಮಿತ್ರಧರ್ಮವು ಭ್ರಾತೃಗಳ್ ಶಾಂತಿಯು ಪತ್ನೀ ಕ್ಷಮೆಯೂ ಪುತ್ರರ್ ನಿತ್ಯರಿವರು 3 ನಡೆವುದು ಯಾತ್ರೆಯು ನುಡಿವುದು ಮಂತ್ರ ನಡೆಸುವನು ಎಂದು ಧೃಡವಾಗಿ ನಂಬದೆ4 ಧ್ಯಾನನದೀಯೊಳು ಸ್ನಾನಮಾಡಿಸು- ಶ್ರೀನಿವಾಸನ ಸೇವೆಯಿದೆನ್ನದೆ 5 ಮೂರು ವಿಧವಾದ ಜೀವ ಕೋಟಿಯೊ- ಳಾರು ನಾನೆಂದು ದೂರದೃಷ್ಟಿಯಿಂ ಧೀರ ನಾಗಿದರ ಪರವ ಗಾಣದೆ 6 ನೀಮನವಲಿದು ವ್ಯರ್ಥನಾದೆ ನಾಮಾ ಜಪಿಸೀ ಕಾಮಿತ ಪಡಿಯದೆ 7
--------------
ಗುರುರಾಮವಿಠಲ