ಒಟ್ಟು 9218 ಕಡೆಗಳಲ್ಲಿ , 127 ದಾಸರು , 3740 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಂದರಾಂಗ ವಿಠಲ | ತಂದೆ ಪೊರೆ ಇವಳಾ ಪ ಭವ ಸಿಂಧು ಉತ್ತರಿಸೀ ಅ.ಪ. ಭವ | ವಾರಿಧಿಗೆ ನವ ಪೋತಚಾರುತವನಾಮ ಸ್ಮøತಿ | ಆರೈಸುವಂತೇಮೂರೆರೆಡು ಭೇದಗಳು | ತಾರತಮ್ಯದ ಬಗೆಯತೋರಿಪೊರೆ ಕನ್ಯೆಯನು | ಮಾ ರಮಣ ದೇವಾ 1 ಆವ ಸ್ವಪ್ನದಿ ವೃದ್ಧ | ಭಾವದ್ಯತಿಗಳ ಕಂಡುಭಾವಿ ಮರುತರು ಎಂಬ ಭಾವದಲಿ ನಮಿಸೀಭಾವ ಭಕುತಿಲಿ ಭೀತಿ | ಭಾವವನೆ ತೋರುತ್ತತೀವರದಿ ಸಂಸ್ತಬ್ಧ | ಭಾವದಿರುತಿಹಳಾ 2 ಪತಿತ ಪಾವನ ರಂಗ | ಕೃತ ಪೂರ್ವ ಪುಣ್ಯದಿಂಮತಿಮಾಡಿ ಹರಿದಾಸ್ಯ | ಹಿತದಿಕಾಂಕ್ಷಿಪಳೋ |ಪತಿಸೇವೆ ದೊರಕಿಸುತ | ಕೃತಕಾರ್ಯಳೆಂದೆನಿಸೊಕ್ಷಿತಿಯೊಳಿವಳನು ಮೆರೆಸೊ | ಪ್ರತಿರಹಿತ ದೇವಾ 3 ಕರ್ಮಪ್ರಾಚೀನಗಳ | ನಿರ್ಮಲಿನ ಮಾಡುತ್ತಧರ್ಮ ಸಾಧನ ಮಾರ್ಗ | ಪೇರ್ಮೆಯಿಂಕೆಡಿಸೋ |ಭರ್ಮಗರ್ಭನನಯ್ಯ | ಹಮ್ಮು ಕಳೆದಿವಳ ತವಸೊಮ್ಮು ನಾಮಾಮೃತದ | ಉಮ್ಮು ನೀ ಕೊಡಿಸೋ 4 ಗಾಮಲ್ಲಗಣಿಗೊಲಿದು | ಧೀವರಗೆ ದೂರಸ್ಥಆವಸಂಗದ ವಿವರ | ಕಾಣ್ವ ಬಲವಿತ್ತಾಮಾವಾರಿಯಾದ ಗುರು | ಗೋವಿಂದ ವಿಠ್ಠಲನೆನೀವೊಲಿಯ ದಿನ್ನಾರ | ಕಾವರನಕಾಣೇ 5
--------------
ಗುರುಗೋವಿಂದವಿಠಲರು
ಸುಪರ್ಣಾದೇವಿ ಜಗವ ಪಾವನ ಮಾಳ್ಪ ವರದ ಮಾತೆ ಪ ಖಗರಾಜನಿಗೆ ಅತಿ ಪ್ರೀತಿ ಪಾತ್ರಳೆ ದೇವಿ ಅ.ಪ. ವರಹ ರೂಪದ ನಾಶಿಕದಿಂದ ಉದ್ಭವಿಸಿವಾಗ್ದೇವಿ ಸುತನಿಂ ಜಗದೊಳಗೆ ಪರಿದುವದನದಿಂದಲಿ ನಿಮ್ಮ ನಾಮಸ್ಮರಣೆಯ ಮಾಡೆವೇಗದಿ ಬರುವ ತಿಮಿರಗಳ ನಾಶಮಾಳ್ಪೇ 1 ಪಾದ ಕಮಲದ ಮಹಿಮೆಯನುಉನ್ನತವಾಗಿ ತೊರೆನ್ನ ಹೃದಯದಲಿ 2 ಅನುದಿನ ಮಾಡೆಯದುಪತಿಯ ಮಹಿಮೆಯನು ಶಿಷ್ಯರಿಗೆ ತೋರುತಲಿ ಚನ್ನ ಶ್ರೀಗುರುತಂದೆಗೋಪಾಲವಿಠಲ-ಪುರವ ಪೊಂದಿಸಿದ ಮರಿಯೇ 3
--------------
ಸಿರಿಗುರುತಂದೆವರದವಿಠಲರು
ಸುಮ್ಮನಹುದು ನೋಡಿ ಸ್ವಾತ್ಮ ಸುಖದನುಭವ ಹಮ್ಮಳಿದು ತನ್ನೊಳು ತಾ ತಿಳಿಯದನಕ ಧ್ರುವ ಏನು ಕೇಳಿದರೇನು ಏನು ಹೇಳಿದರೇನು ಖೂನದೋರದು ತಾನು ಸ್ವಾನುಭವದ ನಾನೆಂಬುದೆನಲಿಕ್ಕೆ ಏನು ಮಾಡಿದರೇನು ಜ್ಞಾನ ಗಮ್ಯವಸ್ತು ತಾನೊಲಿಯದನಕ 1 ಕನಸು ಮನಸಿನ ಕಲಿಯು ಕಲಿತು ಕೆಟ್ಟಿರಲಿಕ್ಕೆ ಅನುಮಾನಗಳಿಯದಪಭ್ರಂಶಗಳಿಗೆ ಅನುದಿನದಲಾಶ್ರಯಿಸಿ ಘನಗುರು ಶ್ರೀಪಾದವನು ನೆನೆನೆನೆದು ಸುಖವು ನೆಲೆಗೊಳ್ಳದನಕ 2 ಮಹಾ ಮಹಿಮೆಯುಳ್ಳ ಗುರುದಯ ಪಡಕೊಂಡು ಮನೋಜಯಸುದಲ್ಲದೆ ಘನಮಯ ಹೊಳೆಯದು ಮಹಿಪತಿಯ ಸ್ವಾಮಿ ಸದ್ಗುರು ಭಾನುಕೋಟಿ ತೇಜ ಬಾಹ್ಯಾಂತ್ರ ಪರಿಪೂರ್ಣ ತಾನಾಗದನಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನಹುದೆ ಬ್ರಹ್ಮಾನಂದದ ಸುಖವು ಧ್ರುವ ಘನಗುಡುವದೆ ನೆನದಾಗಲಿ ಖೂನದೋರುದು ಆವಾಗಲಿ ಜನರಂಜನಿ ಶೀಲೆ 1 ತನುವುತನ್ನಲ್ಲಿರಕ್ಕೆ ಪೂರ್ಣ ಘನಗುರುವಿಗೆ ತಾ ಅರ್ಪಿಸಿತೇನ ಜನಮಾಡುವುದು ಈ ಸಾಧನ ಅನುಮಾನದ ಖೂನ 2 ಅನುದಿನ ಹೊರಳ ಗುರು ಪಾದದಲಿ ನೀನೆ ಗತಿ ಎಂದೆನುತಲಿ ನೆನೆವನು ಬಾಯಲಿ 3 ಗುರುಗುಣಕೆ ಮೂರ್ಹಾದ್ಹೊಚ್ಚಿರಲಿ ತೋರಬಲ್ಲುದೆ ಸುಙÁ್ಞ ನದ ಕೀಲಿ ಬರಿಯ ಮಾತಿನ ಭಕ್ತಿಲಿ ಅರವಾಗುವದೆ ನೆಲಿ 4 ಠಕ್ಕ ತನಕೆ ಸಿಲ್ಕುದೆ ಸದ್ವಸ್ತು ಲೆಕ್ಕವಿಲ್ಲದೆ ಅಮೋಲಿಕಮಾತಿಲ್ಯಾಕೋ ಮಹಿಪತಿ ಭಾವವಿತ್ತು ಅಕ್ಕಿಸಿದೋ ಬೆರ್ತು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನಿರಬಾರದೆ ಮನವೆ ನೀನು ಸುಮ್ಮನಿರಬಾರದೆ ಹಮ್ಮುಅಹಂಕಾರ ಹೆಮ್ಮೆಗಳೆದು ಪನ್ನಗಾದ್ರಿಯ ಧ್ಯಾನಮಾಡುತ್ತ ಪ ಚಿಂತೆಯನು ತೊರೆದು ಮನವೆ ಲಕ್ಷೀಕಾಂತನೊಳು ಬೆರೆದು ಅಂತರಂಗದಿ ಕಂತುಜನಕನ ಸಂತತವಿಟ್ಟು ಪಂತವನು ಬಿಟ್ಟು 1 ಆಸೆಯನು ತೊರೆದು ಮನವೆ ನೀ ಶ್ರೀಶನೋಳು ಬೆರೆದು ಘಾಸಿಯಾಗದೆ ವಾಸುದೇವನ ದಾಸನಾಗಿ ಉಲ್ಲಾಸದಿಂದಲೆ 2 ಯಾರು ಬೈದರೇನು ಈ ದೇಹ ಇನ್ಯಾರು ಕೊಯ್ದರೇನು ಘೋರಮಾಯೆ ದೂರಮಾಡಿ ನೀ ವಾರಿಜಾಕ್ಷನ ಪಾದವನು ಸೇರಿ 3 ಎಲ್ಲರಲ್ಲಿ ವಾಸುದೇವನಿಲ್ಲದಿಲ್ಲೆನುತ ಹುಲ್ಲು ಹುಳುವಿನೊಳು ಸೊಲ್ಲು ಪಾಡುತ್ತ 4 ಸೃಷ್ಟಿಯೊಳಗಧಿಕ ಮೂಡಲಗಿರಿ ಬೆಟ್ಟದೊಳಗಿರುವ ದಿಟ್ಟವೆಂಕಟನ ಮುಟ್ಟಿ ಭಜಿಸಿ ನೀ ಮಾಡಿದಷ್ಟು ಪಾಪವ ನಷ್ಟ ಮಾಡುತ್ತ 5
--------------
ಯದುಗಿರಿಯಮ್ಮ
ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ಧ್ರುವ ಎಲ್ಲದೋರ್ವದು ಮರೆದು ಎಲ್ಲರೊಳಗೆಹದರಿದು ಎಲ್ಲರೊಳಗೆಲ್ಲ ತಾನಾಗಬೇಕು ಎಲ್ಲರೊಳು ತಾನಾಗಿ ಎಲ್ಲ ತನ್ನೊಳಗಾಗಿ ಬೆಲ್ಲ ಸವಿದ ಮೂಕನಂತಾಗಬೇಕು 1 ಬಲ್ಲವತವನು ನೀಡಿ ಬಲ್ಲನೆತಾನಾಗಿ ಬಲ್ಲರಿಯೆನೆಂಬುದನು ಈಡ್ಯಾಡಬೇಕು ಬಲ್ಲರಿಯದೊಳಗಿದ್ದನೆಲ್ಲ ತಿಳಿಕೊಳ್ಳಬೇಕು ಸೊಲ್ಲಿಲ್ಹೇಳುವ ಸೊಬಗ ಬೀರದಿರಬೇಕು 2 ಸೋಹ್ಯ ಸೂತ್ರವ ತಿಳಿದು ಬಾಹ್ಯ ರಂಜನಿ ಮರೆದು ದೇಹ ವಿದೇಹದಲ್ಲಿ ಬಾಳಬೇಕು ಮಹಿಗೆ ಮಹಿಪತಿಯಾಗಿ ಸ್ವಹಿತ ಸದ್ಗುರುನಾದಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನಿರಬ್ಯಾಡಿ ನಿಮ್ಮೊಳು ನೀಟ ನೋಡಿಒಮ್ಮನವ ಮಾಡಿ ಪರಬ್ರಹ್ಮನೊಲು ಕೂಡಿ ಧ್ರುವ ಹೊತ್ತುಗಳಿಯಲು ಬ್ಯಾಡಿ ಹೃತ್ಕಮಲದೊಳು ನೋಡಿ ಅತ್ತಿತ್ತಲಾಗದೆ ಚಿತ್ತಸ್ವಸ್ಥ ಮಾಡಿ ಹತ್ತಿಲಿಹ ವಸ್ತುವನು ಪ್ರತ್ಯಕ್ಷ ಮಾಡಿ ನಿತ್ಯ ನಿಜಾನಂದ ಸುಪಥವು ಗೂಡಿ 1 ಮುತ್ತಿನಂಥ ಜನ್ಮ ವ್ಯರ್ಥಗಳಿಯಲಿ ಬ್ಯಾಡಿ ನಿತ್ಯ ಸಾರ್ಥಕದ ಸಾಧನವ ಮಾಡಿ ಸತ್ಯ ಶಾಶ್ವತದಾವದೆಂದು ಖೂನದಲಿ ಅಡಿ ಕೃತ್ಯಾ ಕೃತ್ಯಾಗುವ ಸ್ವಸುಖ ಬೆರೆದಾಡಿ 2 ದೀನ ಮಹಿಪತಿ ಸ್ವಾಮಿ ತಾನೊಲಿದು ಬಾವ್ಹಾಂಗ ಜ್ಞಾನಾಭ್ಯಾಸವ ಮಾಡಿಕೊಳ್ಳಿ ಬ್ಯಾಗ ಭಾನುಕೋಟಿ ತೇಜ ದೀನದಯಾಳು ತಾಂ ನೆನೆವರಿಗನುಕೂಲವಾಗುತಿಹ್ಯ ಈಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನಿಹುದು ನ್ಯಾಯವೇ ಪ ದಮ್ಮಯ್ಯ ಪೊರೆಯೆನಲು ಒಮ್ಮೆಯಾದರೂ ಎನ್ನ ದುಮ್ಮಾನವೇನೆಂದು ನಮ್ಮಯ್ಯ ಕೇಳಲಿಲ್ಲ ಅ.ಪ ಸಣ್ಣ ಬಾಲಕನೊಬ್ಬ ಕಣ್ಣೀರ ಸುರಿಸಲು ಪುಣ್ಯ ಲೋಕವನಿತ್ತಮ್ಮಾ ಕಣ್ಣುಕಾಣದೆ ಗೊಂಡಾರಣ್ಯಮಧ್ಯದಿ ನಾನು ಬಣ್ಣಿಸಿ ಕರೆದರೂ ಕಣ್ಣೆತ್ತಿ ನೋಡಲಿಲ್ಲವಮ್ಮಾ 1 ಪರಿದೋಡಿದನಮ್ಮ ನಮ್ಮಯ್ಶ ದುರಿತವಾರಿಧಿಯಲಿ ಕೊರಗುತಲಿಹ ಎನ್ನ ಅರಿತು ಅರಿಯದಂತೆ ಇರುವನಲ್ಲ ಇಂದಿರಮ್ಮ 2 ಮೃತಿಯ ವೇಳೆಯೊಳೊಬ್ಬ ಸುತನಕರೆಯಲಾಗ ಹಿತದಿ ಸೌಖ್ಯವನಿತ್ತನು [ಕೇಳಮ್ಮಾ] ಮಾಂಗಿರಿರಂಗ ಪತಿತಪಾವನಾಯೆಂದು ನುತಿಸಿ ಬೇಡಿದರೂ ಸಂಗತಿಯೇನೊ ಎನಲಿಲ್ಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸುಮ್ಮನೆ ಗತಿಯ ಬಯಸಿದರಾಹುದೇ | ಹಮ್ಮ ನೀಗಿ ಕ್ಷಿತಿಯೊಳು ವಮ್ಮನವಾಗಿ ನಿಲ್ಲದೇ ಪ ಭಕುತಿಯಂಕುರವಿಲ್ಲಾ ಯುಕುತಿ ಸಾಧನವಿಲ್ಲಾ | ಮುಖದಲಿ ಸ್ತುತಿ ಸ್ತವನಗಳಿಲ್ಲಾ | ಪ್ರಕಟದಿ ಶೋಡಷ | ಸುಕಲೆಯಾರ್ಚನೆಯಿಲ್ಲಾ | ಅಕಳಂಕ ದೇವ ನಂಬುಗೆ ದೃಢ ವಿಡಿಯಲಿಲ್ಲಾ 1 ವೇದ ಪುರಾಣವನು ಓದಿ ಕೇಳಿದರೇನು | ವಾದಗುಣದಿ ಹಿಂಗಲಿಲ್ಲಾ ತಾನು | ಸಾಧಿಸಿಕೊಳ್ಳದೇ | ಸಾಧುರ ಬೋಧವನು | ಗಾರ್ದಭ ಚಂದನ ಹೊತ್ತಂತೆ ಏನಾದರೇನು 2 ಗುರುಪಾದಕೆರಗದೆ | ಗುರುಮಾರ್ಗವರಿಯದೆ | ಮೊರೆವಾರು ಅರಿಮದವ ಮುರಿಯದೇ | ಪರವಸ್ತು ಇದೆಯೆಂದು | ನರಭಾವ ಮರೆಯದೆ | ಗುರುಮಹಿಪತಿ ಸುತ ಪ್ರಭು ಗುರುತ ದೋರದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಮ್ಮನೆ ತೊಲಗು ಕಂಡೆಲೆ ಮಾಯಿ ನೀನು ನಮ್ಮಯ್ಯ ಬಂದರೆ ಉಳಿಲಾರಿ ಇನ್ನು ಪ ಉರಗ ತಾ ಬೆನ್ನ್ಹತ್ತಿ ಗರುವದಿಂ ಬಂದು ಮಹ ಗರುಡನಂ ಕಂಡಕ್ಷಣದ್ಹರಣ ತೊರೆವಂತೆ ಹರಿದಾಸರೆನ್ನದೆ ಪರಿಪರಿ ಕಾಡಿ ನೀ ಶರಣಜನಪ್ರಿಯನ ಕಂಡುರಿದ್ಹೋಗಬೇಡ 1 ಲಕ್ಷಿಸೆ ಮಂಡೂಕ ಮಕ್ಷಕನ ಬೆನ್ನ್ಹತ್ತಿ ತಕ್ಷಕಗೆ ಸಿಕ್ಕು ತಾ ಭಕ್ಷವಾದಂತೆ ಲಕ್ಷ್ಮೀಪತಿದಾಸರ ಲಕ್ಷಿಸದೆ ಕಾಡಿ ಭಕ್ತ ಪಕ್ಷಕನ ಕರಕೆ ಸಿಕ್ಕು ಶಿಕ್ಷೆಪಡಬೇಡ 2 ಕ್ಷೇಮದಿಂ ದೂರಿರೋ ಹೇ ಮಾಯಿ ನೀನು ನಾಮವೇ ಉಳಿಸನೀ ಭೂಮಿಯ ಮೇಲೆ 3
--------------
ರಾಮದಾಸರು
ಸುಮ್ಮನೆ ದೂರಿದರೆ ನಾನೆಂಬೆನು ರಂಗಂ ಗುಮ್ಮ ಬಂದನು ಎಂದರಂಜುವನು ಪ ಸುಳ್ಳು ಸಟೆಯನಾಡಬೇಡಿರೇ ಜಾತಿ ಗೊಲ್ಲತಿ ಯರು ನೀವಾದರೆ ಎಲ್ಲನಾರಿಯರೊಂದು ಗೂಡಿರೆ ಕಟ್ಟಿ ಕಳ್ಳ ಕೃಷ್ಣನ ತಂದು ತೋರಿರೆ 1 ಮುತ್ತಿ ಚಂಡಾಟವಾಡುವ ನಂದ ನೊತ್ತಿಲಿ ಪಾಲ್ಬೆಣ್ಣೆ ಮೆಲ್ಲುವ ಪಣಿಗೆ ವತ್ತು ಪೊಂಗಳಲ ನುಡಿಸುವ 2 ಕಾಲೊಳಂದಿಗೆ ಗಜ್ಜೆ ಧ್ವನಿ ಮಾಡುವ ತನ್ನ ತಾಳ ಗತಿಗೆ ತಾನೆ ಕುಣಿದಾಡುವ ನಂದ ನೋಲಗವನ್ನು ಕ್ಷಣ ಬಿಡದಿರುವ ಲಕ್ಷ್ಮೀ ಲೋಲ ತನ್ನೊಳು ತಾನೆ ನಲಿದಾಡುವ 3
--------------
ಕವಿ ಪರಮದೇವದಾಸರು
ಸುಮ್ಮನೆ ದೂರುವರೇ ಅಮ್ಮಯ್ಯ ಎನ್ನ ಸುಮ್ಮನೆ ದೂರುವರೇ ಪ ತಮ್ಮಯ ಸರಸಕೆ ಸಮ್ಮತಿ ಕೊಡದಿರೆ ಕಣ್ಮಣಿಯರುಗಳೆಲ್ಲಾ ಅ.ಪ ಕ್ಷೀರಚೋರನೆಂಬೋರೇ ಅಮ್ಮಯ್ಯ ಇವರ ಕೋರಿಕೆ ನಡೆಸದಿರೆ ಕ್ಷೀರ ಸಾಗರಶಾಯಿ ನಾರಾಯಣ ನಾನೆ ಕ್ಷೀರಕೆ ಬಡತನವೇ ಅಮ್ಮಯ್ಯ 1 ತುಂಟನೆಂಬೋರೆ ಎನ್ನ ಅಮ್ಮಯ್ಯ ಇವರ ತಂಟೆ ಏತಕೆ ಎನಗೆ ತುಂಟತನದಿ ಪಾಪ ಗಂಟು ಹೋಯಿತೆ ವೈ ಕುಂಠಪತಿಯೇ ಸಾಕ್ಷಿ ಅಮ್ಮಯ್ಯ 2 ಮಾಯಗಾರನೆಂಬೋರೆ ಅಮ್ಮಯ್ಯ ಎನ್ನ ತೋಯಜಾಕ್ಷಿಯರೆಲ್ಲ ಮಾಯಕೆ ಸಿಲುಕದೆ ಮಾಯೆಗೊಡೆಯನಾಗೆ ಜಾಯಮಾನವಲ್ಲವೇ ಅಮ್ಮಯ್ಯ 3 ಯಾರಿಂದೆನಗೇನೆ ಅಮ್ಮಯ್ಯ ಎನ್ನ ಜಾರನೆಂಬೋರೆ ಎಲ್ಲಾ ಯಾರು ಒಪ್ಪುವರೇ ಕುಮಾರನಲ್ಲವೆ ನಾನು ಮಾರಜನಕ ನಾನೆ ಅಮ್ಮಯ್ಯ 4 ಎನ್ನ ಮಾತನು ಕೇಳೆ ಅಮ್ಮಯ್ಯ ಈಗ ಕನ್ನೆಯರಿಗೆ ಪೇಳೆ ಇನ್ನಾದರು ಇವರು ಅನ್ಯಾಯವ ಬಿಟ್ಟು ಎನ್ನನು ಪೊಗಳಿದರೆ ಅಮ್ಮಯ್ಯ ಪ್ರಸನ್ನನಾಗುವೆನೆಂದು 5
--------------
ವಿದ್ಯಾಪ್ರಸನ್ನತೀರ್ಥರು
ಸುಮ್ಮನೆ ದೊರಕೊಂಬುದೆ ಬ್ರಹ್ಮಾನಂದದ ಮೂರ್ತಿಯ ನೇಮಿಸಿ ನೋಡದೆ ಧ್ರುವ| ಕಣ್ಣುಗಳಾಡಗುಡದೆ ಕಣ್ಣಿನೊಳಗಿಟ್ಟುಕೊಂಡು ಕಣ್ಣುಕಂಡುಡುಗಾಣದೆ ಘನ ಗುರುಮೂರ್ತಿಯ 1 ಮನಗಲ್ಪನೆಗ್ಹರಿಯಗೊಡದೆ ಮನಸಿನೊಳಿಟ್ಟುಕೊಂಡು ಮನಗುಂಡು ನೆಲಿಯುಗೊಳ್ಳದೆ ಘನಗುರು ಶ್ರೀಪಾದ 2 ಹೃದಯದಲಿ ನೆಲಿಯುಗೊಂಬನೆ ಮಹಿಪತಿಗುರುಸ್ವಾಮಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನೆ ದೋರೈಯ್ಯಾ | ರಮ್ಮೆಯ ಕರದಲಿ | ಒಮ್ಮೆಗೆ ಅಗಲದೆ ನಮಿಸಿಕೊಳುತಿಹ ಪಾದಾ ಪ ಇಳೆಯ ನೆರೆ ಬೇಡುವ ನೆವದಲಿ ಬಂದು ಬಲಿಗುದ್ಧರಿಸೆಂದು | ಹಲವು ಕಾಲದಿ ಶಿಲೆಯಾದಂಗನೆಗೆ ಸತಿಗತಿ ನೀಡಿದ ಪಾದಾ 1 ಉರಗಾಶರ ಬರೆ ಉಂಗುಟ ಲೋತ್ತಿನರ ನುಳಹಿದ ಕೀರ್ತಿ | ಸುಯೋಧನನುರುಳಿಸಿಗೆಡಹಿದಾ ಪಾದಾ 2 ತಂದೆ ಮಹಿಪತಿ ಪ್ರಭುದಯದಿಂದಲಿ ಎಂದೆಂದು | ಮುನಿಜನ ನಯನ ಚಕೋರರ ಚಂದಿರವಾಗಿಹ ಪಾದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಮ್ಮನೆ ಸುರಿವದೆ ಬ್ರಹ್ಮಾನಂದದ ಸುಖ ಒಮ್ಮನಾಗದೆ ಒಲಿಯದು ನಮ್ಮಯ್ಯನ ಕೃಪೆ ಧ್ರುವ ಉನ್ಮನವಾಗದೆ ಸನ್ಮತದೋರದು ಚಿನ್ಮಯಾನಂದ ಮಹಿಮೆ ಕಣ್ದೆರೆಯದು 1 ಕಣ್ಣು ಕಂಡು ಕಾಣದೆ ಧನ್ಯವಾಗದು ಪ್ರಾಣ ಚೆನ್ನಾಗಿ ಮಾಡಿ ಸಾಧನ ಕಣ್ಣಾರೆ ಕಂಡು 2 ಲೇಸಾಗಿ ಭಾಸುತದೆ ಭಾಸ್ಕರಗುರು ಕೃಪೆ ದಾಸಮಹಿಪತಿ ಮನದೊಳು ವಾಸವಾಗಿದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು