ಒಟ್ಟು 6126 ಕಡೆಗಳಲ್ಲಿ , 131 ದಾಸರು , 3704 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಲಹು ನಂದಕುಮಾರ ಸಲಹು ಗೋಪೀತನಯ ಸಲಹು ವಸುದೇವನಿಗೆ ಪುತ್ರನೆನಿಸಿದನೆಸಲಹು ದೇವಕಿ ಜಠರದಲಿ ಬಂದನೆನಿಸಿದನೆಸಲಹು ಶ್ರೀ ರಾಮ ಶ್ರೀಕೃಷ್ಣ ಜಯ ಕೃಷ್ಣ ಸಲಹು ಸಲಹೂ ಪನಂದನೆನೆ ಸಕಲ ಸಂಪತ್ತ ಸೂಚಿಸುತಿಹುದುಚಂದದಿಂದಣಿಮಾದಿ ಸಿದ್ಧಿುರಲಾಗಿಬಂದವಿದ್ಯೆಯು ಮುಚ್ಚಲಾ ಶಕ್ತಿ ಕುತ್ಸಿತವುಹಿಂದುಗಳೆವದರಿಂದ ನಂದನಕುಮಾರ 1ಜ್ಞಾನಶಕ್ತಿಯು ತಾನು ಗುಪ್ತವಾಗಿರಲಾಗಿಧ್ಯಾನಿಸುವ ಭಕ್ತರಿಗೆ ವಿಸ್ತರಿಸಿ ಕೊಡಲುನೀನು ಗೋಪೀತನಯನೆಂಬ ನಾಮವ ತಾಳ್ದೆದೀನರಕ್ಷಾಮಣಿಯೆ ಜ್ಞಾನದಾಯಕನೆ 2ವಸುವೆನಲು ಪರಿಶುದ್ಧವಾದ ಕರಣದ ಪೆಸರುಎಸೆದು ನೀನಿರಲಲ್ಲಿ ದೇವನೆನಿಸುವದುಅಸಮ ತೇಜದಿ ಪುರುಷನೆನಿಸಿ ಸಲಹಲು ಜಗವವಸುದೇವಪುತ್ರನೆನಿಸಿತು ನಿನ್ನ ನಾಮ 3ದೇವಕಿಯು ನಿನ್ನ ಬಗೆ ಮಾಯೆ ಬ್ರಹ್ಮಾಂಡಗಳಭಾವಿಸಲು ನೀನದನು ಕುಕ್ಷಿಯೊಳಗಿರಿಸಿಸಾವಧಾನದಿ ಸಕಲದೊಳು ಸತ್ಯನಾಗಿರಲುದೇವಕಿಯ ಜಠರದಲಿ ಬಂದನೆನಿಸಿದನೆ 4ನಿತ್ಯದಲಿ ಯೋಗಿಗಳು ನಿನ್ನಲ್ಲಿ ರಮಿಸುತಿರೆಪ್ರತ್ಯಕ್ಪ್ರಕಾಶದಲಿ ಜಡಪದಾರ್ಥಗಳುಅತ್ಯಂತ ರಮಣೀಯವಾಗಿಯದರೊಳು ಜನರುನಿತ್ಯ ರಮಿಸಲು ರಾಮನೆನಿಪ ಶ್ರೀ ಹರಿಯೆ 5ಮೂರು ವರ್ಣದ ನಾಮ ಮುನಿವಂದ್ಯ ನಿನಗಿರಲುಸಾರುವುದು ಸದ್ರೂಪನೆಂದೆರಡು ವರ್ಣಮೂರನೆಯ ವರ್ಣವಾನಂದಮಯನೆನ್ನುತಿದೆಈ ರೀತಿಯಲಿ ನೀನು ಕೃಷ್ಣನೆನಿಸಿದನೆ 6ಪರಮಾತ್ಮ ನೀನಾಗಿ ಪರಿಪರಿಯ ರೂಪಿನಲಿಸುರಮುನೀಶ್ವರ ಭಾವ್ಯ ಚರಿತನೆಂದೆನಿಸಿತಿರುಪತಿಯ ವಾಸವನು ಸ್ಥಿರವಾಗಿ ನಿರ್ಧರಿಸಿುರುವ ವೆಂಕಟರಮಣ ಕರುಣರಸಪೂರ್ಣ 7ಓಂ ಯಶೋದಾವತ್ಸಲಾಯ ನಮಃ
--------------
ತಿಮ್ಮಪ್ಪದಾಸರು
ಸಲಹು ಶ್ರೀ ಗುರುರಾಯಾ | ಸಲಹು ಬುಧ ಜನಪ್ರೀಯಾ | ಸಲಹೆನ್ನ ಪರಮ ಗೇಹ್ಯಾ ಪ ಚಿಕ್ಕವನು ನಾ ಮೊದಲು | ಸೊಕ್ಕಿ ಭವಸುಳಿಯೊಳಗೆ | ಸಿಕ್ಕಿ ಬಹು ನೊಂದೆನೆಂದು | ಹೊಕ್ಕೆ ಮೊರೆ ನಿನ್ನ ಹಿಂದಿಕ್ಕಿಕೋ ದಯದಿಂದ | ಮಕ್ಕಳಂದದಲಿ ಚೆನ್ನಾಗೆನ್ನಾ 1 ಪಿಂತಿನಾ ಭವಣೆಗಳು | ಎಂತಾದರಾಗಲೀ | ಶಾಂತ ಮೂರುತಿಯೇ ಎನ್ನಾ | ಅಂತರಂಗದಲಿನ್ನು ನಿಂತು ನಿನ್ನಯ ರೂಪ | ಸಂತತವಾಗಿ ದೋರೋ ಬೀರೋ 2 ಅನ್ಯಪಥಕೆಳಿಸಿದಾ ಘನ್ನ ತಪ್ಪವ ಕ್ಷಮಿಸಿ | ನಿನ್ನ ಪದಯುಗಳ ದೋರಿ | ಸನ್ನುತವೆ ಮಹಿಪತಿ ಚಿನ್ನ ಕೃಷ್ಣನ ಸ್ವಾಮಿ | ಇನ್ನಾರೆ ದಯಮಾಡೋ ನೋಡೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲಹು ಸಲಹು ಹರಿಯೇ ದಯದಿಂದಲಿ| ಇಳೆಯೊಳು ನಾನತಿ ದೀನನು ಪ ಸನ್ಮತಿದಾಯಕ ಸನ್ಮನ ಮುನಿಜನ|ಸನ್ಮತ ಮಾ ಮನೋಹಾರಿ| ಮನ್ಮಥನಯ್ಯನೇ ಉನ್ಮತ ಸುರಹರ| ಚಿನ್ಮಯ ರೂಪ ಉದಾರಿ1 ನಿವಾರಣ ಮಾಡಿದೆ ಶೌರಿ| ಹರಣ ಸಹದಾರುಣ ವಲ್ಲಭ ಕಾರುಣ ಸುರಸಹಕಾರಿ2 ತುಹಿನ ಕಿರಣ ಕುಲಮೌಳಿ| ಮಹಿಪತಿ ನಂದನ ಹೃದಯ ಸರೋವರ| ಹಂಸಪರಮ ವನಮಾಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲಹೊ ಸಾತ್ತ್ವಿಕ ದೈವವೆ ಕಾಗಿನೆಲೆಯಾದಿ ಕೇಶವ ನೀಲದ ವರ್ಣ ಆದಿಕೇಶವಾ ಪ ಕನಕ ಕಾಮಿನಿ ಕುಂಭಿಣಿಯಿಂದ ಬರುವ ಚಿಂತೆ | ಕನಸಿನೊಳಗಾದರೂ ದೂರಾಗಲಿ | ಕನಕೋದರಗೆ ಸಾಮ್ಯವಾದ ಜೀವನದಲ್ಲಿ | ಕನಲದೆ ಭಕುತಿ ಇರಲಿ ಎಂದೆಂದಿಗೆ | ಮನವು ನಿನ್ನಾಧೀನ ದೇವರದೇವ 1 ಕನಕ ನಯನ ಮಯನ ಕಂಡವರಿಗೆ ಜ್ಞಾನ | ಕನಕವರುಷವ ಕÀರೆವ ವಾಸುದೇವಾ | ಕನಕಕೇಶಪ್ರಿಯ ಕಾಮಿತಫಲದಾಯಕ | ಕನಕ ಪರ್ವತದಿಂದ ಬಂದ ಗೋವಿಂದ ವ | ಚನವೇ ನಿನ್ನಾಧೀನವೋ ದೇವರ ದೇವ 2 ಕನಕ ಮಾಲಿಗೆ ಒಲಿದ ಕಮಲದ ಲೋಚನ | ಮೂರ್ತಿ | ಕನಕಕಾಯ ನಮ್ಮ ವಿಜಯವಿಠ್ಠಲರೇಯ | ಕನಕರಿಸುವಾಗ ನಿನ್ನ ಧ್ಯಾನವೆ ಕೊಡು | ತನುವೆ ನಿನ್ನಾಧೀನವೊ ದೇವರದೇವ 3
--------------
ವಿಜಯದಾಸ
ಸಲ್ಲದೋ ಎಲೋ ಮಾಯಿ ಸಲ್ಲದೊ ಎಲೊ ಮಾಯಿ ಎಲ್ಲಾ ಒಂದೆಂಬೋದು ಸೊಲ್ಲನಾಡಲು ಯಮ ಕೊಲ್ಲದಲೆ ಬಿಡಾ ಪ ಉಕ್ಕಿನ ಮಳಿಯ ರೋಮರೋಮದಲಿ ಬಡಿದು ಬೆಸಸಿ ಸದಾ ಗಂಡುತಗಲಿ ಗಟ್ಟಿ ಪಕ್ಕಿಯ ತಿವಿದು ಪಾಶದಲಿ ಬಿಗಿದು ಕಾ ಲಿಕ್ಕಿ ನೆಲಕೆ ವರಿಸಿ ಕೆಂಪಗೆ ಕಾಸಿ ಇಕ್ಕಳದಲಿ ಉಚ್ಚಿ ಕರುಳು ಬೈಲಿಗೆ ಹಾಕಿ ಪೊಕ್ಕಳಿಗೆ ತೇಳಾರು ಪೊಗಿಸಿ ಕಟ್ಟಿ ಕರ ಹೊಯಿದು ನಕ್ಕು ಯಮದೂತರು ನಿನ್ನ ಬಾಧಿಪÀರು 1 ನಿನ್ನ ಕಾಲಲಿ ಒದ್ದೊದ್ದು ಹೆಡಗುಡಿಯನು ಕಟ್ಟಿ ಗಾರ್ಧಭದ ಲದ್ದಿಯೊಳಡಿಗಿಸಿ ಸುತ್ತ ಉರಿಯನಿಕ್ಕಿ ಮದ್ದು ಮೈಯಿಗೆ ಮುಚ್ಚಿ ಮುದದಿಂದ ಬೇಯಿಸಿ ಹದ್ದು ಕಾಗೆಗೆ ನಿನ್ನ ಯೆಡೆ ಮಾಡುವರು ಅ ಮೇಧ್ಯವ ತಿನಿಸುವರು ಅರಗಲ್ಲಿಗೆ ಉದ್ದಿ ಉರುಳ ಬಿಡುವರು ಕೆಂಡದ ಮೇಲೆ ವೊದ್ದಿಸಿ ಪರಿಪರಿ ಭಂಗವಪಡಿಸುವರು 2 ವೈತರಣಿಯೊಳಗದ್ದಿ ಅದ್ರಿಯ ಹರಿ ಮಾತು ಪೊರಡದಂತೆ ಮಾಡಿ ಮುದ್ರೆ ಬಾಯಿಗೆ ಹಾಕಿ ತೂತು ಮೈಯಿಗೆ ತಂತಿಯ ಪೋಣಿಸಿ ಪೂತಿ ಗಂಧದೊಳು ಹೊರಳಿಸಿ ತಡಿಯದೆ ಯಾತಣೆಯಿಂದ ಬಿಸುಟು ಮೊಟ್ಟೆಯ ಕಟ್ಟಿ ಮೂತರ ಕುಡಿಸುವರು ಮೀಸಿಯನು ಕಿತ್ತಿ ಘಾತಿಸಿ ನೋಡುವರು ಮಹಾ ಪಾತಕನೆಂದು ವಿಧಿಯ ಮೇಲೆ ಗುದ್ದೋರು 3 ಹೆಡತಲೆಯಿಂದ ನಾಲಿಗೆಯ ತೆಗೆದು ಕ ಕ್ಕಾಡಿ ಮಾಡಿ ನವನಾರು ಸಂದುಗಳು ಸುಟ್ಟು ಕೈಕಾಲನು ಕಟ್ಟಿಸಿ ಸಾಸವಿ ಸುಣ್ಣ ತೊಡೆದು ಬೋರಿಗೆಯಿಂದ ಬಡಿದು ಬಸಿಗೆ ಹಾಕಿ ಒಡಲೊಳು ಸೀಸವರೆದು ಮರದ ಬೇಲೆಯಲಿ ಹೊಡೆದು ಸರ್ರನೆ ಸೀಳೋರು ಕುರಿಯಂತೆ ಕಡಿದು ಈ ಬಗೆ ಮಾಡೋರು ಕೀವಿನ ಮಡುವಿನೊಳಗೆ ಇಟ್ಟು ತಲೆಮೆಟ್ಟಿ ಕುಣಿವರೊ 4 ಮೂಗನು ಕೊಯಿದು ಕವಡಿಯ ಪೋಣಿಸಿ ಚೆ ನ್ನಾಗಿ ಅತ್ತರಾಟದಲ್ಲಿ ತಲೆಕೆಳಕಾಗಿ ಜೋಲುವಂತೆ ಝೋಲಿಯ ಹೊಡೆದು ಮಾತುಗಾಲೆ ನಿನ್ನ ತೂಗಹಾಕಿ ಬಾಗಿಸಿ ಇನ್ನೊಮ್ಮೆ ಬೊಗಳೆಂದು ಕುಡಕಾಸಿ ವೇಗನೆ ಬರೆ ಇಡುವರು ದು:ಖದ ಸಾಗರ ಉಣಿಸುವರು ಬೆಕ್ಕಿನಂತೆ ಕೂಗಲು ಕೇಳಿ ಸೈರಿಸದಲೆ ಇಪ್ಪರು 5 ಘಾಯವಡೆದಲ್ಲಿ ಇರಿದು ಉಪ್ಪನೆ ತುಂಬಿ ಬಾಯಿವರಳು ಮಾಡಿ ಭತ್ತವ ಥಳಿಸಿ ಕ್ರೂ ರಾಯುಧ ಕಿವಿಗೆ ಬಿರಿಯಿಟ್ಟು ಬಂಧಿಸಿ ಖೋಯೆಂದು ಕೆಡಹಿ ಬೊಬ್ಬಿರಿಯೇ ಚಿಂದಿ ಮಾಡಿ ನಾಯಿಗಳಿಂದ ಕಚ್ಚಿಸಿ ಸೂಜೀಯ ಆಯಕ್ಕೆ ಊರುವರು ಮರಕ್ಕೆ ಕಟ್ಟಿ ಊಯಾಲೆ ಆಡುವರು ಇಪ್ಪತ್ತೆಂಟು ನಾಯಕ ನರಕದಲ್ಲಿಟ್ಟು ತೆಗೆಯುವರು6 ಪರಿ ಬಾಧಿಗೆ ಇರೆ ನರಕ ನರಕದಲ್ಲಿ ಹೂಳಿ ಉಬ್ಬಸಗೈಸಿ ಉರ ಕಾಲದಲ್ಲಿಟ್ಟು ತರುವಾಯ ತೆಗೆದು ಪಾ ಮರ ದುರುಳನೆಂದು ಮಿಡುಕಿಸಿ ಮಹಾನಿತ್ಯ ನರಕದೊಳಗೆ ನೂಕಿ ಕಡೆಗಾಣದಂತೆ ವರಲುತಿರೆ ನಗುವರು ನಿರ್ಮಲವಾದ ಮರುತ ಮತದವರು ಪ್ರತಿದಿನ ಸಿರಿಪತಿ ವಿಜಯವಿಠ್ಠಲನ ನಂಬದ ಮಿಥ್ಯಾ 7
--------------
ವಿಜಯದಾಸ
ಸವಿಸುಖ ಕಂಡೆ ಸುವಿದ್ಯ ಬ್ರಹ್ಮರಸವ ಧ್ರುವ ಅಧ್ಯಾತ್ಮಾನಂದದೂಟ ಸಿದ್ಧಾಂತನುಭವದಿಂದ ಬದ್ಧವಾಗಿ ಸೇವಸಿದ ಇದು ಏಕಾಗ್ರ 1 ಉಂಡು ಹರುಷವಾಯಿತು ಮಂಡಲದೊಳಗಿಂದು ಕಂಡು ಆನಂದ ಸುಖವ ಪಿಂಡಾಂಡದೊಳು 2 ಸುರಸ ಸಾರಾಯದೂಟ ಪರಿಪರಿ ಸವಿದಿನ್ನುಹರುಷವಾಯಿತು ಎನಗೆ ತರಳ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಸಾರ ಸುಖವಿಲ್ಲ ನಾ ಹಿಂಸೆಯ ತಾಳಲಾರೆ ಪ ಮಾತೆಯ ಮಾಂಸದ ಹೇಸಿಗೆ ಕೋಶದೊಳ್ ಮಾಸ ಒಂಭತ್ತನು ಕ್ಲೇಶದಿಂದ ತಳ್ಳಿದೆ ಈಶ ಲಕ್ಷ್ಮೀಶನು ಕೋಪದಿಂದ ಬೀಸಲು ಕೂಸಾಗಿ ಭೂಮಿಗೆ ವಾಸಕ್ಕೆ ಬಂದೆನು 1 ನಡೆ ನುಡಿಯ ಕಲಿಯುತಲಿ ಹರುಷದಲಿ ಕುಣಿಯುತಲಿ ಹುಡುಗತನ ಕಳೆಯುತಿರೆ ಹರುಷಗಳು ತೊಲಗಿದವು ದುಡಿಕಿನಲಿ ಭ್ರಮಿಸಿದೆನು ಮಡದಿಯಳ ಸಡಗರಕೆ ಭವ ಕಡಲೊಳಗೆ ಮುಳುಗಿ 2 ಕಡುಬಡತನ ಕೊರೆಯುತಲಿದೆ ಕಿರಿಕಿರಿಗಳು ಉರಿಸುತಲಿವೆ ತನುಮನಗಳು ಜರಿಯುತಲಿವೆ ಅಣಕಿಸುವರು ನಿಜ ಜನಗಳು ಪರಮ ಪುರುಷ ಸಿರಿಯರಸನೆ ಮರೆಯದಿರುವೆ ಉಪಕೃತಿಗಳ ದಡಕೆಳೆಯೊ ಪ್ರಸನ್ನ ಹರೇ 3
--------------
ವಿದ್ಯಾಪ್ರಸನ್ನತೀರ್ಥರು
ಸಂಸಾರವನು ಮಾಡಿ ಸಕಲ ಜನರೂ ಪ ಕಂಸಾರಿ ಶ್ರೀಕೃಷ್ಣ ಕೈಪಿಡಿದು ಸಲಹುವನು ಅ.ಪ. ಬುದ್ಧಿಯೆಂದೆಂಬ ಕನ್ನಿಕೆಯ ಮದುವೆಯ ಮಾಡಿಸದ್ಧರ್ಮದಭಿಮಾನದಿಂದ ಬೆಳಸೀ ||ಶುದ್ಧ ಭಕ್ತಿಗಳೆಂಬ ಮಕ್ಕಳನು ಪಡೆದು ಬಹುಅದ್ಭುತ ಭವಾಬ್ಧಿಯನು ದಾಟಿರಯ್ಯಾ 1 ಚಾರು ಸುಜ್ಞಾನವೆಂಬುವ ಮುದ್ದು ಮಗನ್ಹಡೆದುವೈರಾಗ್ಯವೆಂಬ ಭಾಗ್ಯವನೆ ಬೇಡೀ ||ಸಾರ ಹರಿನಾಮಗಳ ರಸ ಪದಾರ್ಥಗಳುಣಿಸಿಕಾರುಣ್ಯದಲಿ ಬೆಳೆಸಿರಯ್ಯ ಮಕ್ಕಳನೂ 2 ಯಮ ನಿಯಮ ಅಷ್ಟಾಂಗ ಅಣಿಮಾದಿಗಳುಕ್ಷಮೆ ದಮಾದಿಗಳೆಂಬ ಬಂಧು ಬಳಗಾ ||ಮಮತೆ ಪೆರ್ಚಿಸಿಕೊಂಡು ಬೀಗತನ ಮೊದಲಾದಅಮರಿಕೆಯ ಸಂಬಂಧವನೆ ಮಾಡಿರಯ್ಯಾ 3 ಶೀಲ ಸನಕಾದಿಗಳು ಮುನಿ ದೇವತಾದಿಗಳುತಾಳಿ ತಮ್ಮೊಳಗೆ ಸಮ ವಿಷಯರಾಗಿ ||ಆಲಂಪಟಗಳ್ಹಚ್ಚಿಕೊಂಡು ಭವನಿಧಿ ದಾಟಿಸಾಲೋಕ್ಯ ಮೊದಲಾದ ಮುಕ್ತಿಗೈದಿದರೂ 4 ಸತಿ ಸುತರು ಭಾಗ್ಯವೆ ನಿಮಗೆಹರಿಯಿತ್ತ ಕಾಲಕ್ಕು ಹೃದಯದೊಳಗೇ ||ಮರೆಯಲಾಗದು ಹಿಂದೆ ಸಂಸಾರದಾ ಬಾಧೆ ದುರಿತಾರಿ ವ್ಯಾಸ ವಿಠ್ಠಲ ಬ್ಯಾಗ ಒಲಿವಾ 5
--------------
ವ್ಯಾಸವಿಠ್ಠಲರು
ಸಂಸಾರವೆಂದೆಂಬ ಮಾರಿಗೆ ಸಿಲುಕಿದೆಕಂಸಾರಿ ಕರುಣದಿಂದೆನ್ನ ನೋಡಯ್ಯ ಪ ಬಲಿಗಾಯತವಾದ ಕುರಿ ಮೆಲುವಂತೆ ಹೆಡ-ತಲೆ ಮೃತ್ಯುವನರಿಯದೆ ಮತ್ತನಾದೆ 1 ಕಂಡು ಕಂಡು ಪತಂಗ ಕಿಚ್ಚಿನೊಳ್ ಬೀಳ್ವಂತೆಕಂಡ ಕಂಡ ಹೇಯ ವಿಷಯಗಳಿಗೆರಗುವೆ 2 ಸತಿ ಅನ್ಯರರಸುವಂತೆಗತಿ ನೀನಿರಲು ಅನ್ಯರೆ ಗತಿಯೆಂಬೆ 3 ಒಂದು ಮೊಲಕೆ ಆರು ಹುಲಿ ಬಂದಡರುವಂತೆಬಂದೆಳೆವುತಲಿವೆ ಅರಿಷಡ್ವರ್ಗಗಳು 4 ಜೋಗಿಗಾಗಿ ಕೋಡಗ ಪಾಟು ಬಡುವಂತೆಲೋಗರಿಗಾಗಿ ನಾ ತೊಳಲಿ ಬಳಲುವೆ 5 ಶುಕನ ಓದುಗಳಂತೆ ಎನ್ನ ಓದುಗಳಯ್ಯಅಕಟಕಟವೆನಗೆ ಬಂಧಕವಾದುವೊ6 ಮಿಂದು ಮಿಂದು ಆನೆ ಹುಡಿ ಹೊಯ್ದು ಕೊಂಬಂತೆಮಂದಮತಿಯಾದೆ ಕರುಣಿಸೊ ಕೃಷ್ಣ 7
--------------
ವ್ಯಾಸರಾಯರು
ಸಾಕು ಇಹಕೆನ್ನ ನೂಕದಿರು ತಂದೆ ಪರಾಕು ಮಾಡದೆ ಸಾಕು ದಯದಿಂದನೇಕ ಮಹಿಮನೆ ಏಕಾಮೇವಾದ್ವಿತೀಯ ಪ ಮಂಗಳಾಂಗ ಮಾತಂಗವರದ ವಿ- ಹಂಗಗಮನ ಭುಜಂಗಶಯನ ತು- ರಂಗವದನ ಶುಭಾಂಗ ರಿಪುಕುಲ- ಭಂಗ ಅಸಿತಾಂಗ ಅ.ಪ. ಶೃಂಗಾರಾಂಬುಧಿ ರಂಗ ನಿನ್ನಯ ಅಂಗಸಂಗಕ್ಕೆ ಅಂಗೀಕರಿಸಿದ ಸಂಗಿತರ ಚರಣಂಗಳಬ್ಜಕೆ ಭೃಂಗನಪ್ಪೆನೆಂತೊ 1 ಮಾನವಾವುದು ಸುಮ್ಮನಿರೆ ಪವ- ಮಾನವಂದಿತ ನಿನ್ನ ಪೋಲ್ವ ಸ- ಮಾನರಾರನು ಕಾಣೆ ಎನ್ನಭಿ- ಮಾನವಾಧೀಶ ಮಾನವಮಾನ- ಮಾನದಿಂದ ಕ್ರಮಾನುಸಾರನು ಮಾನಗೊಳಿಸದೆ ಮಾನವಿತ್ತು ದು- ಮ್ಮಾನವನೆ ಬಿಡಿಸೊ 2 ಬಲ್ಲೆ ನಿನ್ನಯ ಎಲ್ಲ ಪರಿಯಲಿ ಬಲ್ಲಿದರಿಗತಿ ಬಲ್ಲಿದನು ಸಿರಿ- ವಲ್ಲಭಾ ನೀನಲ್ಲದಿಲ್ಲೆಂದು ಎಲ್ಲ ತುತಿಸುತಿದೆ ಸೊಲ್ಲುವೊಂದನು ನಿಲ್ಲುತಲಿ ಕೇಳು ಎಲ್ಲು ಬಯಸದೆ ಇಲ್ಲಿಗೇ ಬಂದೆ ಕೊಲ್ಲು ಕಾಯ್ಸಿರಿ ವಿಜಯವಿಠ್ಠಲ ಬಲ್ಲದನು ಮಾಡೋ3
--------------
ವಿಜಯದಾಸ
ಸಾಕು ನೀನೋಬ್ಬನೆ ಲೋಕನಾಯಕನೆ ಯಾಕನ್ಯ ದೈವವ ಭಜಿಸುವ ಸುಮ್ಮನೆ ಪ. ಸೂನು ಪರಮಾದರದಿಂದ ನೀಕರಿಸುತ ಯದು ಬಲಿ ಸಹಾಯವನು ಶ್ರೀಕರ ನೀನೊಬ್ಬನೆ ಸಾರಥಿಯಾಗೆ ಸಾಕೆಂದವರ ಬೊಮ್ಮನೆ ವೈರಿಗಳನ್ನು ವ್ಯಾಕುಲಗೊಳಿಸಿ ಭೂಮಿಪನಾದ ಸುಮ್ಮನೆ 1 ನಿಖಿಳ ದೈವಗಳೆಲ್ಲ ತಾನಾಗಿ ಪರಮಾನುಕೂಲರಾಗುವರು ಏನೆಂದು ಪೇಳ್ವದಿನ್ನು ಸಕಲ ಸುರ ಪಾದ ಪದ್ಮ ಧ್ಯಾನ ಮಾನವನಿತ್ತು ಪಾಲಿಸೆನ್ನನು 2 ಅಖಿಳಾಂಡಕೋಟಿ ಬ್ರಹ್ಮಾಂಡ ನಾಯಕನೆಂದು ನಿಖಿಳ ದೈವಗಳು ನಿನ್ನನೆ ಪೊಗಳುವವು ಸಕಲಾರ್ಥದಾಯಿ ನೀನು ನಾಮ ಸ್ಮøತಿ ಸುಖವನ್ನೆ ಪಾಲಿಸಿನ್ನು ಉದಯಗಿರಿ ಶಿಖಿರ ಸಂವಾಸನುಮಾನವ್ಯಾಕಿನ್ನು 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಾಕು ಸಾಕಿನ್ನು ಸಂಸಾರ ಸುಖವು ಪ ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆಅ ಉದಿಸಿದುವು ಪಂಚಭೂತಗಳಿಂದ ಓಷಧಿಗಳುಉದಿಸಿದುದು ಓಷಧಿಗಳಿಂದನ್ನವುಉದಿಸಿದುವು ಅನ್ನದಿಂ ಶುಕ್ಲ ಶೋಣಿತವೆರಡುಉದಿಸಿದುವು ಸ್ತ್ರೀ ಪುರುಷರಲ್ಲಿ ಹರಿಯೆ 1 ಮಾಸ ಪರಿಯಂತ ಹರಿಯೆ2 ಮಾಸ ನಖ ರೋಮ ನವರಂಧ್ರಮಾಸ ಏಳರಲಿ ಧಾತು ಹಸಿವು ತೃಷೆಯು 3 ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳಗುಂಗಿನಲಿ ನಾನಿಂತು ಭವಭವದೊಳುಅಂಗನೆಯರುದರದಲಿ ಮತ್ತೆಮತ್ತೆ ಬಂದುಭಂಗಪಡೆನೆಂದು ಧ್ಯಾನಿಸುತ ದಿನಗಳೆದೆ 4 ಮಾಸ ಪರಿಯಂತರದಿತನು ಸಿಲುಕಿ ನರಕದಲಿ ಆಯಾಸಗೊಂಡುಘನ ಮರುತ ಯೋಗದಿಂ ನರಳುತಿಲ್ಲಿಗೆ ಬಂದುಜನಿಸುವಲ್ಲಿ ಮೃತಭಾವದಿಂದ ನೊಂದೆನೈ ಹರಿಯೆ 5 ಧರೆಯ ಮೇಲುದಿಸಿ ಬಹು ವಿಷ್ಣು ಮಾಯಕೆ ಸಿಲುಕಿಪರವಶದೊಳಿರಲು ನೀರಡಿಕೆಯಾಗಿಹೊರಳಿ ಗೋಳಿಡುತ ಕಣ್ದೆರೆದು ಹರಿಯನು ಮರೆವದುರಿತ ರೂಪದ ತನುವ ಧರಿಸಲಾರೆ6 ಶಿಶುತನದೊಳಗೆ ಸೊಳ್ಳೆ ನೊಣ ಮುಸುಕಿ ಅತ್ತಾಗಹಸಿದನಿವನೆಂದು ಹಾಲನೆ ಎರೆವರುಹಸಿವು ತೃಷೆಯಿಂದಳಲು ಹಾಡಿ ತೂಗುವರಾಗಪಶು ತೆರದಿ ಶಿಶುತನದೊಳಿರಲಾರೆ ಹರಿಯೆ 7 ನಡೆಯಲರಿಯದ ದುಃಖ ಮನಸಿನಲಿ ಬಯಸಿದುದನುಡಿಯಲರಿಯದ ದುಃಖ ವಿಷಯದಿಂದಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲುನುಡಿವ ಬಾಲ್ಯದೊಳಿರಲಾರೆ ಹರಿಯೆ 8 ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತುಗೋಳಿಡುತ ವಿದ್ಯೆ ಕರ್ಮಗಳ ಕಲಿತುಮೇಲೆ ಯೌವನದ ಉಬ್ಬಿನೊಳು ಮದುವೆಯಾಗಿಬಾಲೆಯರ ಬಯಸಿ ಮರುಳಾದೆ ಹರಿಯೆ9 ಜ್ವರದ ಮೇಲತಿಸಾರ ಬಂದವೊಲು ಯೌವನದಿತರುಣಿಯೊಡನಾಟ ಕೂಟದ ವಿಷಯದಿತರುಣಿ ಸುತರ್ಗನ್ನ ವಸ್ತ್ರಾಭರಣವೆನುತಪರರ ಸೇವೆಯಲಿ ಘಾಡ ನೊಂದೆ ಹರಿಯೆ10 ನೆತ್ತರು ತೊಗಲು ಮೂಳೆ ಮಜ್ಜೆ ಮಾಂಸದ ಹುತ್ತುಜೊತೆಗಿಂದ್ರಿಯಗಳ ರೋಗ ರುಜಿನದಲಿಮತ್ತೆ ಕಾಲನ ಬಾಯ ತುತ್ತಾಗುವ ಕರ್ಮದಕತ್ತಲೆಯೊಳೀ ದೇಹ ಕರಡಾಯಿತು 11 ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರುಕಟ್ಟಿ ಕಾದಿಹರು, ಮುಪ್ಪಡಿಸಿದಾಗತಟ್ಟನೆ ಬಲು ಕೆಟ್ಟ ನುಡಿಗಳಲಿ ಬೈಯುತ್ತಕಟ್ಟಕಡೆಗೆ ಕಣ್ಣೆತ್ತಿ ನೋಡರೈ ಹರಿಯೆ12 ತುಂಬಿ ಮೃತವಾಗಲುಕುಟ್ಟಿಕೊಂಡಳಲುತ್ತ ಹೋಯೆಂದು ಬಂಧುಗಳುಮುಟ್ಟರು ಹೆಣನೆಂದು ದೂರವಿಹರು 13 ಸತ್ತ ಹೆಣಕಳಲೇಕೆ ಎಂದು ನೆಂಟರು ಸುಯ್ದುಹೊತ್ತು ಹೋಯಿತೆನ್ನುತ ಕಸಕೆ ಕಡೆಯಾಗಿಹೊತ್ತು ಕೊಂಡಗ್ನಿಯಲಿ ತನುವನಿದ ಬಿಸಡುವರುಮತ್ತೆ ಬುವಿಯಲಿ ಜನಿಸಲಾರೆ ಹರಿಯೆ 14 ಯೋನಿ ಮುಖದಲಿ ಬಂದುಬನ್ನವನು ಪಡಲಾರೆ ಭವಭವದೊಳುಜನನ ಮರಣಾದಿ ಸರ್ವ ಕ್ಲೇಶಗಳ ಪರಿಹರಿಸಿಸನ್ಮತಿಯೊಳಿರಿಸೆನ್ನ ಆದಿಕೇಶವರಾಯ 15
--------------
ಕನಕದಾಸ
ಸಾಕು ಸಾಕು ಇನ್ನು ಕಷ್ಟ ಅನೇಕಾ ಬೇಕು ಬೇಕು ನಿನ್ನ ಕರುಣ ಪ ಹಿಂದಿನಿಂದ ಎನ್ನ ಹೊಂದಿಬಂದ ದೋಷದಿಂದ ನಾನು ಬಹು ಬಳಲುತಲಿ ----------------------- ಎಂದು ಎಂದು ನಿಮ್ಮಂದ ದ್ವಯಪಾದ ಹೊಂದುವೆ ನಾನೆಂದೆನುತಲಿ----- ಬೆಂದುನೊಂದು ಈ ಚಂದದಿ ಈ ಪರಿಯಿಂದ ನಿನ್ನನಾ ಹೊಗಳುತಲಿ--- ಬೆಂದು ನೊಂದೆ ನಿನ್ನ ಮಂದಿರ ಸೇವಕನೆಂದು ಬಹಳ ಗೋವಿಂದ ಕೃಪಾಳು 1 ಘೋರ ರಾಕ್ಷಸ----ರಿದ ಅವರ ಸಂಹಾರವ ಮಾಡಿದ ಬಲವಂತ ------------------ ವೀರಶೂರ ಗಂಭೀರ ಕೃಪಾಕರ ವಾರಿಜೋದ್ಭವನ ಪಡೆದಂಥಾ ಸಾರಿಸಾರಿ ನಿಮ್ಮ ಸ್ಮರಿಸುವವರಿಗೆ ಸರ್ವ ಸಂಭ್ರಮವು ಮಾಡುವಂಥಾ ಕೀರುತಿ-----ರನು ಯನುತಲಿ ------ನಿಮ್ಮ ಸರ್ವೋತ್ತಮನಂಥಾ 2 ಗಾಧೆ ಬೋಧೆ ಗೊಳಗಾದೆ ಈ ಪರಿ ವೇದಾಂತ---ದೊಂದರಿಯೆ ಸಾಧು ಸಾಧಕರ ಬೋಧೆಗಳೆಂಬುವ ಸದಾ ಕರ್ಣದಿ ಕೇಳರಿಯೆ----ದರೆ ಮಾಧವ ಮಧುಸೂದನ ಧೊರಿಯೆ ವೇದ ಆದಿ ಅಗಾಧ ಗೋಚರನೆ ಪತಿ 'ಹೆನ್ನ ವಿಠ್ಠಲ’ ಹರಿಯೆ 3
--------------
ಹೆನ್ನೆರಂಗದಾಸರು
ಸಾಕು ಸಾಕು ಬಿಡು ಬಡಿವಾರಾ ನಮ್ಮ ಶ್ರೀಕರ ದಾಸರ ಬಿಡಲಾರಾ ಪ. ಚಂಚಲಾಕ್ಷಿಯೊಳ್ ಚದುರತೆ ತೋರುತ ಮಂಚದ ಮೇಲ್ಕುಳ್ಳಿರಲಂದು ಮಿಂಚಿದ ಮೊರೆ ಕೇಳಿ ಮದಗಜನನು ಕಾಯ್ದ ಪಂಚ ಬಾಣ ಪಿತ ವಂಚಿಸನೆಂದಿಗು 1 ಶಂಭುಮುನಿಯು ಕೋಪಾಡಂಬರವನು ತೋರಿ ಅಂಬರೀಷಗೆ ಶಾಪವ ಕೊಡಲು ನಂಬಿದ ಭಕ್ತ ಕುಟುಂಬಿ ಸುದರ್ಶನ ನೆಂಬಾಯುಧದಿಂದ ಸಂಬಾಳಿಸಿದನು 2 ಎಲ್ಲ ವೇದಶಿರಗಳಲಿ ನೋಡೆ ಸಿರಿ- ನಲ್ಲ ವೆಂಕಟಗಿರಿವರ ಹರಿಗೆ ಎಲ್ಲವು ಸರಿಮಿಗಿಲಿಲ್ಲದೆ ತೋರುವ ಖುಲ್ಲ ದೈವಗಣವಿಲ್ಲೆ ಸೇರುವವು 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಾಕು ಸಾಕು ಮನುಜಸೇವೆಯು, ರಂಗಯ್ಯ ಇನ್ನು ಪ ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನುಬೇಕು ನಿನ್ನ ಪಾದಭಜನೆ ಕೊಟ್ಟು ಸಲಹೊ ರಂಗಯ್ಯ ಅ ಹೊತ್ತರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದುಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ - ರಿಕ್ತಹಸ್ತದಿಂದ ಮನೆಯ ಸೇರುವೆ - ಆಸೆಗಾಗಿಮತ್ತೆ ಕಂಡ ಕಡೆಗೆ ತೊಲಗುವೆ - ಬಂದು ಅಪರರಾತ್ರಿಯಲ್ಲಿ ತಿಂದು ಒರಗುವೆ ರಂಗಯ್ಯ ರಂಗ 1 ಸ್ನಾನ ಸಂಧ್ಯಾನುಷ್ಠಾನ ನೇಮವೆಲ್ಲ ತೊರೆದುಬಿಟ್ಟುಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿಶ್ವಾನನಂತೆ ದಿನವ ಕಳೆವೆನೊ - ದುರಾಸೆಯನ್ನುಮನಸಿನಲ್ಲಿ ಮಡಗಿಕೊಂಡು ಕುದಿವೆನೊಕೊನೆಗೂ ಎಳ್ಳುಕಾಳಿನಷ್ಟು ಸುಖವ ಕಾಣೆನೊ ರಂಗಯ್ಯ ರಂಗ2 ಮಾಧವ - ರಂಗಯ್ಯ ರಂಗ3
--------------
ಕನಕದಾಸ